POLICE BHAVAN KALABURAGI

POLICE BHAVAN KALABURAGI

25 January 2016

DRONE CAMERAS.

ಕ್ವಾಡ ಕ್ಯಾಪ್ಟರ್ (ಡ್ರೋನ್)






1) ಡಿ.ಜೆ.ಐ. ಪ್ಯಾಂಟಮ್ 3 ಸೌತ ಕೋರಿಯಾ ದೇಶದ ಕಂಪನಿ. (ಉತ್ಪಾದನೆ )
2) ಹೆಚ್.ಕೆ ಆರ್.ಡಿ.ಬಿ. ಸ್ಮಾರ್ಟ ಪೊಲೀಸಿಂಗ್ ಯೋಜನೆ ಅಡಿಯಲ್ಲಿ ಕಲಬುರಗಿ ಜಿಲ್ಲಾ ಪೊಲೀಸ  
    ಇಲಾಖೆಗೆ 04 ಕ್ವಾಡ ಕ್ಯಾಪ್ಟರ್  ಗಳನ್ನು ಒದಗಿಸಲಾಗಿದೆ.
3) ಒಂದು ಕ್ವಾಡ ಕ್ಯಾಪ್ಟರನ ಬೆಲೆಯು 1,50,000=00 ಇರುತ್ತದೆ.
4) ಇದು 1 . 5 ಕಿಲೋ  ಮೀಟರ ವ್ಯಾಪ್ತಿಯವರೆಗು ಹಾಗೂ 500 ಮೀಟರ್ಸ್ ಎತ್ತರದವರೆಗೆ ಹಾರಾಟ
    ಮಾಡುವ ಸಾಮಾಥ್ರ್ಯ  ಹೊಂದಿದೆ.
5) ಇದರಲ್ಲಿ 12 .2 ಮೇಘಾಫಿಕ್ಸಲ್ ಹೆಚ್.ಡಿ. ಕ್ಯಾಮರಾ ಹೊಂದಿದ್ದು ಹಾಗೂ 1080 ರೆಜಲೂಶನ
    ಫುಲ್ ಹೆಚ್.ಡಿ. ವಿಡಿಯೋ  ಕ್ಯಾಮರಾ ಹೊಂದಿದೆ.
6) ಪ್ರತಿ ಕ್ವಾಡ ಕ್ಯಾಪ್ಟರ್ ಜೋತೆ 01 ಟ್ಯಾಬ್, 01 ಜ್ಯೋಸ್ಟಿಕ್ ಹಾಗೂ 02 ಬ್ಯಾಟರಿ ಹೊಂದಿದ್ದು
     ಇರುತ್ತದೆ.
7) 01 ಬ್ಯಾಟರಿಯನ್ನು 02 ಗಂಟೆಯವರೆಗೆ ಚಾರ್ಜ ಮಾಡಿದರೆ ನಿರಂತರವಾಗಿ 30 ನಿಮಿಷದವರೆಗೆ
   ಕ್ವಾಡ ಕ್ಯಾಪ್ಟರನ್ನು ಹಾರಿಸಬಹುದು.
8) ಸೇಫ್ ಲ್ಯಾಂಡಿಂಗ್ ಸಿಸ್ಟಮ್:-ಹಾರಾಟದ ಸಮಯದಲ್ಲಿ ವೈರಲೇಸ್, ಕನೆಕ್ಟಿವಿಟಿಯಲ್ಲಿ ಹಾಗೂ
    ಬ್ಯಾಟರಿ ಚಾರ್ಜಿಂಗ್  ಮುಗಿದಂತಹ ಸಮಯದಲ್ಲಿ ಲ್ಯಾಂಡಿಂಗ್ ಯಟ್ ಹೋಮ್ ಆಯ್ಕೆ
    ಹೊಂದಿದ್ದು ನಾವು ಯಾವ ಸ್ಥಳದಿಂದ ಹಾರಿಸಿ ಬಿಡಲಾಗಿದಿಯೋ ಮರಳಿ ಅದೇ ಸ್ಥಳಕ್ಕೆ ಬಂದು
    ಲ್ಯಾಂಡಿಗ ಆಗುವ ಸಾಮಾಥ್ರ್ಯ ಹೊಂದಿರುತ್ತದೆ.
9) ಇದು ಒಂದೆ ಸಮಯದಲ್ಲಿ ಫೋಟೊಗ್ರಾಫಿ ಹಾಗೂ ವಿಡಿಯೋಗ್ರಾಫಿ ಮಾಡುವ ಸಾಮಥ್ರ್ಯ
    ಹೊಂದಿದ್ದು ನಿರಂತರವಾಗಿ 01 ಗಂಟೆಯವರೆಗೆ ವಿಡಿಯೋ ರಿಕಾರ್ಡಿಂಗ್  ಮಾಡಬಹುದು.
10) ಇದರಲ್ಲಿ 16 ಜಿ.ಬಿ. ಮೆಮೋರಿ ಕಾರ್ಡ ಇದ್ದು ಇದನ್ನು 128 ಜಿ.ಬಿ.ರವರೆಗು ವಿಸ್ತರಿಸಬಹುದು.
11) ಇದನ್ನು ನಿರಂತರವಾಗಿ ಹಾರಾಡಿಸಬಹುದು ಹಾಗೂ ಒಂದೇ ಸ್ಥಳದಲ್ಲಿ ನಿಲ್ಲಿಸಬಹುದು.
12) ಇದು ಕಾನೂನು ಸುವ್ಯವಸ್ಥೆ ಕಾಪಾಡಲು, ಮೆರವಣಿಗೆ ಹಾಗೂ ಜಾತ್ರೆಯ ಸಮಯದಲ್ಲಿ
     ಮತ್ತು ಗಲಬೆ-ದೊಂಬಿಗಳನ್ನು ನಿಯಂತ್ರಿಸಲು ಹಾಗೂ ಗಸ್ತು ಕಾರ್ಯ ನಿರ್ವಹಿಸಲು ಇದು
     ಅತೀ ಉಪಯುಕ್ತವಾಗಿದೆ.

Kalaburagi District Reported Crimes

ವಿದ್ಯಾರ್ಥಿನಿ ಕಾಣೆಯಾದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸುನೀತಾ ಗಂಡ ದಯಾನಂದ ಮೇಲಿನಕೇರಿ ಸಾ:ವಿಜಯನಗರ ಕಾಲೋನಿ ಕಲಬುರಗಿ ಇವರು ಮಗಳಾದ ಲಕ್ಷ್ಮಿ ಇವಳು ಮಹಾದೇವಿ (ಅಪ್ಪಾ) ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾಳೆ. ದಿನಾಲೂ ಶಾಲೆಗೆ ಒಬ್ಬಳೇ ಹೋಗಿ ಬಂದು ಮಾಡುತ್ತಾಳೆ.ದಿನಾಂಕ 20-01-2016 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ನನ್ನ ಮಗಳಾದ ಲಕ್ಷ್ಮೀ ಇವಳು ಟಿವಿಷನಕ್ಕೆ ಹೋಗಿ ಬರುತ್ತೇನೆ ಅಂತಾ ಮನೆಯಿಂದ ಹೋದವಳು ರಾತ್ರಿಯಾದರೂ ಮರಳಿ ಮನೆಗೆ ಬಂದಿರುವುದಿಲ್ಲ ಅಲ್ಲಿಂದ ಇಲ್ಲಿಯವರೆಗೆ ನಾವು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆ ಆಗಿರುವುದಿಲ್ಲ ಕಾರಣ ಕಾಣೆಯಾದ ನನ್ನ ಮಗಳು ಲಕ್ಷ್ಮೀ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಂಕೆರ ತಂದೆ ನಾಗಣ್ಣ ಗಾಡಿ ಸಾ: ಮಾತೋಳಿ ಮತ್ತು ಅವನ ಗೆಳೆಯನಾದ ಸಚಿನ ತಂದೆ ವಿಶ್ವನಾಥ ಗೋಳಸಾರ ಸಾ: ಅತನೂರ ಇಬ್ಬರು ಕೂಡಿ ಮೋ/ಸೈ ನಂ ಕೆಎ-32 ಇಸಿ- 4263 ನೇದ್ದರ ಮೇಲೆ, ಸಚಿನ ಈತನ ಮೋ.ಸೈ ನಡೆಸಿಕೊಂಡು ಮಾತೋಳಿ ಗ್ರಾಮದಿಂದ ಘತ್ತರಗ ರೋಡಿಗೆ ಹೋಗುತ್ತಿದ್ದಾಗ ಬನ್ನೇಟ್ಟಿ ಕ್ರಾಸ ಹತ್ತಿರ ಎದುರಿನಿಂದ ಒಂದು ಟ್ಯಾಕ್ಟರ ಬರುತ್ತಿದ್ದು, ಸದರಿ ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ರನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿದಕ್ಕೆ ಮೋ.ಸೈ ನಡೆಸುತ್ತಿದ್ದ ಸಚಿನ ಮತ್ತು ಶಂಕರ ಇಬ್ಬರು ಮೋ.ಸೈ ದೊಂದಿಗೆ ಬಿದ್ದಾಗ ಸಚೀನ ಈತನ ತಲೆಗೆ ಮತ್ತು ಮೈ ಕೈಗೆ ಬಾರಿ ರಕ್ತಗಾಯ ಮತ್ತು ಗುಪ್ತಗಾಯ ಆಗಿರುತ್ತದೆ. ಘಟನೆ ಆದ ತಕ್ಷಣ ಟ್ಯಾಕ್ಟರ ಚಾಲಕ ಟ್ಯಾಕ್ಟರ ತಗೆದುಕೊಂಡು ಓಡಿ ಹೋಗಿರುತ್ತಾನೆ. ಸದರಿ ಟ್ಯಾಕ್ಟರ ನಂ ಹಾಗೂ ಚಾಲಕನ ಬಗ್ಗೆ ಗೊತ್ತಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.