POLICE BHAVAN KALABURAGI

POLICE BHAVAN KALABURAGI

11 September 2015

Kalaburagi District Reported Crimes.

ಜೇವರ್ಗಿ  ಠಾಣೆ : ದಿನಾಂಕ: 10.09.2015 ರಂದು 17:00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ದಿ: 30-08-2015 ರಂದು ಮುಂಜಾನೆ ನಾನು ಕಿರಕುಳ ರಜೆ ಮೇಲೆ ಮನೆಯಲ್ಲಿ ಇದ್ದಾಗ ನಮ್ಮ ಆಸ್ಪತ್ರೆಯ ಸ್ಟಾಪ್ ನರ್ಸ ಸಾಜೀಯಾ ಫರವೀನ್ ಇವರು ಪೊನ ಮಾಡಿ ದಿ: 29-08-15 ರಂದು ರಾತ್ರಿ ವೇಳೆಯಲ್ಲಿ ಯಾರೊ ಕಳ್ಳರು ನಮ್ಮ ಆಸ್ಪತ್ರೆಯ ಬಾಗಿಲ ಕೊಂಡಿ ಮುರಿದು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಹೇಳಿ ನನಗೆ ಬರಲು ತಿಳಿಸಿದರು. ವಿಷಯ ಗೊತ್ತಾದ ಕೂಡಲೇ ನಾನು ಮತ್ತು ನಮ್ಮ ಆಸ್ಪತ್ರೆಯ ಮಹ್ಮ,ದ್ ಅಬ್ದುಲ್ ಖದೀರ ಕೂಡಿಕೊಂಡು ಬಿರಾಳ [ಬಿ] ಆಸ್ಪತ್ರೆಗೆ ಹೋಗಿ ನೋಡಲಾಗಿ ಆಸ್ಪತ್ರೆ ಬಾಗಿಲ ಕೊಂಡಿ ಮುರಿದ್ದಿತ್ತು, ಓಳಗೆ ಹೋಗಿ ನೋಡಲಾಗಿ ಆಸ್ಪತ್ರೆಯಲ್ಲಿನ 1. ಒಂದು ವಾಷೀಂಗ್ ಮಸ್ಸಿನ ಅ.ಕಿ. 8000=00 ರೂ. 2. ಒಂದು ಪ್ರೀಜ್ ಅ.ಕಿ. 6000=00 ರೂ  3. ಒಂದು ಏರಕೂಲರ್ ಅ.ಕಿ. 2500=00 ರೂ, 4. ಸೊಲಾರ್ ಬ್ಯಾಟರಿ ಅ.ಕಿ. 5000=00 ರೂ. 5. ಬಿ.ಪಿ. ಆಫರೇಟರ್ ಅ.ಕಿ. 2000=00 ಹಿಗೆ ಒಟ್ಟು 23.500/- ರೂ ಕೀಮ್ಮತಿನ ವಸ್ತುಗಳು ಕಳುವಾಗಿದ್ದವು. ಅಲ್ಲಿಯೇ ಇದ್ದ ನಮ್ಮ ಆಸ್ಪತ್ರೆಯ ಸ್ಟಾಪ್ ನರ್ಸ ಸಾಜೀಯಾ ಫರವೀನ್ ಇವರು ಹೇಳಿದ್ದೆನೆಂದರೆ ನೀನ್ನೆ ಅಂದರೆ ದಿನಾಂಕ 29-08-2015 ರಂದು ಮುಂಜಾನೆ ನಮ್ಮ ಆಸ್ಪತ್ರೆಯ ಸಿಬ್ಬಂದಿಯವರು ಆಸ್ಪತ್ರೆಗೆ ಬಂದು ಕೆಲಸ ಮುಗಿಸಿಕೊಂಡು ಸಾಯಂಕಾಲ 7.00 ಗಂಟೆಯ ಸುಮಾರಿಗೆ  ಆಸ್ಪತ್ರೆಯ ಬಾಗಿಲ ಮುಚ್ಚಿ ಕೀಲಿ ಮತ್ತು ಸರಪಳಿ ಹಾಕಿ ಮನೆಗೆ ಬಂದಿರುತ್ತೆವೆ. ಇಂದು ಮುಂಜಾನೆ 6.00 ಗಂಟೆಯ ಸುಮಾರಿಗೆ ಆಸ್ಪತ್ರೆಯ ಪಕ್ಕದ ಹೊಲದವರಾದ ಶಂಕರೇಪ್ಪ ಹೊಸಮನಿ ಇವರು  ನಮ್ಮ ಆಸ್ಪತ್ರೆಯ ನೀಲಮ್ಮ ಇವರಿಗೆ ಆಸ್ಪತ್ರೆ ಕಳುವಾದ ಬಗ್ಗೆ ಹೇಳಿದ ಕೂಡಲೆ ನಾವು ಆಸ್ಪತ್ರೆಗೆ ಬಂದು ನೋಡಲಾಗಿ ಆಸ್ಪತ್ರೆ ಕಳುವಾಗಿದ್ದು ನಿಜವಿತ್ತು. ಅಂತಾ ನನಗೆ ತಿಳಿಸಿದರು. ನಾನು ಮತ್ತು ನಮ್ಮ ಆಸ್ಪತ್ರೆಯ ಸಿಬ್ಬಂದಿಯವರು ಕೂಡಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಮತ್ತು ಈ ವಿಷಯ ನಾನು ನಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸಿ ಇಂದು ಠಾಣೆಗೆ ಬಂದು ದೂರು ಅರ್ಜಿ ಸಲ್ಲಿಸುತ್ತಿದ್ದು ಮುಂದಿನ ಕ್ರಮ ಕೈಕೊಳ್ಳಬೇಕುಅಂತ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 242/15 ಕಲಂ 457.380 ಐ.ಪಿ.ಸಿ. ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.

ಆಳಂದ  ಠಾಣೆ  : ದಿನಾಂಕ:10/09/2015 ರಂದು 07:00 ಪಿ.ಎಮ್.ಕ್ಕೆ ಗಂಟೆಗೆ ಫಿರ್ಯಾದಿ  ಮಹ್ಮದ ಯೂನುಸ ತಂದೆ ಮಹ್ಮದ ಮುಸಾ ವಯಾ: 45 ವರ್ಷ ಜಾ: ಮುಸ್ಲಿಂ ಉ: ಲಾರಿ ಚಾಲಕ & ಮಾಲೀಕ ಸಾ: ಮುಸ್ಲಿಂ ಚೌಕ್ ದರ್ಗಾ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಒಂದು ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯ ಸಾರಾಂಶವೆನೆಂದರೆ ನನ್ನದೊಂದು ಲಾರಿ ನಂ:ಕೆ.ಎ:32 ಎ:6724 ನೇದ್ದರಲ್ಲಿ ಮಾಲು ಬಾಡಿಗೆಯಿಂದ ತರುವದು ಹಾಗೂ ತಗೆದುಕೊಂಡು ಹೋಗುವದು ಮಾಡುತ್ತಾ ಬಂದಿರುತ್ತೆನೆ. ನಮ್ಮ ಲಾರಿಯ ಮೇಲೆ ದಸ್ತಗಿರ ತಂದೆ ಬಡೇಸಾಬ ಸಾ:ಮಿಲತ್ ನಗರ ರಿಂಗ್ ರೋಡ ಕಲಬುರಗಿ ಇತನು ಸುಮಾರು 2 ವರ್ಷದಿಂದ ಕ್ಲೀನರ್ ಕೆಲಸ ಮಾಡುತ್ತಾ ಬಂದಿರುತ್ತಾನೆ. ದಿನಾಂಕ:04/09/2015 ರಂದು ನಮ್ಮ ಲಾರಿಯಲ್ಲಿ ಮಾಲು ತುಂಬಿಕೊಂಡು ಲಾತೂರಕ್ಕೆ ತಗೆದುಕೊಂಡು ಹೋಗಿ ಅಲ್ಲಿ ಖಾಲಿ ಮಾಡಿ ಮರಳಿ ಕಲಬುರಗಿಗೆ ಬರುವ ಕುರಿತು ದಿನಾಂಕ:05/09/2015 ರಂದು ನಮ್ಮ ಲಾರಿ ನಂ:ಕೆ.:32 :6724 ನೇದ್ದರಲ್ಲಿ 50 ಕೆ.ಜಿ. 60 ಪಾಕೀಟ್ ಜಿಂದಲ್ ಕಂಪನಿಯ ಶೇಂಗಾ ಬೀಜದ ಚೀಲಗಳು ಹಾಗೂ ಮನೆಯ ಬಾಗಿಲದ ಕಟ್ಟಿಗೆ ಸಾಮಾನುಗಳು ತುಂಬಿಕೊಂಡು ಮೇಲೆ ತಾಡಪತ್ರಿ ಮುಚ್ಚಿಕೊಂಡು ಉಮರ್ಗಾ ಮಾರ್ಗವಾಗಿ ಆಳಂದಕ್ಕೆ ಬರುವಾಗ ದಿನಾಂಕ:06/09/2015 ರಂದು ಬೆಳಗಿನ ಜಾವ 04:15 ಗಂಟೆ ಸುಮಾರಿಗೆ ಚಿತಲಿ ಕ್ರಾಸ ಹತ್ತಿರ ಚಡೌನದಲ್ಲಿ ಲಾರಿ ಸಾವಕಾಶವಾಗಿ ಹೋಗುವಾಗ ಲಾರಿಯ ಹಿಂದುಗಡೆ ಸಪ್ಪಳವಾಗಿದ್ದು  ನಂತರ ಆಳಂದ ಚಕ್ಕಪೋಸ್ಟ್ ಹತ್ತಿರ ಲಾರಿ ನಿಲ್ಲಿಸಿ ನೋಡಲಾಗಿ ಸದರಿ ಲಾರಿಯ ಮೇಲೆ ಮುಚ್ಚಿದ ತಾಡ ಪತ್ರಿ ಹರಿದಿದ್ದು ಅದರಲ್ಲಿದ 50 ಕೆ.ಜಿ. 05 ಪಾಕೀಟ್ ಜಿಂದಲ್ ಕಂಪನಿಯ ಶೇಂಗಾ ಬೀಜದ ಪಾಕೀಟ್ ,ಕೀ.18,500/-ರೂ ಕಿಮ್ಮತಿನ ಮಾಲನ್ನು ಚಿತಲಿ ಚಡೌನ ಹತ್ತಿರ ಲಾರಿ ನಿಧಾನವಾಗಿ ಹೋಗುವಾಗ ಲಾರಿ ಹಿಂಭಾಗದಿಂದ ಯಾರೋ ಕಳ್ಳರು ಲಾರಿಯ ಮೇಲೆ ಹತ್ತಿ ತಾಡಪತ್ರಿ ಹರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ನಂತರ ನಾನು ಸದರಿ ವಿಷಯವನ್ನು ಮಾಲಿನ ಮಾಲೀಕರಿಗೆ ತಿಳಿಸಿ ವಿಚಾರಿಸಿಕೊಂಡು ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ.ಕಾರಣ ಸದರಿ ನಾನು ಚಲಾಯಿಸುತ್ತಿದ್ದ ಲಾರಿ ನಂ: ಕೆ.:32 :6724 ನೇದ್ದರಲ್ಲಿದ 50 ಕೆ.ಜಿಯ   05 ಪಾಕೀಟ್ ಜಿಂದಾಲ್ ಕಂಪನಿಯ ಶೇಂಗಾ ಬೀಜ ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:145/2015 ಕಲಂ:379 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದ.