POLICE BHAVAN KALABURAGI

POLICE BHAVAN KALABURAGI

06 December 2011

GULBARGA DIST REPORTED CRIME

ಕೊಲೆ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀಮತಿ ಕಾಶಿಬಾಯಿ ಗಂಡ ಬಾಬು ಖೇಲೆ ವಯ: 25 ವರ್ಷ ಜಾ: ಬೇಡರ ಉ: ಕೂಲಿ ಕೆಲಸ ಸಾ: ನಸೀರವಡಿ ತಾ: ಆಳಂದ ರವರು ನನ್ನ ಗಂಡನಾದ ಬಾಬು ಖೇಲೆ ದಿನಾಂಕ 05/12/2011 ರಂದು ಗ್ರಾಮದಲ್ಲಿ ಮೈಬೂಸ ಬಾನಿ ದರ್ಗಾದಲ್ಲಿ ಮೋಹರಂ ಉತ್ಸವ ಇದ್ದ ಸಲುವಾಗಿ ಉಸ್ತವ ನೋಡಲು ಹೋಗಿದ್ದು, ಉತ್ಸವ ನೋಡುವ ವೇಳೆಯಲ್ಲಿ ನನ್ನ ಗಂಡನಿಗೆ ಮತ್ತು ಸಂಜಯಕುಮಾರ ಇತನಿಗೆ ಜಗಳವಾಗಿದ್ದು ನನ್ನ ಗಂಡನಿಗೆ ಸೋದರ ಮಾವ ಅಂಬರಾಯ ಮತ್ತು ಅವನ ಮಗ ತಿಪ್ಪಣ್ಣ ಕೂಡಿಕೊಂಡು ಮನೆಗೆ ಬಂದರು ನನ್ನ ಗಂಡನಿಗೆ ಮನೆಯಲ್ಲಿ ಕೊಂಡಿ ಹಾಕಿ ಹೋದರು ಅಷ್ಟರಲ್ಲಿ ಸಂಜುಕುಮಾರ ತಂದೆ ಮೋಹನರಾವ ಪಾಟೀಲ ಸಾ ನಸೀರವಾಡಿ ಬಂದಿದ್ದು ಅವನ ಹಿಂದೆ ವೇಂಕಟ ತಂದೆ ಬಾಬು ಸಿರಸೆ ಬಂದನು, ಸಂಜುಕುಮಾರನು ನಮ್ಮ ಮನೆಯ ಬಾಗಿಲು ಕೊಂಡಿ ತೆಗೆದು ಗಂಡನ ಅಂಗಿ ಹಿಡಿದು ಹೋರ ತಂದು ನನಗೆ ಬೈಯುತ್ತಿ ಅಂತಾ ಅಂದಾಗ ನನ್ನ ಗಂಡನು ನೀನಗೆ ನಾನು ಯಾಕೆ ಬೈಯಲಿ ಅನ್ನುತ್ತಿರುವಾಗ ನಾವು ಸಂಜಯಕುಮಾರ ನನ್ನ ಗಂಡನ ಕಾಲಿನಲ್ಲಿ ಕಾಲು ಹಾಕಿ ಕುತ್ತಿಗೆ ಕೈಯಿಂದ ಹಿಚ್ಚಿಕಿರುತ್ತಾನೆ ನಾವು ಎಲ್ಲರೂ ಕೈ ಕಾಲು ವರಸಿ ಬಾಯಿಯಲ್ಲಿ ನೀರು ಹಾಕಲು ಹೋದಾಗ ನೀರು ಇಳಿಯಲಿಲ್ಲ ನನ್ನ ಗಂಡನಿಗೆ ಸಂಜುಕುಮಾರ ಪಾಟಿಲ ಇತನು ದರ್ಗಾದ ಹತ್ತಿರ ಜಗಳಾ ಮಾಡಿ ಮತ್ತೆ ಮನೆಯಲ್ಲಿ ಬಂದು ಅಂಗಿ ಹಿಡಿದು ಹೋರಗೆ ಎಳೆದು ಅವನಿಗೆ ಕಾಲಿನಲ್ಲಿ ಕಾಲು ಹಾಕಿ ಕುತ್ತಿಗೆ ಕೈಯಿಂದ ಹಿಚ್ಚಿಕಿ ಕೊಲೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ 283/2011 ಕಲಂ 448.302 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ಕ್ರಮ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಹಲ್ಲೆ ಅಪಹರಣ:

ಅಶೋಕ ನಗರ ಠಾಣೆ: ಮಹಿನ ತಂದೆ ಚಾಂದ ಪಾಶಾ ಸಾ: ಗಡವಂತಿ ತಾ: ಹುಮನಾಬಾದ ಹಾ.ವ: ರಾಜಧಾನಿ ರೆಸ್ಟಾರೆಂಟ ರಾಷ್ಟ್ರಪತಿ ಚೌಕ ಗುಲಬರ್ಗಾ ರವರು ನಾನು ದಿನಾಂಕ 02/12/2011 ರಂದು ಮದ್ಯಾಹ್ನ 1:30 ಗಂಟೆ ಸುಮಾರಿಗೆ ರಾಜಧಾನಿ ಹೊಟೇಲ ಪಕ್ಕದಲ್ಲಿರುವ ಮಸ್ತಾನ ಹೊಟೇಲದಲ್ಲಿ ಚಾಹ ಕುಡಿದು ಹೊರಗೆ ಬಂದಾಗ ಒಂದು ಸ್ಕಾರ್ಪಿಯೊ ಗಾಡಿ ನಂ. ಎಪಿ 13-6678 ನೇದ್ದರಲ್ಲಿ ನಮ್ಮೂರಿನವರಾದ ಕಪೀಲ ತಂದೆ ಈಶ್ವರ, ಜೀವನ, ಪ್ರಕಾಶ, ಉಮೇಶ ತಂದೆ ಸಿದ್ರಾಮ ಹಾಗು ಡ್ರೈವರ ಇವರೇಲ್ಲರೂ ಕೂಡಿ ನನಗೆ ಗಾಡಿಯಲ್ಲಿ ಎತ್ತಿ ಹಾಕಿಕೊಂಡು ಹುಮನಾಬಾದಕಾಲೇಜ ಹಿಂದು ಗಡೆ ಜಂಗಲ ಗಿಡ ಗಂಟೆಯಲ್ಲಿ ಗಿಡಕ್ಕೆ ಕಟ್ಟಿ ಕೈಯಿಂದ ಬೆಲ್ಟದಿಂದ ಬಡಿಗೆಯಿಂದ ಸಿಕ್ಕಾಪಟ್ಟೆ ಹೊಡೆದಿರುತ್ತಾರೆ. ನನಗೆ ನಿನ್ನ ತಾಯಿ ಹಾಗು ಮಾಮನವರು ಹಣ ತಂದು ಕೊಟ್ಟರೇ ಬಿಡುತ್ತೆವೆ. ನಾನು ನಿನ್ನೆ ರಾತ್ರಿ ವೇಳೆಯಲ್ಲಿ ಗಿಡಕ್ಕೆ ಕಟ್ಟಿ ಹಾಕಿದನ್ನು ಬಿಚ್ಚಿಕೊಂಡು ಹುಮನಾಬಾದಕ್ಕೆ ಬಂದು ವಿಷಯ ತಿಳಿಸಿರುತ್ತೆನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 130/2011 ಕಲಂ. 364(ಎ) 324 ಸಂ. 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮನುಷ್ಯ ಕಾಣೆ ಪ್ರಕರಣ:
ರಾಘವೇಂದ್ರ ನಗರ ಠಾಣೆ: ಶ್ರೀಮತಿ ಮಾಣಿಕಮ್ಮ ಗಂಡ ರಾಜೇಶ ಮೋರೆ ವ|| 26, ಸಾ|| ಯಂಕವ್ವ ಮಾರ್ಕೆಟ್ ಬ್ರಹ್ಮಪೂರ ಗುಲಬರ್ಗಾ ಇವರು ನನ್ನ ಗಂಡನಾದ ರಾಜೇಶ ತಂದೆ ಮಾಣಿಕರಾವ ಮೋರೆ ವ|| 35, ಈತನು ದಿನಾಂಕ 19-10-2011 ರಂದು ಬೆಳಿಗ್ಗೆ 9 ಗಂಟೆಗೆ ಎಂದಿನಂತೆ ಮಾಧವ ನಿವಾಸ ಹೋಟೆಲನಲ್ಲಿ ಕೆಲಸಕ್ಕೆ ಹೋಗುತ್ತೇನೆಂದು ಹೇಳೀ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ. ಎಲ್ಲಾ ಕಡೆಗು ಹುಡುಕಾಡಿದರು ಪತ್ತೆಯಾಗಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 97/11 ಕಲಂ ಮನುಷ್ಯ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.