POLICE BHAVAN KALABURAGI

POLICE BHAVAN KALABURAGI

20 September 2013

ಅಪಘಾತ ಪ್ರಕರಣ :
ಮುಧೋಳ ಠಾಣೆ : ಶ್ರೀ ಬಂದೇಪ್ಪ ತಂದೆ ಬಂದೇಪ್ಪ ಜಗಮೋಳ ಸಾ: ಬುರಗಪಲ್ಲಿ ಇವರು ದಿ: 17-09-2013 ರಂದು ಗಣಪತಿಯನ್ನು ನಮ್ಮೂರ ಪೆಂಟಪ್ಪ ಇವರ ಟ್ಯಾಕ್ಟರ್ ದಲ್ಲಿ ಇಟ್ಟು ಊರಿನ ಎಲ್ಲರೂ ಕೂಡಿ ಉರಲ್ಲಿ ಮೇರವಣಿಗೆ ಮಾಡುತ್ತಾ ಬಂದು ಚಂಡ್ರಕಿ ರಸ್ತೆಯಲ್ಲಿರುವ ಬಾವಿಯಲ್ಲಿ ಗಣಪತಿ ಹಾಕಲು ನಮ್ಮುರ ಗೇಟದಿಂದ ಯಾನಾಗುಂದಿ ಕಡೆಗೆ ಹೊಗುವ ರಸ್ತೆಯಲ್ಲಿ ನಾವೇಲ್ಲರೂ, ಗಣಪತಿ ಮೂರ್ತಿಯೊಂದಿಗೆ ಟ್ಯಾಕ್ಟರ್ ಟ್ರಲಿಯಲ್ಲಿ ಕುಳಿತಿದ್ದು, ದಿ: 17-09-2013 ರಂದು ರಾತ್ರಿ 2300 ಬುರಗಪಲ್ಲಿ ಗೇಟ ದಾಟಿ ಸ್ವಲ್ಪ ಮುಂದೆ ಯಾನಾಗುಂದಿ ಕಡೆಗೆ ಹೊಗುತ್ತಿದ್ದಾಗ, ಶಾಂತಯ್ಯಾ ಸ್ವಾಮಿ ಮಠದ ಎದರುಗಡೆ ರಸ್ತೆಯ ಮೇಲೆ ಹೊಗುತ್ತಿದ್ದಾಗ, ಟ್ಯಾಕ್ಟರ್ ಚಾಲನಾದ ರಮೇಶ ತಂದೆ ಚಂದ್ರಪ್ಪ ಪೊಶರ್ ಇತನು ಟ್ಯಾಕ್ಟರ್ ನ್ನು ಅತಿವೇಗ ಹಾಗು ಅಡ್ಡಾತಿಡ್ಡಿಯಾಗಿ ನಡೆಸುತ್ತಿದ್ದಾಗ ಟ್ಯಾಕ್ಟರ್ ಚಾಲಕನ ನಿಂಯತ್ರಣತಪ್ಪಿ, ಪ್ಲಟಿಯಾಗಿ ಬಿದಿದ್ದು, ಇದರಿಂದ ನಮಗೆಲ್ಲಾ. ಕೈಕಾಲುಗಳಿಗೆ ಇತರೆಕಡೆಗೆ ಎಲ್ಲಾ. ಭಾರಿ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು, ಸದರಿ ಟ್ಯಾಕ್ಟರ್ ಚಾಲಕನು ಅಪಘಾತ ಪಡಿಸಿ ಓಡಿ ಹೊಗಿದ್ದು, ನಂತರ ನಮ್ಮೂರಿನವರು ಯಾರೋ ಅಂಬುಲೆನ್ಸಗೆ ಫೋನ ಮಾಡಿ ಕರೆಯಿಸಿದ್ದು, ನಾವೇಲ್ಲರೂ ಅಂಬುಲೇನ್ಸನಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಗುರುಮಠಕಲ್‌ನಲ್ಲಿ ಉಪಚಾರ ಹೊಂದಿ, ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾದ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು, ಇದರಲ್ಲಿ, ಭಾರಿಗಾಯಗಳಾದಂತ, ಮಲ್ಲಪ್ಪ ತಂದೆ ತಿಪ್ಪಣ್ಣಾ ಭೋಗಮ್ಮಗೋಳ, ಇವರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಗುಲಬರ್ಗಾದಲ್ಲಿ ಸೇರಿಕೆ ಮಾಡಿರುತ್ತಾರೆ. ತಿಪ್ಪಣ್ಣ ತಂದೆ ಸಾಯಪ್ಪ ಕೊನೇರಿ ಇವರಿಗೆ ಹೆಚ್ಚಿನ ಉಪಚಾರಕ್ಕಾಗಿ ಹೈದರಾಬಾದಕ್ಕೆ ಕರೆದುಕೊಂಡು ಹೊಗಿರುತ್ತಾರೆ. ಸದರಿ ಅಪಘಾತ ಪಡಿಸಿದ ಟ್ಯಾಕ್ಟರ್ ಮೇಲೆ ನಂಬರ ಬರೆದಿರುವದಿಲ್ಲಾ. ಸದರಿ ಪ್ರಕರಣದಲ್ಲಿ ಗಾಯಾಳುವಾದ ತಿಪ್ಪಣ್ಣ ತಂದೆ ಸಾಯಪ್ಪ ಕೊನೇರಿ ಸಾ: ಬುರಗಪಲ್ಲಿ ತಾ: ಸೇಡಂ ಇತನು ಹೈದರಾಬಾದನಲ್ಲಿರುವ ನೀಖಿಲ್ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ದಿ: 19-09-2013 ರಂದು ಬೆಳಗ್ಗೆ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.