POLICE BHAVAN KALABURAGI

POLICE BHAVAN KALABURAGI

07 October 2017

KALABURAGI DISTRICT REPORTED CRIMES

ಅತ್ಯಾಚಾರ ಪ್ರಕರಣ :
ಯಡ್ರಾಮಿ ಠಾಣೆ : ಕುಮಾರಿ ರವರ ಅಕ್ಕಳಿಗೆ ಸುಂಬಡ ಗ್ರಾಮದ ಸುಬ್ಬಣ್ಣ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು .ಈಗ 8-10 ದಿವಗಳ ಹಿಂದೆ ನಾನು ಸುಂಬಡ ಗ್ರಾಮಕ್ಕೆ ನಮ್ಮ ಅಕ್ಕನ ಹತ್ತಿರ ಬಂದಿದ್ದು ಇರುತ್ತದೆ. ದಿನಾಂಕ: 30-09-17 ರಂದು 1 ಪಿ.ಎಂ ಸುಮಾರಿಗೆ ನಾನು ಬಟ್ಟೆ ಒಗೆಯಲು ಸುಂಬಡ ಗ್ರಾಮದ ಹತ್ತಿರ ಇದ್ದ ಕೆನಾಲಿಗೆ ನಾನೊಬ್ಬಳೆ ಹೋಗಿದ್ದು ಇರುತ್ತದೆ . ಆ ಸ್ಥಳದಲ್ಲಿ ಯಾರು ಇರಲಿಲ್ಲ. ನಂತರ ಅದೆ ಸಮಯಕ್ಕೆ ಸುಂಬಡ ಗ್ರಾಮದ ಶರಣಪ್ಪ ತಂ ಪರಮಾನಂದ ಹಳ್ಳಿ ರವರು ನನ್ನ ಹತ್ತಿರ ಬಂದು ನನ್ನ ಬಾಯಿ ಒತ್ತಿ ಹಿಡಿದು ಅಲ್ಲೆ ಬಾಜು ಬಸವರಾಜ ಕಂಡೋಳಿ ರವರ ಹೊಲದಲ್ಲಿ ಎಳೆದುಕೊಂಡು ಹೋದನು ನಂತರ ಶರಣಪ್ಪ ಇತನು ನಾನು ಒದ್ದಾಡುತ್ತಿದ್ದಾಗ ನನಗೆ ಅವಾಜ ಮಾಡಿದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಅಂಜಿಸಿ ನನ್ನ ಬಟ್ಟೆ ಕಳೆದು ಜಭರಿ ಸಂಭೊಗ ಮಾಡಿದನು. ಈ ಬಗ್ಗೆ ಯಾರಿಗಾದರು ಹೇಳಿದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಅಂದು ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ.ಮಲ್ಲಿಕಾರ್ಜುನ ತಂದೆ ಶಂಕರೆಪ್ಪ ಬಿರಾದಾರ ಸಾ : ಬೋದನ ಇವರು ದಿನಾಂಕ : 05-10-2017 ರಂದು ನಮ್ಮ ಗ್ರಾಮದಲ್ಲಿ ಅಂಬಾಭವಾನಿ ದೇವಿಯ ಜಾತ್ರ ಪ್ರಯುಕ್ರ ಗ್ರಾಮದಲ್ಲಿ ದೇವಿ ಮೂರ್ತಿಯ ಮೆವರಣಿಗೆ ನಡೆಯುತ್ತಿದ್ದಾಗ ರಾತ್ರಿ ನಮ್ಮ ಗ್ರಾಮದಲ್ಲಿ ಹಿರೋಡ್ಯಾ ಕಟ್ಟೆಯ ಹತ್ತಿರ ಹೋಗುತ್ತಿರುವಾಗ ಮೆರವಣಿಗೆಯಲ್ಲಿ ಕೆಲವು ಹುಡಗರು ಕುಣಿಯುವ ವಿಷಯವಾಗಿ ಅವರವರಲ್ಲಿ ವಾದವಿವಾದ ಮಾಡುತ್ತಿದ್ದು ಆ ಸಮಯದಲ್ಲಿ ನನ್ನ ಅಕ್ಕನ ಮಗನಾದ ಶ್ರೀಶೈಲ್ ತಂದೆ ಸುರಜ್ ವಾರದ್ ಇತನಿಗೆ ನೀನು ಆ ಕಡೆಗೆ ಹೋಗಬೇಡವೆಂದು ಅವನ ಕೈ ಹಿಡಿದು ಬಾ ಎಂದು ಹೇಳುವಷ್ಟರಲ್ಲಿಯೇ ನಮ್ಮ ಗ್ರಾಮದ ಪರಮೇಶ್ವರ ತಂದೆ ಶಂಕರೆಪ್ಪ ವಾರದ್ ಮತ್ತು ಅವನ ಮಕ್ಕಳಾದ ಮಲ್ಲಿನಾಥ ತಂದೆ ಪರಮೇಶ್ವರ ವಾರದ್ ಲಕ್ಷ್ಮೀಪುತ್ರ ತಂದೆ ಪರಮೇಶ್ವರ ವಾರದ್ ಮತ್ತು ಬಸವರಾಜ ತಂದೆ ಪರಮೇಶ್ವರ ವಾರದ್ ರವರುಗಳು ಕೂಡಿಕೊಂಡು ಬಂದು ಅವರಲ್ಲಿ ಪರಮೇಶ್ವರನು ಕೈಮುಷ್ಠಿಮಾಡಿ ನನ್ನ ಹೊಟ್ಟೆಗೆ ಮತ್ತು ಎದೆಯ ಭಾಗಕ್ಕೆ ಗುದ್ದುತ್ತಿರುವಾಗ ಅವನ ಮೂರುಜನ ಮಕ್ಕಳಾದ ಮಲ್ಲಿನಾಥ, ಲಕ್ಷ್ಮೀಪುತ್ರ , ಬಸವರಾಜ ರವರುಗಳು ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದಿಯುತ್ತಾ ಕೈಯಿಂದಲು ಹೊಡೆಬಡೆ ಮಾಡುತ್ತಿದ್ದರು. ಪರಮೇಶ್ವರನು ಕಲ್ಲಿನಿಂದ ನನ್ನ ಹಣೆಯ ಮೇಲ್ಭಾಗದ ತಲಗೆ ಹೊಡೆದು ರಕ್ತಗಾಯ ಪಡಿಸಿದನು ಮಲ್ಲಿನಾಥನು ನನ್ನ ಕೊರಳ್ಳಿ ಇರುವ ಲಿಂಗದಕಾಯಿ ದಾರಹಿಡಿದು ಜೊಗ್ಗಿದ್ದರಿಂದ ನನ್ನ ಕುತ್ತಿಗೆಯ ಹಿಂಭಾಗಕ್ಕೆ ಕಂದು ಗಟ್ಟಿದಂತಾಗಿ ಅಲ್ಲದೇ ಹೆಡಕು ನೋವು ಆಗಿರುತ್ತದೆ. ಅಸ್ಟರಲ್ಲಿ ಅಲ್ಲಿಯೇ ಇದ್ದ ನಮ್ಮ ಗ್ರಾಮದ ಗಣಪತಿ ತಂದೆ ಶರಣಪ್ಪ ಕಾಂದೆ ಹಣಮಂತರಾಯ ತಂದೆ ಮಲ್ಲಪ್ಪ ಸತ್ಯಾಣಿ ಮತ್ತು ಕಾಸಿನಾಥ ತಂದೆ ಶರಣಪ್ಪ ಬಂಗಿ ರವರುಗಳು ಜಗಳ ನೋಡಿ ನಂತರ ನಾಲ್ಕು ಜನ ಸೇರಿ ಮಗನೇ ಊರಲ್ಲಿ ನಿಂದು ಬಹಳ ನಡದಾದ ಬೋಸಡಿಕೆ ನಿನಗೆ ಖಲಾಸ ಮಾಡುತ್ತೇವೆಂದು ಜೀವ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.