POLICE BHAVAN KALABURAGI

POLICE BHAVAN KALABURAGI

31 December 2011

GULBARGA DIST REPORTED CRIMES

ಆಳಂದ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಬಸಣ್ಣ ಪೊಲೇಸೆ ಪ್ರಭಾರಿ ಮುಖ್ಯ ಗುರುಗಳು ಸಾ: ಶುಕ್ರವಾಡಿ ಶಾಲೆ ತಾ:ಆಳಂದ ರವರು, ದಿ: 14-11-11 ರಂದು ರಾತ್ರಿ ಮತ್ತು ದಿ: 15-11-11 ರ ಮುಂಜಾನೆ 09.30 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಶಾಲೆಯ ಅಡುಗೆ ಕೋಣೆಯ ಬಾಗಿಲ ಕೀಲಿ ಮುರಿದು ಕೋಣೆಯಲ್ಲಿದ್ದ ಅಂದಾಜು ಬೆಲೆ 1500 ರೂಪಾಯಿ ಬೇಲೆ ಬಾಳುವ ಇಂಡೇನ್ ಸಿಲೆಂಡರ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳುವು ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆ ಗುನ್ನೆ ನಂ. 303/2011 ಕಲಂ 457, 380 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳಾ ಠಾಣೆ : ಶ್ರೀಮತಿ ಕಲಾವತಿ ಗಂಡ ಸೈದಪ್ಪಾ ಬಿದನೂರ ಸಾ: ಆಶ್ರಯಾ ಕಾಲೋನಿ ಗುಲಬರ್ಗಾ ರವರು, ನನ್ನ ಮಗಳಾದ ರಮಾಬಾಯಿ ಇವಳು ದಿ: 27-12-11 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಯಿಂದ ಅಂಗಡಿಗೆ ಹೋಗುತ್ತೇನೆಂದು ಹೇಳಿ ಹೋದವಳು ಇನ್ನೂವರೆಗೆ ಬಂದಿರುವುದಿಲ್ಲಾ. ನಾವು ಎಲ್ಲಾ ಕಡೆ ಮತ್ತು ನಮ್ಮ ಸಂಬಂದಿಕರ ಮನೆಗೆ ಹೋಗಿ ವಿಚಾರಿಸಲಾಗಿ ಇವಳು ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲಾ. ವಿಕ್ರಮ ಇತನ ಮೇಲೆ ಸಂಶಯವಿದ್ದು ರಮಾ ಇವಳಿಗೆ ದಾರಿ ತಪ್ಪಿಸಿ ಕರೆದುಕೊಂಡು ಹೋಗಿರುತ್ತಾನೆ ಕಾರಣ ನಮ್ಮ ಮಗಳನ್ನು ಹುಡುಕಿ ಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶ ಮೇಲಿಂದ ಮಹಿಳಾ ಠಾಣಾ ಗುನ್ನೆ ನಂ 129/2011 ಕಲಂ 363 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಸಂಜೀವಕುಮಾರ ಸಾಃ ಎ.ಇ.ಸಿಸಿಡಿಐ ಜೇಸ್ಕಾಂ ಯುನಿಟ್ ನಂ (8) ಗುಲಬರ್ಗಾ ರವರು,ದಿ: 30-12-2011 ರ ಬೆಳಿಗ್ಗೆ 1-30 ಎ.ಎಮ್.ಕ್ಕೆ ಯಾವುದೋ ಒಂದು ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ದರ್ಗಾ ಏರಿಯಾದಲ್ಲಿ ಇರುವ ಜೀನ್ಸ್ ಫ್ಯಾಷನ್ ಅಂಗಡಿ ಹತ್ತಿರ ಇರುವ ಲೈಟಿನ ಕಂಬಕ್ಕೆ ಮತ್ತು ಜೀನ್ಸ್ ಬಟ್ಟೆ ಅಂಗಡಿಯ ಶಟರಗೆ ಅಪಘಾತಪಡಿಸಿ ತನ್ನ ವಾಹನ ಸಮೇತ ಓಡಿಹೋಗಿದ್ದು ಅಪಘಾತದಿಂದ ಲೈಟಿನ ಕಂಬ ಜಖಂಗೊಂಡು ಅಂದಾಜು 14000/- ರೂ. ಹಾನಿ ಆಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಗುನ್ನೆ ನಂ. 79/2011 ಕಲಂ 279, 427 ಐಪಿಸಿ 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀಮತಿ ಅನ್ಣಾಪೂರ್ಣ ಗಂಡ ಚಂದಪ್ಪಾ ಕೋಳಿಗೇರಿ ಸಾ: ಜಿ.ಡಿ.ಎ. ಲೇಔಟ ಗುಲಬರ್ಗಾ ರವರು, ದಿ:30-12-11 ರಂದು 10-00 ಗಂಟೆಯ ಸುಮಾರಿಗೆ ನಾನು ಅಂಗಡಿಯಲ್ಲಿ ಕುಳಿತಿರುವಾಗ ಇಬ್ಬರು ಯುವಕರು ಒಂದು ಮೋಟಾರ ಸೈಕಲ್ ಮೇಲ್ ಬಂದು ರಾಜು ಸುಪಾರಿ ದೇವ ಅಮ್ಮಾ ಅಂತಾ ಹಿಂದಿ ಬಾಷೆಯಲ್ಲಿ ಕೇಳಿದರು. ಆಗ ನಾನು ರಾಜು ಸುಪಾರಿ ತೆಗೆದುಕೊಟ್ಟು ಹಣ ತೆಗೆದುಕೊಳ್ಳುವಾಗ ಸದರಿ ಯುವಕರು ನನ್ನ ಎರಡು ಕೈ ಒತ್ತಿ ಹಿಡಿದು ಕೈಗಳಲ್ಲಿ ದ್ದ ಒಟ್ಟು 5 ತೊಲೆ ಬಂಗಾರದ 4 ಬಿಲ್ವರ ಬಳೆಗಳನ್ನು ಬಿಚ್ಚಿಕೊಂಡು ತಮ್ಮ ಮೋಟಾರ ಸೈಕಲ್ ಮೇಲೆ ಓಡಿಹೋದರು. ಕಾರಣ ದೋಚಿಕೊಂಡು ಹೋದ ಬಂಗಾರದ ಬಿಲ್ವಾರ ಬಳೆಗಳನ್ನು ಮತ್ತು ಆರೋಪಿತರನ್ನು ಪತ್ತೆ ಹಚ್ಚುವ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಗುನ್ನೆ ನಂ.387/2011 ಕಲಂ. 392 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಾಗಿದೆ.

30 December 2011

GULBARGA DIST REPORTED CRIMES

ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:
ಶ್ರೀ ಏಜಾಜ ಅಹ್ಮದ ತಂದೆ ಅಬ್ದುಲ್ ರಹೀಮ ಪಟೇಲ ಸಾ: ಅಫಜಲಪೂರ ರವರು ನಾನು ಮತ್ತು ಚಾಲಕ ಶ್ರೀನಿವಾಸ ತಂದೆ ಮುದ್ದುಗೌಡ ಹಾಗೂ ಕ್ಲೀನರ ಬಬುಲು ಕೂಡಿಕೊಂಡು ಎಮ್ ಆರ್ ಬಸ್ ಎಂ ಹೆಚ್ -04 ಜಿ-5540 ನೇದ್ದು ಚಲಾಯಿಸಿಕೊಂಡು ಹೊರಟಿದ್ದು ಅದರ ಚಾಲಕ ಗುಲಬರ್ಗಾದಿಂದ ಅಫಜಲಪೂರಕ್ಕೆ ಹೋಗುವ ಕುರಿತು ಹೊರಟಿದ್ದರು ಬಸ್ ಚಾಲಕನಾದ ಶ್ರೀನಿವಾಸ ಈತನು ಎಮ್ ಆರ್ ಬಸ್ ನಂ. ಎಂ ಹೆಚ್ -04 ಜಿ-5540 ನೇದ್ದು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿದ್ದರಿಂದ ಟೈಯರಿನ ರಾಡ್ ಕಟ್ಟಾಗಿ ಮತ್ತು ಎಕ್ಸಲ್ ಕಟ್ಟಾಗಿ ರಸ್ತೆಯ ಎಡಗಡೆ ತೆಗ್ಗಿನಲ್ಲಿ ಪಲ್ಟಿಯಾಗಿರುತ್ತದೆ ಇದರಿಂದ ನನಗೆ ಅಥವಾ ಚಾಲಕನಿಗೆ ಯಾವುದೆ ಗಾಯ ಆಗಿರುವದಿಲ್ಲ ಅಂತ ತಿಳಿಸಿದ ಮೇರೆಗೆ ನಾನು ನೋಡಿಕೊಂಡು ಆತನ ವಿರುದ್ದ ದೂರು ಸಲ್ಲಿಸಿಲು ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 224/2011 ಕಲಂ 279 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ
:ದಿನಾಂಕ:30/12/2011 ರಂದು ಶಹಾಬಾದದ ಇಂಡಿಯನ ಲಾಡ್ಜ್‌ ಎದರುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಕುಳಿತು ಅಂದರ ಬಾಹರ ಎಂಬ ಇಸ್ಪೀಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಐ ರವರು ಸಿಬ್ಬಂದಿಯವರು ಹೋಗಿ ನೋಡಲು ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಅವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ ಮತ್ತು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 204/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ದಿನಾಂಕ 29/12/2011 ರಂದು ಮದ್ಯಾಹ್ನ ಸುಮಾರಿಗೆ ತಾಜಸುಲ್ತಾನಪುರ ಗ್ರಾಮದ ಸೀಮಾಂತರದಲ್ಲಿ ಬರುವ ಶ್ರೀ ರೇವಣಸಿದ್ದೇಶ್ವರ ಗುಡಿಯ ಹತ್ತಿರ ಅಂದರ ಬಾಹರ ಜೂಜಾಟ ಆಡುತ್ತಿದ್ದಾಗ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆನಂದ ತಂ/ ವಿಶ್ವನಾಥ ಬಾಲಣ್ಣನವರ ಸಾ: ಭವಾನಿ ನಗರ ಗುಲಬರ್ಗಾ, ಮಹೇಬೂಬ ತಂ/ ನಬಿಲಾಲ ಯಾದಪೂರ ಸಾ: ಭವಾನಿ ನಗರ, ರಹೀಮ ತಂ/ ರುಕುಮ ನದಾಫ ಸಾ: ಭವಾನಿ ನಗರ, ಪ್ರವೀಣ ತಂ/ ಕಲ್ಯಾಣಿ ದ್ಯಾಣ್ಣನವರ್‌ ಸಾ: ರಾಜೀವ ಗಾಂಧಿ ಕಾಲನಿ, ಶಿವರಾಜ ತಂ/ ಬಸವರಾಜ ತೋಟದ ಸಾ: ಭವಾನಿ ನಗರ ಗುಲಬರ್ಗಾ ರವರನ್ನು ದಸ್ತಗಿರಿ ಮಾಡಿ ಅವರಿಂದ ನಗದು ಹಣ 4600/- 52 ಇಸ್ಪೇಟ ಎಲೆಗಳು ಹಾಗೂ ಒಂದು ಮೋಬೈಲ ಅ, ಕಿ 500/.- ರೂ ಹೀಗೆ ಒಟ್ಟು 5100/.- ರೂ ಗಳು ವಶಪಡಿಸಿಕೊಂಡು ಠಾಣೆ ಗುನ್ನೆ ನಂ: 386/2011 ಕಲಂ 87 ಕೆ.ಪಿ ಆಕಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

29 December 2011

GULBARGA DIST REPORTED CRIMES

ಗಂಡನ ಕಿರುಕುಳ ತಾಳಲಾರದೇ ಹೆಂಡತಿ ಆತ್ಮಹತ್ಯೆ:
ಮಹಿಳಾ ಠಾಣೆ:
ಶ್ರೀ ಗುರುಶಾಂತ ತಂದೆ ಶರಣಪ್ಪಾ ಸಂಗೋಳಿಗಿ ಸಾ: ಕೋರಳ್ಳಿ ತಾ: ಆಳಂದ ಜಿ: ಗುಲಬರ್ಗಾ ರವರು ನನಗೆ 3 ಜನ ಹೆಣ್ಣು ಮಕ್ಕಳಿದ್ದು 2 ಗಂಡು ಮಕ್ಕಳು ಇರುತ್ತಾರೆ ಎಡನೇಯ ಮಗಳಾದ ಬಸಮ್ಮಾ @ ಮಾಯಾ ಇವಳಿಗೆ ನಮ್ಮ ದೂರದ ಸಂಭಂದಿಯಾದ ಆಳಂದ ತಾಲೂಕಿನ ಕಣಮುಸ ಗ್ರಾಮದ ವಿಜಯಕುಮಾರ ಇತನೊಂದಿಗೆ ಸಂಪ್ರದಾಯದಂತೆ 3 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಮದುವೆಯ ಕಾಲಕ್ಕೆ ಸ್ವಖುಷಿಯಿಂದ 41.000/- ರೂ, 3 ತೊಲೆ ಬಂಗಾರ ಕೊಟ್ಟಿದ್ದು ಇರುತ್ತದೆ, ಇವರು ಗುಲಬರ್ಗಾದ ಜೆ.ಆರ್ ನಗರ ಗುಲಬರ್ಗಾದ ಲ್ಲಿ ವಾಸವಾಗಿರುತ್ತಾರೆ ಅಳಿಯ ನಿಜಯಕುಮಾರ ಇತನು ಕುಡಿಯುವದು ಮತ್ತು ಇಸ್ಪೇಟ ಆಡುವ ಚಟದವನಿದ್ದು ಅದಕ್ಕಾಗಿ ಅವನು ಸಾಲ ಮಾಡಿಕೊಂಡಿದ್ದನು ಅವನಿಗೆ ಬಹಳ ಸಾಲವಾಗಿದ್ದರಿಂದ ನನ್ನ ಮಗಳೊಂದಿಗೆ ಜಗಳ ತೆಗೆದುಕೊಂಡು ನೀನು ತವರು ಮನೆಯಿಂದ ಹಣ ತೆಗೆದುಕೊಂಡು ಬಾ ನನಗೆ ಬಹಳ ಸಾಲವಾಗಿದೆ ಅಂತಾ ಯಾವಾಗಲು ಅವಳೊಂದಿಗೆ ಕಿರಿಕಿರಿ ಮಾಡುತ್ತಾ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದನು. ಈ ವಿಷಯವನ್ನು ನನ್ನ ಮಗಳು ಮಾಯಾ @ ಬಸಮ್ಮಾ ನಮಗೆ ತಿಳಿಸಿದಾಗ ನಾವು ಅಳಿಯ ಮಗಳುಚೆನ್ನಾಗಿ ಇರಬೇಕು ಅಂತಾ ಹೇಳಿ ನಮ್ಮ ಗ್ರಾಮದ ಬೀಮಾಶಂಕರ ಮುನೋಳಿ ಇವರ ಹತ್ತಿರ1.5 ಲಕ್ಷ ರೂ ಕೋಡಿಸಿದ್ದು ಇರುತ್ತದೆ. ಮತ್ತು ನಾನು ಕೂಡ ಸಾಲದ ರೂಪಾದಲ್ಲಿ 2 ಲಕ್ಷ ರೂ ಕೊಟಿದ್ದು ಇರುತ್ತದೆ ಈಗ 2 ದಿವಸಗಳ ಹಿಂದೆ ಅಳಿಯನ ಅಣ್ಣನಾದ ರಾಜು ಇತನು ಫೋನ ಮಾಡಿ ನಿಮ್ಮ ಅಳಿಯನಿಗೆ ಇನ್ನು 90 ಸಾವಿರ ರೂಪಾಯಿ ಸಾಲವಿದೆ ಅದರ ಸಲುವಾಗಿ ಗಂಡ ಹೆಂಡತಿ ಜಗಳ ಮಾಡುತ್ತಿದ್ದಾರೆ ಮನೆಯೇ ದಾಖಲಾತಿ ಮೇಲೆ ಇನ್ನೂ ಸಾಲ ಕೊಡಿಸು ಅಂತಾ ಪೋನ ಮಾಡಿದ ಅದಕ್ಕೆ ನಾನು ಕಬ್ಬಿನ ಬಿಲ್ಲು ಬರುವವರೆಗೂ ತಾಳು ಅಂತಾ ಹೇಳಿದ್ದೆ, ನನ್ನ ಮಗಳು ಕೂಡ ಇನ್ನು ಸ್ವಲ್ಪ ಕೊಡಿಸು ನಮ್ಮಿಬ್ಬರಲ್ಲಿ ಅದೇ ತಕರಾರರು ನಡೆಯುತ್ತದೆ ಅಂತಾ ಹೇಳುತ್ತಿದ್ದಳು. ದಿನಾಂಕ 29.12.2011 ರಂದು ಬೆಳಗ್ಗೆ 7.00 ಗಂಟೆ ಸುಮಾರಿಗೆ ನಿಮ್ಮ ಮಗಳು ಮಾಯಾ @ ಬಸಮ್ಮಾ ಇವಳು ಊರಲು ಹಾಕಿಕೊಂಡು ಸತ್ತಿರುತ್ತಾಳೆ ಅಂತಾ ತಿಳಿಸಿದ ಮೇರೆಗೆ ನಾವು ಬಂದು ನೋಡಲು ನಿಜವಿರುತ್ತದೆ. ನನ್ನ ಮಗಳ ಸಾವಿಗೆ ಆಕೆಯ ಗಮಡನ ಕಾರಣ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 127/2011 ಕಲಂ 498(ಎ),306 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡಿರುತ್ತಾರೆ.

ಮೋಸ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ನಾನು ಶ್ರೀ ಹರೀಶ ತಂದೆ ಶ್ರೀರಾಮ ಉ: ಶ್ರೀರಾಮ ಚಿಟ್ಸ ಕರ್ನಾಟಕ ಪ್ರೈವೇಟ್ ಲಿಮಿಟೆಡ ಬೆಂಗಳೂರು ನಲ್ಲಿ ಅಸಿಸ್ಟೆಂಟ ಜನರಲ್ ಮ್ಯಾನೇಜರ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕಂಪನಿಯ ಪ್ರತಿನಿಧಿಯಾಗಿರುತ್ತೆನೆ. ಗುಲಬರ್ಗಾದಲ್ಲಿ ನಮ್ಮ ಶಾಖೆ ಇದ್ದು ನಮ್ಮದೆ ಗ್ರೂಪ್ ಕಂಪನಿಯಾದ ಶ್ರೀರಾಮ ಸಿಟಿ ಯುನಿಯನ್ ಫೈನಾನ್ಸದಿಂದ ಗ್ರಾಹಕರಿಗೆ ಸಾಲ ನೀಡಲಾಗುತ್ತದೆ. ಮಂಜೂರು ಮಾಡಬೇಕಾದ ಸಾಲದ ಬಗ್ಗೆ ನಾನು ಸ್ಥಳ ಪರಿಶೀಲನೆ ಹಾಗೂ ಕಾಗದ ಪತ್ರಗಳ ಪರಶೀಲನೆ ಮಾಡುವ ಹಕ್ಕುದಾರನಾಗಿರುತ್ತೇನೆ ಹೀಗಾಗಿ ಗುಲಬರ್ಗಾದ ಅನ್ವರ ಪಾಶಾ ತಂದೆ ಅಬ್ದುಲ ಹಫೀಜ ಸಾ: ಭರತನಗರ ತಾಂಡಾ ಗುಲಬರ್ಗಾ ಎಂಬಾತನು ಫಾಲ್ಕನ್ ಪೈಪ್ಸ ಎಂಬ ಪೈಪ ತಯಾರಿಕೆಯ ಕಂಪನಿಗೊಸ್ಕರ ಇಪ್ಪತ್ತು ಲಕ್ಷ ರೂಪಾಯಿ ಸಾಲ ಮಂಜೂರು ಮಾಡುವಂತೆ ಕೋರಿ ಶ್ರೀರಾಮ ಸಿಟಿ ಯುನಿಯನ್ ಫೈನಾನ್ಸ ಗುಲಬರ್ಗಾದಲ್ಲಿ ಅರ್ಜಿ ಸಲ್ಲಿಸಿದ್ದು ಆ ಪ್ರಕಾರವಾಗಿ ಪ್ರಾಥಮಿಕ ಹಂತದ ವಿಚಾರಣೆಯನ್ನು ರಾಘವೆಂದ್ರ ಪ್ರಾಂತೀಯ ವ್ಯವಸ್ಥಾಪಕರು ಕೈಕೊಂಡು ಅನ್ವರಪಾಶಾ ಇತನು ಕೊಟ್ಟ ದಾಖಲಾತಿಗಳನ್ನು ಆಧಾರವಾಗಿಟ್ಟುಕೊಂಡು ಅಲ್ಲದೆ ಇತನಿಗೆ ಸಾಲ ಮಂಜೂರಿಕರಿಸುವದಕ್ಕಾಗಿ ಸಿರಾಜೊದ್ದಿನ್ ತಂದೆ ಮಹ್ಮದ ನಿಜಾಮೊದ್ದಿನ್ ಎಂಬುವವರ ಸ್ಥಿರಾಸ್ತಿಯ ಕಾಗದ ಪತ್ರಗಳನ್ನು ಭದ್ರತೆಯನ್ನಾಗಿಟ್ಟುಕೊಂಡು ಅಲ್ಲದೆ ವೈಯಕ್ತಿಕ ಭದ್ರತೆಯನ್ನಾಗಿ ಅಜ್ಮಲ ಅಹಮದ ತಂದೆ ಜಮೀರ ಅಹಮದ ಗೋಳಾ ಇವರ ಸ್ಯೂರಿಟಿಯನ್ನು ಪಡೆದುಕೊಂಡು ದಿನಾಂಕ 02/03/2010 ರಂದು ಇಪ್ಪತ್ತು ಲಕ್ಷ ರೂಪಾಯಿಗಳನ್ನು ಮಂಜೂರಿಸಿದ್ದು ಅದೆ. ಅನ್ವರ ಪಾಶಾ ಇತನು ಕೆಲವು ತಿಂಗಳ ಸಾಲದ ಹಣವನ್ನು ಪಾವತಿ ಮಾಡಿದ್ದು ತದನಂತರ ಪಾವತಿ ಮಾಡದೆ ಇದ್ದ ಪ್ರಯುಕ್ತ ನಾವು ಬೇಟಿ ನೀಡಿದಾಗ ಫಾಲ್ಕನ ಪೈಪ್ಸ ಎಂಬ ಸ್ಥಳದಲ್ಲಿ ಬೇರೊಬ್ಬ ವ್ಯಕ್ತಿ ಮಹ್ಮದ ಅಮೀರ ಶಕೀಬ ಎಂಬುವವರು ಇರುತ್ತಾರೆ. ನಂತರ ಅನ್ವರ ಪಾಶಾ ಇವರನ್ನು ಹುಡುಕಾಡಿ ಈ ಬಗ್ಗೆ ವಿಚಾರಿಸಲಾಗಿ ತಾನು ಫಾಲ್ಕನ ಪೈಪ್ಸನ ಮಾಲಿಕ ಅಲ್ಲಾ ಆದರೆ ಆದಿಲ ಅಹಮದ @ ಸೊಹೆಲ ತಂದೆ ಎಕ್ಬಾಲ ಅಹಮದ ಅವರು ಹೇಳಿದ ಪ್ರಕಾರ ಸಾಲಕ್ಕೆ ಅರ್ಜಿ ಹಾಕಿದ್ದು ಮಂಜೂರಾದ ಸಾಲದ ಹಣ ಪೂರ್ತಿ ಆದಿಲ ಅಹಮದ @ ಸೊಹೆಲ ತಂದೆ ಎಕ್ಬಾಲ ಅಹಮದ ಇವನೆ ತೆಗೆದುಕೊಂಡಿರುತ್ತಾನೆ ಅಂತಾ ಕಾರಣ ಅನ್ವರಪಾಶಾ, ಆದಿಲ ಅಹಮದ, ಸಿರಾಜೊದ್ದಿನ್, ಅಜಮಲ ಅಹಮದ, ಮಹ್ಮದ ಅಮೀರಶಕೀಬ ಮತ್ತು ಪ್ರಾಂತೀಯ ವ್ಯವಸ್ಥಾಪಕರಾದ ರಾಘವೆಂದ್ರ ಇವರೆಲ್ಲರೂ ಸೇರಿ ಕಂಪನಿಗೆ ಮೊಸ ಮಾಡುವ ಉದ್ದೇಶದಿಂದ ಕಂಪನಿಯಿಂದ ಸಾಲ ಮಂಜೂರು ಮಾಡಿಕೊಂಡು ಮೋಸ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂ 220/11 ಕಲಂ 147, 120(ಬಿ), 420, 406 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

28 December 2011

GULBARGA DIST REPORTED CRIMES

ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಛತ್ರಪ್ಪ ತಂದೆ ರಾಜಪ್ಪ ಬೌಧ ವಯಾ 65 ಉ ವಕೀಲರು ಸಾ ಸಿಐಬಿ ಕಾಲೋನಿ ಶಕ್ತಿ ನಗರ ಗುಲಬರ್ಗಾ ರವರು ನಾನು ದಿನಾಂಕ 27/12/2011 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ವಕೀಲರ ಬಾರ ಅಸೋಸಿಯನದಿಂದ ನ್ಯಾಯಾಲಯದ ಕಡೆಗೆ ನಡೆದುಕೊಂಡು ಹೋಗುವಾಗ ಎದುರಿನಿಂದ ಸಂಜಯಕುಮಾರ ತಂದೆ ತುಕಾರಾಮ ನವಲೆ ವಯಾ 34 ಸಾ ಪ್ಲಾಟ ನಂ 70 ಸಾಯಿಬಾಬಾ ಲೇಔಟ ಶಕ್ತಿ ನಗರ ಗುಲಬರ್ಗಾ ಇತನು ಬಂದು ಕೈಯಿಂದ ಎಡಗಣ್ಣಿನ ಹುಬ್ಬಿನ ಮೆಲೆ ಹೊಡೆದು ಕಾಲಿನಿಂದ ಟೊಂಕದ ಮೇಲೆ ಜೊರಾಗಿ ಒದ್ದಾಗ ಆಯಾ ತಪ್ಪಿ ಕೆಳಗೆ ಬಿದ್ದಿರುತ್ತೆನೆ. ಕಿರಿಯ ವಕೀಲರು ನನಗೆ ಉಪಚಾರಕ್ಕಾಗಿ ಜಿಲ್ಲಾ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 219/11 ಕಲಂ 341, 323, 324, ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:
ನಾನು ಶ್ರೀ ರಾಜದೀಪ ತಂದೆ ಓಂಪ್ರಕಾಶ ಜೈನ ಇವರು ಜೇವರ್ಗಿ ಪಟ್ಟಣದ ಟಾಕಿಜ ರೋಡಿನ ಹತ್ತಿರ ಪೂಜಾ ಬಂಗಾರದ ಅಂಗಡಿ ಇದ್ದು ದಿನ ನಿತ್ಯ ವ್ಯಾಪಾರ ಮಾಡಿಕೊಂಡಿರುತ್ತೆನೆ ನಾನು ನಿನ್ನೆ ದಿನಾಂಕ 27-12-2011 ರಂದು ಎಂದಿನಂತೆ ವ್ಯಾಪಾರ ಮಾಡಿಕೊಂಡು ರಾತ್ರಿ 8-00 ಗಂಟೆಗೆ ನಾನು ಮತ್ತು ನನ್ನ ಅಂಗಡಿಯಲ್ಲಿ ಕೆಲಸ ಮಾಡುವ ಮಲ್ಲಿಕಾರ್ಜುನ ತಂದೆ ವೀರಭದ್ರಪ್ಪ ಅಂಕಲಿಗಿ ಇಬ್ಬರು ಅಂಗಡಿ ಬಂದ ಮಾಡಿ ಶೇಟರಗೆ ಕೀಲಿ ಹಾಕಿ ಮನೆಗೆ ಹೋಗಿರುತ್ತೆವೆ. ಬೆಳಗಿನ ಜಾವ ನಮ್ಮ ಪಕ್ಕದ ಅಂಗಡಿಯ ಗುರು ತಂದೆ ಮರೆಪ್ಪ ತಳವಾರ ಇತನು ನನಗೆ ಪೋನ ಮಾಡಿ ಹೇಳಿದ್ದೆನೆಂದರೆ, ನಿಮ್ಮ ಅಂಗಡಿ ಕಳ್ಳತನವಾಗಿರುತ್ತದೆ. ಅಂತಾ ತಿಳಿಸಿದ ಕೂಡಲೆ ನಾನು ಮತ್ತು ಮಲ್ಲಿಕಾರ್ಜುನ ಇಬ್ಬರು ಅಂಗಡಿಗೆ ಬಂದು ನೋಡಲಾಗಿ ಅಂಗಡಿಯ ಶೇಟರ ಕೀಲಿ ಮುರಿದಿತ್ತು ನಾವಿಬ್ಬರು ಒಳಗೆ ಹೋಗಿ ನೋಡಲಾಗಿ ಬೆಳ್ಳಿಯ ಸಾಮಾನುಗಳು ಇಟ್ಟಿದ್ದ ಅಲಾಮರಿಯಲ್ಲಿದ್ದ ಬೆಳ್ಳಿಯ ಕಾಲು ಚೈನುಗಳು ಕಾಲುಂಗುರಗಳು ಒಟ್ಟು 36 ಕೆ.ಜಿ. ತೂಕದ ಸಾಮಾನುಗಳು ಬಂಗಾರದ ಉಂಗುರುಗಳು ಬೆಂಡೊಲಿಗಳು ಹೀಗೆ 380 ಗ್ರಾಂ ತೂಕದ ಬಂಗಾರದ ಅಭಾರಣಗಳು ನಗದು ಹಣ 30.000 /- ಸಾವಿರ ರೂ. ಹಿಗೆ ಒಟ್ಟು 28.43.000/- ಕಿಮ್ಮತ್ತಿನ ಬಂಗಾರ ಆಭರಣಗಳು ಬೆಳ್ಳಿ ಆಭರಣಗಳು, ಸಾಮಾನುಗಳು ಯಾರೋ ಕಳ್ಳರು ಕಬ್ಬಿಣದ ರಾಡಿನಿಂದ ಅಂಗಡಿಯ ಶೇಟರಕ್ಕೆ ಹಾಕಿದ ಕೀಲಿ ಮುರಿದು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 211/11 ಕಲಂ. 457.380 ಐ.ಪಿ.ಸಿ. ಅಡಿಯಲ್ಲಿ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ವೈರ್ ಕಳ್ಳತನ ಮಾಡಿದ ಬಗ್ಗೆ:
ಶಹಾಬಾದ ನಗರ ಪೊಲೀಸ ಠಾಣೆ
:ದಿನಾಂಕ:25/12/2011 ರಂದು ರಾತ್ರಿ ವೇಳೆಯಲ್ಲಿ ಭಂಕೂರ ಸೀಮೆಯಲ್ಲಿ ಜೆಸ್ಕಾಂ ಇಲಾಖೆಯವರು ಕರೆಂಟ ಸಲುವಾಗಿ ಜೋಡಿಸಿದ ಟಿ.ಸಿ.ಯನ್ನು ಬಿಚ್ಚಿ ಅದರಲ್ಲಿರುವ ಅಲ್ಯೂಮಿನಿಯಂ ವೈಡಿಂಗ ವೈರ ಅ.ಕಿ. 9000/ ರೂ ಬೆಲೆ ಬಾಳುವದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ವಿಜಯಕುಮಾರ ತಂದೆ ಶರಣಪ್ಪಾ ಭೀಮನಳ್ಳಿ ಶಾಖಾಧಿಕಾರಿಗಳು ಭಂಕೂರ ಸಾ:ಭಂಕೂರ ತಾ:ಚಿತ್ತಾಪುರ ರವರು ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 200/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

27 December 2011

GULBARGA DIST REPORTED CRIMES

ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ.
ಜೇವರ್ಗಿ ಕಾಲೋನಿಯಲ್ಲಿರುವ ಲೋಕೊಪಯೋಗಿ ಇಲಾಖೆ ಸರ್ಕಾರಿ ವಸತಿಗೃಹ ಸಂಖ್ಯೆ 17-ಡಿ ಯಲ್ಲಿರುವ ವಿದ್ಯುತ್ ವೈರಗಳನ್ನು ಅ.ಕಿ.-21,000/-ರೂಪಾಯಿಗಳದ್ದು ದಿನಾಂಕ:24.12.2011 ರಂದು 1600 ಗಂಟೆಯಿಂದ 1700 ಗಂಟೆಯವರೆಗೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಅಲೀಮ ಪಟೇಲ್ ವರ್ಕ ಇನ್ಸಪೆಕ್ಟರ್ ಪಿ.ಡಬ್ಯ್ಲೂ.ಡಿ. ಆಫೀಸ್ ಮುನ್ಸಿಪಾಲ್ ಗಾರ್ಡನ್ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.218/2011 ಕಲಂ. 454, 380 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಟೋ ಚಾಲಕ ಸಾವು:
ರಾಘವೇಂದ್ರ ನಗರ ಠಾಣೆ:
ಶ್ರೀ ಯಲ್ಲಪ್ಪ ತಂದೆ ಶರಣಪ್ಪ ಹರಗೆನವರ ಈತನು ರಾಘವೇಂದ್ರ ನಗರ ರವರು ನನ್ನ ಅಣ್ಣನಾದ ಮೃತ ವ್ಯಕ್ತಿ ರಾಣಪ್ಪ ತಂದೆ ಶರಣಪ್ಪ ಹರಗೆನವರ ವ 28, ಸಾ ಬೋರಾಬಾಯಿ ನಗರ ಬ್ರಹ್ಮಪೂರ ಇವನು ಅಟೋ ಚಾಲಕನಾಗಿದ್ದನು. ಪ್ರತಿ ದಿನದಂತೆ ದಿನಾಂಕ 26-12-2011 ರಂದು ಬೆಳಿಗ್ಗೆ ಅಟೋ ನಡೆಸುವ ಕುರಿತು, ಮನೆಯಿಂದ ಹೋಗಿ ನಂತರ ರಾತ್ರಿ 8-30 ಗಂಟೆಯ ಸುಮಾರಿಗೆ ತನ್ನ ಅಟೋ ಸಮೇತ ಮನೆಗೆ ಬಂದು, ಅಟೋ ನಿಲ್ಲಿಸಿ ಪ್ರತಿ ದಿನದಂತೆ ಬ್ಯ್ರಾಂಡಿ ಕುಡಿಯಲು ಓಣಿಯ ಚಾಣುಕ್ಯ ಬಾರ್ ಕ್ಕೆ ಹೋದನು. ನಂತರ 9-30 ಗಂಟೆಯ ಸುಮಾರಿಗೆ ನನ್ನ ಅಣ್ಣ ರಾಣಪ್ಪ ಈತನು ಚಾಣುಕ್ಯ ವೈನ್ ಶಾಪ್ ಎದುರುಗಡೆ ಬಿದ್ದಿರುವನು ಅಂತ ವಿಷಯ ತಿಳಿದು, ನಾನು ಮತ್ತು ನನ್ನ ತಂದೆ ಹಾಗು ನನ್ನ ತಮ್ಮ ಹೋಗಿ ನೋಡಲು, ನನ್ನ ಅಣ್ಣ ರಾಣಪ್ಪನು ಚಾಣುಕ್ಯ ಬಾರ್ ಎದುರುಗಡೆ ಅಂಗಾತವಾಗಿ ಬಿದ್ದಿದ್ದನು. ಪರೀಶಿಲಿಸಿ ನೋಡಲು ಅವನು ಮೃತಪಟ್ಟಿದ್ದನು. ನನ್ನ ಅಣ್ಣನ ಸಾವಿನ ಬಗ್ಗೆ ಚಾಣುಕ್ಯ ವೈನ್ ಶಾಪ್ ನ ವ್ಯವಸ್ಥಾಪಕ ವಿಟ್ಠಲ್ ಹಾಗು ಕುಲಕರ್ಣಿ ಮತ್ತು ವೇಟರ್ ಶಂಕರ ಇವರ ಮೇಲೆ ಬಲವಾದ ಸಂಶಯ ವಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.ಡಿ.ಆರ್ ನಂ 8/11 ಕಲಂ 174 (ಸಿ) ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ರವಿ ತಂದೆ ಗುಂಡಪ್ಪ ಕಂಬಾರ ವ: 25 ವರ್ಷ ಉ:ಲಾರಿ ಚಾಲಕ ಜಾ: ಮರಾಠ ಕಂಬಾರ ಸಾ: ಡಾಕುಳಕಿ ತಾ: ಹುಮನಾಬಾದ ಜಿ: ಬೀದರ ರವರು ನಾನು ದಿನಾಂಕ 25/12/2011 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ ನನ್ನ ಲಾರಿಯಲ್ಲಿ ತೋಗರಿ ಬೆಳೆ ತುಂಬಿಕೊಂಡು ಗಂಜ ದಿಂದ ಬೆಲೂರ ಕ್ರಾಸ ಕೆಇಬಿ ಹತ್ತಿರ ಹೋಗುತ್ತಿದ್ದಾಗ ಒಂದು ಮೋಟಾರ ಸೈಕಲ ಸವಾರ ಲಾರಿ ಮುಂದೆ ಬಂದು ಮೋಟಾರ ಸೈಕಲ ನಿಲ್ಲಿಸಿ ನನಗೆ ಕೆಳಗೆ ಇಳಿಸಿ ಡಿಫರ ಲೈಟ ಏಕೆ ಹಾಕಿಲ್ಲ ಅಂತಾ ಬೈಯುತ್ತಿದ್ದಾಗ ನಾನು ಡಿಫರ ಹಾಕಿದ್ದೇನು ಅಂತಾ ಅಂದಾಗ ಪೋನ ಮಾಡಿ ಇನ್ನೂ 3 ಜನರಿಗೆ ಕರೆಯಿಸಿದ್ದು ಅವರು ಬಂದು ಒತ್ತಿಯಾಗಿ ಬಡಿಗೆಯಿಂದ ಕೈಯಿಂದ ಹೊಡೆದು ಅವ್ಯಾಚ್ಛವಾಗಿ ಬೈದ್ದು ಹೊಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 382/2011 ಕಲಂ 504, 341, 323, 324, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ
: ಶ್ರೀ. ರಾಮ ಬಿನಯ ತಂದೆ ಮಟಕಿಸಾಬ ಸಾ ಬೇಗಮಸರಾಯಿ ತಾಮಚವಾಡಾ ಜಿಬೇಗುಸರಾಯ ರಾಜ್ಯಬಿಹಾರ ಹಾವ ಹೆಲಿಯೋ ಕಾನ ಕೆಮಿಕಲ್ ಅಗ್ರೋ ಲಿಮಿಟೇಡ ಬೇಲೂರ ಕ್ರಾಸ ಗುಲಬರ್ಗಾರವರು ನಾನು ಹಾಗೂ ನನ್ನ ಸಂಗಡಿಗರು ಬೆಲೂರ (ಜೆ) ಕ್ರಾಸದಲ್ಲಿ ಒಂದು ಆಟೋ ನಂ ಕೆ.ಎ.32 / 8019 ನೇದ್ದರಲ್ಲಿ ಕುಳಿತು ಗುಲಬರ್ಗಾ ಗಂಜ ಕಡೆಗೆ ಹೊರಟಿದ್ದು. ಕಪನೂರ ಗ್ರಾಮದ ಬ್ರೀಡ್ಜ ಹತ್ತಿರ ಬಂದಾಗ ಎದುರಿನಿಂದ ಟ್ಯಾಂಕರ ಲಾರಿ ನಂ ಕೆ.ಎ.03 ಡಿ-9825 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀವೇಗ & ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಆಟೋಗೆ ಜೋರಾಗಿ ಡಿಕ್ಕಿ ಹೋಡೆದನು ಇದರಿಂದ ನಮ್ಮ ಆಟೋ ಚಾಲಕ ನಿಗೆ ಮತ್ತು ಅವನ ಪಕ್ಕದಲ್ಲಿ ಕುಳಿತಿದ್ದ ಸಂಭು ಯಾದವ ಇವರಿಗೆ ತಲೆಗೆ ಭಾರಿ ರಕ್ತಗಾಯವಾಗಿ ಇವರು ಸ್ಥಳದಲ್ಲಿಯೇ ಮೃತ ಪಟ್ಟರು ಮತ್ತು ಹಿಂದೆ ಕುಳಿತ ನಾನು ಮತ್ತು ಅಜಯ ಪಾಶ್ವಾನ ಇತನಿಗೆ. ಸಂಜೀತ ಯಾದವ ಇವರುಗಳಿಗೆ ಬಾರಿ ಹಾಗೂ ಸಾದಾ ಅಲ್ಲದೆ ಗುಪ್ತಪೆಟ್ಟಾಗಿರುತ್ತದೆ. ಟ್ಯಾಂಕರ ಲಾರಿ ನಂ. ಕೆಎ. 03-ಡಿ 9825 ನೆದ್ದರ ಚಾಲಕ ಗುರುರಾಜ ಹರಳಳ್ಳಿ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 383/2011 ಕಲಂ 279, 337 ,338,304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಠಾಣೆ :
ಶ್ರೀ.ಚನ್ನಬಸಯ್ಯ ತಂದೆ ವೀರಯ್ಯ ಹಿರೇಮಠ, ಸಾ ಕೇರಾಫ:ಸಿದ್ರಾಮಪ್ಪ ಪಾಟೀಲ, ವಾದಿರಾಜ ಲಾಡ್ಜ ಹಿಂದುಗಡೆ ರೇಣುಕಾಚಾರ್ಯ ಕಲ್ಯಾಣ ಮಂಟಪ ಹತ್ತಿರ ಸರಸ್ವತಿ ಗೋದಾಮ ಗುಲಬರ್ಗಾ ರವರು ನಾನು ವಾದಿರಾಜ ಲಾಡ್ಜ ಹಿಂದುಗಡೆ ರೇಣುಕಾಚಾರ್ಯ ಕಲ್ಯಾಣ ಮಂಟಪದ ಹತ್ತಿರ ಸರಸ್ವತಿ ಗೋದಾಮ ಸಿದ್ರಾಮಪ್ಪ ಪಾಟೀಲ ಇವರ ಮನೆಯಲ್ಲಿ ಬಾಡಿಗೆ ಇದ್ದು, ದಿನಾಂಕ: 06/12/11 ರಂದು ರಾತ್ರಿ ಮನೆಯ ಮುಂದೆ ನನ್ನ ಹೀರೊ ಹೊಂಡಾ ಪ್ಯಾಶನ್ ಪ್ರೋ ನಂ: ಕೆಎ 32 ವೈ 7326 ಅಕಿ 45,000/- ನೇದ್ದನ್ನು ನಿಲ್ಲಿಸಿ ದಿನಾಂಕ: 07/12/11 ರಂದು ಬೆಳಿಗ್ಗೆ 0500 ಗಂಟೆಗೆ ನೋಡಲಾಗಿ ನನ್ನ ಮೋಟರ ಸೈಕಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಆವಾಗಿನಿಂದ ಇಲ್ಲಿಯವರೆಗೆ ಹುಡುಕಾಡಿದರು ಪತ್ತೆಯಾಗಿರುವದಿಲ್ಲ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

26 December 2011

GULBARGA DIST REPORTED CRIME



ಮೋಸ ವಂಚನೆ ಪ್ರಕರಣ:
ನರೋಣಾ ಠಾಣೆ:
ಶ್ರೀ ಸಿದ್ದಮಲ್ಲಪ್ಪ ತಂದೆ ಭೀಮಶಾ ಹಡಪದ್ ಸಾ: ನರೋಣಾ ರವರು ನನ್ನ ಮಗ ಭೀಮಾಶಂಕರ್ ಇತನು 2000 ನೇ ಸಾಲಿನಲ್ಲಿ ಬಿ.ಎಸ್.ಎಫ್. ಸೇವೆಗೆ ಸೇರಿದ್ದು, 2010 ನೇ ಸಾಲಿನಲ್ಲಿ ಆಗಷ್ಟ್ 29 ನೇ ತಾರೀಖಿನ ದಿವಸ ಚತ್ತಿಸಗಡದಲ್ಲಿ ವೀರ ಮರಣ ಹೊಂದಿದ್ದು, ಇದೇ ವಿಷಯದಲ್ಲಿ ಹಣಮಂತ ತಂದೆ ಬೀರಪ್ಪ ಬಂಡಗಾರ್ ವಯ 28 ವಷ್, ಜಾತಿ: ಮರಾಠಾ, ಸಾ; ಅಂತರಗಂಗಿ, ತಾ: ಸಿಂದಗಿ, ಇತನು ನಿರುದ್ಯೋಗಿಯಾಗಿದ್ದು, ತಾನು ಬಿ.ಎಸ್.ಎಫ್ ನಲ್ಲಿ ಮೇಜರ್ ಆಫೀಸರ ಇರುವುದಾಗಿ ಹೇಳಿಕೊಂಡು ಶ್ರೀ ಸಿದ್ದಮಲ್ಲಪ್ಪ ಇವರ ಹತ್ತಿರ ಬಂದು ಭೀಮಾಶಂಕರ ಇತನು ವೀರ ಮರಣ ಹೊಂದಿರುವ ವಿಷಯದಲ್ಲಿ ಗ್ರಾಮದಲ್ಲಿ ನೆನಪಿನ ಗೋಸ್ಕರ ಸಭೆ ಸಮಾರಂಭ ಮಾಡುವುದಾಗಿ ಹೇಳಿ ಆಫೀಸರನಂತೆ ನಟನೆ ಮಾಡಿ, 33,000/- ರೂ ಪಡೆದುಕೊಂಡಿದ್ದು, ಅಲ್ಲದೆ ಇದೆ ರೀತಿ ಅಲ್ಲಲ್ಲಿ ಕೂಡಾ ಯೋಧರು ಮರಣವಾದ ಮಾಹಿತಿಯನ್ನು ಪಡೆದುಕೊಂಡು ಮನೆಯ ಮಂದಿಗೆ ನೌಕರಿ ಕೊಡಿಸುದಾಗಿ ಆಸೆ ತೋರಿಸಿ ವಂಚನೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 131/2011 ಕಂ 417 419 420 ಪ್ರಕಾರ ಗುನ್ನೆ ದಾಖಲಾಗಿದ್ದು ಇರುತ್ತದೆ. ಸದರಿ ಆರೋಪಿತನ ಪತ್ತೆ ಕುರಿತು ಮಾನ್ಯ ಎಸ.ಪಿ ಸಾಹೇಬರು ಗುಲಬರ್ಗಾ ರವರು ಮತ್ತು ಹೆಚ್ಚುವರಿ ಎಸ.ಪಿ ಗುಲಬರ್ಗಾ, ಹಾಗು ಅಪರ ಎಸ್.ಪಿ ಶ್ರೀ ಕಾಶಿನಾಥ, ಡಿ.ಎಸ್.ಪಿ ಬಿ.ಎಸ್. ಸಂಭಾ, ಸಿಪಿಐರವರಾದ ಶ್ರೀ ಜಿ.ಎಸ್. ಉಡಗಿ ಆಳಂದ ರವರ ಮಾರ್ಗದರ್ಶನದಲ್ಲಿ ನರೋಣಾ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ವಿನಾಯಕ್, ಪ್ರೋ. ಪಿ.ಎಸ್.ಐ ರವರಾದ ಶ್ರೀ ಪ್ರದೀಪ್ ಸಿಂಗ್, ಸಿಬ್ಬಂದಿಯವರಾದ ಶ್ರೀ ಬಂಡೆಪ್ಪ ಎ.ಎಸ್.ಐ, ಶ್ರೀ ಮಹಾಂತಪ್ಪ ಹೆಚ್.ಸಿ, ಶ್ರೀ ಸುರೇಶ್ ಬಾಬು, ಕಂಠೆಪ್ಪ ಪಿಸಿ , ಶ್ರೀ ಅಪ್ಪಣ, ಶ್ರೀ ಮಹೇಶ್,ಶ್ರೀ ಅಂಬಾರಾಯ, ಮುಕುಂದರಾಯ, ರವರ ತಂಡವನ್ನು ರಚಿಸಿಕೊಂಡು ಗುನ್ನೆಗೆ ಸಂಭಂದಪಟ್ಟ ಹಲವಾರು ಮಾಹಿತಿಗಳು ಹಾಗೂ ನಗದು ಹಣ 10,000/’- ಜಪ್ತಿ ಪಡಿಸಿಕೊಂಡಿರುತ್ತಾರೆ. ಈ ಆರೋಪಿತನು ಈ ಯೋದನಲ್ಲದೆ ಕಣ್ಣೂರ್, ತೇಲಗಿ, ಬಸವನ ಬಾಗೇವಾಡಿ, ಸಂಗೋಳಗಿ, ಸಂಕೇಶ್ವರ, ಹಿಟ್ನಳ್ಳಿ, ನೀಡಗುಂಡಿ ಮುಂತಾದ ಕಡೆಗಳ್ಳಿಯ ಯೋಧರಿಗೆ ಸಂಭಂದಿಕರ ಹತ್ತಿರ ಕೂಡಾ ಹಣ ವಸೂಲಿ ಮಾಡಿಕೊಂಡಿರುವ ಮಾಹಿತಿ ಲಬ್ಯವಾಗಿರುತ್ತದೆ. ಅಲ್ಲದೆ ಬಿಜಾಪೂರ್ ಜಿಲ್ಲೆಯಲ್ಲಿ ತಾನು ಕೆ.ಎಸ್.ಆರ್.ಟಿ.ಸಿ ಚೆಕ್ಕಿಂಗ್ ಆಫೀಸರ್ ಎಂದು ಬಸ್ ಚೆಕ್ ಮಾಡಿದ್ದು, ಅಲ್ಲದೆ ಆಳಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ನೌಕರಿ ಮಾಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿರುತ್ತಾನೆ. ಇತನನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಟ್ಟಿದ್ದು ಇರುತ್ತದೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀ ಸಾಗರ ತಂದೆ ಗಂಗಾರಾಮ ಪವಾರ ಸಾ:- ಹೇಬಳಿ ತಾಂಡ ತಾ:- ಆಳಂದ ರವರು ನಾನು ನಮ್ಮ ಹೋಲಕ್ಕೆ ಬಂದಿದ್ದು ಸಾಯಾಂಕಾಲ 6.30 ಪಿಎಂಕ್ಕೆ ಗುಲ್ಬರ್ಗಾಕ್ಕೆ ಹೋಗಬೆಕೆಂದು ನಮ್ಮ ತಾಂಡದ ಬಸ್ ಸ್ಟಾಪ್ ನಲ್ಲಿ ನಿಂತಾಗ ಹಿರೋಹೋಂಡಾ ಮೋಟರ ಸೈಕಲ ನಂ ಕೆ.ಎ 32 ಯು 9366 ನೇದ್ದರ ಮೇಲೆ ಬಂದು ನನ್ನನು ನೋಡಿ ಮೋಟರ ಸೈಕಲ ನಿಲ್ಲಿಸಿ ಅಜೀತ ರಾಠೋಡ, ಚಂದು ರಾಠೋಡ, ನಾಗರಾಜ ರಾಠೋಡ ಇದ್ದು ನನಗೆ ಅಜೀತ ಇತನು ಎ ಬೋಸಿಡಿ ಮಗನೇ ನಿನು ಗುಲ್ಬರ್ಗಾದಲ್ಲಿ ಶಾಲೆ ಕಲಿಯುತ್ತಿ ಅಂತಾ ಬಹಳ ಹುಷಾರಿ ತೋರಿಸುತ್ತಿಯಾ ನಿಮ್ಮ ತಾಂಡದವರು ನಿಮ್ಮ ತಾಂಡದವರು ನಮ್ಮ ತಾಂಡದವರ ಮೇಲೆ ಕೇಸ ಮಾಡಿಸಿರುತ್ತಿರಿ ಅಂತಾ ಅವಾಚ್ಯವಾಗಿ ಬೈಯುತ್ತಾ ಈ ತಾಂಡದವರಿಗೆ ಬಹಳ ಸೋಕು ಬಂದಿದೆ ಅಂತಾ ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾರೆ ಮತ್ತು ಕೈಯಿಂದ ಕಣ್ಣಿನ ಮೇಲೆ ಸಹ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 297/2011 ಕಲಂ 323, 324, 504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಆಳಂದ ಪೊಲೀಸ ಠಾಣೆ:
ನಾನು ಅಜೀತ ತಂದೆ ದೇವು ರಾಠೋಡ ಸಾ:ಪಿ.ಎನ್.ತಾಂಡಾ ಹೇಬಳಿ ರೋಡ ತಾ:ಆಳಂದ ಹೇಳಿ ಬರೆಸಿದ ಹೇಳಿಕೆ ಹಿಗಿದ್ದು ನಿನ್ನೆ ದಿನಾಂಕ 24/12/2011 ರಂದು ಎಳ್ಳ ಅಮವಾಸ್ಯೆ ಇದ್ದ ಪ್ರಯುಕ್ತ ನಾನು ನಮ್ಮ ಹೊಲಕ್ಕೆ ಹೇಬಳಿ ತಾಂಡಾದ ಆಚೆ ಇರುವ ಹೊಲಕ್ಕೆ ಹೋಗಿ ಸಾಯಾಂಕಾಲ 6:30 ಪಿ.ಎಮ್ ಸುಮಾರಿಗೆ ನಮ್ಮ ತಾಂಡಾಕ್ಕೆ ಮನೆಗೆ ಬರುತಿದ್ದಾಗ ಹೇಬಳಿ ತಾಂಡಾದ ಬಸ್ ಸ್ಯಾಂಡದಲ್ಲಿ ಸಾಗರ ರಾಠೋಡ ಮತ್ತು ಸಾವನ ರಾಠೋಡ ಇವನು ನನಗೆ “ಏ ಸುನೀಲ್ ನಿಲ್ಲು” ಅಂತಾ ಅಂದಾಗ ನಾನು ಅವರಿಗೆ ನಾನು ಸುನೀಲ್ ಅಲ್ಲಿ ನನ್ನ ಹೆಸರು ಅಜೀತ ರಾಠೋಡ ಇದೆ, ನಾನು ಪಿ.ಎನ್.ತಂಡಾದ ಮುಕುಂದ ರಾಠೋಡ ಇವರ ತಮ್ಮನ ಮಗನಿದ್ದೇನೆ ಅಂತಾ ಅಂದೇನು, ಆಗ ಸಾಗರ ಇತನು ಎಲ್ಲಿಗೆ ಹೋಗುತ್ತಿ ನಿಲ್ಲು ಬೋಸಡಿ ಮಗನೆ ನಿಮ್ಮ ಕಾಕಾ ಮುಕುಂದ ನಮ್ಮ ಮೇಲೆ ಕೇಸ ಮಾಡಿಸಿದ್ದಾನೆ, ನಿನು ನಮಗೆ ಬೇಕು ಅಂತಾ ಅವಾಚ್ಯವಾಗಿ ಬೈದು ನನಗೆ ತಡೆದು ನಿಲ್ಲಿಸಿದ್ದು, ಸಾವನ ಇತನು ನನಗೆ ಕೈಯಿಂದ ಹೊಟ್ಟೆ, ಬೇನ್ನಿಗೆ ಹೊಡೆದು ಗುಪ್ತಗಾಯಾ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 298/2011 ಕಲಂ 323, 341, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀ ರಾಜೇಂದ್ರ ತಂದೆ ಮಾಣಿಕರಾವ್ ಬೇಳ್ಳೆ ರವರು ನಮ್ಮ ಮನೆಯ ಮುಂದಿನ ಮನೆಯವರಾದ ಸಂಗಮೇಶ ತಂದೆ ದೇವಪ್ಪಾ ಪಡೆಶೇಟ್ಟಿ ಸಾ:ರೇವಣಸಿದ್ದೇಶ್ವರ ಕಾಲೋನಿ ಇವರು ನನಗೆ ದೂರವಾಣಿ ಮುಖಾಂತರ ತಿಳಿಸಿದ್ದೇನೆಂದರೆ ನಿಮ್ಮ ಮನೆಯ ಗೇಟಿನ ಮತ್ತು ಮನೆಯ ಬಾಗಿಲಿನ ಕಿಲಿ ಮುರಿದು ಯಾರೂ ಕಳ್ಳರು ಕಳ್ಳತನ ಮಾಡಿಕೊಂಡಂತೆ ಕಂಡುಬರುತಿದ್ದೆ, ಕಾರಣ ನೀವು ಬರಲು ತಿಳಿಸಿದ ಮೇರೆಗೆ ನಾನು ಗಾಬರಿಯಾಗಿ ನನ್ನ ಹೆಂಡಿತಿ ಮಕ್ಕಳೂಂದಿಗೆ ಮನೆಗೆ ಬಂದು ನೂಡಲಾಗಿ ಮನೆಯ ಗೇಟಿನ ಕೀಲಿ ಮುರಿದು, ಮನೆಯ ಬಾಗಿಲಿನ ಕೊಂಡಿ ಮುರಿದ್ದು, ಮನೆಯ ಒಳಗೆ ಪ್ರವೇಶಮಾಡಿ ಅಲಮಾರಿ ಇದ್ದ ಕೊಣೆಯಲ್ಲಿ ಹೋಗಿ ಅಲಮಾರಿಯ ಲಾಕರನಲ್ಲಿ ಇಟ್ಟಿದ್ದ ನಗದು ಹಣ 60,000/- ರೂ ಬಂಗಾರದ ಆಭರಣಗಳು ಹಾಗು ಬೆಳ್ಳಿಯ ಸಾಮಾನುಗಳು ಬಟ್ಟೆ ಬರೆ ಹೀಗೆ ಒಟ್ಟು 1,20,200/- ರೂ ಬೆಲೆಯುಳ್ಳದ್ದು ಯಾರೂ ಕಳ್ಳರು ರಾತ್ರಿಯ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 299/2011 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ದಿನಾಂಕ; 25/12/2011 ರಂದು ಮದ್ಯಾಹ್ನ 4:45 ಗಂಟೆಗೆ ಇಂಡಸ್ಟ್ರಿಯಲ್‌ ಏರಿಯಾದ ರಮಾ ಇಂಜಿನಿಯರಿಂಗ ವರ್ಕ್ಸ ಗೋದಾಮಿನ ಹಿಂದುಗಡೆ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಜೂಜಾಟ ಆಡುತ್ತಿದ್ದಾಗ ಪಂಚರು ಸಮಕ್ಷಮ ಪಿ.ಎಸ.ಐ ಆನಂದರಾವ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಮಹ್ಮದ ಆಸೀಪ ತಂದೆ ಮಹ್ಮದ ಸಿದ್ದಿಕಿ ಸಾ: ಕಾಕಡೇ ಚೌಕ ಗುಲಬರ್ಗಾ ಸಂಗಡ 5 ಜನರು ಜನರನ್ನು ಹಿಡಿದು ಜೂಜಾಟಕ್ಕೆ ಬಳಸಿದ 52 ಇಸ್ಪೇಟ ಎಲೆ ಹಾಗೂ ನಗದು ಹಣ 6300/- ರೂ ಮತ್ತು 6 ಮೊಬೈಲಗಳನ್ನು ವಶಪಡಿಸಿಕೊಂಡಿದ್ದು ಹೀಗೆ ಒಟ್ಟು 9100/- ರೂಪಾಯಿ ಗಳನ್ನು ವಶಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 380/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಠಾಣೆ:
ಶ್ರೀ ಮಹಿಬೂಬ ಅಲಿ ತಂದೆ ಅಲ್ಲಿಸಾಬ ಸಾ ಮದಿನಾ ಕಾಲೋನಿ ಗುಲಬರ್ಗಾ ಇವರು ದಿನಾಂಕ 23-12-2011 ರಂದು ರಾತ್ರಿ ವೇಳೆಯಲ್ಲಿ ಮದಿನಾ ಕಾಲೋನಿಯಲ್ಲಿ ತನ್ನ ಲಾರಿ ನಂ ಕೆಎ-32/5911 ನೇದ್ದನ್ನು ನಿಲ್ಲಿಸಿದ್ದು, ಅದರಲ್ಲಿದ್ದ 4000/-ರೂ ಬೆಲೆಯುಳ್ಳ ಎರಡು ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲೆ ಠಾಣೆ ಗುನ್ನೆ ನಂ 103/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. .
ಕಳ್ಳತನ ಪ್ರಕರಣ:
ರೋಜಾ ಠಾಣೆ:
ಶ್ರೀ ಮಹ್ಮದ ಅಬ್ದುಲ ಹಬೀಬ ತಂದೆ ಮಹ್ಮದ ಅಬ್ದುಲ ರಸೀದ ಸೆಕರೇಟರಿ ಕೆ.ಬಿ.ಎನ್ ದರ್ಗಾ ರವರು ನಾನು ದಿನಾಂಕ 25-12-2011 ಕೆ.ಬಿ.ಎನ್ ದರ್ಗಾದಲ್ಲಿ ಬರುವ ಅಕೌಂಟ ಸೇಕ್ಷನ್ ಆಫೀಸಿನಲ್ಲಿ ಮಧ್ಯರಾತ್ರಿ 2-30 ಎ. ದಿಂದ 4-30 ಅವಧಿಯಲ್ಲಿ ಪ್ರವೇಶ ದ್ವಾರದ ಬಾಗಿಲದ ಕೀಲಿ ಮುರಿದು ಯಾರೋ ಕಳ್ಳರು ಒಳಗಡೆ ಪ್ರವೇಶ ಮಾಡಿ ಅಕೌಂಟ ಆಪೀಸದಲ್ಲಿದ್ದ ಟ್ರೇಜರಿಗಳನ್ನು ಮತ್ತು ಅಲಮಾರ್ ಗಳನ್ನು ಮುರಿದು ಟ್ರೇಜರಿಯಲ್ಲಿದ್ದ ನಗದು ಹಣ ಒಟ್ಟು 24,767/- ರೂಪಾಯಿಗಳನ್ನು ಯಾರೋ ಕಳ್ಳರು ಕಳುಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ: 119/2011 ಕಲಂ:457,380 ಐ,ಪಿ,ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀಮತಿ ರೂಪಾಲಿ ಗಂಡ ಪ್ರಮೋದ ಪಟವಾರಿ ವ:42 ವರ್ಷ ಉ:ಮನೆಗೆಲಸ ಜಾತಿ ಬ್ರಾಹ್ಮಣ ಸಾ:ವೆಂಕಟೇಶ ನಗರ ಗುಲಬರ್ಗಾ ರವರು ನಾನು ಮತ್ತು ಮಕ್ಕಳಾದ ಪ್ರಣೀತಾ, ಪ್ರತೀಕ, ಆಕೆಯ ಗಂಡ ಪ್ರಮೋದ ಪಟವಾರಿ ಹಾಗೂ ಗಂಡನ ಸೋದರಮಾವ ಅಶೋಕರಾವ ಬಕಸಿ ರವರು ಎಳ್ಳ ಅಮವ್ಯಾಸೆ ಹಬ್ಬ ಕುರಿತು ಲಾತೂರ ಜಿಲ್ಲೆಯ ಅಮದಸೂರಿಗೆ ಮಾರುತಿ ಕೆಎ 32 ಎಂ 3851 ನೇದ್ದರಲ್ಲಿ ಹೋಗಿ ಮರಳಿ ಗುಲಬರ್ಗಾಕ್ಕೆ ಹೊರಟಿದ್ದು ಕಾರ ಪ್ರಮೋದ ಪಟವಾರಿ ನಡೆಸುತ್ತಿದ್ದು, ಗುಲಬರ್ಗಾ- ಆಳಂದ ರೋಡಿನ ಕೆರೆಭೋಸಗಾ ಕ್ರಾಸ ದಾಟಿ 1 ಕಿ.ಮೀ. ದೂರ ಬಂದಾಗ, ಎದುರುನಿಂದ ಯಾವುದೋ ಒಬ್ಬ ಲಾರಿ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಯಿಸುತ್ತಾ ಬಂದು ತನ್ನ ಸೈಡಿಗೆ ಹೋಗದೇ ರಾಂಗ ರೂಟನಲ್ಲಿ ಬಂದವನೇ, ನಮ್ಮ ಕಾರಿನ ಎಡಭಾಗದಿಂದ ಒಮ್ಮಿಂದ ಒಮ್ಮೇಲೆ ವೇಗದಲ್ಲಿ ಕಟ್ ಮಾಡಿದ್ದರಿಂದ ಕಾರಿನ ಎಡಭಾಗಕ್ಕೆ ಡಿಕ್ಕಿ ಹೊಡೆದು ಹಾಗೇ ಎಡಭಾಗಕ್ಕೆ ಸವರಿಕೊಂಡು ಅಳಂದ ಕಡೆಗೆ ಓಡಿಸಿಕೊಂಡು ಹೋದನು. ಕತ್ತಲೆ ಇದುದ್ದರಿಂದ ಲಾರಿ ನಂಬರ ನೋಡಲು ಆಗಿರುವುದಿಲ್ಲಾ. ಲಾರಿ ಚಾಲಕ ಡಿಕ್ಕಿ ಹೊಡೆದ ರಭಸಕ್ಕೆ ನಮ್ಮ ಕಾರ ಮೊರು ಸಲ ಪಲ್ಟಿಯಾಗಿ,ಆಳಂದ ಕಡೆ ಮುಖ ಮಾಡಿ ಎಡ ಮಗ್ಗಲು ಪಲ್ಟಿಯಾಗಿ ಬಿದ್ದಿದ್ದು, ಇದರಿಂದಾಗಿ ಅಶೋಕಕರಾವ ಬಕಸಿ ಇವರಿಗೆ ತಲೆ ಭಾರಿ ರಕ್ತಗಾಯವಾಗಿ, ಕಿವಿಯಿಂದ ಮೊಗಿನಿಂದ ರಕ್ತ ಸೋರಿ ಸ್ಥಳದಲ್ಲಿ ಮೃತಪಟ್ಟಿದ್ದು, ಪ್ರಮೋದ ಪಟವಾರಿ ಬಲಗೈ ಪ್ರ್ಯಾಕ್ಚರ ಆಗಿದ್ದು ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 279, 337, 338, 304 (ಎ) ಐಪಿಸಿ ಸಂಗಡ 187 ಐ.,ಎಮ್ ವಿಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ
ಕೊಲೆ ಪ್ರಕರಣ:
ಚೌಕ ಪೊಲೀಸ್ ಠಾಣೆ :
ಶ್ರೀ ಆನಂದ ತಂದೆ ಪ್ರಭಾಕರ್ ಛಕ್ಕಡಿ ಚೌಡೇಶ್ವರ ಕಾಲೋನಿ ಗುಲಬರ್ಗಾ ರವರು ನನ್ನ ತಮ್ಮನ ಗೆಳಯನಾದ ರಾಜಗೋಪಾಲ ಚಾರಿ ಸಾ: ಆಳಂದ ಚಕ್ ಪೋಸ್ಟ ಗುಲಬರ್ಗಾ ರವರು ಮನೆಗೆ ಬಂದು ವಿಷಯ ತಿಳಿಸಿದ್ದು ಏನೆಂದರೆ, ನಾನು ಆಳಂದ ಚಕ್ ಪೋಸ್ಟದಿಂದ ಚೌಕ ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ಸೇಠಜಿ ಕಾಂಪ್ಲೇಕ್ಸ [ಭಲಾಡ್ಯ ಫೈನಾನ್ಸ ಲೀಜಿಂಗ ಮುಂದೆ ರೋಡಿನ ಮೇಲೆ ನಿನ್ನ ತಮ್ಮನಾದ ಸಂತೋಷ ಇತನಿಗೆ ಯಾರೋ ಜನರು ಜಂಬ್ಯಾದಿಂದ ಹೋಡೆದು ಮತ್ತು ಪರ್ಸಿ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿರುತ್ತಾರೆ ನಿನ್ನ ತಮ್ಮನ ಶವವು ರೋಡಿನ ಮೇಲೆ ಬಿದಿದೆ ಅಂತಾ ತಿಳಿಸಿದ್ದರಿಂದ ಅವನು ಮತ್ತು ನಾನು ಹಾಗೂ ನನ್ನ ತಮ್ಮನಾದ ರವಿ ರವರು ಕೂಡಿಕೂಂಡು ಸೇಠಜಿ ಕಾಂಪ್ಲೇಕ್ಸದ ರೋಡಿನ ಹತ್ತಿರ ಬಂದು ನೋಡಲಾಗಿ ಯಾರೋ ಜನರು ಯಾವೂದೋ ಕಾರಣಕ್ಕಾಗಿ ಭೀಕರವಾಗಿ ಜಂಬ್ಯಾದಿಂದ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 248/2011 ಕಲಂ 143, 147, 148, 302 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಯು.ಡಿ.ಅರ್.ಪ್ರಕರಣ: ಶ್ರೀ ಪರಶುರಾಮ ತಂದೆ ತುಳಜಪ್ಪಾ ಗಂಗಾಪೂರ ಸಾ ವೆಂಕಟಾಪೂರ ರವರು ನನ್ನ ತಂದೆ ತುಳಜಪ್ಪಾ ಇವರಿಗೆ ವೆಂಕಟಾಪೂರ ಸಿಮಾಂತರದಲ್ಲಿ ಸರ್ವ ನಂ 288/3, 288/6 ರಲ್ಲಿ ಒಟ್ಟು 4 ಎಕರೆ 16 ಗುಂಟೆ ಜಮಿನು ಇದ್ದು ನಾವು ಮೂರು ಜನ ಗಂಡು ಮಕ್ಕಳು ಇದ್ದು ಮೂರು ಜನ ಗಂಡು ಮಕ್ಕಳು ಹಾಗೂ ತಂದೆ ತುಳಜಪ್ಪಾ ಎಲ್ಲರೂ ಕೊಡಿ ಒಕ್ಕಲು ತನ ಕೆಲಸ ಮಾಡಿಕೊಂಡಿದ್ದು 2006 ನೇ ಸಾಲಿನಲ್ಲಿ ತನ್ನ ತಂದೆ ತುಳಜಪ್ಪಾ ಇವರು ಗುಲಬರ್ಗಾ ದಲ್ಲಿನ ಕೆನರಾ ಬ್ಯಾಂಕ ನಿಂದ 5,50000 /- ರೂ ಸಾಲ ಪಡೆದು ಒಂದು ಟ್ರ್ಯಾಕ್ಟರ ಖರೀದಿಸಿ ಒಕ್ಕಲುತನ ಕೆಲಸಕ್ಕಾಗಿ ಉಪಯೊಗಿಸುತ್ತಾ ಬಂದಿದ್ದು ಅಲ್ಲಿಂದ ಇಲ್ಲಿಯ ವರೆಗೆ ಸಕಾಲಕ್ಕೆ ಮಳೆಯಾಗದೆ ಇರುವದ್ದರಿಂದ ಹೊಲದಲ್ಲಿ ಬೆಳೆ ಸರಿಯಾಗಿ ಬೇಳೆಯದೆ ಬ್ಯಾಂಕಿಗೆ ಟ್ರ್ಯಾಕ್ಟರ ಹಣ ಖಾಸಗಿಯವರಿಂದ ಸಾಲ ಪಡೆದು ಕಟ್ಟಿದ್ದು . 2008 ನೇ ಸಾಲಿನಿಂದ ಬೆಳೆಗಳಿಗೆ ರೋಗ, ಕೀಟ ಭಾದೆ ಹಾಗೂ ಸಕಾಲಕ್ಕೆ ಮಳೆಯಾಗದ ಕಾರಣ ಯಾವುದೇ ರೀತಿಯ ಬೇಳೆ ಬೇಳೆದಿರುವದಿಲ್ಲಾ. ಇದರಿಂದ ಖಾಸಗಿಯವರ ಸಾಲ ಮತ್ತು ಬ್ಯಾಂಕಿನ ಸಾಲ ತೀರಿಸದೆ ಆಗದೆ ಇರುವುದರಿಂದ ತನ್ನ ತಂದೆ ತುಳಜಪ್ಪಾ ಇವರು ದಿನಾಂಕ 24/12/2011 ರಂದು ಮಧ್ಯಾನ 12-30 ಗಂಟೆಯ ಸುಮಾರಿಗೆ ನಮ್ಮ ಹೊಲದಲ್ಲಿ ಕ್ರಿಮಿನಾಶಕ ಔಷಧಿಯನ್ನು ಆತ್ಮ ಹತ್ಯೆ ಮಡಿಕೊಂಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಸುಲೇಪೇಟ ಠಾಣೆ ಯ ಯು ಡಿ ಆರ್ ನಂ 14/2011 ಕಲಂ 174 ಸಿ ಆರ್ ಪಿ ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

25 December 2011

GULBARGA DIST REPORTED CRIMES

ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ
: ಶ್ರೀಮತಿ ಮಹಿಬೂಬಿ ಗಂಡ ಮಹಿಬೂಬಸಾಬ ಸತ್ವರವಲಿ ವ:60 ವರ್ಷ ಸಾ: ಮಿಣಜಗಿ ಇವರ ಹೇಳಿಕೆ ನೀಡಿದ ಸಾರಾಂಶವೇನೆಂದರೆ ನಾನು ನನ್ನ ಮಗಳಾದ ಬೇಗಮಬಿ ಹಾಗೂ ನನ್ನ ಮೊಮ್ಮಗನಾದ ಆರಿಫ ಮೂರು ಜನರು ಕೂಡಿಕೊಂಡು ಮಂದರವಾಡ ಗ್ರಾಮದಿಂದ ಬಂದು ನದಿಸಿನ್ನೂರ ಬಸ ಸ್ಟ್ಯಾಂಡ ಹತ್ತಿ ಕುಳಿತು ಕೊಂಡಾಗ ನದಿಸಿನ್ನೂರ ಗ್ರಾಮದಿಂದ ಟ್ರ್ಯಾಕ್ಟರ ಚಾಲಕನು ಅತಿವೇಗದಿಂದ.ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಮೇಲೆ ಮತ್ತು ನನ್ನ ಮೊಮ್ಮಗನಿಗೆ ಡಿಕ್ಕಿ ಪಡಿಸಿದ ಪರಿಣಾಮ ನನಗೆ ತಲೆಯ ಹಣೆಯ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ. ಮತ್ತು ಬಲಗೈ ಹಸ್ತದ ಮೇಲೆ ರಕ್ತಗಾಯವಾಗಿರುತ್ತದೆ. ಮತ್ತು ನನ್ನ ಮೊಮ್ಮಗನಾದ ಆರಿಫ ಇವನಿಗೆ ಬಲಗಾಲ ಹಿಂಬಡಿ ಹತ್ತಿರ ರಕ್ತಗಾಯ ಮತ್ತು ಎರಡು ತೋಡೆಗಳಿಗೆ ಗುಪ್ತಗಾಯಗಳಾಗಿರುತ್ತದೆ. ಟ್ರ್ಯಾಕ್ಟರ ನಂ ಕೆಎ-32 ಟಿ.ಆರ್-4377 ನೇದ್ದರ ಶರಣಪ್ಪಾ ತಂದೆ ಕುಪ್ಪಣ್ಣಾ ದಂಡೋತಿ ಸಾ: ನದಿಸಿನ್ನೂರ ಇತನು ನಮಗೆ ಡಿಕ್ಕಿ ಪಡಿಸಿದ ಕೂಡಲೆ ಟ್ರ್ಯಾಕ್ಟರವನ್ನು ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಹೇಳಿಕೆಯ ಸಾರಾಂಶ ಮೇಲಿಂದ ಠಾಣೆಯ ಗುನ್ನೆ ನಂ 223/2011 ಕಲಂ 279.337.338. ಐ.ಪಿಸಿ ಸಂಗಡ 187 ಐ.ಎಮ್.ವಿ ಎಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವಾರಸುದಾರರಿಲ್ಲದ ಮತ್ತು ನಂಬರ ಇಲ್ಲದ ಮೋಟಾರ ಸೈಕಲ್ ವಶಪಡಿಸಿಕೊಂಡ ಬಗ್ಗೆ:
ಅಪಜಲಪೂರ ಠಾಣೆ:
ಸರ್ಕಾರಿ ತರ್ಪೆಯಾಗಿ ಶ್ರೀ ಮಂಜುನಾಥ ಎಸ್. ಪಿ ಎಸ್ ಐ ಅಫಜಲಪೂರ ಪೊಲೀಸ್ ಠಾಣೆ ರವರು ನಾನು ಮತ್ತು ಪಿಸಿ ಜಗನಾಥ ಮತ್ತು ಜೀಪ್ ಚಾಲಕ ಗುಂಡಪ್ಪಾ ದಿನಾಂಕ 24-12-2011 ರಂದು ರಾತ್ರಿ 11:30 ಪಿ ಎಮ್ ಕ್ಕೆ ಅಮವಾಸೆ ಪ್ರಯುಕ್ತ ಪೆಟ್ರೋಲಿಂಗ್ ಹೊರಟು ಅಫಜಲಪೂರ ಪಟ್ಟಣದಲ್ಲಿ ಪೆಟ್ರೋಲಿಂಗ ಮಾಡುತ್ತ ದಿನಾಂಕ 25.12.11 ರಂದು 4:30 ಎ ಎಮ್ ಕ್ಕೆ ಸೊನ್ನ ಕ್ರಾಸ ಹತ್ತಿರ ಹೋದಾಗ ರಸ್ತೆಯ ಬಲಬಾಗದ ಪಕ್ಕದ ಹೊಲದಲ್ಲಿ ಒಂದು ಕಪ್ಪು ಬಣ್ಣದ ಬಜಾಜ ಕಂಪನಿಯ ಪಲ್ಸರ ಮೋಟರ್ ಸೈಕಲ ಇದ್ದು ಅದಕ್ಕೆ ನಂಬರ ಪ್ಲೇಟ ಇರುವುದಿಲ್ಲ,ಪರಿಶೀಲಿಸಿ ನೋಡಲು ಅದರ ಚೆಸ್ಸಿ ನಂ. MD2DHDJZZTCH40541 ಇಂಜಿನ ನಂ. DJGBTH83137 ನೇದ್ದು ಇರುತ್ತದೆ. ಸದರ ಬೈಕಿನ ಬಗ್ಗೆ ರಸ್ತೆಗೆ ಹೋಗಿ ಬರುವ ವಾಹನಗಳನ್ನು ತಡೆದು ಜನರಿಗೆ ಕೇಳಿ ವಿಚಾರಿಸಲು ವಾಹನ ಯಾರಿಗೆ ಸಂಬಂಧಿಸಿದ್ದು ಎಂದು ತಿಳಿದು ಬಂದಿರುವುದಿಲ್ಲ. ಯಾರೋ ಇಲ್ಲಿ ವಾಹನವನ್ನು ಬಿಟ್ಟು ಹೋಗಿದ್ದು ಸದರ ವಾಹನದ ವಾರಸದಾರರು ಯಾರೂ ಇಲ್ಲದ ಕಾರಣ ವಾಹನವನ್ನು ಠಾಣೆಗೆ ತಂದು ಠಾಣೆಯ ಗುನ್ನೆ ನಂ. 217/2011 ಕಲಂ 41 (ಡಿ), 102 ಸಿ ಆರ್ ಪಿ ಸಿ ನೇದ್ದರ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಹಿಳೆ ಕಾಣೆಯಾದ ಪ್ರಕರಣ:
ಮಹಿಳಾ ಠಾಣೆ:
ಶ್ರೀ ಮನ್ಸೂರಲಿ ಸಾ: ಮನೆ ನಂ.892/7/1,1ನೇ ಅಡ್ಡ ರಸ್ತೆ ಬುದ್ದ ನಗರ ಗುಲಬರ್ಗಾ ರವರು ನಾನು ದಿನಾಂಕ 17.12.2011 ರಂದು ಸಾಯಂಕಾಲ ಗಂಟೆಯ ಸುಮಾರು ಮನೆಗೆ ಬಂದು ಊಟವನ್ನು ಮಾಡಿಕೊಂಡು ಮತ್ತೇ ನನ್ನ ಕೆಲಸದ ಮೇಲೆ ಹೋಗುವಾಗ ನನ್ನ ಪತ್ನಿ ನಾನು ಬ್ಯೂಟಿಪಾರ್ಲರ್ಗೆ ಹೋಗಿ ಬರುತ್ತೇನೆ ನನಗೆ ಸ್ವಲ್ಪ ಹಣ ಕೊಡಿ ಅಂತಾ ಕೇಳಿದಕ್ಕೆ ನಾನು 50/- ರೂಪಾಯಿ ಕೊಟ್ಟು ಮನೆಯಿಂದ ಹೊರಗಡೆ ಹೋದೆನು. ನಾನು ನನ್ನ ಕೆಲಸವನ್ನು ಮುಗಿಸಿಕೊಂಡು ರಾತ್ರಿ 9.00 ಗಂಟೆಗೆ ನಾನು ಮನೆಗೆ ಬಂದಾಗ ಮನೆಗೆ ಬಿಗ ಹಾಕಿದ್ದು. ನಾನು ನನ್ನ ಮೊಬೈಲ್ ಫೋನಿನಿಂದ ಅವಳ ಮೊಬೈಲಗೆ ಫೋನ ಮಾಡಿ ಅವಳ ಫೋನ ಸ್ವಿಚ್ ಆಫ್ ಆಗಿತ್ತು. ಮನೆಯಲ್ಲಿನ ತನ್ನ ಮತ್ತು ಮಗನ ಬಟ್ಟೆ ಬರೆಗಳನ್ನು ಅಲ್ಲದೇ ತನ್ನ ಮೈಮೇಲೆ ಇದ್ದ 1 ½ ತೊಲೆ ಬಂಗಾರ ತೆಗೆದುಕೊಂಡು ಹೋಗಿರುತ್ತಾಳೆ. ನಾನು ಅವರ ತಂದೆ ತಾಯಿ ಹಾಗೂ ಅವರ ಸಂಬಂಧಿಕರಿಗೆ ಫೋನ ಮಾಡಿ ವಿಚಾರಿಸಿದ್ದಾಗ ಎಲ್ಲಿಯೂ ಅವಳ ಮಾಹಿತಿ ಸಿಗಲ್ಲಿಲ್ಲಾ ಎಲ್ಲಾ ಹುಡುಗಾಡಿದರು ನನ್ನ ಹೆಂಡತಿ ಪತ್ತೆಯಾಗಿರುವುದಿಲ್ಲಾ. ದಿನಾಂಕ :18.12.2011 ರಂದು ನನ್ನ ಹೆಂಡತಿ ತಂದೆ ತಾಯಿಯವರು ನನಗೆ ಫೋನ ಮಾಡಿ ತಿಳಿಸಿದೇನೆಂರೆ ನನ್ನ ಹೆಂಡತಿ ಅವರಿಗೆ ಫೋನ ಮಾಡಿ ನಾನು ನನ್ನ ಮಗನೊಂದಿಗೆ ಚನ್ನಾಗಿದ್ದೆನೆ ನಾನು ಮುಂಬೈ ಕಡೆಗೆ ಬಂದಿರುತ್ತೆನೆ ಅಂತಾ ತಿಳಿಸಿರುತ್ತಾಳೆ ಅಂತಾ ತಿಳಿಸಿದರು. ಆದರೆ ನನ್ನ ಹೆಂಡತಿಯ ತಂದೆ – ತಾಯಿ ಹಾಗೂ ಅವರ ಸಂಬಂದಿಕರು ನನ್ನಗೆ ವಿನಾ ಕಾರಣ ನನ್ನ ಮೇಲೆ ಹಾಗೂ ನನ್ನ ಸಂಬಂದಿಕರು ಮೇಲೆ ಕೇಸ ಮಾಡುವುದಾಗಿ ಹೇಳುತ್ತಿದ್ದಾರೆ. ಕಾರಣ ನನ್ನ ಕಾಣೆಯಾದ ನನ್ನ ಪತ್ನಿಗೆ ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ನಮ್ಮ ಠಾಣೆಯ ಗುನ್ನೆ ನಂ 124/2011 ಕಲಂ ಹೆಣ್ಣು ಮಗಳು ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಕಾಣೆಯಾದ ಮಹಿಳೆ ಚಹರೆ ಪಟ್ಟಿ ಹೆಸರು ತನಿವೀರ ಬೇಗಂ, ವ 25 ವರ್ಷ, ಜಾತಿ: ಮುಸ್ಲೀಂ, ಎತ್ತರ 5.2 ಅಡಿ ದುಂಡು ಮುಖ. ಕಪ್ಪು ಕೂದಲು ಕನ್ನಡ ಹಿಂದಿ ಇಂಗ್ಲೀಷ ಬಲ್ಲವಳಾಗಿರುತ್ತಾಳೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಮಹಿಳಾ ಠಾಣೆ ದೂರವಾಣಿ ಸಂ: 08472-263620 ಅಥವಾ ಗುಲಬರ್ಗಾ ಕಂಡ್ರೋಲ್ ರೂಮ್ ನಂ: 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಸಂತೋಷ ತಂದೆ ಸುಭಾಶ್ಚಂದ್ರ ಮಾಲಿ ಪಾಟೀಲ ಡಗಿ ಸಂತೋಷ ಕಾಲೋನಿ ವರದಾನಗರ ಗುಲಬರ್ಗಾರವರು ನಾನು ರಾಮಮಂದಿರ ದಿಂದ ರೇಲ್ವೆ ಅಂಡರ ಬ್ರೀಡ್ಜ ರೋಡಿನಲ್ಲಿ ಬರುವ ಪಿ.ಡಬ್ಲೂ.ಡಿ ಕ್ವಾಟರ್ಸ ಹತ್ತಿರ ಬರುತ್ತಿದ್ದಾಗ ಕಾರ ನಂ:ಕೆಎ 32 ಎಮ್ 7259 ನೇದ್ದರ ಚಾಲಕ ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲ ನಂ ಕೆಎ 32 ಡಬ್ಲೂ 5556 ನೇದ್ದಕ್ಕೆ ಡಿಕ್ಕಿ ಪಡಿಸಿರುತ್ತಾನೆ. ಮೋಟಾರ ಸೈಕಲ ಚಾಲಕನಿಗೆ ಮತ್ತು ಆತನ ಹಿಂದುಗಡೆ ಕುಳಿತಿದ್ದ ಶ್ರವಣಮ್ಮಾ ಇವರಿಗೆ ಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 160/2011 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮನುಷ್ಯ ಕಾಣೆಯಾದ ಪ್ರಕರಣ:
ಚಿಂಚೋಳಿ ಠಾಣೆ:
ಸುರೇಶ ತಂದೆ ಸುಬ್ರಮಣ್ಯಂ ವರಕಿಲ್ಲಾ ಸಾ ನೇಲ್ಲೂರ ಆಂದ್ರ ಪ್ರದೇಶ ಸಧ್ಯ ಅಂಬೇಡ್ಕರ ಸರ್ಕಲ್ ಚಿಂಚೋಳಿ ರವರು ನನ್ನ ತಂದೆಯವರಾದ ಸುಬ್ರಮಣ್ಯಂ ತಂದೆ ಸುಬಬ್ರಾಮಯ್ಯ ವರಕಿಲ್ಲಾ ವಯ 60 ವರ್ಷ , ಬಿಳಿಯ ಕೂದಲು ಬ್ಲಾಕ್ ಹೆರ್ ಡ್ರಾಯ್ ಮಾಡಿರುತ್ತಾರೆ, ಎತ್ತರ 6 ಅಡಿ ಸಾದಾರಣ ಮೈಕಟ್ಟು , ದುಂಡು ಮುಖ, ಬಿಳಿ ಬಣ್ಣದ ಪಂಜೆ ಮತ್ತು ಬಿಳಿ ನೆಹರು ಶರ್ಟ ಧರಿಸಿರುತ್ತಾರೆ. ಅವರು ತೆಲಗು ಭಾಷೆ ಬಲ್ಲವರಾಗಿರುತ್ತಾರೆ ಇವರು ದಿನಾಂಕ: 12-12-2011 ರಂದು ಮನ್ನಾಏಖೇಳಿ- ಬೀದರ ಬಸ್ಸ ಹತ್ತುಕೊಂಡು ಹೋಗಿರುತ್ತಾರೆ. ಕಾರಣ ಅವರನ್ನು ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಮ: 154/2011 ಕಲಂ ಮನುಷ್ಯ ಕಾಣೆಯಾದ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮಹಮ್ಮದ ಅಬ್ದಲ್ ಸಲೀಮ ತಂದೆ ಮುನೀರ ಮಿಯ್ಯಾ ಹೀರಾಪುರವಾಲೇ ವಯಾ:19 ವರ್ಷ ಸಾ:ಎಕಬಾಲ ಕಾಲೋನಿ ಎಮ್.ಎಸ್.ಕೆ ಮೀಲ ಗುಲಬರ್ಗಾರವರು ನನ್ನ ತಂದೆಯಾದ ಮುನೀರಮಿಯ್ಯಾ ಇವರು ದಿನಾಂಕ:-23/12/2011 ರಂದು 7:00 ಪಿ.ಎಮ್.ಸುಮಾರಿಗೆ ಮಿಜಬಾನಗರಕ್ಕೆ ಅಡಿಗೆ ಮಾಡಲು ಹೋಗಿ ಮರಳಿ ಮನೆಗೆ ನಡೆದುಕೊಂಡು ಬರುತ್ತಿರುವಾಗ ಹಿಂದಿನಿಂದ ಆಟೋ ನಂ ಕೆ.ಎ 32 6833 ನೇದ್ದರ ಚಾಲಕನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಬಾರಿ ರಕ್ತಗಾಯಪಡಿಸಿ ಆಟೋ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 379/2011 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

24 December 2011

GULBARGA DIST REPORTED CRIMES.

ಮಹಿಳೆ ಕಾಣೆಯಾದ ಪ್ರಕರಣ:
ಮಹಿಳಾ ಠಾಣೆ:
ತನವೀರಬೇಗ ತಂದೆ ಹೈದರ ಅಲಿ ಬೇಗ ವ: 26 ವರ್ಷ ಜಾ: ಮುಸ್ಲಿಂ ಉ: ಒಕ್ಕಲುತನ ಸಾ: ನೆಲ್ಲೂರ ತಾ: ಚೆನ್ನಗೇರಿ ಜಿ:ದಾವಣಗೇರೆ ರವರು ನನ್ನ ಅಕ್ಕಳಾದ ಅಬೀದಬೇಗಂ ಇವಳು ಹಾಗೂ ಇವರ ಗಂಡನ ಮನೆಯವರು ಕೂಡಿ ಪ್ರವಾಸ ಕುರಿತು ದಿನಾಂಕ 18.12.2011 ರಂದು ತಮ್ಮ ಗ್ರಾಮದಿಂದ ಬಿಜಾಪೂರಕ್ಕೆ ಬಂದು ಅಲ್ಲಿಂದ ದಿ:19.12.2011 ರಂದು ಗುಲಬರ್ಗಾಕ್ಕೆ ಬಂದು ಗುಲಬರ್ಗಾದ ಬಂದೇ ನವಾಜ ದರ್ಗಾದಲ್ಲಿ ಉಳಿದುಕೊಂಡಿದ್ದು ಇರುತ್ತದೆ.ದಿನಾಂಕ::20.12.2011 ರಂದು ಬೆಳಗಿನ ಜಾವ 4.00 ಗಂಟೆ ಸುಮಾರಿಗೆ ನನ್ನ ಅಕ್ಕಳಾದ ಅಬೀದಾಬೇಗಂ ಇವಳು ದರ್ಗಾದಲ್ಲಿ ಇರದೇ ಎಲ್ಲಿಯೊ ಕಾಣೆಯಾಗಿರುತ್ತಾಳೆ ಅವಳು ಗಂಡ ಹಾಗೂ ಗಂಡನ ಮನೆಯವರು ಕೂಡಿ ಗುಲಬರ್ಗಾದಲ್ಲಿ ಎಲ್ಲಾ ಕಡೆ ಹೂಡಿಕಾಡಿದ್ದರು ಸಿಗಲ್ಲಿಲಾ ನಮ್ಮ ಬಾವ ನಮಗೆ ಫೋನ ಮಾಡಿ ತಿಳಿಸಿದರು ನಮ್ಮ ಅಕ್ಕ ಎಮ್.ಎ ಓದಿದ್ದು ಇರುತ್ತದೆ ಹಾಗೂ ಅವಳಿಗೆ ಓದಿನಲ್ಲಿ ತುಂಬಾ ಆಸಕ್ತಿ ಇದ್ದು ಶಿಕ್ಷಿಕಿ ಆಗಬೇಕೆಂದು ಅವಳ ಆಸೆಯಾಗಿತ್ತು ಅವಳ ಗಂಡ ಮನೆಯವರು ಹೊರಗಡೆ ಹೋಗುವದು ಅವಳಿಗೆ ಇಷ್ಷ ಇರುವುದಿಲ್ಲಾ. ಆದ್ದರಿಂದ ಅವಳು ತನ್ನ ಗೆಳತಿಯರ ಸಹಾಯ ಅಥವಾ ಸಂಘ ಸಂಸ್ಥೆಗಳ ಸಹಾಯ ಪಡೆದುಕೊಂಡು ಮುಂದೆ ಬರುವಗೊಸ್ಕರ ಎಲ್ಲಿಯಾದರು ಹೋಗಿರಬಹುದು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ 123/11 ಕಲಂ ಹೆಣ್ಣು ಮಗಳು ಕಾಣೆಯಾದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಡಿರುತ್ತಾರೆ. ಕಾಣೆಯಾದ ಮಹಿಳೆಯ ಹೆಸರು ಶ್ರೀಮತಿ ಅಬೀದಾಬೇಗಂ ವಯ:31 ವಿದ್ಯಾರ್ಥತೆ ಎಮ.ಎ.ಬಿ.ಎಡ್. , ಸಾದಾರಣ ಮೈಕಟ್ಟು ಸಾದ ಕಪ್ಪು ಬಣ್ಣ, 5.3” ಎತ್ತರ, ದುಂಡು ಮುಖ ಕಪ್ಪು ಕೂದಲು, ಕನ್ನಡ ಹಿಂದಿ, ಇಂಗ್ಲೀಷ ಭಾಷೆ ಬಲ್ಲವಳಾಗಿರುತ್ತಾಳೆ ಸದರಿ ವಿವರದ ಮಹಿಳೆ ಕಾಣೆಯಾದಲ್ಲಿ ಈ ದೂರವಾಣಿ ಸಂಖ್ಯೆಗಳಿಗೆ 08472-263620, 948080355 ಗ ಸಂಪರ್ಕಿಸಲು ಕೋರಲಾಗಿದೆ.
ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಠಾಣೆ:
ಶ್ರೀ.ಶಿವಶರಣಪ್ಪ ಎ,ಎಸ್,ಐ ಬ್ರಹ್ಮಪೂರ ಠಾಣೆರವರು ನಾನು ಮತ್ತು ರಾಜಕುಮಾರ ಸಿ.ಪಿ.ಸಿ 1575 ರವರು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ಹೋದಾಗ ನಗರದ ಸಿ.ಟಿ ಬಸ್ ನಿಲ್ದಾಣ ಹತ್ತಿರ 1800 ಗಂಟೆಗೆ ಹೋದಾಗ ಅಲ್ಲಿ ಎರಡು ಜನ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವರನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು )ಕಲ್ಯಾಣಿ ತಂದೆ ಬಸಣ್ಣ ಮಾನಕರ ವಯ 31 ವರ್ಷ ಜಾತಿ ಸಾಮಗಾರ ಉ ಹಮಾಲಿ ಕೆಲಸ, ಸಾ ಸಿದ್ದರಾಮೇಶ್ವರ ಗುಡಿಯ ಹತ್ತಿರ ದುಧನಿ ಮಹಾರಾಷ್ಟ್ರ ರಾಜ್ಯ, ಅಂಬಣ್ಣ ತಂದೆ ಲಕ್ಷ್ಮಣ ಮಾನಕರ್ ವಯ 33 ವರ್ಷ ಜಾತಿ ಸಾಮಗಾರ ಉ ಹಮಾಲಿ ಕೆಲಸ, ಸಾ ಸಿದ್ದರಾಮೇಶ್ವರ ಗುಡಿಯ ಹತ್ತಿರ ದುಧನಿ ಮಹಾರಾಷ್ಟ್ರ ರಾಜ್ಯ ಅಂತಾ ತಿಳಿದು ಬಂದ್ದಿದ್ದು ಇವರನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಗೆ ವರದಿ ಸಲ್ಲಿಸಿದ್ದರಿಂದ ಠಾಣಾ ಗುನ್ನೆ ನಂ: 230/11 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ

23 December 2011

GULBARGA DIST REPORTED CRIMES

ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಠಾಣೆ:
ಶ್ರೀ.ರಾಜಕುಮಾರ ಪೊಲೀಸ್ ಪೇದೆ ಬ್ರಹ್ಮಪೂರ ಪೊಲೀಸ ಠಾಣೆ ಗುಲಬರ್ಗಾರವರು ನಾನು ದಿನಾಂಕ: 23/12/2011 ರಂದು ಸಾಯಂಕಾಲ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಕರ್ತವ್ಯ ಕುರಿತು ಹೊರಟು ತಹಶೀಲ ಕಾರ್ಯಾಲಯದ ಹತ್ತಿರ 7-00 ಗಂಟೆಯ ಸುಮಾರಿಗೆ ಹೋದಾಗ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಯಾವುದೇ ಕಾರಣ ಇಲ್ಲದೆ ಹೋಗಿ ಬರುವ ಸಾರ್ವಜನಿಕರಿಗೆ ಬೈಯುವದು, ಹೊಡೆಯಲ್ಲಿಕೆ ಹೋದಂತೆ ಮಾಡುವದು, ಮಾಡಿ ಭಯಾನಕ ರೀತಿಯಿಂದ ರೌಡಿ-ಗುಂಡಾನಂತೆ ವರ್ತಿಸುತ್ತಿದ್ದು ಸಾರ್ವಜನಿಕ ಶಾಂತತೆಯನ್ನು ಹಾಳು ಮಡುವುದನ್ನು ಕಂಡು ಅವನನ್ನು ಹಿಡಿದು ಹೆಸರು ವಿಚಾರಿಸಲಾಗಿ ಕುಪ್ಪಣ್ಣ ತಂದೆ ದುರ್ಗಪ್ಪ ಆನಗಳಿ, ವಯ 26, ಉ ಕೂಲಿ ಕೆಲಸ, ಸಾ ಪಾಶಾಪೂರ ಯಾದುಲ್ಲಾ ಕಾಲೋನಿ ಗುಲಬರ್ಗಾ ಅಂತಾ ತಿಳಿದು ಬಂದ ಮೇರೆಗೆ ಠಾಣೆಗ ಕರೆ ತಂದು ವರದಿ ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 122/2011 ಕಲಂ 324, 504, 307 ಐಪಿಸಿ ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕೊಲೆ ಪ್ರಯತ್ನ ಪ್ರಕರಣ:
ಚಿತ್ತಾಪೂರ ಠಾಣೆ:
ಶ್ರೀ ಮೊಹಮ್ಮದ ಅಯ್ಯುಬ ತಂಧೆ ಅಬ್ದುಲ್ಲಾ ಮೆಮಾರ ವ-44 ಸಾ ತೀನ ಮಳಗಿ ಚಿತ್ತಾಪೂರ ರವರು ನಾನು ಮತ್ತು ನನ್ನ ತಮ್ಮ ಹಾಗು ಮಗನ ಸಂಗಡ ಫಾರೂಕ ಬಾಜೆ ರವರ ಮನೆಯ ಮುಂದೆ ರೋಡಿನ ಮೇಲೆ ನಿಂತಾಗ ಯೂಸೂರ್ಫ ತಂದೆ ಖಾಸಿಂಸಾಬ ಗೌಂಡಿ ಯೂನೂಸ್ ತಂದೆ ಖಾಸಿಂಸಾಬ ಗೌಂಡಿ, ಯಾಸೀನ @ ಪಪ್ಪು ತಂದೆ ಸತ್ತಾರಗೌಂಡಿ ರವರು ಅವಾಚ್ಯವಾಗಿ ಬೈದು ನೀನು ನಿನ್ನೆ ನನ್ನ ಹೆಂಡತಿಗೆ ನಿನ್ನ ಹೆಂಡತಿ ಕಡೆಯಿಂದ ಬೈಸುತ್ತೀ ಇವತ್ತು ನಿನಗೆ ಬಿಡುವದಿಲ್ಲಾ ಅಂತ ಯೂಸೂಫ್ ನು ತಕ್ಕೆಯಲ್ಲಿ ಹಿಡಿದಿದ್ದು ಯೂನೂಸ್ ಇವನು ಚಾಕುವಿನಿಂದ ಅಯ್ಯುಬ ಮತ್ತು ಅಬ್ದುಲ ವಾಹೇದ ರವರಿಗೆ ಚಾಕುವಿನಿಂದ ಹೊಡೆದು ಗಾಯಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದು ಮತ್ತು ಅಬ್ದುಲ ಮಲಿಕ ಇವನಿಗೆ ಕಲ್ಲಿನಿಂದ ಹೊಡೆದು ತಲೆಗೆ ಪೆಟ್ಟುಪಡಿಸಿದ್ದು ಸದರಿಯವರು ಹೆಣ್ಣು ಮಕ್ಕಳು ನೀರು ತುಂಬವಲ್ಲಿ ಜಗಳ ಮಾಡಿದ್ದಕ್ಕೆ ವೈಷಮ್ಯ ಬೆಳೆಸಿ ಹೊಡೆ ಬಡೆ ಮಾಡಿ ಕೊಲೆ ಮಾಡಲು ಪ್ರಯತ್ನ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆ ಗುನ್ನೆ ನಂ 122/2011 ಕಲಂ 324,504,307 ಸಂಗಡ 34 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ :
ಶ್ರೀ ಸೋಮಯ್ಯ ತಂದೆ ಲಿಂಗಯ್ಯ ಹಿರೇಮಠ ಸಾಃ ಮಹಾಲಕ್ಷ್ಮೀ ಲೇಔಟ್ ಗುಲಬರ್ಗಾರವರು ನಾನು ದಿನಾಂಕ: 23-12-2011 ರಂದು ಸಾಯಂಕಾಲ 4-15 ಗಂಟೆಯ ಸುಮಾರಿಗೆ ಚೌಕ್ ಸರ್ಕಲ್ ದಿಂದ ಮದನ ಟಾಕೀಜ್ ಕಡೆಗೆ ಹೋಗುವ ರೋಡಿಗೆ ಬರುವ ಸತ್ಯಮ್ ಟೇಲರ್ ಅಂಗಡಿ ಎದುರುಗಡೆ ರೋಡಿನ ಮೇಲೆ ಗುಡುಸಾಬ ತಂದೆ ಖಾಸಿಂ ಈತನು ತನ್ನ ಟಾಟಾ ಸುಮೋ ನಂ : KA 28 – 5683 ನೇದ್ದನ್ನು ಚೌಕ್ ಸರ್ಕಲ್ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಮುಂದೆ ಹೋಗುತ್ತಿದ್ದ ಕಾರ ನಂ : KA 32 – N – 0115 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಕಾರಿನ ಹಿಂಭಾಗ ಹಾನಿಗೊಳಿಸಿದ್ದು ಇರುತ್ತದೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ನಂ: 78/2011 ಕಲಂ 279 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ.
ಶ್ರೀ ಪರಶುರಾಮ ತಂದೆ ಅಣ್ಣಪ್ಪ ದೊಡ್ಡ ಮನಿ ಸಾ: ಚಲಗೇರಾ ಗುಲಬರ್ಗಾರವರು ಅಶ್ವಿನಿ ರುಗ್ನಾಲಯ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಸಾರಾಂಸವೆನೆಂದರೆ ನಾನು ಮತ್ತು ಮಾರುತಿ ತಂದೆ ಶರಣಪ್ಪ ದೊಡ್ಡಮನಿ ರವರು ದಿನಾಂಕ;21/12/2011 ರಂದು ಮಧ್ಯಾನ ಖಾಸಗಿ ಕೇಲಸದ ನಿಮಿತ್ಯವಾಗಿ ದುದನಿಗೆ ಹೊಗಬೇಕಾಗಿದ್ದರಿಂದ ಬಸ ನಿಲ್ದಾಣದ ಹತ್ತಿರ ಬಂದು ಮಾದನ ಹಿಪ್ಪರಗಾ ಕಡೆಯಿಂದ ಒಂದು ಮ್ಯಾಕ್ಸ ಜೀಪ್ ಪ್ಯಾಸೆಂಜರ್ ತುಂಬಿಕೊಂಡು ಚಲಗೇರಾ ಬಸ್ಸ ನಿಲ್ದಾಣದ ಹತ್ತಿರ ಬಂದಾಗ ನಾನು ಜೀಪ ಚಾಲಕನಿಗೆ ಕೈ ಮಾಡಿ ಜೀಪ ನಿಲ್ಲಿಸಿ ಜೀಪ್ ಹತ್ತಲು ಹೋದಾಗ ಜೀಪ ನಂ ಕೆ,ಎ-25 – 3408 ಚಾಲಕನು ಜೀಪ ಪುಲ್ಲ ಆಗಿದೆ, ಜೀಪಿನ ಟಾಪ ಮೇಲೆ ಕುಳಿತು ಕೋಳ್ಳಿರಿ ಅಂತಾ ಹೇಳಿದನು ನನಗೆ ಅರ್ಜೇಂಟೆ ದುದನಿಗೆ ಹೋಗಬೆಕಾಗಿದ್ದರಿಂದ ಸದರಿ ಜೀಪ್ ಟಾಪ ಮೇಲೆ ಎರಿ ಕುಳಿತುಕೊಂಡೆನು ಜೀಪ ನಿಂಬಾಳ ದುದನಿ ರೊಡ ಅಂದಾಜು 1 ಕಿ.ಮೀ.ಅಂತರ ರೊಡಿನಲ್ಲಿ ದುದನಿಕಡೆ ಹೊಗುವ ರಸ್ತೆಯಲ್ಲಿ ಜೀಪ ಚಾಲಕನು ಅತಿವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ನಾನು ಜೀಪಿನ ಮೇಲಿಂದ ಕೇಳೆಗೆ ಬಿದ್ದೆನು ರಕ್ತಗಾಯವಾಗಿರುತ್ತದೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 77/2011 ಕಲಂ 279,337 ಐಪಿಸಿ ಸಂಗಡ 187 ಐ.ಎಮ್.ವಿ ಎಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮುನೀರಾಬೇಗಂ ಗಂಡ ಮಹಿಬೂಬ ಪಟೇಲ ಪೋಲೀಸ ಪಾಟೀಲ ಸಾ ಹುಲಸಗೂಡ ತಾ : ಚಿಂಚೋಳಿ ಹಾಃ ವಃ ಮಹಮದಿಯಾ ಮಜೀದ ಅಬುಬಕರ ಕಾಲೋನಿ ಗುಲಬರ್ಗಾ ರವರು ನನ್ನ ಗಂಡನು ದಿನಾಂಕ 18/12/2011 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ತನ್ನ ತಾಯಿ ಮನೆಗೆ ಹೋಗಿ ಮನೆಯಲ್ಲಿ ಚಾಹ ಕುಡಿಯಲು ಸ್ಟೋಗೆ ಹವಾ ಹಾಕಲು ಸ್ಟೋದ ಸೀಮೆ ಎಣ್ಣೆ ಹೊರಗೆ ಬರದ ಕಾರಣ ಜೋರಾಗಿ ಹವಾ ಹಾಕಿ ಪಿನ್‌ ಮಾಡಿದಾಗ ಸೀಮೆಎಣ್ಣೆ ಚಿಮ್ಮಿ ಮೈಮೇಲೆ ಧರಿಸಿದ ಬಟ್ಟೆಯ ಮೇಲೆ ಬಿದ್ದಿದ್ದು ಒಮ್ಮೇಲೆ ಕಡ್ಡಿ ಕೊರೆದು ಸ್ಟೋ ಬೆಂಕಿ ಹಚ್ಚಿದಾಗ ಊರಿ ಬಟ್ಟೆಗೆ ಹತ್ತಿದ್ದರಿಂದ ಪೂರ್ತಿ ಮೈಸುಟ್ಟಿದ್ದು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.ಡಿ.ಅರ್. ನಂ: 35/2011 ಕಲಂ 174 ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮಹಮ್ಮದ ಸೆಮೀಮ ತಂದೆ ಮಹಮ್ಮದ ಸಲೀಮ ಸಾ; ನಿಯರ ಗುಲಶನ ಚೌಕ ಮದಿನಾ ಕಾಲೂನಿ ಎಂ.ಎಸ್.ಕೆ.ಮಿಲ್ಲ್ ಗುಲಬರ್ಗಾರವರು ನಾನು ಆಳಂದ ಚೆಕ್ಕ ಪೋಸ್ಟ ರಿಂಗರೋಡ ಹತ್ತಿರ ನಾನು ನನ್ನ ಹೀರೊಹೊಂಡಾ ಫ್ಯಾಶನ ಮೋಟಾರ ಸೈಕಲ್ ನಂ.ಕೆ.ಎ.32 ಡಬ್ಲೂ. 7710 ನೆದ್ದರ ಮೇಲೆ ಹೋಗುತ್ತಿರುವಾಗ ಆಳಂದ ಕಡೆಯಿಂದ ಕೆ.ಎಸ್.ಆರ್.ಟಿ. ಬಸ್ಸ ನಂ.ಕೆ.ಎ.32ಎಫ್.1498 ನೆದ್ದರ ಚಾಲಕ ತನ್ನ ಬಸ್ಸನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈಕಲ್ ಗೆ ಡಿಕ್ಕಿ ಹೊಡೆದು ನನಗೆ ಮತ್ತು ಹಿಂದೆ ಕುಳಿತಿದ್ದ ಮಹಮ್ಮದ ಹಲೀಮ ಇಬರಿಗೆ ಗಾಯಗೊಳಿಸಿ ಬಸ್ಸ ನಿಲ್ಲಿಸಿದ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ಗುನ್ನೆ ನಂ 277/2011 ಕಲಂ 279 337 338 ಐಪಿಸಿ ಸಂ/ 187 ಐಎಂವಿ ಎಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ದಲಾಗಿದೆ.

22 December 2011

GULBARGA DIST REPORTED CRIME

ಕರ್ತವ್ಯಕ್ಕೆ ಅಡೆತಡೆ ಮಾಡಿದ ಬಗ್ಗೆ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಕೀಶನ ತಂದೆ ವಿಟ್ಟು ಪವಾರ ಉ: ಎನ.ಈ ಕೆ.ಎಸ್.ಆರ್.ಟಿ.ಸಿ ಡಿವಿಜನ ಆಪೀಸ ಗುಲಬರ್ಗಾ ಕಛೇರಿ ಖಾಸಗಿ ಭದ್ರತಾ ರಕ್ಷಕರು ಹಾವ ಮನೆ ನಂ 11-1791/4 ವಿದ್ಯಾನಗರ ಗುಲಬರ್ಗಾ ರವರು ನಾನು ವಿಭಾಗೀಯ ಕಛೇರಿಯಲ್ಲಿ ಕೆಲಸದಲ್ಲಿ ನಿರತನಾಗಿದ್ದಾಗ ಶಿವಶರಣಪ್ಪ ನಾಯಿಕೊಡಿ ಚಾಲಕ ಪಿ ಸಂ 5713 ಘಟಕ 2 ಇತನು ಬಂದು ನನಗೆ ಏಕ ವಚನದಲ್ಲಿ ನಿಂದಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನ ಟೇಬಲನ್ನು ಜಗ್ಗಾಡಿ ಕೆಲಸಕ್ಕೆ ಅಡೆತಡೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದನು. ಈ ಘಟನೆಯನ್ನು ತಡೆಯುವದಕ್ಕಾಗಿ ಪಿ.ಎನ್ ಕೆಂಬಾವಿ ಸಹಾಯಕ ಭದ್ರತಾ ನಿರೀಕ್ಷಕರು ಹಾಗೂ ಗುಂಡಪ್ಪ ಭದ್ರತಾ ಹವಾಲ್ದಾರ ಇವರುಗಳು ನೋಡಿ ಶಿವಶರಣಪ್ಪ ಚಾಲಕನಿಗೆ ಬುದ್ದಿ ಹೇಳಿದರು ಸಹಿತ ಕೇಳಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 215/2011 ಕಲಂ 353, 504 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ದರೋಡೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ
:ಶ್ರೀ ಪ್ರಮೋದ ತಂದೆ ದೇವಿಂದ್ರಪ್ಪ ಚಿಂಚನಸೂರ ಸಾ: ಕಡಗಂಚಿ ತಾ:ಆಳಂದ ಜಿ: ಗುಲಬರ್ಗಾರವರು ನಾನು ದಿನಾಂಕ 21-12-11 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಅನ್ನಪೂರ್ಣ ಕ್ರಾಸದಿಂದ ಕೇಂದ್ರ ಬಸ ನಿಲ್ದಾಣಕ್ಕೆ ಹೋಗುವ ಕುರಿತು ಕೈ ಮಾಡಿ ಆಟೋರಿಕ್ಷಾ ಕೆಎ 32 7326 ನೇದ್ದರಲ್ಲಿ ಕುಳಿತುಕೊಂಡು ಹೊರಟಿದ್ದು ಆಟೋದಲ್ಲಿ ಆಟೋ ಚಾಲಕ ಮತ್ತು ಹಿಂದೆ ಕುಳಿತ ಇನ್ನೊಬ್ಬ ಇಬ್ಬರು 25-30 ವರ್ಷ ವಯಸ್ಸಿನವರು ರಾತ್ರಿ 8-30 ಗಂಟೆ ಸುಮಾರಿಗೆ ಕೇಂದ್ರ ಬಸ ನಿಲ್ದಾಣದ ಹತ್ತಿರ ಬಂದಾಗ ಆಟೋ ನಿಲ್ಲಿಸಲು ಹೇಳಿದಾಗ, ಆಟೋದ ಹಿಂದೆ ಕುಳಿತ ವ್ಯಕ್ತಿ ಸುಮ್ಮನೆ ಕೂಡು ಸೂಳೇ ಮಗನೇ ಅಂತಾ ಬೈದು ಮುಷ್ಟಿ ಮಾಡಿ ಮುಖಕ್ಕೆ ಹೊಡೆದು ಬಾಯಿ ಒತ್ತಿ ಹಿಡಿದು ಮುಂದೆ ಕಣ್ಣಿ ಮಾರ್ಕೆಟ ಹತ್ತಿರ ಆಟೋ ಸ್ವಲ್ಪ ಸ್ಲೋ ಮಾಡಿ ಆಟೋ ಚಾಲಕ ಮತ್ತು ಹಿಂದೆ ಕುಳಿತವನು ನಿನ್ನ ಹತ್ತಿರ ಎಷ್ಣು ಹಣ ಇದೆ ತೆಗೆ ಅಂತಾ ಹೇಳಿ ಶರ್ಟ ಮತ್ತು ಪ್ಯಾಂಟ ಜೇಬಿನಲ್ಲಿ ಕೈ ಹಾಕಿ ಲಾವಾ ಕಂಪನಿಯ ಮೋಬಾಯಿಲ ಕಿತ್ತುಕೊಂಡರು. ಹೀರಾಪೂರ ರಿಂಗ ರೋಡ ಮೊಲಕ ಚೋರ ಗುಮ್ಮಜ ಗುಡ್ಡದ ಹತ್ತಿರ ಆಟೋ ನಿದಾನಗತಿಯಲ್ಲಿದ್ದಾಗ ಒಬ್ಬನ್ನು ಕೆಳೆಗೆ ಹಾರಿದನು. ಆಗ ಇಬ್ಬರು ಬಂದು ಮತ್ತೆ ನನಗೆ ಜಬರ ದಸ್ತಿಯಿಂದ ಆಟೋದಲ್ಲಿ ಕೂಡಿಸಿಕೊಂಡು ಆಳಂದ ಚೆಕ್ಕ ಪೋಸ್ಟ ಮೊಲಕ ಸೈಯ್ಯದ ಚಿಂಚೋಳಿ ಕ್ರಾಸ ಹತ್ತಿರ ಒಳಗೆ ಕರೆದುಕೊಂಡು ಹೋಗಿ ನನಗೆ ಇಳಿಸಿ ಕೈಯಿಂದ ಪ್ಲಾಸ್ಟಿಕ ಪೈಪದಿಂದ ಬಲ ಮೊಳಕೈ ಬೆನ್ನಿಗೆ ಹೊಡೆದು ದು:ಖಾಪತಗೊಳಿಸಿ ಪ್ಯಾಂಟಿನ ವಾಚ ಪಾಕೇಟದಲ್ಲಿದ್ದ 3100/- ರೂ. ಜಬರ ದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 375/2011 ಕಲಂ 394 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ
: ಶ್ರೀ ಸದಾನಂದ ತಂದೆ ಮಲ್ಲಿಕಾರ್ಜುನ @ ಮಲ್ಕಪ್ಪ ವಾಲೀಕರ ಉ:ಟಂಟಂ ಕೆಎ 32 ಎ 9151 ಚಾಲಕ ಸಾ:ಯಳವಂತಗಿ ತಾ:ಜಿ: ಗುಲಬರ್ಗಾ ರವರು ನನಗೆ ನನ್ನ ಸಂಬಂಧಿಕರು ಹುಮನಾಬಾದ ರಿಂಗ ರೋಡಿಗೆ ಬರುವಂತೆ ಹೇಳಿದ್ದರಿಂದ ನಾನು ಅಲ್ಲಿಗೆ ಹೋಗಿ ಅವರೆಲ್ಲರನ್ನೂ ಕೂಡಿಸಿಕೊಂಡು ಉಪಳಾಂವ ಕ್ರಾಸ ದಾಟಿ ಬಿರಾದಾರ ಕಂಕರ ಮಶೀನ ಎದುರು ರೋಡಿನ ಮೇಲೆ ನನ್ನ ಸೈಡ ಹಿಡಿದು ನಾನು ಚಲಾಯಿಸುತ್ತಿದ್ದಾಗ ಹುಮನಾಬಾದ ರೋಡ ಕಡೆಯಿಂದ ಲಾರಿ ಕೆಎ 32 ಬಿ 5826 ಚಾಲಕ ಪ್ರಕಾಶ ತಂದೆ ಲಕ್ಕಪ್ಪ ಫಿರಂಗಿ ಸಾ: ಗೌನಳ್ಳಿ ತಾ:ಚಿಂಚೋಳಿ ಈತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ನನ್ನ ಟಂಟಂ ಕೆಎ 32 ಎ 9151 ನೇದ್ದಕ್ಕೆ ಡಿಕ್ಕಿ ಪಡಿಸಿ ಲಾರಿ ಸಮೇತ ಚಾಲಕ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 376/2011 ಕಲಂ 279, 337, 338 ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

21 December 2011

GULBARGA DIST REPORTED CRIMES

ಕಳ್ಳತನ ಪ್ರಕರಣ:
ಸೇಡಂ ಪೊಲೀಸ ಠಾಣೆ:
ಶ್ರೀ ರಮೇಶ ತಂದೆ ಶಾಮರಾವ ರಾಜಾಪೂರ ಸಾ ನಗರೇಶ್ವರ ಕಾಲೋನಿ ಸೇಡಂ. ರವರು ನಾನು ಎಂದಿನಂತೆ ಬೆಳಗ್ಗೆ 8-00 ಗಂಟೆಗೆ ನನ್ನ ಬಟ್ಟೆ ಅಂಗಡಿಗೆ ಬಂದಿದ್ದು ನಂತರ ನನ್ನ ಹೆಂಡತಿ ಬಸಮ್ಮ ಇವಳು ಕೂಡಾ 10-00 ಗಂಟಗೆ ಅಂಗಡಿಗೆ ಬಂದಿದ್ದು ವ್ಯಾಪಾರ ಮಾಡಿಕೊಂಡು ಸಂಜೆ 04-00 ಗಂಟೆಗೆ ನನ್ನ ಹೆಂಡತಿ ಬಸಮ್ಮ ಇವಳು ಮರಳಿ ಮನೆಗೆ ಹೋದಾಗ ಮನೆಯ ಕೀಲಿ ಹಾಕುವ ಕೊಂಡಿ ಲಾಕರದಲ್ಲಿಟ್ಟಿರುವ 60 ಗ್ರಾಂ ಬಂಗಾರದ ಆಭರಣಗಳು ಅಂ.ಕಿ 1,20,000/- ರೂಪಾಯಿ ನೇದ್ದು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 226/2011 ಕಲಂ 454ಮ 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಮುರಿಗೆಪ್ಪಾ ಭೈರಾಮಡಗಿ ಶಾಖಾಧಿಕಾರಿ ಘಟಕ ನಂ:3 ಜೆಸ್ಕಾಂ ಗುಲಬರ್ಗಾ ರವರು ದಿನಾಂಕ 20-12-2011 ರಂದು ಸಾಯಂಕಾಲ 6-00 ಆರ್.ಪಿ.ಸರ್ಕಲ್ ದಿಂದ ಎಸ್.ಬಿ.ಕಾಲೇಜ ರೋಡಿನಲ್ಲಿ ಬರುವ ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೋ ನಂ: 2 ಎದುರು ರೋಡಿನ ಮೇಲೆ ಟೆಂಪು ನಂ:ಕೆಎ 25 ಎ 5704 ನೇದ್ದರ ಚಾಲಕ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಕೆ.ಇ.ಬಿ.ಕಂಬಕ್ಕೆ ಡಿಕ್ಕಿ ಪಡಿಸಿ ಕಂಬ ಜಕಂ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 159/2011 ಕಲಂ 279, ಐಪಿಸಿ ಸಂಗಡ 187 ಐ.ಎಮ..ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

20 December 2011

GULBARGA DIST PRESS NOTE

ಜಿಲ್ಲಾ ಪೊಲೀಸ್‌ ಕಛೇರಿ ಗುಲಬರ್ಗಾ

ಆರು ಅರೆಸೇನಾ ಪಡೆಗಳಿಗೆ (ಬಿಎಸ್‌ಎಫ್‌) ಮತ್ತು (ಸಿಐಎಸ್‌ಎಫ್‌) ಹಾಗೂ (ಸಿಆರ್‌ಪಿಎಫ್‌) ಗಳಲ್ಲಿನ 90,000 ಸಾವಿರ ಕಾನ್ಸಟೇಬಲ್‌ ಹುದ್ದೆಗಳಿಗೆ ನೇಮಕಾತಿ ಸಂಬಂಧವಾಗಿ ಅರ್ಜಿ ನಮೂನೆಗಳನ್ನು ಜಿಲ್ಲಾ ಪೊಲೀಸ್‌ ಕಛೇರಿ ಗುಲಬರ್ಗಾದಲ್ಲಿ ಉಚಿತವಾಗಿ ದಿನಾಂಕ:20-12-2011 ರಿಂದ ಪೊಲೀಸ್‌ ಕಂಟ್ರೋಲ್‌ ರೂಮ್‌ದಲ್ಲಿ ಅರ್ಜಿಗಳ ವಿತರಣೆ ಪ್ರಾರಂಭಿಸಲಾಗಿದ್ದು, ಪ್ರತಿದಿನ ಬೆಳಿಗ್ಗೆ 10-00 ಗಂಟೆಯಿಂದ ಸಾಯಂಕಾಲ 5-00 ಗಂಟೆಯವರೆಗೆ ಅರ್ಜಿಗಳನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಅರ್ಜಿಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠರ (ಎಸ್‌ಪಿ) ಕಛೇರಿಗಳಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದು.ನೇಮಕಾತಿ ಆಯೋಗದ ವೆಬ್‌ಸೈಟ್‌ನಿಂದಲೂ (http://ssc.nic.in ಅಥವಾ http://ssckr.kar.nic.in) ಅರ್ಜಿ ನಮೂನೆಗಳನ್ನು ಡೌನಲೋಡ ಮಾಡಿಕೊಳ್ಳಬಹುದು. ಜೊತೆಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು. ಆರು ಪಡೆಗಳಿಗೂ ಒಂದೇ ಅರ್ಜಿ ಸಲ್ಲಿಸಬೇಕು. ಅರ್ಜಿಯಲ್ಲಿಯೇ ನೇಮಕವಾಗಲು ಇಚ್ಚಿಸುವ ಪಡೆಯನ್ನು ಸೂಚಿಸಬೇಕು.ನೇಮಕಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಕೆಲಸದ ದಿನಗಳಂದು ಬೆಳಿಗ್ಗೆ 10-00 ರಿಂದ ಸಂಜೆ 5-00 ರ ವರೆಗೆ ಸಹಾಯವಾಣಿ ನಂ.9483862010 ಮತ್ತು 9483862020 ಅನ್ನು ಸಂಪರ್ಕಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ವಿಭಾಗೀಯ ನಿರ್ದೇಶಕರು,ಸಿಬ್ಬಂದಿ ನೇಮಕಾತಿ ಆಯೋಗ, ಮೊದಲನೇ ಮಹಡಿ, ಇ ವಿಂಗ್‌, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು – 560034 ಈ ವಿಳಾಸಕ್ಕೆ ಸಲ್ಲಿಸಬೇಕು.ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲುhttp://ssconline.nic.inಅಥವಾ http://www.sscregistration. sifyitest.com ವೆಬ್‌ ತಾಣಗಳಿಗೆ ಭೇಟಿ ನೀಡಬಹುದು.
ಮುಖ್ಯಾಂಶಗಳು
1. ಕನಿಷ್ಠ ವಿದ್ಯಾರ್ಹತೆ : ಎಎಸ್‌ಎಲ್‌ಸಿ ಯಲ್ಲಿ ತೇರ್ಗಡೆ.
2. ಅರ್ಜಿ ಸಲ್ಲಿಕೆಗೆ ಜನೇವರಿ 4 ಕಡೇ ದಿನ
3. ಫೆಬ್ರುವರಿ/ಮಾರ್ಚನಲ್ಲಿ ದೈಹಿಕ ಅರ್ಹತಾ ಪರೀಕ್ಷೆ
4. ಏಪ್ರೀಲ್‌ 22 ರಂದು ಲಿಖಿತ ಪರೀಕ್ಷೆ

5. ಜೂನ್‌/ಜುಲೈನಲ್ಲಿ ವೈದ್ಯಕೀಯ ಪರೀಕ್ಷೆ

GULBARGA DIST REPORTED CRIME

ಯು.ಡಿ.ಅರ್. ಪ್ರಕರಣ:
ಸುಲೇಪೇಟ ಠಾಣೆ:
ಶ್ರೀ ರಾಮಶೇಟ್ಟಿ ತಂಧೆ ಹಣಮಂತ ಚೀಲಾ ಸಾ ಕೊಡಂಬಲ್ ಜಿಲ್ಲಾ ಬಿದರ ರವರು ನನ್ನ ಮಗಳಾದ ಶ್ರೀದೇವಿ ಇವಳಿಗೆ ಒಂದುವರೆ 1 1\2 ವರ್ಷದ ಹಿಂದೆ ಗರಗಪಳ್ಳಿ ಗ್ರಾಮದ ಸಂತೋಷ ತಂದೆ ಅನಂತಪ್ಪಾ ನಾಟಿಕರ ಇತನಿಗೆ ಜೋತೆ ಮದುವೆ ಮಾಡಿದ್ದು ಶ್ರೀದೇವಿಗೆ ಪ್ರತಿ ತಿಂಗಳ ಮುಟ್ಟು ಅಗುವ ಕಾಲಕ್ಕೆ ಹೊಟ್ಟೆನೊವು ಆಗುತ್ತಿದ್ದು ಡಾಕ್ಟರ ರವರ ಕಡೆ ತೋರಿಸಿದ್ದರು ಕಡಿಮೆ ಆಗಿರಲಿಲ್ಲ ಇಂದು ಬೆಳ್ಳಗ್ಗೆ 4.00 ಗಂಟೆಯ ಸುಮಾರಿಗೆ ಗರಗಪಳ್ಳಿ ಇಂದ ಮೋಬೈಲ್ ಫೋನ ಮುಖಾಂತರ ಶ್ರೀದೇವಿಯು ನಿನ್ನೆ ರಾತ್ರಿ 8.30 ಗಂಟೆಯ ಸುಮಾರಿಗೆ ಮನೆಯಲ್ಲಿ ಊರುಲು ಹಾಕಿಕೊಂಡು ಸತ್ತಿರುತ್ತಾಳೆ ಅಂತಾ ಹೇಳಿದ್ದರಿಂದ ನಾನು ನನ್ನ ಹೆಂಡತಿ ಮಗ ಸೇರಿಕೊಂಡು ಬಂದು ನೋಡಲು ಶ್ರೀದೇವಿಗೆ ಮನೆಯಲ್ಲಿ ಅಂಗಾತವಾಗಿ ಮಲಗಿಸಿದ್ದು ಕುತ್ತಿಗೆಯ ಬಲಭಾಗದಲ್ಲಿ ಕಂದು ಗಟ್ಟಿದ ಗಾಯವಿದ್ದು ಸಂತೋಷನಿಗೆ ವಿಚಾರಿಸಿದಾಗ ಶ್ರೀದೇವಿಯು ರಾತ್ರಿ 8.30 ಗಂಟೆಯ ಸುಮಾರಿಗೆ ಮನೆಯಲ್ಲಿ ಬಾಗಿಲು ಒಳ್ಳಕೊಂಡಿ ಹಾಕಿಕೊಂಡಿದ್ದು ಕೂಗಿದರು ಬಾಗಿಲು ತೆರೆಯದೆ ಇದ್ದಾಗ ನಾನು ಕಬ್ಬಿಣ ರಾಡು ಹಾಕಿ ಓಳ್ಳಕೊಂಡಿ ತೆರೆದು ಓಳಗೆ ಹೋಗಿ ನೋಡಿದ್ದಾಗ ಅವಳು ಮನೆಯ ತೋಲೆಗೆ ಒಡನಿ ಬಟ್ಟೆಯಿಂದ ಕುತ್ತಿಗೆಗೆ ಊರುಲು ಹಾಕಿಕೊಂಡು ನೇತಾಡುತ್ತಿದ್ದಾಗ ಓಡನಿ ಕತ್ತರಿಸಿ ಕೆಳಗೆ ಇಳಿಸಿರುತ್ತೆ. ಅಂತಾ ಹೇಳಿದ್ದರಿಂದ ಶ್ರೀದೇವಿ ಸಾವಿನಲ್ಲಿ ಸಂಶಯವಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯುಡಿಅರ್ ನಂ: 13/2011 ಕಲಂ 174 (ಸಿ) ಸಿಅರ್ಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ :
ಶ್ರೀಮತಿ ಗೌರಮ್ಮ ಗಂಡ ಶರಣು ಸಗರ ಸಾ:ಶರಣಸಿರಸಗಿ ರವರು ನಾನು ಮತ್ತು ಸಂಬಂದಿಕರಾದ ಶರಣು ಇಬ್ಬರೂ ಕೂಡಿ ಮನೆಯ ಮುಂದೆ ಕುಳಿತು ಕೊಂಡಾಗ ಮಗಳು ಅಂಬಿಕಾ ಇವಳು ಅಂಗನವಾಡಿ ಶಾಲೆಗೆ ಹೋಗಿ ವಾಪ್ಪಸ್ಸ ಮನೆಗೆ ಬರುವ ಕಾಲಕ್ಕೆ ನಮ್ಮೂರಿನ ಬೀಮಾ ಇವರ ಕಟಿಂಗ ಅಂಗಡಿ ಹತ್ತಿರ ರೋಡಿನ ಮೇಲೆ ಅಫಜಲಪೂರ ರೋಡ ಕಡೆಯಿಂದ ಒಬ್ಬ ಮೋಟಾರ ಸೈಕಲ ನಂ ಕೆ.ಎ 53 ಎಚ್-4748 ನೇದ್ದರ ಚಾಲಕ ಉದಯಕುಮಾರ ತಂದೆ ಮಲ್ಲಿಕಾರ್ಜುನ ಸಾಗರ ಸಾ:ಚೌಡಾಪುರ ಇತನು ಅತೀವೇಗದಿಂದ ಮತ್ತು ಅಲಕ್ಷತನದಿಂದ ಯಾವುದೇ ಹಾರ್ನ ವಗೈರೆ ಹಾಕದೆ ಹಿಂದಿನಿಂದ ನಡೆಸುತ್ತಾ ಒಮ್ಮಲೆ ತಂದವನೆ ನನ್ನ ಮಗಳು ಅಂಬಿಕಾ ಇವಳಿಗೆ ಹಾಯಿಸಿದನು ಅವಳಿಗೆ ಬಲಗಾಲಿನ ಕಂಪಗಂಡಿಗೆ ಬಾರಿ ರಕ್ತಗಾಯ ಮತ್ತು ಎಡಗಾಲಿನ ಮೊಳಕಾಲು ಹತ್ತಿರ ರಕ್ತಗಾಯ ಮತ್ತು ಬಲಕಪಾಳಕ್ಕೆ ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 374/2011 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ದರೋಡೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :
ಶ್ರೀ ಪ್ರಶಾಂತ ತಂದೆ ಖಂಡಪ್ಪಾ ಬಂಡಿಗೇರ ವ;22 ವರ್ಷ ಉ: ವ್ಯಾಪಾರ ಜಾ: ಮರಾಠಾ ಸಾ: ಮಾಹಾಂತೇಶ್ವರ ಕಾಲೂನಿ ಅಫಜಲಪೂರರವರು ನಾನು ಮತ್ತು ನನ್ನ ಗೇಳೆಯನಾದ ಮಳೆಂದ್ರೆ ಬಿರಾದಾರ ಇಬ್ಬರು ಕೂಡಿಕೊಂಡು ಹಿರೋ ಹೊಂಡಾ ಮೋಟಾರ ಸೈಕಲ್ ನಂ ಕೆಎ-32 ಆರ್-4560 ನೇದ್ದರ ಮೇಲೆ ಗುಲಬರ್ಗಾದಿಂದ ಅಫಜಲಪೂರಕ್ಕೆ ಹೊರಟಿದ್ದು ದಾರಿ ಮಧ್ಯದಲ್ಲಿ ನಾಗದೇವತೆ ಯಲ್ಲಮ್ಮ ದೇವಸ್ಥಾನ ಗೂಡಿ ದಾಟಿ ಕೊಳಿ ಫಾರಂ ಹತ್ತಿರ ಬರುತ್ತಿದ್ದಾಗ ಎದುರಗಡೆಯಿಂದ ಇಂಡಿಕಾ ಮಾರುತಿ ಕಾರ ನಂ ಕೆಎ-25 ಎಮ್.ಬಿ-117 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗದಿಂದ ಚಲಾಯಿಸಿಕೊಂಡು ನಮ್ಮ ಮೇಲೆ ಬರುತ್ತಿದ್ದಾಗ ನಾನು ಅವನಿಗೆ ಎ ಡ್ರೈವರ ನೋಡಿ ನಡೆಸು ಅಂತಾ ಅಂದಾಗ ಕಾರ ಚಾಲಕನು ತನ್ನ ಕಾರನ್ನು ತಿರುಗಿಸಿ ನಮ್ಮ ಮೊಟಾರ ಸೈಕಲಕ್ಕೆ ಬೇನ್ನು ಹತ್ತಿ ನಮ್ಮ ಮೋಟಾರ ಸೈಕಲವನ್ನು ಕೊಳಿ ಫಾರಂ ಹತ್ತಿರ ನಿಲ್ಲಿಸಿ ಕಾರಿನಿಂದ 4 ಜನರು ಇಳಿದು ನನಗೆ ತೆಕ್ಕೆಯಲ್ಲಿ ಹಿಡಿದು ಅವರಲ್ಲಿ ಒಬ್ಬನು ನನಗೆ ಕೈಯಿಂದ ಕಪಾಳ ಮೇಲೆ ಬೆನ್ನ ಮೇಲೆ ಹೊಡೆದಿರುತ್ತಾನೆ. ಮತ್ತು ನನ್ನ ಜೇಬಿನಲ್ಲಿದ 100=00 ರೂಪಾಯಿಯ 10.000=00 ಸಾವಿರ ಬಂಡಲ ಮತ್ತು 500=00 ನೂರು ರೂಪಾಯಿಯ 10.000=00 ಸಾವೀರ ಬಂಡಲ ಹೀಗೆ ಒಟ್ಟು 20.000=00 ಸಾವಿರ ರೂಪಾಯಿ ನಗದು ಹಣ ಮತ್ತು 2 ತೋಲಿ ಬಂಗಾರದ ಲಾಕೇಟ ಅ.ಕಿ.50.000=00 ಸಾವಿರ ರೊಪಾಯಿ ಹಿಗೆ ಒಟ್ಟು 70.000=00 ಸಾವಿರ ರೂಪಾಯಿಯನ್ನು ಜಬರ ದಸ್ತಿಯಿಂದ ಕಸಿದುಕೊಂಡಿರುತ್ತಾರೆ. ಮಳೆಂದ್ರ ಬಿರಾದಾರ ಇತನು ಜಗಳ ಬಿಡಿಸಲು ಬಂದಾಗ ಅವನಿಗು ಸಹಾ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ. ಹಣ ಕಸಿದುಕೊಂಡ ಅಪರಿಚಿತರ ವ್ಯಕ್ತಿಗಳ ಅಂದಾಜು ವ:25 ರಿಂದ 30 ವರ್ಷ ವಯಸ್ಸಿನವರು ಇರುತ್ತಾರೆ. ಅವರಲ್ಲಿ ಒಬ್ಬನು ಟಿ ಶರ್ಟ. ಜಿನ್ಸ ಪ್ಯಾಂಟ ಧರಿಸಿರುತ್ತಾನೆ ಮತ್ತು ಉಳಿದ 3 ಜನರು ಸಾದಾ ಪ್ಯಾಂಟ ಶರ್ಟ ಧರಿಸಿರುತ್ತಾರೆ. ಮತ್ತು ಅವರ ಹೆಸರು ವಿಳಾಗ ನನಗೆ ಗೊತ್ತಿರುವದಿಲ್ಲ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 220/2011 ಕಲಂ 394 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ :
ಶ್ರೀ ವಿಜಯಕುಮಾರ ತಂದೆ ಮಾರುತಿ ಯಲಾಲಕರ್ ಸಾ: ಪಟಪಳ್ಳಿ ರವರು ನಾನು ಮತ್ತು ನನ್ನ ತಾಯಿಯಾದ ಚಂದ್ರಮ್ಮಾ , ಅಕ್ಕನ ಮಗಳಾದ ಮಮೀತಾ, ಹಾಗು ಕಾಕನ ಮಗಳಾದ ರುಕ್ಕಮಿಣಿ 4 ಜನರು ಕೂಡಿಕೊಂಡು ತೋಟ್ಟಿಲು ಕಾರ್ಯಕ್ರಮದ ಸಲುವಾಗಿ ದಿನಾಂಕ: 19-12-2011 ರಂದು ಮಧ್ಯಾಹ್ನ 1430 ಗಂಟೆಯ ಸುಮಾರಿಗೆ ಹಸರಗುಂಡಗಿ ಗ್ರಾಮಕ್ಕೆ ನಮ್ಮೂರಿಂದ ಹೊರಟಿದ್ದೇವು ನಮ್ಮೂರ ಕ್ರಾಸ ಹತ್ತಿರ ನಿಂತಾಗ ಚಿಂಚೋಳಿ ಕಡೆಯಿಂದ ಸರಕಾರಿ ಬಸ್ಸ ನಂಬರ ಕೆಎ/38-ಎಫ.-367 ನೇದ್ದು ಬಂದಾಗ ನಾವು ತುಮಕುಂಟಾ ಗ್ರಾಮದವರೆಗೆ ಹೊಗಬೇಕೆಂದು ಆ ಬಸ್ಸಿನಲ್ಲಿ ಹತ್ತಿದೇವು ಪ್ರಯಾಣಿಕರು ಬಹಳಷ್ಟು ಜನರು ಇರುವದರಿಂದ ನಾವುಗಳೂ ಬಾಗಿಲಿನಲ್ಲಿಯೇ ನಿಂತಿದ್ದೇವು ಬಸ್ಸ ಚಾಲಕನು ಬಸ್ಸನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಕಟ್ಟ ಮಾಡಿದ್ದರಿಂದ (ತಿರುಗಿಸಿದ್ದರಿಂದ) ಬಾಗಿಲಿನಲ್ಲಿ ನಿಂತಿದ್ದ ನನ್ನ ತಾಯಿ ಚಂದ್ರಮ್ಮಾ ಹಾಗು ಅಕ್ಕನ ಮಗಳಾದ ಮಮಿತಾ ಮತ್ತು ಕಾಕನ ಮಗಳಾದ ರುಕ್ಕಮಣಿ 3 ಜನರು ಕೆಳಗಡೆ ಬಿದ್ದರು ನನ್ನ ತಾಯಿ ಚಂದ್ರಮ್ಮಾ ಇವರಿಗೆ ತಲೆಗೆ ಹಾಗು ಮೇಲಕಿಗೆ ಭಾರಿ ಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಉಳಿದ ಮಮೀತಾ ಹಾಗು ರುಕ್ಕಮಿಣಿ ಇವರಿಗೆ ಸಾದಾ ಹಾಗು ಭಾರಿ ಗಾಯಾಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 151/2011 ಕಲಂ 279, 337, 338 304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಶಹಾಬೋದ್ದಿನ ತಂ/ ಮಹಿಬೂಬಸಾಬ ಯಲಗಾರ ಸಾ: ಸೋನಿಯಾ ಗಾಂಧಿ ಆಶ್ರಯ ಕಾಲನಿ ಗುಲಬರ್ಗಾರವರು ನಾನು ದಿನಾಂಕ 19/12/2011 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ಮೋಟಾರ ಸೈಕಲ ನಂ 32 ಡಬ್ಲು-7874 ನೇದ್ದರ ಮೇಲೆ ನನ್ನ ಸ್ನೇಹಿತನಾದ ಮಹ್ಮದ ನಹೀಮ ಇತನಿಗೆ ಬೇಟಿ ಯಾಗುವ ಕುರಿತು ಹೋಗುವ ಕಾಲಕ್ಕೆ ಕೆಸಿಟಿ ಕಾಲೇಜ ಎದುರಿಗಡೆ ಹೋಗುತ್ತಿರುವಾಗ ಬಂದೂಕ ವಾಲಾ ಕಾಟದ ಕಡೆಯಿಂದ ರಸ್ತೆ ಕ್ರಾಸ ಮಾಡಿಕೊಂಡು ಅತೀವೇಗದಿಂದ ಮೋಟಾರ ಸೈಕಲ್ ನಂ ಕೆಎ 32 ಎಕ್ಸ್‌ 692 ನೇದ್ದನ್ನು ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿ ಮೋಟಾರ ಸೈಕಲ ಸಮೇತ ಓಡಿ ಹಫಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 373/11 ಕಲಂ 279 337 ಐಪಿಸಿ ಸಂ/ 187 ಐಎಂವಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

19 December 2011

GULBARGA DIST REPORTED CRIMES

ಕಳ್ಳತನ ಪ್ರಕರಣದನದ ಮೂಳೆ ಕೊಬ್ಬಿನಿಂದ ಪಾಮ್ ಆಯಿಲ್ ಮತ್ತು ಡಾಲ್ಡ್ ತಯಾರಿಸುತ್ತಿದ್ದ ಇಬ್ಬರ ಆರೋಪಿಗಳ ಬಂದನ
ಗುಲಬರ್ಗಾ ನಗರದ ಹೊರ ವಲಯದ ಜಮಶೆಟ್ಟಿ ನಗರದ ಬಳಿ ಸುಮಾರು 10,000 ಚದರ ಅಡಿ ಜಮೀನು ಗುತ್ತಿಗೆಗೆ ಪಡೆದು ಆ ಸ್ಥಳದಲ್ಲಿ ದನದ ಮೂಳೆ ಬಳಸಿ ಪಾಮ್ ಯಿಲ್ ಮತ್ತು ಡಾಲ್ಡ ತಯಾರಿಸಲಾಗುತ್ತಿದ್ದು, ಇದರಿಂದ ಸುತ್ತ ಮುತ್ತ ಪ್ರದೇಶದಲ್ಲಿ ದುರ್ವಾಸನೆ ಹರಡಿದ್ದರಿಮದ ಕೇಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆ ಆಯುಕ್ತರವರಿಗೆ ದೂರು ಸಲ್ಲಿಸಿದ್ದವು. ಮಹಾ ನಗರ ಪಾಳಿಕೆ ಆಯುಕ್ತರಾದ ಶ್ರೀ ನಾಗಯ್ಯ ರವರು ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದರಿ ದೂರಿನ ಅನ್ವಯ ಮಾನ್ಯ ಎಸ.ಪಿ ಸಾಹೆಬರು ಮತ್ತು ಹೆಚ್ಚುವರಿ ಎಸ.ಪಿ ಸಾಹೇಬರ ಮತ್ತು ಗ್ರಾಮೀಣ ಉಪಾದೀಕ್ಷಕರ ಮಾರ್ಗದರ್ಶನದಲ್ಲಿ ಎಂಬಿ.ನಗರ ಸಿಪಿಐ ಬಿ.ಪಿ.ಚಂದ್ರಶೇಖರ ವಿಶ್ವ ವಿದ್ಯಾಲಯ ಠಾಣೆಯ ಪಿ.ಎಸ.ಐ ಪಂಡಿತ ಸಗರ, ಎ.ಎಸ.ಐ ಸಿದ್ರಾಮಗೌಡ, ಮತ್ತು ಸಿಬ್ಬಂದಿಯವರಾದ ಶಿವಪುತ್ರಸ್ವಾಮಿ, ವೇದರತ್ನಂ, ಅಶೋಕ, ಶಂಕರ, ಚಂದ್ರಕಾಂತ, ಬಲರಾಮ, ಪ್ರಭಾಕರ, ಹಾಗು ಅರ್ಜುನರವರು ಪ್ರಮುಖ ಆರೋಪಿಗಳಾದ ಮುಂಬೈಯ ದಾರವಿಯಲ್ಲಿ ನೇಲೆಸಿದ್ದ ಗುಲಬರ್ಗಾದ ರಹಿಮತ ನಗರದ ಇಸ್ಮಾಯಿಲ್ ಮತ್ತು ಮುಂಬೈ ಕುರ್ಲಾದ ನಿವಾಸಿ ಇಮ್ರಾನ್ ಹಾಜಿ ಖುರೆಷಿ ಎಂಬುವವರನ್ನು ಬಂದಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.

ಕಳ್ಳತನ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ :
ಶ್ರೀಮತಿ ನಂದಾ ಗಂಡ ರಮೇಶ ಸಜ್ಜನ ಸಾ ಸೇಡಂ ಹಾವಮನೆ ನಂ. 7-12-ಬಿ ಗಂಜ, ಹುಮನಾಬಾದ ರೋಡ, ಸೆಂಟ್ರಲ್ ವೇರ್ ಹೌಸ್ ಹತ್ತಿರ ಗುಲಬರ್ಗಾ ರವರು ನಾನು ಮತ್ತು ನನ್ನ ಅಕ್ಕ ಕಮಲಾಬಾಯಿ ಗಂಡ ಸಿದ್ರಾಮಪ್ಪ ಸಜ್ಜನ ಇಬ್ಬರೂ ಕೂಡಿಕೊಂಡು ಬಸ್ ನಂ. ಕೆ.ಎ 32 ಎಫ್ 1399 ನೇದ್ದರಲ್ಲಿ ಖರ್ಗೆ ಪೇಟ್ರೋಲ್ ಪಂಪ್ ಹತ್ತಿರ ಹತ್ತಿ ಸೇಡಂಗೆ ಹೊರಟಿದ್ದೇವು. ನಾವು ಯುನಿವರ್ಸಿಟಿ ಗೇಟ್ ಸಮೀಪ ನನ್ನ ಅಕ್ಕನ ಕೊರಳಿನಲ್ಲಿದ್ದ 3 ತೊಲೆ ಘಂಟಾನ (ರಸ್ಸಿ ಲಾಕೆಟ್ ಎರಡು ಪದರು) ಅಃಕಿಃ 75,000/- ರೂಪಾಯಿಗಳದ್ದು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗನ್ನೆ ನಂ 166/2011 ಕಲಂ. 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

Gulbarga Dist Reported Crimes

ಜೂಜಾಟ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ.
ದಿನಾಂಕ 18/12/2011 ರಂದು ದುತ್ತರಗಾಂವ ಗ್ರಾಮದ ಸಾರ್ವಜನಿಕ ನೀರಿನ ಭಾವಿಯ ಹತ್ತಿರ ಅಂದಾರ ಬಹಾರ ಎಂಬ ಇಸ್ಪೀಟ ಜೂಜಾಟ ನಡೆಯುತ್ತಿರುವ ಮಾಹಿತಿ ಬಂದ ಮೇರೆಗೆ ಶ್ರೀ ಎಸ್.ಎಸ್ ದೊಡಮನಿ ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಭೀಮರಾಯ ಪಾಟೀಲ, ವಿಶ್ವನಾಥ ರೆಡ್ಡಿ, ಶಿವರಾಯ ಸಿಪಿಸಿ ರವರು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ ರಾಜು ತಂದೆ ಅಮೃತರಾವ, ವೀರಭದ್ರ ತಂದೆ ಮಹಾರುದ್ರಪ್ಪ ಶೀಲವಂತ, ಶಂಭುಲಿಂಗ ತಂದೆ ಗುರಣ್ಣಾ ಮಂಗಾಣೆ ಮತ್ತು ಭೀಮಶ್ಯಾ ತಂದೆ ಕಾಶಿರಾಮ ವಡ್ಡರ ಸಾ ಎಲ್ಲರೂ ದುತ್ತರಗಾಂವ ಇವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ ಒಟ್ಟು 1850/- ಮತ್ತು 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 127/2011 ಕಲಂ 87 ಕೆ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಡಿರುತ್ತಾರೆ.
ಹಲ್ಲೆ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀಮತಿ ಗೀತಾ ಗಂಡ ಚೆನ್ನಾರೆಡ್ಡಿ ಪಾಟೀಲ ಗುಲಬರ್ಗಾ ರವರು ಜೇವರ್ಗಿ ರಿಂಗ ರೋಡಿನಲ್ಲಿ ನನ್ನ ಗಂಡ ಸರ್ವಜ್ಞ ಎಂಬ ಪಿ.ಯು.ಸಿ ಕಾಲೇಜ ನಡೆಸುತ್ತಿದ್ದು ಅಲ್ಲದೆ ಚೆನ್ನಾರೆಡ್ಡಿ ಪಾಟೀಲ ವಿದ್ಯಾರ್ಥಿ ಸೇವಾ ಪ್ರತಿಷ್ಠಾನ ಪ್ರೈಮರಿ ಹಾಗೂ ಹೈಸ್ಕೂಲ್ ಸಹ ನಡೆಸುತ್ತಿದ್ದೆವೆ ಸದರಿ ಶಾಲೆಯು ಟ್ರಷ್ಟ ಅಡಿಯಲ್ಲಿ ನಡೆಯುತ್ತಿದ್ದು ನಾನು ಹಾಗೂ ನನ್ನ ತಾಯಿ ಮುಖ್ಯಸ್ಥರು ಇರುತ್ತೆವೆ. ಶಾಲೆಯ ಖರ್ಚು ವೆಚ್ಚ ಆಗು ಹೊಗುಗಳನ್ನು ನಾನೆ ನೊಡಿಕೊಂಡು ಹೋಗುತ್ತೆನೆ. ತಾಯಿಯ ಹೆಸರನ್ನು ದುರುಪಯೊಗಪಡಿಸಿಕೊಂಡು ಶಿವರಾಜ ಪಾಟೀಲ ಇತನು ಆತನ ಹೆಂಡತಿ ಹಾಗೂ ಮಾವನ ಪ್ರಚೊದನೆಯಿಂದ ಪ್ರೈಮರಿ ಹೈಸ್ಕೂಲ ಶಾಲೆಯಲ್ಲಿ ನನ್ನದು ಪಾಲು ಇದೆ ಎಂದು ಸುಮಾರು ವರ್ಷಗಳಿಂದ ನಮ್ಮೊಂದಿಗೆ ವಾದ ಮಾಡುತ್ತಾ ಬಂದಿರುತ್ತಾನೆ ದಿನಾಂಕ 18/12/2011 ರಂದು ನಾನು ಕಾಲೇಜಿನ ಕ್ಯಾಂಪಸದಲ್ಲಿ ಇರುವಾಗ ನನ್ನ ತಮ್ಮ ಶಿವರಾಜ ಪಾಟೀಲ ಆತನ ಹೆಂಡತಿ ಸಪ್ನ ಅವಳ ತಂದೆ ಅಮೃತರಡ್ಡಿ ಅವರ ಸಂಬಂದಿ ಸೋಮನಾಥರೆಡ್ಡಿ ನಮ್ಮ ತಾಯಿ ಶ್ರೀಮತಿ ಶಾಂತದೇವಿ, ಪುಷ್ಪಾ ಹಾಗೂ ಇತರರು 12-15 ಜನರು ಮುಂಜಾನೆ ಕಾಲೇಜ ಕ್ಯಾಂಪಸದಲ್ಲಿ ಅತಿಕ್ರಮ ಪ್ರವೇಶ ಮಾಡಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 143, 147, 448, 354, 307, 109, 506 ಸಂ. 149 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

18 December 2011

Gulbarga Dist Reported Crimes

ಹಲ್ಲೆ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀಮತಿ.ಗೀತಾ ಗಂಡ ದಿರಾಜು ಟಾಕ್ ಸಾ ಮೇತಾರ ಗಲ್ಲಿ ಗಾಜೀಪುರ ಗುಲಬರ್ಗಾ ರವರು ನಾನು ಮುಂಜಾನೆ ಮನೆಯಲ್ಲಿದ್ದಾಗ ವಿಕಾಸ ಟಾಕ ಇತನು ನಮ್ಮ ಮನೆಗೆ ಬಂದು ಅವಾಚ್ಯವಾಗಿ ಬೈದು ವಿನಾಕಾರಣ ನನ್ನೊಂದಿಗೆ ಜಗಳಕ್ಕೆ ಬಿದ್ದು ನನ್ನ ಹೊಡೆ ಬಡೆ ಅವಮಾನ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಯತ್ನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ :
ಶ್ರೀಮತಿ ಸಪ್ನಾ ಗಂಡ ಶಿವರಾಜ ಪಾಟೀಲ ಮತ್ತು ಪುಷ್ಪಾ ಗಂಡ ಚಂದ್ರಶೇಖರ ಪಾಟೀಲ ಸರ್ವಜ್ಞ ಕಾಲೇಜ ರವರು ನಾನು ಮತ್ತು ನಮ್ಮ ಅತ್ತೆ ಹಾಗು ನೇಗಣಿ ಎಲ್ಲರೂ ದೈನಂದಿನ ರೀತಿಯಲ್ಲಿ ಕಾಲೇಜ ಕಟ್ಟಡದಲ್ಲಿ ಪಾಠ ಮಾಡುತ್ತಿರುವಾಗ ಶ್ರೀ ಚನ್ನಾರೆಡ್ಡಿ ಮುನಿಯಪ್ಪ ಪಾಟೀಲ, ಗೀತಾ ಚೆನ್ನಾರೆಡ್ಡಿ ಪಾಟೀಲ, ಲಿಂಗಾರೆಡ್ಡಿ ಪಾಟೀಲ, ಕರುಣೇಶ ಬಿ. ಹಿರೇಮಠ, ಹಾಗು ಇತರರು ಸೇರಿಕೊಂಡು ನಮ್ಮ ಚೆಂಬರದಲ್ಲಿ ಬಂದು ಬಡಿಗೆ ಹಾಗು ಚಾಕು ತೊರಿಸಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ. ಈ ಮೇಲ್ಕಂಡ ಜನರು ಶ್ರೀಮತಿ ಶಾಂತಾದೇವಿ ತೇಜರಾಜ ಪಾಟೀಲ ಹಾಗು ಸಪ್ನಾ ಶಿವರಾಜ ಪಾಟೀಲ, ಪುಷ್ಪಾ ಚಂದ್ರಶೇಖರ ಪಾಟೀಲ, ಈ ಮೂವರ ಮೇಲೆ ರಕ್ತ ಬರುವ ಹಾಗೇ ಹೊಡೆದು ನಿಮ್ಮ ಜೀವ ತೆಗೆಯುತ್ತೆನೆಂದು ಜೀವದ ಬೆದರಿಕೆ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ. ಗೀತಾ ಚನ್ನಾರೆಡ್ಡಿ ಪಾಟೀಲ ಮತ್ತು ಚೆನ್ನಾರೆಡ್ಡಿ ಇವರಿಬ್ಬರೂ ಸಪ್ನಾ ಶಿವರಾಜ ಪಾಟೀಲ ಇವಳಿಗೆ 6 ತಿಂಗಳಿಂದ 5 ಲಕ್ಷ ರೂ ಹಾಗು ಬಂಗಾರ ತವರು ಮನೆಯಿಂದ ತೆಗೆದುಕೊಂಡು ಬಾ ಎಂದು ತೊಂದರೆ ಕೊಡುತ್ತಿದ್ದಾರೆ. ಹಣ ತರದೇ ಇದ್ದಾಗ ನನಗೆ ಹೊಡೆದು ಕಾಲೇಜನಿಂದ ಹೊರಗಡೆ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಂತಾ ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 138/2011 ಕಲಂ. 324,307,354,506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:
ದೇವಲಗಾಣಗಾಪುರ ಠಾಣೆ:
ದಿನಾಂಕ 18-12-2011 ರಂದು ಮದ್ಯಾಹ್ನ ಠಾಣೆಯಲ್ಲಿದ್ದಾಗ ಗೊಬ್ಬೂರ[ಬಿ], ಬೈರಾಮಡಗಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಜನರು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ.ಐ ಮಂಜುನಾಥ ಎಸ್. ಕುಸುಗಲ್ ಪಿಎಸ್ಐ ಮತ್ತು ಠಾಣೆಯ
ಸಿಬ್ಬಂದಿಯವರೊಂದಿಗೆ ಜೂಜಾಟ ನಡೆದ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಮುಕ್ತೇಶ ತಂದೆ ನಾಗಣ್ಣ ಬಿರಾದಾರ ಅರವಿಂದ ತಂದೆ ರಾಮು ವಡ್ಡರ, ನಾಗೇಂದ್ರ ತಂದೆ ಗುರುಪ್ಪ ಪಡಸಾವಳಗಿ, ಶಿವಾನಂದ ತಂದೆ ಸಿದ್ದಣ್ಣ ಪಡಶೆಟ್ಟಿ, ರಾಜು ತಂದೆ ಶ್ರೀಮಂತ ಪಡಶೆಟ್ಟಿ ಸಾ ಎಲ್ಲರು ಗೊಬ್ಬುರ (ಬಿ) ಗ್ರಾಮ ಅಂತಾ ತಿಳಿಸಿದರು ಜೂಜಾಟದ ಸ್ಥಳದಿಂದ ಇಸ್ಪೇಟ ಎಲೆಗಳು ಮತ್ತು ನಗದು ಹಣ 15763-00 ರೂ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂಬರ:128/2011 ಕಲಂ.87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ತಾಮ್ರದ ವೈರ್ ಕಳ್ಳತನ:
ಶಹಾಬಾದ ನಗರ ಪೊಲೀಸ ಠಾಣೆ :
ಶ್ರೀ ಎಲ್. ಶ್ರೀನಿವಾಸರಾವ ಮಾನ್ಯೆಂಜರ್ ಪಿ& ಎ ಜೇಪಿ ಸಿಮೆಂಟ ಶಹಾಬಾದ ರವರು ಶಹಾಬಾದದಲ್ಲಿರುವ ಜೆಪಿ.ಸಿಮೇಂಟ ಕಂಪನಿಯ ಕಾಲೋನಿಯಲ್ಲಿ ದಿನಾಂಕ: 11/12/2011 & 15/12/2011 ರ ರಾತ್ರಿ ವೇಳೆಯಲ್ಲಿ ಕರೆಂಟಿಗೆ ಜೋಡಿಸಿದ ತಾಮ್ರದ ವೈರ್ ಅ.ಕಿ. 22,092=00 ಬೆಲೆ ಬಾಳುವದನ್ನು ಯಾರೋ ಕಳ್ಳರು ಕತ್ತರಿಸಿಕೊಂಡು ಹೋಗಿರುತ್ತಾರೆ ಸದರಿ ತಾಮ್ರದ ವೈರ್ ರಾಜೇಶ & ಪ್ರೇಮಕುಮಾರ ರವರು ಕಳ್ಳತನ ಮಾಡಿರಬಹುದು ಎಂದು ಅಂತಾ ಲಿಖಿತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 197/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಸುಳ್ಳು ಸಾಕ್ಷಿ ನೀಡಿದ ಬಗ್ಗೆ :
ಸ್ಟೇಷನ ಬಜಾರ ಪೊಲೀಸ ಠಾಣೆ:
ಗುನ್ನೆ ನಂ 58/07 ಸಿಸಿ ನಂ 84/08 ನೇದ್ದರಲ್ಲಿ ಈ ಆಪಾದಿತನು ಮಾನ್ಯ 2 ನೇ ಹೆಚ್ಚುವರಿ ನ್ಯಾಯಾದೀಶರು ಗುಲಬರ್ಗಾರವರ ಕೊರ್ಟಿನಲ್ಲಿ ದಿನಾಂಕ 17/12/2011 ರಂದು ಮದ್ಯಾಹ್ನ 3-30 ಗಂಟೆಗೆ ನ್ಯಾಯಾಲಯದಲ್ಲಿ ನಾನೆ ಮಹ್ಮದ ತಾಹೇರಲಿ ತಂದೆ ಹಕಿಮ ಮಹ್ಮದ ಸಾಬ ಅಂತಾ ಸುಳ್ಳು ನಟನೆ ಮಾಡಿ ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷಿ ನೀಡಿದ್ದು ಅಲ್ಲದೆ ದಾವೆಯಲ್ಲಿ ಇನ್ನೊಬ್ಬನಂತೆ ನಟಿಸಿ ಸುಳ್ಳು ಸಾಕ್ಷಿಯನ್ನು ನೀಡಿದ್ದರಿಂದ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮಲ್ಲಪ್ಪ ಸಿ.ಎಂ.ಒ 2 ನೇ ಅಪರ ಹೆಚ್ಚುವರಿ ಜೆ.ಎಂ.ಎಫ್.ಸಿ ಕೊರ್ಟ ಗುಲಬರ್ಗಾರವರು ಮಹಿಳಾ ಪೊಲೀಸ ಠಾಣೆಯ ಮ.ಎಚ್.ಸಿ 557 ಮ.ಪಿಸಿ 179 ರವರೊಂದಿಗೆ ಬಷೀರ ಪಟೇಲ ಇವರನ್ನು ಸ್ಟೆಷನ ಬಜಾರ ಪೊಲೀಸ ಠಾಣೆಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಟ್ಟಿದ್ದರ ಮೇರೆಗೆ ಠಾಣೆ ಗುನ್ನೆ ನಂ 214/11 ಕಲಂ 193, 419 205 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜಾತಿ ನಿಂದನೆ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ
: ಶ್ರೀಮತಿ ಶರಣಮ್ಮ ಗಂಡ ಶರಣಪ್ಪ ಅಂಬರಖೇಡ ಸಾ: ಬಳಬಟ್ಟಿ ತಾ: ಜೇವರ್ಗಿರವರು ನಾನು ಹಾಗೂ ಇತರರು ಕೂಡಿ ನಾಗೇಂದ್ರಪ್ಪ ಮಾಲಿಗೌಡ ಹೋಲಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದು ಮಧ್ಯಾಹ್ನ 3 ಗಂಟೆಗೆ ಊಟ ಮಾಡಲು ಕೆರೆಯ ಹತ್ತಿರ ಕುಳಿತಾಗ ಗುರಪ್ಪ ತಂದೆ ಬಸಪ್ಪ ಮುಕ್ಕಾಣ್ಣಿ ಜಾ: ಲಿಂಗಾಯತ್ ಇತನು ಕೆರೆಗೆ ನೀರು ಕುರಿ ಕುಡಿಯಲು ಬಂದು ಮುಖ ತೋಳೆದುಕೊಂಡು ನೀರಲ್ಲಿ ಉಗುಳುತ್ತಿದ್ದಾಗ ನಾನು ನೀರಲ್ಲಿ ಉಗಳ ಬೇಡಿರಿ ಅಂತಾ ಅಂದಿದಕ್ಕೆ ಜಾತಿ ಎತ್ತಿ ಬೈದು ಕಲ್ಲಿನಿಂದ ತಲೆಯ ಹಿಂಬಾಗದಲ್ಲಿ ಹೊಡೆದು ಕೈ ಮತ್ತು ಸೀರೆ ಜಗ್ಗಾಡಿ ಅವಮಾನ ಮಾಡಿ ಕಲ್ಲಿನಿಂದ ಹಣೆಗೆ ಹೋಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 93/2011 ಕಲಂ 324,354,307,504 ಐಪಿಸಿ ಮತ್ತು 3 (1), 3(1) ಎಸ್.ಸಿ/ಎಸ್.ಟಿ ಕಾಯ್ದೆ 1989 ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಯಡ್ರಾಮಿ ಠಾಣೆ:
ಶ್ರೀ ಬಸಪ್ಪ ತಂದೆ ಈರಪ್ಪ ಕಲಕೇರಿ ಉ: ಶಿಕ್ಷಕರು ಸಾ: ಯಡ್ರಾಮಿ ಹಾ:ವ: ಅಲ್ಲಾಪೂರ ತಾ: ಚಿಂಚೋಳಿ ರವರು ನಾನು ದಿನಾಂಕ 11-12-11 ರಂದು ಮೋಟಾರ ಸೈಕಲ್ ನಂ ಕೆಎ-32-ಯು-1124 ಅ.ಕಿ 30,000=00 ನೇದ್ದನ್ನು ಮನೆಯ ಮುಂದುಗಡೆ ಇಟ್ಟು ಮಲಗಿಕೊಂಡಿದ್ದಾಗ ಅದೆ ರಾತ್ರಿ 11 ರಿಂದ 12 ರ ಮಧ್ಯದ ಅವಧಿಯಲ್ಲಿ ಯಾರೂ ಕಳ್ಳರು ನನ್ನ ಮೋಟಾರ ಸೈಕಲ್ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 92/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

17 December 2011

GULBARGA DIST REPORTED CRIMES

ಮಂಗಳಸೂತ್ರ ಮತ್ತು ಊಟಕ್ಕೆ ನೀಡಿದ 500/- ರೂಪಾಯಿಗಳು ದೋಚಿದ ಬಗ್ಗೆ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಬಸವನಪ್ಪ ತಂದೆ ಅಂತಪ್ಪ ಚಲಗೇರಿ ಸಾ: ಹಾವ ಅಶೋಕ ಲಾಕೆ ಮನೆ ಹತ್ತಿರ ಗಂಗೋತ್ರಿ ನಿವಾಸ ಗುಲಬರ್ಗಾರವರು ನಾನು ದಿನಾಂಕ 16/12/2011 ರಂದು ರಾತ್ರಿ 10 ಗಂಟೆಗೆ ನಮ್ಮ ಮಾಲಿಕರು ಊಟ ತರುವ ಕುರಿತು ಜೆ.ಸಿ.ಪಿ ಹೊಟೆಲಗೆ ಕಡೆ ಹೊರಟಾಗ ಕಾರ ಸರ್ವಿಸಿಂಗ ಸೆಂಟರ ಹತ್ತಿರ 3 ಜನರು ಅಪರಿಚಿತರು ಮೋಟಾರು ಸೈಕಲ್ ಮೇಲೆ ಬಂದು ನನ್ನನ್ನು ನಿಲ್ಲಿಸಿ, ನನ್ನ ಮಗಳು ಘಟಾಯಿಸಲು ಕೊಟ್ಟಿದ್ದ 5 ಗ್ರಾಂ ಬಂಗಾರದ ಮಂಗಳ ಸೂತ್ರ ಅ.ಕಿ 14000/- ರೂ ನನ್ನ ಬಳಿ ಇಟ್ಟುಕೊಂಡು ನನ್ನ ಮಾಲಿಕರು ಊಟ ತರಲು ಕೊಟ್ಟ 500/- ರೂಪಾಯಿಗಳು 3 ಜನ ಅಪರಿಚಿತರು ದೋಚಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ 213/11 ಕಲಂ 392 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀ ಪ್ರಾಣೇಶ ತಂದೆ ಶ್ರೀಧರರಾವ ಹೇರೂರಕರ ಸಾ: ಪ್ಲಾಟ ನಂ. 154 ಎನ್.ಜಿ.ಓ ಕಾಲೋನಿ ಗುಲಬರ್ಗಾ ರವರು ನೀಡಿದ ನಾನು ದಿನಾಂಕ 16/12/2011 ರಂದು ರಾತ್ರಿ ನನ್ನ ಅಳಿಯನಿಗೆ ಆರಾಮ ವಿಲ್ಲದಕ್ಕೆ ಮನೆ ಬೀಗ ಹಾಕಿಕೊಂಡು ಮಾಕಾ ಲೇಔಟ ಬಡಾವಣೆಯ ಮಾವನ ಮನೆಗೆ ಹೋಗಿದ್ದು ಪುನಃ ಮುಂಜಾನೆ ಬಂದು ನೋಡಲು ಬಾಗಿಲು ಬೀಗ ಮುರಿದಿತ್ತು ಒಳಗೆ ಹೋಗಿ ನೋಡಲು ಬಂಗಾರ ಆಭರಣಗಳು ಮತ್ತು ಬೆಳ್ಳಿಯ ಸಾಮಾನುಗಳು ಹೀಗೆ ಒಟ್ಟು 65 ರಿಂದ 70 ಸಾವಿರ ರೂಪಾಯಿ ಬೇಲೆ ಬಾಳುವದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಗುನ್ನೆ ನಂ. 135/2011 ಕಲಂ. 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ದರೋಡೆ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀ.ನಾಗೇಂದ್ರ ತಂದೆ ಜಗದೇವಪ್ಪ ಭೂಮಕ್ಕ, ಸಾ ಮನೆ ನಂ:11-436/1, ಶಹಾ ಹುಸೇನಿ ಚಿಲ್ಲಾ ಸಮತಾ ಕಾಲೋನಿ ರೋಡ ಗುಲಬರ್ಗಾರವರು ನಾನು ಮೋಟರ ಸೈಕಲ ನಂ:ಕೆಎ 37 ಕ್ಯೂ 4899 ನೇದ್ದರ ಮೇಲೆ ಲಾಲಗೇರಿ ಕ್ರಾಸ ಹತ್ತಿರ ಬಂದಾಗ ನನ್ನ ಮೋಟರ ಸೈಕಲದಲ್ಲಿರುವ ಪೆಟ್ರೋಲ್ ಖಾಲಿ ಆಗಿದ್ದು ನನ್ನ ಮೋಟರ ಸೈಕಲನ್ನು ತಳ್ಳಿಕೊಂಡು ಎಸ್.ಬಿ ಕೆರೆ ಗಾರ್ಡನ ದಾಟಿ ಸ್ವಲ್ಪ ಮುಂದೆಗಡೆ ಬರುತ್ತಿದ್ದಾಗ 3 ಜನ ಅಪರಿಚಿತರು ನನ್ನ ಮುಂದುಗಡೆ ಬಂದು ನನಗೆ ಪೆಟ್ರೋಲ ಆಗಿದೆ ಅಂತಾ ಕೇಳಿದಾಗ ನಾನು ಅವರಿಗೆ ಪೆಟ್ರೋಲ್ ಆಗಿರುತ್ತದೆ ಅಂತಾ ಹೇಳಿದಾಗ ಅವರು ಬಾಟಲಿ ಕೊಡಲಿ ಅಂತಾ ಕೇಳಿದಾಗ ನಾನು ಇಲ್ಲಿ ಸಮೀಪದಲ್ಲೆ ಪೆಟ್ರೋಲ್ ಪಂಪ ಇದೆ ಹೋಗುತ್ತೇನೆ ಅಂತಾ ಹೇಳಿದೆನು ಸುಮಾರು 21-25 ರ ವಯಸ್ಸಿನ ತರುಣರಲ್ಲಿ ಅವರಲ್ಲಿ ಒಬ್ಬನು ತನ್ನ ಹತ್ತಿರ ಇದ್ದ ಚಾಕು ತೋರಿಸಿ ತೇರೆ ಪಾಸ ಕಿತನಾ ಪೈಸಾ ಹೈ ನಿಕಾಲೋ ನೈ ತೋ ತುಜೆ ಯಹಿ ಖತಮ ಕರುಂಗಾ ಅಂತಾ ಹೇಳಿದಾಗ ನಾನು ಕೊಡುವದಿಲ್ಲ ಅಂತಾ ಅಂದಿದಕ್ಕೆ ನನಗೆ ಎರಡು ಜನ ಹಿಡಿದರು, ಮತ್ತೊಬ್ಬನು ನನ್ನ ಮೇಲಗಡೆ ಜೇಬಿನಲ್ಲಿ ಇದ್ದ 170/- ರೂಪಾಯಿ ಜಬರ ದಸ್ತಿಯಿಂದ ಕಸಿದುಕೊಂಡು ಅಲ್ಲೆ ಹತ್ತಿರದಲ್ಲಿ ನಿಲ್ಲಿಸಿದ ಮೋಟರ ಸೈಕಲ ಮೇಲೆ 3 ಜನರು ಕುಳಿತುಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:227/11 ಕಲಂ: 392 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಪಿಡಿಓ ಅಧಿಕಾರಿಯ ಮೇಲೆ ಹಲ್ಲೆ:
ನಿಂಬರ್ಗಾ ಪೊಲೀಸ ಠಾಣೆ.
ಶ್ರೀ ರಾಮಚಮದ್ರ ತಂದೆ ದೇವಂಗಪ್ಪ ಹುಲಿಮನಿ ಗ್ರಾ ಪಂಚಾಯತ ಪಿ.ಡಿ.ಒ. ಯಳಸಂಗಿ ವಾಸ ಸುಂಟನೂರ ತಾ ಆಳಂದ ರವರು ನಾನು ದಿನಾಂಕ 16/12/2011 ರಂದು ಕರ್ತವ್ಯದಲ್ಲಿ ಇದ್ದಾಗ ಮಧ್ಯಾಹ್ನ 1-30 ಗಂಟೆಗೆ ಶರಣಪ್ಪ ತಂದೆ ದರ್ಮಣ್ಣಾ ಮಾಮಗ ಸಾ ಯಳಸಂಗಿ ಇತನು ಬಂದು ನೀರಿನ ಪೈಪಲೈನ ಮಾಡಿದ ಬಿಲ್ಲಿನ ವಿಷಯದ ಸಂಬಂದ ಅವಾಚ್ಯ ಶಬ್ದಗಳಿಂದ ಬೈದು ಬಾಗಿಲು ಮುಚ್ಚಿ ಹಲ್ಲೆ ಮಾಡಿ ಗುಪ್ತ ಗಾಯ ಪಡಿಸಿರುತ್ತಾನೆ ಮತ್ತು ಕರ್ತವ್ಯಕ್ಕೆ ಅಡೆ ತಡೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 126/2011 ಕಲಂ. 332 342 353 504 355 506 ಐಪಿಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಮೋಸ ವಂಚನೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ
: ಶ್ರೀ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರೇವಣಸಿದ್ದಪ್ಪ ತಂದೆ ಶಿವಶರಣಪ್ಪಾ ಇಂಗನಶಟ್ಟಿ, ಭೀಮಾಶಂಕರ ತಂದೆ ಶಾಂತವೀರಪ್ಪಾ ಮುತ್ತಟ್ಟಿ, ನಿರಂಜನ ತಂದೆ ಮಲ್ಲಣ್ಣ ಗೊಳೆದ, ವಿಜಯಕುಮಾರ ತಂದೆ ಶಾಂತವೀರಪ್ಪಾ ಮುತ್ತಟ್ಟಿ, ಇವರೆಲ್ಲರೂ ಕೂಡಿಕೊಂಡು ನೊಂದಾಯಿತ ಬಾಡಿಗೆ ಪತ್ರದಲ್ಲಿರುವ ಸರ್ವೇ ನಂ.151/1 ಇದ್ದದ್ದನ್ನು ಉದ್ದೇಶ ಪೂರ್ವಕವಾಗಿ ಸ.ನಂ.151/2 ಎಂದು ಕಾನೂನು ಬಾಹಿರವಾಗಿ ತಿದ್ದುಪಡಿ ಮಾಡಿ ಅದನ್ನೆ ನಿಜವಾದ ದಾಖಲಾತಿಯೆಂದು ಸರಕಾರಿ ಕಛೇರಿಗಳಲ್ಲಿ ಕೊಟ್ಟು ಉಪಯೋಗಿಸಿ ಮೊಸಗೊಳಿಸಿದ್ದಲ್ಲದೆ ಕೇಳಲು ಹೋದ ನಮಗೆ ಬೆದರಿಕೆ ಹಾಕಿದ್ದಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ 196/2011 ಕಲಂ:120[ಬಿ], 447, 464, 465, 468, 471, 506 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

16 December 2011

Gulbarga Dist Reported Crimes

ಸಾರ್ವಜನಿಕರಿಗೆ ಮೋಸ ಮಾಡಿದ ಬಗ್ಗೆ:
ಬ್ರಹ್ಮಪೂರ ಠಾಣೆ:
ಶ್ರೀ .ಎ.ಟಿ ಜಯಪ್ಪ ಉಪನಿರ್ದೇಶಕರು ಆಹಾರ ನಾಗರಿಕ ಸರಬಾರಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಗುಲಬರ್ಗಾ ರವರು ನಾನು ದಿನಾಂಕ: 16/12/2011 ರಂದು 12:30 ಗಂಟೆಗೆ ನಾನು ಮಿನಿ ವಿಧಾನ ಸೌಧದಲ್ಲಿರುವ ನಮ್ಮ ಕಚೇರಿಯಲ್ಲಿ ಇರುವಾಗ ಶ್ರೀ.ರಾಮು ರಘೋಜಿ ಇವರು ನನಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ ಶರಣಯ್ಯ ತಂದೆ ನೀಲಕಂಠಯ್ಯ ಹಿರೇಮಠ ಇವರು ಆಹಾರ ಇಲಾಖೆಯ ನೌಕರ ಅಂತಾ ಹೇಳಿ ನಮ್ಮ ಮನೆಗೆ ಬಂದು ನನಗೆ 6500/- ರೂಪಾಯಿ ಕೊಟ್ಟರೆ ನಿಮಗೆ 2 ಗ್ಯಾಸ ಸಿಲೇಂಡರ ಮತ್ತು ಒಂದು ಸ್ಟೋವ ಕೊಡುವದಾಗಿ ಹೇಳುತ್ತಾ ಬಂದಿರುತ್ತಾನೆ. ಈ ಬಗ್ಗೆ ತಮ್ಮ ಇಲಾಖೆಯಿಂದ ಆದೇಶ ನೀಡಿರುವಿರಿ ಎಂದು ಕೇಳಿರುತ್ತಾರೆ. ಆಗ ನಾನು ರಘೋಜಿರವರಿಗೆ ಮಾತನಾಡಿ ನಮ್ಮ ಇಲಾಖೆಯಿಂದ ಯಾರಿಗೂ ಆದೇಶ ಮಾಡಿರುವದಿಲ್ಲ. ನೀವು ಶರಣಯ್ಯ ಹಿರೇಮಠ ಅವರನ್ನು ಅಲ್ಲಿಯೆ ಕುಡಿಸಿಕೊಳ್ಳಿ ನಾನು ತಕ್ಷಣ ಅಲ್ಲಿಗೆ ಬರುತ್ತೇನೆ ಅಂತಾ ಹೇಳಿ ತಕ್ಷಣ ನಮ್ಮ ಕಾರ್ಯಲಯದ ಸಿಬ್ಬಂದಿಯವರಾದ ವಿಠಲ ಚವ್ಹಾಣ ಶಿರಸ್ತೆದಾರರು ಆಹಾರ ಇಲಾಖೆ, ಮತ್ತು ಶಂಕರ ಸಿಂಗ ಠಾಕೂರ ಆಹಾರ ನಿರೀಕ್ಷಕರು (ಫುಡ ಇನ್ಸಪೆಕ್ಟರ್) ಇವರೊಂದಿಗೆ ವಿಠಲ ನಗರದಲ್ಲಿರುವ ರಘೋಜಿರವರ ಮನೆಗೆ ಹೋಗಿ ನೋಡಲು ರಘೋಜಿರವರು ಒಬ್ಬ ವ್ಯಕ್ತಿಯನ್ನು ಹಿಡಿದು ಕುಡಿಸಿದ್ದು, ಅವರಿಗೆ ಹೆಸರು ವಿಚಾರಿಸಲು ಶರಣಯ್ಯ ತಂದೆ ನೀಲಕಂಠಯ್ಯ ಹಿರೇಮಠ ಸಾ ಸ್ವಂತ ಅಂತ ಹೇಳಿ ಆಹಾರ ಇಲಾಖೆಯ ನೌಕರ ಅಂತಾ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಡುಗೆ ಅನಿಲ ಸಿಲೆಂಡರ ಮತ್ತು ಸ್ಟೋ & ಅಕ್ಕಿ ಕೊಡಿಸುವದಾಗಿ ಅಂತಾ ಹೇಳಿದ್ದು, ಅಲ್ಲದೆ 2-3 ದಿವಸಗಳ ಹಿಂದೆ ಹರೀಶ ತಂದೆ ಜನಾರ್ಧನ ಎಂಬುವವರಿಂದ ಗ್ಯಾಸ ಮತ್ತು ಸಿಲೇಂಡರ ಕೊಡಿಸುವದಾಗಿ ಹೇಳಿ ಅವರಿಂದ 5500/- ರೂಪಾಯಿ ಪಡೆದುಕೊಂಡಿದ್ದು ಆ ಹಣವನ್ನು ನನ್ನ ಸ್ವಂತಕ್ಕಾಗಿ ಖರ್ಚ ಮಾಡಿರುವದಾಗಿ ತಿಳಿಸಿದ್ದು, ಈ ಬಗ್ಗೆ ಹರೀಶ ಇವರು ಆಹಾರ ಮತ್ತು ನಾಗರಿಕ ಇಲಾಖೆಗೆ ಬರೆದ ಪತ್ರ ಸಹ ತೋರಿಸಿರುತ್ತಾನೆ. ನಮ್ಮ ಇಲಾಖೆಯಿಂದ ಅಡುಗೆ ಅನಿಲ ಸಿಲೆಂಡರಗಳನ್ನು ಸರಬರಾಜು ಮಾಡುವ ವ್ಯವಸ್ಥೆ ಇರುವದಿಲ್ಲ. ಸಂಬಂಧಪಟ್ಟ ಗ್ಯಾಸ ಕಂಪನಿಯ ಅನಿಲ ವಿತರಕರಿಂದ ಮಾತ್ರ ಸರಬರಾಜು ಮಾಡುವ ವ್ಯವಸ್ಥೆ ಇರುತ್ತದೆ. ಕಾರಣ ನಮ್ಮ ಇಲಾಖೆಯ ಹೆಸರು ಉಪಯೋಗಿಸಿ ಸರಕಾರಿ ನೌಕರನಂತೆ ನಟಿಸಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಡುಗೆ ಅನಿಲ ಮತ್ತು ಸ್ಟೋ ಹಾಗೂ ಅಕ್ಕಿ ಕೊಡಿಸುವದಾಗಿ ಹೇಳಿ ಮೋಸ ಮಾಡುತ್ತಿರುವನನ್ನು ಹಿಡಿದುಕೊಂಡು ವರದಿ ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 225/2011 ಕಲಂ 170, 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಕಳವು ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀ.ನಂದಕುಮಾರ ತಂದೆ ಶ್ರೀನಿವಾಸ ಕುಲಕರ್ಣಿ ಸಾ ಮನೆ ನಂ:2-811/6ಎ ಸುಂದರ ನಗರ ಗುಲಬರ್ಗಾರವರು ನಾನು ನನ್ನ ಚಿಕ್ಕಪ್ಪನಾದ ವೇಣುಗೋಪಾಲ ಕುಲಕರ್ಣಿ ಇವರ ಮನೆ ನಂ:2-811/6ಎ ನೇದ್ದರಲ್ಲಿ ಸುಮಾರು 8-10 ವರ್ಷಗಳಿಂದ ಇರುತ್ತೆನೆ ದಿನಾಂಕ: 15/12/2011 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ಮನೆಯಲ್ಲಿ ಊಟ ಮುಗಿಸಿಕೊಂಡು ಅಣ್ಣ ಅತ್ತೆಯವರ ಮನೆಯಲ್ಲಿ ಅವರ ಸೊಸೆ ಮತ್ತು ಮಗಳು ಊರಿಗೆ ಹೋಗಿದ್ದರಿಂದ ಅತ್ತೆಯವರ ಮನೆಯಲ್ಲಿ ಮಲಗಲು ಹೋಗಿದ್ದು, ಬೆಳಿಗ್ಗೆ 7:00 ಗಂಟೆಯ ಸುಮಾರಿಗೆ ಮನೆಗೆ ಬಂದು ನೋಡಲಾಗಿ ಬಾಗಿಲ ಬೀಗ ಮುರಿದು ಬಂಗಾರದ ಆಭರಣಗಳು ಮತ್ತು ನಗದು ಹಣ 4,4,00-0 ಮತ್ತು ಒಂದು ಮೊಭಾಯಿಲ್ ಹೀಗೆ ಒಟ್ಟು 47,400/- ಬೆಲೆ ಬಾಳುವ ಆಭರಣಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಮೋಸ ಪ್ರಕರಣ:
ಸ್ಟೇಶನ ಬಜಾರ ಠಾಣೆ:
ಶ್ರೀ ಬಸವಂತರಾಯ ತಂದೆ ಕರಿಬಸಯ್ಯ ಮಠಪತಿರವರು ಖಾಸಗಿ ದೂರು ಅರ್ಜಿ ಸಾರಂಶ ಎನೆಂದರೆ ಸರ್ವೆ ನಂ 18/2ಎ 40*60 ಬಿದ್ದಾಪೂರ ಕಾಲೋನಿಯಲ್ಲಿರುವ ಆಸ್ತಿಯು ಬಸವಂತರಾಯ ತಂದೆ ನಾಗಪ್ಪ ಪಾಟೀಲ್ ಸಾ ಗುಲಬರ್ಗಾ ಇವರದಾಗಿದ್ದು ಮಲ್ಲಯ್ಯ ತಂದೆ ಕರಬಸಯ್ಯ ಮಠಪತಿ ವಯಾ 50 ಉ ವ್ಯಾಪಾರ ಸಾ ಮಾಕಾ ಲೇಔಟ ಹನುಮಾನ ನಗರ ಗುಲಬರ್ಗಾ ಸಂಗಡ ಇನ್ನೊಬ ಇವರಿಬ್ಬರೂ ಕೂಡಿ ಉಪ ನೊಂದಣಿಧಿಕಾರಿಯವರಿಗೆ ನಂಬಿಕೆ ದ್ರೊಹ ಮಾಡಿ ಕಾಗದ ಪತ್ರಗಳು ತಿರುಚಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:212/೨೦೧೧ ಕಲಂ 419,420,425,426,448,463,467,468,471, ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ದರೋಡೆ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ ಠಾಣೆ:
ಶ್ರೀ ಹರೀನ ತಂದೆ ಸೀನಪ್ಪ ಉ:ಸನ್ ಡೈರೆಕ್ಟ ಟಿವಿ ಪ್ರೈ,ಲಿ. ಎ.ಎಸ.ಎಂ ವೃತ್ತಿ ಸಾ: ಮೈಸೂರ #358/1 ಕಾವೇರಿ ಮೇನ ರೋಡ ಮುಕುಂದ ಸ್ಟೋರ ರಾಘವೇಂದ್ರ ನಗರ ಹಾವ ರಂಗರಾವ ಕಲುಲ್ಕರ್ಣಿ ನಂ-3 ಶ್ರೀಗುರು ಕಾಲೇಜ ರಸ್ತೆ ಓಜಾ ಬಡಾವಣೆ ಗುಲಬರ್ಗಾರವರು ನಾನು ದಿನಾಂಕ 15-11-2011 ರಂದು ಸಾಯಂಕಾಲ 7-30 ಗಂಟೆಗೆ ಬಿಜಾಪೂರದಿಂದ ಬಾಲಾಜಿ ಬಸ್ಸಿನ ಮುಖಾಂತರ ಗುಲಬರ್ಗಾದ ಜೇವರ್ಗಿ ರಿಂಗ ರೋಡ ಹತ್ತಿರ ಇಳಿದು ಮನೆ ಕಡೆಗೆ ನಡೆದುಕೊಂಡು ಶ್ರೀಗುರು ಕಾಲೇಜ ಹತ್ತಿರ ಹೋಗುತ್ತಿದ್ದಾಗ ಇಬ್ಬರು ಆಟೋದಿಂದ ಇಳಿದು ಬಂದು ಮೋಬೈಲ ಕೇಳುವ ನೇಪದಲ್ಲಿ ಕೈ ಹಿಡಿದು ದಬ್ಬಿದರು ನಂತರ ನಾಗನನಳ್ಳಿ ರಸ್ತೆ ಕಡೆಯಿಂದ ಇಬ್ಬರೂ ಬಂದು ಹಿಡಿದರು ನಂತರ ಬಲಗೈಯಲ್ಲಿದ್ದ 5 ಗ್ರಾಂ ಉಂಗುರು 2 ಮೊಬೈಲ ಪೋನ, ಕೈಯಲ್ಲಿದ್ದ ಕೈ ಗಡಿಯಾರ ಮತ್ತು ಜೇಬಿನಲ್ಲಿದ್ದ ಅಂದಾಜು 3000/- ರೂ ನಗದು ಹಣ ಒಟ್ಟು ಅಂದಾಜು 29000/- ಕಿಮ್ಮತ್ತಿನ ವಸ್ತುಗಳನ್ನು ಹೆದರಿಸಿ ದೋಚಿಕೊಂಡು ಆಟೊದಲ್ಲಿ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 283/11 ಕಲಂ 392 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

15 December 2011

GULBARGA DIST REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ
:ಜಾವೀದ ತಂದೆ ಜಬ್ಬರಸಾಬ ಚೆಂಗಟಾ, ಸಾಃ ಇಸ್ಲಾಮಬಾದ ಕಾಲೂನಿ ಗುಲಬರ್ಗಾರವರು ನಾನು ಚಾಹ ಕುಡಿಯುವ ಕುರಿತು ನಡೆದುಕೊಂಡು ಬಸವೇಶ್ವರ ಕಾಲೂನಿ ಕ್ರಾಸ ಹತ್ತಿರ ಹೋಗುತ್ತಿರುವಾಗ ಮೋಟಾರ ಸೈಕಲ ನಂ. ಕೆ.ಎ 32 ಕ್ಯೂ 995 ನೇದ್ದರ ಚಾಲಕನು ತನ್ನ ಮೊಟಾರ ಸೈಕಲ್ ನ್ನು ರಿಂಗ ರೋಡ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಮೊಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆನಂ: 77/2011 ಕಲಂ 279,337 ಐಪಿಸಿ ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಮಾದನ ಹಿಪ್ಪರಗಾ ಠಾಣೆ
: ಶ್ರೀ ಕರಬಸಪ್ಪ ಎ.ಎಸ್.ಐ ಮಾದನ ಹಿಪ್ಪರಗಾ ಪೊಲೀಸ್ ಠಾಣೆರವರು ನಾನು ಮತ್ತು ಗುರುಪಾದಪ್ಪಾ ಸಿಪಿಸಿ ರವರು ದಿನಾಂಕ 15/12/2011 ರಂದು ರಾತ್ರಿ ಗಸ್ತು ಚೆಕಿಂಗ್ ಕರ್ತವ್ಯದಲ್ಲಿದ್ದಾಗ ಆಳಂದ ವಾಗ್ದರಗಿ ರೋಡ ಹಿರೋಳ್ಳಿ ಗ್ರಾಮದಿಂದ ಅಂದಾಜ 2-3 ಕಿ.ಮೀ ಅಂತರದಲ್ಲಿ ಮಧ್ಯರಾತ್ರಿ 2 ಎ.ಎಮ್.ಗಂಟೆಯ ಸುಮಾರಿಗೆ ರೋಡಿನಲ್ಲಿ ಪೆಟ್ರೋಲಿಗ್ ಕರ್ತವ್ಯ ಮಾಡುತ್ತಾ ಬರುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದನು ನಾವು ಹಿಡಿಯಲು ಹೊದಾಗ ಅವನು ನಮಗೆ ನೋಡಿ ಓಡಿ ಹೋಗಿತ್ತಿದ್ದನ್ನು ಹಿಡಿದು ವಿಳಾಸ ವಿಚಾರಿಸಲು ಅವನು ಸರಿಯಾದ ಹೆಸರು ವಿಳಾಸ ನಿಡಲಿಲ್ಲಾ ನಾವು ಮತ್ತೆ ವಿಚಾರಿಸಲು ತನ್ನ ಹೆಸರು ಶಿವರಾಯ ತಂದೆ ದುರ್ಯೋದನ ವಾಡೆದ ವಯ:20 ವರ್ಷ ಸಾ: ಹಿರೋಳ್ಳಿ ಅಂತಾ ಹೇಳಿದನು ರಾತ್ರಿ ವೇಳೆಯಲ್ಲಿ ರೋಡಿನ ಮೇಲೆ ಯಾಕೆ ತಿರುಗಾಡುತ್ತಿ ಅಂತಾ ವಿಚಾರಿಸಿಲು ಅವನು ಬೇರೆ ಬೇರೆ ರೀತಿಯಲ್ಲಿ ಹೇಳಿ ಸರಿಯಾದ ಉತ್ತರ ನೀಡಲ್ಲಿಲ್ಲಾ ಯಾವುದಾದರು ಸ್ವತ್ತಿನ ಅಪರಾಧ ಮಾಡಬಹುದೆಂದು ಕಂಡು ಬಂದಿರುವದರಿಂದ ಠಾಣೆಗೆ ಬಂದು ವರದಿ ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ 75/2011 ಕಲಂ 107,151 ಸಿ,ಆರ್,ಪಿ,ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ತಾಮ್ರದ ವೈರ ಜಪ್ತಿ:
ಮಾದನ ಹಿಪ್ಪರಗಾ ಠಾಣೆ:
ಶ್ರೀ.ಮೈನೊದ್ದೀನ ತಂದೆ ಕಾಶೀಮ ಸಾಬ ಮುಖ್ಯ ಪೇದೆ ಆಳಂದ ಪೊಲೀಸ್ ಠಾಣೆ ನಾನು ಮತ್ತು ಠಾಣೆಯ ಪೊಲೀಸ್ ಪೇದೆ ಚಂದ್ರಶೇಖರ ಇಬ್ಬರೂ ಮಾನ್ಯ ಸಿ.ಪಿ.ಐ. ಸಾಹೇಬ ಆಳಂದ ರವರ ಆಧೇಶ ಪ್ರಕಾರ ಆಳಂದ ಪೊಲೀಸ್ ಠಾಣೆ ಗುನ್ನೆ ನಂ 243/2011 ಕಲಂ 457, 380. ಐ.ಪಿ.ಸಿ. ಆಳಂದ ಠಾಣೆ ಗುನ್ನೆ ನಂ 224/2011 ಕಲಂ 379, ಐ.ಪಿ.ಸಿ, ಆಳಂದ ಠಾಣೆ ಗುನ್ನೆ ನಂ 189/2011 ಕಲಂ 379 ಐ.ಪಿ.ಸಿ, ಆಳಂದ ಪೊಲೀಸ್ ಠಾಣೆ ಗುನ್ನೆ ನಂ 67/2011 ಕಲಂ 379 ಐ.ಪಿ.ಸಿ. ನೇದ್ದರಲ್ಲಿ ಕಳುವಾದ ಮಾಲು ಮತ್ತು ಆರೊಪಿತರ ಪತ್ತೆಗಾಗಿ ದಿನಾಂಕ 15/12/2011 ರಂದು ಬೆಳಗಿನ ಜಾವ ಆಳಂದ ದಿಂದ ಮಾದನಹಿಪ್ಪರಗಾ ಕಡೆ ಹೊಗುತ್ತಿದ್ದಾಗ ಬೆಳಿಗ್ಗೆ 6 ಗಂಟೆ ಸುಮಾರಿಗೆ ಮೋಘಾ [ಬಿ] ಕ್ರಾಸ ಹತ್ತಿರ ಹತ್ತಿರ ಬರುವಾಗ ಅಲ್ಲಿ 3 ಜನರು ನಿಂತಿದ್ದರು ಅವರಲ್ಲಿ ಒಬ್ಬನ ಹತ್ತಿರ ಒಂದು ಬ್ಯಾಗ ಇದ್ದದು ನೋಡಿ ವಿಚಾರಿಸಲು ಅವರ ಹೆಸರು ವಿಳಾಸ ಕೇಳಲಾಗಿ ಅಸಮರ್ಪಕ ಉತ್ತರ ಕೊಟ್ಟರು ಅವರಲ್ಲಿ ಒಬ್ಬನು ಶಂಕರ ತಂದೆ ಶಾಲು ಪವಾರ ಸಾ: ಹಿರೋಳ್ಳಿ, ರಾಮು ತಂದೆ ಸೊಪಾನ ಪವಾರ ಸಾ: ಹಿರೋಳ್ಳಿ, ಬೇಸ್ಯಾ ತಂದೆ ಸೊನು ಪವಾರ ಸಾ: ಶಾಕಾಪೂರ, ಶಂಕರನ ಹತ್ತಿರ ಇದ್ದ ಬ್ಯಾಗನ್ನು ನಾವು ಚೆಕ್ಕ ಮಾಡಲು ಆ ಬ್ಯಾಗಿನಲ್ಲಿ ಸುಟ್ಟ ತಾಮ್ರ ವೈರ ಇತ್ತು ಎಲ್ಲಿಂದ ತಂದಿರುವಿರಿ ಅಂತಾ ನಾವು ಕೇಳಲು ದಿನಾಂಕ 10/12/2011 ರಂದು ರಾತ್ರಿ ವೇಳೆಯಲ್ಲಿ ಹಿರೋಳ್ಳಿ ಸಿಮಾಂತರದಲ್ಲಿನ ಹೊಲದಲ್ಲಿ ಕೇಬಲ ವೈರ್ ಕಳುವು ಮಾಡಿಕೊಂಡು ಬಂದು ಮಾರಾಟ ಮಾಡಿ ಹಣ ತೆಗೆದುಕೊಳಲು ಹಿರೊಳ್ಳಿ ಗುಡ್ಡದಲ್ಲಿ ಸುಟ್ಟಿರುತ್ತೆವೆ. ಅದನ್ನು ಆಳಂದಕ್ಕೆ ಮಾರಾಟ ಮಾಡಲು ತೆಗೆದುಕೊಂಡು ಹೊಗುತ್ತಿದ್ದೆವೆ ಅಂತಾ ತಿಳಿಸಿದ ಮೇರೆಗೆ 3 ಜನರನ್ನು ಹಾಗು ಮುದ್ದೆ ಮಾಲು ಸಮೇತ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 76/2011 ಕಲಂ 41(ಡಿ)102 ಸಿ,ಆರ್,ಪಿ,ಸಿ ಮತ್ತು 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

14 December 2011

GULBARGA DIST REPORTED CRIMES

ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಸೇಡಂ ಠಾಣೆ :
ಶ್ರೀ ಸಿದ್ದಪ್ಪ ತಂದೆ ರೇವಣಸಿದ್ದಪ್ಪ ಕೇಶವಾರ ಸಾಬಸವನಗರ ಸೇಡಂರವರು ನಾನು ಅಡತಿಯಲ್ಲಿ ಗುಮಾಸ್ತ ಕೆಲಸ ಮಾಡಿಕೊಂಡು ಮರಳಿ ಸಾಯಂಕಾಲ ಸೇಡಂ ಬಸ್ ನಿಲ್ದಾಣದ ಎದುರುಗಡೆ ಬಂದು ಚಹಾ ಕುಡಿಯಬೇಕು ಅಂತ ದೊಂತಾ ರವರ ಅಂಗಡಿಯ ಮುಂದೆ ಮೋಟಾರು ಸೈಕಲ್ ಕೆಎ.32.ವೈ.1906 ನೇದ್ದರ ಹಿರೋ ಹೊಂಡಾ ಸ್ಪಲೇಂಡರ್ ಪ್ಲಸ್ ಮೋಟಾರು ಸೈಕಲ್ ನಿಲ್ಲಿಸಿ ಸಾಯಂಕಾಲ 7-20 ಗಂಟೆಯ ವೇಳೆಗೆ ಯಾರೋ ಕಳ್ಳರು ನನ್ನ ಮೋಟಾರು ಸೈಕಲ್ ಕಳುವು ಮಾಡಿಕೊಂಡು ಹೋಗಿದ್ದು ಮೋಟಾರ ಸೈಕಲ್ ಚೆಸ್ಸಿ ನಂ-BLHA10EZBHA24780 ಇಂಜೆನ್ ನಂ-HA10EFBHA13089 ಇದ್ದು ಅದರ ಬಣ್ಣ ಸಿಲ್ವರ್ ಕಲರ್ 2011 ನೇ ಫೆಬ್ರುವರಿ ಮಾಡಲ್ ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆಯ ಗುನ್ನೆ ನಂ-218/2011 ಕಲಂ.379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹೆಣ್ಣು ಮಗಳು ಕಾಣೆಯಾದ ಬಗ್ಗೆ:
ಮಹಿಳಾ ಪೊಲೀಸ್ ಠಾಣೆ :
ಶ್ರೀ ಡಿಗಂಬರ ತಂದೆ ಸಿದ್ದಪ್ಪ ಪೂಜಾರಿ ವಯ; 75 ವರ್ಷ ಸಾ; ಮನೆ ನಂ 1-9651/1-ಎಫ್ ವಿಶಾಲ ನಗರ 6 ನೇ ಕ್ರಾಸ ಲಕ್ಷ್ಮೀ ನಿವಾಸ ಗುಲಬರ್ಗಾರವರು ನನ್ನ ಮಗಳಾದ ಶ್ರೀಮತಿ. ಭಾರತಿ ಗಂಡ ದತ್ತ ಪೂಜಾರಿ ವ:31 ವರ್ಷ ಸಾ: ಮನೆ ನಂ 1-9651/1-ಎಫ್ ವಿಶಾಲ ನಗರ 6 ನೇ ಕ್ರಾಸ ಲಕ್ಷ್ಮೀ ನಿವಾಸ ಗುಲಬರ್ಗಾ ಇವಳು ದಿ: 04.12.2011 ರಂದು ಸಾಯಂಕಾಲ 4-00 ಗಂಟೆಗೆ ಹೋದವಳು ಇದುವರೆಗೂ ಬಂದಿಲ್ಲ ನಾವು ಎಲ್ಲ ಕಡೆ ಹುಡುಕಾಡಿದರೆ ಪತ್ತಯಾಗಿರುವುದಿಲ್ಲಾ ಇವಳು ಮಾನಸಿಕ ರೋಗಿಯಾಗಿದ್ದು ಮಗಳನ್ನು ಹುಡುಕಿ ಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 120/2011 ಕಲಂ. ಹೆಣ್ಣುಮಗಳು ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ,ಕಾಣೆಯಾದ ಹೆಣ್ಣು ಮಗಳ ಚಹರೆ ಪಟ್ಟಿ ಈ ರೀತಿಯಾಗಿದೆ ವ 31, ಸಾದಾರಣ ಮೈಕಟ್ಟು, ಗೋದಿ ಬಣ್ಣ, 5 ಪೀಟ ಎತ್ತರ, ಉದ್ದನೆಯ ಮುಖ, ಕಪ್ಪು ಕೂದಲು, ಕನ್ನಡ, ಹಿಂದಿ, ಮರಾಠಿ ಭಾಷೆ ಬಲ್ಲವಳಾಗಿದ್ದಾಳೆ ಬಲಗಡೆ ಕಪಾಳದ ಮೇಲೆ ಹಳೆಯ ಗಾಯದ ಗುರುತು ಇದೆ ಇವಳ ಬಗ್ಗೆ ಸುಳಿವು ಸಿಕ್ಕಲ್ಲಿ ತಾವುಗಳು ಸಂರ್ಪಕಿಸಬೇಕಾದ ದೂರುವಾಣೆ ಮತ್ತು ಮೋಬಾಯಿಲ್ ಸಂ: 08472263620 ಅಥವಾ 948080355 ಅಥವಾ ಕಂಟ್ರೋಲ್ ರೂಮ್ ಗುಲಬರ್ಗಾ 08472263604 ನೇದ್ದಕ್ಕೆ ತಿಳಿಸಲು ಕೋರಲಾಗಿದೆ.

Gulbarga dist reported crime

ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಸೇಡಂ ಠಾಣೆ :
ಶ್ರೀ ಸಿದ್ದಪ್ಪ ತಂದೆ ರೇವಣಸಿದ್ದಪ್ಪ ಕೇಶವಾರ ಸಾಬಸವನಗರ ಸೇಡಂರವರು ನಾನು ಅಡತಿಯಲ್ಲಿ ಗುಮಾಸ್ತ ಕೆಲಸ ಮಾಡಿಕೊಂಡು ಮರಳಿ ಸಾಯಂಕಾಲ ಸೇಡಂ ಬಸ್ ನಿಲ್ದಾಣದ ಎದುರುಗಡೆ ಬಂದು ಚಹಾ ಕುಡಿಯಬೇಕು ಅಂತ ದೊಂತಾ ರವರ ಅಂಗಡಿಯ ಮುಂದೆ ಮೋಟಾರು ಸೈಕಲ್ ಕೆಎ.32.ವೈ.1906 ನೇದ್ದರ ಹಿರೋ ಹೊಂಡಾ ಸ್ಪಲೇಂಡರ್ ಪ್ಲಸ್ ಮೋಟಾರು ಸೈಕಲ್ ನಿಲ್ಲಿಸಿ ಸಾಯಂಕಾಲ 7-20 ಗಂಟೆಯ ವೇಳೆಗೆ ಯಾರೋ ಕಳ್ಳರು ನನ್ನ ಮೋಟಾರು ಸೈಕಲ್ ಕಳುವು ಮಾಡಿಕೊಂಡು ಹೋಗಿದ್ದು ಮೋಟಾರ ಸೈಕಲ್ ಚೆಸ್ಸಿ ನಂ-BLHA10EZBHA24780 ಇಂಜೆನ್ ನಂ-HA10EFBHA13089 ಇದ್ದು ಅದರ ಬಣ್ಣ ಸಿಲ್ವರ್ ಕಲರ್ 2011 ನೇ ಫೆಬ್ರುವರಿ ಮಾಡಲ್ ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆಯ ಗುನ್ನೆ ನಂ-218/2011 ಕಲಂ.379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಹುಡಗಿ ಕಾಣೆಯಾದ ಬಗ್ಗೆ :
ಅಶೋಕ ನಗರ ಠಾಣೆ
:
ಶ್ರೀ ಹಣಮಂತ ತಂದೆ ಚಂದ್ರಪ್ಪ ರೇವಣೊರ ಉ : ಸಹ ಶಿಕ್ಷಕ ಸ.ಹಿ.ಪ್ರಾ.ಶಾಲೆ ಬಸವಪಟ್ಟಣ ಸಾ ಮ.ನಂ. 1-1498/1-62 ಶಕ್ತಿನಗರ ಗುಲಬರ್ಗಾರವರು ನನಗೆ ಇಬ್ಬರು ಮಕ್ಕಳಿರುತ್ತಾರೆ ಮತ್ತು ನನ್ನ ಹೆಂಡತಿಯ ಅಕ್ಕನ ಮಗಳಾದ ಕು ಅಂಬಿಕಾ ಇವಳು ತನ್ನ ತಂದೆ ತಾಯಿ ಇಬ್ಬರು ತೀರಿಕೊಂಡಿದ್ದರಿಂದ ನಮ್ಮ ಹತ್ತಿರ ಸುಮಾರು 2 ವರ್ಷದಿಂದ ಇಲ್ಲಿಯೆ ವಾಸವಾಗಿರುತ್ತಾಳೆ. ದಿ : 09/12/2011 ರಂದು ಬೆಳಿಗ್ಗೆ 9 ಗಂಟೆಗೆ ಎಂದಿನಂತೆ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕರ್ತವ್ಯಕ್ಕೆ ಹೋಗಿದ್ದು ನನ್ನ ಮಕ್ಕಳು ಸಹ ಶಾಲೆಗೆ ಹೊಗಿರುತ್ತಾರೆ ಮನೆಯಲ್ಲಿ ಅಂಬಿಕಾ ಒಬ್ಬಳೆ ಇದ್ದಳು ಅದೇ ದಿವಸ ಸಾಯಂಕಾಲ 6 ಗಂಟೆಗೆ ನಾವಿಬ್ಬರು ಶಾಲೆಯಿಂದ ಕರ್ತವ್ಯ ಮುಗಿಸಿಕೊಂಡು ಮನೆಗೆ ಬಂದಾಗ ಮನೆಯ ಬಾಗಿಲಿಗೆ ಬೀಗ ಹಾಕಿದ್ದು ನಮ್ಮ ಇಬ್ಬರು ಮಕ್ಕಳು ಶಾಲಾ ಬ್ಯಾಗಗಳನ್ನು ಮನೆಮುಂದೆ ಇಟ್ಟು ಕುಳಿತಿದ್ದರು ನನ್ನ ಮಕ್ಕಳಿಗೆ ಅಂಬಿಕಾ ಅಕ್ಕ ಎಲ್ಲಿಗೆ ಹೊಗಿದ್ದಾಳೆಂದು ವಿಚಾರಿಸಿದಾಗ ಗೊತ್ತಿಲ್ಲ ಅಂತಾ ಹೇಳಿದರು ಪಕ್ಕದ ಮನೆಯವರಿಗೆ ಕೇಳಿದಾಗ ಮುಂಜಾನೆ 10-30 ಗಂಟೆಗೆ ಅಂಬಿಕಾ ಇವಳು ಮನೆ ಬೀಗ ಕೊಟ್ಟು ಹೊರಗಡೆ ಹೊಗಿ ಬರುತ್ತೆನೆಂದು ಹೇಳಿ ಹೊಗಿರುತ್ತಾಳೆ. ಅಂತಾ ತಿಳಿಸಿದರು. ರಾತ್ರಿಯಾದರು ಅಂಬಿಕಾ ಮನೆಗೆ ಬರಲಿಲ್ಲ ನಮ್ಮ ಸಂಬಂಧಿಕರಲ್ಲಿ ಹುಡುಕಾಡಿದ್ದು ಅಂಬಿಕಾಳ ಸ್ವಂತ ಊರಾದ ಬೀದರ ಜಿಲ್ಲೆಯ ನಾಗೋರಾ, ಹೊಚಕನಳ್ಳಿ ಗ್ರಾಮಕ್ಕೆ ಪೊನ ಮಾಡಿ ಕೇಳಿದಾಗ ಅಲ್ಲಿಯೂ ಸಹ ಬಂದಿರುವದಿಲ್ಲ ಅಂತಾ ತಿಳಿಸಿರುತ್ತಾರೆ ಕಾರಣ ಕಾಣೆಯಾದ ನನ್ನ ಸಾಕು ಮಗಳು ಕು ಅಂಬಿಕಾ ಇವಳು ಕಾಣೆಯಾಗಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 134/2011 ಕಲಂ ಹುಡುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಗ್ರಾಮೀಣ ಠಾಣೆ:
ದಿನಾಂಕ 12/12/2011 ರಂದು ಕಾಲೇಜ ಅವಧಿ ನಂತರ ರಾತ್ರಿ ಯಾರೋ ಕಳ್ಳರು ನಮ್ಮ ಮಹಾ ವಿಧ್ಯಾಲಯದ ಕಂಪ್ಯೂಟರ ಲ್ಯಾಬ ವಿಭಾಗದ ಕೋಣೆಯ ಬೀಗ ಮುರಿದು ಒಳಗೆ ಇರುವ 3 ಸ್ಯಾಮಸಂಗ ಗಣಕ ಯಂತ್ರಗಳು ಅಂದಾಜು ಬೆಲೆ 21,000/- ರೂ ಮತ್ತು ಪ್ರೀಂಟರ್‌ 1 ಹೆಚ್‌ಪಿ ಅಂದಾಜ ಬೆಲೆ 1800/-ರೂ ಕ್ರೀಡಾ ಸಾಮಾಗ್ರಿಗಳು ವಾಲಿಬಾಲ 2, ಪುಟಬಾಲ 2, ಕ್ರಿಕೇಟ ಬ್ಯಾಟ್‌ 2, ಅಂದಾಜು ಬೆಲ 1,100/- ರೂ ಹೀಗೆ ಒಟ್ಟು ಅಂದಾಜು ಕಿಮ್ಮತ್ತು 23,900/- ರೂ ಕಿಮ್ಮತ್ತಿನ ವಸ್ತುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ವಿಜಯಕುಮಾರ ಚೆನ್ನಣ್ಣ ಕಲ್ಲೂರ ಪ್ರಾಚಾರ್ಯರು ಶ್ರೀ ಗುರುಶಾಂತಪ್ಪ ಜವಳಿ ಸ್ಮಾರಕ ಸಂಸ್ಥೆ ಗ್ರಾಮೀಣ ವಸತಿ ಶಿಕ್ಷಣ ಮಹಾವಿಧ್ಯಾಲಯ ಪಟ್ಟಣ ತಾ: ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 370/2011 ಕಲಂ 457, 380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ:
ಶ್ರೀ ರಾಜಣ್ಣ ತಂದೆ ಶಿವಲಿಂಗಪ್ಪ ಬಿರಾದಾರ ಉ:ನಿವೃತ ನೌಕರ ಸಾ: ಹಳ್ಳಿ ಖೇಡ (ಕೆ) ಹಾ: ವ:ಬಿದ್ದಾಪೂರ ಕಾಲನಿ ಗುಲಬರ್ಗಾರವರು ನಾನು ದಿನಾಂಕ 13/12/2011 ರಂದು ಸಾಯಂಕಾಲ 5 ಗಂಟೆಗೆ ಮೋಟಾರ ಸೈಕಲ ನಂ ಕೆಎ 32 ಹೆಚ್‌ 2858 ನೇದ್ದರ ಮೇಲೆ ರೇಲ್ವೆ ಗೇಟ ಹತ್ತಿರ ಹೋಗುವಾಗ ಎದುರುಗಡೆಯಿಂದ ಮೋಟಾರ ಸೈಕಲ ನಂ ಕೆಎ 32 ಕ್ಯೂ 5329 ನೇದ್ದರ ಸವಾರನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಿಗೆ ಡಿಕ್ಕಿ ಪಡಿಸಿ ಸಾದಾಗಾಯ ಗುಪ್ತಗಾಯ ಪಡಿಸಿ ತನ್ನ ಮೋಟಾರ ಸೈಕಲ ತೆಗೆದು ಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 371/2011 ಕಲಂ 279,337 ಐಪಿಸಿ ಸಂಗಡ 187 ಐಎಮ.ವಿಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ತಂದೆ ಮಗನ ಜಗಳ,
ದೇವಲ ಗಾಣಗಾಪೂರ ಠಾಣೆ
: ಕಲ್ಯಾಣರಾವ ತಂದೆ ಚುಂಜಪ್ಪಾ ಪೊಲೀಸ್ ಪಾಟೀಲ್ ಸಾ ಅವರಳ್ಳಿ ನನಗೆ ಇಬ್ಬರೂ ಹೆಂಡತಿಯರಿದ್ದು, ಮೊದಲನೆಯವಳು ಕಲ್ಲಮ್ಮ ಇವಳೀಗೆ ಇಬ್ಬರೂ ಗಂಡು ಮಕ್ಕಳು, ಹಾಗೂ ಎರಡನೆಯವಳು ಪಾರ್ವತಿ ಇವಳಿಗೆ ಐದು ಜನ ಮಕ್ಕಳಿರುತ್ತಾರೆ, ಗಂಡು ಮಕ್ಕಳಿಗೆ ಆಸ್ತಿ ಹಂಚಿ ಕೊಟ್ಟಿದ್ದು, ಎಲ್ಲರೂ ಬೇರೆ ಬೇರೆ ಆಗಿರುತ್ತಾರೆ. ನಾನು ಮತ್ತು ನನ್ನ ಎರಡನೆಯ ಹೆಂಡತಿ ಪಾರ್ವತಿ ನನ್ನ ಹಿರಿಯ ಮಗ ಜುಂಜಪ್ಪ ಒಟ್ಟಿಗೆ ಇರುತ್ತೆವೆ ನಾನು ನಮ್ಮ ತೋಟದ ಮನೆಯಲ್ಲಿದ್ದಾಗ ಮೊಮ್ಮಗ ವಿನೋದ ತೋಟದ ಮನೆಗೆ ಬಂದು, ಕಾಕಾ ಪ್ರಾಶಾಂತ ಇವನು ನಮ್ಮ ಅಪ್ಪ ಮಹಾಂತಪ್ಪ ಇವನೊಂದಿಗೆ ಜಗಳ ಮಾಡುತಿದ್ದಾನೆ ಕರೆದುಕೊಂಡು ಬರಲು ಹೇಳಿದ್ದರಿಂದ ನಾನು ಮನೆ ಹತ್ತಿರ ಬಂದಾಗ ಮಗ ಪ್ರಶಾಂತನು ಇತನು ಅವಾಚ್ಯವಾಗಿ ಬೈಯುತ್ತಿದ್ದಾಗ ಯಾಕೆ ಸುಮ್ನೆ ಬೈತೆಪ್ಪಾ ಅಂತಾ ಕೇಳಿದಕ್ಕೆ ತೆಕ್ಕೆ ಕುಸ್ತಿ ಬಿದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. ವೈಧ್ಯರ ನಿರ್ಲಕ್ಷತನದಿಂದ ಬಾಣಂತಿ ಸಾವು:
ಬ್ರಹ್ಮಪೂರ ಠಾಣೆ
: ಶ್ರೀ.ಶರಣು ತಂದೆ ಈರಣ್ಣಾ ಕಾಮಾ, ಸಾ ಖಣದಾಳ ತಾಜಿ ಗುಲಬರ್ಗಾ ರವರು ನನ್ನ ಹೆಂಡತಿಯಾದ ಶಿಲ್ಪಾ ಇವಳಿಗೆ ಹೇರಿಗೆ ಸಲುವಾಗಿ ದಿನಾಂಕ: 13/12/2011 ರಂದು 0200 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದಾಗ ಸರಕಾರಿ ಆಸ್ಪತ್ರೆಯ ದಾದಿಯರು ನನ್ನ ಹೆಂಡತಿಯನ್ನು ಪರಿಶೀಲಿಸಿ ಓ.ಪಿ.ಡಿ ಮಾಡಿಸಿ ಅಂತಾ ಹೇಳಿ ಸದ್ಯಕ್ಕೆ ಯಾರು ವೈದ್ಯರು ಇರುವದಿಲ್ಲ, ಬೆಳಿಗ್ಗೆ ವೈದ್ಯರು ಬಂದ ಮೇಲೆ ತಪಾಸಣೆ ಮಾಡಿದ ನಂತರ ಹೇರಿಗೆ ಬಗ್ಗೆ ಕ್ರಮ ಕೈಕೊಳ್ಳುವದಾಗಿ ತಿಳಿಸಿದರು. ನಂತರ ನನ್ನ ಹೆಂಡತಿಯನ್ನು ವಾರ್ಡಿನಲ್ಲಿ ಭರ್ತಿ ಮಾಡದೆ ಬೆಳಗಿನ ವರೆಗು ಚಳಿಯಲ್ಲಿ ಹೊರಗೆ ಕೂಡಿಸಿದರು. ನನ್ನ ಹೆಂಡತಿಗೆ ಹೇರಿಗೆ ನೋವು ಜಾಸ್ತಿಯಾಗಿದ್ದರಿಂದ ನಮ್ಮ ಅತ್ತೆ ಈರಮ್ಮ & ಮಾವ ಪರಮೇಶ್ವರ ಇವರುಗಳು ಆಸ್ಪತ್ರೆಯ ವೈದ್ಯರನ್ನು ಕೋರಿಕೊಂಡರು ಸಹ ಯಾರೊಬ್ಬರು ಕಾಳಜಿ ವಹಿಸದೆ ಬೇಜವಾಬ್ದಾರಿಯಿಂದ ವರ್ತಿಸಿದರು. ಬೆಳಿಗ್ಗೆ 10:00 ಗಂಟೆ ನಂತರ ನನ್ನ ಹೆಂಡತಿಯನ್ನು ವಾರ್ಡಿಗೆ ಭರ್ತಿ ಮಾಡಿಕೊಂಡರು. ನಂತರ ತಪಾಸಣೆ ಮಾಡಿ ಶಸ್ತ್ರ ಚಿಕಿತ್ಸೆ ಮೂಲಕ ಹೇರಿಗೆ ಮಾಡಬೇಕಾಗುತ್ತದೆ ಅಂತಾ ಹೇಳಿ ರಕ್ತ ಪರೀಕ್ಷೆ ಮಾಡಿಸಿ ಆಕೆಯ ಸಲುವಾಗಿ 1 ಬಾಟಲಿ ರಕ್ತ ತರುವಂತೆ ಸೂಚಿಸಿದರು ನಾನು ಸ್ವತಃ ನನ್ನ ರಕ್ತವನ್ನು ನೀಡಿದೇನು. ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ನನ್ನ ಹೆಂಡತಿಯು ಗಂಡು ಮಗುವನ್ನು ಜನ್ಮ ನೀಡಿದಳು.ವೈದ್ಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾಳೆ ಮಾತನಾಡಬೇಡ ಅಂತಾ ಹೇಳಿದರು. ಅರ್ಧ ಗಂಟೆಯ ನಂತರ ನನ್ನ ಹೆಂಡತಿಗೆ ಬಿ.ಪಿ ಕಡಿಮೆಯಾಗಿದೆ ಅಂತಾ ಹೇಳಿ ಕಾಗದಗಳ ಮೇಲೆ ನನ್ನ ಸಹಿಗಳನ್ನು ಪಡೆದುಕೊಂಡರು. ನಂತರ 2:00 ಗಂಟೆಗೆ ಸಿಬ್ಬಂದಿಯವರು ನಿಮ್ಮ ಶಿಲ್ಪ ಸಾವನಪ್ಪಿದ್ದಾಳೆ ಅಂತಾ ಹೇಳಿದರು. ನನ್ನ ಹೆಂಡತಿಯನ್ನು ರಾತ್ರಿಯೆ ವಾರ್ಡಿನಲ್ಲಿ ಭರ್ತಿ ಮಾಡಿದ್ದರೆ, ಅಲ್ಲಿನ ವೈದ್ಯರು ಸರಿಯಾಗಿ ಚಿಕಿತ್ಸೆ ಮಾಡಿದ್ದರೆ ನನ್ನ ಹೆಂಡತಿ ಸಾವನಪ್ಪುತ್ತಿರಲಿಲ್ಲ. ನಿಗದಿತ ಸಮಯದಲ್ಲಿ ವಾರ್ಡಿಗೆ ಭರ್ತಿ ಮಾಡದೆ ನನ್ನ ಹೆಂಡತಿ ಸಾವಿಗೆ ಸರ್ಕಾರಿ ಆಸ್ಪತ್ರೆ ವೈಧ್ಯರು ಕಾರಣರಾಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

13 December 2011

Gulbarga Dist Reported Crimes

ದರೋಡೆ ಪ್ರಕರಣ:
ಚಿತ್ತಾಪೂರ ಠಾಣೆ :
ಶ್ರೀ ಹುಸೇನಿ ತಂದೆ ಮಹಿಬೂಬ ಮುಲ್ಲಾ ಸಾ ಇಂಗಳಗಿ ತಾ ಸಿಂದಗಿ ಜಿ ವಿಜಾಪುರ ರವರು ನಾನು ಮತ್ತು ನಮ್ಮ ಕ್ಲೀನರ ಶ್ರೀಶೈಲ ಇಬ್ಬರು ಕೂಡಿಕೊಂಡು ಸಿಮೆಂಟ ಲೋಡ ತರುವ ಕುರಿತು ಲಾರಿ ನಂ ಕೆಎ-01/ಎಎ6294 ನೇದ್ದನ್ನು ತೆಗೆದುಕೊಂಡು ವಿಜಾಪುರದಿಂದ ಮಳಖೇಡದ ರಾಜಶ್ರೀ ಸಿಮೆಂಟ ಕಂಪನಿಗೆ ಹೋಗುತ್ತಿದ್ದೆವು. ದಿನಾಂಕ 12/12/2011 ರಂದು ಮಧ್ಯರಾತ್ರಿ 1-30 ರ ಸುಮಾರಿಗೆ ದಂಡೋತಿ ಕ್ರಾಸದ ಹತ್ತಿರ ಹಾದು ಹೋಗುತ್ತಿರುವಾಗ ನಮ್ಮ ಲಾರಿಯ ಹಿಂದಿನಿಂದ ಒಬ್ಬ ಮೋಟರ ಸೈಕಲ ಸವಾರನು ಗಾಡಿಯ ಮೇಲೆ ಜೋರಾಗಿ ನಡೆಸುತ್ತಾ ಬಂದು ನಮ್ಮ ಲಾರಿಯ ಮುಂದುಗಡೆ ಬಂದು ನಿಂತು ತನ್ನ ಮೋಟರ ಸೈಕಲ ಬಂದ ಮಾಡಿ ಏ ಭೋಸಡಿ ಮಗನೆ ನಮಗೆ ಕಟ್ ಹೊಡೆದು ಮುಂದೆ ಬಂದಿಯಾ ಮಗನೆ ಅಂತ ಬೈಯುತ್ತಾ ಒಂದು ಕಲ್ಲಿನಿಂದ ನಮ್ಮ ಲಾರಿಯ ಲೈಟಿಗೆ ಹೊಡೆದನು. ಅದರಿಂದ ಬಲಗಡೆಯ ಒಂದು ಹೆಡ್ಲೈಟ ಒಡೆದು ಹೋಯಿತು. ಮತ್ತೆ ಅವನು ಏ ಮಕ್ಕಳೆ ಲಾರಿಯಿಂದ ಕೆಳಗೆ ಇಳಿಯುತ್ತೀರೋ ಇಲ್ಲವೋ ಇಲ್ಲದಿದ್ದರೆ ನಿಮ್ಮ ಪರಿಸ್ಥಿತಿ ನೆಟ್ಟಗಾಗಲಿಕ್ಕಿಲ್ಲಾ ಅಂತ ಹೆದರಿಸಿದನು. ಆಗ ನಾನು ಮತ್ತು ನಮ್ಮ ಕ್ಲೀನರ ಹೆದರಿ ಲಾರಿಯಿಂದ ಕೆಳಗೆ ಇಳಿದು ನಿಂತೆವು. ಅವನು ತನ್ನ ಮೋಟರ ಸೈಕಲನ್ನು ಸೈಡಿಗೆ ಹಚ್ಚಿ ನಮ್ಮ ಲಾರಿಯ ಮೇಲೆ ಹತ್ತಿ ಲಾರಿ ಚಾಲು ಮಾಡಿಕೊಂಡು ದಂಡೋತಿ ಕಡೆಗೆ ಹೋದನು. ನಾವಿಬ್ಬರೂ ನಮ್ಮ ಲಾರಿಯ ಲೈಟಿನ ಬೆಳಿಕಿನಲ್ಲಿ ಅವನಿಗೆ ನೋಡಿರುತ್ತೇವೆ. ಅವನು ಲಾರಿ ತೆಗೆದುಕೊಂಡು ಹೋದ ನಂತರ ಅಲ್ಲಿ ಇದ್ದ ಮೋಟರ ಸೈಕಲ ನೋಡಲಾಗಿ ಅದು ಹಿರೊಹೊಂಡಾ ಫ್ಯಾಶನ ಪ್ಲಸ್ ಹಳೆ ಗಾಡಿ ಇದ್ದು ಅದಕ್ಕೆ ಹಿಂದೆ ಮುಂದೆ ನಂಬರ ಪ್ಲೇಟ ಇದ್ದಿರಲಿಲ್ಲಾ. ನಾನು ಅವನಿಗೆ ಅಂಜಿಕೊಂಡು ರಾತ್ರಿ ವೇಳೆಯಲ್ಲಿ ಮಳಖೇಡಕ್ಕೆ ನಡೆದುಕೊಂಡು ಹೋದೆನು. ನಮ್ಮ ಲಾರಿ ಕ್ಲೀನರ ಎಲ್ಲಿ ಹೋಧನು ಗೊತ್ತಿಲ್ಲಾ ನಾನು ಮಳಖೇಡದಿಂದ ಸೇಡಂ ಮತ್ತು ಗುಲಬರ್ಗಾ, ಬಸವ ಕಲ್ಯಾಣದ ಕಡೆಗೆ ಹೋಗಿ ಲಾರಿ ನೋಡಲಾಗಿ ಎಲ್ಲಿಯೂ ಇದ್ದಿರಲಿಲ್ಲಾ. ಈ ಬಗ್ಗೆ ನಾನು ನಮ್ಮ ಮಾಲಿಕರಿಗೆ ಫೋನ ಮುಖಾಂತರ ವಿಜಾಪುರಕ್ಕೆ ಫೋನ ಮಾಡಿ ವಿಷಯ ತಿಳಿಸಿದ್ದು ಲಾರಿಯ ಕ್ಲೀನರ ಕೂಡಾ ಚಿತ್ತಾಪೂರಕ್ಕೆ ಬಂದಿರುತ್ತೆವೆ ನಮ್ಮ ಲಾರಿಯು 18 ಟೈರಿನದಿದ್ದು ಅದರ ಅಂದಾಜು ಕಿಮ್ಮತ್ತು 30,00000/-ರೂ ಆಗಬಹುದು ಅದನ್ನು ಪತ್ತೆ ಹಚ್ಚಿ ಅವನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗಿ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 120/2011 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಸಂಜೀವ ತಂದೆ ಸಿದ್ರಾಮ ಐರೆಡ್ಡಿ ಸಾ:ಮ.ನಂ.61 ಉಮಾ ಕಾಟೇಜ್ ಶಾಂತಿನಗರ ಗುಲಬರ್ಗಾ ರವರು ನಾನು ದಿನಾಂಕ:12.12.2011 ರಂದು ರಾತ್ರಿ 10.30 ಗಂಟೆಗೆ ತಿಮ್ಮಾಪೂರ ಸರ್ಕಲಗೆ ಕೆಲಸದ ನಿಮಿತ್ತ ಬಂದು ಸರ್ಕಲ್ ಹತ್ತಿರ ಕೆಎ-28 ಆರ್-0080 ಹಿರೋ ಹೋಂಡಾ ಮೋಟಾರ ಸೈಕಲ ನಿಲ್ಲಿಸಿ ಮರಳಿ ರಾತ್ರಿ 10.45 ಗಂಟೆಗೆ ನೋಡಲು ನಿಲ್ಲಿಸಿದ ಸ್ಥಲದಲ್ಲಿ ಮೋಟಾರ್ ಸೈಕಲ್ ಇರಲಿಲ್ಲಾ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ.211/2011 ಕಲಂ. 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :
ಶ್ರೀ ಬಲಭೀಮ ತಂದೆ ದವಲಪ್ಪಾ ಕರಪೆ ರವರು ನಾನು ಮತ್ತು ನನ್ನ ಕಾಕನ ಮಗನಾದ ಮಾಳಪ್ಪಾ ತಂದೆ ಲಕ್ಷಪ್ಪಾ ಕರ್ಪೆ ಇಬ್ಬರು ಕೂಡಿಕೊಂಡು ಹೇರೂರ (ಬಿ) ಗ್ರಾಮದ ಗುರುನಾಥ ಸುಂಟ್ಯಾಣ ಇವರ ಹೊಲದಲ್ಲಿ ಕುರಿ ಮೈಯಿಸುತ್ತಿದ್ದಾಗ ಬಾಜು ಹೊಲದಲ್ಲಿ ಕುರಿ ಮೈಯಿಸುತ್ತಿದ್ದ ಬೀರಪ್ಪಾ ಪುಕಳೆ, ಅಂಬಾಜಿ ಪಾವನೆ, ಮಾಯಪ್ಪಾ ಬೀಸ್ಯಾ, ಶಂಕರೆಪ್ಪಾ ಮಾವನೆ ಇವರೆಲ್ಲರೂ ಕೂಡಿ ನನ್ನ ಕಾಕನ ಮಗನಾದ ಮಾಳಪ್ಪಾ ಇತನಿಗೆ ಅವಾಚ್ಯವಾಗಿ ಬೈದು ಕುರಿಗಳನ್ನು ತೆಗೆದುಕೊಂಡು ನಮ್ಮ ಹಿಂದೆ ಯಾಕೆ ಬೆನ್ನು ಹತ್ತುತ್ತಿದ್ದಿರಿ ಅಂತ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 217/2011 ಕಲಂ 323, 326, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಜೂಜಾಟ ಪ್ರಕರಣ:
ಗ್ರಾಮೀಣ ಠಾಣೆ :
ದಿನಾಂಕ 12/12/2011 ರಂದು ಮದ್ಯಾಹ್ನ ಸುಮಾರಿಗೆ ರಾಮನಗರ ಬಡಾವಣೆಯ ಲಕ್ಷ್ಮಿ ಗುಡಿಯ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೇಟ ಜೂಜಾಟ ಆಡುತ್ತಿದ್ದಾರೆಂದು ಬಾತ್ಮಿ ಬಂದ ಮೇರೆಗೆ ಪಿ.ಎಸ.ಐ ರವರು ಮತ್ತು ಸಿಬ್ಬಂದಿ ಹಾಗೂ ಪಂಚರ ಸಮಕ್ಷಮ ದಾಳಿ ಮಾಡಿ ಇಸ್ಪೇಟ ಜೂಜಾಟ ಆಡುತ್ತಿದ್ದ ಸುಬಾಷ ತಂದೆ ಲಕ್ಷ್ಮಣ ಚೌಕಲೇ ಸಾ: ರಾಮನಗರ ಗುಲಬರ್ಗಾ ಇನ್ನೂ 6 ಜನರು ವಸಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 42,400/- ರೂ ಜೂಜಾಟದ ಎಲೆಗಳು ವಶಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 368/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಜೂಜಾಟ ಪ್ರಕರಣ:
ಗ್ರಾಮೀಣ ಠಾಣೆ :
ದಿನಾಂಕ 12/12/2011 ರಂದು ಸಾಯಂಕಾಲ ಇಂಡ್ರಸ್ಟ್ರಿಯಲ್‌ ಏರಿಯಾದ ವಿಜಯಕುಮಾರ ಚಿಂಚೋಳಿ ಇವರ ಹೊಲದಲ್ಲಿಯ ಗಿಡಿದ ಕೆಳಗೆ ಇಸ್ಪೇಟ ಜೂಜಾಟ ಆಡುತ್ತಿದ್ದಾರೆಂದು ಬಾತ್ಮಿ ಬಂದ ಮೇರೆಗೆ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಇಸ್ಪೇಟ ಜೂಜಾಟ ಆಡುತ್ತಿದ್ದ ಸುಬಾಷ ತಂದೆ ತುಳಜಪ್ಪ ಹಂಗರಗಿ ಸಾ ಕಪನೂರ ಇನ್ನೂ 4 ಜನ ಸಾ: ಕಪನೂರ ಗುಲ್ಬರ್ಗಾ ಜನರನ್ನು ಹಿಡಿದು ಅವರಿಂದ ನಗದು ಹಣ ಇಸ್ಪೇಟ ಜೂಜಾಟಕ್ಕೆ ಬಳಸಿದ ವಸ್ತುಗಳು ಹೀಗೆ ಒಟ್ಟು 47,350/- ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 369/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಮಳಖೇಡ:
ಶ್ರೀ ಮಲಕಣ್ಣ ತಂದೆ ದ್ಯಾವಣ್ಣ ತಳವಾರ ವಯಾ 23 ವರ್ಷ ಸಾ ಹಂಗನಳ್ಳಿ ತಾ ಸೇಡಂ ರವರು ನಾನು ಕೂಲಿ ಕೆಲಸ ಮಾಡಿಕೊಂಡು ರಾತ್ರಿ 8 ಗಂಟೆಗೆ ಸುಮಾರಿಗೆ ಮನೆಗೆ ಬರುತ್ತಿದ್ದಾಗ ನಮ್ಮ ಮನೆಯ ಮುಂದೆ ನಮ್ಮ ಕಾಕನಾದ ತಿಪ್ಪಣ್ಣ ಇತನಿಗೆ ನನ್ನ ಪಾಲಿಗೆ ಬರಬೇಕಾಗಿದ್ದ ಹೋಲದ ಪಾಲನ್ನು ನಮಗೆ ಕೋಡಿರಿ ಅಂತ ಕೇಳಿದೆ ತಿಪ್ಪಣ್ಣ ಕಾಕ ಇತನು ಮಗನೆ ನಿನ್ನ ಪಾಲಿಗೆ ಹೋಲ ಎಲ್ಲಿ ಬರುತ್ತೆ ಅಂತ ಹೇಳಿ ಕೈಯಿಂದ ಮತ್ತು ಅಲ್ಲೆ ಬಿದ್ದಿದ್ದ ಕಟ್ಟಿಗೆ ಯಿಂದ ನನ್ನ ತಲೆಗೆ ಹೋಡೆದು ರಕ್ತ ಗಾಯ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 105/2011 ಕಲಂ 323.324.504.506 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಹರಣ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ :
ಶ್ರೀ ರಾಮುಲು ತಂದೆ ವೆಂಕಪ್ಪ ಸಾ ಆಶ್ರಯ ಕಾಲೋನಿ ಗುಲಬರ್ಗಾ ರವರು ನನ್ನ ಮಗಳಾದ ಕು ಪ್ರಿಯಾಂಕ ವಯ : 16 ವರ್ಷ ಎಸ್.ಎಸ್.ಎಲ್.ಸಿ ಓದುತ್ತಿದ್ದು ದಿನಾಂಕ 21/11/2011 ರಂದು ತನ್ನ ಗೆಳತಿ ವಿದ್ಯಾನಗರದಲ್ಲಿದ್ದು ಅವಳು ಮತ್ತು ನಾನು ಟೈಪಿಂಗ ಕಲಿಯಲು ಹೆಸರು ನೊಂದಾಯಿಸಿಕೊಂಡು ಬರುತ್ತೆನೆಂದು ಮನೆಯಿಂದ ಮುಂಜಾನೆ 9 ಗಂಟೆಗೆ ವಿದ್ಯಾನಗರಕ್ಕೆ ಹೊಗಿದ್ದು ಮರಳಿ ಬಂದಿದ್ದಿಲ್ಲ ದಿನಾಂಕ09/12/2011 ರಂದು ನಮ್ಮ ಊರಾದ ವಂಟಿಚಿಂತಾದಿಂದ ಮೊಬೈಲ ಮುಖಾಂತರ ಮಾಹಿತಿ ಬಂದಿದ್ದೆನೆಂದರೆ ಮಗಳಾದ ಪ್ರಿಯಾಂಕ ಇವಳಿಗೆ ಶಂಕರ ತಂದೆ ಶಿವರಾಮ ವಿಭೂತಿ ಸಾ ಕೊಂಚಾವರಂ ಸದ್ಯ ಶಹಾಪೂರ ತಾಲೂಕಿನ ಸ್ಪಂದನಾ ಪೈನಾನ್ಸದಲ್ಲಿ ಕೆಲಸ ಮಾಡುವವನು ನನ್ನ ಮಗಳನ್ನು ಪುಸಲಾಯಿಸಿ ಗುಲಬರ್ಗಾ ಕೇಂದ್ರ ಬಸ್ ನಿಲ್ದಾಣದಿಂದ ಅಪಹರಣ ಮಾಡಿಕೊಂಡು ಹೊಗಿರುತ್ತಾನೆ ಸದರಿ ವಿಷಯ ಗೊತ್ತಾಗಿರುವದರಿಂದ ಹುಡುಗನ ತಂದೆಯಾದ ಶಿವರಾಮ ಮತ್ತು ತಾಯಿಯಾದ ವೆಂಕಮ್ಮ ಇವರಿಗೆ ವಿಚಾರಿಸಲಾಗಿ ಅವರು "ನಾವೆ ನನ್ನ ಮಗನಿಗೆ ನಿನ್ನ ಮಗಳನ್ನು ತೆಗೆದುಕೊಂಡು ಹೊಗು ಎನಾಗುತ್ತೆ ನೊಡಿಕೊಳ್ಳುತ್ತೆವೆಂದು ತಿಳಿಸಿದ್ದೆವೆ" ನೀವು ಎನ್ ಬೆಕಾದ್ರು ಮಾಡ್ಕೊಳ್ಳಿ ಎಂದು ತಿಳಿಸಿದರು ನಂತರ ನಾನು ಊರಿನ ಜನರನ್ನು ಕೂಡಿಸಿ ತಿಳಿಹೇಳಲು ಪ್ರಯತ್ನಿಸಿದ್ದು ಮತ್ತು ನನ್ನ ಮಗಳನ್ನು ನನ್ನ ತಾಬೆಗೆ ಕೊಡು ಅಂತಾ ಕೇಳಿದ್ದಕ್ಕೆ ನನ್ನ ವಿರುದ್ಧವೆ ಕೇಸು ಮಾಡುತ್ತೆವೆಂದು ಹೆದರಿಸಿರುತ್ತಾರೆ. ಆದ್ದರಿಂದ ನನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಪತ್ತೆ ಹಚ್ಚಿಕೊಡಲು ಮತ್ತು ಅಪಹರಣ ಮಾಡಿದ ಶಂಕರ ಆತನಿಗೆ ಪ್ರಚೊದನೆ ನೀಡಿದ ತಂದೆ ತಾಯಿಯ ವಿರುದ್ಧ ಕಾನೂನಿನ ಕ್ರಮ ಕೈಕೊಳ್ಳಬೆಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 133/2011 ಕಲಂ 366 (ಎ), 109, 506 ಸಂ. 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀಮತಿ ಸೋನಾಬಾಯಿ ಗಂಡ ಸುಭಾಸ ರಾಠೋಡ ಸಾ:ಮಡ್ಡಿ ನಂ.2 ರವರು ನನ್ನ ಮಗಳಾದ ಬಿನಾರ ಇವಳು ಕಿಶೋರ ಇತನ ಮನೆಯ ಹತ್ತಿರ ಬಂದಾಗ ಕೀಶೋಋ ಇತನು ಅವಾಚ್ಯ ಶಬ್ದಗಳಿಂದ ಬೈದಿದ್ದರಿಂದ ನಾನು ಹೋಗಿ ಯಾಕೆ ನನ್ನ ಮಗಳಿಗೆ ಸುಮ್ಮನೆ ಬೈಯುತ್ತಿ ಅಂತಾ ಕೇಳಿದ್ದಕ್ಕೆ ಸದರಿಯವನು ನನಗೆ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 193/2011 ಕಲಂ 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀಮತಿ ಅನುಸುಯಾ ಗಂಡ ಚಂದ್ರಕಾಂತ ನಂದಿ ಸಾ: ಲಕ್ಷ್ಮಿ ಗಂಜ್ ಶಹಾಬಾದರವರು ನಾನು ನನ್ನ ಗಂಡನಿಗೆ ಊಟ ಕೊಟ್ಟು ಕಿರಾಣಿ ಅಂಗಡಿಯಿಂದ ಮನೆಗೆ ಬಂದು ನನಗೆ ಅಯಾಸವಾಗಿದ್ದರಿಂದ ಮನಯಲ್ಲಿ ಮಂಚದ ಮೇಲೆ ಮಲಗಿದೇನು. ಸ್ವಲ್ಪ ಹೊತ್ತಿನ ನಂತರ ನನಗೆ ಎಚ್ಚರವಾದಾಗ ಮನೆಯಲ್ಲಿ ನನ್ನ ಎದುರಿಗೆ ಒಬ್ಬ ಅಪರಿಚಿತನು ಕೈಯಲ್ಲಿ ಚಾಕು ಹಿಡಿದುಕೊಂಡಿದ್ದನ್ನು ನಾನು ನೋಡಿ ಗಾಬರಿಯಾಗಿ ಚೀರಾಡಿದಾಗ ಸದರಿಯವನು ಕುತ್ತಿಗಿಗೆ ಚುಚ್ಚಿ ಸದರಿ ಚಾಕು ನನ್ನ ಕೈಯಲ್ಲಿ ಕೊಟ್ಟು ಓಡಿ ಹೋಗಿರುತ್ತಾನೆ ಅಪರಿಚಿತನು ಮುಖಕ್ಕೆ ಟಾವೆಲ ಕಟ್ಟಿಕೊಂಡು ಮೈಮೇಲೆ ನೀಲಿ ಶರ್ಟ, ನೀಲಿ ಜೀನ ಪ್ಯಾಂಟ್ ಧರಿಸಿದ್ದು ವಯಸ್ಸು ಅಂದಾಜು. 20-25 ಇರಬಹುದ. ನನಗೆ ಕುತ್ತಿಗೆಗೆ ರಕ್ತಗಾಯವಾಗಿರುತ್ತದೆ. ಸದರಿ ಅಪರಿಚಿತನು ನನ್ನ ಮನೆಯ ಬಾಗಿಲು ತೆರೆದಿದ್ದರಿಂದ ಕಳವು ಮಾಡಲು ಬಂದಿದ್ದು ನನಗೆ ನಿದ್ರೆ ಎಚ್ಚರವಾಗಿ ನೋಡುತ್ತಿರುವಾಗ ಯಾಕೆ ಎಂದು ಚಿರಾಡಿದಾಗ ಚಾಕುವಿನಿಂದ ನನ್ನ ಕುತ್ತಿಗಿಗೆ ಚುಚ್ಚಿ ರಕ್ತಗಾಯ ಪಡಿಸಿ ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 195/2011 ಕಲಂ:380, 382. 511 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

12 December 2011

GULBARGA DIST REPORTED CRIMES

ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಜಯಕುಮಾರ ತಂದೆ ರಾಮಚಂದ್ರ ಅಂಬೇಕರ್ ಸಾ ಮನೆ ನಂ 13517/1 ಪಿ.ಡಬ್ಲು.ಡಿ ಕ್ವಾರ್ಟರ್ಸ ಮುನೀರ ಅಪಾರ್ಟಟ ಮೆಂಟ ಪಿ.ಡಬ್ಲೂಡಿ ಕ್ವಾರ್ಟರ್ಸ ಪಿ.ಡಿ.ಎ ಕಾಲೇಜ ರೊಡ ಗುಲಬರ್ಗಾ ರವರು ನಾನು ದಿನಾಂಕ: 19.11.2011 ರಂದು ರಾತ್ರಿ 10.30 ಗಂಟೆಗೆ ಹೀರೊ ಹೊಂಡಾ ಗ್ಲಾಮರ್ ಕೆಎ 32 ಎಸ್ 6001 ಅಕಿ 25000/- ರೂ ನೇದ್ದು ನಿಲ್ಲಿಸಿ ಬೆಳಗ್ಗೆ ದಿ:20.12.2011 ರಂದು ನೋಡಲಾಗಿ ಮನೆಯ ಮುಂದೆ ನಿಲ್ಲಿಸಿದ ಮೊಟಾರ ಸೈಕಲ್ ಇರಲ್ಲಿಲ್ಲ ಯಾರೋ ಕಳ್ಳರೂ ಕಳವು ಮಾಡಿಕೋಂಡು ಹೋಗಿರುತ್ತಾರೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 210/11 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಮೋಟಾರ ಸೈಕಲ್ ಕಳ್ಳತನ ಮಾಡಿ ಸುಟ್ಟು ಹಾಕಿದ ಬಗ್ಗೆ :
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಶಂಕರ ಪವಾರ ತಂದೆ ಪರುಶುರಾಮ ಪವಾರ ಉ ನ್ಯಾಶನೆಲ್ ಇನ್ಸೂರೆನ್ಸ ಕಂಪನಿ ಲಿಮಿಟೆಡ್ ಸ್ಟೇಷನ ರೊಡ ಗುಲಬರ್ಗಾದಲ್ಲಿ ಆಡಳಿತಾಧಿಕಾರಿ ಗುಲಬರ್ಗಾ ಸಾ ಮನೆ ನಂ 86 ನಾಗ ಮಂದಿರ ಹತ್ತಿರ ಶಕ್ತಿನಗರ ಗುಲಬರ್ಗಾ ರವರು ನಾನು ದಿ: 07.12.2011 ರಂದು ಬೆಳಗ್ಗೆ 1000 ಗಂಟೆಗೆ ಕಛೇರಿ ಕೇಲಸಕ್ಕೆ ಬಂದಾಗ ತಮ್ಮ ದ್ವಿಚಕ್ರ ವಾಹನ ನಂ ಕೆ.ಎ 32 ವಿ 9249 ಟಿವಿಎಸ್ ಎಕ್ಸೆಲ್ ಹೆಚ್.ಡಿ ವಾಹನವನ್ನು ಕಛೇರಿ ಕಟ್ಟಡದ ಮುಂದಿನ ಸ್ಥಳದಲ್ಲಿ ನಿಲ್ಲಿಸಿ ಆಪೀಸಗೆ ಹೋಗಿ ಕರ್ತವ್ಯ ನಿರ್ವಹಿಸಿ ಸಾಯಂಕಾಲ 7.00 ಗಂಟೆಗೆ ಹೊರಗಡೆ ಬಂದು ತಮ್ಮ ದ್ವಿಚಕ್ರ ವಾಹನವನ್ನು ನೊಡಲಾಗಿ ಸ್ಥಳದಲ್ಲಿ ಇದ್ದಿರಲಿಲ್ಲಾ ಎಲ್ಲ ಕಡೆ ಹುಡಕಡಿದರು ಸಿಕ್ಕಿರುವುದಿಲ್ಲಾ ದಿ: 11.12.2011 ರಂದು ನಾನು ಬಂಜಾರ ಕಮುನಿಟಿ ಹಾಲ ಪಕ್ಕದ ರಸ್ತೆಯಲ್ಲಿ ಬರುತ್ತಿರುವಾಗ ರಸ್ತೆಯ ಪಕ್ಕದಲ್ಲಿ ಒಂದು ದ್ವಿ ಚಕ್ರ ವಾಹನ ಸುಟ್ಟಿದ್ದು ಕಂಡು ಬಂತು ಅಲ್ಲಿ ಹೋಗಿ ನೋಡಲು ಅದು ದ್ವಿ ಚಕ್ರ ವಾಹನ ತಮ್ಮದೆ ಅಂತಾ ಕಂಡು ಬಂದಿರುವದರಿಂದ ನನ್ನ ದ್ವಿಚಕ್ರ ವಾಹನ ಸಂಪೂರ್ಣವಾಗಿ ಸುಟ್ಟಿದ್ದು ನಂಬರ ಕಾಣಿಸುತ್ತಿಲ್ಲಾ ಕಾರಣ ದಿ: 07.12.2011 ರ ಬೆಳಗಿನ 1000 ಗಂಟೆಯಿಂದ ಯಾರೋ ದುಷ್ಕರ್ಮಿಗಳು ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಿ 11.12.2011 ರ ಬೆಳಗಿನ ಅವಧಿ ಒಳಗಾಗಿ ಯಾವೂದೊ ದುರುದ್ದೇಶದಿಂದ ಸುಟ್ಟು ಹಾಕಿರುತ್ತಾರೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ 208/11 ಕಲಂ 435 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ
: ಶ್ರೀ ಸಂತೋಷ ತಂದೆ ಅಂಬಣ್ಣ ಅಸಂಗನಾಳ ಸಾ; ವಿಜಯ ನಗರ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 10-12-2011 ರಂದು ಸಾಯಂಕಾಲ 7-30 ಗಂಟೆಗೆ ನಗರದ ಶಹಾಬಜಾರ ನಾಕಾ ದಿಂದ ಆಳಂದ ಚೆಕ್ಕಪೊಸ್ಟ ಮುಖ್ಯ ರಸ್ತೆಯಲ್ಲಿ ಬರುವ ವಿಜಯ ನಗರ ಕಾಲೋನಿ ಕ್ರಾಸ್ ರೋಡಿನ ಮೇಲೆ ಹೊರಟಾಗ ಕಾರ ನಂ:ಕೆಎ 32 ಎಮ್ 6652 ನೇದ್ದವನು ಆಳಂದ ಜೆಕ್ಕಪೊಸ್ಟ ಕಡೆಯಿಂದ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸೈಕಲ್ ಗೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 158/11 ಕಲಂ: 279 .337 ಐ.ಪಿ.ಸಿ ಸಂ: 187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಠಾಣೆ
: ದಿನಾಂಕ:11/12/2011 ರಂದು ಸಾಯಂಕಾಲ 5.30 ಪಿಎಂಕ್ಕೆ ಆರೋಪಿತರು ಖುರ್ಷಿದ ಮೊಹಲ್ಲಾ ಶಹಾಬಾದದಲ್ಲಿ ಇಬ್ರಾಹಿಂಸಾಬ ಚೌದರಿ ಇವರ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಕ್ಯಾರಂ ಬೋರ್ಡ ಆಟ ಆಡುತ್ತಿದ್ದಾರೆ ಅಂತಾ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಶ್ರೀ ಶರಣಪ್ಪಾ ಹಿಪ್ಪರಗಿ ಪಿಐ ಶಹಾಬಾದ ನಗರ ಠಾಣೆ ರವರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿದ್ದು ಅವರಿಂದ ಒಟ್ಟು 2225/-ರೂ ನಗದು ಹಣ ಮತ್ತು 3 ಕ್ಯಾರಂ ಬೋರ್ಡ ಕ್ವಾಯೀನ್ಸಗಳ ಸಮೇತ ಅ.ಕಿ.6060/ರೂ ನೇದ್ದವುಗಳನ್ನು ಪಂಚರ ಸಮಕ್ಷಮ ಸರ್ಕಾರಿ ತರ್ಫೆ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 192/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ
:
ಆನಂದ ತಂದೆ ಬಸವರಾಜ ಬಿರಾದಾರ ಸಾ: ಪೂಜಾರಿ ಮಠದ ಹತ್ತಿರ ಭವಾನಿ ನಗರ ಗುಲಬರ್ಗಾ ರವರು ದಿನಾಂಕ 11-12-11 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ತಾಜ ಸುಲ್ತಾನಪೂರದಲ್ಲಿರುವ ತನ್ನ ಕಾಕಾ ಕಲ್ಯಾಣರಾವ ಇವರಿಗೆ ಭೇಟ್ಟಿಯಾಗಿ ಸೈಕಲ ಮೇಲೆ ಮನೆಯ ಕಡೆ ಮಧ್ಯಾಹ್ನ ಕಾಕಡೆ ಚೌಕ ರಿಂಗ ರೋಡದಿಂದ ಹೊರಟಾಗ ಹಿಂದಿನಿಂದ ಅಂದರೆ ಅಳಂದ ಚೆಕ್ಕ ಪೋಸ್ಟ ಕಡೆಯಿಂದ ಕಾರ ಕೆಎ 29 ಎಂ 316 ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಹಾಗೂ ಅಡ್ಡಾ ತಿಡ್ಡಿ ನಡೆಸುತ್ತಾ ತನ್ನ ಸೈಡಿಗೆ ಹೋಗದೇ ಕಚ್ಚಾ ರೋಡ ಬದಿ ಹೊರಟ ನನ್ನ ಫಿರ್ಯಾದಿ ಸೈಕಲಿಗೆ ವೇಗದಲ್ಲಿ ಡಿಕ್ಕಿ ಹೊಡೆದು ಹಾಗೇ ಹುಮನಾಬಾದ ರಿಂಗ ರೋಡ ಕಡೆ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:366/2011 ಕಲಂ 279, 337 ಐಪಿಸಿ ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ದಿನಾಂಕ 11-12-11 ರಂದು 4-30 ಪಿ.ಎಂ. ಸುಮಾರಿಗೆ ಹೀರಾಪೂರ ಗ್ರಾಮದ ಬಸವರಾಜ ಇವರ ಹೊಲದ ಬಂದಾರಿಯ ಬೆವಿನ ಗಿಡದ ಕೆಳಗೆ ಬಾಹರ ಇಸ್ಪೇಟ ಜೂಜಾಟ ಆಡುತ್ತಿರುವ ಬಗ್ಗೆ ಭಾತ್ಮಿ ಬಂದ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಮುನೀರ ತಂದೆ ನಾಸಿರ ಉಲ್ಲಾ , ಮಾಮನ ರಶೀದ ತಂದೆ ಹಾರೂಣ ರಶೀದ ,ಮುಜಾಹಿದೊದ್ದಿನ ತಂದೆ ಮೈನೊದ್ದಿನ, ಅಜರ ತಂದೆ ಇಕ್ಬಾಲ , ಮಹಮ್ಮದ ಹುಸೇನ ತಂದೆ ಸಾಬರ ಹುಸೇನ ಸಾ;ಎಲ್ಲರೂ ಮಿಜಬಾ ನಗರ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟದಲ್ಲಿ ತೊಡಗಿಸಿದ ಹಣ. 1940/- ರೂ ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 367/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

11 December 2011

GULBARGA DIST REPORTED CRIMES

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ : ಶ್ರೀ ರಾಹುಲ್ ತಂದೆ ಗುರುಶಾಂತ ಪಟ್ಟೆದಾರ ಸಾ: ಮನೆ ನಂ. ಬಿ-16 ಎಂ.ಎಸ್.ಕೆ ಮಿಲ್ ಕ್ವಾಟರ್ಸ ಗುಲಬರ್ಗಾ ರವರು ನಾನು ನನ್ನ ಅಣ್ಣನ ಮೋಟರ ಸೈಕಲ್ ನಂ:ಕೆಎ-04, ಇಬಿ-8377 ಯಮಹ ಆರ್.ಎಕ್ಸ್ ದ್ವಿಚಕ್ದ ವಾಹನವನ್ನು ತೆಗೆದುಕೊಂಡು ನನ್ನ ಗೆಳೆಯನಾದ ಸಚಿನ ಇವರ ತಂದೆ ತಿರಿಕೊಂಡಿದ್ದರಿಂದ ಅಂತಿಮ ಸಂಸ್ಕಾರಕ್ಕಾಗಿ ಸ್ವಂತ ಗ್ರಾಮಕ್ಕೆಹೋಗಿ ಅಂತಿಮ ಸಂಸ್ಕಾರ ಮಗಿಸಿಕೊಂಡು ರಾತ್ರಿ 11:50 ಗಂಟೆ ಸುಮಾರಿಗೆ ಗುಲಬರ್ಗಾಕ್ಕೆ ಬಂದು ಮನೆಯ ಕಂಪೌಂಡದಲ್ಲಿ ಮೋಟರ ಸೈಕಲ ನಿಲ್ಲಿಸಿ ಮಲಗಿಕೊಂಡಿದ್ದು ಬೆಳಿಗ್ಗೆ 6:00 ಗಂಟೆಗೆ ಮೋಟರ ಸೈಕಲ ನೋಡಲಾಗಿ ಯಾರೋ ಕಳ್ಳರು ಮೋಟರ ಸೈಕಲ್ ನಂ:ಕೆಎ-04, ಇಬಿ-8377 ಯಮಹ ಆರ್.ಎಕ್ಸ್ ಮೋಡಲ್-2002, ಇಂಜಿನ ನಂ:47L516668 ಚೆಸ್ಸಿ ನಂ: 01L47L516668 ಇದರ ಅಂದಾಜು ಕಿಮ್ಮತ್ತು 25,000/-ಇದ್ದು ಈ ವಾಹನವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:132/2011 ಕಲಂ:379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಸುರಕ್ಷತೆ ಇಲ್ಲದೇ ಕಾರ್ಮಿಕನ ಸಾವು:
ಗ್ರಾಮೀಣ ಠಾಣೆ ಗುಲಬರ್ಗಾ: ಶ್ರೀ ಬಸವರಾಜ ತಂದೆ ಶಂಕ್ರೆಪ್ಪಾ ಕಂಬಾರ ವಯ;45 ವರ್ಷ ಜ್ಯಾತಿ;ಕಂಬಾರ ಉ; ಕಂಬಾರಿಕೆ ಕೆಲಸ ಸಾ;ಮನ್ನಳ್ಳಿ ಗ್ರಾಮ ತಾ;ಜಿ;ಬೀದರ ಇವರ ಕೊಟ್ಟ ಹೇಳಿಕೆ ಫಿರ್ಯಾದಿ ಸಾರಂಶ ಏನೆಂದರೆ ನನ್ನ ಮಗ ರೇವಣಸಿದ್ದ @ ಸಿದ್ದು ಇತನು ಕಳೆದ 2 ತಿಂಗಳಿಂದ ಗುಲಬರ್ಗಾದ ತಾವರಗೇರಾ ಕ್ರಾಸ ಹತ್ತಿರ ಇರುವ ಬಜಾಜ ಅರ್ಥ ಫ್ಯಾಕ್ಟರಿಯಲ್ಲಿ ವೆಲ್ಡಿಂಗ ಕೆಲಸ ಮಾಡುತಿದ್ದನ್ನು. ನನ್ನ ಮಗ ರೇವಣಸಿದ್ದ @ ಸಿದ್ದು ಇತನ ಸಂಗಡ ಕೆಲಸ ಮಾಡುತ್ತಿದ್ದ ನರಸಪ್ಪಾ ಕರಕನಳ್ಳಿ ಎಂಬುವವನು ತಿಳಿಸಿದ್ದೆನೆಂದರೆ, ದಿನಾಂಕ 10-12-2011 ರಂದು 3-30 ಪಿ.ಎಂ.ದ ಸುಮಾರಿಗೆ ನಾನು ಮತ್ತು ಗುಂಡಪ್ಪಾ ಸಿಂಗೆ ,ದಶರಥ ತಾವರಗೇರಾ , ಮೂರು ಜನರು ಕೆಳಗೆ ಕೆಲಸ ಮಾಡುತ್ತಿದ್ದೇವು. ಆಗ ರೇವಣಸಿದ್ದ @ಸಿದ್ದು ಹಾಗೂ ಅಕ್ರಮ ಇವರು ಧೂಳಿನ ಹೊಗೆ ಹೋರಗೆ ಹಾಕುವ ಚಿಮಣಿ ಮಾಡುವ ಕುರಿತು ಛತ್ತಿನ ಮೇಲೆ ವೆಲ್ಡಿಂಗ ಮಾಡುತ್ತಿದ್ದರು, ಕೆಲಸ ಮಾಡುವಾಗ ಸರಿಯಾದ ಮುಂಜಾಗೃತಾ ರಕ್ಷಣಾ ಸಾಮಗ್ರಿಗಳಿಲ್ಲದೆ ಛತ್ತಿನ ಮೇಲಿಂದ ಕೆಳಗೆ ಬಿದ್ದಿದ್ದು ಉಪಚಾರ ಕುರಿತು ಬಸವೇಶ್ವರ ಆಸ್ಪತ್ತೆಗೆ ಸೇರಿಕೆ ಮಾಡಿದಾಗ ಗುಣ ಮುಖನಾಗದೆ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ. ಬಜಾಜ ಅರ್ಥ ಫ್ಯಾಕ್ಟರಿಯವರ ಮೇಲೆ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 365/11 ಕಲಂ. 304 (ಎ) ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಮಟಕಾ ಪ್ರಕರಣ:
ಆಳಂದ ಪೊಲೀಸ ಠಾಣೆ: ಆಳಂದ ಪಟ್ಟಣದ ಬಸ್ಸನಿಲ್ದಾಣ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು 1 ರೂ ಗೆ 80 ರೂಪಾಯಿ ಗೆಲ್ಲಿರಿ ಮಟಕಾ ಚೀಟಿ ಬರೆಯಿಸಿರಿ ಅಂತಾ ಜನರಿಗೆ ಮೋಸ ಮಾಡುವ ಉದ್ದೇಶದಿಂದ ಅವರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ದೊರೆತೆ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂಧಿಯವರು ಹೋಗಿ ದಾಳಿ ಮಾಡಿ ಅವರ ಹೆಸರು ವಿಚಾರಿಸಲಾಗಿ ನೂರ ಅಹ್ಮದ ತಂದೆ ಅಹ್ಮದ ಸಾಬ ಭಗಾವಾನ್ ವ:- 46 ವರ್ಷ ಜಾ:- ಮುಸ್ಲಿಂ ಉ:- ಹಣ್ಣಿನ ವ್ಯಾಪಾರ ಸಾ:- ರೇವಣಸಿದ್ದೇಶ್ವರ ಕಾಲೋನಿ ಆಳಂದ ಅಂತಾ ಹೇಳಿದ್ದು ಆತನ ಹತ್ತಿರ ನಗದು 90/ ರೂ ಒಂದು ಬಾಲ ಪೇನ ಅಂಕಿ ಸಂಖ್ಯೆ ಉಳ್ಳ 1 ಮಟಕಾ ಚೀಟಿ ದೊರೆತ್ತಿದ್ದು ಇನ್ನೊಬ್ಬರ ಹೆಸರು ವಿಚಾರಿಸಲಾಗಿ ಅಲ್ಲಿ ಸಾಬ ತಂದೆ ಅಹ್ಮದ ಸಾಬ ಭಗಾವಾನ್ ವ:- 52 ವರ್ಷ ಜಾ:- ಮುಸ್ಲಿಂ ಉ:- ಹಣ್ಣಿನ ವ್ಯಾಪಾರಸಾ: ಖಾಜಿ ಮೋಹಲ ಆಳಂದ ಅಂತಾ ತಿಳಿಸಿದ್ದು ಸದರಿಯವನ ಹತ್ತಿರ ನಗದು 70/ ರೂ ಒಂದು ಬಾಲ ಪೇನ, ಅಂಕಿ ಸಂಖ್ಯೆ ಉಳ್ಳ 1 ಮಟಕಾ ಚೀಟಿ ದೊರೆತ್ತಿದ್ದರಿಂದ ಠಾಣೆ ಗುನ್ನೆ ನಂ: 284/2011 ಕಲಂ 420 ಐಪಿಸಿ ಮತ್ತು 78 (3) ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಪ್ರಕರಣ:
ಆಳಂದ ಪೊಲೀಸ ಠಾಣೆ: ಶ್ರೀ ಪಂಡಿತ ತಂದೆ ಮಲ್ಕಣ್ಣ ಶೇರಿಕಾರ ಉ: ಸಮಾಜಸೇವಕ ಸಾ ಸುಲ್ತಾನಪೂರ ಗಲ್ಲಿ ಆಳಂದ ರವರು ನಾನು ದಿನಾಂಕ 10/12/2011 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ ಹೊಲದಿಂದ ಮರಳಿ ಮನೆಗೆ ಬರುವಾಗ ಆಳಂದ ತಡಕಲ ರೋಡಿನ ಆಳಂದ ಹತ್ತಿರವಿರುವ ದಬದಬಿ ಹಳ್ಳದ ಸೇತುವೆ ಮೇಲೆ ಚೆಕ್ ಡ್ಯಾಮ ನೀರಿನ ಮೇಲೆ ಒಂದು ಕೂಸು ತೇಲಿದ ಬಗ್ಗೆ ಜನರು ಅಂದಾಡುವದನ್ನು ಕೇಳಿ ನಾನು ಹೋಗಿ ನೋಡಲಾಗಿ ಮೃತಪಟ್ಟ ಅಂದಾಜು 7/8 ತಿಂಗಳದ ಕೂಸು ಇದ್ದು ಯಾರೋ ಕೂಸಿನ ಜನನವನ್ನು ಮುಚ್ಚಿಡುವ ಸಂಬಂಧ ಆ ಕೂಸನ್ನು ಚಕ್ ಡ್ಯಾಮಿನ ನೀರಿನಲ್ಲಿ ಎರಡು ಮೂರು ದಿವಸಗಳ ಹಿಂದೆ ಎಸೆದು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 285/2011 ಕಲಂ 318 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

10 December 2011

Gulbarga Dist Reported Crimes

ಚ್ಯೋಟ್ಯಾ @ ಆನಂದ @ ಪ್ರಿಯದರ್ಶನ ಪರಾರಿಯಾಗಲು ಪ್ರಯತ್ನ :
ಸ್ಟೇಷನ ಬಜಾರ ಪೊಲೀಸ ಠಾಣೆ:
ಸರ್ಕಾರಿ ತರ್ಪೆಯಾಗಿ ಶ್ರೀ ಜೆ.ಹೆಚ್ ಇನಾಮದಾರ ಪಿಐ ಸ್ಟೇಷನ ಬಜಾರ ಪೊಲೀಸ ಠಾಣೆ ಗುಲಬರ್ಗಾರವರು ಯು.ಟಿ.ಪಿ ನಂ 10659 (ಜೈಲು ಖೈದಿ) ಚೋಟ್ಯಾ @ ಆನಂದ @ ಪ್ರಿಯದರ್ಶನ ತಂದೆ ವಸಂತರಾವ ಗಾಯಕವಾಡ ಸಾ: ಪಂಚಶೀಲ ನಗರ ಗುಲಬರ್ಗಾ ಇತನನ್ನು ದಿನಾಂಕ 09/12/2011 ರಂದು ಸ್ಟೇಷನ ಬಜಾರ ಪೊಲೀಸ ಠಾಣೆ ಗುನ್ನೆ ನಂ 79/11 ಕಲಂ 394 ಐಪಿಸಿ ಪ್ರಕರಣದ ತನಿಖೆಗಾಗಿ ನ್ಯಾಯಾಂಗ ಬಂಧನದಿಂದ ಪೊಲೀಸ ಅಭಿರಕ್ಷೆಗೆ ಪಡೆದು ತನಿಖೆ ಪೂರೈಸಿದ ನಂತರ ಆತನನ್ನು 09/12/2011 ರಂದು ಸಂಜೆ 6-15 ಪಿ.ಎಂಕ್ಕೆ ಮಾನ್ಯ ನ್ಯಾಯಾಧಿಶರ ಮುಂದೆ ಹಾಜರು ಪಡಿಸುವಾಗ ಕರ್ತವ್ಯದಲ್ಲಿದ್ದ ಪೊಲೀಸರನ್ನು ನೂಕಿ ಕೊಟ್ಟು ಮಾನ್ಯ ನ್ಯಾಯಾಧೀಶರ ವಸತಿ ಗೃಹ ಮೊದಲನೆ ಮಹಡಿಯಿಂದ ಕೆಳಗೆ ಹಾರಿ ಓಡಿ ಹೋಗಿದ್ದು ಇವನನ್ನು ಹಿಂಬಾಲಿಸಿ ವೆಂಕಟೇಶ ನಗರದಲ್ಲಿ ಹಿಡಿದಿದ್ದು ಕಾರಣ ಇತನ ಕಾಲಿಗೆ ಹಾಗೂ ತಲೆಗೆ ರಕ್ತಗಾಯವಾಗಿದ್ದು ಇರುತ್ತದೆ. ಈ ಆಪಾದಿತನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು ಇರುತ್ತದೆ. ಇತನ ಮೇಲೆ ಠಾಣೆ ಗುನ್ನೆ ನಂ 207/11 ಕಲಂ 332, 224 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಕೊಲೆ ಪ್ರಯತ್ನ ಪ್ರಕರಣ:
ಕೊಂಚಾವರಂ ಠಾಣೆ :
ಶ್ರೀಮತಿ ಪೂಲಮ್ಮ ಗಂಡ ಯಶೆಪ್ಪಾ ಬಂಡಮೆದಪಲ್ಲಿ ಸಾ ಶಿವರೆಡ್ಡಿ ತಾ ಚಿಂಚೋಳಿ ರವರು ನಾನು ಮತ್ತು ನನ್ನ ತಾಯಿ ಮದುವೆಗೆಂದು ದಿನಾಂಕ: 09-12-2011 ರಂದು ಸಾಯಂಕಾಲ್ 5-30 ಗಂಟೆಗೆ ಜಹಿರಬಾದಕ್ಕೆ ಅಟೋದಲ್ಲಿ ಹೋಗುತ್ತಿರುವಾಗ ಸುರೇಂದ್ರ ಮತ್ತು ರವಿ ಇವರು ದ್ವಿಚಕ್ರ ವಾಹನದಲ್ಲಿ ಬಂದು ನಮ್ಮನ್ನು ನಿಲ್ಲಿಸಿ ಅವಮಾನ ಮಾಡಿ ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದಠಾಣೆ ಗುನ್ನೆ ನಂ: 46/2011 ಕಲಂ 341, 354, 504, 307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

09 December 2011

GULBARGA DIST REPORTED CRIME

ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಠಾಣೆ : ಶ್ರೀಮತಿ.ಶಶಿಕಲಾ ಮ.ಹೆಚ್.ಸಿ ಬ್ರಹ್ಮಪೂರ ಠಾಣೆರವರು ವರದಿ ಸಲ್ಲಿಸಿದ್ದ ಸಾರಾಂಶವೆನೆಂದರೆ ದಿನಾಂಕ: 09/12/11 ರಂದು ಮುಂಜಾನೆ ನಾನು ಮತ್ತು ಮಹಾಂತೇಶ ಸಿ.ಪಿ.ಸಿ ರವರು ಕೂಡಿಕೊಂಡು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ಹೋದಾಗ ನಗರದ ಸಿ.ಟಿ ಬಸ್ಸ ನಿಲ್ದಾಣದ ಹತ್ತಿರ ಮಧ್ಯಾಹ್ನ 1-00 ಗಂಟೆಗೆ ಹೋದಾಗ ಅಲ್ಲಿ ಒಬ್ಬ ಹೆಣ್ಣು ಮಗಳು ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವಳನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಮೊದ ಮೊದಲು ತೊದಲುತ್ತಾ ನಂತರ ತಮ್ಮ ಹೆಸರು ಗೋದುಬಾಯಿ ಗಂಡ ಬಂಗಾರಿ, ಸಾ ಬಾಪೂನಗರ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡದೇ ಇದ್ದಾಗ ಸ್ಥಳದಲ್ಲಿಯೇ ಹಾಗೆಯೇ ಬಿಟ್ಟರೆ ಯಾವುದಾರೊಂದು ಸ್ವತ್ತಿನ ಅಪರಾದ ಮಾಡಬಹುದೆಮದು ಬಲವಾದ ನಂಬಿಕೆಯಿಂದ ಮುಂಜಾಗ್ರತೆ ಕ್ರಮದ ಅಡಿಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:

ಫರಹತಾಬಾದ ಠಾಣೆ : ಶ್ರೀ ಲಕ್ಕಪ್ಪಾ ತಂದೆ ಭಿಮರಾಯ ಅಚಗೇರಿ ಸಾ: ಹಸನಾಪೂರ ರವರು ನಾನು ಮತ್ತು ಬಾಬು ಮುಮ್ಮಿನ ಇಬ್ಬರು ಕೂಡಿಕೊಂಡು ಹೊಲದಿಂದ ಎತ್ತುಗಳನ್ನು ಹೊಡೆದುಕೊಂಡು ಮನೆಗೆ ಬರುತ್ತಿದ್ದಾಗ ಧರ್ಮರಾವ ತಂದೆ ಚಿಟ್ಟಯ್ಯಾ , ದೇವನಗೌಡ ತಂದೆ ಹಣಮಂತರಾಯಗೌಡ, ಮಹಿಬೂಬ, ಅಲ್ಲಾವುದ್ದಿನ, ಶ್ಯಾಮ ಪ್ರಸಾದ ವಾಸರೇಡ್ಡಿ ತಂದೆ ಅಪ್ಪಯ್ಯಾ ಇವರು ಕೂಡಿ ಬಂದವರೆ ಧರ್ಮರಾಯ ಇತನು ನನಗೆ ನಿಲ್ಲಿಸಿ ಅವಾಚ್ಯವಾಗಿ ಬೈದು ನಮ್ಮ ಹೊಲದಲ್ಲಿನ ಗಳ್ಯಾ ಹೊಡೆಯುವ ದಿಂಡು ಯಾಕೆ ತಗೆದುಕೊಂಡು ಹೋಗಿದಿ ಅಂತಾ ಕಲ್ಲಿನಿಂದ ತಲೆಗೆ ಹೋಡೆದು ರಕ್ತಗಾಯ ಮಾಡಿದನು ನನ್ನ ಸಂಗಡ ಇದ್ದ ಬಾಬು ಮುಮ್ಮಿನ ಇತನು ಬಿಡಿಸಲು ಬಂದರೆ ಅವನಿಗೆ ದ್ಯಾವನಗೌಡ ಇತನು ತನ್ನ ಕೈಯಲ್ಲಿದ ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 213/2011 ಕಲಂ 143, 147, 323, 324, 504, 506 ಸಂ: 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:

ಫರಹತಾಬಾದ ಠಾಣೆ: ಶ್ರೀ ಉಸ್ಮಾನ ತಂದೆ ಇಮಾಮ ಸಾಬ ನಾಯ್ಕೊಡಿ ವಯ: 36 ವರ್ಷ ಉ: ಎಸ್.ಆರ್.ಕೆ. ಕಂಪನಿಯಲ್ಲಿ ಡ್ರೈವರ ಜಾ: ಮುಸ್ಲಿಂ ಸಾ: ನೇಲೊಗಿ ರವರು ನಾನು ಎಸ್.ಆರ್.ಕೆ ಕಂಪನಿಯ ಜೀಪ ಚಲಾಯಿಸಿಕೊಂಡು ಗುಲಬರ್ಗಾದಿಂದ ಮಾಚನಾಳ ತಾಂಡಕ್ಕೆ ಬರುತ್ತಿದ್ದಾಗ ಮಾಚನಾಳ ತಾಂಡದ ಹತ್ತಿರ ರಸ್ತೆಯ ಮೇಲೆ ನನ್ನ ವಾಹನದ ಮುಂದೆ ತಾಂಡಾದ ಜನರದ ಸುಭಾಷ, ಚಂದು, ಶಂಕರ, ಬಾಬು ಮತ್ತು ಸಂಗಡ ಇಬ್ಬರು ಇವರೆಲ್ಲರೂ ಕೂಡಿ ಬಂದು ನನ್ನ ವಾಹನ ನಿಲ್ಲಿಸಿದಾಗ ನಾನು ವಾಹನ ಯಾಕೆ ನಿಲ್ಲಿಸುವದಕ್ಕೆ ಹೇಳಿದ್ದಿರಿ ಅಂತ ಅವಾಚ್ಯವಾಗಿ ಬೈದು ಶಂಕರ ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದನು. ಇನ್ನೂಳಿದವರು ಸಹಕರಿಸರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 215/2011 ಕಲಂ 143, 147, 341, 323, 504, 506 ಸಂ: 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮಟಕಾ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ. ಶ್ರೀ ಸರ್ಕಾರಿ ತರ್ಪೆಯಾಗಿ ಶ್ರೀ ಭೂಷಣ ಜಿ ಬೊರಸೆ ಐಪಿಸ್ ಸಹಾಯಕ ಅಧೀಕ್ಷಕರು {} ಉಪ ವಿಭಾಗ ಗುಲಬರ್ಗಾ ರವರು ಸ್ಟೇಷನ ಬಜಾರ ಠಾಣಾ ವ್ಯಾಪ್ತಿಯಲ್ಲಿ ರಾಂಪುರೆ ವಕೀಲರ ಮನೆ ಹತ್ತಿರ ಒಂದು ಕೋಣೆಯಲ್ಲಿ ಎರಡು ಮೂರು ಜನರು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಬರೆದುಕೊಳ್ಳತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಸ್ಟೇಶನ ಬಜರ ಠಾಣೆಯ ಪಿ.ಐ ರವರಾದ ಜೆ.ಎಚ್. ಇನಾಮದಾರ ಹಾಗೂ ಸಿಬ್ಬಂದಿಯವರಾದ ಭಿಮರಾಯ ಎಚ್.ಸಿ, ಪಂಚಾಕ್ಷರಿ ಸಿಪಿಸಿ, (ಎ) ಉಪ-ವಿಭಾಗ ಕಛೇರಿಯ ಅಪರಾಧ ಪತ್ತೆ ದಳದ ಸಿಬ್ಬಂದಿಯಾದ ರಫಿಕ ಸಿಪಿಸಿ, ಶಶಿಕಾಂತ ರಾಠೋಡ, ಶಿವರಾಜ ಸಿಪಿಸಿ, ಶಿವಪ್ರಕಾಶ ಸಿಪಿಸಿ, ದೇವೆಂದ್ರ ಸಿಪಿಸಿ ರವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ನಿರತರಾದ ವಿಜಯಕುಮಾರ ತಂದೆ ಶರಣಬಸಪ್ಪ ಮುಗಳಿ ವ: 28 ವರ್ಷ ಉ: ವ್ಯಾಪಾರ ಸಾ: ಮುಗಳಿ ತಾ: ಅಕ್ಕಲಕೋಟ ಹಾ||ವ ಗುಲಬರ್ಗಾ , ಅನಿಲ ತಂದೆ ಶಾಂತಪ್ಪ ಕಲಶೇಟ್ಟಿ ವ: 21 ಉ: ಕೂಲಿ ಸಾ: ಜೀವಣಗಿ ಹಾ/ವ ಆಳಂದ ಕಾಲೋನಿ ಗುಲಬರ್ಗಾ ಮತ್ತು ಹಜರತಸಾಬ ತಂದೆ ಹುಸೇನ ಸಾಬ ಮುಜಾವರ ವ: 30 ಉ: ಸೈಕಲ್ ಅಂಗಡಿ ಸಾ: ಉದನೂರ ತಾ: ಗುಲಬರ್ಗಾ ಇವರುಗಳು ವಶಕ್ಕೆ ತೆಗೆದುಕೊಂಡು ಮಟಕಾಕ್ಕೆ ಸಂಬಂದಿಸಿದ ನಗದು ಹಣ 73,165/- ರೂ ಹಾಗೂ 3 ಮೊಬೈಲ್ ಮತ್ತು ಮಟಕಾ ಚೀಟಿಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ 206/11 ಕಲಂ 78(3) ಕೆ.ಪಿ ಆಕ್ಟ ಮತ್ತು 420 ಐಪಿಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮೋಟಾರ ಸೈಕಲ ವಶ :

ರೋಜಾ ಠಾಣೆ: ದಿನಾಂಕ: 26-11-2011 ರಂದು ಬೆಳಿಗ್ಗೆ 9-30 ಗಂಟೆಗೆ ರೋಜಾ ಠಾಣೆಯ ವ್ಯಾಪ್ತಿಯಲ್ಲಿರುವ ಖಾಜಾ ಕಾಲನಿ ಟೇನ್ನಿಫಲ್ಸ ಸ್ಕೂಲ ಹತ್ತಿರ ಒಬ್ಬ ಮನುಷ್ಯ ಮಹ್ಮದ ಇರ್ಷಾದ ತಂದೆ ಮಹ್ಮದ ಜಾವೀದ ವಯಾ: 28 ವರ್ಷ ಉ: ಕೆ.ಇ.ಬಿ.ಯಲ್ಲಿ ತಾತ್ಕಾಲಿಕ ಲೈನ ಮೇನ ಕೆಲಸ ಸಾ : ಬಸವಣ್ಣ ದೇವರ ಗುಡಿ ಹತ್ತಿರ ಹೀರಾಪುರ ಗುಲಬರ್ಗಾ ಎಂಬುವನು ಒಂದು ಹೀರೊ ಹೊಂಡಾ ಸ್ಲೇಂಡರ್ ನಂ: ಕೆ.ಎ-33 ಇ-7157 ಕೆಂಪು ಬಣ್ಣದ್ದು ಇಂಜಿನ ನಂಬರ್:02L18623846 ಮತ್ತು ಚಸ್ಸಿ ನಂಬರ್ 02L20F23452 ನೇದ್ದ ಅ.ಕಿ 20,000/- ಬೆಲೆಬಾಳುವುದನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದನ್ನು ಕಂಡು ಪೇಟ್ರೋಲಿಂಗ ಕರ್ತವ್ಯದ ಮೇಲಿದ್ದ ಎ.ಎಸ್.ಐ ಭೀಮಶ್ಯಾ ಮತ್ತು ಪಿ.ಸಿ ವೈಜನಾಥ ರವರು ಹಿಡಿದು ವಿಚಾರಿಸಿ ಮೋಟರ ಸೈಕಲದ ಬಗ್ಗೆ ವಿಚಾರಿಸಿದಾಗ ಯಾವುದೇ ಉಪಯುಕ್ತ ಮಾಹಿತಿ ಕೊಡಲಾರದಕ್ಕೆ ಸಂಶಯ ಬಂದು ಇನ್ನೂ ವಿಚಾರಿಸಿದಾಗ ಮೋಟಾರ ಸೈಕಲ ಬಗ್ಗೆ ಮಾಹಿತಿ ನೀಡದೆ ಇರುವದರಿಂದ ಮೋಟಾರ ಸೈಕಲ್ ಪಂಚರ ಸಮ ಕ್ಷಮದಲ್ಲಿ ಜಪ್ತಿಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 110/2011 ಕಲಂ: 41 (ಡಿ) ಸಿ.ಆರ್.ಪಿ,ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಈ ನಂಬರವುಳ್ಳ ವಾಹನ ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾದಲ್ಲಿ ರೋಜಾ ಪೊಲೀಸ್ ಠಾಣೆಗೆ ಸಂರ್ಪಕಿಸಲು ಕೊರಲಾಗಿದೆ.

ಅಪಘಾತ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ. ದಿನಾಂಕ 08/12/2011 ರಂದು 8.45 ಗಂಟೆ ಸುಮಾರಿಗೆ ಮಹಾವೀರ ತಂದೆ ಬಸವರಾಜ ಕಾಸರ ಸಾ|| ಭಟ್ಟರ್ಗಾ ಈತನು ತನ್ನ ಜೀಪ ನಂ. ಎಮ.ಹೆಚ್. 12, ಸಿ.ಡಿ 4617 ನೇದ್ದನ್ನು ದಂಗಾಪೂರದಿಂದ ಆಳಂದ ಕಡೆಗೆ ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಭೂಸನೂರ ಕ್ರಾಸ ಹೊಡ್ಡಿನ ರೋಡ ಮೇಲೆ ಎದುರುಗಡೆಯಿಂದ ಮೋಟಾರ ಸೈಕಲ ನಂ. ಕೆ.ಎ 32, ಆರ್ 745 ನೇದ್ದರ ಮೇಲೆ ಕುಳಿತುಕೊಂಡು ದುತ್ತರಗಾಂವದಿಂದ ದಂಗಾಪೂರ ಕಡೆಗೆ ಹೊರಟ ಬೀಮಾಶಂಕರ ಕೊತಲಿ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಜೀಪ ಚಾಲಕ ತನ್ನ ಜೀಪನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತ ಸಿದ್ದಪ್ಪ ತಂದೆ ಬೀರಪ್ಪಾ ಕೊತಲಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 125/2011 ಕಲಂ 279, 337, 304(ಎ) ಐಪಿಸಿ ಮತ್ತು 187 ಐ,ಎಮ.ವಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.