POLICE BHAVAN KALABURAGI

POLICE BHAVAN KALABURAGI

22 June 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 21.06.2015 ರಂದು ಶ್ರೀಮತಿ ಬಾಗಮ್ಮ ಗಂಡ ಹೊನ್ನಪ್ಪ ಬಾಗಲಿ ಸಾಃನಂದಳ್ಳಿ ತಾಃ ಶಹಾಪೂರ ಹಾಃವಃ ಸುರಪೂರ. ರವರು ಮತ್ತು ನನ್ನ ಗಂಡ ಹೊನ್ನಪ್ಪ ತಂದೆ ಹಣಮಂತ ಬಾಗಲಿ, ತಾಯಿ ಚಂದಮ್ಮ ಗಂಡ ಯಂಕಪ್ಪ ಮೇಲಿನಮನಿ. ನಮ್ಮ ಅಣ್ಣ-ತಮ್ಮಕೀಯ ಅಂಬಮ್ಮ ಗಂಡ ಪರಶುರಾಮ ಬೊವಿ ಎಲ್ಲರೂ ಕೂಡಿಕೊಂಡು ನನಗೆ ಮಕ್ಕಳ ಸಂಭಂದವಾಗಿ ದೇವರು ಕೇಳಲು ಸುರಪೂರದಿಂದ ಜೇವರಗಿ ತಾಲೂಕಿನ ಮದರಿ ಗ್ರಾಮಕ್ಕೆ ಬಂದಿರುತ್ತೆವೆ. ಮದರಿ ಗ್ರಾಮದಲ್ಲಿ ಪೂಜಾರಿ ಹತ್ತಿರ ದೇವರು ಕೇಳಿಕೊಂಡು ಮರಳಿ ಸುರಪೂರಕ್ಕೆ ಹೋಗಲು ಮದರಿಯಿಂದ ಒಂದು ಟಂಟಂ ವಾಹನದಲ್ಲಿ ನಾವು ಮತ್ತು ಲಾಲಬೀ ಗಂಡ ಮೈಹಿಬೂಬಸಾಬ ಹರಕಾರಿ ಎಲ್ಲರೂ ಕುಳಿತುಕೊಂಡು ಜೇವರಗಿ ಕಡೆಗೆ ಹೊರಟಿದ್ದೆವು. ಮದ್ಯಾನ ಮದರಿ-ಕಟ್ಟಿ ಸಂಗಾವಿ ರೋಡ, ಕಟ್ಟಿ ಸಂಗಾವಿ ಗ್ರಾಮದ ಸಮೀಪ ರೊಡಿನಲ್ಲಿ  ಟಂಟಂ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಯತನದಿಂದ ನಡೆಸಿಕೊಂಡು ಒಮ್ಮಲೆ ಬ್ರೇಕ್ ಹಾಕಿದರಿಂದ ಟಂಟಂ ರೋಡಿನಲ್ಲಿ ಪಲ್ಟಿಯಾಗಿ ಬಿತ್ತು ಈ ಅಪಘಾತದಲ್ಲಿ ನನಗೆ ಎಡಗಡೆಯ ಕಿವಿಯ ಹತ್ತಿರ ರಕ್ತ ಗಾಯವಾಗಿದ್ದು ನನ್ನ ಗಂಡನಿಗೆ ಬೆನ್ನು ಮೇಲೆ, ಬಲಕಾಲಿನ ಮೊಳಕಾಲಿನ ಹತ್ತಿರ ತರಚಿದ ರಕ್ತಗಯವಾಗಿದ್ದು ಮತ್ತು ಎಡಕಾಲು ಮೊಳಕಾಲು ಹತ್ತಿರ ಮುರಿದಿರುತ್ತದೆ. ಮತ್ತು ತಲೆಗೆ ಬಾರಿ ಗುಪ್ತ ಪೆಟ್ಟಾಗಿದ್ದು ನನ್ನ ತಾಯಿಗೆ ಮತ್ತು ಅಂಬಮ್ಮ ಇವಳಿಗೆ ಹಾಗೂ ಲಾಲಬೀ ಇವಳಿಗೆ ಸಾದಾ ಮತ್ತು ಬಾರಿ ಪೆಟಾಗಿರುತ್ತವೆ. ನಂತರ ಟಂಟಂ ನಂ ನೋಡಲಾಗಿ ಕೆ.ಎ-32, ಬಿ-9353 ನೇದ್ದು ಇತ್ತು. ಅದರ ಚಾಲಕನಿಗೆ ಹೆಸರು ಕೆಳಲಾಗಿ ಅವನು ತನ್ನ ಹೆಸರು ಸಾಯಿಬಣ್ಣಾ ತಂದೆ ಶರಣಪ್ಪ ಸುಬೇದಾರ ಅಂತಾ ಹೇಳಿ ನಮಗಾದ ಗಾಯ ನೋಡಿ ತನ್ನ ಟಂಟಂನ್ನು ಚಾಲು ಮಾಡಿಕೊಂಡು ಟಂಟಂ ಸಮೇತ ಓಡಿ ಹೊದನು. ನಂತರ ನಾವು ಎಲ್ಲರೂ ಒಂದು ಖಾಸಗಿ ವಾಹನದಲ್ಲಿ ಕುಳಿತುಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರಕ್ಕೆ ಸೇರಿಕೆಯಾಗಿರುತ್ತವೆ. ನಂತರ ನಾನು ಮತ್ತು ನನ್ನ ತಾಯಿ ಹಾಗೂ ಅಂಬಮ್ಮ ಕೂಡಿಕೊಂಡು ನನ್ನ ಗಂಡನಿಗೆ ಭಾರಿ ಪೆಟ್ಟಾಗಿದ್ದರಿಂದ ಅವನಿಗೆ ಹೆಚ್ಚಿನ ಉಪಚಾರಕ್ಕಾಗಿ ಅಂಬುಲೇನ್ಸ್ ವಾಹನದಲ್ಲಿ ಹಾಕಿಕೊಂಡು ಕಲಬುರಗಿಗೆ ಹೊಗುತ್ತಿದ್ದಾಗ ಮಾರ್ಗಮದ್ಯ ಕಟ್ಟಿ ಸಂಗಾವಿ ಬ್ರೀಡ್ಜ್ ಹತ್ತಿರ ರೊಡಿನಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 21.06.2015 ರಂದು ರಾತ್ರಿ ಜೇವರಗಿ ಪಟ್ಟಣದ ಸತ್ತರ್‌ಸಾಬ್ ಪೆಟ್ರೋಲ್‌ ಪಂಪ್ ಹತ್ತಿರ ಜೇವರಗಿ ಶಹಾಪುರ ಮುಖ್ಯ ರಸ್ತೆಯ ಮೇಲೆ ಕಾರ್ ನಂ ಕೆ.ಎ28ಎಮ್9242ನೇದ್ದರ ಚಾಲಕನು ತನ್ನ ಕಾರ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಾನು ನಡೆಸುತ್ತಿದ್ದು ಕಾರ್‌ ನಂ ಕೆ.ಎ32ಎನ್1344 ನೇದ್ದಕ್ಕೆ ಎದುರುಗಡೆಯಿಂದ ಡಿಕ್ಕಿಪಡಿಸಿ ಸೊಮನಗೌಡ ಮತ್ತು ಮರೆಪ್ಪ ಇವರಿಗೆ ಗಾಯಗೊಳಿಸಿ ತನ್ನ ಕಾರ್‌ನ್ನು ಸ್ಥಳದಲ್ಲಿಯೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಶ್ರೀ ಸಂತೋಷ ತಂದೆ ನಾನಾಗೌಡ ಮಾಲಿ ಪಾಟೀಲ ಸಾ : ಹಾಲಗಡ್ಲಾ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀ ಶಿವಶರಣಪ್ಪ  ತಂದೆ ನೀಲಕಂಠಪ್ಪ ಸಾಹುಕಾರ ಸಾ:ತೆಲ್ಕೂರ ಹಾವ:ಟಂಗಳಿ ಇವರು ದಿನಾಂಕ: 21-06-2015 ರಂದು  ಗುಂಡೆರಾವ ಸಲಗಾರ  ಮತ್ತು ಅಯ್ಯಪ್ಪ ತಂದೆ ಶರಣಪ್ಪ ಸಾಹುಕಾರ ಇವರೊಂದಿಗೆ ತೆಲ್ಕೂರ ಗ್ರಾಮಕ್ಕೆ ನಮ್ಮ ಹೊಲ ತೋರಿಸಲು ನನ್ನ ಮೋಟಾರು ಸೈಕಲ್ ನಂ ಕೆಎ-04ನ   ಎಸ್- 7572 ಕವಾಸ್ಕಿ ಬಜಾಜ ಮೇಲೆ ಟೆಂಗಳಿ ಗ್ರಾಮದಿಂದ ತೆಲ್ಕೂರ ಗ್ರಾಮಕ್ಕೆ ಹೊರಟಿದೇವು .ನಮ್ಮ ಮೋ.ಸೈಕಲ್ ಗುಂಡೆರಾವ ಸಲಗಾರ ಇತನು ನಡೆಸುತ್ತಿದ್ದನು ಮದ್ಯಾಹ್ನ  ಸೇಡಂ ದಾಟಿ ಬಿಬ್ಬಳಿ ಕ್ರಾಸ್  ಹತ್ತಿರ  ನಾವು ಹೋಗುತ್ತಿದ್ದಾಗ ನಮ್ಮ ಸೈಡಿಗೆ ಇನ್ನೊಂದು ಲಾರಿ ನಂ ಎಮ್-ಹೆಚ್- 48- ಜೆ 0372 ನ್ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅತಿವೇಗ ಹಾಗು ನಿಸ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದವನೇ ನಮ್ಮ ಮಗ್ಗಲಲ್ಲಿ ರೋಡಿನ ಮೇಲೆ ಹೋಗುತ್ತಿದ್ದನು ಬಿಬ್ಬಳಿ ಕ್ರಾಸ್ ಎಡ ತಿರುವಿನಲ್ಲಿ  ಯಾವುದೇ ಸೂಚನೆ ನಿಡದೆ ಒಮ್ಮಲೇ ಎಡ ತಿರುವಿದಾಗ ನೇವರಾಗಿ ಹೋಗುತ್ತಿದ್ದ ನಮ್ಮ ಮೋ ಸೈಕಲಿಗೆ ಡಿಕ್ಕಿ ಹೊಡೆದು  ಅಪಘಾತ ಪಡಿಸಿದ್ದರಿಂದ ಲಾರಿಯ ಎಡಗಡೆ ಮುಂದಿನ ಗಾಲಿಯಲ್ಲಿ ಗುಂಡೆರಾವ ಇವರು ಸಿಕ್ಕು  ಲಾರಿ ಗಾಲಿ ಅವರ ಎಡ ಎದೆಗೆ ಹತ್ತಿದ್ದರಿಂದ ಪಕ್ಕೆಲಬು ಮುರಿದಿದ್ದು ,ಒಳಪೆಟ್ಟು ಆದದಂತೆ ಕಾಣುತ್ತದೆ , ಬಲಗಾಲಿನ ಪಾದಕ್ಕೆ, ಎಡಗೈ ಮೊಳಕೈಗೆ ಎಡಗಾಲು ತೊಡೆಗೆ ಮತ್ತು ಶಿಸ್ನಕ್ಕೆ  ಹಾಗು ಎದೆಗೆ ಅಲ್ಲಲ್ಲಿ ತರಚಿದ ಗಾಯಗಳಲಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ನನಗೂ ಎಡಗಾಲು ಮೊಳಕಾಲಿಗೆ, ಮತ್ತು ಎಡಗಾಲಿನ ಪಾದಕ್ಕೆ ರಕ್ತ ಗಾಯವಾಗಿರುತ್ತದೆ. ಅಯ್ಯಪ್ಪ ಸಾಹುಕಾರ ಇವರಿಗೂ ಕೂಡ ಬಲಗಾಲಿನ ಮೊಳಕಾಲಿಗೆ ಪಾದಕ್ಕೆ ಗುಪ್ತ ಗಾಯ ಹಾಗು ರಕ್ತ ಗಾಯವಾಗಿರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹುಡುಗ ಕಾಣೆಯಾದ ಪ್ರಕರಣ :
ಚೌಕ ಠಾಣೆ : ಶ್ರೀ ಅಂಬೋಜಿ ತಂದೆ ನಾಗಪ್ಪ ಖಡಕೆ ಸಾ: ನಾಡರ ದಾಲಮೀಲ್ ಹಿಂದುಗಡೆ ಮತ್ತು ಮು: ದರಬಾರ ಹೊಟೇಲ ಹಿಂದುಗಡೆ ಶಿವಾಜಿ ನಗರ ಕಲಬುರಗಿ ರವರ ಮಗನಾದ ವಿಠಲ ತಂದೆ ಅಂಭೋಜಿ ರವರು ದಿನಾಂಕ 14.06.2015 ರಂದು ಸಾಯಂಕಾಲ 6 ಗಂಟೆಗೆ ಮನೆಯಿಂದ ಹೊರ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲಾ. ನಾನು ಅಲ್ಲಿ ಇಲ್ಲಿ ನಮ್ಮ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.