POLICE BHAVAN KALABURAGI

POLICE BHAVAN KALABURAGI

26 April 2019

KALABURAGI DISTRICT REPORTED CRIMES

ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 16-04-2019 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಶ್ರೀ ರವರ ಮಗಳು ಬೈಹಿರ ದೇಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದಳು. ಅವಳು ಮರಳಿ ಮನೆಗೆ ಬರದ ಕಾರಣ ನನ್ನ ಹೆಂಡತಿ ಬೈಹಿರದೆಸೆಗೆ ಹೋದ ಸ್ಥಳದಲ್ಲಿ ಹೋಗಿ ಹುಡಕಾಡಿದರು ನಮ್ಮ ಮಗಳು ಸಿಗಲಿಲ್ಲಾ, ನಂತರ ನಾನು ಮತ್ತು ನನ್ನ ಹೆಂಡತಿ, ನಮ್ಮ ಅಳಿಯ ನಮ್ಮ ಅಣ್ಣತಮ್ಮಕ್ಕಿಯವರು ಲಾಲಪಟೇಲ ಕುಡಿಕೊಂಡು ಹುಡಕಾಡಿದರು ಸಿಕ್ಕಿರುವುದಿಲ್ಲಾ, ನಮ್ಮ ಸಂಬಂದಿಕರಿಗೆ ಪೋನ ಮಾಡಿದರು ನನ್ನ ಮಗಳ ಬಗ್ಗೆ ಮಾಹಿತಿ ಸಿಗಲಿಲ್ಲಾ, ನನ್ನ ಮಗಳ ಮರ್ಯಾದೇ ಹಾಗೂ ಅವಳ ಮುಂದಿನ ಭವಿಷ್ಯದ ದೃಷ್ಠೀಯಿಂದ ದೂರು ಕೊಟ್ಟಿರಲಿಲ್ಲ. ಆದರೆ ನನ್ನ ಮಗಳು ಹೋದಾಗಿನಿಂದ ನಮ್ಮ ಮನೆಗೆ ಬಡಿಗತನದ ಕೆಲಸ ಮಾಡಲು ಬರುತ್ತಿದ್ದ ಸದಾನಂದ ಪತ್ತಾರ ಇತನು ಕೆಲಸಕ್ಕೆ ಬರಲ್ಲಿಲ್ಲಾ ಅದಕ್ಕಾಗಿ ನಮಗೆ ಅವನ ಮೇಲೆ ಸಂಶಯ ಬಂದು ದಿನಾಂಕ: 24-04-2019 ರಂದು ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ನಾನು ಅವನ ಮೊಬೈಲ ನಂಬರಗೆ ಪೋನ ಮಾಡಿದಾಗ ಸದಾನಂದ ಮತ್ತು ನನ್ನ ಮಗಳು ಇಬ್ಬರೂ ಮಾತನಾಡಿದರು. ಆಗ ಸದಾನಂದ ಇತನು ಹೇಳಿದೆನೆಂದರೆ ನೀವು ನಿಮ್ಮ ಮಗಳಿಗೆ ಬೇರೆ ಕಡೆಗೆ ಮದುವೆ ಮಾಡಿಕೊಡುತ್ತಿರಿ ಅಂತಾ ತಿಳಿದುಕೊಂಡು ನಾನೆ ಅವಳಿಗೆ  ಮದುವೆ ಆಗಬೇಕೆಂದು ಆಕೆಗೆ ಬಲವಂತವಾಗಿ ತಾಳಿಕೋಟಿ ಹತ್ತಿರ ಇರುವ ತಮ್ಮದೊಡ್ಡಿ ಗ್ರಾಮಕ್ಕೆ ಕರೆದುಕೊಂಡು ಬಂದಿರುತ್ತೇನೆ ಅಂತ ಹೇಳಿ ಪೋನ ಕಟ್ಟ ಮಾಡಿದನು. ದಿನಾಂಕ: 25-04-2019 ರಂದು ಬೆಳಗಿನ ಜಾವ ನಾನು ನನ್ನ ಹೆಂಡತಿ, ನಮ್ಮ ಅಳಿಯ ಕೂಡಿ ಒಂದು ಖಾಸಗಿ ವಾಹನದಲ್ಲಿ ತಮ್ಮದೊಡ್ಡಿ ಗ್ರಾಮಕ್ಕೆ ಹೋಗಿ ಊರಲ್ಲಿ ಜನರಿಗೆ ವಿಚಾರಿಸಿ ಅವರಿದ್ದ ಸ್ಥಳಕ್ಕೆ ಹೊದೇವು. ಆಗ ನಾವು ನನ್ನ ಮಗಳಿಗೆ ಕೇಳಲಾಗಿ ಅವಳು ನಮ್ಮ ಮುಂದೆ ಹೇಳಿದ್ದೇನಂದರೆ, ಸದಾನಂದನು ನಮ್ಮ ಮನೆಯಲ್ಲಿ ಕೆಲಸ ಮಾಡಲು ಬಂದಾಗ ಒಂದು ದಿನ ಅವನು ನನಗೆ ನಾನು ನಿನಗೆ ಮದುವೆಯಾಗುತ್ತೇನೆ ಅಂತಾ ರಂಬಿಸಿ ನಮ್ಮ ಮನೆಯ ಬಾಜು ಇರುವ ಮಾವನಾದ ನಬಿಪಟೇಲ ಇವರ ಮನೆಯಲ್ಲಿ ಕರೆದುಕೊಂಡು ಹೋಗಿ ಜಬರದಸ್ತಿಯಿಂದ ಸಂಭೋಗ ಮಾಡಿರುತ್ತಾನೆ. ನಂತರ ಕೂಡಾ ನನಗೆ ಜೀವದ ಬೆದರಿಕೆ ಹಾಕಿ ಅದೆ ಮನೆಯಲ್ಲಿ 5-6 ಸಲ ಸಂಬೋಗ ಮಾಡಿರುತ್ತಾನೆ. ದಿ: 16-04-2019 ರಂದು ನಾನು ಬಹಿರದೇಸೆಗೆ ಹೋದಾಗ ಸದಾನಂದನು ಒಂದು ಇಂಡಿಕಾ ಕಾರ ನಂಬರ ಕೆ..51-7521 ನೇದ್ದರಲ್ಲಿ ನನಗೆ ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಕೂಡಿಸಿಕೊಂಡು ತಮದೊಡ್ಡಿ ಗ್ರಾಮಕ್ಕೆ ಕರೆದುಕೊಂಡು ಬಂದು ಇಲ್ಲಿ ಇಟ್ಟಿದ್ದು, ನಾನು ಇಲ್ಲಿದ್ದಾಗ ಕೂಡಾ ನನಗೆ ದಿನಾಲು ಬಲವಂತದಿಂದ ಲೈಗಿಂಕ ಸಂಬೋಗ ಮಾಡಿರುತ್ತಾನೆ. ಮತ್ತು ಯಾರಿಗಾದರು ಹೇಳಿದರೆ ನಿನಗೆ ಜೀವ ಸಹಿತ ಉಳಿಸುವುದಿಲ್ಲಾ ಅಂತ ಭಯ ಹಾಕಿದರಿಂದ ನಾನು ಸುಮ್ಮನಿದ್ದೆನು ಅಂತ ಹೇಳಿರುತ್ತಾಳೆ. ನಂತರ ನಾವು ಅವನಿಗೆ ತಿಳುವಳಿಕೆ ಹೇಳಿ ಅಲ್ಲಿಂದ ಇಬ್ಬರಿಗೂ ಕರೆದುಕೊಂಡು ಠಾಣೆಗೆ ಬಂದಿರುತ್ತೆವೆ. ನಮ್ಮ ಮನೆಗೆ ಬಡಿಗತನ ಕೆಲಸ ಮಾಡಲು ಬಂದ ಸದಾನಂದ ತಂದೆ ವಿಶ್ವನಾಥ ಪತ್ತಾರ ಇವನು ಅಪ್ರಾಪ್ತ ವಯಸ್ಸಿನ ನನ್ನ ಮಗಳಿಗೆ ಮದುವೆಯಾಗುವದಾಗಿ ಪುಸಲಾಯಿಸಿ ಅವಳಿಗೆ ಜೀವದ ಬೆದರಿಕೆ ಹಾಕಿ ನಮ್ಮೂರಿನಲ್ಲಿ ನಮ್ಮ ಸಂಬಂಧಿಕರ ಮನೆಯಲ್ಲಿ ಸಂಭೋಗ ಮಾಡಿದ್ದು ಅಲ್ಲದೆ ಅವಳಿಗೆ ದಿ: 16-4-19 ರಂದು ರಾತ್ರಿ ಇಂಡಿಕಾ ಕಾರಿನಲ್ಲಿ ಅಪಹರಿಸಿಕೊಂಡು ತಮದೊಡ್ಡಿ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅಲ್ಲಿದ್ದಾಗ ಕೂಡಾ ಅವಳಿಗೆ ಜಬರದಸ್ತಿಯಿಂದ ಸಂಭೋಗ ಮಾಡಿದ್ದು ಕಾರಣ ಸದಾನಂದ ಇತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಸಂಚಾರಿ ಠಾಣೆ 02 : ದಿನಾಂಕ 25.04.2019 ರಂದು ಶ್ರೀ ಬಸಯ್ಯಾ ತಂದೆ ನಾಗಯ್ಯಾ ಸ್ವಾಮಿ ಸಾ : ಧರ್ಮಾಪೂರ  ರವರ ಅಣ್ಣನಾದ ಮಾಳಯ್ಯಾ ಈತನು ಬೀರಲಿಂಗ ಗುಡಿಯ ರಸ್ತೆಯ ಹತ್ತಿರ  ನಡೆದುಕೊಂಡು ರೋಡ ದಾಟುತ್ತಿದ್ದಾಗ ಶಿವಕುಮಾರ ಈತನು ತನ್ನ ಮೋಟಾರ ಸೈಕಲ್ ನಂ ಕೆಎ 32 ಇಆರ್ 0604 ನೇದ್ದರ ಮೇಲೆ ಹಿಂದೆ ಸಿದ್ದಲಿಂಗ ಈತನಿಗೆ ಕೂಡಿಸಿಕೊಂಡು ಶಹಾಬಾದ್ ರೋಡ ಕಡೆಯಿಂದ ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ & ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನೆಡೆದುಕೊಂಡು ರೋಡ ದಾಟುತ್ತಿದ್ದ ಫಿರ್ಯಾಧಿ ಅಣ್ಣ ಮಾಳಯ್ಯ ಈತನಿಗೆ ಡಿಕ್ಕಿಪಡಿಸಿ ಭಾರಿ ರಕ್ತಗಾಯ ಮಾಡಿದ್ದರಿಂದ ಸದರಿಯನು ಮೃತಪಟ್ಟಿದ್ದು ಸಿದ್ದಲಿಂಗ ಮತ್ತು ಆರೋಪಿ ಶಿವಕುಮಾರ ಇವರು ಕೂಡಾ ಗಾಯ ಹೊಂದಿದ್ದು ಇರುತ್ತದೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಆಳಂದ ಠಾಣೆ : ದಿನಾಂಕ 25/04/2019 ರಂದು ಆಳಂದ ಸೇಕ್ಟರ ದಲ್ಲಿ ಸಂಚಾರ ಮಾಡುವ ಬಸ್ಸಗಳನ್ನು ಟಿಕೇಟ್ ತಪಾಸಣೆ ಮಾಡುವಂತೆ ನಮ್ಮ ಮೇಲಾಧೀಕಾರಿಗಳ ಆದೇಶದ ಮೇರೆ ನಾನು & ಸಹಾಯಕ ಸಂಚಾರ ನಿರೀಕ್ಷಕರಾದ ಶರಣಪ್ಪ ತಂದೆ ಬಲವಂತ ಬಿರಾದಾರ ರವರುಗಳು ನಮ್ಮ ಕಾರ ನಂ, ಕೆಎ32, ಬಿ,8316 ನೇದ್ದರಲ್ಲಿ ಕಾರ ಚಾಲಕ ಶರಣು ತಂದೆ ಭೀಮಶಾ ದೊಂಡಿ ಇತನು ನಮ್ಮ ಕಾರನ್ನು ಚಲಾಯಿಸಿಕೊಂಡು ಬಸ್ಸ ವಾಹನಗಳನ್ನು ಇಡೀ ದಿನ ಟಿಕೇಟ್ ಚಕಿಂಗ ಮಾಡಿದ್ದು ನಂತರ ಇಂದು 07;27 ಪಿ.ಎಂಕ್ಕೆ ಸುಮಾರಿಗೆ ಆಳಂದ ದಿಂದ ಭಾಲಖೇಡ ಗ್ರಾಮಕ್ಕೆ ಹೊಗುತ್ತಿದ್ದ ಎನ್.ಇ.ಕೆ.ಎಸ್.ಆರ್.ಟಿಸಿ ಆಳಂದ ಬಸ್ಸ ಘಟಕ ಬಸ್ಸ ನಂ, ಕೆಎ-32, ಎಫ-1717 ನೇದ್ದನ್ನು ತೇಲ್ಯಾಕುಣಿ ಗ್ರಾಮದಲ್ಲಿ ಸದರಿ ಬಸ್ಸನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಸದರಿ ಬಸ್ಸಿಗೆ ನಾನು & ಸಹಾಯಕ ಸಂಚಾರ ನಿರೀಕ್ಷಕರಾದ ಶರಣಪ್ಪ ತಂದೆ ಬಲವಂತ ಬಿರಾದಾರ ರವರಿಬ್ಬರೂ ಬಸ್ಸಿನಲ್ಲಿ ಪ್ರಯಾಣಿಕರಿಗೆ ಟಿಕೇಟ ಪಡೆದಿರುವ ಬಗ್ಗೆ ಟಿಕೇಟ ಚೆಕಿಂಗ ಮಾಡುತ್ತಿರುವಾಗ ಸದರಿ ಬಸ್ಸಿನ ನಿರ್ವಾಕರಾದ ಅನೀಲ ಬಿಲ್ಲೆ ಸಂಖ್ಯೆ 344 ನೇದ್ದವರಿಂದ ಇ.ಟಿ.ಎಂ ಯಂತ್ರವನ್ನು ತಗೆದುಕೊಂಡು ನಿರ್ವಾಹಕರಿಗೆ ಮಾರ್ಗ ಪತ್ರ ನೀಡಲು ಕೇಳಿದಾಗ ನೀಡಲು ನಿರಾಕರಿಸಿರುತ್ತಾರೆ. ವರದಿ ಪಡೆದು ಪ್ರಯಾಣಿಕರು ಟಿಕೇಟು ಪಡೆದಿದ್ದಾರೆ ಇಲ್ಲಾ ಎಂಬುವದರ ಬಗ್ಗೆ ಪರಿಶೀಲಿಸಲಾಗಿದೆ ಓರ್ವ ಪ್ರಯಾಣಿಕರು ಹಣ ನೀಡಿರುವದಿಲ್ಲ ಮತ್ತು ಟಿಕೇಟು ಪಡೆದಿರುವದಿಲ್ಲ ಸದರಿ ಟಿಕೇಟ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಿದ್ದು ರಸೀದಿ ಸಂಖ್ಯೆ 31663 ನೆದ್ದನ್ನು ಸ್ಥಳದಲ್ಲಿಯೇ ತಯ್ಯಾರಿಸಿ ನಿರ್ವಾಹಕರ ಸಹಿ ಪಡೆಯಲು ಮುಂದಾದಾಗ ನಾನು ಸಹಿ ಮಾಡುವದಿಲ್ಲ ಅಂತಾ ನನ್ನೊಂದಿಗೆ ಅನುಚೀತ ವರ್ತನೆ ನಡೆದುಕೊಂಡಿರುವದರಿಂದ ಸದರಿ ರಸೀದಿಯನ್ನು ಟಿಕೇಟ ರಹೀತ ಪ್ರಯಾಣಿಕರಿಗೆ ಜಾರಿ ಮಾಡಿರುತ್ತೇನೆ ಸದರಿ ನ್ಯೂನ್ಯತೆಗಳ ಬಗ್ಗೆ ನಿರ್ವಾಹಕರಿಗೆ ಅಪರಾಧ ಜ್ಞಾಪನ ಪತ್ರ ತಯ್ಯಾರಿಸಲು ಮುಂದಾದಾಗ ತಯ್ಯಾರಿಸದಂತೆ ನನ್ನ ಕರ್ತವ್ಯಕ್ಕೆ ಅಡ್ಡಿ ಮಾಡಿ ನೀಮಗೆ ಯಾರು ಚಕಿಂಗ ಮಾಡಲು ಕಳಿಸಿದ್ದು, ನೀ ಯಾರು ನನಗೆ ಕೇಸು ಬರೆಯುವದಕ್ಕೆ ನೀನು ಇಲ್ಲಿಂದ ಹೊಗುತ್ತೀಯಾ ನೀನು ಹೊಗಲ್ಲ ನೀನ್ನ ಜೀಪು ಹೊಗುವದಿಲ್ಲ ನೀನ್ನ ಅಪರಾಧ ಜ್ಞಾಪನ ಪತ್ರದ ಬುಕ್ಸ ಕೋಡು ನಾನು ಅದರಲ್ಲಿ ಬರೆದು ಹರಿದುಕೊಳ್ಳುತ್ತೇನೆ ನೀನು ಇಲ್ಲೆ ಇದ್ರೆ ಹತ್ತು ನಿಮಿಷದಲ್ಲಿ ನಾನು ಏನು ಮಾಡುತ್ತೇನೆ ನೋಡಿ ಅಂತಾ ಖಾಲಿ ಅಪರಾಧ ಜ್ಞಾಪನ ಪತ್ರ ನನಗೆ ನೀಡಿದರೆ ನೀನ್ನ ನೌಕರಿಗೆ & ನನ್ನ ನೌಕರಿಗೆ ಸೇಪ್ಟಿ ಇಲ್ಲದಿದ್ದರೇ ನೀವು ಹೆಂಗೆ ನೌಕರಿ ಮಾಡುತ್ತೀ ಏ ಭೋಸಡಿ ಮಗನೇ ಅಂತಾ ಅವಾಚ್ಚ ಶಬ್ದಗಳಿಂದ ಏರು ಧ್ವನಿಯಲ್ಲಿ ಮಾತನಾಡಿ ಪ್ರಾಣ ಭಯ ಒಡ್ಡಿರುತ್ತಾರೆ, ಆಗ ಬಸ್ಸ ಚಾಲಕನಾದ ಅಜರುದ್ದಿನ ಬಿಲ್ಲೆ ಸಂಖ್ಯೆ; 810 ನೇದ್ದವನು ಚಾಲಕನ ಆಸನ ದಿಂದ ಎದ್ದು ಬಂದು ನಡೆದಿರುವ ಘಟನೆಯನ್ನು ನೋಡಿ ಅಲ್ಲಿರುವ ಪ್ರಯಾಣಿಕರಿಗೆ ಇವರು ಚಕಿಂಗ ಜಾಸ್ತಿ ಮಾಡುತ್ತಿದ್ದಾರೆ ಇವರದು ಬಹಳ ಅತೀಯಾಗಿದೆ ಎಂದು ನಮ್ಮ ಪ್ರಯಾಣಿಕರಿಗೆ ಗಲಾಟೆಗೆ ಪ್ರಚೋದನೆ ನೀಡಿರುತ್ತಾರೆ ಮತ್ತು ವಾಹನ ತಗೆಯಲು ಸೂಚಿಸಿದರೂ ಕೂಡಾ ಚಾಲಕರು ವಾಹನ ತಗೆಯದೆ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಬಸ್ಸನಿಂದ ಕೇಳಗೆ ಇಳಿಸಿ ಅಲ್ಲೇ ಪ್ರಯಾಣಿಕರಿಗೆ ಇವರಿಗೆ ಮುಂದೆ ಬಿಡಬೇಡಿ ಅಂತಾ ಹೇಳಿ ನಮ್ ಎಲ್ಲಾ ಮೇಲಾಧೀಕಾರಿಗಳು ಬರುವವರೆಗೆ ವಾಹನ ತಗೆಯುವದಿಲ್ಲ ಎಂದು ಪ್ರಯಾಣಿಕರಿಗೆ ಹೇಳಿದ್ದರಿಂದ ಬಸ್ಸಿನಲ್ಲಿದ್ದ ಪ್ರಯಾಣಿರಾದ 1) ದತ್ತಾ ತಂದೆ ಬಂಡೇಪ್ಪ ಬಡಿಗೇರ ಎಂಬುವರು ನನಗೆ ಏ ರಂಡಿ ಮಗನೇ ನೀನಗೆ ಚಕ್ಕ ಮಾಡುವದಕ್ಕೆ ನಮ್ಮ ಬಸ್ಸ ಬೇಕೆನೋ ಅಂತಾ ನನ್ನ ಎದೆಯ ಮೇಲಿನ ಅಂಗ್ಗಿ ಹಿಡಿದು ಜೊಗ್ಗಿದ್ದು, ಆಗ ಚಂದುರಾಯ ತಂದೆ ಶಿವರಾಯ ಚಿಚಕೋಟಿ ಇತನು ನನ್ನ ಕೈ ಹಿಡಿದು ಜೋಗ್ಗಿ ಏ ಭೊಸಡಿ ಮಗನೇ ಚೆಕ್ಕ ಮಾಡಲು ನೀನು ಯಾರು ಅಂತಾ ಅವಾಚ್ಚ ಶಭ್ದಗಳಿಂದ ಬೈದಿದ್ದು ಆಗ ನನ್ನೊಂದಿಗೆ ಇದ್ದ ಸಹಾಯಕ ಸಂಚಾರ ನಿರೀಕ್ಷಕರಾದ ಶರಣಪ್ಪ ತಂದೆ ಬಲವಂತ ಬಿರಾದಾರ ಇವರಿಗೆ ಅಭೀಮನ್ಯೂ ತಂದೆ ಹಣಮಂತ ತಳಕೇರಿ ಎಂಬುವರು ಅವರ ಎದೆಯ ಮೇಲಿನ ಅಂಗ್ಗಿ ಹಿಡಿದು ಜೊಗ್ಗಿ ಏ ನೀನು ನಮಗೆ ಚೆಕ್ ಮಾಡಲು ಯಾರು ನೀನು ಏನು ನಮ್ಮ ಶೇಂಠಾ ಕಿತ್ತುಕೊಳ್ಳುತ್ತೀ ಕಿತ್ತುಕೋ ರಂಡಿ ಮಗನೇ ಸುಮ್ಮನೇ ನೀವು ಇಲ್ಲಿಂದ ಹೊದರೆ ಸರಿ ಇಲ್ರಾಂದ್ರ ನೀಮ್ಮ ಜೀವ ಸಹಿತ ಖಲಾಸ ಮಾಡುತ್ತೇವೆ ಅಂತಾ ಅವಾಚ್ಚ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿದ್ದು ಅಲ್ಲದೇ ನಮ್ಮ ಕಾರನ್ನು ಅಡ್ಡ ಗಟ್ಟಿ ಅದರ ಘಾಳಿಯನ್ನು ತಗೆಯಲು ಮೇಲ್ಕಾಣಿಸಿದವರ ಪ್ರಯತ್ನ ಪಟ್ಟಿದ್ದು ಇರುತ್ತದೆ, ಕಾರಣ ನನ್ನ & ಶರಣಪ್ಪ ಬಲವಂತ ರವರಿಬ್ಬರೂ ಟಿಕೇಟ್ ಚಕಿಂಗ ಮಾಡುತ್ತಿರುವಾಗ ನಮ್ಮ ಕರ್ತವ್ಯಕ್ಕೆ ಅಡೆತಡೆ ಮಾಡಿದ ಬಸ್ಸ ನಿರ್ವಾಹಕ & ಚಾಲಕ ಹಾಗು ಪ್ರಯಾಣಿಕರಾದ ದತ್ತಾ ತಂದೆ ಬಂಡೇಪ್ಪ ಬಡಿಗೇರ, ಚಂದುರಾಯ ತಂದೆ ಶಿವರಾಯ ಚಿತಕೋಟಿ, ಸಾ: ಇಬ್ಬರೂ ಬಂಗರಗಾ, ಮತ್ತು ಅಭೀಮನ್ಯೂ ತಂದೆ ಹಣಮಂತ ತಳಕೇರಿ ಸಾ: ಜಮಗಾ(ಆರ್) ರವರೆಲ್ಲರೂ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಸಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಆಳಂದ ಠಾಣೆ : ಶ್ರೀಮತಿ ಅನೀತಾ ಗಂಡ ವಿಜಯಕುಮಾರ ಬಿರಾಜದಾರ ಸಾ|| ಕೋತನ ಹಿಪ್ಪರಗಾ ತಾ|| ಆಳಂದ ರವರಿಗೆ ಶೆಟವಾಜಿ ಅಂತಾ ಒಬ್ಬ ಗಂಡು ಮಗನಿದ್ದು 03 ಜನ ಹೆಣ್ಣು ಮಕ್ಕಳಿದ್ದು ಅವರಲ್ಲಿ ಮಂದಾಕಿನಿ ಇವಳು ಹಿರಿಯ ಮಗಳಾಗಿದ್ದು ಸದರಿಯವಳಿಗೆ ಸುಮಾರು ಒಂದು ವರ್ಷದ ಹಿಂದೆ ನಮ್ಮೂರಿನಲ್ಲಿ ನೆಂಟಸ್ಥನ ಮಾಡಿ ಮದುವೆ ಮಾಡಬೇಕು ಅಂತಾ ಮದುವೆ ತಯ್ಯಾರಿ ಮಾಡಿದಾಗ ಕಿರಣ ಇತನು ನನ್ನ ಮಗಳು ಮಂದಾಕೀನಿ ಇವಳಿಗೆ ತನ್ನನೊಂದಿಗೆ ಮದುವೆ ಮಾಡಿಕೊಡಬೇಕು ಅವಳಿಗೆ ಬೇರೆಯವರಿಗೆ ಮದುವೆ ಮಾಡಿಕೊಳ್ಳಲು ಬಿಡುವದಿಲ್ಲ, ಅವಳು ನನಗೆ ಸೇರಬೇಕು ಅಂತಾ ಅವಾಚ್ಚವಾಗಿ ಮಾತನಾಡಿ ನಾವು ನಮ್ಮೂರಿನಲ್ಲಿ ನನ್ನ ಮಗಳಿಗೆ ಮದುವೆ ನಿಶ್ಚಯಮಾಡಿದನ್ನು ಅವರ ಮನಗೆ ಹೋಗಿ ನನ್ನ ಮಗಳ ಬಗ್ಗೆ ಇಲ್ಲ ಸಲ್ಲದ ಅನೈತಿಕ ಸಂಬಂದಗಳ ಬಗ್ಗೆ ಅವರಿಗೆ ಹೇಳಿ ಮದುವೆ ನಿಶ್ಚಯವನ್ನು ನಿಲ್ಲಿಸಿರುತ್ತಾನೆ ನಂತರ ನಾವು ನನ್ನ ಮಗಳಿಗೆ ಮದುವೆ ಮಾಡಬೇಕು ಅಂತಾ  ಎರಡನೇ ಬಾರಿ ಮಹಾರಾಷ್ಟ್ರದ ಪಳಸಗಾಂವ ಗ್ರಾಮದ ನಮ್ಮ ಸಂಭಂಧಿಕರಾದ ವಿಜಯ ತಂದೆ ಮನೋಹರ್ ಕದಮ್ ಇತನೊಂದಿಗೆ ಸುಮಾರು 02 ತಿಂಗಳ ಹಿಂದೆ ನಿಶ್ಚಿತಾರ್ಥ ಕಾರ್ಯಕ್ರಮ ಮಾಡಿದ್ದು,  ದಿನಾಂಕ 14/05/2019 ರಂದು ಮದುವೆ ನಿಶ್ಚಯ ಮಾಡಿದ್ದು ಇರುತ್ತದೆ, ನಂತರ ನಮ್ಮೂರಿನ ಕಿರಣ ತಂದೆ ಅಂಕುಷ ಪಾಟೀಲ್ ಹಾಗೂ ಅವರ ಮನೆಯವರು ನನ್ನ ಮಗಳು ಮಂದಾಕಿನಿ ಇವಳಿಗೆ ಕಿರಣ ಇತನೊಂದಿಗೆ ಮದುವೆ ಮಾಡಿಕೊಡು ಅಂತಾ ಹೇಳಿದರು ಮತ್ತೇ ನೀವು ಬೇರೆ ಊರಿಗೆ ಮದುವೆ ಮಾಡಿ ಕೊಡುತ್ತಿದ್ದರಿ ನಿಮಗೆ ಒಂದು ಕೈ ನೋಡಿಯ ಬೀಡುತ್ತೇವೆ ಅಂತಾ  ನಮ್ಮೋಂದಿಗೆ ಬಾಯಿ ಮಾತಿನ ತಕರಾರು ಮಾಡಿಕೊಂಡು ದಿನಾಂಕ 21/04/2019 ರಂದು ಸಾಯಂಕಾಲ್ 05-00 ಪಿ,ಎಮ್ ಕ್ಕೆ ನಾನು ಮತ್ತು ನನ್ನ ಹೆಂಡತಿ ನನ್ನ ಮಗ ನನ್ನ ಮಗಳು ಮದುವೆ ಸಂತೆ ಮಾಡಿಕೊಂಡು ಆಳಂದ ದಿಂದ ನಮ್ಮೂರಿಗೆ ಬಂದು ನಮ್ಮ ಮನೆಯ ಮುಂದಿನ ಸಿಸಿ ರಸ್ತೆಯ ಮೇಲೆ ಮನೆಗೆ ಬರುತ್ತಿರುವಾಗ ನಮ್ಮ ಎದುರಿನಿಂದ ನಮ್ಮೂರಿನ 1) ಕಿರಣ ತಂದೆ ಅಂಕುಷ ಮಾಲಿ ಪಾಟೀಲ್, 2) ಸುನೀಲ್ ತಂದೆ ಬಾಬುರಾವ ಮಾಲಿಪಾಟೀಲ್, 3) ಅರುಣಕುಮಾರ ತಂದೆ ಕಿಶನ ಮಾಲಿಪಾಟೀಲ್, 4) ಅಮೂಲ ತಂದೆ ಅಂಕುಷ ಮಾಲಿಪಾಟೀಲ್, 5) ಅಂಕುಷ ತಂದೆ ಮಾಣಿಕರಾವ ಮಾಲಿಪಾಟೀಲ್, 6) ವಿಜಾಬಾಯಿ ಗಂಡ ಅಂಕುಷ ಮಾಲಿ ಪಾಟೀಲ್ ರವರೆಲ್ಲರೂ ಕೂಡಿಕೊಂಡು ಬಂದವರೆ ಕಿರಣ ಇತನು ನನಗೆ & ನನ್ನ ಮಗಳಿಗೆ ಕೈ ಹಿಡಿದು ಜೋಗ್ಗಿ ತಡೆದು ನಿಲ್ಲಿಸಿ ನನಗೆ ಏ ರಂಡಿ ಮಗಳಿಗೆ ನೀನ್ನ ಮಗಳಿಗೆ ನನ್ನೊಂದಿಗೆ ಮದುವೆ ಮಾಡಿ ಕೊಡು ಅಂತಾ ಏಷ್ಟು ಭಾರಿ ಹೇಳಿದರು ಮತ್ತೋಬ್ಬನೊಂದಿಗೆ ಮದುವೆ ಮಾಡುತ್ತೀರೇನು ಅಂತಾ ಅವಾಚ್ಚಶಬ್ದಗಳಿಂದ ಬೈದು ನನ್ನ ಮೈ ಮೇಲಿನ ಸೀರೆ ಹಿಡಿದು ಜೊಗ್ಗಿ ಕೈಯಿಂದ ಪಕಾಳದ ಮೇಲೆ, ಬೇನ್ನಿನ ಮೇಲೆ ಹೊಡೆದಿದ್ದು, ಆಗ ನನ್ನ ಮಗಳು ಮಂದಾಕೀನಿ ಇವಳಿಗೆ ಕಿರಣ ಇತನು ಮೈ ಮೇಲಿನ ಚೂಡಿದಾರ ಹಿಡಿದು ಜೋಗ್ಗಿ ಏ ರಂಡಿ ನೀನಗೆ ನನ್ನೊಂದಿಗೆ ಮದುವೆ ಮಾಡಿಕೋ ಅಂದರು ವಲ್ಲ ಅನ್ನುತ್ತೀ ನೀನು ಏನಿದರೂ ನನಗೆ ಸೇರಬೇಕು ಅಂತಾ ಕೈಯಿಂದ ಕಪಾಳದ ಮೇಲೆ ಹೊಡೆದಿದ್ದು, ಆಗ ಬಿಡಿಸಲು ಬಂದ ನನ್ನ ಗಂಡನಿಗೆ ಸುನೀಲ ಮಾಲಿ ಪಾಟೀಲ ಇತನು ಏ ರಂಡಿ ಮಗನೇ ನೀನಗೆ & ನೀನ್ನ ಮಗಳಿಗೆ ಬಹಳ ಸೋಕ್ಕು ಬಂದಿದೆ ನೀನ್ನ ಮಗಳಿಗೆ ಅದು ಹೇಗೆ ಬೇರೆಯವರೊಂದಿಗೆ ಮದುವೆ ಮಾಡುತ್ತೀ ರಂಡಿ ಮಗನೇ ಅಂತಾ ಬೈದು ಕೈಯಿಂದ ಬೇನ್ನಿನ ಮೇಲೆ ಹೊಡೆದಿದ್ದು, ಮತ್ತು ನನ್ನ ಮಗ ಶೇಟವಾಜಿ ಇತನಿಗೆ ಅರುಣಕುಮಾರ & ಅಮೂಲ ರವರುಗಳು ತಡೆದು ನಿಲ್ಲಿಸಿ ನೀನ್ನ ತಂಗಿಗೆ ನಾವು ರಂಡಿ ಅಂತಾ ಮಾಡಿಕೊಳ್ಳುತ್ತೇವೆ ಭೋಸಡಿ ಮಗನೇ ಅಂತಾ ಬೈದು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾರೆ, ಆಗ ಅಂಕುಷ ಮತ್ತು ಆತನ ಹೆಂಡತಿ ವಿಜಾಬಾಯಿ ಇವರುಗಳು ನಮಗೆ ಇವರಿಗೆ ಬಹಳ ಸೋಕ್ಕು ಬಂದಿದೆ ಮಂದಾಕೀನಿ ಇವಳಿಗೆ ನಮ್ಮ ಮಗನೊಂದಿಗೆ ಮದುವೆ ಮಾಡಿ ಕೊಡು ಅಂತಾ ಹೇಳಿದರು ಕೇಳುತ್ತೀಲ್ಲ ಇವತ್ತು ಸರಿಯಾಗಿ ಸಿಕ್ಕಿದ್ದಾರೆ ಇವರಿಗೆ ಬಿಡಬ್ಯಾಡಿರಿ ಖಲಾಸ ಮಾಡಿ ಅಂತಾ ಅವಾಚ್ಚಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ.ಶಂಕರ ತಂದೆ ವಿಠಲ್ ಚವ್ಹಾಣ್, ಸಾ:ಮಡಕಿ ತಾಂಡಾ ರವರು ಇತ್ತಿಚಿಗೆ ನಡೆದ ಲೋಕಸಭಾ ಚುನಾವಣೆ ಕಾಲಕ್ಕೆ ಕಾಂಗ್ರೆಸ್ ಪಕ್ಷದ ಪ್ರಮುಖರು  ದಿನಾಂಕ:15/04/2019 ರಂದು ಮಡಕಿತಾಂಡಾಕ್ಕೆ ಬಂದು ಗ್ರಾಮಸ್ಥರಲ್ಲಿ ಮತ್ತು ತಾಂಡಾದವರಲ್ಲಿ ಮತ ಯಾಚಿಸಿರುತ್ತಾರೆ ಈ ಕಾಲಕ್ಕೆ ನಾನು ಅವರನ್ನು ಭೇಟಿಯಾಗಿದಕ್ಕೆ ಈ ವಿಷಯ ಬೆಡಸೂರ (ಕೆ) ತಾಂಡಾದ ನಮ್ಮ ಕುಲದವರಾದ 1)ಲಕ್ಷ್ಮಣ ತಂದೆ ಶಂಕರ ಚವ್ಹಾಣ್, 2)ಸುಭಾಷ ತಂದೆ ಗೇಮು ಚವ್ಹಾಣ್, 3)ಅನೀಲ ತಂದೆ ಭೀಮಸಿಂಗ್ ಚವ್ಹಾಣ್, 4)ಗಣಪತಿ ತಂದೆ ಬಾಬುಸಿಂಗ್ ರಾಠೋಡ್, 5)ರಾಮು ಚವ್ಹಾಣ್, 6)ಎಮನಾಥ ತಂದೆ ತೊಂಡಿ ಚವ್ಹಾಣ್, 7)ಗೊವಿಂದ ಚವ್ಹಾಣ್, 8)ರಾಜು ರಾಠೋಡ್ ಇವರಿಗೆ ಗೊತ್ತಾಗಿ ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇನೆ ಅಂತಾ ತಪ್ಪು ತಿಳುವಳಿಕೆಯಿಂದ ಎಲ್ಲರೂ ಸೇರಿ ಬೆಡಸೂರ(ಕೆ)ತಾಂಡಾದ ಅಂಗನಾವಡಿ ಸ್ಕೂಲ್ ಹತ್ತಿರ ಒಂದು ಗಿಡದ ಕೆಳಗೆ ನಿಂತು ನನಗೆ ನೀನು ಲಮಾಣ್ಯಾರ ತುಣ್ಣಿಗೆ ಹುಟ್ಟಿಲ್ಲಾ, ಹೊಲ್ಯಾರ ತುಣ್ಣಿಗೆ ಹುಟ್ಟಿದಿ, ಮಾದುರ ತುಣ್ಣಿಗೆ ಹುಟ್ಟಿದಿ ನಿನ್ನ ಹೆಂಡತಿನ ಹಡಾ ನಿನ್ನ ತಾಯಿನ ಹಡಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನಿನಗೆ ನಮ್ಮ ಸಮಾಜದ ಯಾವುದೇ ಕಾರ್ಯಕ್ರಮದಲ್ಲಿ ಯಾರು ಸೇರಿಸಿಕೊಳ್ಳದಂತೆ ಮಾಡುತ್ತೇವೆ ನಿನಗೆ ಬಿಡಂಗಿಲ್ಲಾ ಅಂತಾ ವಗೈರೆ ನಿಂದಿಸಿದ ಬಗ್ಗೆ ಯಾರೋ ಒಬ್ಬರಿಂದ ವಿಡಿಯೋ ಚಿತ್ರಿಕರಣ ಮಾಡಿಸಿ ಸದರಿ ವಿಡಿಯೋ ಚಿತ್ರಕರಣದ ತುಣುಕುಗಳನ್ನು ಜೈ ಸೇವಾಲಾಲ ಎಂಬ ವಾಟ್ಸಫ್ ಗುಂಪಿಗೆ ಕಳಿಸಿರುತ್ತಾರೆ. ಈ ಗುಂಪಿನ ಸದಸ್ಯನಾದ ನಮ್ಮೂರಿನ ಕಿರಣ ತಂದೆ ಭೀಮು ಚವ್ಹಾಣ್ ಇವರು ದಿನಾಂಕ:23/04/2019 ರಂದು ಸಾಯಂಕಾಲ 5-00 ಗಂಟೆಗೆ ಸದರಿ ವಿಡಿಯೋಗಳನ್ನು ನನಗೆ ತಂದು ತೋರಿಸಿರುತ್ತಾನೆ. ಆ ನಂತರ  ನಾನು ಹೇಳಿದ ಮೇರೆಗೆ ಸದರಿಯವನು ಮಡಕಿತಾಂಡಾ ವಾಟ್ಸಪ್ ಗುಂಪಿಗೆ ಸೇರ್ ಮಾಡಿರುತ್ತಾನೆ. ಮಡಕಿತಾಂಡಾ ವಾಟ್ಸಪ್ ಗುಂಪಿನಲ್ಲಿ ನಾನು ಸದಸ್ಯನಿದ್ದು ನನ್ನ ಮೊಬೈಲ್ ನಂ 7353045293 ನೇದ್ದಕ್ಕು ಕೂಡ ಸದರಿ ವಿಡಿಯೋ ಚಿತ್ರಿಕರಣಗಳು ಬಂದಿರುತ್ತವೆ.  ಇದರ ಬಗ್ಗೆ ನಾನು ನಮ್ಮ ಗ್ರಾಮದಲ್ಲಿ ನಮ್ಮ ಸಮಾಜದ ಮುಖಂಡರಿಗೆ ತಿಳಿಸಿ ಚರ್ಚಿಸಿ ದಿನಾಂಕ:25/04/2019 ರಂದು ತಡವಾಗಿ ಠಾಣೆಗೆ ಬಂದು ನನ್ನ ದೂರು ಸಲ್ಲಿಸಿರುತ್ತೇನೆ. ಕಾರಣ ನನಗೆ ಅಶ್ಲಿಲ ಪದಗಳ ಬಳಿಸಿ ಅವಾಚ್ಯವಾಗಿ ಬೈದು ಜೀವ ಬೇದರಿಕೆ ಹಾಕಿದ ವಿಡಿಯೋ ವಾಟ್ಸಪನಲ್ಲಿ ಹರಿಬಿಟ್ಟ ಈ ಮೇಲೆ ನಮೂದಿಸಿದ ಲಕ್ಷ್ಮಣ ಮತ್ತು ಆತನ ಸಂಗಡ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 18/11/2018 ರಂದು ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಗೋಗಿ ಗ್ರಾಮದಲ್ಲಿ ಸಿಕ್ಕ ನವಜಾತ ಶಿಶುವನ್ನು ಮಕ್ಕಳ ಕಲ್ಯಾಣ ಸಮೀತಿ ಯಾದಗಿರರವರು ಪಾಲನೆ ಪೊಷಣೆಗಾಗಿ ನಮ್ಮ ಅಮೂಲ್ಯ ಶಿಶುಗೃಹದಲ್ಲಿ ಸೇರಿಕೆ ಮಾಡಿದ್ದು ಮಗುವು ಕಡಿಮೆ ತೂಕ ಹೊಂದಿದ್ದು ಮಗುವಿಗೆ ಸಾತ್ವಿಕ ಅಂತಾ ಹೆಸರಿಟ್ಟಿದ್ದು ಮಗುವು 5 ತಿಂಗಳದ್ದು ಇರುತ್ತದೆ ದಿನಾಂಕ 23/04/2019 ರಂದು ಜ್ವರ ಕೆಮ್ಮು ಇತರೆ ಅನಾರೋಗ್ಯದಿಂದ ಮಗು ಬಳಲುತಿದ್ದರಿಂದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ದಿನಾಂಕ 25/04/2019 ರಂದು 11.00 ಎಎಮ್‌‌ಕ್ಕೆ ಉಪಚಾರ ಫಲಕಾರಿಯಾಗದೆ ಅನಾರೋಗ್ಯದಿಂದ ಮಗು ಮೃತಪಟ್ಟಿರುತ್ತದೆ ಅಂತಾ ಶ್ರೀಮತಿ ಶೀಲ್ಪಾ ಗಂಡ ರಾಜಶೇಖರ ಹಲಕರ್ಣಿಮಠ ಉ: ಅಧೀಕ್ಷಕರು ಅಮೂಲ್ಯ ಶಿಶುಗೃಹ ಸಾ: ವಿಠ್ಠಲ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 14/04/2019 ರಂದು  ಶ್ರೀ ದುಂಡಪ್ಪ ತಂದೆ ಬರುರಾವ ವಂಗಲಿ ಸಾ ಳ ಹಡಲಗಿ ತಾ : ಆಳಂದ ಹಾ : ವ: ರಾಮತೀರ್ಥ ಗುಡಿ ಹತ್ತಿರ ಕಲಬುರಗಿ ರವರು ಮಗ ಆಕಾಶ ತಂದೆ ದುಂಡಪ್ಪ ವಾಂಗಲಿ ಇತಬು ಮನೆಯಿಂದ ಆಟ ಆಡುತ್ತೆನೆಂದು ಹೇಳಿ ಹೊದವನು ಮರಳಿ ಮನೆಗೆ ಬಂದಿರುವುದಿಲ್ಲ,ನಾವು ಎಲ್ಲ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.