POLICE BHAVAN KALABURAGI

POLICE BHAVAN KALABURAGI

16 March 2012

GULBARGA DIST REPORTED CRIMES

ಮಹಿಳೆಗೆ ಕಿರುಕುಳ:
ಮಹಿಳಾ ಪೊಲೀಸ ಠಾಣೆ:
ಶ್ರೀಮತಿ ಚಂದ್ರಭಾಗ ಗಂಡ ದಿಲೀಪಕುಮಾರ 28 ವರ್ಷ ಸಾ: ನಾಗಲೇಗಾಂವ ರವರು ನಮ್ಮ ದೂರದ ಸಂಬಂಧಿಯಾದ ದೀಲಿಪಕುಮಾರ ಇತನನ್ನು ಅವರ ತಂದೆ-ತಾಯಿ ಹಾಗೂ ಸಹೋದರರ ವಿರೋದಿಸಿದರು. ನಾವು ದಾವಣಗೇರೆ ಜಿಲ್ಲೆಯ ಹರಿಹರ ತಾಲುಕಿನಲ್ಲಿ ದಿನಾಂಕ 02.09.2011 ರಂದು ಹರಿಹರೇಶ್ವರ ದೇವಾಲಯದಲ್ಲಿ ಮದುವೆಯಾಗಿ ನೊಂದಣಿ ವಿವಾಹ ಕೂಡ ಮಾಡಿಕೊಂಡಿರುತ್ತೆವೆ. ನಾವು ಸದ್ಯ ಗುಲಬರ್ಗಾ ನಗರದ ಸಮತಾ ಕಾಲೋನಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇದ್ದಿದೆವು. ನನ್ನ ಗಂಡ ಮನೆಯವರು ದಿನಾಂಕ 08.11.2011 ರಂದು ನನ್ನ ಗಂಡನ ತಂದೆ ಅರ್ಜುನ, ಸಂದೀಪ,ಸೂರ್ಯಪ್ರಕಾಶ ಹಾಗೂ ಪಾರ್ವತಿ ಹಾಗೂ ಆಕೆಯ ಮಗನಾದ ಶಾಲಿವಾನ ಮತ್ತು ಇನ್ನೂ 6 ಜನ ಕೂಡಿಕೊಂಡು ಬಂದು ಅವಾಚ್ಯವಾಗಿ ಬೈದು ವರದಕ್ಷಿಣೆ ಕೊಡದೇ ಮದುವೆಯಾಗಿದ್ದಿ ಅಂತಾ ಬೈದು ನನ್ನ ರೂಮಿನ ಸೂಟಕೇಸನಲ್ಲಿ ಇರುವ ರೂ; 49.000-00 ಹಣ ಮತ್ತು 10 ಗ್ರಾಂ ಬಂಗಾರ ಹಾಗೂ 2 ನೋಕಿಯಾ ಜಿ.5 ಮೊಬೈಲಗಳನ್ನು ತೆಗೆದುಕೊಂಡು ತಾವು ಕುಳಿತುಕೊಂಡು ಬಂದಿರುವ ಕ್ರೋಜರನಲ್ಲಿ ನನ್ನ ಸ್ವಂತ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಸಾವಳೇಶ್ವರಕ್ಕೆ ಹೋಗಿ ಬೆದರಿಕೆ ಹಾಕಿದರು. ಆ ಗ್ರಾಮದ ಸಮಾಜದ ಮುಖಂಡರು ಅವರಿಗೆ ತಿಳಿ ಹೇಳಿ ಕಳುಹಿಸಿದರು. ದಿನಾಂಕ 10.11.2011 ರಂದು ನಾವು ಬಾಡಿಗೆ ಇರುವ ಮನೆಗೆ ಕರೆದುಕೊಂಡು ಬಂದು ರೂಮಿನಲ್ಲಿ ಕೂಡಿಸಿ ಅವರ ಅಣ್ಣ ಸಂದೀಪ ಪೋನ ಮಾಡಿ ಹೊರಗೆ ಬಾ ನಿನ್ನ ಜೊತೆಯಲ್ಲಿ ಕೆಲವೊಂದು ವಿಷಯಗಳು ಮಾತನಾಡುತ್ತೇನೆ ಎಂದು ನನ್ನ ಗಂಡನನ್ನು ಕರೆದುಕೊಂಡು ಹೋದನು ಇಲ್ಲಿಯವರಗೆ ನನ್ನ ಗಂಡ ಮರಳಿ ಮನೆಗೆ ಬಂದಿರುವದಿಲ್ಲ ನನ್ನ ಗಂಡನ ಮನೆಯವರು ನನಗೆ ಪೋನ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ದೀಲಿಪ ಇತನಿಗೆ ನಾನು ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿರುತ್ತೇನೆ ಎಂದು ಮಾದನ ಹಿಪ್ಪರಗಾ ಠಾಣೆಯಲ್ಲಿ ಸುಳ್ಳು ಅರ್ಜುನ ಕೊಟ್ಟಿದ್ದಾರೆ . ನನ್ನ ಗಂಡ ಇಷ್ಟು ದಿನಗಳ ಕಾಲ ನನ್ನ ಜೊತೆ ಸಂಸಾರ ಮಾಡಿ ಅವರ ಮನೆಯವರ ಮಾತು ಕೇಳಿ ಮತ್ತೊಂದು ಮದುವೆ ಮಾಡಿಕೊಳ್ಳಲು ತಯಾರಿ ಮಾಡುತ್ತಿದ್ದಾರೆ ಅಂತಾ ತಿಳಿದು ಬಂದಿರುತ್ತದೆ. ನನಗೆ ಮದುವೆ ಮಾಡಿಕೊಂಡು ಮೋಸ ಮಾಡಿದ ನನ್ನ ಪತಿಯ ಮೇಲೆ ಮತ್ತು ವರದಕ್ಷಿಣೆ ಹಣಬೇಕೆಂದು ನನ್ನ ಹಣ ಬಂಗಾರ ಮೊಬೈಲ ದೋಚಿಕೊಂಡು ಹೋದವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಠಾಣೆ ಗುನ್ನೆ ನಂ 27/2012 ಕಲಂ 498(ಎ).504.506.109 ಸಂಗಡ 149 ಐ.ಪಿ.ಸಿ ಮತ್ತು 3&4 ಡಿ.ಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಕೊಲೆ ಆರೋಪಿ ಬಂದನ:

ಬ್ರಹ್ಮಪೂರ ಠಾಣೆ: ಶ್ರೀಮತಿ,ಸುಲೋಚನಾ ಗಂಡ ಮನೋಹರ ತೆಗನೂರ ಸಾ|| ಜಗತ ಗುಲಬರ್ಗಾ ಇವರನ್ನು ದಿನಾಂಕ:06/02/2012 ರಂದು ನಗರದ ಟೌನ ಹಾಲ ಎದುರುಗಡೆ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರಿಂದ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೊದಲು ಗುನ್ನೆ ನಂ: 12/2012 ಕಲಂ 498 () 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿತ್ತು. ಸದರಿ ಗುನ್ನೆಯ ತನಿಖೆ ಕೈಕೊಂಡು ದಿನಾಂಕ:15-03-2012 ರಂದು ಮಾನ್ಯ ಎಸ.ಪಿ ಗುಲಬರ್ಗಾ ಮತ್ತು ಹೆಚ್ಚುವರಿ ಎಸ.ಪಿ ಗುಲಬರ್ಗಾ ಹಾಗು .ಎಸ.ಪಿ () ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದ ಮೇರೆಗೆ ಶರಣಬಸಪ್ಪಾ ಪಿಐ ಬ್ರಹ್ಮಪೂರ ಪೊಲೀಸ್ ಠಾಣೆ ಮತ್ತು ಅವರ ಸಿಬ್ಬಂದಿ ವರ್ಗದವರಾದ ಮಹಮದ ರಪೀಕ, ದೇವಿಂದ್ರ, ರಾಮು ಪವಾರ, ಶಿವಪ್ರಕಾರ ರವರು ಆರೋಪಿ (ಆಕೆಯ ಗಂಡನಾದ) ಮನೋಹರ ತಂದೆ ನಾಗಿಂದ್ರಪ್ಪಾ ತೆಗನೂರ ಕಾರು ಚಾಲಕ ಸಾ|| ಜಗತ ಗುಲಬರ್ಗಾ ಇತನು ತನ್ನ ಹೆಂಡತಿಯ ಶೀಲ ಶಂಕಿಸಿ ಕೊಲೆ ಮಾಡಿದ್ದರಿಂದ ಸದರಿಯವನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.