POLICE BHAVAN KALABURAGI

POLICE BHAVAN KALABURAGI

08 September 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಮಹ್ಮದ ಮುಸ್ತಕಾ ತಂದೆ ಮಹ್ಮದ ಸಕಾವತ ರಾಜೆ ಸಾ: ಬಡೆಪೂರ  ಕಾಲೋನಿ ಗುಲಬರ್ಗಾ ರವರು ನಾನು ಮತ್ತು ನಮ್ಮ  ಅಣ್ಣ ಮಹ್ಮದ ಅರೀಮ ಹಾಗೂ ಅಕ್ಕ ಯಾಸ್ಮೀನ್ ಸುಲ್ತಾನಾ, ಹಾಗೂ ಅವಳ ಮಕ್ಕಳಾದ , ಆಯಿಶ ಹರಿಮ್ , ಮತ್ತು ಮರೇಮ್   ಎಲ್ಲರೂ  ದಿನಾಂಕ: 07/9/2012 ರಂದು ಮುಂಜಾನೆ ಟಾಟಾ ಇಂಡಿಕಾ ಕಾರ ನಂಬರ ಕೆ.ಎ. 36 ಎಮ್. 4687 ನೇದ್ದರಲ್ಲಿ ಕುಳಿತುಕೊಂಡು ಗುಲಬರ್ಗಾದಿಂದ ಶಹಾಪೂರಕ್ಕೆ ಜೇವರ್ಗಿ ಮಾರ್ಗವಾಗಿ ಹೋಗುತ್ತಿದ್ದಾಗ ಮದ್ಯಾಹ್ನ 12-30 ಗಂಟೆಗೆ ಕಟ್ಟಿ ಸಂಗಾವಿ ಗ್ರಾಮ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ 407 ಟೆಂಪೋ ವಾಹನ ನಂ ಎ.ಪಿ 30 ಟಿ 9777 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಕಾರಿಗೆ ಎದುರಾಗಿ ಡಿಕ್ಕಿ ಪಡಿಸಿದನು. ಡಿಕ್ಕಿ ಪಡಿಸಿದ್ದರಿಂದ ನನಗೆ ಹಾಗೂ ನನ್ನ ಅಣ್ಣ , ಎರಡು ಮಕ್ಕಳಿಗೆ ಭಾರಿ ಮತ್ತು ಸಾದಾ ಗಾಯಾಗಳಾಗಿ, ಮತ್ತು ಅಕ್ಕ ಯಾಸ್ಮೀನಾ ಸುಲ್ತಾನಾ ಇವಳು ಭಾರಿ ಗಾಯಾಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾಳೆ. ಮತ್ತು ಟೆಂಪೋದಲ್ಲಿ ಕುಳಿತುಕೊಂಡಿದ್ದ 4-5 ಜನರಿಗೆ  ಸಣ್ಣ ಪುಟ್ಟ ಗಾಯಾಗಳಾಗಿರುತ್ತವೆ.   ಟೆಂಪೋ ಚಾಲಕನು ನಮ್ಮಲ್ಲರಿಗೆ ಆದ ಗಾಯದ ಪೆಟ್ಟು  ನೋಡಿ ತನ್ನ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಟೆಂಪೋ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂಬರ 130/2012 ಕಲಂ 279, 337, 338 304 ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.