POLICE BHAVAN KALABURAGI

POLICE BHAVAN KALABURAGI

12 August 2011

GULBARGA DISTRICT REPORTED CRIMES


ಕೊಲೆ ಮಾಡಿದ 12 ಗಂಟೆಗಳಲ್ಲಿ ಕೊಲೆ ಗಡುಕರ ಬಂಧನ :

ಶ್ರೀಮತಿ ಸಂಗೀತಾ ಗಂಡ ಮಾಹಾಂತೇಶ ಪೂಜಾರಿ ಸಾ;ದುಬೈ ಕಾಲೂನಿ ಗುಲಬರ್ಗಾ ರವರು ನನ್ನ ಗಂಡ ಮಹಾಂತೇಶ ಇತನನ್ನು ದಿನಾಂಕ: 10-08-2011 ರಂದು 10-00 ಪಿ.ಎಂ.ದಿಂದ ದಿನಾಂಕ.11-08-2011 11-00 ಎ.ಎಂ. ಮದ್ಯದ ಅವಧಿಯಲ್ಲಿ ಉಪಳಾಂವ ಸೀಮೆಯ ವನ್ಯಧಾಮ (ಫಾರೆಸ್ಟ) ಪಕ್ಕದ ಪಟೇಲ ಇವರ ಹೊಲದಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕೆ ನನ್ನ ಗಂಡ ಮಾಹಾಂತೇಶ ಪೂಜಾರಿ ಸಾ;ಶಹಾಬಜಾರ ಗುಲಬರ್ಗಾ ಇತನಿಗೆ ಕಲ್ಲುಗಳಿಂದ ತಲೆಗೆ ಮುಖಕ್ಕೆ ಹೊಡೆದು ಭಾರಿ ಗಾಯಗೊಳಿಸಿ ಮುಖ ವಿರೂಪಗೊಳಿಸಿ ಕೃತ್ಯವನ್ನು ಮುಚ್ಚಿಹಾಕುವ ಉದ್ದೇಶದಿಂದ ಮುಖದ ಮೇಲೆ ಯಾಸೀಡ್ ಹಾಕಿ ಸಾಕ್ಷಿ ನಾಶ ಪಡಿಸಿರುತ್ತಾರೆ ಅಂತಾ ದೂರು ನೀಡಿದ್ದರ ಮೇರೆಗೆ ಕೊಲೆ ಮಾಡಿದ ಆರೋಪಿತರ ಪತ್ತೆ ಕುರಿತು ಮಾನ್ಯ ಶ್ರೀ ಪವಾರ ಪ್ರವೀಣ ಮಧುಕರ ಐಪಿಎಸ್. ಎಸ್.ಪಿ. ಗುಲಬರ್ಗಾ ಮತ್ತು ಶ್ರೀ ಕಾಶೀನಾಥ ತಳಕೇರಿ ಅಪರ ಎಸ್.ಪಿ. ಗುಲಬರ್ಗಾ ಇವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ.ಎ.ಡಿ ಬಸವಣ್ಣನವರ ಡಿ.ಎಸ್.ಪಿ.(ಬಿ) ಉಪ ವಿಭಾಗ ಪ್ರಭಾರಿ ಗ್ರಾಮೀಣ ಉಪ - ವಿಭಾಗ ಗುಲಬರ್ಗಾ ರವರ ಸಲಹೆ ಮೇರೆಗೆ ವಿಜಯಲಕ್ಷ್ಮೀ ಸಿ.ಪಿ.ಐ ಗ್ರಾಮೀಣ ವೃತ್ತ ಗುಲಬರ್ಗಾ, ಮತ್ತು ಆನಂದರಾವ ಪಿ.ಎಸ್.ಐ. (ಕಾ&ಸೂ) ಗ್ರಾಮೀಣ ಠಾಣೆ ಹಾಗೂ ಸಿಬ್ಬಂದಿಯವರಾದ ಸೂರ್ಯಕಾಂತ , ಪ್ರಭುಲಿಂಗ ,ಲಕ್ಕಪ್ಪಾ, ಪೇದೆಗಳಾದ ಕುಪೇಂದ್ರ , ಆನಂದ, ಮೋಯಿಜ ಹಾಗೂ ಶರಣು ,ಜೀಪ ಚಾಲಕರಾದ ಬಂಡಪ್ಪಾ ,ಮಲ್ಲಿಕಾರ್ಜುನ ಗ್ರಾಮೀಣ ಠಾಣೆ ಇವರುಗಳು ತಂಡಗಳನ್ನು ರಚಿಸಿಕೊಂಡು ಆರೋಪಿತರ ಪತ್ತೆಗಾಗಿ ಜಾಲ್ ಬೀಸಿ ಆಳಂದ ರೋಡಿನ ವಿಶ್ವರಾಧ್ಯ ಗುಡಿಯ ಹತ್ತಿರ ಇರುವಿಕೆಯ ಬಗ್ಗೆ ಖಚಿತ ಬಾತ್ಮಿಯನ್ನು ಪಡೆದುಕೊಂಡು ಕೋಲೆ ಮಾಡಿದ ಕೃಷ್ಣಕಾಂತ @ ಕೃಷ್ಣ,@ ಕಿಟ್ಯಾ ತಂದೆ ಲಕ್ಷ್ಮಣರಾವ ಅವಧೂತ, ಲಕ್ಷ್ಮೀಪುತ್ರ @ ಪುತ್ರು ತಂದೆ ಸುಭಾಷ ಗಣೆರ ಸಾ;ಇಬ್ಬರು ಶಹಾಬಜಾರ ಗುಲಬರ್ಗಾ ರವರನ್ನು ದಸ್ತಗಿರ ಮಾಡಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತಾರೆ. ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ, ಪಿಎಸ್.ಐ. (ಕಾ&ಸೂ) ಗ್ರಾಮೀಣ ಠಾಣೆ ಗುಲಬರ್ಗಾ ಹಾಗೂ ಸಿಬ್ಬಂದಿಯವರ ಪತ್ತೆ ಕಾರ್ಯಕ್ಕೆ ಪ್ರಶಂಸನೆ ಮಾಡಲಾಗಿದೆ.

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಠಾಣೆ
:ಶ್ರೀ ವಿಶ್ವನಾಥ ತಂದೆ ಶಿವಶರಣಪ್ಪ ಬೆಣ್ಣೂರ ಗೊದುತಾಯಿ ನಗರ ಜೇವರ್ಗಿರೋಡ ಗುಲಬರ್ಗಾ ರವರು ನಾನು ನನ್ನ ಎಕ್ಟೀವ ಹೊಂಡಾ ನಂ: ಕೆಎ 32 ಯು7659 ನೇದ್ದನ್ನು ಬಲಗಡೆ ಇಂಡಿಕೇಟರ ಹಾಕಿ ನಿಧಾನವಾಗಿ ಗೋದುತಾಯಿ ಕಾಲೋನಿ ಕಡೆಗೆ ತಿರುಗಿಸಿಕೊಳ್ಳುತ್ತಿದ್ದಾಗ ಮೋಟಾರ ಸೈಕಲ್ ನಂ:ಕೆಎ 32 ಎಲ್ 9316 ನೇದ್ದನ್ನು ರಾಷ್ಟ್ರಪತಿ ಸರ್ಕಲ್ ಕಡೆಯಿಂದ ರಾಂಗ ಸೈಡಿನಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಗಾಯಗೊಳಿಸಿ ಮೋಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಠಾಣೆ :
ಶ್ರೀಮತಿ  ನಿಂಗಮ್ಮ ಗಂಡ ಶರನಪ್ಪ ಬಳಿಚಕ್ರ  ಸಾ: ಸಂಜೀವನಗರ ಗುಲಬರ್ಗ ರವರು    ನನ್ನ ಮಗನಾದ ಜೀವನ ಮತ್ತು ವಿನೋದ ಮತ್ತು ಇನ್ನೊಬ್ಬ ಹೊಂಡಾ ಆಕ್ಟೀವಾ ಮೊಟಾರ ಸೈಕಲ್ ನಂ:ಕೆಎ 01 ಇ.ಎಫ್.3237ನೇದ್ದರ ಮೇಲೆ ಎಸ್.ವಿ.ಪಿ. ಸರ್ಕಲ್  ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ವಿನೋದ ಇತನು ಒಮ್ಮೇಲೆ ಕಟ್ಟ ಹೊಡೆದಿದ್ದರಿಂದ ಮೋಟಾರ ಸೈಕಲ್ ಸಮೇತ ಎಲ್ಲರು ಕೆಳಗೆ ಬಿದ್ದು ಅವರಲ್ಲಿ ಜೀವನನಿಗೆ ಗಾಯಗೊಳಿಸಿ ತನ್ನ ಹೊಂಡಾ ಅಕ್ಟೀವ ಮೋಟಾರ ಸೈಕಲ ಸಮೇತ ಓಡಿ ಹೊಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.                                                

ಕೊಲೆ ಪ್ರಕರಣ:
ಗ್ರಾಮೀಣ ಠಾಣೆ
ಶ್ರೀಮತಿ ಸಂಗೀತಾ ಗಂಡ ಮಹಾಂತೇಶ ಪೂಜಾರಿ ಜ್ಯಾತಿ;ಕುರುಬರ ಸಾ; ಕೆರೆ ಹತ್ತಿರ ದುಬೈಕಾಲೂನಿ ಆಳಂದ ರೋಡ ಗುಲಬರ್ಗಾ ರವರು ನನ್ನ ಗಂಡ ಮಹಾಂತೇಶ ಇತನನ್ನು ದಿನಾಂಕ.10-08-2011 ರಂದು 10-00 ಪಿ.ಎಂ.ದಿಂದ ದಿನಾಂಕ. 11-08-2011 ರಂದು ಮುಂಜಾನೆ 11-00 ಗಂಟೆಯ ಅವಧಿಯ ಮದ್ಯದಲ್ಲಿ ಯಾರೋ ದುಷ್ಕರ್ಮಿಗಳು ಉಪಳಾಂವ ಏರಿಯಾದ ವನ್ಯಧಾಮದ ಪಕ್ಕದ ಹೊಲದಲ್ಲಿ ಹರಿತವಾದ ಆಯುಧದಿಂದ/ಭಾರವಾದ ವಸ್ತುವಿನಿಂದ ಹೊಡೆದು ಭಾರಿ ರಕ್ತಗೊಳಿಸಿ, ಮುಖ ಜಚ್ಚಿದಂತೆಯಾಗಿ ಮಾಡಿ ಮುಖ ಪೂರ್ತಿ ವಿರೂಪ ಮತ್ತು ರಕ್ತಮಯ ಮಾಡಿ ಕೊಲೆ ಮಾಡಿದ್ದು, ಸದರಿ ಕೊಲೆ ಮುಚ್ಚು ಹಾಕುವ ದುರುದ್ದೇಶದಿಂದ ಮುಖದ ಮೇಲೆ ಯಾಶಿಡ್ ಹಾಕಿ ಮುಖ ವಿರೂಪಗೊಳಿಸಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಸಂಚಾರಿ ಪೊಲೀಸ್ ಠಾಣೆ
: ಮಲ್ಲಿಕಾರ್ಜುನ ತಂದೆ ಬಸಪ್ಪ ಕೊಕಟನೂರ ಸಾಃ  ಜಿಡಿಎ ಕಛೇರಿ ಎಸ.ವಿ.ಪಟೇಲ ಗುಲಬರ್ಗಾ ರವರು ಲಾರಿ ನಂ  HR 55 / L 2473   ನೇದ್ದರ ಚಾಲಕ ಹಸನ ಸಾ|| ಸಾ: ಗುರಗಾಂವ ಹರಿಯಾಣಾ ರಾಜ್ಯ ಇತನು ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಾಲಯಿಸಿ ಎಸ.ವಿ ಪಟೇಲ ಬಡಾವಣೆಯ ಸ್ವಾಗತ ಕಮಾನಕ್ಕೆ ಡಿಕ್ಕಿ ಪಡಿಸಿ ಅಂದಾಜು 40000 /- ರೂ. ಹಾನಿ ಮಾಡಿ ವಾಹನ ಸ್ಥಳದಲ್ಲಿಯೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.            

ಮೋಸ ವಂಚನೆ ಪ್ರಕರಣ :
ಅಫಜಲಪೂರ ಪೊಲೀಸ್ ಠಾಣೆ:
ಬಸವರಾಜ ತಂದೆ ನಾಮದೇವ ಸಿಂಗೆ ಸಾ|| ಬಳೂರಗಿ ತಾ|| ಅಫಜಲಪೂರ  ರವರು ನಮ್ಮ ಸಂಬಂದಿಕಳಾದ ದುಂಡವ್ವ ಇವಳನ್ನು ದಿನಾಂಕ 15/7/1988 ರಂದು ಸಂತಪ್ಪ ತಂದೆ ಮರೆಪ್ಪ ದಿಮ್ಮೆ ಮತ್ತು ಸಂಗಡ 4 ಜನರು ಸಾ|| ಎಲ್ಲರೂ ಬಳೂರಗಿ ರವರು ದುಂಡವ್ವ ಇವಳನ್ನು ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿ ಅವಳ ಹೆಸರಿನಲ್ಲಿದ್ದ ಜಮೀನು ದುಂಡವ್ವಳ ಸಹಿ ಮಾಡಿದಂತೆ ಕಾಗದ ಪತ್ರಗಳನ್ನು ಸೃಷ್ಟಿಸಿ ಸವೆð ನಂ.58,315 ತಮ್ಮ ಹೆಸರಿನಿಂದ ಮಾಡಿಕೊಂಡಿರುತ್ತಾರೆ ಅಂತಾ ಮಾನ್ಯ ಜೆ ಎಂ ಎಫ್ ಸಿ ಕೋರ್ಟ ಅಫಜಲಪೂರದಲ್ಲಿ ಅರ್ಜಿ ಸಲ್ಲಿಸಿದ್ದು ಮಾನ್ಯರ ಪತ್ರದ ಆಧೇಶದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ಆಳಂದ ಪೊಲೀಸ ಠಾಣೆ:
ಶಿವಾನಂದ ತಂದೆ ಫಕೀರಪ್ಪ ಭಕರೆ ಸಾ|| ರೇವಣಸಿದ್ದೇಶ್ವರ ಕಾಲೋನಿ ಆಳಂದ ರವರು ನನ್ನ ಟವರ ಪಕ್ಕದಲ್ಲಿರುವ ಇರುವ ಗಾರ್ಡ ರೂಮನಲ್ಲಿ  ಇದ್ದ 40 ಮೀಟರ ಆರ.ಎಫ್. ಕೇಬಲ ವಾಯರ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಕಮಲಾಪೂರ ಪೊಲೀಸ ಠಾಣೆ : ನಾಗಪ್ಪಾ ತಂದೆ ಏಗಪ್ಪಾ ಜಮಾದಾರ ಸಾ: ಚೆಂಗಟಾ ತಾ:ಚಿಂಚೋಳಿ ಜಿ :ಗುಲಬರ್ಗಾರವರು ನಾನು ದಿನಾಂಕ:11-08-2011 ರಂದು ಬೆಳಿಗ್ಗೆ ಕಮಲಾಪೂರದಲ್ಲಿ ಕೆಲಸವಿದ್ದ ಪ್ರಯುಕ್ತ ಕಮಲಾಪುರಕ್ಕೆ ಬಂದು ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಹೋಗಲು, ಬುಲೇರೋ ಪಿಕಪ್ ಗೂಡ್ಸ ವಾಹನ ನಂ: ಕೆಎ:32 ಬಿ:3037 ನೇದ್ದರಲ್ಲಿ ನಾನು, ನಮ್ಮ ಸಂಬಂಧಿಕರಾದ ಲಕ್ಷ್ಮಣ ಬಿಟನೂರ, ಮತ್ತು ನಮ್ಮೂರಿನವರಾದ ಸಿದ್ದಪ್ಪಾ ಖೇರ್ಜಿ, ಶರಣಪ್ಪಾ ದೇಸಾಯಿ ಹಾಗು ಅಂಬಣ್ಣಾ ತಂದೆ ಕಾಂಬಳೆ ಎಲ್ಲರೂ ಕುಳಿತುಕೊಂಡು ಚೆಂಗಟಾ ಗ್ರಾಮಕ್ಕೆ ಹೋಗುತ್ತಿರುವಾಗ ಕಮಲಾಪೂರ ಚೆಂಗಟಾ ರೋಡಿನ ವಡಗೇರಾ ಗ್ರಾಮದ ಸಮೀಪ ಚಾಲಕ ಸಂಜಿವಕುಮಾರ ಇತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ರೊಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿ ಪಲ್ಟಿ ಮಾಡಿದ್ದರಿಂದ ಒಳಗೆ ಕುಳಿತ ನಮ್ಮೆಲರಿಗೆ ರಕ್ತಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.