POLICE BHAVAN KALABURAGI

POLICE BHAVAN KALABURAGI

15 August 2011

GULBARGA DIST REPORTED CRIMES


ಕಳೆದ ಎಂಟು ತಿಂಗಳ ಹಿಂದೆ ರೇಣುಕಾ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ಚೀಲಗಳನ್ನು ಕಳ್ಳತನ ಮಾಡಿಕೊಂಡು ನಾಪತ್ತೆಯಾಗಿದ್ದ ಆರೋಪಿಗಳ ಮತ್ತು ಮಾಲಿನ ಪತ್ತೆ.

ದಿನಾಂಕ; 01-01-2011 ರಂದು ಮಧ್ಯಾಹ್ನ ಸುಮಾರಿಗೆ ಶ್ರೀ ರಮೇಶ ತಂದೆ ಸಾತಲಿಂಗಪ್ಪಾ ಮಾಳಗೆ ಆಡಳಿತಧಿಕಾರಿಗಳು ಶ್ರೀ ರೇಣುಕಾ ಸುಗರ ಲಿಮಿಟೆಡ್ ಹವಳಗಾ ರವರು ಗೋದಾಮಿನಲ್ಲಿ ಒಟ್ಟು 41,802 ಸಕ್ಕರೆ ಚೀಲಗಳನ್ನು ದಾಸ್ತಾನು ಮಾಡಿಟ್ಟು ಗೋದಾಮಿಗೆ ಸಿಬ್ಬಂದಿ ಹಾಗು ಸಹಾಯಕರನ್ನು ನೇಮಕ ಮಾಡಿದ್ದು ಇದೆ. ನಾನು ದಿನಾಂಕ: 29-12-2010 ರಂದು ಗೋದಾಮಿನ ಸಿಬ್ಬಂದಿಯವರೊಂದಿಗೆ ಗೋದಾಮನ್ನು ಪರೀವಿಕ್ಷಣೆ ಮಾಡಲು ಹೋದಾಗ ಗೋದಾಮಿನ ಹಿಂದಿನ ಭಾಗದ ಟಾರಪಲ್ಲ ಹಾಗು ಪಿನಿಸಿಂಗ್ ಹರಿದು ಗೋದಾಮಿನಲ್ಲಿಟ್ಟಿದ್ದ 153 ಸಕ್ಕರೆ ಚೀಲಗಳನ್ನು ಕಳ್ಳತನವಾದ ಬಗ್ಗೆ ಕಂಡು ಬಂದಿರುತ್ತದೆ . ನಾನು ಸಿಬ್ಬಂದಿಯವರಿಗೆ ವಿಚಾರಿಸಲಾಗಿ ಅವರಿಂದ ಯಾವದೇ ಮಾಹಿತಿ ಸಿಗಲಿಲ್ಲ ಪ್ರತಿಯೊಂದು ಸಕ್ಕರೆ ಚೀಲ 50 ಕೆ.ಜಿ. ತೂಕದಾಗಿರುತ್ತವೆ ಒಂದು ಚೀಲಕ್ಕೆ ರೂ. 1400-00 ಇರುತ್ತದೆ ಒಟ್ಟು 153 ಸಕ್ಕರೆ ಚೀಲಗಳು ಅ::ಕಿ|| 2,14,200 ರೂಪಾಯಿಗಳ ಮೌಲ್ಯದ ಸಕ್ಕರೆ ಚೀಲಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ನಂ: 01/2011 ಕಲಂ 457, 380 ಭಾರತೀಯ ದಂಡ ಸಂಹಿತೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು.

ದಿನಾಂಕ:14-08-201 ರಂದು ರಾತ್ರಿ 11-00 ಗಂಟೆಯಿಂದ ಅಫಜಲಪೂರ ಠಾಣೆಯ ಪಿ.ಎಸ.ಐ ರವರು ಶ್ರೀ ಎಸ. ಮಂಜುನಾಥ ರವರು ತಮ್ಮ ಠಾಣೆಯ ಸಿಬ್ಬಂದಿಯವರೊಂದಿಗೆ ರೋಡ ಪೆಟ್ರೊಲಿಂಗ ಕರ್ತವ್ಯ ನಿರ್ವಹಿಸುತ್ತಾ ಮಧ್ಯರಾತ್ರಿ ದಿನಾಂಕ: 15-08-2011 ರಂದು 2 ಎ.ಎಮ ಸುಮಾರಿಗೆ ಹವಳಗಾ ಶ್ರೀ ರೇಣುಕಾ ರೇಣುಕಾ ಸುಗರ್ ಮಿಲಿಟೆಡ್ ಕಾರ್ಖಾನೆ ಹತ್ತಿರ ಹೋದಾಗ 4 ಜನ ವ್ಯಕ್ತಿಗಳು ಕತ್ತಲೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ನಿಂತಿದ್ದು , ಆಗ ಪಿ.ಎಸ.ಐ ರವರು ವಿಚಾರಸಬೇಕು ಅನ್ನುವದರಲ್ಲಿ ಓಡಿ ಹೋಗಲು ಪ್ರಯತ್ನಿಸಿದ್ದು ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ಸುತ್ತುವರೆದು ಹಿಡಿದುಕೊಂಡು ವಿಚಾರಿಸಿದಾಗ ಸಮರ್ಪಕವಾದ ಉತ್ತರ ಕೊಡದೇ ಇರುವದರಿಂದ ಠಾಣೆಗೆ ಕರೆತಂದು ಕೂಲಂಕೂಶವಾಗಿ ವಿಚಾರಿಸಿದಾಗ ದಿನಾಂಕ; 31-12-2010 ರಂದು ರಾತ್ರಿ ವೇಳೆಯಲ್ಲಿ ರೇಣುಕಾ ಸುಗರ ಲಿಮಿಟೆಡ್ ಸಕ್ಕರೆ ಕಾರ್ಖಾನೆಯಿಂದ 109 ಚೀಲಗಳನ್ನು ಹೊರೆಗೆ ತಂದು ಗೋದಾಮಿನಿಂದ ಸ್ವಲ್ಪ ದೂರದಲ್ಲಿ ಎರಡು ಜೀಪ ಮತ್ತು ಒಂದು ಗೂಡ್ಡ 407 ವಾಹನಗಳಲ್ಲಿ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ತಿಳಿಸಿದ್ದು , ಸದರಿಯವರು ಹೆಸರುಗಳು ಮಲ್ಲು ತಂದೆ ಸಿದ್ದಪ್ಪಾ ಜಮಾದಾರ ಸಾ|| ಶಿವಪೂರ , ವಿಜಯಕುಮಾರ ತಂದೆ ಸಿದ್ದನಗೌಡ ಪೊಲೀಸ್ ಪಾಟೀಲ್ , ಅಡಿವೆಪ್ಪಾ ತಂದೆ ಸಿದ್ದಪ್ಪಾ ಪೂಜಾರಿ ,ಶರಣು ತಂದೆ ಅಡಿವೆಪ್ಪಾ ನಾಡಿಕಾರ, ಮಾಳಪ್ಪಾ ತಂದೆ ಸಂಗಪ್ಪಾ ಜಗಲಗೊಂಡ, ಮಹಾಂತೇಶ ತಂದೆ ಶಿವಪ್ಪಾ ಪೂಜಾರಿ, ಕಾಂತಪ್ಪಾ ತಂದೆ ಶಿವಪ್ಪಾ ಜಗಲಗೊಂಡ , ಮಲ್ಲಪ್ಪಾ ತಂದೆ ಶರಣಗೌಡ ಪಾಟೀಲ್, ಬಸ್ಪಪಾ ತಂದೆ ಸಿದ್ದಪ್ಪಾ ಮೀನಗಾರ ಸಾ || ಎಲಲ್ರೂ ಹಾವಳಗಾ ಗ್ರಾಮದವರನ್ನು ದಸ್ತಗಿರಿ ಮಾಡಿ ಇವರಿಂದ ಮಾಲು ಹಾಗು ಕಳ್ಳತನಕ್ಕೆ ಉಪಯೋಗಿಸಿದ ಎರಡು ಜೀಪಗಳು ಮತ್ತು 407 ಗೂಡ್ಸ ವಾಹನ ವಶಪಡಿಸಿಕೊಳ್ಳಲಾಗಿದೆ ಸದರಿ ದಾಳಿಯು ಮಾನ್ಯ ಎಸ.ಪಿ ಸಾಹೇಬರು ಮತ್ತು ಅಪರ ಎಸಪಿ ಸಾಹೇಬರ ಮಾರ್ಗದರ್ಶನದ ಮೇರೆಗೆ ಡಿ.ಎಸ.ಪಿ ಆಳಂದ ರವರ ನೇತ್ರತ್ವದಲ್ಲಿ ಅಫಜಲಪೂರ ವೃತ್ತ ನಿರೀಕ್ಷಕರಾದ ಕೆ.ರಾಜೇಂದ್ರ ಮತ್ತು ಪಿ.ಎಸ.ಐ ಮಂಜುನಾಥ ಹಾಗು ಸಿಬ್ಬಂದಿಯವರಾದ ರಾಮಚಂದ್ರ ಹೆಚ.ಸಿ , ಮಾರುತಿ ಹೆಚ.ಸಿ, ಪಿಸಿ ನರಸರೆಡ್ಡಿ, ಅರವಿಂದ , ಶರಣು ಇವರೆಲ್ಲರಿಗೆ ಪತ್ತೆ ಕಾರ್ಯಕ್ಕೆ ಮಾನ್ಯ ಎಸ,ಪಿ ಸಾಹೇಬರು ಪ್ರಶಂಸಿರುತ್ತಾರೆ .

GULBARGA DISTRICT REPORTED CRIMES

ಯು. ಡಿ. ಅರ್. ಪ್ರಕರಣ :
ಬ್ರಹ್ಮಪೂರ ಠಾಣೆ
: ಶ್ರೀಮತಿ ಗೌರಮ್ಮ ಗಂಡ ಚಂದ್ರಕಾಂತ ಶೇಟಗಾರ ವಯ: 70 ವರ್ಷ ಸಾ: ಬೆಳಮಗಿ ರವರು ನನ್ನ ಮಗಳಾದ ಶ್ರೀದೇವಿ ಇವಳಿಗೆ 30 ವರ್ಷಗಳ ಹಿಂದೆ ಮಹಾಗಾಂವ ಗ್ರಾಮದ ಸಿದ್ದಲಿಂಗಪ್ಪ ವೀರಶೇಟ್ಟಿ ಇತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ,  ಸುಮಾರು ಎರಡುವರೆ ತಿಂಗಳ ಹಿಂದೆ ತನ್ನ ಮನೆಯಲ್ಲಿ ಬಿಸಿ ನೀರು ಮೈ ಮೇಲೆ ಬಿದ್ದು ಮಗಳಿಗೆ ಸುಟ್ಟಗಾಯಗಳಾಗಿದ್ದು ಉಪಚಾರ ಕುರಿತು ಗುಲಬರ್ಗಾ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಉಪಚಾರ ಕುರಿತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 2 ತಿಂಗಳ ಉಪಚಾರ ಮಾಡಿಸಿ ನಂತರ 8-9 ದಿವಸಗಳ ಹಿಂದೆ ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ ನನ್ನ ಮಗಳು ಶ್ರೀದೇವಿ ಇವಳು  ಉಪಚಾರ ಫಲಕಾರಿಯಾಗದೇ ದಿನಾಂಕ: 14/08/2011 ರಂದು ಸಾಯಂಕಾಲ ಆಸ್ಪತ್ರೆಯಲ್ಲಿ ಮೃತ್ತ ಪಟ್ಟಿರುತ್ತಾಳೆ ಮಗಳು ಮೃತಪಟ್ಟ ಬಗ್ಗೆ ಯಾರ ಮೇಲೆ ಸಂಶಯ ಇರುವದಿಲ್ಲಾ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಯು.ಡಿ.ಆರ್. ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ :
ಶ್ರೀ. ವಸಂತ ತಂದೆ ಗೌಡಪ್ಪ ಪೊಲೀಸ್ ಪಾಟೀಲ್ ಸಾ; ಕಿಣ್ಣಿ ಸಡಕ ಗ್ರಾಮ ತಾ;ಜಿ; ಗುಲಬರ್ಗಾ ರವರು ನಾನು ಮತ್ತು ನಮ್ಮ ಗ್ರಾಮದ ಗಿರಿರಾಜ ಗೊಬ್ಬೂರವಾಡಿ ಕೂಡಿಕೊಂಡು ಶ್ರಾವಣ ಮಾಸದ ಭಜನೆ ಕಾರ್ಯಕ್ರದಲ್ಲಿ ಪಾಲ್ಗೊಳ್ಳಲು ದಿನಾಂಕ: 14/08/2011 ರಂದು ರಾತ್ರಿ 8-30 ರ ಸುಮಾರಿಗೆ ನಮ್ಮೂರಿನಿಂದ ಹಳ್ಳಿಖೇಡ (ಕೆ) ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ನಮ್ಮ ಎದುರುಗಡೆಯಿಂದ ಕೆಎ-32 ಎಸ್– 8555 ಮೋಟರ್ ಸೈಕಲ್ ಸವಾರರು ತಮ್ಮ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಿಣ್ಣೀ ಸಡಕ ಗ್ರಾಮದ ಸೇತುವೆ ಹತ್ತಿರ ಮೋಟರ್ ಸೈಕಲ್ ನಿಯಂತ್ರಣ ಕಳೆದುಕೊಂಡು ರೋಡ ಗಾರ್ಡ ಕಂಬಕ್ಕೆ ಡಿಕ್ಕಿ ಹೊಡೆದಿರುತ್ತಾನೆ ಮೋಟಾರ ಸೈಕಲ್ ಸವಾರನನ್ನು ವಿಚಾರಿಸಲಾಗಿ ಮಹಾಂತೇಶ ತಂದೆ ಮಲ್ಲೇಶಪ್ಪ ಶಿರವಾಳ ಸಾ: ವಿಜಯನಗರ ಆಳಂದ ಕಾಲೂನಿ ಗುಲಬರ್ಗಾ ಅಂತಾ ತಿಳಿಸಿದ್ದು, ಆತನ ಹಿಂದುಗಡೆ ಕುಳಿತವನು ಪ್ರಶಾಂತ ತಂದೆ ಮಲ್ಲಿನಾಥ  ರೇವೂರ ಸಾ; ಆಳಂದ ಕಾಲೂನಿ ಗುಲಬರ್ಗಾ ಅಂತಾ ತಿಳಿಯಿತು. ಪ್ರಶಾಂತ ಇತನು ಭಾರಿ ಗಾಯಗಾಳಿರುವದರಿಂದ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಾವು 108 ಅಂಬುಲೇನ್ಸ್ ಗೆ ಫೋನ್ ಮಾಡಿ ಕರೆಯಿಸಿ ಗಾಯಾಳುವನ್ನು  ಮೋಟರ್ ಸೈಕಲ ಚಲಾಯಿಸುತ್ತಿದ್ದವನ ಸಂಗಡ  ಉಪಚಾರ ಕುರಿತು ಗುಲಬರ್ಗಾದ ಆಸ್ಪತ್ರೆಗೆ ಕೊಟ್ಟು ಕಳುಹಿಸಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಜೂಜಾಟ ಪ್ರಕರಣ:

ಸುಲೇಪೇಟ ಠಾಣೆ : ದಿನಾಂಕ 14-08-2011 ರಂದು ಮದ್ಯಾಹ್ನ ಶಿರೋಳ್ಳೀ ಗ್ರಾಮಕ್ಕೆ ಹೋದಾಗ ಗ್ರಾಮದ ದ್ವಾವ್ಯಮ್ಮಾ ಗುಡಿಯ ಕಟ್ಟಿಯ ಮೇಲೆ ಅಂದರ ಬಾಹರ ಇಸ್ಟೀಟ್ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ,ಸುಲೇಪೇಟ ರವರು ಮತ್ತು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷೇಮದಲ್ಲಿ ಹೋಗಿ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ ಶರಣಬಸಪ್ಪ ತಂದೆ ಬಸವರಾಜ ಪಸಾರ ಸಾ|| ಶಿರೋಳ್ಳಿ ಸಂಗಡ ಇನ್ನೂ 4 ಜನರು ಹಿಡಿದು ರೂ 2330/- ರೂಪಾಯಿ ಹಾಗೂ ಇಸ್ಟೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಶಹಾಬಾದ ನಗರ ಠಾಣೆ :
ಶ್ರೀ ಪರಮೇಶ್ವರ ಗಂಡ ಭೀಮರಾಯ ಭಂಕೂರ ಉ:ಡ್ರೇವರ ಸಾ:ಮುತ್ತಗಾ ತಾ:ಚಿತ್ತಾಪುರ ರವರು ನಾನು ದಿನಾಂಕ 13/08/11 ರಂದು ದೇವನ ತೆಗನೂರ ಹತ್ತಿರ ಟ್ರಾಕ್ಟರ ನಂ ಕೆ.ಎ. 32 ಟಿ.ಎ. 2941/42 ನೇದ್ದು ನಿಂತಿದ್ದು ಹಾಗು ನಮ್ಮೂರ ಸಂತೋಷಕುಮಾರ ತಂದೆ ಸಾಬಣ್ಣಾ ಕೂಡ ನಿಂತಿದ್ದನ್ನು. ಅಷ್ಟರಲ್ಲಿ ದೇವನ ತೆಗನೂರ ಗ್ರಾಮ ಕಡೆಯಿಂದ ಲಾರಿ ನಂ ಕೆ.ಎ. 32 ಎ 9014 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀ ವೇಗ ಮತ್ತು ನಿಷ್ಕಳಾಜಿತನದಿಂದ ನಡೆಯಿಸಿ ಕೊಂಡು ಬಂದು ರೋಡಿನ ಪಕ್ಕದಲ್ಲಿ ನಿಂತಿದ್ದ ಟ್ರಾಕ್ಟರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಸಂತೋಷಕುಮಾರ ಕೆಳಗೆ ಬಿದ್ದನು ಎಬ್ಬಿಸಿ ನೋಡಲು ಬಲಗೈಗೆ, ಬಲಗಾಲು ತೊಡೆಗೆ ಬಾರಿ ರಕ್ತಗಾಯವಾಗಿರುತ್ತದೆ ಲಾರಿ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧ್ಯ ಮಾರಾಟ:

ಶಹಾಬಾದ ನಗರ ಠಾಣೆ: ಶಹಾಬಾದ ನಗರದ ಹನುಮಾನ ನಗರ ತಾಂಡದ ರೇಲ್ವೆ ಕ್ವಾಟ್ರಸ ಹತ್ತಿರ ಮನೆ ಅನಧೀಕ್ರತವಾಗಿ ಲೈಸನ್ಸ ಇಲ್ಲದೆ ಕಲಬೆರಕೆ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂದಿಯವರು ಹೋಗಿ ನೋಡಲಾಗಿ ಒಬ್ಬ ಮನುಷ್ಯ 12 ಲೀಟರದಷ್ಟು ಕಲಬೆರಕೆ ಸರಾಯಿ ಅ.ಕಿ.250/- ರೂ ಜಪ್ತಿ ಪಡಿಸಿಕೊಂಡಿದ್ದು ಸರಾಯಿ ಮಾರುತ್ತಿರುವವನು ಓಡಿ ಹೋಗಿರುತ್ತಾನೆ ಸರಾಯಿ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಜಾಗ್ರತೆ ಕ್ರಮ :

ಬ್ರಹ್ಮಪೂರ ಠಾಣೆ : ದಿನಾಂಕ: 14/08/11 ರಂದು ಸಾಯಂಕಾಲ ನಾನು ಮತ್ತು ರಾಜು ಸಿ.ಪಿ.ಸಿ ರವರು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ಹೋದಾಗ ಕಾಮತ ಹೊಟೇಲ ಎದರುಗಡೆ ರಾತ್ರಿ ಅಲ್ಲಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವರನ್ನು ವಿಚಾರಿಸಲು ಅಲ್ತಾಪ ತಂದೆ ಅಬ್ದುಲ್ ಗಪೂರ ಸಾ|| ಬ್ಯಾಂಕ್ ಕಾ ಲೋನಿ ಗಂಜ ಏರಿಯಾ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಟ್ಟಿರುವದಿಲ್ಲ ಇವರನ್ನು ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಢಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.