POLICE BHAVAN KALABURAGI

POLICE BHAVAN KALABURAGI

21 April 2019

KALABURAGI DISTRICT REPORTED CRIMES

ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಭೀಮಾಶಂಕರ ತಂದೆ ನಿಜಶರಣಪ್ಪ ಇವಣಿ ಸಾ: ಮನೆ ನಂ 11-45/22A/2 ಮಾಣಿಕೇಶ್ವರಿ ಕಾಲೋನಿ ರೊಡ ಸರ್ಕಾರಿ ಆಸ್ಪತ್ರೆ ಮಾಣಿಕೇಶ್ವರಿ ಕಾಲೋನಿ ಬ್ರಹ್ಮಪೂರ ಕಲಬುರಗಿ ರವರ ಮೋಟರ ಸೈಕಲನ್ನು ಹೊಂದಿದ್ದು ವಾಹನದ ಹೆಸರು HERO SPLENDOR+ BS-IV ವಾಹನದ ಸಂಖ್ಯೆ KA 32 EQ 7373 ಚೆಸ್ಸಿ ನಂ MBLHAR080HHH55482,  ಇಂಜಿನ ನಂ HA10AGHHHH2127, ಮಾಡೆಲ 08/2017, ಕಲರ್ - BLACK, ಅಂದಾಜು ಕಿಮ್ಮತ್ತು  45,000/- ಈ ರೀತಿ ವಿವರವನ್ನೊಳಗೊಂಡ ನನ್ನ ವಾಹನವನ್ನು ಇಲ್ಲಿಯ ವರೆಗೆ ನಾನು ನನ್ನ ಕೆಲಸಗಳಿಗೆ ಉಪಯೋಗಿಸುತ್ತಾ ಬಂದಿದ್ದು ಇರುತ್ತದೆ ದಿನಾಂಕ 24.03.2019 ರಂದು ನಾನು ಮತ್ತು ನಮ್ಮ ತಂದೆ ನಿಜಶರಣಪ್ಪ ಇಬ್ಬರೂ ಕೂಡಿಕೊಂಡು ಕಿರಾಣಿ ಸಂತೆ ಖರೀಧಿಗಾಗಿ ಮಾರ್ಕೇಟದಲ್ಲಿರುವ ಕಿರಾಣಾ ಬಜಾರಕ್ಕೆ ಬಂದಿದ್ದು ಆಗ ನಾನು ನನ್ನ ಮೋಟರ ಸೈಕಲನ್ನು ಕಿರಾಣಾ ಬಜಾರದ ಹತ್ತಿರದಲ್ಲಿ ಇರುವ ಆರ್ಯ ಸಮಾಜಗಲ್ಲಿಯ ಸಂಧಿಯಲ್ಲಿ ನಿಲ್ಲಿಸಿ ಕಿರಾಣಿ ಸಂತೆ ಮಾಡಲು ಹೋಗಿದ್ದು ಇರುತ್ತದೆ ಸಂತೆ ಮಾಡಿಕೊಂಡು ಅಂದಾಜು ಮದ್ಯಾಹ್ನ 12.00 ಗಂಟೆಯ ಸುಮಾರಿಗೆ ಮರಳಿ ನಾನು ಮೋಟರ ಸೈಕಲ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲಾಗಿ ಅಲ್ಲಿ ನನ್ನ ಮೋಟರ ಸೈಕಲ ಇರಲಿಲ್ಲ ಆಗ ನಾನು ಮತ್ತು ನಮ್ಮ ತಂದೆ ನಿಜಶರಪ್ಪ ಇಬ್ಬರೂ ಕೂಡಿಕೊಂಡು ಮಾರ್ಕೇಟದಲ್ಲಿ ಎಲ್ಲ ಕಡೆಗೆ ಹುಡುಕಾಡಲಾಗಿ ಅಲ್ಲಿ ಎಲ್ಲಿಯೂ ಇಲ್ಲದಿರುವುದನ್ನು ಕಂಡು ಈ ವಿಷಯವನ್ನು ನನ್ನ ಗೆಳೆಯರಾದ ಶಾಂತಯ್ಯ ಗುತ್ತೇದಾರ ಮತ್ತು ಸಿದ್ದಲಿಂಗ ಕುಲಕರ್ಣಿ ರವರಿಗೆ ನನ್ನ ಮೋಟರ ಸೈಕಲ ಕಳುವಾದ ಬಗ್ಗೆ ತಿಳಿಸಿದ್ದು ಆಗ ಅವರೂ ಸಹ ಅಲ್ಲಿಗೆ ಬಂದು ನನ್ನ ಮೋಟರ ಸೈಕಲ ಇಲ್ಲದಿರುವುದನ್ನು ಅವರೂ ಕೂಡಾ ಎಲ್ಲ ಕಡೆಗೆ ಹುಡುಕಾಡಿದ್ದು ಮತ್ತು ಅಲ್ಲಿಂದ ಇಲ್ಲಿಯ ವರೆಗೆ ಎಲ್ಲ ಕಡೆಗೆ ಹುಡುಕಾಡುತ್ತಲೇ ಇದ್ದು ಇಲ್ಲಿಯವರೆಗೆ ಎಲ್ಲಿಯೂ ಸಿಕ್ಕಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 :ಶ್ರೀ ಶರಣಪ್ಪಾ ರವರು ದಿನಾಂಕ 20-04-2019 ರಂದು ಶಹಾಪೂರದಲ್ಲಿ ನಮ್ಮ ಸಂಬಂದಿಕರ ಮನೆಯಲ್ಲಿ ಕಾರ್ಯಕ್ರಮ ಇರುವದರಿಂದ ನಮ್ಮ ಸಂಬಂದಿಯಾಧ ಉದಯಕುಮಾರ, ಇವರು ಚಲಾಯಿಸುತ್ತೀರುವ ಕಾರ ನಂಬರ ಕೆಎ-01/ಎಮ.ಕೆ-9022 ನೇದ್ದರಲ್ಲಿ ನಾನು ಮತ್ತು ನನ್ನ ಹೆಂಡತಿ ಭಾರತಿಬಾಯಿ ಮತ್ತು ನನ್ನ ಮಗಳಾದ ಪೂಜಾ ಹಾಗೂ ಉದಯಕುಮಾರ ಇವರ ಹೆಂಡತಿ ಮಹಾದೇವಿ  ರವರು ಕುಳಿತು ಕಲಬುರಗಿ ರಾಮ ಮಂದಿರ ಕ್ರಾಸ ಮುಖಾಂತರವಾಗಿ ಶಹಾಪೂರ ಕಡೆಗೆ ಹೋಗುವಾಗ ಫರಹತಾಬಾದ ಗ್ರಾಮ ದಾಟಿದ ನಂತರ ಉದಯಕುಮಾರ ಇವರು ಕಾರನ್ನು ಅತಿವೇಗವಾಗಿ ಮತ್ತು ರೋಡ ಎಡ ಬಲ ತಿರುಗಿಸುತ್ತಾ ಕಾರ ಚಲಾಯಿಸುತ್ತೀದ್ದರು ನಾನು ಅವರಿಗೆ ನಿಧಾನವಾಗಿ ಕಾರ ಚಲಾಯಿಸುವಂತೆ ತಿಳಿಸದರೂ ಕೂಡಾ ಆತ ಕೇಳದೆ ಅದೇ ರೀತಿಯಾಗಿ ಕಾರ ಚಲಾಯಿಸಿಕೊಂಡು ಹೋಗಿ ಮದ್ಯಾಹ್ನ 2-30 ಗಂಟೆ ಸುಮಾರಿಗೆ ಹಸನಾಪೂರ ಕ್ರಾಸಇಚೆಗೆ ರೋಡ ಮೇಲೆ ಕಾರ ಎಡ ಬಲ ತಿರುಗಿಸುತ್ತಾ ಒಮ್ಮಲೇ ಕಟ್ ಹೊಡೆದು ಬ್ರೇಕ ಹಾಕಿ ಕಾರ ಪಲ್ಟಿ ಮಾಡಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ನನ್ನ ಹೆಂಡತಿ ಭಾರತಿಬಾಯಿ ಮತ್ತು ನನ್ನ ಮಗಳು ಪೂಜಾ ಹಾಗೂ ಮಹಾದೇವಿ ಅವರಿಗೆ ಗಾಯಗೊಳಿಸಿತಾನೂ ಗಾಯ ಹೊಂದಿದ್ದು ಉದಯಕುಮಾರ ಇವರ ಮೇಲೆ ಕಾನುನು ಕ್ರಮ ಜರುಗಿಸಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 20-04-2019 ರಂದು  ಶ್ರೀ ಹಣಮಂತ ತಂದೆ ರಾಮಚಂದ್ರ ಕೋಳಿ ಸಾ|| ಶೇಷಗಿರಿ ಗ್ರಾಮ ತಾ|| ಅಫಜಲಪೂರ ರವರಿಗೆ ಜೈಶಂಕರ ಮತ್ತು ವೆಂಕಟೇಶ ಅಂತಾ ಎರಡು ಜನ ಗಂಡು ಮಕ್ಕಳು ಇರುತ್ತಾರೆ. ಇಬ್ಬರದು ಮದುವೆ ಆಗಿದ್ದು, ಹೊಲ ಮನೆ ಹಂಚಿಕೆ ಮಾಡಿಕೊಂಡು ಇಬ್ಬರು ಬೇರೆ ಬೇರೆಯಾಗಿ ಹೊಲದಲ್ಲಿ ಮನೆ ಮಾಡಿಕೊಂಡು ವಾಸವಾಗಿರುತ್ತಾರೆ, ನಾನು ನನ್ನ ಕಿರಿಯ ಮಗನಾದ ವೆಂಕಟೇಶನ ಹತ್ತಿರ ಇರುತ್ತೇನೆ. ನನ್ನ ಕಿರಿಯ ಮಗನಾದ ವೆಂಕಟೇಶನು ಅಕ್ಕಲಕೋಟ ತಾಲೂಕಿನ ಬ್ಯಾಗಳ್ಳಿ ಗ್ರಾಮದ ರಾಜಶೇಖರ ಕಿಣಗಿ ಈತನ ಅಕ್ಕಳಾದ ಸುನೀತಾ ಇವಳನ್ನು ಪ್ರೀತಿಸಿ ಮದುವೆ ಮಾಡಿಕೊಂಡಿರುತ್ತಾನೆ. ನನ್ನ ಮಗ ಪ್ರೀತಿಸಿ ಮದುವೆ ಮಾಡಿಕೊಂಡಿದ್ದರಿಂದ ರಾಜಶೇಖರ ಕಿಣಗಿ ಈತನು ನನ್ನ ಮಗನ ಮೇಲೆ ದ್ವೆಷ ಹೊಂದಿರುತ್ತಾನೆ. ದಿನಾಂಕ 16-04-2019 ರಂದು ರಾತ್ರಿ 9:00 ಗಂಟೆ ಸುಮಾರಿಗೆ ಮಣೂರ ಸೀಮಾಂತರದಲ್ಲಿರುವ ನಮ್ಮ ಹೊಲ ನಂ 106 ನೇದ್ದರಲ್ಲಿರುವ ಮನೆಯ ಮುಂದೆ ನಾನು ಮತ್ತು ನನ್ನ ಮಗ ವೆಂಕಟೇಶ ಇಬ್ಬರು ಮಾತಾಡುತ್ತಾ ಕುಳಿತ್ತಿದ್ದಾಗ 1) ರಾಜಶೇಖರ ತಂದೆ ಶರಣಪ್ಪ ಕಿಣಗಿ ಸಾ|| ಬ್ಯಾಗಳ್ಳಿ ತಾ|| ಅಕ್ಕಲಕೋಟ ಮತ್ತು ಅವನ ಗೆಳೆಯನಾದ 2) ರಾಜು ತಂದೆ ಪ್ರಭು ಸಮಗಾರ ಸಾ|| ಶೇಷಗಿರಿ ತಾ|| ಅಫಜಲಪೂರ ಇವರು ನಮ್ಮ ಹೊಲದಲ್ಲಿ ಬಂದು ರಾಜಶೇಖರ ಕಿಣಗಿ ಈತನು ನನ್ನ ಮಗ ವೆಂಕಟೇಶನಿಗೆ ಏನೊ ಬೋಸಡಿ ಮಗನೆ ನಮ್ಮ ಅಕ್ಕನ್ನೆ ಓಡಿಸಿಕೊಂಡು ಬರುತ್ತಿ ಎಂದು ಅವಾಚ್ಯ ಶಬ್ದಗಳಿಂದ ಬೈದು ಇಬ್ಬರು ಕೂಡಿ ನನ್ನ ಮಗನಿಗೆ ಹೊಡೆಯುವುದು ಕಾಲಿನಿಂದ ಒದೆಯುವುದು ಮಾಡುತ್ತಿದ್ದರು, ಆಗ ನಾನು ಬಿಡಿಸಲು ಹೋದಾಗ ನನ್ನನ್ನು ತಳ್ಳಿ ರಾಜಶೇಖರ ಕಿಣಗಿ ಈತನು ಅಲ್ಲೆ ಇದ್ದ ಒಂದು ಬಡಿಗೆ ತಗೆದುಕೊಂಡು ಬಂದು ಬಡಿಗೆಯಿಂದ ನನ್ನ ಮಗನ ಎಡಗಾಲಿಗೆ ಹೊಡೆದನು. ಸದರಿಯವರು ನನ್ನ ಮಗನಿಗೆ ಹೊಡೆಯುತ್ತಿದ್ದಾಗ ಅಲ್ಲೆ ಪಕ್ಕದ ಹೊಲದಲ್ಲಿದ್ದ ನನ್ನ ಹಿರಿಯ ಮಗನಾದ ಜೈಶಂಕರ ಹಾಗೂ ಅವನ ಹೆಂಡತಿ ಅಂಬಿಕಾ ಮತ್ತು ನಮ್ಮ ಬಾಜು ಮೇಟಗಿಯಲ್ಲಿ ವಾಸವಾಗಿದ್ದ ಮಹಾದೇವ ಬನಸೋಡೆ ಇವರೆಲ್ಲರೂ ಬಂದು ನನ್ನ ಮಗನಿಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ. ಆಗ ಸದರಿಯವರು ಬಡಿಗೆ ಅಲ್ಲೆ ಬಿಸಾಕಿ ಹೋಗಿರುತ್ತಾರೆ. ಸದರಿಯವರು ಹೊಡೆದದ್ದರಿಂದ ನನ್ನ ಮಗನಿಗೆ ಎಡಗಾಲಿನ ಮೊಳಕಾಲು ಕೆಳಗೆ ಭಾರಿ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.