POLICE BHAVAN KALABURAGI

POLICE BHAVAN KALABURAGI

12 April 2018

KALABURAGI DISTRICT REPORTED CRIMES

ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ನರೋಣಾ ಠಾಣೆ : ದಿನಾಂಕ: 11/04/2018 ರಂದು ಲೇಂಗಟಿ ಗ್ರಾಮದ ಮಹಾದೇವ ದೇವಸ್ಥಾನದ ಹತ್ತಿರ  ಒಬ್ಬ ವ್ಯಕ್ತಿಯು ಅಕ್ರಮವಾಗಿ ಮದ್ಯವನ್ನು ತನ್ನ ಅಧೀನದಲ್ಲಿ ಸಂಗ್ರಹಿಸಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ಆಳಂದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳವಾದ ಲೇಂಗಟಿ ಗ್ರಾಮದಲ್ಲಿರುವ ಮಹಾದೇವ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಮಹಾದೇವ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯ ಬದಿಯಲ್ಲಿ ಒಬ್ಬ ವ್ಯಕ್ತಿಯು ತನ್ನ ಮುಂದೆ ಒಂದು ರಟ್ಟಿನ ಬಾಕ್ಸದಲ್ಲಿ ಮದ್ಯದ ಪೌಚಗಳನ್ನು ಸಂಗ್ರಹಿಸಿ ಇಟ್ಟಿಕೊಂಡು ಜನರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಡಲಾಗಿ ಸಾರಾಯಿ ಖರೀದಿಸಲು ಬಂದ ಜನರು ಓಡಿಹೋಗಿದ್ದು ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಲಕ್ಷ್ಮಣ ತಂದೆ ಬಂಡಪ್ಪ ಉಪ್ಪಾರ, ಸಾ||ಲೇಂಗಟಿ ಗ್ರಾಮ,ತಾ:ಆಳಂದ ಅಂತಾ ಹೇಳಿದನು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಪರವಾನಿಗೆ ಅಥವಾ ದಾಖಲಾತಿಗಳ ಬಗ್ಗೆ ವಿಚಾರಿಸಲು ಅನಧಿಕೃತವಾಗಿ ತನ್ನ ಅಧೀನದಲ್ಲಿ ಇಟ್ಟುಕೊಂಡು ಮಾರಾಟ ಮತ್ತು ಸಾಗಾಣೆ ಮಾಡುತ್ತಿರುವ ಬಗ್ಗೆ ತಿಳಿಸಿದನು. ಸದರಿಯವನ ಮುಂದೆ ಒಂದು ರಟ್ಟಿನ ಬಾಕ್ಸದಲ್ಲಿ ಸಂಗ್ರಹಿಸಿ ಇಟ್ಟಿರುವ ಪೌಚಗಳನ್ನು ಪರಿಶಿಲಿಸಲಾಗಿ Original choice 180 ML ನ 30 ಪೌಚಗಳು ಪ್ರತಿ ಪೌಚನ ಮೌಲ್ಯ 56 ರೂ 27 ಪೈಸೆ. ಒಟ್ಟು ಅ:ಕಿ: 1688 ರೂ ಇದ್ದು ಹಾಗು ಆಪಾದಿತನು ಮದ್ಯ ಮಾರಾಟ ಮಾಡಿ ಸಂಗ್ರಹಿಸಿದ ನಗದು ಹಣ 250/- ರೂ ಗಳು ದೋರೆತಿದ್ದು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಫರತಾಬಾದ ಠಾಣೆ : ದಿನಾಂಕ 10/04/18 ರಂದು ನಂದಿಕೂರ ಗ್ರಾಮದ ಹನುಮಾನ ಗುಡಿಯ ಕಟ್ಟೆಯ ಮೇಲೆ ಸಾರ್ವ ಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಪರತಾಬಾದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ   ಸಾರ್ವಜನಿಕರಿಂದ ಹಣ ಪಡೆದು 1 ರೂಪಾಯಿಗೆ  80/- ರೂಪಾಯಿ ಕೊಡುತ್ತೇನೆ ಅಂತಾ ಕೂಗುತ್ತಾ ಮಟಾಕ ನಂಬರ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು  ದಾಳಿ ಮಾಡಿ ಒಬ್ಬನನ್ನು ವಶಕ್ಕೆ ಪಡೆದು ಹೆಸರು ವಿಚಾರಿಸಲು ಚಂದ್ರಯ್ಯ ತಂದೆ ಗುಂಡಯ್ಯ ಗುತ್ತೇದಾರ ಸಾ; ನಂದಿ ಕೂರ ತಾ: ಜಿ: ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನಿಂದ ಜೂಜಾಟಕ್ಕೆ ಬಳಸಿದ  2250/- ರೂ ನಗದು ಹಣ ಒಂದು ಬಾಲ ಪೆನ್ನು, ಮಟಕಾ ಚೀಟಿ ಜಪ್ತ ಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದನಗಳ ಕಳವು ಪ್ರಕರಣ :
ನರೋಣಾ ಠಾಣೆ : ಶ್ರೀ.ಸಿದ್ರಾಮಪ್ಪ ತಂದೆ ಗುರುಶಾಂತಪ್ಪ ಭೂಸನೂರ, ಸಾ||ಕಡಗಂಚಿ ಗ್ರಾಮ ಇವರು ಎರಡು ಎಮ್ಮೆಗಳು ಮತ್ತು ಒಂದು ಎಮ್ಮೆ ಮಣಕಾ ಇರುತ್ತವೆ ಅವುಗಳನ್ನು ದಿನಾಲು ನಮ್ಮ ಮನೆಯ ಮುಂದಿನ ಬಯಲು ಜಾಗದಲ್ಲಿ ಕಟ್ಟುತ್ತೇವೆ. ಅದರಂತೆ ದಿನಾಂಕ:06-04-2018 ರಂದು ಎಂದಿನಂತೆ ಸಾಯಂಕಾಲ ಮನೆಯ ಮುಂದೆ ಕಟ್ಟಿರುತ್ತೇನೆ. ರಾತ್ರಿ ಊಟಮಾಡಿ 11-30 ಗಂಟೆ ನಮ್ಮ ಎಮ್ಮಿಗಳಿಗೆ ಮೇವು ಹಾಕಿ ಮನೆಯೊಳಗೆ ಹೋಗಿ ಮಲಗಿರುತ್ತೇನೆ. ದಿನಾಂಕ:07-04-2018 ರಂದು ಬೆಳಿಗ್ಗೆ 06-00 ಗಂಟೆಗೆ ಎಂದಿನಂತೆ ಎಮ್ಮಿಗಳ ಹೆಂಡಿಕಸ ಮತ್ತು ಮೇವು ಹಾಕ ಬೇಕೆಂದು ಮನೆಯಿಂದ ಹೊರಗೆ ನಾನು ಮತ್ತು ನಮ್ಮ ಅಣ್ಣನಾದ ಚಂದ್ರಕಾಂತ ಭೂಸನೂರ ಇಬ್ಬರು ಬಂದು ನೋಡಲಾಗಿ ನಮ್ಮ ಮನೆಯ ಮುಂದೆ ಗುಟಕ್ಕೆ ಕಟ್ಟಿದ ಎಮ್ಮೆಗಳು ಇರಲಿಲ್ಲ. ಯಾರೊ ಕಳ್ಳರು ಕಳವುಮಾಡಿಕೊಂಡು ಹೊಗಿದ್ದರು. ನಂತರ ನಾನು ಮತ್ತು ನಮ್ಮ ಅಣ್ಣ ಹಾಗೂ ನಮ್ಮ ಸಂಬಂದಿಕರಾದ ಅಂಬಾರಾಯ ತಂದೆ ಹಣಮಂತರಾಯ ಜವಳಿ ಎಲ್ಲರೂ ಕೂಡಿ ನಮ್ಮ ಎಮ್ಮೆಗಳನ್ನು ಎಲ್ಲಾಕಡೆ ಹುಡಕಲಾಗಿ ಇಲ್ಲಿಯವರೆಗೆ ಸಿಕ್ಕಿರುವದಿಲ್ಲ. ನನ್ನ 3 ಎಮ್ಮೆಗಳ ಅಂದಾಜು ಕಿಮ್ಮತ್ತು 48000/-ರೂಪಾಯಿಗಳು ಆಗಬಹುದು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶಕೀಲ ಅಹ್ಮೆದ ತಂದೆ ಅಯುಬ ಪಟೇಲ್ ಕೂಡಿ ವಯಸ್ಸು:- 26 ವರ್ಷ ಜಾ:ಮುಸ್ಲಿಂ ಉ: ವ್ಯಾಪಾರ ಮು: ಸರಡಗಿ (ಬಿ) ತಾ:ಜಿ:ಕಲಬುರಗಿ ಹಾವ: ಉದನೂರ ಕ್ರಾಸ ಕಲಬುರಗಿ ವಿಳಾಸದಲ್ಲಿ ವಾಸವಾಗಿದ್ದು ನನ್ನ ಸ್ನೇಹಿತನಾದ ಸೈಯ್ಯದ ಸದ್ದಾಂ ಹುಸೇನ್ ತಂದೆ ಸೈಯ್ಯದ ದಸ್ತಗಿರ ಮು:ಮದಿನಾ ಕಾಲೋನಿ ಎಂ.ಎಸ್.ಕೆ ಮೀಲ ಇವರಿಂದ ಹೇಳಿ ಬರೆಸಿಕೊಡುವ ವಿನಂತಿ ದೂರು ಅರ್ಜಿ ಏನೆಂದರೆ ನಿನ್ನೆ ದಿನಾಂಕ:- 10/04/2018 ರಂದು ರಾತ್ರಿ 08:00 ಗಂಟೆ ಸುಮಾರಿಗೆ ನನ್ನ ಹೊಂಡಾ ಆಕ್ಟೀವ್ ಮೋಟಾರ ಸೈಕಲ್ ನಂ KA-32 EF-7565 ನೇದ್ದರ ಮೇಲೆ ಕಲಬುರಗಿ ನಗರದ ಎಂಎಸ್.ಕೆ. ಮಿಲ್ಲ  ಎರಿಯಾದಲ್ಲಿ ಇರುವ ಇವರ ಕಾಕನಾದ  ಎಸ್. ಪಟೇಲ ಇವರಿಗೆ ಭೇಟ್ಟಿ ಆಗಿ ಮರಳಿ ಮನೆಗೆ ಹೋಗಬೇಕೆಂದು ಈ ಮೇಲ್ಕಂಡ ಮೋಟಾರ ಸೈಕಲ್ ಮೇಲೆ ನಾನು ಒಬ್ಬನೇ ಇಂದು ದಿನಾಂಕ:- 11/04/2018 ರಂದು ಮದ್ಯ ರಾತ್ರಿ 01:15 ನಮ್ಮ ಕಾಕನ ಮನೆಯಿಂದ ಹೊರಟು ಮದ್ಯ ರಾತ್ರಿ 01:30 .ಎಂಕ್ಕೆ ಉದನೂರ ಕ್ರಾಸ ಹತ್ತಿರ ಜಂಪನಲ್ಲಿ ಮೋಟಾರ ಸೈಕಲ್ ನಿಧಾನ ಮಾಡಿ ಹೋಗುತ್ತಿದ್ದಾಗ ಆಗ ಹಿಂದಿನಿಂದ 02 ಮೋಟಾರ ಸೈಕಲಗಳ ಮೇಲ 04 ಜನ ಅಪರಿಚಿತರು ಬಂದು ನನ್ನ ಮೋಟಾರ ಸೈಕಲದ ಮುಂದೆ ಅವರ ಮೋಟಾರ ಸೈಕಲಗಳನ್ನು ಅಡ್ಡ ನಿಲ್ಲಿಸಿದರು ಆಗ ನಾನು ಮೋಟಾರ ಸೈಕಲ ನಿಲ್ಲಿಸಿದೇನು ಆಗ ಅವರೆಲ್ಲರೂ ನನಗೆ ಹಿಂದಿ ಭಾಷೆಯಲ್ಲಿ ಕಹಾ ಜಹರಾಹೆಬೇ ಅಂತಾ ಅಂದು ಅದರಲ್ಲಿ ಇಬ್ಬರು ನನಗೆ ಎದೆಯ ಮೇಲೆ ಅಂಗಿ ಹಿಡಿದು ಜಗ್ಗಾಡಿ ಇನ್ನೋಬ್ಬ ನನ್ನ ಕಿಸೆಯಲ್ಲಿದ್ದ ಅಂದಾಜು 15000/-ರೂ ಹಣವನ್ನು ಮತ್ತು ಸ್ಯಾಮಸಂಗ ಕಂಪನಿಯ ಜೆ5 ಮೋಬೈಲ್ ಅಕಿ-13000/-ರೂ ಕಿಮ್ಮತ್ತಿನ ಮೋಬೈಲ ನಂ-9590444691 ನೇದ್ದನ್ನು ಜಬರದಸ್ತಿಯಿಂದ ಕಸಿದುಕೊಂಡನು ಅವರು 04 ಜನರು ಇದುದ್ದರಿಂದ್ದ ನಾನು ಅವರಿಗೆ ಅಂಜಿ ಸುಮ್ಮನೇ ನಿಂತುಕೊಂಡ್ಡಿದ್ದೇನು ಅದರಲ್ಲಿ ಒಬ್ಬನು ನಾನು ನನ್ನ ಮೋಟಾರ ಸೈಕಲ ಹತ್ತಿರ ಹೋಗುತ್ತಿದ್ದಾಗ ನನಗೆ ಕಾಲಿನಿಂದ ಜೋರಾಗಿ ಒದ್ದು ನನ್ನ ಮೋಟಾರ ಸೈಕಲ್ ನಂ KA-32 EF-7565 ತೆಗೆದುಕೊಂಡು ರಾಮ ಮಂದಿರ ರಿಂಗ ರೋಡ ಕಡೆಗೆ ಹೋದರು ಸದರಿ 04 ಜನರು ಅಪರಿಚಿತರು ಇದ್ದು ಅವರು ಮುಖಕ್ಕೆ ದಸ್ತಿಗಳನ್ನು ಕಟ್ಟಿಕೊಂಡಿದ್ದರು ಅವರುಗಳು ಅಂದಾಜು 25 ರಿಂದ 27 ವಯಸ್ಸಿನವರು ಇರುತ್ತಾರೆ. ಘಟನೆ ಸ್ಥಳದಿಂದ ಅಲ್ಲೆ ಹತ್ತಿರದಲ್ಲಿದ್ದ ಸುಮಾರು 1/2  ಕಿ.ಮೀದಲ್ಲಿ ಅಂತರದಲ್ಲಿದ್ದ ನಮ್ಮ ಮನೆಗೆ ನಡೆದುಕೊಂಡು ಹೋಗಿ ಮನೆಯಲ್ಲಿ ಹಿರಿಯರಿಗೆ ವಿಚಾರ ಮಾಡಿ ನಂತರ ನನ್ನ ಸ್ನೇಹಿತರಾದ ಸೈಯ್ಯದ ಸದ್ದಾಂ ಹುಸೇನ್ ತಂದೆ ಸೈಯ್ಯದ ದಸ್ತಗಿರ ಮತ್ತು ರೆಹಮಾನ ತಂದೆ ಅಹ್ಮೆದ ಮಸೂದ ಪರ್ವೆಜ ಇವರನ್ನು ಪೋನ ಮಾಡಿ ನಮ್ಮ ಮನೆಗೆ ಕರೆಯಿಸಿಕೊಂಡು ಅವರು ನಮ್ಮ ಮನೆಗೆ ಬಂದ ನಂತರ ನಾವು 03 ಜನರು ಕೂಡಿಕೊಂಡು ರೆಹಮಾನ ಇತನ ಕಾರಿನಲ್ಲಿ ಕುಳಿತುಕೊಂಡು  ಪೊಲೀಸ ಠಾಣೆಗೆ ಬಂದಿರುತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ ದಿನಾಂಕ 02/04/2018 ರಂದು ಶ್ರೀ ರಸೂಲ ಪಟೇಲ ತಂದೆ ಬಾಷಪಟೇಲ ಕೂಡಿ ಸಾಃ ಕೊಳ್ಳೂರ ಗ್ರಾಮ ತಾ.ಜಿಃ ಕಲಬುರಗಿ ರವರ ಮನೆಯವರೆಲ್ಲರು  ಊಟಕ್ಕೆ ಕುಳಿತು ಕೊಂಡಾಗ ಮೃತಳಾದ ಯಾಸ್ಮೀನ ಇವಳು ಮನೆಯಲ್ಲಿ ಸ್ಟೋ ಮೇಲೆ ಕಾಯಿಸಲು ಇಟ್ಟ ಹಾಲು ತೆಗೆದು ಕೊಳ್ಳಬೇಕೆಂದು ಮೇಲ್ಗಡೆ ಇರುವ ಗ್ಲಾಸ ತೆಗೆದುಕೊಳ್ಳಲು ಹೊದಾಗ ಉಟ್ಟ ಬಟ್ಟೆಗೆ ಬೆಂಕಿ ಹತ್ತಿದ್ದು, ಗಾಬರಿಯಲ್ಲಿ ಸ್ಟೋ ಮೇಲೆ ಬಿದ್ದಾಗ ಮೈಗೆ ಬೆಂಕಿ ಹತ್ತಿ ಮೈಯಲ್ಲಾ  ಸುಟ್ಟಿದ್ದು, ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 10/04/2018 ರಂದು 2.00 ಪಿ.ಎಮಕ್ಕೆ ಮೃತಪಟ್ಟಿರುತ್ತಾಳೆ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.