POLICE BHAVAN KALABURAGI

POLICE BHAVAN KALABURAGI

31 July 2013

GULBARGA DIST REPORTED CRIMES

ಕಳ್ಳತನ ಪ್ರಕರಣ:
ಅಶೋಕ ನಗರ ಪೋಲಿಸ್ ಠಾಣೆ:  ದಿನಾಂಕ 29-07-2013 ರಂದು ರಾತ್ರಿ 8 ಪಿಎಂಕ್ಕೆ ಶ್ರೀಮತಿ ಉಮಾಬಾಯಿ ಗಂಡ ದಿ:ಶಂಕರ ಭಟ್ಟ ಜೋಶಿ ಸಾ: ಹೂವಿನ ಹಳ್ಳಿ ತಾ:ಸಿಂಧಗಿ ಹಾ:ವ: ಪ್ಲಾಟ ನಂ 26 ಮಾಕಾ ಲೇ ಔಟ ಎನ್.ಜಿ.ಓ ಕಾಲೋನಿ ಗುಲಬರ್ಗಾ ರವರು ನೀಡಿದ ಪಿರ್ಯಾದಿಯ ಸಂಕ್ಷಿಪ್ತ ಸಾರಾಂಶವೆನೆಂದರೆ ನಾನು ನನ್ನ ನೆಗಣಿಯ ಬಾಣತನ ಮಾಡಲು ಗುಲಬರ್ಗಾದ ಮಾಕಾಲೇಔಟದ ನನ್ನ ಮೈದುನ ಮನೆಗೆ ಬಂದಿದ್ದು. ಇಂದು ದಿನಾಂಕ 29-07-2013 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ಗುಲಬರ್ಗಾದ ಮಾಕಾ ಲೇಔಟ ಬಡಾವಣೆಯಲ್ಲಿ ಮೈದುನ ಮನೆಯ ಮುಂದೆ ಕುಳಿತಾಗ ಯಾರೋ ಇಬ್ಬರು ಹುಡುಗರು ಒಂದು ಕಪ್ಪು ಬಣ್ಣದ ಮೋಟಾರ ಸೈಕಲ ಮೇಲೆ ಬಂದು ಮನೆಯ ಗೇಟ ಹತ್ತಿರ ಬಾಬಿ, ಬಾಬಿ ಎಂದು ಕರೆದರು ಆಗ ನಾನು ಗೇಟ ಹತ್ತಿರ ಹೋಗಿ ಯಾರೂ ಅಂತಾ ಕೇಳಿ ಗೇಟ ಮುಚ್ಚುತ್ತಿರುವಾಗ ಆ ಇಬ್ಬರು ಅಪರಿಚಿತ ಹುಡುಗರಲ್ಲಿ ಒಬ್ಬನು ನನ್ನ ಕೊರಳಲ್ಲಿ ಕೈ ಹಾಕಿ ಒಂದೂವರೆ ತೊಲೆಯ ಬಂಗಾರದ ಲಾಕೇಟ ಕಿತ್ತುಕೊಂಡು ಹೋಗಿರುತ್ತಾರೆ.  ಮೋಟಾರ ಸೈಕಲ ಮೇಲೆ ಹೋಗುವಾಗ ಸ್ಕ್ರೀಡ ಆಗಿ ಒಬ್ಬ ಹುಡುಗ ಬಿದ್ದಿದ್ದು ನಂತರ ಆ ಕಪ್ಪು ಬಣ್ಣದ ಮೋಟಾರ ಸೈಕಲ ಎತ್ತಿಕೊಂಡು ಗಾಡಿ ಚಾಲು ಮಾಡಿಕೊಂಡು ಹೋಗಿರುತ್ತಾರೆ .  ನನ್ನ ಬಂಗಾರದ ಲಾಕೇಟಿನ ಬೆಲೆ ಅಂದಾಜು 35,000/- ರೂ ಇರಬಹುದು.ಕಾರಣ ನನ್ನ ಬಂಗಾರದ ಲಾಕೇಟ  ಕಿತ್ತುಕೊಂಡು ಹೋಗಿದ್ದ ಇಬ್ಬರು ಹುಡುಗರು 20 ರಿಂದ 25 ವಯಸ್ಸಿನವರಿದ್ದು ಕಾಲೇಜ ಹುಡುಗರ ತರಹ ಕಾಣಿಸುತ್ತಾನೆ. ಅವರಿಗೆ ನೋಡಿದರೆ ಗುರ್ತಿಸುತ್ತೇನೆ ಆ ಮೋಟಾರ ಸೈಕಲ ನಂಬರ ಕಾಣಿಸಲಿಲ್ಲಾ ನನ್ನ ಬಂಗಾರದ ಲಾಕೇಟ ಕಿತ್ತುಕೊಂಡುಹೋಗಿದ್ದವರಿಗೆ ಪತ್ತೆ ಹಚ್ಚಿ ನನ್ನ ಬಂಗಾರ ಕೊಡಬೇಕು ಅಂತಾ ವಗೈರೆ ಫಿರ್ಯಾದಿ ಸಾರಾಂಶದ ಮೇಲಿಂದ  ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ 110/2013 ಕಲಂ 392 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
ವರದಕ್ಷಿಣೆ ಕಿರುಕುಳ ಪ್ರಕರಣ:

ಮಹಿಳಾ ಪೊಲೀಸ್ ಠಾಣೆ:  ದಿನಾಂಕ 29.07.2013 ರಂದು ಸಾಯಾಂಕಾಲ 7 ಗಂಟೆಯ ಸುಮಾರಿಗೆ ಫಿರ್ಯಾದಿ ಶ್ರೀಮತಿ ಸೈಯ್ಯದಾ ವಾಜೀದಾ ಮುಬೀನ್ ಗಂಡ ಸೈಯ್ಯದ ತನ್ವೀರ್ ಅಹ್ಮದ ವಯ;26 ವರ್ಷ ಉ;ಮನೆಕೆಲಸ ಸಾ; ಬಿಜಾಪೂರ ಹಾ;ವ; ಮನೆ ನಂ 11-1067/ಎ ಎಂ.ಎಸ್.ಕೆ ಮಿಲ್ ಜಿಲಾನಾಬಾದ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದರ ಸಾರಾಂಶವೆನೆಂದರೆ ದಿನಾಂಕ 01.03.2013 ರಂದು ನನ್ನ ತಂದೆ ತಾಯಿಯವರು ಬಿಜಾಪೂರದ ಸೈಯ್ಯದ ತನ್ವೀರ್ ಅಹ್ಮದ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ವರನಿಗೆ ವರದಕ್ಷೀಣೆ ವರೋಪಚಾರ ಅಂತಾ 25.000/-ರೂಪಾಯಿ ಮತ್ತು 7 ವರೆ ತೊಲೆ ಬಂಗಾರ,ಬೆಲೆ ಬಾಳುವ ಗ್ರಹಪಯೋಗಿ ಸಾಮಾನುಗಳು ಕೊಟ್ಟಿದ್ದು ಇರುತ್ತದೆ. ಮದುವೆಯಾದ 8 ದಿವಸದಲ್ಲಿಯೇ ಗಂಡ ಸೈಯ್ಯದ ತನ್ವೀರ್ ಅಹ್ಮದ, ಅತ್ತೆ ಗೌಸಿಯಾಬೇಗಂ, ಮಾವ ಸೈಯ್ಯದ ಮೈನೋದ್ದೀನ್, ನಾದಿನಿಯರಾದ ವಾಜೀದಾ ತಬಸುಮ, ರೇಷ್ಮಾಬೇಗಂ ಮತ್ತು ರೇಷ್ಮಾ ಬೇಗಂ ಇವಳ ಗಂಡನಾದ ಮನೋವರ್ ಪಾಷಾ ಇವರೆಲ್ಲರೂ ಕೂಡಿ  ಅವ್ಯಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುತ್ತೇವೆ ಅಂತಾ ಬೆದರಿಕೆ ಹಾಕಿ ಮಾನಸಿಕ ದೈಹಿಕ ಕಿರುಕುಳ ಕೊಟ್ಟಿರುತ್ತಾರೆ. ದಿನಾಂಕ 24.04.2013 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ನನ್ನ ಗಂಡ ಸೈಯ್ಯದ ತನ್ವೀರ್ ಅಹ್ಮದ ಅತ್ತೆ ಗೌಸಿಯಾ ಬೇಗಂ ಮಾವ ಸೈಯ್ಯದ ಮೈನೋದ್ದೀನ ಇವರೆಲ್ಲರೂ ಕೂಡಿಕೊಂಡು ನನ್ನ ತವರು ಮನೆಗೆ ಬಂದು ನಿನಗೆ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂದರೆ ತವರು ಮನೆಯಲ್ಲಿಯೇ ಬಂದು ಕುಳಿತಿರುವಿಯಾ ಅಂತಾ ನನ್ನ ಗಂಡ ಅತ್ತೆ ಕೂಡಿ ಕೈಯಿಂದ ಹೊಡೆಬಡೆ ಮಾಡಿದ್ದು, ನನ್ನ ಮಾವ ಜೀವದ ಬೆದರಿಕೆ ಹಾಕಿರುತ್ತಾನೆ.ಕಾರಣ ನನಗೆ ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ತವರು ಮನೆಯಿಂದ 2 ಲಕ್ಷ ರುಪಾಯಿ ಹಣ ತೆಗೆದುಕೊಂಡು ಬಾ ಅಂತಾ ಹಿಂಸೆ ಕೊಟ್ಟವರ ಮೆಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 48/2013 ಕಲಂ 498(ಎ).323.504.506 ಸಂಗಡ 149 ಐ.ಪಿ.ಸಿ ಮತ್ತು 3&4 ಡಿ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.sಸದರಿ ಪ್ರಕರಣವು ಘೋರ ಪ್ರಕರಣವಾಗಿದ್ದರಿಂದ ಪಿ,ಐ ಬ್ರಹ್ಮಪೂರವರಿಗೆ ಮುಂದಿನ ತನಿಖೆ ಕೈಕೊಂಡಿದ್ದು ಇರುತ್ತದೆ.