POLICE BHAVAN KALABURAGI

POLICE BHAVAN KALABURAGI

09 October 2011

Gulbarga District Reported Crimes

ಅಪ್ರಾಪ್ತ ವಯಸ್ಸಿ ಬಾಲಕಿ ಅಪಹರಣ ಪ್ರಕರಣ :
ಆಳಂದ ಠಾಣೆ :ಶ್ರೀಮತಿ ಕಲ್ಲುಬಾಯಿ ಗಂಡ ರಮೇಶ ಆಡೆ ಸಾ / ತಿರ್ಥ ತಾಂಡಾ ಇವರ ಮಗಳಾದ ಕುಮಾರಿ ಜ್ಯೋತಿ 12 ವರ್ಷ ಇವಳು ಸದೆ ಕಳೆಯಲು ನಮ್ಮ ತಾಂಡಾದಾ ಮೊತಾಬಾಯಿ ಗಂಡ ವಿಲಾಸ ರಾಠೋಡ ರವರೊಂದಿಗೆ ಹೊಗಿದ್ದು ಸಾಯಂಕಾಲ ಮನೆಗೆ ಬರುವಾಗ ಜ್ಯೋತಿ ಚೀರುತ್ತಾ ಪೊರಮನ್ನ ನನಗೆ ಎತ್ತಿಕೊಂಡು ಹೋಗುತಿದ್ದಾನೆ ಅಂತ ಹೇಳಿದ್ದು ಸದರಿ ವಿಷಯದ ಕುರಿತು ದಿನಾಂಕ 08-10-2011 ರಂದು ಸಾಯಂಕಾಲ ನಾನು ಸೊಮಲೂ ಪವಾರ ಇವರ ಮನೆಯ ಮುಂದೆ ಹೋಗಿ ಪೊರಮನ್ನ ತಂದೆ ಸೋಮಲು ಪವಾರ ಇತನು ನನ್ನ ಮಗಳಿಗೆ ಎತ್ತಿಕೊಂಡು ಹೋಗಿದ್ದಾನೆ ಎಲಿದ್ದಾಳೆ ಹೇಳು ಎಂದು ಕೇಳುವಾಗ 1.ಸಂಜು ತಂದೆ ಸೋಮಲು ಪವಾರ 2.ರಾಜು ತಂದೆ ಸೋಮಲು ಪವಾರ 3. ಅನೀಲ ತಂದೆ ಕೇಸು ಪವಾರ 4.ಪೊರಮಿನ್ನ ತಂದೆ ಸೋಮುಲು ಪವಾರ 5.ಶಾಂತಾಬಾಯಿ ಗಂಡ ಕೇಸು ಪವಾರ 6.ಸುನೀತಾ ಗಂಡ ಸಂಜು ಪವಾರ 7.ಜಗುಬಾಯಿ ತಂದೆ ಸೋಮಲು ಪವಾರ 8.ಸುರೇಖಾ ತಂದೆ ಸೋಮಲು ಪವಾರ 9.ಸುವಬಾಯಿ ಗಂಡ ಸೋಮಲು ಪವಾರ 10.ಸೋಮು ಪವಾರ ಇವರೆಲ್ಲರು ಕೂಡಿ ಅಕ್ರಮ ಕೂಟ ಕಟ್ಟಿಕೊಂಡು ಬಂದು ಅವಾಚ್ಯಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಆಳಂದ ಠಾಣೆ :
ದಿನಾಂಕ 08-10-2011 ರಂದು ಬೆಳಿಗ್ಗೆಯಿಂದ ಜೋತಿ ಇವಳು ತಾಂಡದಲ್ಲಿರದ ಕಾರಣ ಜೋತಿಯ ಮನೆಯವರೇಲ್ಲ ನನ್ನ ಮೇಲೆ ಸಂಶಯ ಮಾಡಿ ಶ್ರೀ ನಸರಸಿಂಗ @ ಪೋರ್ಮನ ತಂದೆ ಸೋಕಲು ಪವಾರ ಸಾ :ತಿರ್ಥ ತಾಂಡಾ ನಾನು ಮನೆಯಲ್ಲಿ ಇದ್ದಾಗ ನಮ್ಮ ಮನೆಯ ಎದರು ಇರುವ ಜೋತಿಯ ಮನೆಯವರಾದ ಮನು ತಂದೆ ಚಂದು ಆಡೆ,ಸಂತೋಷ ತಂದೆ ಚಂದು ಆಡೆ, ಚಂದು ತಂದೆ ಮೀಠು ಆಡೆ, ಶಂಕರ ತಂದೆ ಮೀಠು ಆಡೆ ಇವರೇಲ್ಲರು ಕೂಡಿ ಬಂದು ಅವಾಚ್ಯ ಶಬ್ದಗಳೀಂದ ಭೈದು ನಮ್ಮ ಹುಡುಗಿ ಜೋತಿಗೆ ಎಲ್ಲಿ ಒಯ್ಯದು ಬಿಟ್ಟು ಬಂದಿ ಅಂತ ಕೇಳಿದವರೆ ಕಟ್ಟಿಗೆಯಿಂದ ಕೈಯಿಂದ ಹೊಡೆಬಡೆ ಮಾಡಿ ರಕ್ತಗಾಯ ಗುಪ್ತಗಾಯಪಡಿಸಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ :
ಶ್ರೀ ಶೇರಖಾನ ತಂದೆ ಆಲಂಖಾನ ಸಾ: ಬುಲಂದ ಪರವೇಜ ಕಾಲನಿ ದಿನಾಂಕ 08-10-2011 ರಂದು 1.ಮಹ್ಮದ ಮಶಾಕ 2.ತಾಜೋದ್ದೀನ ತಂದೆ ಶೇಖ ಮಹೇಬೂಬ 3.ಮೈನೋದ್ದೀನ ಸಾ; ಎಲ್ಲರೂ ಗೇಸುದ್ರಾಸ ಕಾಲನಿ ಗುಲಬರ್ಗಾ ರವರ ಹೊಟೇಲಿಗೆ ಚಹಾ ಕುಡಿಯಲು ಹೋದಾಗ ಚಹಾದಲ್ಲಿ ಸಕ್ಕರೆ ಕಡಿಮೆಯಾಗಿದೆ ಅಂತಾ ಕೇಳಿದ್ದಕ್ಕೆ ಆಪಾದಿತರು ಅವ್ಯಾಚ್ಛ ವಾಗಿ ಬೈದು ಅವನನ್ನು ಎದೆಯ ಮೇಲಿ ಅಂಗಿ ಹಿಡಿದು ಕೈಯಿಂದ ಮುಷ್ಠಿಮಾಡಿ ಮುಖದ ಮೇಲೆ ಹೊಡೆದಿದ್ದು ಹಾಗೂ ಬಡಿಗೆಯಿಂದ ಕೂಡ ಹೊಡೆಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ :ದಿನಾಂಕ 08-10-2011 ರಂದು ಸಾಯಂಕಾಲ ಶ್ರೀ ಶೇಕ ತಾಜೋದ್ದೀನ ತಂದೆ ಶೇಖ ಮಹೇಬೂಬಸಾಬ ಸಾ: ಗೇಸುದಾಸ ಕಾಲನಿ ಗುಲಬರ್ಗಾ ರವರು ಮಾವನ ಹೊಟೇಲ ಮುಂದೆ ಕುಳಿತಾಗ ಒಬ್ಬ ವ್ಯಕ್ತಿ ಬಂದು ನಮ್ಮ ಮಾವನಿಗೆ ಕರೆದು ಚಹಾದಲ್ಲಿ ಕಡಿಮೆ ಸಕ್ಕರೆ ಹಾಕುತ್ತಿ ಅಂತಾ ಅವ್ಯಾಚ್ಛವಾಗಿ ಬೈದು ಹೊಡೆಯಲು ಹೋದಾಗ ಅಲ್ಲೇ ಇದ್ದ ನನಗೆ ಹಾಗು ಇತರರು ಏಕೆ ಹೊಡೆಯುತ್ತಿ ಅಂತಾ ಕೇಳಿದ್ದಕೆ ಆವ್ಯಕ್ತಿ ಪೋನ ಮಾಡಿ ಇನ್ನೂ 1.ಶೇರಖಾನ ತಂದೆ. ಆಲಮಖಾನ ಸಾ: ಗುಲಬರ್ಗಾ 2.ನಯುಮಖಾನ ತಂದೆ ಆಲಮಖಾನ ಸಾ: ಗುಲಬರ್ಗಾ 3.ಇಮ್ರಾನಖಾನ ತಂದೆ ಆಲಮಖಾನ ಸಾ: ಗುಲಬರ್ಗಾ 4.ಅಮ್ಜದಖಾನ ತಂದೆ ಆಲಮಖಾನ ಸಾ: ಗುಲಬರ್ಗಾ ಹಾಗೂ ಇನ್ನೂ 3 ಜನರು ಹೆಸರು ವಿಳಾಸ ಗೊತ್ತಿಲ್ಲಾ ಕರೆಯಿಸಿದ್ದು ಅವರುಗಳ ಬಂದವರೆ ನಮ್ಮ ಶೇರಖಾನ ಜೊತೆ ಜಗಳ ತೆಗೆಯುತ್ತೀರಿ ಅಂತಾ ಬೈದು ತಮ್ಮ ಹತ್ತಿರ ಇದ್ದ ಚಾಕು ಹಾಗು ಬಡಿಗೆ ಹಾಗೂ ಕಲ್ಲಿನಿಂದ ನಮ್ಮ ಆತನ ಅಣ್ಣನಿಗೆ ಹೊಡೆದು ರಕ್ತಗಾಯ ಹಾಗೂ ಬಾರಿಗಾಯ ಪಡಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಕಾರಿ ಸ್ವತ್ತನ್ನು ಹಾನಿಪಡಿಸಿದ ಪ್ರಕರಣ :
ಗ್ರಾಮೀಣ ಠಾಣೆ :
ದಿನಾಂಕ 29-09-2011 ರಂದು ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಉಪಳಾಂವ ಗ್ರಾಮದ ಸೀಮಾಂತರದಲ್ಲಿ ಬರುವ ಪರಿಸರ ನಿರ್ಸಗ ಧಾಮದಲ್ಲಿ ಗ್ರಾನೇಟ ಕಲ್ಲುಗಳನ್ನು ಹಾಗೂ ವನ್ಯ ಜೀವಿಗಳ ಪುತಳಿಗಳನ್ನು ಸಿಮೇಂಟ ಬೆಂಚ ಇತ್ಯಾದಿ ವಸ್ತುಗಳನ್ನು ಒಡೆದು ಛಿದ್ರಗೊಳಿಸಿ ಅಂದಾಜು 1 ಲಕ್ಷ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸಿರುತ್ತಾರೆ. ಕೃಷ್ಣಾಬಾಯಿ ಗಂಡ ಬಿಂಗಾಚಾರ್ಯಿ ಇನ್ನೂ ಸಂಗಡ 22 ಜನರು ಸಾ: ಎಲ್ಲರೂ ಉಪಳಾಂವ ಗ್ರಾಮ ಇವರ ಮೇಲೆ ಸಂಶಯವಿರುತ್ತದೆ. ಅಂತಾ ಶ್ರೀ ಮಹ್ಮದ ಮುನಿರ ಅಹ್ಮದ ಉಪ ವಲಯ ಅರಣ್ಯಾಧಿಕಾರಿಗಳು ಪ್ರಾದೇಶಿಕ ಅರಣ್ಯ ವಲಯ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ