POLICE BHAVAN KALABURAGI

POLICE BHAVAN KALABURAGI

20 July 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 20.06.2015 ರಂದು ಜೇವರಗಿ ಶಹಾಪುರ ಮೇನ್‌ ರೋಡ ಚಿಗರಳ್ಳಿ ಕ್ರಾಸ್ ಗುಂಪಾದ ಹತ್ತಿರ ರೋಡಿನಲ್ಲಿ ಶ್ರೀ ಸಿದ್ರಾಮಪ್ಪ ತಂದೆ ಅಡಿವೆಪ್ಪ ಪುಜಾರಿ ಸಾ : ಬೀಳವಾರ. ಹಾ:: ಕಲಬುರಗಿ ರವರ ಮಗನಾದ ಚಂದ್ರಶೇಖರ ಪುಜಾರಿ ಈತನು ತನ್ನ ಮೋಟಾರು ಸೈಕಲ್ ನಂ ಕೆ.ಎ32ಈಜಿ1281 ನೇದ್ದನ್ನು ನಡೆಸಿಕೊಂಡು ಜೇವರಗಿ ಕಡೆಯಿಂದ ಬೀಳವಾರ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಎದುರುನಿಂದ ಅಂದರೆ ಶಹಾಪುರ ಕಡೆಯಿಂದ ಒಂದು TATA Ace ನಂ ಕೆ.ಎ32ಬಿ0487 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿದ್ದರಿಂದ ಚಂದ್ರಶೇಖರ ಈತನು ಕೇಳಗೆ ಬಿಳಿಸಿ ಭಾರಿ ರಕ್ತಗಾಯ ಗೊಳೀಸಿ ತನ್ನ ವಾಹನದೊಂದಿಗೆ ಓಡಿ ಹೋಗಿದ್ದು ಗಾಯಾಳು ಚಂದ್ರಶೇಖರ ಈತನಿಗೆ ಇದೇ ದಿವಸ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು, ಅವನಿಗೆ ಉಪಚಾರ ಫಲಕಾರಿಯಾಗದೆ ದಿನಾಂಕ 19.07.2015 ರಂದು ಮಧ್ಯಾಹ್ನ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ಶ್ರೀ ಸಂಜುಕುಮಾರ ತಂದೆ ಸಿದ್ದಣ್ಣಾ ಮಲಘಾಣ ಸಾ:ಸಾವತಖೇಡ ಇವರ  ಅಣ್ಣನಾದ ಅಶೋಕ ಈಗ 2 ವರ್ಷಗಳಿಂದ ಕಲ್ಲೂರ ರೋಡ ಹತ್ತಿರ ಇರುವ ಚಟ್ಟಿ ನಾಡ ಸಿಮೆಂಟ ಕಂಪನಿಯ ಲಾರಿ ನಂ.ಕೆಎ-01-ಎಬಿ-6948 ನೇದ್ದರ ಮೇಲೆ ಚಾಲಕ ಅಂತ ಕೆಲಸ ಮಾಡುತ್ತಿದ್ದು ಆತನ ಸಂಗಡ ತಾನು ಕ್ಲೀನರ ಅಂತ ಕೆಲಸ ಮಾಡಿಕೊಂಡಿದ್ದು ನಿನ್ನೆ ದಿನಾಂಕ: 18/07/2015 ರಂದು 5 ಪಿಎಂಕ್ಕೆ ಚಟ್ಟಿ ನಾಡಾ ಸಿಮೆಂಟ ಇಳಿಸಿ ಬರಲು ನಾನು ನಮ್ಮ ಅಣ್ಣ ಅಶೋಕ ಹೊರಟು 8-45 ಪಿಎಂ ಸುಮಾರಿಗೆ ಹೊಸ ಹೆಬ್ಬಾಳ ಹತ್ತಿರ ಬಂದು ನಮ್ಮ ಅಣ್ಣ ಲಾರಿ ನಿಲ್ಲಿಸಿ ತನಗೆ ಸ್ವಲ್ಪ ಚಕರ ಬರುತ್ತಿದೆ ಅಂತ ತಿಳಿಸಿದನು. ಆಗ ನಾನು ನಮ್ಮ ಅಣ್ಣನಿಗೆ ಇಲ್ಲೇ ಮಲಗೋಣ ಅಂತ ತಿಳಿಸಿದಾಗ ಇಲ್ಲಾ ಇನ್ನು 10-15 ನಿಮಿಷದಲ್ಲಿ ನಮ್ಮ ಊರಿಗೆ ಹೋಗುತ್ತೇವೆ ಅಂತಾ  ಅಲ್ಲೆ ಬಾಬು ಹೊಟೇಲದಲ್ಲಿ ನೀರು ಕುಡಿದು ಲಾರಿ ಚಾಲು ಮಾಡಿದನು. ಆಗ ನಾನು ನಮ್ಮ ಅಣ್ಣನಿಗೆ ನಿದಾನವಾಗಿ ಚಲಾಯಿಸು ಅಂತ ಹೇಳಿ ನನ್ನ ಸೈಡಿಗೆ ಕುಳಿತ್ತೇನು. ಹೆಬ್ಬಾಳದಿಂದ ಹೊರಟು 1/2 ಕಿ,ಮೀ ದೂರ ನಮ್ಮ ಗ್ರಾಮದ ಕಡೆ ಹೋಗುತ್ತಿರುವಾಗ ನಮ್ಮ ಅಣ್ಣ ಸದರಿ ಲಾರಿಯನ್ನು ಅತಿವೇಗ & ನಿಷ್ಕಾಳಜಿತನದಿಂದ ನಡೆಯಿಸಿ ಅಪಘಾತ ಪಡಿಸಿ ರೋಡಿನ ಬಲ ಬದಿಯ ಮುಂದಿನ ಭಾಗ ಹಾಗೂ ಚಾಲಕನ ಸೀಟು ಒಂದಕ್ಕೊಂದು ಹತ್ತಿ ಅದರ ನಡುವೆ ನಮ್ಮ ಅಣ್ಣ ಸಿಕ್ಕಿ ಬಿದ್ದು ನನಗೆ ಹೊರಗೆ ತಗೆ ಅಂತ ಅನ್ನುತ್ತಿದನು. ನಾನು ನಮ್ಮ ಅಣ್ಣನಿಗೆ ಹೊರಗೆ ತೆಗೆಯಲು ಎಷ್ಟು ಪ್ರಯತ್ನ ಮಾಡಿದರು ಬರದೆ ಇದುದ್ದರಿಂದ ನಮ್ಮ ಸಂಬಂದಿಯಾದ ಸೂರ್ಯಕಾಂತ ತಂದೆ ಈರಣ್ಣಾ ನಾಟಿಕಾರ ಇತನಿಗೆ ಬರಲು ಫೋನ ಮಾಡಿ ತಿಳಿಸಿದಾಗ ಸೂರ್ಯಕಾಂತ ಹಾಗೂ ಆತನ ಗೆಳೆಯ ಹಣಮಂತ ತಂದೆ ಬಸವರಾಜ ತೇಲಿ ಸಾ: ಚಿಂಚೋಳಿ ಇಬ್ಬರೂ ಬಂದು ನೋಡಿ ಅವರು ತೆಗೆಯಲು ಪ್ರಯತ್ನ ಮಾಡಿದರು ಆಗಲಾರದ ಕಾರಣ ಇಬ್ಬರೂ ಹೆಬ್ಬಳಕ್ಕೆ ಹೋಗಿ ವೆಲ್ಡಿಂಗ್ ಮಶೀನ ತೆಗೆದುಕೊಂಡು ಬಂದು ಇಡಿ ರಾತ್ರಿ ವೆಲ್ಡಿಂಗ್ ಮಶೀನ ಸಹಾಯದಿಂದ ಕಬ್ಬಿಣ ಕಟ್ ಮಾಡಿ ಅದರಲ್ಲಿ ಸಿಕ್ಕಿ ಬಿದ್ದ ನಮ್ಮ ಅಣ್ಣನಿಗೆ ಹೊರಗೆ ತೆಗೆದಾಗ ನಮ್ಮ ಅಣ್ಣ ಇನ್ನು ಮಾತನಾಡುತ್ತಿದ್ದು ಅವನಿಗೆ ಕೆಳ ಹೊಟ್ಟೆಗೆ ಗುಪ್ತಗಾಯ ಆಗಿದ್ದು  ಅವನಿಗೆ ಇಂದು ದಿನಾಂಕ: 19/07/15 ರಂದು ಬೆಳಿಗ್ಗೆ 8-30 ಎಎಂಕ್ಕೆ ಉಪಚಾರ ಕುರಿತು 108 ಅಂಬುಲೇನ್ಸಕ್ಕೆ ಕರೆಸಿ ಅದರಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ಒಯ್ಯುವಾಗ ಮಾರ್ಗ ಮಧ್ಯದಲ್ಲಿ ನಮ್ಮ ಅಣ್ಣ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಚೌಕ ಠಾಣೆ : ದಿನಾಂಕ 19.07.2015 ರಂದು ಸಾಯಂಕಾಲ ಶೇಖ ರೋಜಾ ಬಡವಾಣೆಯ ಜುನೇದಿ ಕಾಲೋನಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಧೈವಲೀಲೆ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಪಿ.ಐ. ಚೌಕ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶೇಖ ರೋಜಾ ಬಡವಾಣೆಯ ಜುನೇದಿ ಕಾಲೋನಿ ಹತ್ತಿರ ಇರುವ ಮುಳ್ಳಿನ ಕಂಟಿಯ ಮರೆಯಲ್ಲಿ  ನಿಂತು ನೋಡಲು ಶೇಖ ರೋಜಾ ಬಡವಾಣೆಯ ಜುನೇದಿ ಕಾಲೋನಿಯ ಖುಲ್ಲಾ ಬಯಲು ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ 4 ಜನರು ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಜೂಜಾಟ ನಿರತರ ಮೇಲೆ ದಾಳಿಮಾಡಿ ಅವರನ್ನು ಹಿಡಿದುಕೊಂಡು ವಿಚಾರಿಸಲು 1) ರವಿ ತಂದೆ ಬಸವಣಪ್ಪ ಭುಜುಕರ್ ಸಾಃ ಶೇಖ ರೋಜಾ ಕಲಬುರಗಿ 2) ಇಮಾಮಾ ತಂದೆ ಮಹಿಬೂಬಸಾಬ ಮೂಜಾವರ ಸಾಃ ಮಡಕಿ ಗ್ರಾಮ ತಾಃ ಆಳಂದ ಹಾಃವಃ ಮುಲ್ಲಗಳ ಮಜ್ಜಿದ ಹತ್ತಿರ ಶೇಖ ರೋಜಾ  ಕಲಬುರಗಿ 3) ಅಯ್ಯಾಣ್ಣಾ ತಂದೆ ಮಲಕ್ಕಪ್ಪ ಪಾಟೀಲ ಸಾಃ ಹನುಮಾನ ಗುಡಿ ಹತ್ತಿರ ಶೇಖ ರೋಜಾ ಕಲಬುರಗಿ 4) ರಾಣಪ್ಪ ತಂದೆ ಮಲ್ಲಿಕಾರ್ಜುನ ಭಾವೆ ಸಾಃ ಬೋರಾಬಾಯಿ ನಗರ ಬ್ರಹ್ಮಪೂರ ಕಲಬುರಗಿ ಇವರುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1670/- ರೂ ಮತ್ತು 52 ಇಸ್ಪೀಟ ಎಲೆಗಳು ಮತ್ತು ಮೊಬೈಲ ಪೂನಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ವಿದ್ಯಾಧರ ತಂದೆ ಚಂದ್ರಶ್ಯಾ ಪೂಜಾರಿ ಮು: ಹಳ್ಳಿ ಸಲಗರ ತಾ: ಆಳಂದ ಇವರು ತಮ್ಮ ಗ್ರಾಮದ ಮಹಮ್ಮದ್ ಶರಪೋದ್ದಿನ್ ತೆಲಕುಣಿ ಇವರ ಲಾರಿ ನಂ:ಎಮ್.ಎ:09 ಹೆಚ್.ಎಫ್:4507 ನೇದ್ದರ ಮೇಲೆ 02-03 ವರ್ಷಗಳಿಂದ ಚಾಲಕ ಅಂತಾ ಕೆಲಸ ಮಾಡುತ್ತಿದ್ದು ದಿನಾಂಕ: 17/07/2015 ರಂದು ಬೇಳಗ್ಗೆ ಲಾತೂರಕ್ಕೆ ಹೋಗಿ ನಾನು ಚಲಾಯಿಸುವ ಲಾರಿಯಲ್ಲಿ 50 ಕೆ.ಜಿ.ಯ 40 ಸೇಂಗಾದ ಬೀಜದ ಪಾಕೀಟ್ ಗಳು ಹಾಗೂ ಕಬ್ಬಿಣದ ಸಾಮಾನುಗಳನ್ನು ಹಾಗೂ 01 ಹೊಸ ತಾಡಪತ್ರಿ ಹಾಗೂ 02 ಹಳೆಯ ತಾಡಪತ್ರೆಯಿಂದ ಮುಚ್ಚಿಕೊಂಡು ಅಲ್ಲಿಂದ ಸಾಯಂಕಾಲ ಬಿಟ್ಟು ಉಮರ್ಗಾ ಮಾರ್ಗವಾಗಿ ಆಳಂದಕ್ಕೆ ಬರುವಾಗ ರಾತ್ರಿ 11:00 ಗಂಟೆ ಸುಮಾರಿಗೆ ಸಾಲೇಗಾಂವ ಕ್ರಾಸ್ ದಾಟಿ ಚಿತಲಿ ಚಡೌನದಲ್ಲಿ ಲಾರಿ ನಿಧಾನವಾಗಿ ಹೋಗುವಾಗ ಲಾರಿಯ ಹಿಂದುಗಡೆ ಸಪ್ಪಳವಾಗಿದ್ದು  ನಂತರ ತೆಲಕುಣಿ ಹತ್ತಿರ ಲಾರಿ ನಿಲ್ಲಿಸಿ ನೋಡಲಾಗಿ ಸದರಿ ಲಾರಿಯ ಮೇಲೆ ಮುಚ್ಚಿದ ತಾಡ ಪತ್ರಿ ಹರಿದಿದ್ದು ಅದರಲ್ಲಿದ 50 ಕೆ.ಜಿ.ಯ 03 ಸೇಂಗಾ ಬೀಜದ ಪಾಕೀಟ್ ಹಾಗೂ 01 ಹೊಸ ತಾಡಪತ್ರಿ ಇರಲಿಲ್ಲಾ. ಸದರಿ 50 ಕೆ.ಜಿ.ಯ 03 ಸೇಂಗಾ ಬೀಜದ ಪಾಕೇಟಿನ ಅ.ಕೀ.12000/-ರೂ ಹಾಗೂ 01 ಹೊಸ ತಾಡಪತ್ರಿಯ ಅ.ಕೀ.3000/-ರೂ ಹೀಗೆ ಒಟ್ಟು 15,000/-ರೂ ಕಿಮ್ಮತಿನ ಮಾಲನ್ನು ಚಿತಲಿ ಚಡೌನ ಹತ್ತಿರ ಲಾರಿ ನಿಧಾನವಾಗಿ ಹೋಗುವಾಗ ಯಾರೋ ಕಳ್ಳರು ರಾತ್ರಿ 11:00 ಗಂಟೆಯಿಂದ 11:30 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 19-07-2015 ರಂದು ಶಿವಪೂರ ಬನ್ನಟ್ಟಿ  ಗ್ರಾಮದ ಕಡೆಯಿಂದ ಅಕ್ರಮವಾಗಿ ಕಳ್ಳತನದಿಂದ ಟ್ರಾಕ್ಟರದಲ್ಲಿ  ಮರಳು ತುಂಬಿಕೊಂಡು ಹೊಗುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬನ್ನಟ್ಟಿ ಕ್ರಾಸ  ಹತ್ತಿರ ಇದ್ದಾಗ  ಎದುರುಗಡೆಯಿಂದ ಒಂದು ಟ್ರಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕ ನಮ್ಮ ಜೀಪ ನೋಡಿ ತನ್ನ  ಟ್ರಾಕ್ಟರನ್ನು  ನಿಲ್ಲಿಸಿ  ಓಡಿ ಹೋಗಿದ್ದು. ನಂತರ  ಪಂಚರ ಸಮಕ್ಷಮ ಟ್ರಾಕ್ಟರ  ಚಕ್ಕ ಮಾಡಲು, 1) JOHN DEERE ಕಂಪನಿಯದ್ದು ಇದ್ದು ಅದರ  ನಂ ಕೆಎ-28 ಟಿಬಿ 0713 ಟ್ರೈಲಿ ನಂ ಕೆಎ-28 ಟಿಎ-3255 ಅಂತ ಇದ್ದು , ಸದರಿ ಟ್ರಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಸದರಿ ಟ್ರಾಕ್ಟರನಲಿದ್ದ ಮರಳಿ ಅಂದಾಜು ಕಿಮ್ಮತ್ತು 3000/- ರೂ ಇರಬಹುದು ನಂತರ ಸದರಿ ಮರಳು ತುಂಬಿದ ಟ್ರಾಕ್ಟರನ್ನು  ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.