POLICE BHAVAN KALABURAGI

POLICE BHAVAN KALABURAGI

22 December 2012

GULBARGA DISTRICT REPORTED CRIMES


ಹಲ್ಲೆ, ಕೊಲೆಗೆ ಪ್ರಯತ್ನ:
ಚೌಕ ಪೊಲೀಸ್ ಠಾಣೆ:ಶ್ರೀ ಅಂಬು ತಂದೆ ಮಲ್ಕಣ್ಣಾ ಕುಂಬಾರ ಅಟೋ ಚಾಲಕ ಸಾ:ರಾಜೀವಗಾಂಧಿ ನಗರ ಗುಲಬರ್ಗಾ ನಾನು ದಿನಾಂಕ:21.12.2012 ರಂದು ರಾತ್ರಿ  21-30 ಗಂಟೆ ಸುಮಾರಿಗೆ ಲಿಂಗರಾಜ ತಂದೆ ಸುಭಾಶ್ಚಂದ್ರ ಜಮಾದಾರ ಸಾ: ಫಿಲ್ಟರ್ ಬೆಡ್ ಗುಲಬರ್ಗಾ ಇಬ್ಬರೂ ಕೂಡಿಕೊಂಡು ಮಾಸ್ತರ ಖಾನಾವಳಿಯಿಂದ ಊಟ ತಗೆದುಕೊಂಡು ಮಹೇಶ ವೈನ್ ಶಾಪ ಎದುರುಗಡೆಯಿಂದ ನಮ್ಮ ಬಡಾವಣೆಗೆ ಹೋರಟಾಗ ಕೈಲಾಸ, ರಾಜು,ಪ್ರಕಾಶ ಡೊಲಾರೆ,ಜಗು, ಆಕಾಶ, ಕೃಷ್ಣಾ ಸಾ:ಎಲ್ಲರೂ ಆರ್ಯ ನಗರ ಗುಲಬರ್ಗಾ ಇವರೆಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ತಲವಾರ ಕಲ್ಲು ಬಡಿಗೆ ಹಿಡಿದುಕೊಂಡು ನಮ್ಮನ್ನು ನೋಡಿ ಅವಾಚ್ಯವಾಗಿ ಬೈದು ಮೊನ್ನೆ ನಮ್ಮ ಬಡಾವಣೆ ಹುಡುಗರಿಗೆ ಹೊಡೆದಿದ್ದಿರಿ ಇವುತ್ತು ನಾವು ನಿಮ್ಮನ್ನು ಖಲಾಸ ಮಾಡುತ್ತೇವೆ ಅಂತ ನನಗೆ ಮತ್ತು ಲಿಂಗರಾಜ ಇತನಿಗೆ ಎಲ್ಲರೂ ಕೂಡಿಕೊಂಡು  ತಲವಾರ, ಕಲ್ಲು, ಬಡಿಗೆಗಳಿಂದ ನನಗೆ ಹಣೆಯ ಎಡಭಾಗಕ್ಕೆ, ಎಡಮೊಳಕಾಲ ಮೇಲೆ ಮತ್ತು ಲಿಂಗರಾಜ ಇತನಿಗೆ ಭಾಯಿ ಮತ್ತು ತುಟಿಯ ಮೇಲೆ, ಎರಡು ಭುಜಗಳಿಗೆ, ಬೆನ್ನಿಗೆ ಹೊಡೆದು ಭಾರಿ ರಕ್ತಗಾಯ ಮತ್ತು ಗುಪ್ತಗಾಯಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 211/2012 ಕಲಂ, 143, 147, 148, 341, 323, 324, 504, 307 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಬಾಬುರಾವ ತಂದೆ ಶಿವಶರಣಪ್ಪ ಗೊಬ್ಬೂರ ಗ್ರಾಮ ಪಂಚಾಯತ ಸದಸ್ಯರು ಭೂಸನೂರ, ಸಾ|| ಭೂಸನೂರ ರವರು ನಾನು ಭೂಸನೂರ ಗ್ರಾಮದ ಗ್ರಾಮ ಪಂಚಾಯತಿಯ  ವಾರ್ಡ ನಂ.02 ರಲ್ಲಿ ಹೋದ ಚುನಾವಣೆಯಲ್ಲಿ ಚುನಾಯಿತನಾಗಿ ಸದಸ್ಯನಾಗಿರುತ್ತಾನೆ. ದಿನಾಂಕ 24/12/2012 ರಂದು ಭೂಸನೂರ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಇದ್ದು ಅದರ ಸಂಭಂಧ ಜವಳಿ (ಡಿ) ಗ್ರಾಮದ ಪಂಚಾಯತ ಸದಸ್ಯರ ಹತ್ತಿರ ಹೋಗಿ ಮರಳಿ ನಮ್ಮ ಮನೆಗೆ ರಾತ್ರಿ ವೇಳೆ ಬರುತ್ತಿದ್ದಾಗ ದಾರಿಯಲ್ಲಿ ನನ್ನ ಹೆಂಡಿತಿಯಾದ ಕವಿತಾ ಇವಳು  ದೂರವಾಣಿ ಮೂಲಕ ತಿಳಿಸಿದ್ದೇನೆಂದರೆ ನಾನು ಮನೆಯ ಬಾಗಿಲು ಹಾಕಿಕೊಂಡು ಮಲಗಿಕೊಂಡಿದ್ದು ಒಂದು  ಗಂಟೆಯ ಹಿಂದೆ ನಮ್ಮ ಮನೆಯ ಬಾಗಿಲು ಯಾರೋ ಬಡೆದಿದ್ದರಿಂದ ಅವಾಜ ಕೇಳಿ ನನ್ನ ಗಂಡನೆ ಮನೆಗೆ ಬಂದಿರಬಹುದೆಂದು ತಿಳಿದು ಬಾಗಿಲು ತೆಗೆದು ನೋಡಲು ಮನೆಯ ಮುಂದೆ ಬಾಬುಗೌಡ ತಂದೆ ಸಿದ್ದಣ್ಣಗೌಡ ಪಾಟೀಲ, ಶಂಕರರಾವ ಪಾಟೀಲ, ಅಣ್ಣಾರಾವ ಪಾಟೀಲ, ಅನೀಲ ಎಸ್. ಪಾಟೀಲ,ಅಶೋಕ ಎಸ್. ಪಾಟೀಲ, ರಾಜಶೇಖರ ಮಲಶೆಟ್ಟಿ ಎಲ್ಲರೂ ಸಾ|| ಭೂಸನೂರ ಇವರೆಲ್ಲರೂ ನಿನ್ನ ಗಂಡ ಎಲ್ಲಿದ್ದಾನೆ ಅವನಿಗೆ ಹೊರಗಡೆ ಕಳುಹಿಸು ಅಂತ ಅಂದಾಗ ಅವರು ಮನೆಯಲ್ಲಿ ಇಲ್ಲ ಅಂತ ಹೇಳಿದೆನು. ಆಗ ಬಾಬುಗೌಡ ಈತನು ಆ ಭೋಸಡಿ ಮಗ ಎಲ್ಲಿಗೆ ಹೋಗಿದ್ದಾನೆ ಅವನಿಗೆ ಹೇಳು ನಾವು ಹೇಳಿದವರಿಗೆ ಓಟ ಹಾಕಬೇಕು ಇಲ್ಲವೆಂದರೆ ಊರಲ್ಲಿ ಹೇಗೆ ಜೀವಿಸುತ್ತಾನೆ ನೋಡುತ್ತೇವೆ ಅಂತ ಹೇಳಿ ಹೋಗಿದ್ದಾರೆಂದು ತಿಳಿಸಿದಳು. ನಾನು ರಾತ್ರಿ 11-30 ಗಂಟೆ ಸುಮಾರಿಗೆ ಗುರುಶಾಂತಪ್ಪ ತಂದೆ ನಿಂಗಪ್ಪ ಕಡಕೋಳ, ಶಾಂತಮಲ್ಲಪ್ಪ ನೆಲ್ಲೂರ ಕೂಡಿಕೊಂಡು ಬರುತ್ತಿರುವಾಗ ಗ್ರಾಮದ ಚಕ್ರ ಕಟ್ಟೆಯ ಮುಂದಿನ ರೋಡಿನ ಮೇಲೆ ಮೇಲಿನವರು ದಿನಾಂಕ 24/12/2012 ರಂದು ನಡೆಯುವ ಗ್ರಾಮ ಪಂಚಾಯತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನಾವು ಹೇಳಿದವರಿಗೆ ಓಟ ಹಾಕಬೇಕು ಇಲ್ಲವಾದರೆ ನಿನ್ನನ್ನು ಖಲಾಸ ಮಾಡುತ್ತೇವೆಂದು ಜೀವದ ಭಯ ಹಾಕಿದರು. ಆಗ ನಾನು ನನ್ನ ಮನಸ್ಸಿಗೆ ಬಂದವರಿಗೆ ಓಟು ಹಾಕುತ್ತೇವೆ ಅಂದಾಗ ಮಗನೆ ನನ್ನ ಮಾತು ಕೇಳುವದಿಲ್ಲ ಅಂತ ಹೊಡೆ ಬಡೆ ಮಾಡಿರುತ್ತಾರೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ.110/2012 ಕಲಂ 143, 147, 148, 307, 341, 323324, 325, 504, 506 ಸಂ. 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT PRESS MEET NOTES


ಪತ್ರಿಕಾ ಪ್ರಕಟಣೆ
: ಗುಲಬರ್ಗಾ ಜಿಲ್ಲಾ ಪೊಲೀಸರ ಕಾರ್ಯಾಚರಣೆ:

ಇಬ್ಬರು ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆದಾರರ ಬಂಧನ ಸುಮಾರು ರೂ. 25,55,000/-  ಮೌಲ್ಯದ ಅಕ್ಕಿ ಹಾಗೂ ಸಾಗಾಣಿಕೆ ಮಾಡುತ್ತಿದ್ದ ರೂ. 12,00,000/- ಲಕ್ಷ್ಮ ಮೌಲ್ಯದ ಲಾರಿ ಜಪ್ತಿ

  ಗುರಮಿಟಕಲ್ ಪಟ್ಟಣದಿಂದ ಮುಂಬೈ ವಾಸಿಗೆ ಗುಲಬರ್ಗಾ ಮಾರ್ಗವಾಗಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದಾರೆಂಬ ಮಾಹಿತಿ ಬಂದ ಮೇರೆಗೆ ಮಾನ್ಯ ಶ್ರೀ ಎನ್. ಸತೀಶಕುಮಾರ ಐ.ಪಿ.ಎಸ್., ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಲಿಖಿತ ರೂಪದಲ್ಲಿ ಮಾಹಿತಿಯನ್ನು ತಿಳಿಸಿ ದಾಳಿಗೆ ಸಹಕರಿಸಲು ಕೋರಿ, ಈ ತನಿಖಾ ತಂಡದಲ್ಲಿ ಡಿಸಿಐಬಿ ಘಟಕ ಹಾಗು ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಮಾನ್ಯ ಶ್ರೀ ಕಾಶೀನಾಥ ತಳಕೇರಿ ಅಪರ ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಶ್ರೀ ಎ.ಡಿ. ಬಸಣ್ಣನವರ್ ಡಿ.ಎಸ್.ಪಿ. ಬಿ ಉಪ-ವಿಭಾಗರವರ ಮಾರ್ಗದರ್ಶನದಲ್ಲಿ ಹುಮ್ನಾಬಾದ ರಿಂಗ್ ರೋಡ್ ಹತ್ತಿರ ಲಾರಿ ನಂ: ಕೆ.ಎ. 56 0062 ನೇದ್ದನ್ನು ಹಿಡಿದು ಲಾರಿಯಲ್ಲಿದ್ದ ಆರೋಪಿತರಾದ 1) ಚಾಲಕ ಜಯತೀರ್ಥ ರಂಜೋಳ ವಯ: 25 ವರ್ಷ ಸಾ: ಹುಡಗಿ ತಾ:ಹುಮ್ನಾಬಾದ, 2) ಲಾರಿ ಕ್ಲೀನರ್ ಸೂರ್ಯಕಾಂತ ಬೋರಾಳ ವಯ:21 ವರ್ಷ ಸಾ: ಹಳ್ಳಿಖೇಡ ತಾ:ಹುಮ್ನಾಬಾದ ಇವರನ್ನು ಹಿಡಿದು ಲಾರಿಯಲ್ಲಿದ್ದಂತಹ ಅಕ್ರಮವಾಗಿ ಸಾಗುತ್ತಿದ್ದ ಪಡಿತರ ಅಕ್ಕಿ ಸುಮಾರು 680 ಚೀಲಗಳಲ್ಲಿ ಸುಮಾರು 17 ಟನ್ ಅದರ ಅಂದಾಜು ಕಿಮ್ಮತ್ತು ರೂ. 3,35,750/- ಹಾಗೂ ಲಾರಿ ಅಂದಾಜು ಕಿಮ್ಮತ್ತು 12 ಲಕ್ಷ ರೂಪಾಯಿ ಹೀಗೆ ಒಟ್ಟು ಸುಮಾರು ರೂ. 17,35,750/- ಮಾಲನ್ನು ಜಪ್ತಿಪಡಿಸಿಕೊಂಡು, ಲಾರಿ ಚಾಲಕ ಜಯತೀರ್ಥ ಈತನ ಹೇಳಿಕೆಯಂತೆ ಗುರಮಿಟಕಲ್ ಪಟ್ಟಣದ ಲಕ್ಷ್ಮಿ ತಮ್ಮಪ್ಪ ಸ್ವಾಮಿ ಟ್ರೇಡಿಂಗ್  ಇದರ ಮಾಲಿಕರಾದ ನರೇಂದ್ರ ರಾಠೋಡ ಇವರ ಗೋದಾಮಿಗೆ ಹೋಗಿ ಅಲ್ಲಿ ಅಪಾರ ಪ್ರಮಾಣದ ಸರಕಾರಿ ಸರಬರಾಜಿನಿಂದ ಬಂದಂತಹ ಅಕ್ಕಿಯನ್ನು ಖಾಸಗಿ ಟ್ರೇಡಿಂಗ್ ಗಳಾದ ಡೀರ್ ಹಾಗೂ ಅನ್ನಪೂರ್ಣ ಕಂಪನಿಯ ಬ್ಯಾಗ್ ಚೀಲಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದನ್ನು ಗಮನಿಸಿ, ಸದರ್ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಅಕ್ಕಿ ಹಾಗೂ ಆರೋಪಿತರನ್ನು ದಸ್ತಗಿರಿ ಮಾಡುತ್ತಿದ್ದಾಗ ನರೇಂದ್ರ ರಾಠೋಡ್ ಹಾಗೂ ಸಾಯಬಣ್ಣಾ ವಕೀಲ ಇವರ ಪ್ರಚೋದನೆಯ ಮೇರೆಗೆ 100-150 ಜನರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಮಾಡಿ ಬಂಧಿತ ಆರೋಪಿತರಾದ ರಾಜು ರಾಠೋಡ ಹಾಗೂ ಚನ್ನಬಸಯ್ಯಾ ಇವರುಗಳನ್ನು ಪೊಲೀಸರ ವಶದಿಂದ ಬಲಪ್ರದರ್ಶಿಸಿ ಬಿಡಿಸಿಕೊಂಡು ಅಕ್ರಮವಾಗಿ ಸಂಗ್ರಹಿಸಿಟ್ಟ ಪಡಿತರ ಅಕ್ಕಿಯನ್ನು ಜಪ್ತಿಪಡಿಸಿಕೊಳ್ಳಲು ಅಡ್ಡಿಯುಂಟು ಮಾಡಿರುತ್ತಾರೆ. ಈ ಕುರಿತು ಗುರಮಿಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪುನಃ ಹೆಚ್ಚಿನ ಸಿಬ್ಬಂದಿಯೊಂದಿಗೆ ನರೇಂದ್ರ ರಾಠೋಡ್‌ರವರಿಗೆ ಸೇರಿದ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಂತಹ ಮಯೂರ ಬ್ರಾಂಡ್ ಬೆಸ್ಟ್ ಕ್ವಾಲಿಟಿ ಹಾಗೂ ಡೀರ್ ಬ್ರಾಂಡ್ ಬೆಸ್ಟ ಕ್ವಾಲಿಟಿಯ ಸುಮಾರು 74 ಟನ್ ಪಡಿತರ ಅಕ್ಕಿಯನ್ನು ಜಪ್ತಿಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ರೂ. 22,20,000/- ಹೀಗೆ ಒಟ್ಟು ಸುಮಾರು ರೂ. 25,55,000/- ಮೌಲ್ಯದ ಪಡಿತರ ಅಕ್ಕಿ ಹಾಗೂ ರೂ. 12 ಲಕ್ಷ ಮೌಲ್ಯದ ಲಾರಿಯನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಹಾಗೂ ಈ ಮೊದಲು ಅನಧೀಕೃತವಾಗಿ ಸಾಗಿಸಿದ ಪಡಿತರ ಅಕ್ಕಿಯ ದಾಖಲಾತಿಗಳನ್ನು ಹಾಗೂ ಚೀಲ ಹೊಲಿಯುವ ಮಶೀನ್ ಮತ್ತು ತೂಕದ ಯಂತ್ರವನ್ನು ಕೂಡಾ ಜಪ್ತಿಪಡಿಸಿಕೊಳ್ಳಲಾಗಿದೆ.   
          ನರೇಂದ್ರ ರಾಠೋಡ್ ಈತನು ಸರ್ಕಾರಿ ಪಡಿತರ ಅಕ್ಕಿಯನ್ನು ಗುರಮಿಟಕಲ್ ಪಟ್ಟಣದ ತನ್ನ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಪಡಿತರ ಅಕ್ಕಿ ಅಂತಾ ಗುರುತು ಸಿಗದ ಹಾಗೆ ಮಯೂರಾ ಬ್ರಾಂಡ್, ಅನ್ನಪೂರ್ಣ ಬ್ರಾಂಡ್, ಡೀರ್ ಬ್ರಾಂಡ್‌ಗಳ 25 ಹಾಗೂ 50 ಕೆ.ಜಿ. ಬ್ಯಾಗ್‌ಗಳಲ್ಲಿ ತುಂಬಿಸಿ ಅಕ್ರಮವಾಗಿ ಮುಂಬೈ ಹಾಗೂ ಇತರೆ ಕಡೆಗಳಲ್ಲಿ ಸಾಗಿಸಿರುವುದು ತನಿಖೆಯ ಕಾಲಕ್ಕೆ ವಶಪಡಿಸಿಕೊಂಡ ದಾಖಲಾತಿಗಳಿಂದ ತಿಳಿದು ಬಂದಿರುತ್ತದೆ.  
          ಈ ತನಿಖಾ ತಂಡದ ಪತ್ತೇಕಾರ್ಯವನ್ನು ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು ಶ್ಲಾಘಿಸಿರುತ್ತಾರೆ.  

ಗುಲಬರ್ಗಾ  ಜಿಲ್ಲಾ ಪೊಲೀಸ್ ರ ಕಾರ್ಯಚರಣೆ
2 ಜನ ಸರಗಳ್ಳರ ಬಂಧನ, 1.65 ಲಕ್ಷ ಮೌಲ್ಯದ ಬಂಗಾರದ ಸರ ಮತ್ತು ಮೋಟಾರ ಸೈಕಲ್ ಜಪ್ತಿ.
 ಗುಲಬರ್ಗಾ ನಗರದಲ್ಲಿ ಇತ್ತಿಚಿಗೆ ಮನೆಗಳ್ಳತನ ಹಾಗು ಮಹಿಳೆಯರ ಸರಗಳ್ಳತನದಿಂದ ಗುಲಬರ್ಗಾ ನಾಗರೀಕರಲ್ಲಿ ಆತಂಕ ಉಂಟಾಗಿದ್ದರಿಂದ ಈ ವಿಷಯದ ಕುರಿತು ಬೆಳಗಾಂ ವಿಧಾನ ಸಭೆಯ ಅಧಿವೇಶನದಲ್ಲಿ ಚರ್ಚೆಯಾಗಿತ್ತು, ಈ ಕುರಿತು ಮಾನ್ಯ ಶ್ರೀ ಎ.ಎಮ್. ಪ್ರಸಾದ ಐ.ಪಿ.ಎಸ್,. ಹೆಚ್ಚುವರಿ ಪೊಲೀಸ್ ಮಹಾ ನಿರ್ದೆಶಕರು (ಅಪರಾಧ) ಬೆಂಗಳೂರು ರವರ ನಿರ್ದೇಶನದ ಮೇರೆಗೆ ಮಾನ್ಯ ಈಶಾನ್ಯ ವಲಯ ಗುಲಬರ್ಗಾ ಶ್ರೀ ಮಹಮದ ವಜೀರ ಅಹಮದ ಐ.ಪಿ.ಎಸ್., ಪೊಲೀಸ್ ಮಹಾ ನಿರೀಕ್ಷಕರು, (ಈವ) ಗುಲಬರ್ಗಾ ಇವರು ಒಂದು ವಿಶೇಷ ತಂಡವನ್ನು ರಚಿಸಿ ಅವರ ಮಾರ್ಗದರ್ಶನದಲ್ಲಿ ಶ್ರೀ ಎನ್. ಸತೀಶಕುಮಾರ ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರ ನೇತ್ರತ್ವದಲ್ಲಿ ಸಿಪಿಐ ಶ್ರೀ ಎಸ್. ಅಸ್ಲಾಂ ಬಾಷ ಪ್ರಭಾರಿ ಸಿ.ಪಿ.ಐ ಎಂ.ಬಿ ನಗರ ವೃತ್ತ,  ಶ್ರೀಮಂತ ಇಲ್ಲಾಳ ಪಿ.ಎಸ್.ಐ, ತಿಮ್ಮಣ್ಣ ಎಸ್ ಚಾಮನೂರ ಪಿ.ಎಸ್.ಐ (ಅ.ವಿ) ಹಾಗು ಸಿಬ್ಬಂದಿಯವರಾದ ಪ್ರಭಾಕರ್, ವೇದರತ್ನಂ, ಅಶೋಕ, ಮಾಶಕ, ಮಲ್ಲಿಕಾರ್ಜುನ, ಅಣ್ಣಪ್ಪಾ, ಗಂಗಾಧರ, ಶ್ರೀನಿವಾಸರೆಡ್ಡಿ, ಮಸೂದ ಅಹ್ಮದ, ಸಿದ್ರಾಮಯ್ಯ ಸ್ವಾಮಿ ರವರುಗಳು ಇಬ್ಬರು ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತ ಆರೋಪಿಗಳಾದ ರಾಜಕುಮಾರ ತಂದೆ ಹಣಮಂತ ಗಡದಳ್ಳಿ ವಯಃ25 ವರ್ಷ, ಭೀಮಾಶಂಕರ ತಂದೆ ಮರೆಪ್ಪಾ ಹಿಟ್ಟಲಗೇರ್ ವಯಃ24 ವರ್ಷ ಇಬ್ಬರು ವಾಸಃಭೂಪಾಲ್ ತೆಗನೂರು ತಾಃಜಿಃ ಗುಲಬರ್ಗಾ, ಈ ಆರೋಪಿಗಳು  3  ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರಿಂದ ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ  3 ಬಂಗಾರದ ಚೈನ್  36 ಗ್ರಾಂ ಅಃಕಿಃ 1,15.000/-  ರೂ. ಹಾಗು ಸರಗಳ್ಳತನ ಮಾಡಲು ಬಳಸಿದ ಮೋಟಾರ ಸೈಕಲ್ ಅಃಕಿಃ  50,000/- ರೂ. ಹೀಗೆ ಒಟ್ಟು  1, 65, 000/- ರೂ. ಬೆಲೆ ಬಾಳುವುದನ್ನು ಜಪ್ತಿ ಮಾಡಿರುತ್ತಾರೆ.ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.  

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ರಾಯಮ್ಮಾ ಗಂಡ  ಸುಭಾಶ್ಚಂದ್ರ ಜಿವಣಗಿ  ಸಾ|| ಕಪನೂರ ಗುಲಬರ್ಗಾ ರವರು ನಾನು ದಿನಾಂಕ:21-12-2012 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಭೀಮಶ್ಯಾ ಪೂಜಾರಿ ಹೊಲದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಮನೆಯ ಕಡೆಗೆ ಹೊರಟಾಗ ಬಂಡೆಪ್ಪ ಬಾಚನಳ್ಳಿ ಇವರ ಅಂಗಡಿ ಎದುರುಗಡೆ ಇರುವ ರೋಡ ಕ್ರಾಸ್ ಮಾಡುತ್ತಿರುವಾಗ ಬಜಾಜ ಬಾಕ್ಸರ ಕೆಎ 32 ಕ್ಯೂ 1725 ನೇ ದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ನನ್ನ ಬಲಗಾಲಿಗೆ ಅಪಘಾತ ಪಡಿಸಿದ್ದರಿಂದ ಭಾರಿಗಾವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 422/12 ಕಲಂ 279, 338 ಐಪಿಸಿ ಸಂ. 187 ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಚಿತ್ತಾಪೂರ ಪೊಲೀಸ್ ಠಾಣೆ:ಗೋದಾವರಿ ಗಂಡ ಮರೆಪ್ಪಾ ಮರತೂರ ಸಾ|| ಭಾಗೋಡಿ ತಾ|| ಚಿತ್ತಾಪೂರ ರವರು ನಾವು ದಿನಾಂಕ.21/12/2012 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಜಗದೇವಪ್ಪ ತಂದೆ ಸಿದ್ರಾಮಪ್ಪ ಬಾಸಬಾ ರವರ ಟಂಟಂ ನಂ-ಕೆಎ-33-4491 ನೇದ್ದರಲ್ಲಿ ನಮ್ಮೂರಿನ ಅಯ್ಯಮ್ಮ ಚವ್ಹಾಣ, ಶರಣಪ್ಪ ಹೆಡಗಿ, ದ್ರೌಪತಿ ಏರಿ, ಶಿವಮ್ಮ ಕುದರಿ, ಸಾಬವ್ವ ಬೆಳಗುಂಪಿ, ಸರಸ್ವತಿ ನಾಟಿಕಾರ. ರತ್ನಮ್ಮ ಚಾಕರಿ, ಕಸ್ತೂರಿಬಾಯಿ ಏರಿ ಗೌರಮ್ಮ ಕೋಡದೂರ, ವೀಠಬಾಯಿ ಹೆಡಗಿರವರು ಕೂಡಿಕೊಂಡು ಟಂಟಂ.ಗಾಡಿಯಲ್ಲಿ ಕುಳಿತುಕೊಂಡಿದ್ದು ನಾನು ಆಸ್ಪತ್ರೆಗೆ ಹೋಗುವ ಕೆಲಸದಲ್ಲಿದ್ದು, ಉಳಿದವರೆಲ್ಲರೂ ಸ್ತ್ರಿ-ಶಕ್ತಿ ವಿಜಯಲಕ್ಷಿ ಸಂಘದ ತರಬೇತಿ ಕುರಿತು ಹೋಗುವವರಿದ್ದು,ಟಂಟಂ ಗಾಡಿಯ ಚಾಲಕ ಅತೀವೇಗ ಹಾಗು ನಿಸ್ಕಾಳಿಜೀತನದಿಂದ ನಡೆಸಿಕೊಂಡು ಹೋಗಿ ಭಾಗೋಡಿ ಮತ್ತು ಮೂಡಬೂಳ ಗ್ರಾಮದ ನಡುವೆ ಮರಗಮ್ಮ ಗುಡಿಯ ಹತ್ತಿರ ರೋಡಿನಲ್ಲಿ ಪಲ್ಟಿಮಾಡಿದ್ದರಿಂದ ನಾವೆಲ್ಲರೂ ಕೆಳಗೆ ಬಿದ್ದೆವು, ನನಗೆ ಬಲಗೈ ಮುಂಗೈಯ ಹತ್ತಿರ ರಕ್ತಗಾಯವಾಯಿತು ಮೇಲ್ಕಂಡವರಿಗೆಲ್ಲ ಸಾಧಾ ಮತ್ತು ಭಾರಿ ಗಾಯಗಳಾಗಿರುತ್ತವೆ. ಇನ್ನೂ 3-4 ಜನರು ಇದ್ದು ಅವರಿಗೆ ಕೂಡಾ ಸಣ್ಣಪುಟ್ಟ ಗಾಯಗಳಾಗಿರುತ್ತವೆ. ಭಾರಿ ಗಾಯ ಹೊಂದಿದವರಿಗೆ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾ  ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ.ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:121/2012 ಕಲಂ, 279,337,338 ಐ.ಪಿ.ಸಿ ಸಂಗಡ 187 ಐ.ಎಮ್.ವ್ಹಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು, ಉಪಚಾರದಲ್ಲಿದ್ದ ಗೌರಮ್ಮ ಗಂಡ ಮಲ್ಕಪ್ಪ ಕೋಡದೂರ ಮತ್ತು ದ್ರೌಪತಿ ಗಂಡ ಪರಮೆಶ್ವರ ಏರಿ ಇವರು ಉಪಚಾರ ಹೊಂದುತ್ತಿದ್ದಾಗ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿರುತ್ತಾರೆ ಅಂತಾ ಪುರಾವಣೆ ಹೇಳಿಕೆ ನೀಡಿದ್ದರಿಂದ ಸಾರಂಶದ ಮೇಲಿಂದ ಸದರ ಪ್ರಕರಣದಲ್ಲಿ ಕಲಂ, 304(ಎ) ಐ.ಪಿ.ಸಿ ಅಳವಡಿಸಿಕೊಳ್ಳಲಾಗಿದೆ.