POLICE BHAVAN KALABURAGI

POLICE BHAVAN KALABURAGI

16 March 2013

GULBARGA DISTRICT REPORTED CRIMES


ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ದಿನಾಂಕ: 29/01/2013 ರಂದು 9:30 ಎಎಮ್ ಕ್ಕೆ ನನ್ನ ದ್ಚಿಚಕ್ರ ವಾಹನ ಹಿರೋ ಹೊಂಡ ಸ್ಪ್ಲೆಂಡರ ನಂ:ಕೆಎ-25 ಆರ್-3716 ಚೆಸ್ಸಿ ನಂ:01ಸಿ20ಸಿ-05800 ಇಂಜಿನ ನಂ:01ಸಿ18ಎಮ್-08393 ನೇದ್ದು ಗುಲಬರ್ಗಾದ ಕೇಂದ್ರ ಬಸ್ ನಿಲ್ದಾಣದ  ಹೊರಗಡೆ ನಿಲ್ಲಿಸಿ ಒಳಗಡೆ ಹೋಗಿ ಬರುವಷ್ಟರಲ್ಲಿ ನನ್ನ ವಾಹನ ನಾನು ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ. ಎಲ್ಲಾಕಡೆ ಹುಡುಕಾಡಿ ಪರಿಚಯಸ್ಥರಲ್ಲಿ ವಿಚಾರಿಸಲಾಗಿ ಎಲ್ಲಿಯು ನನ್ನ ವಾಹನದ ಬಗ್ಗೆ ಮಾಹಿತಿ ಸಿಕ್ಕಿರುವದಿಲ್ಲ. ಯಾರೋ ಕಳ್ಳರು ನನ್ನ ಹಿರೊ ಹೊಂಡ ಸ್ಪ್ಲೆಂಡರ ಮೋಟಾರ ಸೈಕಲ್  ಅ.ಕಿ. 25000=00 ರೂ ಬೆಲೆಬಾಳುವ ವಾಹನವು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಸಿದ್ರಾಮ ತಂದೆ ಚಂದ್ರಕಾಂತ ಪಟ್ನೆ ವಯಾ:24 ಉ:ವಿದ್ಯಾರ್ಥಿ ಸಾ:ಕೈಲಾಶನಗರ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:39/2012 ಕಲಂ:379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:ಶ್ರೀ ಮರೆಪ್ಪ ತಂದೆ ಪೀರಪ್ಪ ನಡುವಿನಮನಿ ಸಾ:ಮಲ್ಲಾ (ಬಿ) ತಾ: ಜೇವರ್ಗಿ ರವರು ನಾನು ದಿನಾಂಕ: 15-03-2013 ರಂದು ಸಾಯಾಂಕಾಲ 4-00 ಗಂಟೆಯ ಸುಮಾರಿಗೆ ಮಲ್ಲಾ (ಬಿ) ಗ್ರಾಮದ ಶರಣಪ್ಪ ಅವಂಟಗಿ ಇವರ ಹೊಟೆಲದ ಮುಂದೆ ಕುಡಿಯುವ ನೀರಿನ ಪೈಪ್ ಒಡೆದ ವಿಷಯದಲ್ಲಿ ಮಲ್ಲಪ್ಪ ತಂದೆ ಗುಂಡಪ್ಪ ಬೇವನೂರ ಇತನು ಜಗಳ ತೆಗೆದು ಬಾರಕೊಲ ಗುಣಿಯಿಂದ ತಲೆಗೆ ಹೊಡೆದು ರಕ್ತಗಾಯಗೊಳಿಸಿ ಜಾತಿ ನಿಂದನೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ. ಠಾಣೆ ಗುನ್ನೆ ನಂ:39/2013 ಕಲಂ 324. 504. 506 ಐ.ಪಿ.ಸಿ ಸಂ 3(1)(10) ಎಸ್.ಸಿ/ಎಸ.ಟಿ ಪಿ.ಎ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ:14/03/2013 ರಂದು ರಾತ್ರಿ 11-30 ಗಂಟೆಯಿಂದ ನಸುಕಿನ ಜಾವ 5-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯಲ್ಲಿ ಯಾರೂ ಇರಲಾರದ ಸಮಯ ಸಾಧಿಸಿ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿಟ್ಟಿದ  ಬಂಗಾರದ ಆಭರಣಗಳು ಹಾಗೂ ನಗದು ಹಣ 11,500/- ರೂಪಾಯಿಗಳು ಕಳ್ಳತನ ಮಾಡಿರುತ್ತಾರೆ ಅಂತಾ ಶ್ರೀಮತಿ ಶಾಂತಾಬಾಯಿ ಗಂಡ ಬಾಬುರಾವ ಜುಂಜೆ ಸಾ: ಹಿರೋಳ್ಳಿ ತಾಃ ಆಳಂದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 24/2013 ಕಲಂ: 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಜಾತಿ ನಿಂದನೆ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ:ದಿನಾಂಕ:14-03-2013 ರಂದು ನನ್ನ ಅಣ್ಣ ಮಗನಾದ ಮಲ್ಲು ಇತನು ಅಂಗಡಿಗೆ ಹೋಗುವಾಗ ನಮ್ಮ ಗ್ರಾಮದ ಕಬ್ಬಲಿಗ ಜನಾಂಗದವನಾದ ಬಾಬು ತಂದೆ ಪರಸಪ್ಪ ಕಡಕಲ್ ಇತನು ನಮ್ಮ ಅಣ್ಣನ ಮಗನಿಗೆ ನಿಮ್ಮ ಪ್ರಕಾಶನದ್ದು ಬಾಳ ಆಗ್ಯಾದ ಅವನು ನನಗೆ ಬೈಯುತ್ತಿದ್ದಾನೆ.  ಇನ್ನು ಮುಂದೆ ಬೈದರೆ ಹೊಡಿತಿನಿ ಅಂತಾ ಹೇಳು ಎಂದು ಹೇಳಿದ್ದಾನೆ ಅಂತಾ ಮಲ್ಲು ಬಂದು ನನಗೆ ತಿಳಿಸಿದನು ನಾನು ಮತ್ತು ನಮ್ಮ ಅಣ್ಣ ಇಬ್ಬರೂ ಕೂಡಿಕೊಂಡು ಬಾಬುಗೆ ಹೋಗಿ ವಿಚಾರಿಸಿದಾಗ ಅವನ ಮತ್ತು ನಮ್ಮ ಮಧ್ಯ ಬಾಯಿ ಮಾತಿನ ಜಗಳವಾಯಿತು. ಮಧ್ಯಾಹ್ನ 2-30 ಗಂಟೆ ಸುಮಾರಿಗೆ ಮನೆಯ ಹತ್ತಿರ ಇದ್ದಾಗ ಪರಸಪ್ಪ ತಂದೆ ಅಡಿವೆಪ್ಪ ಕಡಕಲ್, ಬಾಬು ತಂದೆ ಪರಸಪ್ಪ ಕಡಕಲ್, ಮತ್ತು ಮಲಕಪ್ಪ ತಂದೆ ನಿಂಗಪ್ಪ ಗುಂಡಕನಾಳ ಮೂವರು ಸೇರಿ ಮನೆಯ ಹತ್ತಿರ ಬಂದು ಜಾತಿ ನಿಂದನೆ ಮಾಡಿ ಲುಕೆಯಿಂದ ನನ್ನ ಎಡ ಕಪಾಳದ ಕೀವಿ ಹತ್ತಿರ ಜೋರಾಗಿ ಹೊಡೆದಿರುತ್ತಾರೆ ಅಂತಾ ಶ್ರೀ, ಪ್ರಕಾಶ ತಂದೆ ನಿಂಗಪ್ಪ ತಳಕೇರಿ ಸಾ: ಕಣಮೇಶ್ವರ ತಾ: ಜೇವರ್ಗಿ  ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:49/2013 ಕಲಂ 341,324,504,506,ಸಂಗಡ 34 ಐಪಿಸಿ ಮತ್ತು 3 (1), (10) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ,