POLICE BHAVAN KALABURAGI

POLICE BHAVAN KALABURAGI

31 August 2011

GULBARGA DIST REPORTED CRIMES

ಹಲ್ಲೆ ಪ್ರಕರಣ:

ಶಹಾಬಾದ ನಗರ ಠಾಣೆ: ಶ್ರೀ ಸುರೇಶಕುಮಾರ ತಂದೆ ಸಂಗಣ್ಣಾ ಸಂಗಾವಿಕರ್ ಸಾ:ಶಾಂತನಗರ ಭಂಕೂರ ರವರು ನಾನು ಹಾಗೂ ನಮ್ಮ ಅಣ್ಣ ರಮೇಶ ಕೂಡಿ ಮನೆ ಕಡೆಗೆ ಬರುತ್ತಿರುವಾಗ ಭಾಗು ತಂದೆ ಸಿದ್ರಾಮಪ್ಪಾ ಸಂಗಡ ಇತರೆ 5 ಜನರು ಕೂಡಿಕೊಂಡು ಸಾ|| ಎಲ್ಲರೂ ಭಂಕೂರ ರವರು ಬಂದು ಭಾಗು ಇತನು ನಿನ್ನ ಗೆಳೆಯ ಮಲ್ಲು ಎಲ್ಲಿ ಇದ್ದಾನೆ ಅಂತಾ ಕೇಳಿ ಅವಾಚ್ಯವಾಗಿ ಬೈದು ನನಗೆ ಮತ್ತು ರಮೇಶ ಇತನಿಗೆ ಕಟ್ಟೆಗೆಯಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಹಾಗೂ ಜೋತೆಯಲ್ಲಿದ್ದವರು ಸಹ ಅವ್ಯಾಚ್ಯವಾಗಿ ಬೈದು ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಟಾಟ ಪ್ರಕರಣ:

ದೇವಲ ಗಾಣಗಾಪೂರ ಠಾಣೆ : ದಿನಾಂಕ:31-08-2011 ರಂದು ಮಧ್ಯಾಹ್ನ ಸಂಗಾಪುರ ಗ್ರಾಮದ ಮರಗಮ್ಮಾ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಗೌಸ ಮಲಿಕ ತಂದೆ ಲಾಡ್ಲೆಸಾಬ ಚಿನಮಳ್ಳಿ ಸಂಗಡ ಇಬ್ಬರೂ ಸಾ|| ಸಂಗಾಪೂರ ಗ್ರಾಮ ದವರು ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್‌.ಐ. ಮಂಜುನಾಥ ಎಸ್.ಕುಸುಗಲ್‌ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಹಿಡಿದು ಅವರಿಂದ ನಗದು ಹಣ 520 ರೂಪಾಯಿಗಳು ಮತ್ತು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:

ಫರಹತಾಬಾದ ಠಾಣೆ : :   ಹಣಮಂತ ತಂದೆ ಮಲ್ಲಪ್ಪಾ ನಾಟೀಕಾರ ಸಾ: ಮಿಣಜಗಿ  ರವರು ನಾನು ನನ್ನ ಮನೆಯ ಹತ್ತಿರ ನಿಂತ್ತಿದ್ದಾಗ ಅಣ್ಣನಾದ ಶಾಂತಪ್ಪಾ ತಂದೆ ಸಾಯಬಣ್ಣಾ ನಾಟೀಕಾರ, ಸಾಯಬಣ್ಣಾ ತಂದೆ ಶಾಂತಪ್ಪಾ ನಾಟೀಕಾರ, ಸರುಬಾಯಿ ಗಂಡ ಶಾಂತಪ್ಪಾ ನಾಟೀಕಾರ ಬಂದವರೇ ವಿನಾಃಕಾರಣ ನನಗೆ ಶಾಂತಪ್ಪ ಇವನು ಅವಾಚ್ಯವಾಗಿ ಬೈದು ಊರಲ್ಲಿ ನಿನ್ನದು ಬಹಳ ಸೊಕ್ಕು ಬಂದಿದೆ ಅನ್ನುತ್ತಾ ಎಲ್ಲರೂ ಕೂಡಿಕೊಂಡು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ :
ಚಂದ್ರಶೇಖರ ತಂದೆ ಮಲ್ಲಪ್ಪಾ ಬೂದಿನಾಳ ವಯ: 31 ವರ್ಷ ಸಾಃಸಿದ್ದೇಶ್ವರ ಕಾಲೋನಿ ಗುಲಬರ್ಗಾ ತಾ;ಜಿ;ಗುಲಬರ್ಗಾ ಹಾ||ವ|| ಪುನಾ (ಮಹಾರಾಷ್ಟ್ರ ರಾಜ್ಯ ) ರವರು ನಾನು ಕಾರ ನಂ. ಎಂಹೆಚ್:12, ಹೆಚ್ಎಫ್:1245 ನೇದ್ದರಲ್ಲಿ ಗುಲಬರ್ಗಾಕ್ಕೆ ನನ್ನ ತಂದೆ ತಾಯಿಯವರಿಗೆ ಮಾತನಾಡಿಸಲು ಮತ್ತು ಖಾಸಗಿ ಕೆಲಸದ ಪ್ರಯುಕ್ತ ನನ್ನ ಬರುತ್ತಿದ್ದು. ನನ್ನ ಗೆಳೆಯರಿಗೆ ಫೋನ ಮಾಡಿ ನೀವು ಹುಮನಾಬಾದಕ್ಕೆ ಬನ್ನಿರಿ ಎಲ್ಲರೂ ಕೂಡಿಕೊಂಡು ನನ್ನ ಕಾರಿನಲ್ಲಿ ಗುಲಬರ್ಗಾಕ್ಕೆ ಹೋಗೋಣಾ ಅಂತಾ ತಿಳಿಸಿದ್ದರಿಂದ ಗೆಳೆಯರಾದ ವಿಜಯಕುಮಾರ ಮತ್ತು ಆನಂದ ನಾನು ಕೂಡಿಕೊಂಡು ಹುಮನಾಬಾದದಿಂದ ಗುಲಬರ್ಗಾ ಕಡೆಗೆ ಕಿಣ್ಣಿಸಡಕ ದಾಟಿ ಮಹಿಬೂಬ ಸುಬಾನಿ ದರ್ಗಾದ ಹತ್ತಿರ ಇರುವ ಹೊಡ್ಡು ಏರುತ್ತಿರುವಾಗ ರಾತ್ರಿ 7-45 ಗಂಟೆ ಸುಮಾರಿಗೆ ಎದುರಿನಿಂದ ಹೊಂಡೈ ಏಸಂಟ್ ಕಾರ ನಂ. ಕೆಎ:38,ಎಮ್:1133 ನೇದ್ದರ ಚಾಲಕನಾದ ಸುಧೀರಕುಮಾರ ಸಾಃ ಬೀದರ ಈತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ನನ್ನ ಕಾರಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿ ರೋಡಿನ ಸೇಫ್ ಗಾರ್ಡ ಬ್ಯಾರಿಕೇಡಗಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನನಗೆ ಎದೆಗೆ ಒಳಪೆಟ್ಟಾಗಿ ಗುಪ್ತಗಾಯ, ವಿಜಯಕುಮಾರ ಈತನಿಗೆ ನೋಡಲಾಗಿ, ಗದ್ದಕ್ಕೆ ರಕ್ತಗಾಯ ಮತ್ತು ಆನಂದ ಈತನಿಗೆ ನೋಡಲಾಗಿ, ಹಣೆಗೆ ತರಚಿದ ರಕ್ತಗಾಯವಾಗಿರುತ್ತದೆ. ಹೊಂಡೈ ಏಸಂಟ್ ಕಾರ ನಂ. ಕೆಎ:38,ಎಮ್:1133 ನೇದ್ದರಲ್ಲಿ ಕುಳಿತ ಡಾ|| ಮನಿಷ ಸಾಃ ಬೀದರ ಈತನಿಗೆ ಎಡ ಕೈಗೆ ಒಳಪೆಟ್ಟಾಗಿ ಗುಪ್ತಗಾಯವಾಗಿರುತ್ತದೆ. ಅಪಘಾತ ಪಡಿಸಿದ ಕಾರ ಚಾಲಕ ಸುಧೀರಕುಮಾರ ಕೋಳಿ ಈತನಿಗೆ ಹಣೆಗೆ, ತೆಲೆಗೆ, ಎಡಗೈಗೆ ತರಚಿದ ರಕ್ತಗಾಯಗಳಾಗಿರುತ್ತವೆ ಕಾರ ನಂ. ಕೆಎ:38,ಎಮ್:1133 ನೇದ್ದರ ಚಾಲಕ ಸುಧೀರಕುಮಾರ ಈತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ನಮ್ಮ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 August 2011

GULBARGA DIST REPORTED CRIME

ಹಲ್ಲೆ ಪ್ರಕರಣ:
ಶಹಾಬಾದ ನಗರ ಠಾಣೆ:
ಶ್ರೀ ಸೈಯದ ರುಕ್ಮೂದ್ದೀನ ತಂದೆ ಸೈಯದ ಹುಸೇನಸಾಬ ಚಿತ್ತಾಪುರವಾಲೆ ಅಟೋಚಾಲಕ ಸಾ|| ಶಿಬಿರ ಕಟ್ಟಾ ರವರು ನಾನು ಮತ್ತು ಮಹೇಶ ಇಬ್ಬರು ಅಟೋ ನಂಬರ ಹಚ್ಚಿ ಪಾಳಿಯಲ್ಲಿ ನಿಂತಿದ್ದು, ಸುನೀಲ ತಂದೆ ಕಲ್ಯಾಣೆ ಇತನು ತನ್ನ ಅಟೋವನ್ನು ನಂಬರ ಹಚ್ಚಲಾರದೆ ಪ್ಯಾಸಿಂಜರ ತುಂಬುತ್ತಿದ್ದನು ಆಗ ನಾನು ಮತ್ತು ಮಹೇಶ ಕೂಡಿ ನಂಬರ ಹಚ್ಚಿ ಪ್ಯಾಸೆಂಜರ ತುಂಬಿಕೊಂಡು ಹೋಗು ಅಂದಿದ್ದಕ್ಕೆ ಸುನೀಲ ಇತನು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಶ್ರೀ ಮತಿ ಶರಣಮ್ಮ  ಗಂಡ ಅರ್ಜುನ ಭೀಮನಳ್ಳಿ ಸಾ: ಗುಲಾಬ ವಾಡಿ ಗುಲಬರ್ಗಾ ರವರು ನಾನು ಕೆ.ಬಿ.ಎನ್ ಕಾಂಪ್ಲೇಕ್ಸದಲ್ಲಿರುವ ಪ್ರೀನ್ಸ ಪೂಟವೇರ ಅಂಗಡಿ ಎದುರುಗಡೆ ನಡೆದುಕೊಂಡು ಹೋಗುತ್ತಿದ್ದಾಗ ಕೆಎ 32 ಕೆ 4430 ನೇದ್ದರ ಮೋಟಾರ ಸೈಕಲ್ ಚಾಲಕ ಲಕ್ಷ್ಮಿಕಾಂತ ತಂದೆ ಮಾನಪ್ಪಾ ಇತನು ಅಲಕ್ಷತನದಿಂದ ನಡೆಯಿಸಿ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯು.ಡಿ.ಅರ್. ಪ್ರಕರಣ :

ಫರಹತಾಬಾದ ಠಾಣೆ : ಶ್ರೀ ಕೃಷ್ಣಕುಮಾರ ಅಧೀಕ್ಷಕರು ಕೇಂದ್ರ ಕಾರಾಗೃಹ ಗುಲಬರ್ಗಾ ರವರು ನಮ್ಮ ಕಾರಾಗೃಹ ದಲ್ಲಿ ಮೃತ ಮಲ್ಲಿಕಾರ್ಜುನ ತಂದೆ ಸಾಯಪ್ಪಾ ಅಗಸರ ಸಾ: ಬಟಗೇರ (ಕೆ) ತಾ: ಸೇಡಂ ಈತನು ಸೇಡಂ ಪೊಲೀಸ್ ಠಾಣೆ ಗುನ್ನೆ ನಂ: 149/2011 ನೇದ್ದರ ಪ್ರಕರಣದಲ್ಲಿ ಆರೋಪಿತನಿರುವದರಿಂದ ದಸ್ತಗಿರಿ ಮಾಡಿ ನ್ಯಾಯಾಂಗಕ್ಕೆ ಕೊಟ್ಟು ಕಳುಹಿಸಿದ್ದು, ದಿನಾಂಕ: 28/8/2011 ರಂದು   ಕೇಂದ್ರ ಕಾರಾಗೃಹದಲ್ಲಿ ಸಾಯಂಕಾಲ 6-10 ಗಂಟೆಗೆ ವಿಚಾರಣಾ ಬಂಧೀ ಸಂಖ್ಯೆ 10477 ರಲ್ಲಿ ಸೇರಿಕೆಯಾಗಿದ್ದು,   ಮಲ್ಲಿಕಾರ್ಜುನ ಇತನು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿಗಳು ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಅಂದೇ ದಿನಾಂಕ: 28-8-2011 ರಂದು ರಾತ್ರಿ ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿದ್ದು, ಸದರಿಯವನು ಉಪಚಾರ ಹೊಂದುತ್ತಾ ದಿನಾಂಕ: 29-8-2011 ರಂದು ಬೆಳಗ್ಗೆ 10-40 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಸ ಪ್ರಕರಣ:

ಮಳಖೇಡ ಠಾಣೆ : ಶೇಖರ ತಂದೆ ಸಂಗಯ್ಯಾ ಜಂಗಮ್ ಸಾ: ಸತಗುರು ಕ್ಯಾರಿಯರ್ಸ ಆದೀತ್ಯ  ನಗರ ಮಳಖೇಡ ರವರು ನಾನು ಪ್ರತಿದಿನ ಲಾರಿಗಳಲ್ಲಿ ಸಿಮೆಟ್ ಲೋಡ್ ಮಾಡಿ ಬೇರೆ ಬೇರೆ ಕಡೆಗೆ ಕಳುಹಿಸಿತ್ತಿದ್ದು ಅದರಂತೆ ದಿ: 12-08-2011 ರಂದು 4 ಲಾರಿಗಳ ನಂ, ಎ.ಪಿ.ನಂ, 16-ಎಕ್ಸ್ 9986. 02] ಎ.ಪಿ. 12-ಯು.6962. 03]  ಎ.ಪಿ. 26. ಎಕ್ಸ್ -6872. 04] ಎ.ಪಿ. 22. ವ್ಹಿ -4309. ನೇದ್ದು ಕಳುಸಿದ್ದು, ದಿನಾಂಕ 13-08.2011. ರಂದು  ಎ.ಪಿ. 12 ಯು. 8586. ನೇದ್ದನ್ನು ಸಹ ಸದರಿ ವಿಳಾಸಕ್ಕೆ  ಕಳುಹಿಸಿದ್ದು  ನಂತರ ದಿನಾಂಕ  15-08-2011.ರಂದು ಲಾರಿ ನಂ, ಎ.ಪಿ. 12-ವ್ಹಿ.1512. ನೇದ್ದು ಕಳಿಸಿದ್ದು ಅದು ಸಹ ಸಿಮೆಂಟ್ ಲೋಡ ಮಾಡಿ  ಒಟ್ಟು 06. ಲಾರಿಗಳಲ್ಲಿ ಪ್ರತಿ ಲಾರಿಯಲ್ಲಿ 340. ಚೀಲದಂತೆ ಒಟ್ಟು 2040. ಚೀಲ ಸಿಮಂಟ್ ಒಟ್ಟು ಅಂದಾಜು ಕಿಮ್ಮತ್ತು 5.63.040=00 ರೂಗಳು. ನೇದ್ದರ ಸಿಮೇಂಟನ್ನು  M/S UTCL FALAKHNAMA Shivaramapally. ವಿಳಾಸಕ್ಕೆ ಸಿಮೆಂಟ್ ಖಾಲಿ ಮಾಡಲು ತಿಳಿಸಿ ಟಪಾಲ ಕೊಟ್ಟು ಕಳುಹಿಸಿದೆವು. ಆದರೆ ಸಿಮೆಂಟ್ ಲೋಡ ಮಾಡಿಸಿದ ಏಜೆಂಟ್ ಗೀರಿಧರ ಪಿ.ಆರ್, ಮತ್ತು ಲಾರಿ ನಂ, 01] ಎ.ಪಿ. 16. ಎಕ್ಸ್ 9986. ನೇದ್ದರ ಚಾಲಕ ರಫೀ ಮತ್ತು ಲಾರಿ ಮಾಲಕ ವೆಲು ಕೊಂಡಲ ಸಾ: ಗಗನ ಪವಾಡ 02] ಎ.ಪಿ. 12.ಯು.6962. ನೇದ್ದರ ಚಾಲಕ ಮೀನಾಜ ತಂದೆ ಲಾರಿ ಮಾಲಿಕ ಹುಸೇನ್ ಸಾ: ಕೀಶನ್ ಭಾಗ  03] ಎ.ಪಿ. 26. ಏಕ್ಸ್ -6872 ನೇದ್ದರ ಚಾಲಕ ರಫೀಕ ಮತ್ತು ಲಾರಿ ಮಾಲಿಕ ಮಹ್ಮದ ಮೌಲಾನಾ ಸಾ: ಕೀಶನ್ ಬಾಗ್  04] ಎ.ಪಿ. -22. ವ್ಹಿ 4309. ನೇದ್ದರ ಲಾರಿ ಚಾಲಕ ಇರ್ಸಾಧ ಮತ್ತು ಲಾರಿ ಮಾಲಿಕ ಹುಸೇನ ಖಾದರಿ  ಸಾ: ಎ.ಬಿ. ನಗರ  05] ಎ.ಪಿ. 12. ಯು, 8586 ನೇದ್ದರ ಲಾರಿ ಚಾಲಕ ಸುಧಾಕರ್ ಮತ್ತು ಲಾರಿ ಮಾಲಿಕ ಖಾಜಾಮೀಯಾ ಸಾ: ಕಿಶನ್ ಭಾಗ  06] ಎ.ಪಿ. 12. ವ್ಹಿ 1512 ನೇದ್ದರ ಲಾರಿ ಚಾಲಕ  ರಜಾಕ ಮತ್ತು ಲಾರಿ ಮಾಲಿಕ ಅಬ್ದುಲ್ ಗನಿ ಸಾ: ರಾಜೇಂದ್ರ ನಗರ ಇವರಲ್ಲರೂ ಕೂಡಿ ನಾನು ನಂಬಿಕೆಯ ಮೇಲೆ ಲೋಡ್ ಮಾಡಿ ಕಳಿಸಿದ ಸಿಮೆಂಟ್ M/S UTCL FALAKHNAMA Shivaramapally. ವಿಳಾಸಕ್ಕೆ ಸಿಮೆಂಟ್ ಮುಟ್ಟಿಸದೆ ಬೇರೆ ಕಡೆಗೆ ಸಾಗಿಸಿ ಲಾರಿ ಚಾಲಕರು ಮತ್ತು ಮಾಲಿಕರು  ಹಾಗೂ ಏಜೆಂಟ್  ಗೀರಿಧರ ಪಿ.ಆರ್ ಇವರು ಕೂಡಿ ಕೊಂಡು ನಮಗೆ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿರುತ್ತಾರೆ,  ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 August 2011

GULBARGA DIST REPORTED CRIMES

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ನರ್ಸಿಂಗ   ತಂದೆ ರಾಮಯ್ಯ  ಸಾ: ಭವಾನಿ ನಗರ ಮುಕ್ತಾಂಪೂರ  ಗುಲಬರ್ಗಾ    ರವರು ನಾನು ದಿನಾಂಕ: 28-08-2011 ರಂದು ಸಾಯಂಕಾಲ ಸುಮಾರಿಗೆ ಪಟೇಲ ಸರ್ಕಲ್ ದಿಂದ ಕೆಎ 32 ಬಿ 3986 ನೇದ್ದರ ಅಟೋರೀಕ್ಷಾ ದಲ್ಲಿ ಕುಳಿತು ಸುಪರ ಮಾರ್ಕೆಟ ಕಡೆ ಹೋಗುತ್ತಿದ್ದಾಗ ಲಾಹೋಟಿ ಕ್ರಾಸ್ ಹತ್ತಿರ  ಕಾರ ನಂ: ಕೆಎ 33 ಎಮ್ 1222 ನೇದ್ದರ ಚಾಲಕ ಲಾಹೋಟಿ ಕ್ರಾಸ್ ದಲ್ಲಿ ಖುಬಾ ಕಲ್ಯಾಣ ಮಂಟಪ ಕಡೆ ತಿರುಗಿಸಿಕೊಂಡು ಹೋಗುತಿದ್ದಾಗ, ಅಟೋ ಚಾಲಕ ತನ್ನ ಅಟೋವನ್ನು ಅಲಕ್ಷತನದಿಂದ ನಡೆಯಿಸಿ ಕಾರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಭಾರಿ ಗಾಯಗೊಳಿಸಿ ಅಟೋ ಚಾಲಕ ಓಡಿ ಹೋಗಿರುತ್ತಾನೆ ಅಂತ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.

ಅಪಘಾತ ಪ್ರಕರಣ:                                               

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ರಾಜಶೇಖರ   ತಂದೆ ಧೂಳಪ್ಪ ಗುಡ್ಡ  ಸಾ|| ಕರುಣೇಶ್ವರ ನಗರ  ಗುಲಬರ್ಗಾ ರವರು ನನಗೆ ವಿಜಯರೆಡ್ಡಿ ಈತನು  ಫೋನಮಾಡಿ ನಾನು ಮತ್ತು ನನ್ನ ಗೆಳೆಯ ಸಂತೋಷ ಕುಲಕರ್ಣಿ ಇಬ್ಬರು ಜೇವರ್ಗಿ ರೋಡಿನಲ್ಲಿ ಬರುವ ಜೆ.ಸಿ.ಬಿ.ಷೋ ರೂಮ ಹತ್ತಿರ ಮಾತನಾಡುತ್ತಾ ನಿಂತಾಗ ಅಟೋರೀಕ್ಷಾ ನಂ: ಕೆಎ 32 ಬಿ 648 ನೇದ್ದರ ಚಾಲಕ ಜೇವರ್ಗಿ ಕಾಲೋನಿ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಮೇಲೆ  ಪಲ್ಟಿಯಾಗಿ ಬಿದ್ದಿದ್ದು ಅದರಲ್ಲಿದ್ದ ನಾಗೇಂದ್ರಪ್ಪ ಇವರಿಗೆ ಭಾರಿ ಪೆಟ್ಟಾಗಿ ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲಾ. ಅವರನ್ನು ಬೇರೊಂದು ಅಟೋ ರೀಕ್ಷಾದಲ್ಲಿ ಹಾಕಿಕೊಂಡು ಧನ್ವಂತ್ರಿ ಆಸ್ಪತ್ರೆಗೆ ಒಯ್ಯುತ್ತಿದ್ದೇವೆ.ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿಕೊಂಡು ಧನ್ವಂತ್ರಿ ಆಸ್ಪತ್ರೆಗೆ ಹೋಗಿ ನನ್ನ ಅಣ್ಣ ನಾಗೇಂದ್ರಪ್ಪ ಇವರನ್ನು ನೊಡಲಾಗಿ ಅವರಿಗೆ ಭಾರಿ ಗಾಯವಾಗಿ ಮತನಾಡುತ್ತಿರಲಿಲ್ಲ ಉಪಚಾರ ಪಡೆಯುತ್ತಾ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಹಲ್ಲೆ ಪ್ರಕರಣ :

ಆಳಂದ ಪೊಲೀಸ ಠಾಣೆ: ಧೂಳಪ್ಪ ತಂದೆ ಶಾಲು ಸಾ|| ಆಳಂದ ಕಮಸೂರ ನಾಯಕ ತಾಂಡ ನಾನು ನಮ್ಮ ತಾಂಡದವನಾದ ಶಿವರಾಜ ಇತನಿಗೆ 8 ದಿನಗಳ ಹಿಂದೆ 100 ರೂ ಸಾಲ ಕೊಟ್ಟಿದೆ ಶಿವರಾಜ ಮತ್ತು ಆತನ ತಮ್ಮ ನಮ್ಮ ಮನೆಯ ಮುಂದೆ ಹೋಗುತ್ತಿರುವಾಗ ಸಾಲ ತೆಗೆದುಕೊಂಡಿರುವ ಹಣ ವಾಪಸ ಕೋಡು ಅಂತಾ ಕೇಳಿದ್ದಕ್ಕೆ ಶಿವರಾಜ ಇತನು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದು ಕಿವಿಗೆ ರಕ್ತಗಾಯ ಪಡಿಸಿರುತ್ತನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಕಮಲಾಪೂರ ಪೊಲೀಸ ಠಾಣೆ : ಶ್ರೀ ಪುಷ್ಪರಾಜ ತಂದೆ ಕರಬಸಪ್ಪಾ ಪಾಟೀಲ ಸಾಃ ಡೊಂಗರಗಾಂವತಾ;ಜಿ; ಗುಲಬರ್ಗಾ ರವರು ನಾನು ಮತ್ತು ಸಂತೋಷ ಇತನು ಮರಗುತ್ತಿ ಕ್ರಾಸಿನಲ್ಲಿ ಚಹಾ ಕುಡಿದು ಮಾತನಾಡುತ್ತಾ ಕುಳಿತುಕೊಂಡಾಗ ಸಾಯಂಕಾಲ ಸುಮಾರಿಗೆ ಹುಮನಾಬಾದ ಕಡೆಯಿಂದ ಲಾರಿ ನಂ. ಕೆಎ:16-8472 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ರೋಡಿನ ಎಡಗಡೆ ತಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಪಡಿಸಿದನು. ಲಾರಿ ಚಲಾಯಿಸುತ್ತಿದ್ದ ಚಾಲಕನಿಗೆ ಹೊರಗೆ ತೆಗೆದು ವಿಚಾರಿಸಲಾಗಿ, ತನ್ನ ಹೆಸರು ವೇಣುಕುಮಾರ ತಂದೆ ಮೂರ್ತಿ ಸಾಃ ಮಾಡಿಯಾಳ ತಾಃ ಅರಸಿಕೇರಾ ಜಿಃಹಾಸನ ಅಂತಾ ತಿಳಿಸಿದನು. ಈತನಿಗೆ ಟೊಂಕಕ್ಕೆ, ಬೆನ್ನಿಗೆ, ತಲೆಗೆ ಒಳಪೆಟ್ಟಾಗಿ ಗುಪ್ತಗಾಯ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು. ಅಪಘಾತದಲ್ಲಿ ಲಾರಿ ಜಖಂಗೊಂಡು ಹಾನಿಯಾಗಿದ್ದು ಅದೆ. ಗಾಯ ಹೊಂದಿದ ಲಾರಿ ಚಾಲಕನಿಗೆ ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಗುಲಬರ್ಗಾಕ್ಕೆ ಕೊಟ್ಟು ಕಳುಹಿಸಿ ಕೊಟ್ಟಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಗ್ರಾಮೀಣ ಠಾಣೆ:
ಶ್ರೀ ವಿಜಯಕುಮಾರ ತಂದೆ ಬಸವರಾಜ ನಿಂಬಾಳ ಸಾ|| ಉಪಳಾಂವ ತಾ|| ಗುಲಬರ್ಗಾ ರವರು ನಾನು ಊಟ ತರುವ ಕುರಿತು ಬೇಲೂರ ಕ್ರಾಸಿಗೆ ಟಂಟಂ ಕೆ.ಎ.32 9768 ನೇದ್ದರಲ್ಲಿ ಕುಳಿತು ಹೋಗುವಾಗ ಹಿಂದಿನಿಂದ ಕೆ.ಎ.32 ಬಿ.1673 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೋಡೆದನು ಇದರಿಂದ ಟಂಟಂ ಪಲ್ಟಿಯಾಗಿ ಬಿದಿದ್ದು ಅದರಲ್ಲಿಯ ಎಲ್ಲರಿಗೆ ಪೆಟ್ಟಾಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

28 August 2011

GULBARGA DISTRICT REPORTED CRIMES

ಅಪಘಾತ ಪ್ರಕರಣ :-

ಜೇವರ್ಗಿ ಠಾಣೆ :ಶ್ರೀ ಮಲ್ಲಣ್ಣಗೌಡ ತಂದೆ ಗುರಣ್ಣಗೌಡ ಮಾಲಿ ಪಾಟೀಲ ಸಾ: ಸಾಥಖೇಡ ರವರು, ನಾನು ಮತ್ತು ಇತರರೂ ಕೂಡಿ ಜೇವರ್ಗಿಯಿಂದ ಬಸ್ ನಂಬರ ಕೆ.ಎ. 32 ಎಫ 1310 ನೇದ್ದರಲ್ಲಿ ನಮ್ಮೂರಿಗೆ ಹೋಗುತ್ತಿರುವಾಗ 3-00 ಪಿಎಂಕ್ಕೆ ಕೇಲ್ಲೂರ ದಾಟಿ ಬ್ರಡ್ಸ ಹೀಲ್ ಶಾಲೆಯ ಕ್ರಾಸ ಹತ್ತಿರ ಎದುರುನಿಂದ ಇನ್ನೋಂದು ಬಸ ನಂಬರ ಕೆ.ಎ. 32 ಎಫ 1382 ನೇದ್ದರ ಚಾಲಕ ಈರಪ್ಪ ತಂದೆ ಬಸಪ್ಪನು ತನ್ನ ಬಸ್ಸನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾವು ಹೊರಟ್ಟಿದ ಬಸ್ಸಿಗೆ ಜೊರಾಗಿ ಅಪಘಾತ ಪಡಿಸಿದ ಪರಿಣಾಮ ಬಸ್ಸಿನಲ್ಲಿದ್ದ ನನಗೆ ಮತ್ತು ಇನ್ನೂ ಅನೇಕ ಜನರಿಗೆ ಹಾಗೂ ಎರಡು ಬಸ್ಸಿನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಸಾದಾ ಮತ್ತು ಭಾರಿಗಾಯಗಳಾಗಿದ್ದು ನಮ್ಮ ಬಸ್ಸಿನಲ್ಲಿಯೇ ಇದ್ದ ನಮ್ಮೂರ ಗೌರಮ್ಮ ಇವಳೂ ಭಾರಿ ಗಾಯ ಹೊಂದಿ ಸ್ಥಳದಲ್ಲಿಯೇ ಸತ್ತಿದ್ದು ನಮ್ಮ ಬಸ್ಸಿಗೆ ಡಿಕ್ಕಿ ಹೊಡೆದ ಬಸ್ಸಿನ ಚಾಲಕ ಈರಪ್ಪನಿಗೆ ಹೆಚ್ಚಿನ ಉಪಚಾರಕ್ಕಾಗಿ ಗುಲಬರ್ಗಾ ಸರಕಾರಿ ಅಸ್ಪತ್ತೆಗೆ ಒಯ್ಯದಾಗ ಆಸ್ಪತ್ರೆಯಲ್ಲಿ ಸತ್ತಿರುತ್ತಾನೆ. ಕಾರಣ ಆತನ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 August 2011

GULBARGA DIST REPORTED CRIME

ಯು.ಡಿ.,ಅರ್. ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಬಾಬುರಾವ ತಂದೆ ಬಂಡೆಪ್ಪ ಚೌಡಶೆಟ್ಟಿ ಸಾ: ಅವರಾದ (ಬಿ) ತಾ: ಗುಲಬರ್ಗಾ ರವರು ನಮ್ಮ ಊರಿನ ಬಸ ನಿಲ್ದಾಣದಲ್ಲಿ ಅಪರಿಚಿತ ಮನುಷ್ಯ ವಯಸ್ಸು ಸುಮಾರು 50 ರಿಂದ 55, ಎತ್ತರ 5,6 ಇಂಚ ಸಾದಾಗಪ್ಪು ಬಣ್ಣ ಕೋಲು ಮುಖ, ಉದ್ದ ಮೂಗು ಬಡಕಲು ಶರೀರ, ಮುಖದ ಮೇಲೆ ಬಿಳಿ ದಾಡಿ ಹಾಗು ಕಪ್ಪು ಮಿಶ್ರಿತ ಕೂದಲು, ಒಂದು ನೀಲಿ ಬಣ್ಣದ್ದು ಶರ್ಟ, ಬಿಳಿ ಬಣ್ಣದ ಪೈಜಾಮ್ ಒಂದು ಕೆಂಪು ಬಣ್ಣದ ಬ್ಯಾಗ್ ಅದರ ಮೇಲೆ ಪಿಒಮೊ ಅಂತಾ ಇಂಗ್ಲೀಷನಲ್ಲಿ ಬರೆದಿರುತ್ತದೆ. ಈ ವ್ಯಕ್ತಿಯು ಮಲಗಿದ್ದಲ್ಲಿಯೆ ಆತನಿಗೆ ಇದ್ದ ಅಸ್ತಮಾ ಕಾಯಿಲೆಯೋ ಅಥವಾ ಇನ್ನಾವುದೂ ಕಾಯಿಲೆಯಿಂದ ಬಳಲುತ್ತಾ ಮಲಗಿದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 August 2011

GULBARGA DIST REPORTED CRIME

ಮಟಾಕ ಪ್ರಕರಣ :

ಫರಹತಾಬಾದ ಠಾಣೆ: ದಿನಾಂಕ: 26/8/2011 ರಂದು ಬೆಳಗ್ಗೆ  ಸುಮಾರಿಗೆ ಪಿರೋಜಾಬಾದ ಗ್ರಾಮದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ಪವನ ನೆಜ್ಜೂರ ಡಿ.ಎಸ್.ಪಿ (ಪ್ರೋ) ರವರು ಹಾಗೂ ಸಿಬ್ಬಂದಿಯವರಾದ ಬಿ. ಆರ್ ರಾಠೋಡ ಪಿ,ಎಸ್,ಐ,  ದೇವಿಂದ್ರಪ್ಪಾ, ಜಮೀಲ ಅಹ್ಮದ ಪಿಸಿ ರವರು ಕೂಡಿಕೊಂಡು ಫಿರೋಜಾಬಾದ ಗ್ರಾಮಕ್ಕೆ ಹೋಗಿ ರಾಮಲಿಂಗ ದೇವರ ಗುಡಿಯ ಪಕ್ಕದಲ್ಲಿರುವ ಸಾಹೇಬಗೌಡ ಇವರ ಕಿರಾಣಿ ಅಂಗಡಿಯ ಮುಂದೆ ಸಾಹೇಬಗೌಡ ತಂದೆ ಶಿವಲಿಂಗಪ್ಪಾ ಮಮ್ಮಾಣಿ ಮತ್ತು ಗುಂಡಪ್ಪಾ ತಂದೆ ಬಸವರಾಜ ಶಿರೂರ ರವರು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನು ದೃಡಪಡಿಸಿಕೊಂಡು ಅವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 8225=00 ರೂ,  ಎರಡು ಕಾಲ್ಯೂಕೇಟರ,   ಮಟಕಾ ಚೀಟಿಗಳು, ಮೊಬೈಯಲ್,  ಜಪ್ತಿ ಪಡಿಸಿಕೊಂಡಿದ್ದರಿಂದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

GULBARGA DIST REPORTED CRIMES

ಹಲ್ಲೆ ಪ್ರಕರಣ :

ಬ್ರಹ್ಮಪೂರ ಪೊಲೀಸ್ ಠಾಣೆ : ಶ್ರೀ.ಮಾರುತಿ ತಂದೆ ಚಂದಪ್ಪ ಹೋಟ್ಕರ, ಸಾ|| ಸುಂದರ ನಗರ ಗುಲಬರ್ಗಾ ರವರು ನಾನು ನಿನ್ನೆ ದಿನಾಂಕ: 24/08/2011 ರಂದು ಸಾಯಂಕಾಲ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಶಾರದಾಬಾಯಿ ಇಬ್ಬರೂ ಕುಡಿ ಕಿರಣಾ ಅಂಗಡಿಯ ಹತ್ತಿರ ಕುಳಿತ್ತಿರುವಾಗ ನಮ್ಮ ಮಕ್ಕಳಾದ ಪ್ರಕಾಶ ಮತ್ತು ಪ್ರವೀಣ ಇವರು ಹೊರಗಿನಿಂದ ಬಂದು ನನ್ನೊಂದಿಗೆ ಜಗಳಕ್ಕೆ ಬಿದ್ದು ನೀನು ಮಾಂಗರವಾಡಿಯ ಓಣಿಯಲ್ಲಿ ಹೋಗಿ ಸಿಂಧಿ ಕುಡಿದು ಮನೆಗೆ ಬಂದು ಮನೆ ಹಾಳು ಮಾಡುತ್ತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಬೆನ್ನ ಮೇಲೆ ಹೊಡೆದು ಗುಪ್ತ ಗಾಯ ಪಡಿಸಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೆ ಪ್ರಯತ್ನ ಪ್ರಕರಣ :
ಅಶೋಕ ನಗರ ಪೊಲೀಸ್ ಠಾಣೆ
: ಶ್ರೀ ರಾಜಕುಮಾರ ತಂದೆ ಚಂದ್ರಕಾಂತ ಕಾಂಬಳೆ ಪ್ರೇರಣಾ ಎಜೂಕೇಷನ್ ಟ್ರಸ್ಟ ಅಧ್ಯಕ್ಚ ಸಾ: ಶಕ್ತಿ ನಗರ ಗುಲಬರ್ಗಾ ರವರು ನಾನು ನನ್ನ ಮನೆಯ ಮುಂದೆ ದಿನಾಂಕ 25/08/2011 ರಂದು ಬೆಳಿಗ್ಗೆ 5 ಗಂಟೆಗೆ ವಾಕಿಂಗ ಮಾಡುತ್ತಿರುವಾಗ ವಿ.ಎಲ್. ಗುಡಿಯಪ್ಪ ಮತ್ತು ಸಂಗನಗೌಡ ಪಾಟೀಲ ಇನ್ನೂ 4 ಜನರು ಕೈಯಲ್ಲಿ ಬಡಿಗೆ ಮತ್ತು ರಾಡು ಹಿಡಿದುಕೊಂಡು ಅದರಲ್ಲಿ ವಿ.ಎಲ್. ಗುಡಿಯಪ್ಪ ಇತನು ಜಾತಿ ಏತ್ತಿ ಬೈದು ನಮಗೆ ನೀನು ಸಪ್ಸೆಂಡ್ ಮಾಡಿದಿಯಾ ಅಂತಾ ರಾಡಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯು.ಡಿ.ಅರ್. ಪ್ರಕರಣ :

ಗ್ರಾಮೀಣ ಠಾಣೆ: ಶ್ರೀಮತಿ ಹೇಮಾಬಾಯಿ ಗಂಡ ಬಸವರಾಜ @ ಬಸಣ್ಣ ಬೋರಖಡೇ ಸಾ: ಸೈಯದ ಚಿಂಚೋಳಿ ತಾ: ಗುಲಬರ್ಗಾ ರವರು ಬಸವರಾಜ ಇತನು ದಿನಾಂಕ 24/8/11 ರಂದು ರಾತ್ರಿ ಸುಮಾರಿಗೆ ಮನೆಯ ಸಿಡಿಗಳನ್ನು ಏರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಲೆಗೆ ಬಾರಿ ಪೆಟ್ಟಾಗಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗ ಸೇರಿಕೆಯಾಗಿದ್ದು ಉಪಚಾರದಲ್ಲಿ ಗುಣಮುಖವಾಗದೆ ದಿನಾಂಕ 25/8/11 ರಂದು ಸಾಯಂಕಾಲ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಜಾಗ್ರತೆ ಪ್ರಕರಣ :

ಗ್ರಾಮೀಣ ಠಾಣೆ: ಪಿ.ಎಸ.ಐ ರವರು ದಿನಾಂಕ 25/8/11 ರಂದು ಉದನೂರ ಗ್ರಾಮಕ್ಕೆ ಬೇಟಿ ನೀಡಿದಾಗ ಗ್ರಾಮದಲ್ಲಿ ರಾಮು ಚವಾಣ ಇತನು ತನ್ನ ಸಂಗಡ ಇನ್ನೂ 9 ಜನರನ್ನು ಗುಂಪು ಕಟ್ಟಿಕೊಂಡು ಜೈಬೀಮ ಕೋರಳ್ಳಿ ಇತನ ಗುಂಪಿನ ಮೇಲೆ ದ್ವೇಷವನ್ನು ಬೆಳಸಿಕೊಂಡು ಗುಂಪು ಕಟ್ಟಿಕೊಂಡು ತಿರುಗಾಡುತ್ತಿದ್ದು ಎರಡು ಪಾರ್ಟಿ ಜನರು ಎದುರು ಬದರು ಆದಲ್ಲಿ ಗ್ರಾಮದಲ್ಲಿ ಗಲಾಟೆ ಸಂಭವಿಸಿ ಸಾರ್ವಜನಿಕ ಶಾಂತತೆಗೆ ಭಂಗವುಂಟಾಗುವ ಸಾದ್ಯತೆ ಕಂಡು ಬಂದಿದ್ದರಿಂದ ಅವರುಗಳ ಮೇಲೆ ಮುಂಜಾಗ್ರತೆ ಅಡಿಯಲ್ಲಿ ಕ್ರಮ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

25 August 2011

GULBARGA DIST REPORTED CRIMES

ಕಳ್ಳತನ ಪ್ರಕರಣ :

ನರೋಣಾ ಠಾಣೆ : ಶ್ರೀ ಹಣಮಂತ ತಂದೆ ಶೆಣೆಪ್ಪ ಬಸನಾಕರ ಸಾ: ಬೆಳಮಗಿ ರವರು ನಮ್ಮ ಮನೆ ಮತ್ತು ನಮ್ಮ ಮನೆಯ ಎದುರುಗಡೆ ಇರುವ ಶ್ರೀಮತಿ ರೇಖಾ ಗಂಡ ಬಸವರಾಜ ಸಿಂಗೆ ರವರ ಮನೆಯಲ್ಲಿ ಯಾರೋ ಪ್ರವೇಶ ಮಾಡಿ ಮನೆಯಲ್ಲಿದ್ದ ಬಂಗಾರ ಆಭರಣಗಳು ಮತ್ತು ನಗದು ಹಣ 35,000 ರೂ ಹೀಗೆ ಒಟ್ಟು 68,400=00 ಮತ್ತು ಶ್ರೀರೇಖಾ ಗಂಡ ಬಸವರಾಜ ಇವರ ಮನೆಯಲ್ಲಿಂದ ಬಂಗಾರದ ಅಭರಣಗಳು ಮತ್ತು ನಗದು ಹಣ 3,000 ರೂಪಾಯಿ ಒಂದು ನೋಕಿಯಾ ಮೋಬೈಲ್ ಒಟ್ಟು 60,000 ರೂಪಾಯಿಗಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ :

ಸಂಚಾರಿ ಪೊಲೀಸ್ ಠಾಣೆ : ರೂಪಸಿಂಗ್ ತಂದೆ ದೇವಜೀ ಚವಾಣ ಸಾ: ಆರ್.ಟಿ.ಓ ಕ್ರಾಸ್ ಸೇಡಂ ರೋಡ ಗುಲಬರ್ಗಾ ರವರು ನಾನು ನನ್ನ ಅಳಿಯ ಸಂತೋಷ ಇಬ್ಬರು ಕೂಡಿಕೊಂಡು ಗಂಜ ರೋಡಿಗೆ ಇರುವ ಸುಜುಕಿ ಶೋ ರೂಮ ಮುಂದೆ ನಡೆದುಕೊಂಡು ಹೋಗುವಾಗ ಹುಮ್ನಾಬಾದ ರಿಂಗ್ ರೋಡ ಕಡೆಯಿಂದ ಮೋಟಾರ ಸೈಕಲ್ ನಂ:ಕೆಎ.32- ವಾಯ್ 7716 ನೇದ್ದರ ಸವಾರ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಗಾಯಗೊಳಿಸಿ ವಾಹನ ಸಮೇತ ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಜಾಗ್ರತೆ ಕ್ರಮ :

ಕಮಲಾಪೂರ ಠಾಣೆ : ಇಂದು ದಿನಾಂಕ: 24/08/2011 ರಂದು ಸಾಯಂಕಾಲ ಸುಮಾರಿಗೆ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಠಾಣೆ ಗುನ್ನೆ ನಂ. 104/2011 ನೇದ್ದರಲ್ಲಿ ತನಿಖೆ ಮುಗಿಸಿಕೊಂಡು ಮರಳಿ ಕಮಲಾಪೂರಕ್ಕೆ ಬರುತ್ತಿರುವಾಗ ಕಮಲಾಪೂರ ಗ್ರಾಮದ ಓಕಳಿ ಕ್ರಾಸ ಹತ್ತಿರ  ಸಾರ್ವಜನಿಕ ರಸ್ತೆಯ ಮೇಲೆ ಚಂದ್ರಕಾಂತ ತಂದೆ ಬಾವುಸಿಂಗ್ ರಾಠೋಡ , ಬಸವರಾಜ ತಂದೆ ಧನಸಿಂಗ್ ರಾಠೋಡ್, ಪ್ರೇಮಸಿಂಗ್ ತಂದೆ ಟೀಕು ರಾಠೋಡ್ ಸಾ|| ಎಲ್ಲರೂ ಕಮಲಾಪೂರ ದೇವಲಾ ತಾಂಡಾ ಇವರು ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯುತ್ತಾ  ಚಿರಾಡುವುದು ಹೆದರಿಸುವುದು ಮಾಡುತ್ತಾ ಸಾರ್ವಜನಿಕ ಶಾಂತತೆಗೆ ಭಂಗ ತರುತ್ತಿದ್ದಾಗ, ಇವರನ್ನು ಹೀಗೇಯೇ ಬಿಟ್ಟಲ್ಲಿ ಮುಂದೆ ಯಾವುದಾದರು ಸಂಜ್ಞೆಯ ಅಪರಾಧ ಮಾಡಬಹುದು ಅಂತಾ ಮುಂಜಾಗ್ರತವಾಗಿ ಕ್ರಮ ಕೈಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಗ್ರಾಮೀಣ ಠಾಣೆ: ಶ್ರೀ ರಾಜಶೇಖರ ತಂದೆ ಗುಂಡಪ್ಪ ಬಿರಾದಾರ ಸಾ: ಬಬಲಾದ ಮಠದ ಪಕ್ಕದಲ್ಲಿ ಭವಾನಿ ನಗರ ಗುಲಬರ್ಗಾ ರವರು ನನ್ನ ಮಗ ಕುಮಾರ ಇತನಿಗೆ ಮುಸ್ಲಿಂ ಸಂಘಕ್ಕೆ ಹೋಗಿ ಕಾಯಿ ಪಲ್ಲೆ ಖರೀದಿ ಮಾಡಿಕೊಂಡು ಬಾ ಅಂತಾ ಹೇಳಲು ನನ್ನ ಮಗ ತನ್ನ ಸೈಕಲ ತೆಗೆದುಕೊಂಡು ಕಾಯಿ ಪಲ್ಲೆ ತರಲು ಮನೆಯಿಂದ ಹೋದನು. ನಮ್ಮ ಪೇಪರನಲ್ಲಿ ಬಿಲ್ಲ ಕಲೆಕ್ಟರ ಅಂತಾ ಕೆಲಸ ಮಾಡುತ್ತಿದ್ದ ಕರುಣೇಶ ಈತನು ಜೋತೆ ಲಂಗರ ಹನುಮಾನ ಗುಡಿ ರಿಂಗ ರೋಡ ಕ್ರಾಸಿನ ಮೇಲೆ ರಸ್ತೆ ಬದಿಯಿಂದ ಹೊರಟ ಕುಮಾರ ಇತನಿಗೆ ಎದುರುನಿಂದ ಹಿರೋ ಹೊಂಡಾ ಮೋಟಾರ ಸೈಕಲ ಕೆಎ 32 ಎಚ 4445 ನೇದ್ದರ ಚಾಲಕ ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಬಂದು ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿರಕುಳ ಪ್ರಕರಣ :
ಗ್ರಾಮೀಣ ಠಾಣೆ:
ಶ್ರೀಮತಿ ಮಹಾದೇವಿ ಗಂಡ ಕಲ್ಯಾಣಿ ನೇಲ್ಲೂರ ಸಾ: ಕಪನೂರ ತಾ: ಗುಲಬರ್ಗಾ ರವರು
ನಾನು ದಿನಾಂಕ 24-8-11 ರಂದು ಸಾಯಂಕಾಲ ತಾಯಿಯ ಮನೆಯ ಅಂಗಳದಲ್ಲಿ ಮಾತನಾಡುತ್ತಾ ನನ್ನ ಮಗಳೊಂದಿಗೆ ಕುಳಿತಿರುವಾಗ ನನ್ನ ಗಂಡ ಕಲ್ಯಾಣೀ ಮತ್ತು ಅತ್ತೆ ನೀಲಮ್ಮ ಇವರು ಬಂದು ನನ್ನ ತಾಯಿ ಹೆಳಿದಂತೆ ಕೇಳು ಇಲ್ಲದಿದ್ದರೆ ನಿನ್ನನ್ನು ಸುಮ್ನನೆ ಬಿಡುವದಿಲ್ಲ ಅಂತಾ ಅವಾಚ್ಯವಾಗಿ ಬೈದಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 August 2011

GULBARGA DIST REPORTED CRIMES

ಕಳ್ಳತನ ಪ್ರಕರಣ :

ವಿಶ್ವವಿದ್ಯಾಲಯ ಪೊಲೀಸ ಠಾಣೆ: ಶ್ರೀ ಕಲ್ಯಾಣಪ್ಪಾ ತಂದೆ ವೀರಬದ್ರಪ್ಪ ಗೋದಿ ಸಾ|| ಭೊಪಾಲ ತೆಗನೂರ ಗ್ರಾಮ ರವರು ನಾನು ನಮ್ಮ ತೋಟಕ್ಕೆ ಬೆಳಿಗ್ಗೆ ಹೋಗಿ ನೋಡಲಾಗಿ ಬೋರವೆಲ್ ದಿಂದ ಬೋರ್ಡಿಗೆ ಹಾಕಿದ 30 ಫೀಟ ಕೇಬಲ್ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ಮೇಲೆ ಹಲ್ಲೆ ಪ್ರಕರಣ :

ಶಹಾಬಾದ ನಗರ ಪೊಲೀಸ ಠಾಣೆ: ಶ್ರೀಮತಿ ಬಸಮ್ಮಾ ಗಂಡ ನಾಗಣ್ಣಾ ಹೊರಗಿನಮನಿ ರವರು ನನ್ನ ಮಗನಾದ ಅನೀಲ ಇತನೊಂದಿಗೆ ಸಲೀಮ ತಂದೆ ಮೊದಿನಸಾಬ ಇತನ ಮಗನಾಧ ಅಕ್ಬರನ ಜೋತೆಗೆ ಶಾಲೆಯಲ್ಲಿ ಜಗಳ ತೆಗೆದು ಬಾಯಿ ತಕರಾಗಿದ್ದು, ಸಲೀಮ ಇತನು ನಮ್ಮ ಮನಗೆ ಬಂದು ನಿನ್ನ ಮಗನು ನನ್ನ ಮಗನಿಗೆ ಹೊಡೆದಿದ್ದಾನೆ ಯಾಕೆ ಅಂತಾ ಕೇಳಿ ಕೈಯಿಂದ ಕಪಾಳಕ್ಕೆ ಹೊಡೆದು ಸೀರೆ ಹಿಡಿದು ಏಳೆದಾಡಿ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕ್ರಮ ಸೀಮೆ ಎಣ್ಣೆ ಮಾರಾಟ :

ರಾಘವೇಂದ್ರ ನಗರ ಪೊಲೀಸ್ ಠಾಣೆ:
ಶ್ರೀ ಲಿಂಬಾಜಿ ಅಹಾರ ನಿರೀಕ್ಷಕರು ವಾರ್ಡ ನಂ 9-11 (ಪಡಿತರ ಪ್ರದೇಶ) ಗುಲಬರ್ಗಾ ರವರು ನಾನು ದಿನಾಂಕ 23-08-2011 ರಂದು ಸಾಯಂಕಾಲ ಪರೀಶಿಲನೆ ಮಾಡಲು ಹೋದಾಗ ಮಲ್ಲಿಕಾರ್ಜುನ ರಂಗಂಪೇಠ ಲೈಸನ್ಸ್ ನಂ 149/87 ಸಾ|| ಚನ್ನವೀರ ನಗರ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ ಇವರು ಚಿಲ್ಲರೆ ಸೀಮೆ ಎಣ್ಣೆ ವರ್ತಕರು ಇದ್ದು, ಬೋರಾಬಾಯಿ ನಗರ ಬಡಾವಣೆಯ ನ್ಯಾಯಬೆಲೆ ಅಂಗಡಿ ಸಂಖ್ಯೆ 233 ನೇದ್ದರ ಅನಿಲ ರಹಿತ ಪಡಿತರ ಚೀಟಿಗಳಿಗೆ ಸರಬರಾಜು ಮಾಡಬೇಕಾದ 2726 ಲಿಟರ ಸೀಮೆ ಎಣ್ಣೆ ಅಂದಾಜು ಕಿಮ್ಮತ್ತು 56,263-00 ರೂಪಾಯಿಗಳದ್ದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾ ದುರುಪಯೋಗ ಪಡಿಸಿಕೊಂಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಜೂಜಾಟ ಪ್ರಕರಣ :

ಸುಲೇಪೇಟ ಠಾಣೆ : ದಿನಾಂಕ: 22-08-2011 ರಂದು ಮಧ್ಯಾಹ್ನ ಗ್ರಾಮ ಬೇಟ್ಟಿ ಕುರಿತು ಪಿ.ಎಸ.ಐ ರವರು ಹೊಡೆಬಿರನಳ್ಳೀ ಹೋದಾಗ ಫಕೀರ ಕಟ್ಟೆಯ ಮೇಲೆ ಸಂಜಿವಕುಮಾರ ತಂದೆ ಹುಸನಪ್ಪಾ ಖೈತಾಪೂರ ಸಂಗಡ ಇನ್ನೂ 5 ಜನರು ಸಾ|| ಎಲ್ಲರೂ ಹೊಡೆಬಿರನಳ್ಳೀ ರವರು ಅಂದಾರ ಬಾಹರ ಜೂಜಾಟ ಆಡುತ್ತಿರುವಾಗ ಪಂಚರ ಸಮಕ್ಷಮ ಅವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ 930-00 ರೂ ಹಾಘು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ಷದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ ಪ್ರಕರಣ :

ಸೇಡಂ ಪೊಲೀಸ ಠಾಣೆ: ದಿನಾಂಕ: 22-8 -2011 ರಂದು ಸಾಯಾಂಕಾಲ ದುಗನೂರ ಗ್ರಾಮದ ಸರಕಾರಿ ಹೊಸ ಶಾಲೆಯ ಕಟ್ಟದ ಹತ್ತಿರ 1] ಜಗನಾಥ ತಂದೆ ಮಾಣಿಕಪ್ಪ ಕಾವಲ್ ಸಂಗಡ 4 ಜನರು ಸಾ|| ದುಗನೂರ ಗ್ರಾಮದವರು ಇಸ್ಪೀಟ ಆಡುತ್ತಿದ್ದಾಗ ದಾಳಿ ಅವರಿಂದ ನಗದು ಹಣ 7500 -0 ರೂ ಮತ್ತು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಡನ ಕಿರುಕುಳ :

ಗ್ರಾಮೀಣ ಠಾಣೆ:
ಶ್ರೀಮತಿ ಜ್ಯೋತಿಶ್ರೀ ಗಂಡ ನಾಗಪ್ಪಾ ಭಕ್ತಂಪಳ್ಳಿ ಉ
;ಕಿರಿಯ ಆರೋಗ್ಯ ಸಹಾಯಕಿ ವಿಳಾಸ; ನಾಗರಾಳ ತಾ:ಚಿಂಚೋಳಿ ಸದ್ಯ ತಾವರಗೇರ ತಾ: ಗುಲ್ಬರ್ಗಾ ರವರು ನನ್ನ ಮದುವೆಯು ನಾಗಪ್ಪಾ ಭಕ್ತಂಪಳ್ಳಿಯವರೊಂದಿಗೆ ಹಿರಿಯರ ಸಮಕ್ಷಮ ಮದುವೆಯಾಗಿದ್ದು, ಮೂರು ವಷ್ದ ಮಗನಿರುತ್ತಾನೆ ನನಗೆ ಮದುವೆಯಾದ ಮೇಲೆ ನನಗೆ ಒಂದಿಲ್ಲಾ ಒಂದು ಕಾರಣ ಕೊಟ್ಟು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೋಡುತ್ತಾ ಬಂದಿರುತ್ತಾರೆ. ಒಂದು ವರ್ಷದಿಂದ ನನ್ನ ಗಂಡ ನಾಗಪ್ಪಾ ಭಕ್ತಂಪಳ್ಳಿ ಇವರು ನೌಕರಿಯಿಂದ ಅಮಾನತ್ತಿನಲ್ಲಿದ್ದು ಮನೆಯಲ್ಲಿಯೇ ಇರುತ್ತಾರೆ. ದಿನಾಲು ಹಣ ಕೋಡು ಅಂತಾ ಪೀಡಿಸುತ್ತಿರುತ್ತಾರೆ ದಿನಾಂಕ. 21-08-2011 ರಂದು ರವಿವಾರ ಸಾಯಂಕಾಲ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡ ನಾಗಪ್ಪಾ ಇವರು ಸರಾಯಿ ಕುಡಿಯುವದಕ್ಕೆ ಖರ್ಚಿಗೆ ಹಣ ಕೊಡು ಅಂತಾ ಕೇಳಿದರು ನನ್ನ ಹತ್ತಿರ ಹಣ ಇಲ್ಲಾ ಅಂತಾ ಅಂದಿದಕ್ಕೆ ಅವ್ಯಾಚವಾಗಿ ಬೈದು ಹೊಡೆಬಡೆ ಮಾಡಿ ಮಾಡಿರುತ್ತರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.

22 August 2011

GULBARGA DIST REPORTED CRIMES

ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ
:
ಶ್ರೀ.ಅಂಬರಾಯ ತಂದೆ ಬಸವರಾಜ ಅಂತಪನಾಳ ಸಾ|| ತಾಜಸುಲ್ತಾನಪೂರ ತಾ;ಜಿ;ಗುಲಬರ್ಗಾ ರವರು ನಾನು ಮತ್ತು ನನ್ನ ಅಣ್ಣ ಸಂಗಪ್ಪಾ ಮತ್ತು ಗ್ರಾಮದ ಶಿವಪ್ಪಾ ಚಿಮಟೆ ಎಲ್ಲೂ ಕೂಡಿಕೊಂಡು ದಿನಾಂಕ.20/08/11 ರಂದು ಸಾಯಂಕಾಲ ಬಂಬು ಬಜಾರದಿಂದ ಸುಲ್ತಾನಪೂರಕ್ಕೆ ಆಟೋರಿಕ್ಷಾ ನಂ.ಕೆ.ಎ 32 ಎ-2422 ನೆದ್ದರಲ್ಲಿ ಹೋಗುವಾಗ ಕಮಲನಗರ ಕಾಲೂನಿಯ ಹತ್ತಿರ ಆಟೋ ಚಾಲಕನು ಅತೀವೇಗ & ನಿಸ್ಕಾಳಜಿತನದಿಂದ ನಡೆಯಿಸಿ ಆಟೋ ಪಲ್ಟಿ ಮಾಡಿದನು ಇದರಿಂದ ನಮಗೆ ಗುಪ್ತ ಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ ಪ್ರಕರಣ :

ಗ್ರಾಮೀಣ ಠಾಣೆ : ದಿನಾಂಕ.20/08/11 ರಂದು ಮದ್ಯಾಹ್ನ ಸೈಯದ ಚಿಂಚೋಳಿ ರಸ್ತೆ ಖೇಮಜಿರವರ ಹೊಲದಲ್ಲಿ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿದಾಗ ಅಂದರ ಬಾಹರ ಜೂಜಾಟ ಆಡುತ್ತಿರುವವರನ್ನು ಹೆಸರು ವಿಚಾರಿಸಲಾಗಿ ತುಕಾರಾಮ ತಂದೆ ಮಾಣಿಕರಾವ ದುಗಲಗುಂಡಿ ಸಾ: ಗಂಗಾನಗರ ಗುಲಬರ್ಗಾ, ಶಿವಕುಮಾರ ತಂದೆ ಬಸವರಾಜ ಪ್ಯಾಟಿ ಸಾ; ಮೇಳಕುಂದಿ ಗುಲಬರ್ಗಾ, ದಸ್ತಗಿರಿ ತಂದೆ ಮೃತುಜಾ ಸಾ: ರಾಜೀವಗಾಂಧಿ ನಗರ ಗುಲಬರ್ಗ, ಶರಣು ತಂದೆ ಜೇಮುಸಿಂಗ ಚವ್ಹಾಣ ಸಾ: ವಿಷ್ಣು ನಗರ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ಹಣ 6800/- ರೂ ಹಾಗೂ ಎರಡು ಮೋಬೈಲಗಳು ಅ, ಕಿ 2500/- ರೂ ಹಾಗೂ ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡ್ಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ ಪ್ರಕರಣ :

ಗ್ರಾಮೀಣ ಠಾಣೆ : ದಿನಾಂಕ.20/08/11 ರಂದು ಮದ್ಯಾಹ್ನ ಸೈಯದ ಚಿಂಚೋಳಿ ರಸ್ತೆ ಸುಬಾಷ ರಾಠೋಡ ಇವರ ಹೊಲದಲ್ಲಿ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂದಿಯವರು ದಾಳಿ ಮಾಡಿದ್ದು ಮಲ್ಲಿಕಾರ್ಜುನ ತಂದೆ ಬಸಣ್ಣ ನೆಲೋಗಿ ಸಾ: ರಾಜೀವ ಗಾಂಧಿ ನಗರ ಗುಲ್ಬರ್ಗಾ, ಮಲ್ಲಿಕಾರ್ಜುನ ತಂದೆ ಹಣಮಂತ ಕೋಟನೂರ ಸಾ; ರಾಜೀವ ಗಾಂಧಿ ನಗರ ಗುಲ್ಬರ್ಗಾ, ಲಕ್ಷ್ಮಿಕಾಂತ ತಂದೆ ಸಂಗಪ್ಪ ಚರಕಾರ ಸಾ: ರಾಜೀವ ಗಾಂಧಿ ನಗರ ಗುಲ್ಬರ್ಗಾ, ಶಾಂತಪ್ಪ @ ಶಾಂತು ತಂದೆ ಶ್ರೀಮಂತ ಖ್ಯಾಡ ಸಾ:ರಾಜೀವ ಗಾಂಧಿ ನಗರ ಗುಲ್ಬರ್ಗಾ ರವ ರು ಜೂಜಾಟ ಆಡುತ್ತಿದ್ದು ಇವರನ್ನು ವಶಕ್ಕೆ ತೆಗೆದುಕೊಂಡು ಇವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 850/- ರೂ ಹಾಗೂ ಎರಡು ಮೋಬೈಲಗಳು ಹಾಗೂ ಒಂದು ಮೋಟಾರ ಸೈಕಲ ಹಾಗೂ ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡ್ಡಿದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 August 2011

GULBARGA DIST REPORTED CRIME

ಅಪಘಾತ ಪ್ರಕರಣ ಒಂದು ಸಾವು:

ಕಮಲಾಪೂರ ಪೊಲೀಸ ಠಾಣೆ : ಸುಭಾಶ ತಂದೆ ವಿಠಲ ರಾಠೋಡ ಸಾಃ ಮರಮಂಚಿ ತಾಂಡಾ ತಾಃಜಿಃ ಗುಲಬರ್ಗಾ ಹಾಃವಃ ಟಾಟಾ ಪಾವರ ಸಿಲ್ ರೋಡ ಕಲ್ಯಾಣ ಈಸ್ಟ್ (ಎಂ.ಹೆಚ್) ನಾನು ನಮ್ಮ ತಾಂಡಾದವರಾದ ಬಾಬು ತಂದೆ ದೇವಲಾ 2. ಗಣಪತಿ ತಂದೆ ಗಮ್ಮು ಜಾಧವ 3. ರಾಮಸಿಂಗ್ ತಂದೆ ದೇವಲಾ ಚವ್ಹಾಣ 4. ಸುನೀತಾ ಗಂಡ ದೇವಲಾ ಜಾಧವ ಎಲ್ಲರೂ ಕೂಡಿಕೊಂಡು ದಿನಾಂಕ:21/08/2011 ರಂದು ಕಮಲಾಪೂರ ದಲ್ಲಿ ಸಂತೆ ಇದ್ದ ಪ್ರಯುಕ್ತ ಜೀಪ ನಂ. ಕೆಎ:32, ಎಮ್:1811 ನೇದ್ದರ ಚಾಲಕನು ನಮಗೆ ನೋಡಿ ಕಮಲಾಪೂರಕ್ಕೆ ಹೋಗುತ್ತಿದೆ ಅಂತಾ ಹೇಳಿದನು ನಾವೇಲ್ಲರೂ ಅದೇ ಜೀಪಿನಲ್ಲಿ ಕುಳಿತುಕೊಂಡು ಕಮಲಾಪೂರ ಕಡೆಗೆ ಬರುತ್ತಿರುವಾಗ ಭೀಮನಾಳ ಕ್ರಾಸನಲ್ಲಿ ನಾವು ಕುಳಿತಿರುವ ಜೀಪಿನ ಹಿಂದುಗಡೆ ಇನ್ನೊಂದು ಜೀಪ ನಂ. ಕೆಎ:32,ಎಮ್:2766 ನೇದ್ದರ ಚಾಲಕನು ತನ್ನ ಜೀಪಿನಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ನಾವು ಕುಳಿತಿರುವ ಜೀಪಿಗೆ ಓವರ ಟೇಕ ಮಾಡುತ್ತಿರುವಾಗ ನಾವು ಕುಳಿತಿರುವ ಜೀಪ ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಾ ಓವರ ಟೇಕ ಮಾಡುತ್ತಿರುವ ಜೀಪಿನ ಮಗ್ಗುಲಿಗೆ ಜೀಫ ತಗುಲಿ ನಮ್ಮ ಜೀಪ ಚಾಲಕನು ತನ್ನ ನಿಯಂತ್ರಣ ಕಳೆದುಕೊಂಡು ರೋಡಿನ ಎಡಬದಿಯಲ್ಲಿರುವ ತಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಪಡಿಸಿದ್ದರಿಂದ ಬಾಬು ಇತನಿಗೆ ಎದೆಗೆ ಒಳಪೆಟ್ಟಾಗಿ ಭಾರಿ ಗುಪ್ತಗಾಯ, ಬಲಗಾಲಿನ ಮುರಿದು ಭಾರಿ ರಕ್ತಗಾಯವಾಗಿರುತ್ತದೆ. ಮತ್ತು ಜೀಪಿನಲ್ಲಿ ಕುಳಿತವರಿಗೆ ರಕ್ತಗಾಯವಾಗಿರುತ್ತದೆ ಜೀಪ ಚಾಲಕರು ಅಪಘಾತ ಪಡಿಸಿ ಓಡಿ ಹೋಗಿರುತ್ತಾರೆ. ಬಾಬು ಇತನಿಗೆ ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಆಸ್ಪತ್ರೆಗೆ ತರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

20 August 2011

GULBARGA DIST REPORTED CRIMES

ಕುಡಕ ಗಂಡನ ಕಾಟ ತಾಳಲಾರದಕ್ಕೆ ಸಿಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಹೋದಾಗ ಮಗು ತಾಯಿಯನ್ನು ತಬ್ಬಿ ಕೊಂಡಿದ್ದರಿಂದ ಮಗು ಸಾವು :

ಆಳಂದ ಪೊಲೀಸ ಠಾಣೆ: ದಿನಾಂಕ 19/08/2011 ರಂದು ಸಾಯಂಕಾಲ ಸುಮಾರಿಗೆ ರುದ್ರವಾಡಿ ಗ್ರಾಮದಲ್ಲಿ ರೇಖಾ @ ಸುನಿತಾ ಗಂಡ ಶಂಕರ ಬಿರಾದಾರ ಸಾ|| ರುದ್ರವಾಡಿ ಇವಳು ಗಂಡನಾದ ಶಂಕರ ಇತನಿಗೆ ಕುಡಿಯುದು ಬಿಡು ಅಂತ ಎಷ್ಟು ಸಾರಿ ಹೇಳಿದರು ಕೇಳದೆ ಇದ್ದ ಕಾರಣ ರೇಖಾ ಇವಳು ನಾನೆ ಆತ್ಮಹತ್ಯೆ ಮಾಡಿಕೊಂಡರೆ ಯಾವದೇ ತೊಂದರೆ ಇರುವದಿಲ್ಲ ಅಂತಾ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಾಗ ರೇಖಾಳ 2 ವರ್ಷದ ಮಗ ಕಾಳಪ್ಪ ಇತನು  ಬಂದು ತಬ್ಬಿಕೊಂಡಿದ್ದರಿಂದ ಮಗು ಬೆಂಕಿಯಲ್ಲಿ ಬೆಂದಿರುತ್ತದೆ ಮಗುವಿಗೆ ಉಪಚಾರ ಕುರಿತು ಗುಲ್ಬರ್ಗಾ ಸರ್ಕಾರಿ ಆಸ್ಪತ್ರೆಗೆ ತರುತ್ತಿರುವಾಗ ಮಾರ್ಗ ಮಧ್ಯದಲ್ಲಿಯೇ ಮಗು ಮೃತಪಟ್ಟಿರುತ್ತದೆ. ಹಾಗು ರೇಖಾ ಗಂಡ ಶಂಕರ ಇವಳು ಉಪಚಾರದಲ್ಲಿರುತ್ತಾಳೆ ಅಂತಾ ಎ.ಎಸ.ಐ ರವರು ವರದಿ ಸಲ್ಲಿಸಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯು.ಡಿ.ಅರ್. ಪ್ರಕರಣ:
ಬ್ರಹ್ಮಪೂರ ಠಾಣೆ
: ಶ್ರೀ.ದೀಪಕ ತಂದೆ ಬಾಬು ಉಪಾದ್ಯ, ಸಾ|| ಬಾಪೂನಗರ ರವರು ನನ್ನ ಮಗಳಾದ ಕೋಮಲು ಇವಳು ದಿನಾಂಕ: 19/08/2011 ರಂದು ಮಧ್ಯಾಹ್ನ ಬಾಪೂನಗರ ಬಡಾವಣೆಯ ತಮ್ಮ ಮನೆಯಲ್ಲಿ ಅಡುಗೆ ಮಾಡುವ ಸಲುವಾಗಿ ಸ್ಟೋ ಹಚ್ಚುವಾಗ ಸ್ಟೋ ಎಣ್ಣೆ ಆಕಸ್ಮಿಕವಾಗಿ ಮೈಮೇಲೆ ಸಿಡಿದಿದ್ದು ಅವಳು ಉಟ್ಟ ಬಟ್ಟೆಗೆ ಬೆಂಕಿ ಹತ್ತಿ ಮುಖ ಹೊಟ್ಟೆ ಬೆನ್ನು, ಎರಡು ಕೈಗಳು ಸುಟ್ಟಿದ್ದು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಲಾಗಿತ್ತು ಉಪಚಾರ ಫಲಕಾರಿಯಾಗದೇ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಯು.ಡಿ.ಅರ್. ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ದರೋಡೆ ಪ್ರಕರಣ :
ಸ್ಟೇಷನ ಬಜಾರ ಪೊಲೀಸ ಠಾಣೆ
:
ಶ್ರೀಮತಿ ಯಶೋದ ಗಂಡ ರವಿಕುಮಾರ ಸಾ|| ಮನೆ ನಂ 1-867/43 ವೆಂಕಟೇಶನಗರ ಗುಲಬರ್ಗಾರವರು ನಾನು ದಿನಾಂಕ 19.08.2011 ರಂದು ರಾತ್ರಿ 2000 ಪಕ್ಕದ ಮನೆಯ ವಿಜಯಕುಮಾರ ಮುಲ್ಗೆ ರವರ ಮನೆಗೆ ಕುಂಕುಂಮ ಕಾರ್ಯಕ್ರಮಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿರುವಾಗ ಒಬ್ಬ ಅಪರಿಚಿತ 25-30 ವಯಸ್ಸಿನ ಹುಡಗ ದ್ವೀ ಚಕ್ರ ವಾಹನದ ಮೇಲೆ ಬಂದು ಕೊರಳಲ್ಲಿಯ 20 ಗ್ರಾಂ ಬೆಳ್ಳಿಯ ಕರಡಿಗೆ ಅಕಿ 2,000/-ರೂ, 44 ಗ್ರಾಂ ಮಂಗಳಸೂತ್ರ ಅ.ಕಿ. 1,30,000/- ರೂ ಹೀಗೆ ಒಟ್ಟು 1,32,000/- ರೂ ಕಿಮ್ಮತ್ತಿನ ಆಭರಣಗಳನ್ನು ದರೋಡೆ ಮಾಡಿಕೊಂಡು ಹೋಗಿರುತ್ತನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಪ್ರಕರಣ :
ಸ್ಟೇಷನ ಬಜಾರ ಪೊಲೀಸ ಠಾಣೆ
:
ಶ್ರೀಮತಿ ವ್ರಶಾಲಿ ಗಂಡ ರಾಕೇಶ ಹಾಗರಗುಂಡಗಿ ಉ|| ಡೆಂಟಿಸ್ಟ ಸಾ|| ಮನೆ ಜವಾಹರ ಶಾಲೆ ಹತ್ತಿರ ಜೇವರ್ಗಿ ರಸ್ತೆ ಗುಲಬರ್ಗಾರವರು ನಾನು ದಿನಾಂಕ 19.08.2011 ರಂದು ಸಾಯಂಕಾಲ 1930 ಸುಮಾರಿಗೆ ಚಿತ್ತಾಪೂರ ದಿಂದ ಹುಸೇನ ಸಾಗರ ರೈಲ್ವೆ ಮುಖಾಂತರ ಗುಲಬರ್ಗಾ ರೈಲ್ವೇ ಸ್ಟೇಷನಕ್ಕೆ ಬಂದು ರೈಲ್ವೇ ಹಳಿ ದಾಟುತ್ತಿರುವಾಗ ಹಿಂದಿನಿಂದ ಒಬ್ಬ ಅಪರಿಚಿತ ವ್ಯೆಕ್ತಿ ಕೊರಳಿಗೆ ಕೈ ಹಾಕಿ ಕೊರಳಲ್ಲಿಯ 20 ಗ್ರಾಂ ಬಂಗಾರದ ಮಂಗಳಸೂತ್ರ ಅ.ಕಿ. 50,000/- ರೂ ಮತ್ತು 20 ಗ್ರಾಂ ಬಂಗಾರದ ಚೈನ್ ಅ.ಕಿ. 50,000/- ರೂ ಬೆಲೆ ಬಾಳುವದನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ:
ಶ್ರೀ. ಗುರುವಿಂದ್ರ ತಂದೆ ದತ್ತಾತ್ರೇಯಾ ಜೋಶಿ ಸಾ;ಹರಸೂರ ಗ್ರಾಮ ತಾ;ಜಿ; ಗುಲಬರ್ಗಾ ರವರು ನಾನು ನಮ್ಮ ಊರಿನ ಗ್ರಾಮದವರೊಂದಿಗೆ ಹರಸೂರಿದಿಂದ ಜೀವ ನಂಕೆ.ಎ.32 ಎಂ. 1261 ನೆದ್ದರಲ್ಲಿ ಗುಲಬರ್ಗಾಕ್ಕೆ ಬರುತ್ತಿರುವಾಗ ಬೇಲೂರ ಕ್ರಾಸ ಹತ್ತಿರ ಎದುರಿನಿಂದ ಒಂದು ಪೂಜಾ ಬಸ್ಸ ನಂ.ಕೆ.ಎ.39 4263 ನೆದ್ದರ ಚಾಲಕ ತನ್ನ ಬಸ್ಸನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಾವು ಕುಳಿತ ಹೊರಟ ಜೀಪಿಗೆ ಡಿಕ್ಕಿ ಹೋಡೆದನು ಇದರಿಂದ ಕೆಲವರಿಗೆ ರಕ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 August 2011

GULBARGA DIST REPORTED CRIME

ಹಲ್ಲೆ ಮತ್ತು ಮಾನಭಂಗ ಪ್ರಕರಣ :
ಗ್ರಾಮೀಣ ಠಾಣೆ
:

ಶ್ರೀ ಲಕ್ಷ್ಮಣ ತಂದೆ ಭೀಮಶ್ಯಾ ಪಟ್ಟಣದವರ ಸಾ:ತಾಜಸುಲ್ತಾನಪೂರ ರವರು ನನಗೆ ಮತ್ತು ಹೆಂಡತಿಗೆ ದಿನಾಂಕ 18-8-2011 ರಂದು ಪಂಚಾಯಿತಿ ಮಾಡುವ ಸಲುವಾಗಿ ಧರ್ಮಶಾಲೆಗೆ ಕರೆದುಕೊಂಡು ಹೋಗಿ ನೀವು ಬಾನಾಮತಿ ಮಾಡುತ್ತೀದಿರಿ ಅಂತಾ ಶರಣಪ್ಪ ತಂದೆ ನಾಗಪ್ಪ ಮದನಕರ ಅಬಕಾರಿ ಇಲಾಖೆ, ನಾಗಪ್ಪ @ ನಾಗೇಶ ಮದನಕರ, ಮನೋಹರ ಮದನಕರ, ಸಂಜು ತಂದೆ ಅಂಬಾರಾಯ, ಶಿವಶರಣಪ್ಪ ತಂದೆ ಹಣಮಂತ ಗೊಬ್ಬರು ಸಂಗಡ ಇನ್ನೂ 8-10 ಜನರು ಎಲ್ಲರೂ ನನಗೆ ಮತ್ತು ನನ್ನ ಹೆಂಡತಿಗೆ ಹೊಡೆ ಬಡೆ ಮಾಡಿ ಸೀರೆ ಹಿಡಿದು ಎಳೆದು ಜಗ್ಗಾಡಿ ಮಾನ ಭಂಗವನ್ನು ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಎಮ್.ಡಿ.ಸಮಿಯೋದ್ದಿನ ತಂದೆ ಎಮ್.ಡಿ.ಸಲಿಮೊದ್ದಿನ ಸಾ: ಮದಿನಾ ಕಾಲೋನಿ ಎಮ್.ಎಸ್.ಕೇ.ಮಿಲ್ ಗುಲಬರ್ಗಾ ರವರು ದಿನಾಂಕ: 17-08-2011 ರಂದು ಸಾಯಂಕಾಲ ಮದೀನಾ ಕಾಲೋನಿ ಹತ್ತಿರವಿರುವ ಪರ್ಶಿ ಅಡ್ಡಾ ಎದುರುಗಡೆ ಅಟೋರೀಕ್ಷಾ ನಂ: ಕೆಎ 32 ಬಿ 3722 ನೇದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲ್ ನಂ:ಕೆಎ 37 ಕೆ 3193 ನೆದ್ದಕ್ಕೆ ಡಿಕ್ಕಿ ಪಡಿಸಿ ಗಾಯಗೊಳಿಸಿ ಅಟೋರೀಕ್ಷಾ ನಿಲ್ಲಿಸದೇ ಅಟೋ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಯತ್ನ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಸಿ.ಎಸ. ಮುತ್ತಗಿ, ಅಭಿಯೋಗ ಉಪ ನಿರ್ದೇಶಕರು ಗುಲಬರ್ಗಾದಲ್ಲಿ ನಾನು ಪ್ರದಾನ ಜಿಲ್ಲಾ ಸತ್ರ ನ್ಯಾಯಾಲಯ ಗುಲಬರ್ಗಾ ಸಾರ್ವಜನಿಕ ಅಭಿಯೋಜಕರ ಪ್ರಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಇಂದು ದಿನಾಂಕ 18/8/2011 ರಂದು 2-20 ಪಿ.ಎಂ.ಕ್ಕೆ ಊಟ ಮುಗಿಸಿಕೊಂಡು ಮಿನಿ ವಿಧಾನ ಸೌಧದ ಹೊರಾಂಗಣದಲ್ಲಿನ ವಾರ್ತಾ ಇಲಾಖೆಯ ಕಛೇರಿಯ ಹತ್ತಿರ ಕೋರ್ಟ ಕಡೆಗೆ ಕಾಲ್ನಡಿಗೆಯಲ್ಲಿ ಹೋಗುತ್ತಿರುವಾಗ ಸುನೀಲ ರಾಠೋಡ ಇವನು ನನ್ನ ಇಲಾಖಾ ಜೀಪ ಚಾಲಕ ಅಂತಾ ಕೆಲಸ ಮಾಡುವ ಕಾಲಕ್ಕೆ ಸಾಕಷ್ಟು ಸಲ ಅನಧೀಕೃತವಾಗಿ ಗೈರು ಹಾಜರಾಗಿದ್ದು ನಿಯಮಾನುಸಾರವಾಗಿ ಕ್ರಮ ಕೈಕೊಂಡಿದ್ದನೆ. ಮತ್ತು ದಿನಾಂಕ 15/8/11 ರಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಹೋಗಲು ಬೇಗ ಬರಲು ಚಾಲಕನಾದ ಸುನಿಲ ರಾಠೋಡನಿಗೆ ಸೂಚಿಸಿದ್ದರೂ ಬಾರದೆ ಗೈರು ಹಾಜರಾಗಿದ್ದಾನೆ. ಹಾಗು ದಿನಾಂಕ 17, 18/8/11 ರಿಂದ ದಿವಸವು ಸಹ ಈತನು ಕೆಲಸಕ್ಕೆ ಗೈರ ಹಾಜರಾಗಿದ್ದು ಈ ಎಲ್ಲ ಕಾರಣಗಳಿಂದ ಸಮಯ ಸಾದಿಸಿಕೊಂಡು ನಾನು ಒಬ್ಬನೆ ನಡೆದುಕೊಂಡು ಹೋಗುವದನ್ನು ನೋಡಿ ನನ್ನ ಹಿಂದಿನಿಂದ ಬಂದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಚಾಕುವಿನಿಂದ ಹೊಡೆದು ಬಾರಿ ರಕ್ತಗಾಯ ಮಾಡಿ ಕೊಲೆ ಮಾಡಲು ಪ್ರಯತ್ನಿಸಿ ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ:
ಶ್ರೀ ದಿನೇಶಕುಮಾರ ತಂದೆ ಬಿಹಾರಿಲಾಲ ಬಿಶಕರ್ಮಾ ಸಾ|| ಶಿವಾಝಿ ನಗರ ಗುಲಬರ್ಗಾ ನಾನು ಹುಮನಾಬಾದ ರಿಂಗ ರೋಡಿನ ಅರ್.ಎಂ.ಬಜಾಜ ದಾಲ ಮಿಲ್ ನಲ್ಲಿ ಕೆಲಸ ಮಾಡಲು ಹೋಗುತ್ತಿದ್ದಾಗ ಎಂ ಎಚ 06 ಟಿ 2066 ನೇದ್ದರ ಕಾರ ಚಾಲಕ ಸೈಯದ ಮಸ್ತಾನ ಪಟೇಲ್ ಸಾ|| ಸೋನಿಯಾಗಾಂಧಿ ನಗರ ಗುಲಬರ್ಗಾ ಇತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಕೊಂಡು ಡಿಕ್ಕಿ ಪಡಿಸಿದನು, ರೋಡಿನ ಪಕ್ಕದಲ್ಲಿ ನಿಂತಿರುವ ಗಂಡ - ಹೆಂಡತಿಗೂ ಕೂಡಾ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬಕಾರಿ ಪ್ರಕರಣ :

ಗ್ರಾಮೀಣ ಠಾಣೆ: ದಿನಾಂಕ.18-08-2011 ರಂದು ಮಧ್ಯಾಹ್ನ ಶರಣ ಸಿರಸಗಿ ಮಡ್ಡಿಯಲ್ಲಿನ ಸಾಗರ ದಾಬಾ ಹತ್ತಿರ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂದಿಯವರು ಹೋಗಿ ದಾಳಿ ಮಾಡಲಾಗಿ ಗುಂಡಪ್ಪಾ ತಂದೆ ಚಂದ್ರಶಾ ಪೂಜಾರಿ ಹೋಟಲ ಸಾ;ಶರಣಸಿರಸಗಿ ಮಡ್ಡಿ ಇತನನ್ನು ವಶಕ್ಕೆ ತೆಗೆದುಕೊಂಡು ಯಾವುದೇ ಲೈಸನ್ಸ ಇಲ್ಲದೆ ಅಕ್ರಮವಾಗಿ ಮಧ್ಯದ ಬಾಟಲಿಗಳು ಮಾರಾಟ ಮಾಡುತ್ತಿದ್ದು ಅವನಿಂದ ಮಧ್ಯದ ಬಾಟಲಿಗಳು ಹಾಘು ನಗದು ಹಣ 1250-/ ರೂ ಜಪ್ತಿ ಮಾಡಿಕೊಂಡಿದ್ದರಿದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 August 2011

GULBARGA DIST REPORTED CRIMES

ಮನೆ ಕಳ್ಳತನ ಪ್ರಕರಣ

ಸೇಡಂ ಪೊಲೀಸ್ ಠಾಣೆ: ಕೃಷ್ಣಾ ರೆಡ್ಡಿ ತಂದೆ ದೇವಿಂದ್ರಪ್ಪಾ ನಾಯಕೊಡಿ ಸಾ|| ಬಾಲಾಜಿ ನಗರ ಸೇಡಂ ರವರು ನಾನು ನನ್ನ ಮಗಳ ಜೋತೆಯಲ್ಲಿ ಬಾಂಬೆಗೆ ಹೋಗುತ್ತಿರುವಾಗ ಮನೆ ಕಳ್ಳತನ ಆಗಿದೆ ಅಂತಾ ತಿಳಿಸಿದ್ದರಿಂದ ನಾನು ಮರ್ಗ ಮಧ್ಯದಲ್ಲಿ ಮರಳಿ ಬಂದು ನೊಡಲಾಗಿ ಬೆಡ್ ರೂಮಿಗೆ ಹಾಕಿದ ಕೀಲಿ ಇರಲಿಲ್ಲ ಬಟ್ಟೆ ಬರೆ ಮತ್ತು ಬಂಗಾರ ಆಭರಣಗಳು ಇಟ್ಟಿದ್ದ ಸೂಟಕೇಸ್ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಜಾಗ್ರತೆ ಕ್ರಮ ಪ್ರಕರಣ :
ಶಹಾಬಾದ ನಗರ ಠಾಣೆ:

ದಿನಾಂಕ:18/08/2011
 ರಂದು ಪಿ.ಎಸ.ಐ ಮತ್ತು ಪಿಸಿ  ರವರು ರಾತ್ರಿ ಗಸ್ತು ಚೆಕ್ಕಿಂಗ ಇದ್ದಿದರಿಂದ ಶಹಾಬಾದ ನಗರ ರೈಲ್ವೆ ಸ್ಷೇಷನ ಹತ್ತಿರ ಇರುವ ಸರೋಜಾ ವೈನ ಶಾಪದ ಹತ್ತಿರ ಬಂದಾಗ ಅದರ ಮುಂದುಗಡೆ ಲೈಟಿನ ನೆರಳಲ್ಲಿ ಇಬ್ಬರು ಹುಡಗರು ನಿಂತಿದ್ದು ಕೇಳಲು ತಪ್ಪಿಸಿ ಕೊಳ್ಳಲು ಪ್ರಯತ್ಮಿಸುತ್ತಿದ್ದರಿಂದ ಹಿಡಿದು ವಿಚಾರಿಸಲಾಗಿ ರಘು ತಂದೆ ಪ್ಕಕಾಶ ಕಾಂಬಳೆ ಮತ್ತು ಕೃಷ್ಟಾ ತಂದೆ ಬಂದಗೇಪ್ಪಾ ಮಿಂಚನ್ ಸಾ:  ಸುಂದರ ನಗರ  ಗುಲ್ಬರ್ಗಾ ಅಂತಾ ತಿಳಿಸಿದರು. ಅವರನ್ನು ಸ್ಥಳದಲ್ಲಿಯೇ ಬಿಟ್ಟರೆ ಯಾವುಧಾದರರೂ ಸ್ವತ್ತಿನ ಅಪರಾಧಗಳು ಮಾಡಬಹುದೆಂದು ತಿಳಿದು ಮುಂಜಾಗ್ರತೆ ಕ್ರಮದ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮಟಕಾ ಪ್ರಕರಣ :
ಶಹಾಬಾದ ನಗರ ಠಾಣೆ:
ಸುಭಾಸ ಚೌಕದಲ್ಲಿ ಹತ್ತಿರ ಒಬ್ಬನು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ.ಐ ಮತ್ತು ಸಿಬ್ಬಂದಿಯವರು ಹೋಗಿ ದಾಳಿ ಮಾಡಿ ರಾಮು ತಂದೆ ಹೊಸರಪ್ಪಾ ಚೌದರಿ ಇತನ್ನು ವಶಕ್ಕೆ ತೆಗೆದುಕೊಂಡು ಅವನಿಂದ ಮಟಕಾ ಚೀಟಿ ಮತ್ತು ನಗದು ಹಣ 850/- ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ನಿಂದನೆ ಪ್ರಕರಣ

ಗ್ರಾಮೀಣ ಠಾಣೆ : ಶ್ರೀ ರಾಮು ತಂದೆ ಹರಿಶ್ಚಂದ್ರ ಚವ್ಹಾಣ ಉ:ಗುತ್ತೇದಾರ ಸಾ: ಉದನೂರ ತಾ:ಜಿ: ಗುಲಬರ್ಗಾ ರವರು ನಾನು ಇಂದು ಮುಂಜಾನೆ ಉದನೂರ ಗ್ರಾಮದಿಂದ ಡಬರಾಬಾದ ಗ್ರಾಮಕ್ಕೆ ನಮ್ಮೂರಿನವರೊಂದಿಗೆ ಆಟೋದಲ್ಲಿ ಹೊರಟಾಗ ಜೈಬೀಮ ತಂದೆ ಶಿವಲಿಂಗಪ್ಪ ಕೊರಳ್ಳಿ ಸಾ|| ಉದನೂರ ದವನು ಕೈಯಲ್ಲಿ ತಲವಾರ ಹಿಡಿದುಕೊಂಡು ಬಂದು ಆಟೋವನ್ನು ನಿಲ್ಲಿಸಿ ಮಗನೇ ರಾಮ್ಯಾ ಕೆಳಗೆ ಇಳಿ ನನಗೆ ಕುಡಿಯಲಿಕ್ಕೆ ಹಣ ಕೊಡು ಅಂತಾ ಕೇಳಿದಾಗ ನಾನು ಏಕೆ ಹಣ ಕೊಡಬೇಕು ಅಂತ ಅಂದಾಗ ಅವನು ಅದಕ್ಕೆ ಹಪ್ತ ಕೋಡಬೇಕು ಅಂತಾ ಅಂದು ಅವ್ಯಾಚ್ಯವಾಗಿ ಬೈದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಮತ್ತು ಮಾನಭಂಗ ಪ್ರಕರಣ :

ಗ್ರಾಮೀಣ ಠಾಣೆ: ಶ್ರೀ ಕುಮಾರಿ ಲಕ್ಷ್ಮೀ ತಂದೆ ಶಿವಲಿಂಗಪ್ಪಾ ಕೊರಳ್ಳಿ ಸಾ;ಉದನೂರ ತಾ;ಜಿ;ಗುಲಬರ್ಗಾ
ರವರು ನಾನು ಮತ್ತು ನನ್ನ ಅಣ್ಣ ಜೈಭೀಮ ಕೊರಳ್ಳಿ ಇಬ್ಬರು ಕೂಡಿಕೊಂಡು ಕಮೀಟಿ ಹಾಲ ಹತ್ತಿರ ಹೋಗು ತ್ತಿರುವಾಗ ರಾಮು ತಂದೆ ಹರಿಶ್ಚಂದ್ರ ಚವ್ಹಾಣ, ರಾಮು ತಂದೆ ಹರಿಶ್ಚಂದ್ರ ಚವ್ಹಾಣ , ವಿಠಲ ತಂದೆ ಹರಿಶ್ಚಂದ್ರ ಚವ್ಹಾಣ , ದೇಸು ತಂದೆ ಹರಿಶ್ಚಂದ್ರ ಚವ್ಹಾಣ , ಭೀಮು ಲಕ್ಷ್ಮಣ ಪೂಜಾರಿ ,ಆನಂದ ತಂದೆ ಲಕ್ಷ್ಮಣ ಪೂಜಾರಿ , ವಿಥುನ ತಂದೆ ಮಾಹಾದೇವ ಚವ್ಹಾಣ ಸಾ;ಎಲ್ಲರೂ ಉದನೂರ ದವರು ನಮಗೆ ತಡೆದು ಅವಾಚ್ಯ ಶಬ್ದಗಳಿಂದ ಬೈಯ್ದು , ಕೈಹಿಡಿದು ಎಳೆದುಕೊಂಡು ಸೇವಲಾಲ ಗುಡಿ ಹತ್ತಿರ ಕರೆದುಕೊಂಡು ಹೋಗಿ ಗುಡಿ ಎದುರಿನ ಕಂಬಕ್ಕೆ ಹಗ್ಗದಿಂದ ಕಟ್ಟಿ ಕೈಯಿಂದ ಹೊಡೆದು, ಗುಪ್ತಗಾಯಗೊಳಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 August 2011

GULBARGA DIST REPORTED CRIMES

ಮುಂಜಾಗ್ರತೆ ಕ್ರಮದ ಅಡಿಯಲ್ಲಿ ಪ್ರಕರಣ : ಬ್ರಹ್ಮಪೂರ ಠಾಣೆ ಸರಹದ್ದಿನಲ್ಲಿ ದಿನಾಂಕ: 16/08/11 ರಂದು ಸಾಯಂಕಾಲ ಶ್ರೀ.ಮಹಾಂತೇಶ ಸಿ.ಪಿ.ಸಿ ರವರು ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ಹೋದಾಗ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯ ಎದುರುಗಡೆ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವನನ್ನು ಹಿಡಿದು ವಿಚರಿಸಲಾಗಿ ಸರಿಯಾದ ಮಾಹಿತಿ ಮತ್ತು ವಿಳಾಸ ತಿಳಿಸದೇ ಇರುವದರಿಂದ ಅನವನ್ನು ಅಲ್ಲಿಯೇ ಬಿಟ್ಟರೆ ಯಾವುದಾದರೊಂದು ಸ್ವತ್ತಿನ ಅಪರಾದ ಮಾಡಬುದೆಂದು ತಿಳಿದು ಠಾಣೆಗೆ ಕರೆ ತಂದು ಕೂಲಕೂಂಶವಾಗಿ ವಿಚಾರಿಸಲಾಗಿ ಸಾಗರ ತಂದೆ ನಾರಾಯಣ @ ವಕೀಲ ಕಾಳೆ, ಸಾ|| ಮಾಂಗರವಾಡಿ ಗಲ್ಲಿ ಬಾಪೂನಗರ ಗುಲಬರ್ಗಾ ಅಂತಾ ತಿಳಿಸಿದ್ದರಿಂದ ಬ್ರಹ್ಮಪೂರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ : ಶ್ರೀ ಅಯ್ಯುಬಶಾಹ ತಂದೆ ರುಕುಮಶಾಹಾ ಬಿಯಾಬಾನಿ ಸಾ: ಭೀಮಳ್ಳಿ ತಾ:ಜಿ: ಗುಲಬರ್ಗಾ ರವರು ನನ್ನ ತಂದೆಯಾದ ರುಕುಮಶಹಾ ವ:65 ವರ್ಷ ಇವರು ಪ್ರತಿ ದಿವಸ ಭೀಮಳ್ಳಿಯಿಂದ ಗುಲಬರ್ಗಾಕ್ಕೆ ಬಂದು ಶೇಖರೋಜಾ ದರ್ಗಾದಲ್ಲಿ ಭೀಕ್ಷೆ ಬೇಡುತ್ತಿದ್ದು ದಿನಾಂಕ 16-8-2011 ರಂದು ಮಧ್ಯಾಹ್ನ ಸುಮಾರಿಗೆ ಆಳಂದ ಚೆಕ್ಕ ಪೋಸ್ಟ ಸಮೀಪ ಕೃಷಿ ಸಂಶೋಧನಾ ಕೇಂದ್ರದ ಸಣ್ಣ ಗೇಟ ಎದುರುಗಡೆ ರುಕುಮಶಹಾ ಇವರು ಕೆಎ 32 ಎಫ 1093 ಬಸ್ಸಿನಲ್ಲಿ ಎರುವಾಗ ಬಸ್ಸ ಚಾಲಕ ಶರಣಪ್ಪ ತಂದೆ ಮನ್ಸಪ್ಪಾ ಯಂಕಂಚಿ ಇತನು ತನ್ನ ಬಸ್ಸನ್ನು ಅಲಕ್ಷತನದಿಂದ ಒಮ್ಮೇಲೆ ಚಾಲು ಮಾಡಿ ನಡೆಸಿದ್ದರಿಂದ ಬಸ್ಸಿನ ಕೆಳೆಗೆ ಬಿದಿದ್ದು ಬಸ್ಸಿನ ಹಿಂದಿನ ಟೈರ ಬಲಗಾಲ ಮೊಳಕಾಲ ಮೇಲೆ ಹೋಗಿದೆ ಬಲಗಾಲಿಗೆ ಭಾರಿಗಾಯ ಮತ್ತು ಅಲ್ಲಿಲ್ಲಿ ಗುಪ್ತ ಪೆಟ್ಟಾಗಿದ್ದು ನಂತರ ಉಪಚಾರ ಕುರಿತು ಗುಲಬರ್ಗಾ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರದಲ್ಲಿ ಗುಣ ಮುಖನಾಗದೇ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಗ್ರಾಮೀಣ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

16 August 2011

GULBARGA DISTRICT REPORTED CRIMES

ಅಪಹರಣ ಪ್ರಕರಣ :
ದೇವಲ ಗಾಣಗಾಪೂರ ಠಾಣೆ:
: ಶ್ರೀಮತಿ ಸಂಗಮ್ಮ ಗಂಡ ದೇವಿಂದ್ರಪ್ಪ ಡಾಂಗೆ ಸಾ:ದೇವಲಗಾಣಗಾಪೂರ ತಾ|| ಅಫಜಲಪೂರ ರವರು ನನಗೆ ಶಾಂತಾಬಾಯಿ ಅನ್ನುವ ಮಗಳಿದ್ದು ಅವಳಿಗೆ ಮೋರಟಗಿ ಗ್ರಾಮದ ತನ್ನ ತಮ್ಮ ನಿಂಗಪ್ಪ ಗಂಡ ಸಿದ್ದಪ್ಪ ಬೇಲೂರ ಎಂಬಾತನ ಸಂಗಡ ಮದುವೆ ಮಾಡಿ ಕೊಟ್ಟಿದ್ದು, ಇನ್ನೊಬ್ಬ ಮಗಳಾದ ರೇಣುಕಾ ಇವಳಿಗೆ ನಿಂಬರ್ಗಾ ಗ್ರಾಮದ ಅಶೋಕ ತಂದೆ ಗುಂಡಪ್ಪ ಬಾಸಗಿ ಎಂಬಾತನ ಸಂಗಡ ಮದುವೆ ಮಾಡಿ ಕೊಟ್ಟಿದ್ದು ಉಳಿದ 3 ಜನ ಹೆಣ್ಣು ಮಕ್ಕಳ ಮದುವೆ ಮಾಡಿರುವುದಿಲ್ಲಾ . ದಿನಾಂಕ: 02-04-2011 ರಂದು ಸಾಯಂಕಾಲ ಸುಮಾರಿಗೆ ಮಗಳು ಶಾಂತಾಬಾಯಿ ಹಾಗೂ ಈರಮ್ಮ, ಸಾವಿತ್ರಿ ರವರು ನಮ್ಮ ಮನೆಯಲ್ಲಿದ್ದಾಗ ಅಶೋಕ ತಂದೆ ನಿಂಗಪ್ಪ ಬಾಸಗಿ ಇತನು ಮನಗೆ ಬಂದು ಶಾಂತಾಬಾಯಿಗೆ ನನ್ನ ಜೊತೆಯಲ್ಲಿ ಬಾ, ನಾವಿಬ್ಬರೂ ಸೇರಿ ಪುನಾಕ್ಕೆ ಹೋಗಿ ಮದುವೆ ಮಾಡಿಕೊಂಡು ಆರಾಮವಾಗಿರೋಣ ಅಂತಾ ಅಂದಾಗ ಶಾಂತಾಬಾಯಿ ಹೋಗುವದಕ್ಕೆ ನಿರಾಕರಿಸಿದ್ದರಿಂದ ಅಶೋಕ ಇತನು ನೀನು ನನ್ನ ಸಂಗಡ ಬರದಿದ್ದರೆ ನಿನಗೆ ಬಿಡುವುದಿಲ್ಲಾ ಅಂತಾ ಹಾಗು ಒತ್ತಾಯ ಪೂರ್ವಕವಾಗಿ ಅವಳಿಗೆ ಇಚ್ಚೆ ಇಲ್ಲದಿದ್ದರು ಅವಳಿಗೆ ಮದುವೆ ಮಾಡಿಕೊಳ್ಳೊಣ ಬಾ ಅಂತಾ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ ಪ್ರಕರಣ :

ದೇವಲ ಗಾಣಗಾಪೂರ ಠಾಣೆ : ದಿನಾಂಕ; 15-08-2011 ರಂದು ಸಾಯಂಕಾಲ ಚಿನಮಳ್ಳಿ ಗ್ರಾಮದ ಪ್ರವಾಸಿ ಮಂದಿರದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರ ಇಸ್ಪೆಟ ಜೂಜಾಟ ಆಡುತಿದ್ದಾಗ ಪಿಎಸ್‌ಐ ರವರು ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಮಲ್ಕಣ್ಣಾ ತಂದೆ ರಾಯಪ್ಪ ತಳಕೆರಿ ಸಂಗಡ .6 ಜನರು ಸಾ|| ಎಲ್ಲರೂ ಚಿನಮಳ್ಳಿ ಗ್ರಾಮದವರು ಹಿಡಿದು ಅವರಿಂದ ನಗದು ಹಣ 780 ರೂ ಜಪ್ತಿ ಮಾಡಿಕೊಂಡಿದ್ದರ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ಆಳಂದ ಪೊಲೀಸ ಠಾಣೆ: ಶ್ರೀ ಸಿರಾಜ ಅಲಿ ತಂದೆ ರಜಬ ಅಲಿ ರವರು ಬಾಹರ ಪೇಟ ಆಳಂದ ರಪೀಕ ಇತನಿಗೆ ನನ್ನ ಮಗನ ಜೊತೆ ಯಾಕೆ ತಕರಾರು ಮಾಡುತಿದ್ದಿಯಾ ಅಂತ ಕೇಳಿದ್ದಕ್ಕೆ ರಪೀಕ ಮತ್ತು ಸಂಗಡ ಇಬ್ಬರೂ ನೀನು ಕೇಳಲು ಬರುತ್ತಿಯಾ ಮಾಗನೆ ಅಂತ ಅಲ್ಲೆ ಬಿದಿದ್ದ ಇಟಂಗಿಯನ್ನು ತೆಗೆದುಕೊಂಡು ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಹಾಗು ಇನ್ನೊಬ್ಬನು ಕೈಯಿಂದ ಹೊಡೆದಿರುತ್ತಾನೆ ಇನ್ನೊಬ್ಬನು ಸಹ ಹೊಡೆಯುದಕ್ಕೆ ಪ್ರಚೋದನೆ ಮಾಡುತ್ತಿದ್ದನು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ
: ಶ್ರೀ ಅಜಯ ತಂದೆ ಓಮನ ಪುಟನ ಪಿಲ್ಲೆ ಬಿ.ಸಿ.ಎ. ಫಸ್ಟ ವಿದ್ಯಾರ್ಥಿ ಸಾ|| ಜಿ .ಅರ್. ನಗರ ಖಾದ್ರಿ ಚೌಕ ಗುಲಬರ್ಗಾ ರವರು ನಾನು ದಿನಾಂಕ 15-08-11 ರಂದು ಮಧ್ಯಾಹ್ನ ಸುಮಾರಿಗೆ ನನ್ನ ಚಿಕ್ಕಮ್ಮನ ಮಗಳಾದ ಕಾವ್ಯಾ ತಂದೆ ಕಲ್ಯಾಣರಾವ ಹಿರೋಳ್ಳಿ ಸಾ: ಭೂಸನುರ ಗ್ರಾಮ ಇವಳಿಗೆ ಭೂಸನುರ ಗ್ರಾಮಕ್ಕೆ ಬಿಡುವ ಕುರಿತು ನನ್ನ ಹೊಂಡಾ ಸುಟೋನರ ಕೆಎ 32 ಡಬ್ಲೂ 1168 ನೇದ್ದರ ಹಿಂದೆ ಕೂಡಿಸಿಕೊಂಡು ಹೊರಟಿದ್ದು ಎಂ.ಎಸ್.ಕೆ.ಮಿಲ್ಲ ರಿಂಗ ರೋಡ ಕಡೆಯಿಂದ ಕೆಎ 25 ಬಿ 2193 ವಿಅರಎಲ್ ಗೂಡ್ಸ ನೇದ್ದರ ಚಾಲಕ ರಮೇಶ ತಂದೆ ಯಂಕಪ್ಪ ಪತ್ತಾರ ಸಾ: ಓಮಟಾರ ತಾ: ರಾಮದುರ್ಗ ಜಿಲ್ಲಾ ಬೆಳಗಾಂವ ಇತನು ತನನ್ ವಾಹನವನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಬಂದವನೇ ಹಿಂದಿನಿಂದ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದಿದ್ದು ನಾನು ಮತ್ತು ಕಾವ್ಯಾ ಇಬ್ಬರು ಮೋಟಾರ ಸೈಕಲದೊಂದಿಗೆ ರೋಡಿಗೆ ಬಿದ್ದಿದ್ದು, ನನಗೆ ರಕ್ತಗಾಯವಾಗಿದ್ದು, ಕಾವ್ಯಾ ಇವಳಿಗೆ ನೋಡಲಾಗಿ ಅವಳ ಬಲ ತಲೆ ಹಿಂದೆ, ಬಲಗೈ ಮೊಳಕೈ ಮೇಲೆ ಕೆಳೆಗೆ, ಬಲಗಾಲ ಮೊಳಕಾಲ ಮೇಲೆ ರಕ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 August 2011

GULBARGA DIST REPORTED CRIMES


ಕಳೆದ ಎಂಟು ತಿಂಗಳ ಹಿಂದೆ ರೇಣುಕಾ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ಚೀಲಗಳನ್ನು ಕಳ್ಳತನ ಮಾಡಿಕೊಂಡು ನಾಪತ್ತೆಯಾಗಿದ್ದ ಆರೋಪಿಗಳ ಮತ್ತು ಮಾಲಿನ ಪತ್ತೆ.

ದಿನಾಂಕ; 01-01-2011 ರಂದು ಮಧ್ಯಾಹ್ನ ಸುಮಾರಿಗೆ ಶ್ರೀ ರಮೇಶ ತಂದೆ ಸಾತಲಿಂಗಪ್ಪಾ ಮಾಳಗೆ ಆಡಳಿತಧಿಕಾರಿಗಳು ಶ್ರೀ ರೇಣುಕಾ ಸುಗರ ಲಿಮಿಟೆಡ್ ಹವಳಗಾ ರವರು ಗೋದಾಮಿನಲ್ಲಿ ಒಟ್ಟು 41,802 ಸಕ್ಕರೆ ಚೀಲಗಳನ್ನು ದಾಸ್ತಾನು ಮಾಡಿಟ್ಟು ಗೋದಾಮಿಗೆ ಸಿಬ್ಬಂದಿ ಹಾಗು ಸಹಾಯಕರನ್ನು ನೇಮಕ ಮಾಡಿದ್ದು ಇದೆ. ನಾನು ದಿನಾಂಕ: 29-12-2010 ರಂದು ಗೋದಾಮಿನ ಸಿಬ್ಬಂದಿಯವರೊಂದಿಗೆ ಗೋದಾಮನ್ನು ಪರೀವಿಕ್ಷಣೆ ಮಾಡಲು ಹೋದಾಗ ಗೋದಾಮಿನ ಹಿಂದಿನ ಭಾಗದ ಟಾರಪಲ್ಲ ಹಾಗು ಪಿನಿಸಿಂಗ್ ಹರಿದು ಗೋದಾಮಿನಲ್ಲಿಟ್ಟಿದ್ದ 153 ಸಕ್ಕರೆ ಚೀಲಗಳನ್ನು ಕಳ್ಳತನವಾದ ಬಗ್ಗೆ ಕಂಡು ಬಂದಿರುತ್ತದೆ . ನಾನು ಸಿಬ್ಬಂದಿಯವರಿಗೆ ವಿಚಾರಿಸಲಾಗಿ ಅವರಿಂದ ಯಾವದೇ ಮಾಹಿತಿ ಸಿಗಲಿಲ್ಲ ಪ್ರತಿಯೊಂದು ಸಕ್ಕರೆ ಚೀಲ 50 ಕೆ.ಜಿ. ತೂಕದಾಗಿರುತ್ತವೆ ಒಂದು ಚೀಲಕ್ಕೆ ರೂ. 1400-00 ಇರುತ್ತದೆ ಒಟ್ಟು 153 ಸಕ್ಕರೆ ಚೀಲಗಳು ಅ::ಕಿ|| 2,14,200 ರೂಪಾಯಿಗಳ ಮೌಲ್ಯದ ಸಕ್ಕರೆ ಚೀಲಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ನಂ: 01/2011 ಕಲಂ 457, 380 ಭಾರತೀಯ ದಂಡ ಸಂಹಿತೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು.

ದಿನಾಂಕ:14-08-201 ರಂದು ರಾತ್ರಿ 11-00 ಗಂಟೆಯಿಂದ ಅಫಜಲಪೂರ ಠಾಣೆಯ ಪಿ.ಎಸ.ಐ ರವರು ಶ್ರೀ ಎಸ. ಮಂಜುನಾಥ ರವರು ತಮ್ಮ ಠಾಣೆಯ ಸಿಬ್ಬಂದಿಯವರೊಂದಿಗೆ ರೋಡ ಪೆಟ್ರೊಲಿಂಗ ಕರ್ತವ್ಯ ನಿರ್ವಹಿಸುತ್ತಾ ಮಧ್ಯರಾತ್ರಿ ದಿನಾಂಕ: 15-08-2011 ರಂದು 2 ಎ.ಎಮ ಸುಮಾರಿಗೆ ಹವಳಗಾ ಶ್ರೀ ರೇಣುಕಾ ರೇಣುಕಾ ಸುಗರ್ ಮಿಲಿಟೆಡ್ ಕಾರ್ಖಾನೆ ಹತ್ತಿರ ಹೋದಾಗ 4 ಜನ ವ್ಯಕ್ತಿಗಳು ಕತ್ತಲೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ನಿಂತಿದ್ದು , ಆಗ ಪಿ.ಎಸ.ಐ ರವರು ವಿಚಾರಸಬೇಕು ಅನ್ನುವದರಲ್ಲಿ ಓಡಿ ಹೋಗಲು ಪ್ರಯತ್ನಿಸಿದ್ದು ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ಸುತ್ತುವರೆದು ಹಿಡಿದುಕೊಂಡು ವಿಚಾರಿಸಿದಾಗ ಸಮರ್ಪಕವಾದ ಉತ್ತರ ಕೊಡದೇ ಇರುವದರಿಂದ ಠಾಣೆಗೆ ಕರೆತಂದು ಕೂಲಂಕೂಶವಾಗಿ ವಿಚಾರಿಸಿದಾಗ ದಿನಾಂಕ; 31-12-2010 ರಂದು ರಾತ್ರಿ ವೇಳೆಯಲ್ಲಿ ರೇಣುಕಾ ಸುಗರ ಲಿಮಿಟೆಡ್ ಸಕ್ಕರೆ ಕಾರ್ಖಾನೆಯಿಂದ 109 ಚೀಲಗಳನ್ನು ಹೊರೆಗೆ ತಂದು ಗೋದಾಮಿನಿಂದ ಸ್ವಲ್ಪ ದೂರದಲ್ಲಿ ಎರಡು ಜೀಪ ಮತ್ತು ಒಂದು ಗೂಡ್ಡ 407 ವಾಹನಗಳಲ್ಲಿ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ತಿಳಿಸಿದ್ದು , ಸದರಿಯವರು ಹೆಸರುಗಳು ಮಲ್ಲು ತಂದೆ ಸಿದ್ದಪ್ಪಾ ಜಮಾದಾರ ಸಾ|| ಶಿವಪೂರ , ವಿಜಯಕುಮಾರ ತಂದೆ ಸಿದ್ದನಗೌಡ ಪೊಲೀಸ್ ಪಾಟೀಲ್ , ಅಡಿವೆಪ್ಪಾ ತಂದೆ ಸಿದ್ದಪ್ಪಾ ಪೂಜಾರಿ ,ಶರಣು ತಂದೆ ಅಡಿವೆಪ್ಪಾ ನಾಡಿಕಾರ, ಮಾಳಪ್ಪಾ ತಂದೆ ಸಂಗಪ್ಪಾ ಜಗಲಗೊಂಡ, ಮಹಾಂತೇಶ ತಂದೆ ಶಿವಪ್ಪಾ ಪೂಜಾರಿ, ಕಾಂತಪ್ಪಾ ತಂದೆ ಶಿವಪ್ಪಾ ಜಗಲಗೊಂಡ , ಮಲ್ಲಪ್ಪಾ ತಂದೆ ಶರಣಗೌಡ ಪಾಟೀಲ್, ಬಸ್ಪಪಾ ತಂದೆ ಸಿದ್ದಪ್ಪಾ ಮೀನಗಾರ ಸಾ || ಎಲಲ್ರೂ ಹಾವಳಗಾ ಗ್ರಾಮದವರನ್ನು ದಸ್ತಗಿರಿ ಮಾಡಿ ಇವರಿಂದ ಮಾಲು ಹಾಗು ಕಳ್ಳತನಕ್ಕೆ ಉಪಯೋಗಿಸಿದ ಎರಡು ಜೀಪಗಳು ಮತ್ತು 407 ಗೂಡ್ಸ ವಾಹನ ವಶಪಡಿಸಿಕೊಳ್ಳಲಾಗಿದೆ ಸದರಿ ದಾಳಿಯು ಮಾನ್ಯ ಎಸ.ಪಿ ಸಾಹೇಬರು ಮತ್ತು ಅಪರ ಎಸಪಿ ಸಾಹೇಬರ ಮಾರ್ಗದರ್ಶನದ ಮೇರೆಗೆ ಡಿ.ಎಸ.ಪಿ ಆಳಂದ ರವರ ನೇತ್ರತ್ವದಲ್ಲಿ ಅಫಜಲಪೂರ ವೃತ್ತ ನಿರೀಕ್ಷಕರಾದ ಕೆ.ರಾಜೇಂದ್ರ ಮತ್ತು ಪಿ.ಎಸ.ಐ ಮಂಜುನಾಥ ಹಾಗು ಸಿಬ್ಬಂದಿಯವರಾದ ರಾಮಚಂದ್ರ ಹೆಚ.ಸಿ , ಮಾರುತಿ ಹೆಚ.ಸಿ, ಪಿಸಿ ನರಸರೆಡ್ಡಿ, ಅರವಿಂದ , ಶರಣು ಇವರೆಲ್ಲರಿಗೆ ಪತ್ತೆ ಕಾರ್ಯಕ್ಕೆ ಮಾನ್ಯ ಎಸ,ಪಿ ಸಾಹೇಬರು ಪ್ರಶಂಸಿರುತ್ತಾರೆ .

GULBARGA DISTRICT REPORTED CRIMES

ಯು. ಡಿ. ಅರ್. ಪ್ರಕರಣ :
ಬ್ರಹ್ಮಪೂರ ಠಾಣೆ
: ಶ್ರೀಮತಿ ಗೌರಮ್ಮ ಗಂಡ ಚಂದ್ರಕಾಂತ ಶೇಟಗಾರ ವಯ: 70 ವರ್ಷ ಸಾ: ಬೆಳಮಗಿ ರವರು ನನ್ನ ಮಗಳಾದ ಶ್ರೀದೇವಿ ಇವಳಿಗೆ 30 ವರ್ಷಗಳ ಹಿಂದೆ ಮಹಾಗಾಂವ ಗ್ರಾಮದ ಸಿದ್ದಲಿಂಗಪ್ಪ ವೀರಶೇಟ್ಟಿ ಇತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ,  ಸುಮಾರು ಎರಡುವರೆ ತಿಂಗಳ ಹಿಂದೆ ತನ್ನ ಮನೆಯಲ್ಲಿ ಬಿಸಿ ನೀರು ಮೈ ಮೇಲೆ ಬಿದ್ದು ಮಗಳಿಗೆ ಸುಟ್ಟಗಾಯಗಳಾಗಿದ್ದು ಉಪಚಾರ ಕುರಿತು ಗುಲಬರ್ಗಾ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಉಪಚಾರ ಕುರಿತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 2 ತಿಂಗಳ ಉಪಚಾರ ಮಾಡಿಸಿ ನಂತರ 8-9 ದಿವಸಗಳ ಹಿಂದೆ ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ ನನ್ನ ಮಗಳು ಶ್ರೀದೇವಿ ಇವಳು  ಉಪಚಾರ ಫಲಕಾರಿಯಾಗದೇ ದಿನಾಂಕ: 14/08/2011 ರಂದು ಸಾಯಂಕಾಲ ಆಸ್ಪತ್ರೆಯಲ್ಲಿ ಮೃತ್ತ ಪಟ್ಟಿರುತ್ತಾಳೆ ಮಗಳು ಮೃತಪಟ್ಟ ಬಗ್ಗೆ ಯಾರ ಮೇಲೆ ಸಂಶಯ ಇರುವದಿಲ್ಲಾ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಯು.ಡಿ.ಆರ್. ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ :
ಶ್ರೀ. ವಸಂತ ತಂದೆ ಗೌಡಪ್ಪ ಪೊಲೀಸ್ ಪಾಟೀಲ್ ಸಾ; ಕಿಣ್ಣಿ ಸಡಕ ಗ್ರಾಮ ತಾ;ಜಿ; ಗುಲಬರ್ಗಾ ರವರು ನಾನು ಮತ್ತು ನಮ್ಮ ಗ್ರಾಮದ ಗಿರಿರಾಜ ಗೊಬ್ಬೂರವಾಡಿ ಕೂಡಿಕೊಂಡು ಶ್ರಾವಣ ಮಾಸದ ಭಜನೆ ಕಾರ್ಯಕ್ರದಲ್ಲಿ ಪಾಲ್ಗೊಳ್ಳಲು ದಿನಾಂಕ: 14/08/2011 ರಂದು ರಾತ್ರಿ 8-30 ರ ಸುಮಾರಿಗೆ ನಮ್ಮೂರಿನಿಂದ ಹಳ್ಳಿಖೇಡ (ಕೆ) ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ನಮ್ಮ ಎದುರುಗಡೆಯಿಂದ ಕೆಎ-32 ಎಸ್– 8555 ಮೋಟರ್ ಸೈಕಲ್ ಸವಾರರು ತಮ್ಮ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಿಣ್ಣೀ ಸಡಕ ಗ್ರಾಮದ ಸೇತುವೆ ಹತ್ತಿರ ಮೋಟರ್ ಸೈಕಲ್ ನಿಯಂತ್ರಣ ಕಳೆದುಕೊಂಡು ರೋಡ ಗಾರ್ಡ ಕಂಬಕ್ಕೆ ಡಿಕ್ಕಿ ಹೊಡೆದಿರುತ್ತಾನೆ ಮೋಟಾರ ಸೈಕಲ್ ಸವಾರನನ್ನು ವಿಚಾರಿಸಲಾಗಿ ಮಹಾಂತೇಶ ತಂದೆ ಮಲ್ಲೇಶಪ್ಪ ಶಿರವಾಳ ಸಾ: ವಿಜಯನಗರ ಆಳಂದ ಕಾಲೂನಿ ಗುಲಬರ್ಗಾ ಅಂತಾ ತಿಳಿಸಿದ್ದು, ಆತನ ಹಿಂದುಗಡೆ ಕುಳಿತವನು ಪ್ರಶಾಂತ ತಂದೆ ಮಲ್ಲಿನಾಥ  ರೇವೂರ ಸಾ; ಆಳಂದ ಕಾಲೂನಿ ಗುಲಬರ್ಗಾ ಅಂತಾ ತಿಳಿಯಿತು. ಪ್ರಶಾಂತ ಇತನು ಭಾರಿ ಗಾಯಗಾಳಿರುವದರಿಂದ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಾವು 108 ಅಂಬುಲೇನ್ಸ್ ಗೆ ಫೋನ್ ಮಾಡಿ ಕರೆಯಿಸಿ ಗಾಯಾಳುವನ್ನು  ಮೋಟರ್ ಸೈಕಲ ಚಲಾಯಿಸುತ್ತಿದ್ದವನ ಸಂಗಡ  ಉಪಚಾರ ಕುರಿತು ಗುಲಬರ್ಗಾದ ಆಸ್ಪತ್ರೆಗೆ ಕೊಟ್ಟು ಕಳುಹಿಸಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಜೂಜಾಟ ಪ್ರಕರಣ:

ಸುಲೇಪೇಟ ಠಾಣೆ : ದಿನಾಂಕ 14-08-2011 ರಂದು ಮದ್ಯಾಹ್ನ ಶಿರೋಳ್ಳೀ ಗ್ರಾಮಕ್ಕೆ ಹೋದಾಗ ಗ್ರಾಮದ ದ್ವಾವ್ಯಮ್ಮಾ ಗುಡಿಯ ಕಟ್ಟಿಯ ಮೇಲೆ ಅಂದರ ಬಾಹರ ಇಸ್ಟೀಟ್ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ,ಸುಲೇಪೇಟ ರವರು ಮತ್ತು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷೇಮದಲ್ಲಿ ಹೋಗಿ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ ಶರಣಬಸಪ್ಪ ತಂದೆ ಬಸವರಾಜ ಪಸಾರ ಸಾ|| ಶಿರೋಳ್ಳಿ ಸಂಗಡ ಇನ್ನೂ 4 ಜನರು ಹಿಡಿದು ರೂ 2330/- ರೂಪಾಯಿ ಹಾಗೂ ಇಸ್ಟೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಶಹಾಬಾದ ನಗರ ಠಾಣೆ :
ಶ್ರೀ ಪರಮೇಶ್ವರ ಗಂಡ ಭೀಮರಾಯ ಭಂಕೂರ ಉ:ಡ್ರೇವರ ಸಾ:ಮುತ್ತಗಾ ತಾ:ಚಿತ್ತಾಪುರ ರವರು ನಾನು ದಿನಾಂಕ 13/08/11 ರಂದು ದೇವನ ತೆಗನೂರ ಹತ್ತಿರ ಟ್ರಾಕ್ಟರ ನಂ ಕೆ.ಎ. 32 ಟಿ.ಎ. 2941/42 ನೇದ್ದು ನಿಂತಿದ್ದು ಹಾಗು ನಮ್ಮೂರ ಸಂತೋಷಕುಮಾರ ತಂದೆ ಸಾಬಣ್ಣಾ ಕೂಡ ನಿಂತಿದ್ದನ್ನು. ಅಷ್ಟರಲ್ಲಿ ದೇವನ ತೆಗನೂರ ಗ್ರಾಮ ಕಡೆಯಿಂದ ಲಾರಿ ನಂ ಕೆ.ಎ. 32 ಎ 9014 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀ ವೇಗ ಮತ್ತು ನಿಷ್ಕಳಾಜಿತನದಿಂದ ನಡೆಯಿಸಿ ಕೊಂಡು ಬಂದು ರೋಡಿನ ಪಕ್ಕದಲ್ಲಿ ನಿಂತಿದ್ದ ಟ್ರಾಕ್ಟರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಸಂತೋಷಕುಮಾರ ಕೆಳಗೆ ಬಿದ್ದನು ಎಬ್ಬಿಸಿ ನೋಡಲು ಬಲಗೈಗೆ, ಬಲಗಾಲು ತೊಡೆಗೆ ಬಾರಿ ರಕ್ತಗಾಯವಾಗಿರುತ್ತದೆ ಲಾರಿ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧ್ಯ ಮಾರಾಟ:

ಶಹಾಬಾದ ನಗರ ಠಾಣೆ: ಶಹಾಬಾದ ನಗರದ ಹನುಮಾನ ನಗರ ತಾಂಡದ ರೇಲ್ವೆ ಕ್ವಾಟ್ರಸ ಹತ್ತಿರ ಮನೆ ಅನಧೀಕ್ರತವಾಗಿ ಲೈಸನ್ಸ ಇಲ್ಲದೆ ಕಲಬೆರಕೆ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂದಿಯವರು ಹೋಗಿ ನೋಡಲಾಗಿ ಒಬ್ಬ ಮನುಷ್ಯ 12 ಲೀಟರದಷ್ಟು ಕಲಬೆರಕೆ ಸರಾಯಿ ಅ.ಕಿ.250/- ರೂ ಜಪ್ತಿ ಪಡಿಸಿಕೊಂಡಿದ್ದು ಸರಾಯಿ ಮಾರುತ್ತಿರುವವನು ಓಡಿ ಹೋಗಿರುತ್ತಾನೆ ಸರಾಯಿ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಜಾಗ್ರತೆ ಕ್ರಮ :

ಬ್ರಹ್ಮಪೂರ ಠಾಣೆ : ದಿನಾಂಕ: 14/08/11 ರಂದು ಸಾಯಂಕಾಲ ನಾನು ಮತ್ತು ರಾಜು ಸಿ.ಪಿ.ಸಿ ರವರು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ಹೋದಾಗ ಕಾಮತ ಹೊಟೇಲ ಎದರುಗಡೆ ರಾತ್ರಿ ಅಲ್ಲಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವರನ್ನು ವಿಚಾರಿಸಲು ಅಲ್ತಾಪ ತಂದೆ ಅಬ್ದುಲ್ ಗಪೂರ ಸಾ|| ಬ್ಯಾಂಕ್ ಕಾ ಲೋನಿ ಗಂಜ ಏರಿಯಾ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಟ್ಟಿರುವದಿಲ್ಲ ಇವರನ್ನು ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಢಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 August 2011

GULBARGA DIST REPORTED CRIMES

ಕಳ್ಳತನ ಪ್ರಕರಣ:

ಮಾದನ ಹಿಪ್ಪರಗಾ ಠಾಣೆ : ಶ್ರೀ ಶರಣಪ್ಪ ತಂದೆ ಸೈಬಣ್ಣ ಅಷ್ಟಗಿ ವಯಾ;50 ವರ್ಷ ಸಾ: ಸರಸಂಬಾ ರವರು ನಾನು ದಿನಾಂಕ:11/08/2011 ರಂದು ನಮ್ಮ  ಹೊಲದಲ್ಲಿನ  ಎರಟೇಲ್ ಟವರ್  ಕಾಯಲು ನನ್ನ  ಮಗ ಹೊಗಿದ್ದನು ರಾತ್ರಿ ನನ್ನ ಮಗ ರವಿಕುಮಾರನಿಗೆ ಮನೆಗೆ ಕಳಿಸಿ ಟವರ್ ಕಾಯುತ್ತಿದ್ದೆನು. ನನಗೆ ಆರಾಮ ಇಲ್ಲದ ಕಾರಣ ನಿದ್ದೆ ಹತ್ತಿ ಮಲಗಿಕೊಂಡಿದ್ದು ಬೆಳಿಗ್ಗೆ ಎದ್ದು ನೋಡಲಾಗಿ ಎರಟೆಲ್ ಟವರ್ ಕೇಬಲ್ ವೈರ್ ಅಂದಾಜು 300 ಮೀಟರ ಅ:ಕಿ: 24000 ರೂಪಾಯಿಗಳದ್ದು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೇಗವಾಗಿ ವಾಹನ ಚಲಾಯಿದಕ್ಕೆ ಗುನ್ನೆ ದಾಖಲು :

ದೇವಲ ಗಾಣಗಾಪೂರ  ಠಾಣೆ: ದಿನಾಂಕ: 14-08-2011 ರಂದು ಬೆಳಿಗ್ಗೆ ಲಕ್ಷ್ಮಣ ತಂದೆ ಕಲ್ಲಪ್ಪಾ ಸಾ|| ಕಲ್ಲಹಳ್ಲೀ ರವರು ದೇವಲ ಗಾಣಗಾಪುರ ಗ್ರಾಮದಲ್ಲಿ ಶ್ರೀ ಸಾಯಿ ದತ್ತಲಾಡ್ಜ ಹತ್ತಿರ ಎದುರು ರೊಡಿನ ಮೇಲೆ  ಮ್ಯಾಕ್ಸಿ ಕ್ಯಾಬ ನಂ.ಕೆ.ಎ.28.ಎ.5476  ನೇದ್ದು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿದ್ದರಿಂದ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

GULBARGA DIST REPORTED CRIMES

ಕಳ್ಳತನ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ಶ್ರೀ ಗುಂಡೇರಾವ ತಂದೆ ನರಹರರಾವ ಕುಲಕರ್ಣಿ ಉ|| ಎಸ್.ಡಿ.ಇ ಬಿ.ಎಸ್.ಎನ.ಎಲ, ಸಾ|| ಕರುಣೇಶ್ವರ ನಗರ ಗುಲಬರ್ಗಾ  ರವರು  ಭೂಸನೂರ ಗ್ರಾಮದ ಬಿ.ಎಸ್.ಎನ.ಎಲ ಎಕ್ಜೆಂಚೆಂಜ್ ಪಕ್ಕದಲ್ಲಿ ಕೂಡಿಸಿರುವ ಬಿ.ಎಸ್.ಎನ.ಎಲ ಮೋಬೈಲ ಟಾವರಿಗೆ ಬಿ.ಟಿ.ಎಸ್. ಕೊಣೆಯಿಂದ ಟಾವರ ಎಂಟಿನಾಕ್ಕೆ ಜೋಡಿಸಿರುವ 20 ಮೀಟರಿನ 6 ಆರ.ಎಫ ಕೇಬಲ ತುಂಡು ಒಟ್ಟು 120 ಮೀಟರ ಉದ್ದದ ಕೇಬಲ ಯಾರೋ ಕಳ್ಳರು ದಿನಾಂಕ 10-08-2011 ರಂದು 08.00 ಪಿ.ಎಮ ದಿಂದ ದಿನಾಂಕ 11-08-2011 ರ 05.00 ಎ.ಎಮದ ಮಧ್ಯದ ಅವಧಿಯಲ್ಲಿ ಕತ್ತರಿಸಿಕೊಂಡು ಮತ್ತು ಜನರೇಟರನಲ್ಲಿದ್ದ 20 ಲೀಟರ ಡಿಜಲ ಅ.ಕಿ 920=00 ನೇದ್ದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ ಪ್ರಕರಣ :
ಶಹಾಬಾದ ನಗರ ಠಾಣೆ
: ದಿನಾಂಕ:13/08/2011 ರಂದು ಮಧ್ಯಾಹ್ನ ಚಕ್ಕಿ ವಡ್ಡರ ಗಲ್ಲಿಯ ವಿಜಯಕುಮಾರ ತಂದೆ ನಾಗಪ್ಪ ರವರ ಮನೆಯ ಎದರುಗಡೆ ಕಟ್ಟೆಯ ಮೇಲೆ ಖುಲ್ಲಾ ಜಾಗದಲ್ಲಿ ಅಂದರ ಬಾಹರ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಪ್ರಕಾಶ ತಂದೆ ಬಾಬಣ್ಣಾ ಮಾನೆ ಸಂಗಡ 2 ಜನರು ಸಾ: ಎಲ್ಲರೂ ಭಂಕಟಚಾಲ ಶಹಾಬಾದ ಇವರಿಂದ ನಗದು ಹಣ 3200/- ರೂ ಮತ್ತು ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ :
ಜಗದೀಶ್ ತಂದೆ ಕಾಶಿನಾಥ ಮುಕ್ಕೆ ಉ: ಟಂ.ಟಂ. ಚಾಲಕ  ಸಾ; ಡೊಂಗರಗಾಂವ  ತಾ: ಗುಲಬರ್ಗಾ ರವರು ಬೆಳೆಗ್ಗೆ ನಾಣು ಮತ್ತು ನನ್ನ ತಂದೆ ಕಾಶಿನಾಥ ಮುಕ್ಕೆ ಕೂಡಿಕೊಂಡು ಮರಗುತ್ತಿ ಕ್ರಾಸ ಹತ್ತಿರ ಹೊಲದಲ್ಲಿ ಕೆಲಸ ಮಾಡಿ ಸೈಕಲ್ ಮೇಲೆ ಮನೆಗೆ ಬರುತ್ತಿರುವಾಗ ಎದುರುಗಡೆಯಿಂದ ಲಾರಿ ನಂ: ಕೆಎ-32-ಎ-2017 ನೇದ್ದರ ಚಾಲಕ ಸಂಗಪ್ಪ ಸಾ; ವಾಡಿ ತಾ; ಚಿತ್ತಾಪೂರ ಈತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಸೈಕಲಕ್ಕೆ ಡಿಕ್ಕಿ ಪಡಿಸಿರುತ್ತಾನೆ ನನ್ನ ತಂದೆಯವರಾದ ಕಾಶಿನಾಥ ಇವರಿಗೆ ಹಣೆಗೆ ರಕ್ತಗಾಯವಾಗಿದ್ದು ಎದೆಗೆ ಮತ್ತು ಎಡ ಪಕ್ಕೆಗೆ ಗುಪ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:
ರೋಜಾ ಪೊಲೀಸ್ ಠಾಣೆ :
ಸೈಯದ ಖುತಿಜಾ ಬೆಗಂ ಸಾ:ರಹಿಮತ ನಗರ ಕಾಲೋನಿ ಗುಲಬರ್ಗಾ ರವರು ನಾಣು ಮತ್ತು ನನ್ನ ಮಗಳಾದ ಸೀಮಾ ಕೂಡಿಕೊಂಡು ಕೆ.ಬಿ.ಎನ್ ದರ್ಗಾದಿಂದ ಬಜಾರಕ್ಕೆ ಹೋಗುತ್ತಿದ್ದಾಗ ಫರಾನಾ ಕಾಲೇಜ ಎದುರುಗಡೆ ಸೈಯ್ಯದ ಮೈನುದ್ದಿನ, ಆದೀಲ, ಮುನಾವರ ಹಾಗೂ ಸಲ್ಮಾ ಹೀಗೆ 4 ಜನರು ಕೂಡಿಕೊಂಡು ಬಂದು ಅವಾಚ್ಯವಾಗಿ ಬೈದು ಕೂದಲು ಹಿಡಿದು ಜೊಗ್ಗಿ ಅವಮಾನ ಮಾಡಿ ಕೈಯಿಂದ ಬೆನ್ನ ಮೇಲೆ ಮತ್ತು ಹೊಟ್ಟೆಯ ಮೇಲೆ ಹೊಡೆದಿದ್ದು ಮಗಳು ಬಿಡಿಸಲು ಬಂದರೆ ಅವಳಿಗೂ ಕೂಡಾ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

13 August 2011

GULBARGA DIST REPORTED CRIMES

ಹಲ್ಲೆ ಪ್ರಕರಣ :

ಚಿಂಚೋಳಿ ಪೊಲೀಸ ಠಾಣೆ: ಶ್ರೀ.ಶಿವಾನಂದ ತಂದೆ ಕಾಶಪ್ಪಾ ತಳವಾರ ಸಾಃ ಹರಿಜನವಾಡಾ ಚಿಂಚೋಳಿ ರವರು ನಾನು ಇಂದು ದಿನಾಂಕ: 13-08-2011 ರಂದು ಮಧ್ಯಾಹ್ನ 14.30 ಗಂಟೆಯ ಸುಮಾರಿಗೆ ನಾನು ಕೆಲಸ ಮಾಡುತ್ತಿರುವ ಸನಾ ಹೋಟಲ್ ಕ್ಕೆ ಲಕ್ಷ್ಮಿಕಾಂತ ತಂದೆ ಮಾಣಿಕ ತಳವಾರ ಸಾಃ ಅಣವಾರ   ಎಂಬುವವನು ಬಂದು ಊಟ ಮಾಡಿಕೊಂಡು ಬಿಲ್ಲು ಕೊಡದೇ ಹೋಗುತ್ತಿದ್ದು, ಮಾಲಿಕ ಹೇಳಿದಂತೆ ಬಿಲ್ಲ ಕೊಡದೇ ಹಾಗೆಯೇ ಹೋಗುತ್ತಿದ್ದವನಿಗೆ ಊಟದ ಬಿಲ್ಲ ಕೇಳಲು ನಿನ್ನ ಮಾಲಿಕನೇ ನನಗೆ ಊಟ ಮಾಡಿದ ಬಿಲ್ಲು ಕೇಳಿಲ್ಲಾ , ನೀನು ನನಗೆ ಬಿಲ್ಲು ಕೇಳುತ್ತಿಯಾ ಅಂತಾ ಅವಾಚ್ಯವಾಗಿ ಬೈದು ಕಾಲಿನಿಂದ ಒದ್ದು, ಕೈಯಿಂದ ಬೆನ್ನಿಗೆ ಎದೆಗೆ ರೆಟ್ಟೆಗೆ ಹೊಡೆದು ಕಲ್ಲಿನಿಂದ ಬಲ ಕಿವಿಗೆ ಹೊಡೆದು ಎಡಭಾಗದ ಮೆಲಕಿಗೆ ಕಚ್ಚಿ ಭಾರಿ ರಕ್ತಗಾಯ ಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ಮಟಕಾ ಪ್ರಕರಣ :

ದೇವಲ ಗಾಣಗಾಪೂರ ಠಾಣೆ : ದಿನಾಂಕ; 12-08-2011 ರಂದು ಬಂದರವಾಡ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ನಾಗರಾಜ ತಂದೆ ನಿಂಗಪ್ಪ ಕೋಲ್ಕರ್ ರವರನ್ನು ವಶಕ್ಕೆ ತೆಗೆದುಕೊಂಡು ಆತನಿಂದ ನಗದು ಹಣ 310 ರೂ ಮತ್ತು ಇನ್ನಿತವುಗಳನ್ನು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟಕಾ ಪ್ರಕರಣ :

ಆಳಂದ ಪೊಲೀಸ ಠಾಣೆ: 11/08/2011 ರಂದು ಸಾಯಂಕಾಲ ಆಳಂದ ಪಟ್ಟಣದ ಬಸ್ಸ ನಿಲ್ದಾಣದ ಎದುರುಗಡೆ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಮೇರೆಗೆ ಪಿ.ಎಸ.ಐ ರವರು ಸಿಬ್ಬಂದಿಯವರು ದಾಳಿ ಮಾಡಿ ಮಲ್ಲಿನಾಥ ತಂದೆ ಲೋಕಪ್ಪ ಸಾ|| ಸರಸಂಬಾ ಇತನನ್ನು ವಶಕ್ಕೆ ತೆಗೆದುಕೊಂಡು ನಗದು ಹಣ 520-00 ರೂ ಮತ್ತು ಇನ್ನಿತವುಗಳನ್ನು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೊಂಬಿ ಮತ್ತು ಹಲ್ಲೆ ಪ್ರಕರಣ

ಬ್ರಹ್ಮಪೂರ ಪೊಲೀಸ್ ಠಾಣೆ : ಶ್ರೀ.ಗುರುಲಿಂಗ ತಂದೆ ದಿ:ಮಲ್ಲೇಶಪ್ಪ ಗೋಡಿ, ಸಾ|| ಬಸವನ ಗುಡಿಯ ಹತ್ತಿರ ಜಗತ ಗುಲಬರ್ಗಾ ರವರು ನಾನು ಹಾಗೂ ನನ್ನ ಗೆಳೆಯ ಶಿವಕುಮಾರ ಇಬ್ಬರೂ ಕೂಡಿ ಜಗತ ಸರ್ಕಲ ಹತ್ತಿರದ ರಾಜು ಪಾನಶಾಪ ಇವರ ಅಂಗಡಿಯ ಮುಂದೆ ಕುಳಿತ್ತಿರುವಾಗ ಅರುಣಕುಮಾರ ಖಾನಾಪೂರ ಇವರು ನನಗೆ ಫೋನ್ ಮಾಡಿ ಕಲ್ಕತ್ತಾ ಡ್ರೇಸೆಸ ಹತ್ತಿರ ಬರಲು ತಿಳಿಸಿದಾಗ ನಾನು ನನ್ನ ಗೆಳೆಯ ಶಿವಕುಮಾರನೊಂದಿಗೆ ಸುಪರ ಮಾರ್ಕೆಟ ಕಲ್ಕತ್ತಾ ಡ್ರೆಸೆಸ ಹತ್ತಿರ ಸಾಯಂಕಾಲ ಹೋಗಿದ್ದು ಅರುಣ ಕುಮಾರ ಖಾನಾಪೂರ ಈತನು ಇತರೆ 8 ಜನರೊಂದಿಗೆ ನನ್ನೊಂದಿಗೆ ಜಗಳಕ್ಕೆ ಬಿದ್ದು, ಅವಾಚ್ಯ ಶಬ್ದಗಳಿಂದ ಬೈಯುತ್ತಾ ಕುಡಿಯಲು ಹಣ ಕೇಳಿದಕ್ಕೆ ನೀನು ಇಲ್ಲ ಅಂತಾ ಹೇಳುತ್ತಿಯಾ ಅಂತಾ ಕೈಯಿಂದ ಮುಖದ ಮೇಲೆ ಮತ್ತು ಹೊಟ್ಟೆಯ ಮೇಲೆ ಹೊಡೆದಿದ್ದು, ಹಾಗು ಬಿದ್ದಿದ್ದ ಒಡೆದ ಬಾಟಲಿ ತೆಗೆದುಕೊಂಡು ನನ್ನ ಎಡಗಡೆ ಎದೆಗೆ, ಹಾಗೂ ಎಡಗೈ ಮುಂಗೈ ಕೆಳಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಹಾಗು ಅವನೊಂದಿಗೆ ಇದ್ದ ಇತರೆ 8 ಜನರು ಸಹ ಈ ಬೋಸಡಿ ಮಗನದು ಬಹಳ ಆಗಿದೆ ಇವನಿಗೆ ಹೊಡೆದು ಖಲಾಸ ಮಾಡು ಅಂತಾ ಪ್ರಚೋದನೆ ಮಾಡುತ್ತಿದ್ದರು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಚಾಂದಪಾಶಾ ತಂದೆ ಕಾಶೀಮಸಾಬ ಸಾ: ಕ್ರಷ್ಣಾ ಕಾಲನಿ ಗುಲಬರ್ಗಾ ರವರು ನಾನು ಮನೆಯಲ್ಲಿ ಮಲಗಿಕೊಂಡಾಗ ದಿನಾಂಕ: 12-08-2011 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ರಾಜು ನಾಟೀಕರ ಸಾ: ಕೃಷ್ಣಾ ನಗರ ಗುಲಬರ್ಗಾ ಮತ್ತು ಕಾಂತ್ಯಾ ಸಾ: ಶಹಾಬಜಾರ ಗುಲಬರ್ಗಾ ರವರು ನಾನು ನಿನಗೆ ಕೊಡಬೇಕಾದ 5000/-ರೂ. ಹಣ ನಮ್ಮ ತಾಯಿಗೆ ಮನೆತನಕ ಹೋಗಿ ಕೇಳುತ್ತೀ ಎಂದು ಬೈಯ್ಯುತ್ತಾ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಎಡಗಾಲ ಮೊಳಕಾಲ ಮೇಲೆ ಮತ್ತು ಎರಡು ಕೈಗಳ ಭುಜದ ಮೇಲೆ ಹಾಗೂ ಬಲ ಟೊಂಕದ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .

12 August 2011

GULBARGA DISTRICT REPORTED CRIMES


ಕೊಲೆ ಮಾಡಿದ 12 ಗಂಟೆಗಳಲ್ಲಿ ಕೊಲೆ ಗಡುಕರ ಬಂಧನ :

ಶ್ರೀಮತಿ ಸಂಗೀತಾ ಗಂಡ ಮಾಹಾಂತೇಶ ಪೂಜಾರಿ ಸಾ;ದುಬೈ ಕಾಲೂನಿ ಗುಲಬರ್ಗಾ ರವರು ನನ್ನ ಗಂಡ ಮಹಾಂತೇಶ ಇತನನ್ನು ದಿನಾಂಕ: 10-08-2011 ರಂದು 10-00 ಪಿ.ಎಂ.ದಿಂದ ದಿನಾಂಕ.11-08-2011 11-00 ಎ.ಎಂ. ಮದ್ಯದ ಅವಧಿಯಲ್ಲಿ ಉಪಳಾಂವ ಸೀಮೆಯ ವನ್ಯಧಾಮ (ಫಾರೆಸ್ಟ) ಪಕ್ಕದ ಪಟೇಲ ಇವರ ಹೊಲದಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕೆ ನನ್ನ ಗಂಡ ಮಾಹಾಂತೇಶ ಪೂಜಾರಿ ಸಾ;ಶಹಾಬಜಾರ ಗುಲಬರ್ಗಾ ಇತನಿಗೆ ಕಲ್ಲುಗಳಿಂದ ತಲೆಗೆ ಮುಖಕ್ಕೆ ಹೊಡೆದು ಭಾರಿ ಗಾಯಗೊಳಿಸಿ ಮುಖ ವಿರೂಪಗೊಳಿಸಿ ಕೃತ್ಯವನ್ನು ಮುಚ್ಚಿಹಾಕುವ ಉದ್ದೇಶದಿಂದ ಮುಖದ ಮೇಲೆ ಯಾಸೀಡ್ ಹಾಕಿ ಸಾಕ್ಷಿ ನಾಶ ಪಡಿಸಿರುತ್ತಾರೆ ಅಂತಾ ದೂರು ನೀಡಿದ್ದರ ಮೇರೆಗೆ ಕೊಲೆ ಮಾಡಿದ ಆರೋಪಿತರ ಪತ್ತೆ ಕುರಿತು ಮಾನ್ಯ ಶ್ರೀ ಪವಾರ ಪ್ರವೀಣ ಮಧುಕರ ಐಪಿಎಸ್. ಎಸ್.ಪಿ. ಗುಲಬರ್ಗಾ ಮತ್ತು ಶ್ರೀ ಕಾಶೀನಾಥ ತಳಕೇರಿ ಅಪರ ಎಸ್.ಪಿ. ಗುಲಬರ್ಗಾ ಇವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ.ಎ.ಡಿ ಬಸವಣ್ಣನವರ ಡಿ.ಎಸ್.ಪಿ.(ಬಿ) ಉಪ ವಿಭಾಗ ಪ್ರಭಾರಿ ಗ್ರಾಮೀಣ ಉಪ - ವಿಭಾಗ ಗುಲಬರ್ಗಾ ರವರ ಸಲಹೆ ಮೇರೆಗೆ ವಿಜಯಲಕ್ಷ್ಮೀ ಸಿ.ಪಿ.ಐ ಗ್ರಾಮೀಣ ವೃತ್ತ ಗುಲಬರ್ಗಾ, ಮತ್ತು ಆನಂದರಾವ ಪಿ.ಎಸ್.ಐ. (ಕಾ&ಸೂ) ಗ್ರಾಮೀಣ ಠಾಣೆ ಹಾಗೂ ಸಿಬ್ಬಂದಿಯವರಾದ ಸೂರ್ಯಕಾಂತ , ಪ್ರಭುಲಿಂಗ ,ಲಕ್ಕಪ್ಪಾ, ಪೇದೆಗಳಾದ ಕುಪೇಂದ್ರ , ಆನಂದ, ಮೋಯಿಜ ಹಾಗೂ ಶರಣು ,ಜೀಪ ಚಾಲಕರಾದ ಬಂಡಪ್ಪಾ ,ಮಲ್ಲಿಕಾರ್ಜುನ ಗ್ರಾಮೀಣ ಠಾಣೆ ಇವರುಗಳು ತಂಡಗಳನ್ನು ರಚಿಸಿಕೊಂಡು ಆರೋಪಿತರ ಪತ್ತೆಗಾಗಿ ಜಾಲ್ ಬೀಸಿ ಆಳಂದ ರೋಡಿನ ವಿಶ್ವರಾಧ್ಯ ಗುಡಿಯ ಹತ್ತಿರ ಇರುವಿಕೆಯ ಬಗ್ಗೆ ಖಚಿತ ಬಾತ್ಮಿಯನ್ನು ಪಡೆದುಕೊಂಡು ಕೋಲೆ ಮಾಡಿದ ಕೃಷ್ಣಕಾಂತ @ ಕೃಷ್ಣ,@ ಕಿಟ್ಯಾ ತಂದೆ ಲಕ್ಷ್ಮಣರಾವ ಅವಧೂತ, ಲಕ್ಷ್ಮೀಪುತ್ರ @ ಪುತ್ರು ತಂದೆ ಸುಭಾಷ ಗಣೆರ ಸಾ;ಇಬ್ಬರು ಶಹಾಬಜಾರ ಗುಲಬರ್ಗಾ ರವರನ್ನು ದಸ್ತಗಿರ ಮಾಡಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತಾರೆ. ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ, ಪಿಎಸ್.ಐ. (ಕಾ&ಸೂ) ಗ್ರಾಮೀಣ ಠಾಣೆ ಗುಲಬರ್ಗಾ ಹಾಗೂ ಸಿಬ್ಬಂದಿಯವರ ಪತ್ತೆ ಕಾರ್ಯಕ್ಕೆ ಪ್ರಶಂಸನೆ ಮಾಡಲಾಗಿದೆ.

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಠಾಣೆ
:ಶ್ರೀ ವಿಶ್ವನಾಥ ತಂದೆ ಶಿವಶರಣಪ್ಪ ಬೆಣ್ಣೂರ ಗೊದುತಾಯಿ ನಗರ ಜೇವರ್ಗಿರೋಡ ಗುಲಬರ್ಗಾ ರವರು ನಾನು ನನ್ನ ಎಕ್ಟೀವ ಹೊಂಡಾ ನಂ: ಕೆಎ 32 ಯು7659 ನೇದ್ದನ್ನು ಬಲಗಡೆ ಇಂಡಿಕೇಟರ ಹಾಕಿ ನಿಧಾನವಾಗಿ ಗೋದುತಾಯಿ ಕಾಲೋನಿ ಕಡೆಗೆ ತಿರುಗಿಸಿಕೊಳ್ಳುತ್ತಿದ್ದಾಗ ಮೋಟಾರ ಸೈಕಲ್ ನಂ:ಕೆಎ 32 ಎಲ್ 9316 ನೇದ್ದನ್ನು ರಾಷ್ಟ್ರಪತಿ ಸರ್ಕಲ್ ಕಡೆಯಿಂದ ರಾಂಗ ಸೈಡಿನಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಗಾಯಗೊಳಿಸಿ ಮೋಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಠಾಣೆ :
ಶ್ರೀಮತಿ  ನಿಂಗಮ್ಮ ಗಂಡ ಶರನಪ್ಪ ಬಳಿಚಕ್ರ  ಸಾ: ಸಂಜೀವನಗರ ಗುಲಬರ್ಗ ರವರು    ನನ್ನ ಮಗನಾದ ಜೀವನ ಮತ್ತು ವಿನೋದ ಮತ್ತು ಇನ್ನೊಬ್ಬ ಹೊಂಡಾ ಆಕ್ಟೀವಾ ಮೊಟಾರ ಸೈಕಲ್ ನಂ:ಕೆಎ 01 ಇ.ಎಫ್.3237ನೇದ್ದರ ಮೇಲೆ ಎಸ್.ವಿ.ಪಿ. ಸರ್ಕಲ್  ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ವಿನೋದ ಇತನು ಒಮ್ಮೇಲೆ ಕಟ್ಟ ಹೊಡೆದಿದ್ದರಿಂದ ಮೋಟಾರ ಸೈಕಲ್ ಸಮೇತ ಎಲ್ಲರು ಕೆಳಗೆ ಬಿದ್ದು ಅವರಲ್ಲಿ ಜೀವನನಿಗೆ ಗಾಯಗೊಳಿಸಿ ತನ್ನ ಹೊಂಡಾ ಅಕ್ಟೀವ ಮೋಟಾರ ಸೈಕಲ ಸಮೇತ ಓಡಿ ಹೊಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.                                                

ಕೊಲೆ ಪ್ರಕರಣ:
ಗ್ರಾಮೀಣ ಠಾಣೆ
ಶ್ರೀಮತಿ ಸಂಗೀತಾ ಗಂಡ ಮಹಾಂತೇಶ ಪೂಜಾರಿ ಜ್ಯಾತಿ;ಕುರುಬರ ಸಾ; ಕೆರೆ ಹತ್ತಿರ ದುಬೈಕಾಲೂನಿ ಆಳಂದ ರೋಡ ಗುಲಬರ್ಗಾ ರವರು ನನ್ನ ಗಂಡ ಮಹಾಂತೇಶ ಇತನನ್ನು ದಿನಾಂಕ.10-08-2011 ರಂದು 10-00 ಪಿ.ಎಂ.ದಿಂದ ದಿನಾಂಕ. 11-08-2011 ರಂದು ಮುಂಜಾನೆ 11-00 ಗಂಟೆಯ ಅವಧಿಯ ಮದ್ಯದಲ್ಲಿ ಯಾರೋ ದುಷ್ಕರ್ಮಿಗಳು ಉಪಳಾಂವ ಏರಿಯಾದ ವನ್ಯಧಾಮದ ಪಕ್ಕದ ಹೊಲದಲ್ಲಿ ಹರಿತವಾದ ಆಯುಧದಿಂದ/ಭಾರವಾದ ವಸ್ತುವಿನಿಂದ ಹೊಡೆದು ಭಾರಿ ರಕ್ತಗೊಳಿಸಿ, ಮುಖ ಜಚ್ಚಿದಂತೆಯಾಗಿ ಮಾಡಿ ಮುಖ ಪೂರ್ತಿ ವಿರೂಪ ಮತ್ತು ರಕ್ತಮಯ ಮಾಡಿ ಕೊಲೆ ಮಾಡಿದ್ದು, ಸದರಿ ಕೊಲೆ ಮುಚ್ಚು ಹಾಕುವ ದುರುದ್ದೇಶದಿಂದ ಮುಖದ ಮೇಲೆ ಯಾಶಿಡ್ ಹಾಕಿ ಮುಖ ವಿರೂಪಗೊಳಿಸಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಸಂಚಾರಿ ಪೊಲೀಸ್ ಠಾಣೆ
: ಮಲ್ಲಿಕಾರ್ಜುನ ತಂದೆ ಬಸಪ್ಪ ಕೊಕಟನೂರ ಸಾಃ  ಜಿಡಿಎ ಕಛೇರಿ ಎಸ.ವಿ.ಪಟೇಲ ಗುಲಬರ್ಗಾ ರವರು ಲಾರಿ ನಂ  HR 55 / L 2473   ನೇದ್ದರ ಚಾಲಕ ಹಸನ ಸಾ|| ಸಾ: ಗುರಗಾಂವ ಹರಿಯಾಣಾ ರಾಜ್ಯ ಇತನು ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಾಲಯಿಸಿ ಎಸ.ವಿ ಪಟೇಲ ಬಡಾವಣೆಯ ಸ್ವಾಗತ ಕಮಾನಕ್ಕೆ ಡಿಕ್ಕಿ ಪಡಿಸಿ ಅಂದಾಜು 40000 /- ರೂ. ಹಾನಿ ಮಾಡಿ ವಾಹನ ಸ್ಥಳದಲ್ಲಿಯೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.            

ಮೋಸ ವಂಚನೆ ಪ್ರಕರಣ :
ಅಫಜಲಪೂರ ಪೊಲೀಸ್ ಠಾಣೆ:
ಬಸವರಾಜ ತಂದೆ ನಾಮದೇವ ಸಿಂಗೆ ಸಾ|| ಬಳೂರಗಿ ತಾ|| ಅಫಜಲಪೂರ  ರವರು ನಮ್ಮ ಸಂಬಂದಿಕಳಾದ ದುಂಡವ್ವ ಇವಳನ್ನು ದಿನಾಂಕ 15/7/1988 ರಂದು ಸಂತಪ್ಪ ತಂದೆ ಮರೆಪ್ಪ ದಿಮ್ಮೆ ಮತ್ತು ಸಂಗಡ 4 ಜನರು ಸಾ|| ಎಲ್ಲರೂ ಬಳೂರಗಿ ರವರು ದುಂಡವ್ವ ಇವಳನ್ನು ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿ ಅವಳ ಹೆಸರಿನಲ್ಲಿದ್ದ ಜಮೀನು ದುಂಡವ್ವಳ ಸಹಿ ಮಾಡಿದಂತೆ ಕಾಗದ ಪತ್ರಗಳನ್ನು ಸೃಷ್ಟಿಸಿ ಸವೆð ನಂ.58,315 ತಮ್ಮ ಹೆಸರಿನಿಂದ ಮಾಡಿಕೊಂಡಿರುತ್ತಾರೆ ಅಂತಾ ಮಾನ್ಯ ಜೆ ಎಂ ಎಫ್ ಸಿ ಕೋರ್ಟ ಅಫಜಲಪೂರದಲ್ಲಿ ಅರ್ಜಿ ಸಲ್ಲಿಸಿದ್ದು ಮಾನ್ಯರ ಪತ್ರದ ಆಧೇಶದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ಆಳಂದ ಪೊಲೀಸ ಠಾಣೆ:
ಶಿವಾನಂದ ತಂದೆ ಫಕೀರಪ್ಪ ಭಕರೆ ಸಾ|| ರೇವಣಸಿದ್ದೇಶ್ವರ ಕಾಲೋನಿ ಆಳಂದ ರವರು ನನ್ನ ಟವರ ಪಕ್ಕದಲ್ಲಿರುವ ಇರುವ ಗಾರ್ಡ ರೂಮನಲ್ಲಿ  ಇದ್ದ 40 ಮೀಟರ ಆರ.ಎಫ್. ಕೇಬಲ ವಾಯರ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಕಮಲಾಪೂರ ಪೊಲೀಸ ಠಾಣೆ : ನಾಗಪ್ಪಾ ತಂದೆ ಏಗಪ್ಪಾ ಜಮಾದಾರ ಸಾ: ಚೆಂಗಟಾ ತಾ:ಚಿಂಚೋಳಿ ಜಿ :ಗುಲಬರ್ಗಾರವರು ನಾನು ದಿನಾಂಕ:11-08-2011 ರಂದು ಬೆಳಿಗ್ಗೆ ಕಮಲಾಪೂರದಲ್ಲಿ ಕೆಲಸವಿದ್ದ ಪ್ರಯುಕ್ತ ಕಮಲಾಪುರಕ್ಕೆ ಬಂದು ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಹೋಗಲು, ಬುಲೇರೋ ಪಿಕಪ್ ಗೂಡ್ಸ ವಾಹನ ನಂ: ಕೆಎ:32 ಬಿ:3037 ನೇದ್ದರಲ್ಲಿ ನಾನು, ನಮ್ಮ ಸಂಬಂಧಿಕರಾದ ಲಕ್ಷ್ಮಣ ಬಿಟನೂರ, ಮತ್ತು ನಮ್ಮೂರಿನವರಾದ ಸಿದ್ದಪ್ಪಾ ಖೇರ್ಜಿ, ಶರಣಪ್ಪಾ ದೇಸಾಯಿ ಹಾಗು ಅಂಬಣ್ಣಾ ತಂದೆ ಕಾಂಬಳೆ ಎಲ್ಲರೂ ಕುಳಿತುಕೊಂಡು ಚೆಂಗಟಾ ಗ್ರಾಮಕ್ಕೆ ಹೋಗುತ್ತಿರುವಾಗ ಕಮಲಾಪೂರ ಚೆಂಗಟಾ ರೋಡಿನ ವಡಗೇರಾ ಗ್ರಾಮದ ಸಮೀಪ ಚಾಲಕ ಸಂಜಿವಕುಮಾರ ಇತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ರೊಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿ ಪಲ್ಟಿ ಮಾಡಿದ್ದರಿಂದ ಒಳಗೆ ಕುಳಿತ ನಮ್ಮೆಲರಿಗೆ ರಕ್ತಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 August 2011

GULBARGA DIST REPORTED CRIMES

ಅಪಘಾತ ಪ್ರಕರಣ ಒಂದು ಸಾವು :
ಶಹಾಬಾದ ನಗರ ಠಾಣೆ:
ಶ್ರೀ ವಿಜಯಕುಮಾರ ತಂದೆ ಪಾಂಡು ರಾಠೋಡ ಉ: ಡ್ರೈವರ ಕೆಲಸ ಸಾ: ಕಾಳನೂರ ರವರು ನಾನು ನಿನ್ನೆ ದಿನಾಂಕ 10/08/2011 ರಂದು ಸಾಯಕಾಂಲ ಸುಮಾರಿಗೆ ನನ್ನ ಲಾರಿ ನಂ: ಸಿಜಿ/12 , ಜೆಡಸಿ 2026 ನೇದ್ದನ್ನು ವಾಡಿಯಿಂದ ಕಾಳನೂರಕ್ಕೆ ಚಲಾಯಿಸಿಕೊಂಡು ಬರುತ್ತಿರುವಾಗ ನನ್ನ ಮುಂದೆ ಟೀಪರ್ ನಂ: ಕೆ.ಎ-32/3125 ನೇದ್ದರ ಚಾಲಕ ಕೀಶನ ತಂದೆ ಗಂಗು ರಾಠೋಡ ಸಾ: ಕಾಳನೂರ ಇತನು ತನ್ನ ಟಿಪ್ಪರನ್ನು ಅತೀವೇಗ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೇಲೆ ಎಡಗಡೆ ಕಟ್ ಮಾಡಿದ್ದರಿಂದ ಟಿಪರ ಎಡಗಡೆ ಪಲ್ಟಿಯಾಗಿ ಬಿದ್ದು ಅದರಲ್ಲಿ ಕುಳಿತ ಗುಂಡುರಾವ ತಂದೆ ಬಸವಣಪ್ಪಾ ಮತ್ತು ಗೀರಿಧರ ತಂದೆ ಬಸವರಾಜ ಸಾ|| ನಂದೂರ ರವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಾಲಕ ಕೀಶನ ಗೆ ಮುಖಕ್ಕೆ ಭಾರಿ ರಕ್ತಗಾಯವಾಗಿದ್ದು ಮತ್ತು ಎದೆಗೆ ಭಾರಿ ಒಳಪೆಟ್ಟಾಗಿ ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕೀಶನ ಇತನು ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ಕಿರುಕುಳ ಪ್ರಕರಣ :

ರೇವೂರ ಠಾಣೆ: ಶಾರದಾಬಾಯಿ ಗಂಡ ಭೀಮು ರಾಠೋಡ ಸಾ:ನಿಲೂರ ತಾಂಡಾ ತಾ:ಅಫಜಲಪೂರ ರವರು ನಾನು ಅಂಗನವಾಡಿ ಶಾಲೆಗೆ ಹೋಗುತ್ತೇನೆ ಅಂತ ಹೇಳಿದಾಗ ಗಂಡನಾದ ಭೀಮು ಇತನು ನೀನು ಅಂಗನವಾಡಿ ಶಾಲೆಗೆ ಹೊಗಬೇಡಾ ನನ್ನ ಜೋತೆ ಮುಂಬೈಗೆ ಬಾ ನೀನು ಅಂಗನವಾಡಿ ಕೆಲಸಕ್ಕೆ ಹೋದರೆ ನಿನಗೆ ಸುಮ್ಮನೆ ಬಿಡುವದಿಲ್ಲ ಅಂತಾ ಬೇದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮಟಕಾ ಪ್ರಕರಣ :
ಬ್ರಹ್ಮಪೂರ ಠಾಣೆ
:  ದಿನಾಂಕ: 11/08/2011 ರಂದು ಮದ್ಯಾಹ್ನ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೆನೆಂದರೆ ಜಗತ ಸರ್ಕಲ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಮೋಸ ಮಾಡಿ ಅವರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೆರೆಗೆ ಪಂಚರ ಸಮಕ್ಷಮ ಪಿ.ಎಸ.ಐ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹೆಸರು ವಿಳಾಸ ವಿಚಾರಿಸಲು ತಿಮ್ಮಯ್ಯ ತಂದೆ ಶಿವಪ್ಪ ಮೇಠಿ, ಸಾ|| ನಾಗನಟಗಿ ತಾ|| ಶಹಾಪೂರ, ಹಾ||ವ|| ಜೇವರ್ಗಿ ಕಾಲೋನಿ ಗುಲಬರ್ಗಾ ಅಂತಾ ಹೇಳಿದ್ದು, ಅವನ ಹತ್ತಿರ ನಗದು ಹಣ 3000/-, ಮಟಕಾ ಚೀಟಿ, ಜಪ್ತಿ ಮಾಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

GULBARGA DIST REPORTED CRIMES

ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀಮತಿ  ಪದ್ಮಿನಿಬಾಯಿ ಗಂಡ ಬಾಬು ಸಕಾಡಾ   ಬಾಪು ನಗರ   ಗುಲಬರ್ಗಾ ರವರು ನಾನು ಎಸ್.ಟಿ.ಬಿ.ಟಿ.ಕ್ರಾಸ್ ಹತ್ತಿರ ಇರುವ ಗಚ್ಚಿನ ಮನೆ ಆಸ್ಪತ್ರೆಯ ರೋಡಿನ ಮೇಲೆ ನಡೆದುಕೊಂಡು ಹೊರಟಾಗ ಸೈಯದ ಅನಸ ಈತನು ತನ್ನ ಮೋಟಾರ ಸೈಕಲ್ ನಂ;ಕೆಎ 32 ವಾಯ 5720 ನೆದ್ದನ್ನು ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಕಾಣೆಯಾದ ಪ್ರಕರಣ :

ಶಹಾಬಾದ ನಗರ ಪೊಲೀಸ ಠಾಣೆ: ಮಹೇಬೂಬಮೀಯಾ @ ಮುನ್ನಾಮೀಯಾ ತಂದೆ ಅಬ್ದುಲನಬಿಸಾಬ ಸಾ:ಇಂದಿರಾ ನಗರ ನಂ.2 ಶಹಾಬಾದ ರವರು ಇಂದು ನನ್ನ ಮಗಳಾದ ಸಲ್ಮಾಸುಲ್ತಾನ ವ:22 ವರ್ಷ ಸಾ: ಇಂದಿರಾ ನಗರ ನಂ:2 ಶಹಾಬಾದ ಇವಳಿಗೆ ಶಹಾಬಾದದ ಮೊಹ್ಮದ ಮೇರಾಜ ತಂದೆ ಸರದಾರ ಅಹ್ಮದ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಅದೆ. ಸದರಿ ನನ್ನ ಮಗಳು ತನ್ನ ಗಂಡನ ಮನೆಯಲ್ಲಿ ಚೆನ್ನಾಗಿದ್ದು ದಿನಾಂಕ:8/8/2011 ರಂದು ಸಾಯಂಕಾಲ್ ಸುಮಾರಿಗೆ ಮಗಳು ಯಾರಿಗೆ ಹೇಳದೇ ಕೇಳದೆ ಹೋಗಿರುತ್ತಾಳೆ. ನಾನು ಮತ್ತು ನನ್ನ ಅಳಿಯ ಎಲ್ಲರೂ ಕೂಡಿ ನಮ್ಮ ಸಂಬಂಧಿಕರ ಊರುಗಳಿಗೆ ಹೋಗಿ ವಿಚಾರಿಸಲು ಯಾವದೇ ಸುಳಿವು ಸಿಕ್ಕಿರುವದಿಲ್ಲ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಲ್ಮಾಸುಲ್ತಾನ ಇವಳು
ಕ್ರಿಮಕಲರ್ ಶೇಟ್ ಶಲವಾರ ಬಟ್ಟೆಗಳು ದರಿಸಿದ್ದು ಕೆಂಪು ಬಣ್ಣದು. 5 ಪೀಟು ಇರುತ್ತಾಳೆ. ತೆಳ್ಳನೇಯ ಮೈಕಟ್ಟು ಇರುತ್ತದೆ. ಹಾಗು ಸದ್ಯ ಇವಳು 7 ತಿಂಗಳ ಗರ್ಭಿಣಿ ಇರುತ್ತಾಳೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಪೊಲೀಸ :
ಉದ್ದವ ತಂದೆ ಸುಗ್ರೀವ್ ಜಂಗೇವಾಡ ವ:19 ವರ್ಷ ಜಾ:ಕೋಲಿ ಉ;ಲಾರಿ ನಂ:ಎಂ.ಹೆಚ್ :24- ಎಫ್.-9015 ನೇದ್ದರ ಕ್ಲೀನರ್ ಸಾ;ವಳಸಂಗಿ ತಾ; ಅಹೆಮದಪೂರ ಜಿ: ಲಾತೂರ ( ಮಹಾರಾಷ್ಟ್ರ) ರವರು ನಾನು ಕ್ಲೀನರ್ ಮತ್ತು ಭಾಲಾಝಿ ಲಾರಿ ಚಾಲಕ ಕೂಡಿಕೊಂಡು ಲಾರಿ ನಂ: ಎಂ.ಹೆಚ್.-24-ಎಫ್-9015 ನೇದ್ದರಲ್ಲಿ ಬೆಳಗಾಂವದಲ್ಲಿ ಫ್ಲಾವರ್ ಗೋಬಿ ಚೀಲಗಳನ್ನು ಲೋಡ ಮಾಡಿಕೊಂಡು ಮಹಾರಾಷ್ಟ್ರದ ಚಂದ್ರಾಪೂರಕ್ಕೆ ತೆಗೆದುಕೊಂಡು ಹೋಗಲು ಗುಲಬರ್ಗಾ- ಹುಮನಾಬಾದ ಎನ್.ಹೆಚ್-218 ರಸ್ತೆಯ ಮುಖಾಂತರ ಕಮಲಾಪೂರ ಮಾರ್ಗವಾಗಿ ಚಿಂದಿ ಬಸವಣ್ಣನ ಗುಡಿಯ ದಾಟಿ ಹೊಡ್ಡಿನಲ್ಲಿ ಬೆಳಗಿನ ಜಾವ ಸುಮಾರಿಗೆ ನಮ್ಮ ಲಾರಿ ಏರ್ ಲಾಕ್ ಆಗಿದ್ದರಿಂದ ನಮ್ಮ ಲಾರಿ ಚಾಲಕನು ಲಾರಿಯನ್ನು ರೋಡಿನಲ್ಲಿ ಇಂಡಿಕೇಟರ್ ಹಾಕದೇ ನಿಲ್ಲಿಸಿ ನಾವಿಬ್ಬರೂ ಲಾರಿಯಿಂದ ಕೆಳಗೆ ಇಳಿದು ನೋಡುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಒಬ್ಬ ಕಾರ್ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ತನ್ನ ಕಾರನ್ನು ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ಏರ್ ಲಾಕ್ ಆಗಿ ನಿಂತಿದ್ದ ನಮ್ಮ ಲಾರಿಯ ಹಿಂದಿನ ಭಾಗಕ್ಕೆ ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದನು. ಕಾರ ಚಾಲಕನ ಹೆಸರು ಗುಮ್ಮಡಿ ರಾಮಣ್ಣರಾವ ತಂದೆ ಗುಮ್ಮಡಿ ಜಗನಮೋಹನರಾವ ಉ: ಉತ್ತಮ ಪ್ರಾಜೇಕ್ಟ್ದಲ್ಲಿ ಎಂಜೀನಿಯರ್ ಕೆಲಸ ಸಾ; ಪ್ಲಾಟ್ ನಂ: 582, ವಿವೇಕಾನಂದ ನಗರ ,ಕೆ.ಪಿ.ಹಚ್.ಬಿ ಕಾಲೂನಿ ಹತ್ತಿರ, ಕುಕುಟಪಲ್ಲಿ ಗ್ರಾಮ ಕುಕುಟಪಲ್ಲಿ ಮಂಡಲ, ಹೈದ್ರಾಬಾದ, ಜಿ: ರಂಗಾರೆಡ್ಡಿ ( ಆಂದ್ರಪ್ರದೇಶ) ಅಂತಾ ತಿಳಿಸಿದ್ದು, ಆತನ ಕಾರ್ ನಂ: ಎ.ಪಿ.-28- ಸಿ.ಎ. 5899 ನೇದ್ದು ಇದ್ದು ಅದರ ಮುಂದಿನ ಭಾಗ ಸಂಪೂರ್ಣ ಜಖಂಗೊಂಡಿದ್ದು, ನಮ್ಮ ಲಾರಿಯ ಹಿಂದಿನ ಭಾಗ ಜಖಂಗೊಂಡಿತ್ತು. ಸದರಿ ಕಾರ್ ಚಾಲಕನಿಗೆ ಮೈ ಕೈ ಗಳಿಗೆ ತರಚಿದ ಸಣ್ಣಪುಟ್ಟ ಗಾಯಗಳಾಗಿದ್ದವು, ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಪೊಲೀಸ :
ಉಮೇಶ ತಂದೆ ಶರಣಪ್ಪ ಗ್ರೋವರ್ ವ; 23 ವರ್ಷ ಜಾ;ದಲಿತ ಉ;ವಿಧ್ಯಾರ್ಥಿ ಸಾ; ಭೂಂಯ್ಯಾರ ತಾ;ಜಿ; ಗುಲಬರ್ಗಾ ರವರು ನಾನು ಮತ್ತು ನನ್ನ ಕಾಕಾನ ಮಗನಾದ ಕಮಲೇಶ ಇಬ್ಬರು ಕಾಲೇಜಿನ ಎದುರಗಡೆ ಎನ್.,ಹೆಚ್, 218 ಮುಖ್ಯ ರಸ್ತೆಯ ಹನುಮಾನ ದೇವಸ್ಥಾನದ ಹತ್ತಿರ ಮಾತನಾಡುತ್ತಾ ನಿಂತುಕೊಂಡಿದ್ದಾಗ ಕಮಲೇಶ ಈತನು ನೀರು ಕುಡಿದು ಬರುತ್ತೇನೆ  ಅಂತಾ ತನ್ನ ಸೈಕಲ ತೆಗೆದುಕೊಂಡು ರಸ್ತೆ ದಾಟುತ್ತಿದ್ದಾಗ ಹುಮನಾಬಾದ ಕಡೆಯಿಂದ ಲಾರಿ ನಂ: ಕೆ.ಎ. 11 - 4883 ನೇದ್ದರ ಚಾಲಕ  ಅಕ್ಬರ ಅಲಿ ತಂದೆ ಫಕ್ರೋದ್ದೀನ್ ಸಾ; ಅರಸಿಕೇರಾ ಜಿ: ಹಾಸನ ಈತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಕಮಲೇಶ ಈತನ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಈ ಅಪಘಾತದಲ್ಲಿ ಕಮಲೇಶ ಈತನಿಗೆ ತೆಲೆಗೆ ಭಾರಿ ಗುಪ್ತಗಾಯವಾಗಿ ತೆಲೆಯಿಂದ ಮತ್ತು ಕಿವಿಯಿಂದ ರಕ್ತ ಬರುತ್ತಿದ್ದು, ಕಮಲೇಶನಿಗೆ ಇತನಿಗೆ ಉಪಚಾರ ಕುರಿತು 108 ಅಂಬುಲೇನ್ಸ್ ಕರೆಯಿಸಿ ಗುಲಬರ್ಗಾ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

ಗೃಹಿಣೆಗೆ ಕಿರುಕುಳ ಪ್ರಕರಣ:

ಸ್ಟೇಷನ ಬಜಾರ ಠಾಣೆ: ಶ್ರೀಮತಿ ರೇಣುಕಾ ಗಂಡ ಪ್ರಕಾಶ ಸುತಾರ ಸಾ|| ಪೊಲೀಸ ಕ್ವಾರ್ಟರ್ಸ ಗುಲಬರ್ಗಾ ರವರು ನನಗೆ ಮದುವೆಯಾಗಿ 7 ವರ್ಷ ಆಗಿದ್ದು ನನ್ನ ಗಂಡ ಅಶೊಕ ಸುತ್ತಾರ ಇತನು 7 ವರ್ಷದಿಂದ ಕುಡಿದು ಬಂದು ಅಮಲಿನಲ್ಲಿ ಹಣ ಕೊಡು ಅಂತಾ ಮಾನಸಿಕ ದೈಹಿಕ ಹಿಂಸೆ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡುತ್ತಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

10 August 2011

GULBARGA DISTRICT REPORTED CRIMES

ಹಲ್ಲೆ ಪ್ರಕರಣ:

ರಾಘವೇಂದ್ರ ನಗರ ಪೊಲೀಸ್ ಠಾಣೆ : ಶ್ರೀ ಸಂತೋಷ ತಂದೆ ರಾಮಚಂದ್ರ ಹೊಸಪೇಟ ಗುಲಬರ್ಗಾ ನಾನು ಚೌಡೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯ ಎದುರುಗಡೆ ಇರುವ ಕಟಿಂಗ್ ಶಾಪ್ ಹತ್ತಿರ ನಿಂತಾಗ, ದೇವು, ಸಿದ್ದು ಮತ್ತು ಸತೀಷ ಈ ಮೂರು ಜನರು ಒಟ್ಟಿಗೆ ಕೂಡಿಕೊಂಡು ಕೈಯಲ್ಲಿ ತಲಾ ಒಂದೊಂದು ಕ್ರಿಕೆಟ್ ಸ್ಟಂಪ್ ಹಿಡಿದುಕೊಂಡು ನನಗೆ ಸುತ್ತುವರೆದು, ಅವಾಚ್ಯವಾಗಿ ಬೈದು ಜಗಳ ಮಾಡಿ ಸಿದ್ದು ಹಾಗು ಸತೀಷ ಇವರು ಕೈಯಲ್ಲಿದ್ದ ಕ್ರಿಕೆಟ್ ಸ್ಟಂಪದಿಂದ ನನ್ನ ತಲೆಗೆ ಹಾಗು ಬೆನ್ನಿನ ಮೇಲೆ ಹೊಡದು ಗಾಯ ಪಡಿಸರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ :
ಶ್ರೀ.ಶಬೀರ ಷಾ ತಂದೆ ಗರೀಬಷಾ ಫಕೀರ, ಸಾ|| ಕಪನೂರ ಖಬರಸ್ತಾನ ಗುಲಬರ್ಗಾ ರವರು ನಾನು ಅಬ್ದುಲ ಕರೀಂ ಇವರ ಹತ್ತಿರ ಮಗಳ ಮದುವೆಗೋಸ್ಕರ 1,00,000/- ರೂಪಾಯಿ ಕೈ ಗಡ ಸಾಲ ತೆಗೆದುಕೊಂಡಿದ್ದು, ಸದರಿ ಹಣದ ಕಾಗದ ಪತ್ರ ಮಾಡೋಣ ಅಂತಾ ಅಬ್ದುಲ ಕರೀಂ ಇವರು ನನ್ನ ಹೆಸರಿನಲ್ಲಿ ಇದ್ದ 2 ಎಕರೆ ಜಮೀನು ತನ್ನ ಹೆಸರಿಗೆ ಮಾಡಿಕೊಂಡು ಮಹೆಬೂಬ ಎನ್ನುವವನಿಗೆ ಸಾಕ್ಷಿಯನ್ನಾಗಿ ಮಾಡಿದ್ದು, ಈ ಬಗ್ಗೆ ನಮಗೆ ಗೊತ್ತಾದಾಗ ತಹಶೀಲ ಕಾರ್ಯಾಲಯದಲ್ಲಿ ತಕರಾರು ಹಾಕಿದ್ದು, ಈ ತಕರಾರು ಬಗ್ಗೆ ವಿಚಾರಣೆ ಗೊಸ್ಕರ ದಿ: 09/08/2011 ರಂದು ಸಾಯಂಕಾಲ ತಹಶೀಲ ಕಾರ್ಯಾಲಯಕ್ಕೆ ಬಂದು ಹೊರಗಡೆ ಆವರಣದಲ್ಲಿ ನಿಂತಾಗ ಆಬ್ದುಲ ಕರಿಂ, ಮಹೆಬೂಬ, ಸಲೀಂ ಸಾ|| ಗುಲಬರ್ಗಾರವರು ಜಾಗೆಯ ಖರೀದಿ ಸಂಬಂಧ ಜಗಳ ತೆಗೆದು ನನಗೆ ಮತ್ತು ನನ್ನ ತಮ್ಮ ಜೀಲಾನಿ ಷಾ ಖಾಸಿಂ ಷಾ ಮತ್ತು ನಮ್ಮ ಮನೆಯ ಹೆಣ್ಣು ಮಕ್ಕಳು ಮೊಕ್ತಂಬಿ, ರಂಜಾನಬೀ ರವರೆಲ್ಲರಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಮಾಡಿ ಸಾಕ್ಷಿ ನಾಶ ಮಾಡಿದ ಬಗ್ಗೆ :

ಮಾಡಬೂಳ ಠಾಣೆ: ಶ್ರೀ ಹುಸೇನಿ ತಂದೆ ರೇವಣಸಿದ್ದ ಜಮಾದಾರ ಸಾ:ಪೇಠಶೀರೂರ ರವರು ನನ್ನ ತಮ್ಮನ ಹೆಂಡತಿ ನಾಗಮ್ಮ ಇವಳು ಪೇಠಶೀರೂರ ಗ್ರಾಮದ ವಿಠ್ಠಲ ತಂದೆ ನಾಗಯ್ಯಾ ಈತನೊಂದಿಗೆ ಅನೈತಿಕ ಸಂಬಂದ ಹೊಂದಿದ್ದು. ಇದರ ಬಗ್ಗೆ ನನ್ನ ತಮ್ಮ ( ಮೃತ ) ಮಹಾದೇವಪ್ಪ ಇತನು ಹೆಂಡತಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದರಿಂದ ತಮ್ಮ ಅನೈತಿಕ ಸಂಬಂದ ಚಟುವಟಿಕಿಗೆ ಅಡ್ಡಿ ಉಂಟಾಗಬಹುದೆಂದು ಭಾವಿಸಿ ವಿಠ್ಠಲ ಸರ್ವಶೇಟ್ಟಿ ಈತನ ಕುಮ್ಮಕನಿಂದ ತನ್ನ ಗಂಡನಿಗೆ ಊಟದಲ್ಲಿ ವಿಷ ಹಾಕಿ ಮೃತ ಪಡಿಸಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಪ್ರಕರಣ :
ಫರಹತಾಬಾದ ಠಾಣೆ
: ಶ್ರೀ ಶಶಿಕುಮಾರ ತಂದೆ ನಾಗಪ್ಪಾ ಆರೆಕರ ಸಾ: ಜೈಭೀಮ ನಗರ ಕಾಲೋನಿ ಅಫಜಲಪೂರ ರವರು ನಾನು ನನ್ನ ಗೆಳೆಯರೊಂದಿಗೆ ದಿನಾಂಕ: 9-8-2011 ರಂದು ಸಾಯಂಕಾಲ ಗುಲಬರ್ಗಾದಿಂದ ಅಫಜಲಪೂರಕ್ಕೆ ಮೊಟಾರ ಸೈಕಲ ಮೇಲೆ ಹೋಗುತ್ತಿದ್ದಾಗ ಅಫಜಲಪೂರ ರೋಡಿನ ಶರಣಸಿರಸಗಿ ದಾಟಿ ನಾಗ ದೇವತೆ ಗುಡಿಯ ಹತ್ತಿರ ರೋಡಿನ ಮೇಲೆ 6 ಜನ ಅಪರಿಚಿತರು ಎರಡು ಮೊಟಾರ ಸೈಕಲ ನಂಬರ ಕೆಎ 32 ಯು. 6455, ಮತ್ತು ಕೆಎ 32 ಎ 1315 ನೇದ್ದರ ಮೇಲೆ ಬಂದು ನನ್ನ ಮತ್ತು ನನ್ನ ಗೆಳೆಯನಿಂದ ಬಂಗಾರದ ಆಭರಣಗಳು ಮತ್ತು ನಗದು ಹಣ ಹಾಗು ಮೋಬಾಯಿಲ್ ಹೀಗೆ ಒಟ್ಟು 51,400=00 ರೂ. ಬೆಲೆ ಬಾಳುವದನ್ನು ಚಾಕು ತೋರಿಸಿ ಜಬರ ದಸ್ತಿಯಿಂದ ಕಿತ್ತುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಹಲ್ಲೆ ಪ್ರಕರಣ :
ವಿಶ್ವವಿದ್ಯಾಲಯ ಪೊಲೀಸ ಠಾಣೆ :
ಶ್ರೀ ಸಂತೋಷ ತಂದೆ ಧನಸಿಂಗ ರಾಠೋಡ ಸಾ: ಬಾಪು ನಾಯಕ ತಾಂಡಾ ನಂದೂರ(ಬಿ) ಗ್ರಾಮ ರವರು ನಾನು ಊಟ ಮುಗಿಸಿಕೊಂಡು ಕಟ್ಟೆಯ ಮೇಲೆ ಕುಳಿತಾಗ ನನ್ನ ಅಣ್ಣಂದಿರಾದ ವಿಶ್ವನಾಥ ಮತ್ತು ನೀಲಕಂಠ ಇವರು ನಮ್ಮ ಮನೆಗೆ ಬಂದು ಆಸ್ತಿಯಲ್ಲಿ ಪಾಲು ಸರಿಯಾಗಿ ಕೊಟ್ಟಿಲ್ಲ ಅಂತಾ ಅಂದಿದ್ದಕ್ಕೆ ನಾನು ಆಸ್ತಿ ಪಾಲು ಊರ 4 ಜನರ ಸಮಕ್ಷಮ ಮಾಡಿ 2 ವರ್ಷಗಳಾಗಿದೆ. ಈಗ ಸರಿ ಆಗಿಲ್ಲ ಅಂದರೆ ಹೇಗೆ ಅಂತಾ ಅಂದಿದ್ದಕ್ಕೆ ಅವಾಚ್ಯವಾಗಿ ಬೈದು ವೀಶ್ವನಾಥ ಮತ್ತು ನೀಲಕಂಠ ಇವರು ಚಾಕುವಿನಿಂದ ನನಗೆ ಹೊಡೆಯಲು ಬಂದಾಗ ನಾನು ಎಡಗೈ ಅಡ್ಡ ತರಲು ಚಾಕುವಿನ ತುದಿ ನನ್ನ ಎಡಗೈ ಹಸ್ತದ ಮೇಲೆ ಮತ್ತು ಎಡಗೈ ಮುಂಗೈಗೆ ರಕ್ತಗಾಯವಾಗಿರುತ್ತದೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಪ್ರಕರಣ :
ವಿಶ್ವವಿದ್ಯಾಲಯ ಪೊಲೀಸ ಠಾಣೆ :
ಶ್ರೀಮತಿ ಚಂದ್ರಕಲಾ ಗಂಡ ರೇವಣಸಿದ್ದಪ್ಪ ಜವಳಗೇರ ಅಜಾದಪೂರ ಸಿಮೇಯ ಕಲಬುರ್ಗಿ ಇವರ ಹೊಲದ ರೋಡ ಬದಿಯಲ್ಲಿ ನಾನು ಇಂದು ದಿನಾಂಕ 09-08-2011 ರಂದು ಕಾಯಲಿಕ್ಕೆ ಹೋಗಿದ್ದು, ನಮ್ಮೂರ ಸೀಮೆಯ ಶಿವಶರಣಪ್ಪಾ ಕಣಿ ಇವರ ಹೊಲದಲ್ಲಿ ಮೇಯಿಸುತ್ತಾ ಬಿಟ್ಟು ನಾನು ರೋಡ ಬದಿಗೆ ನಿಂತಿದ್ದು ಆಗ ಯಾರೋ ಅಪರಿಚಿತ 25 ರಿಂದ 30 ವರ್ಷ ವಯಸ್ಸಿನ ವ್ಯಕ್ತಿ ನನ್ನಲ್ಲಿಗೆ ಬಂದು ಅಜ್ಜಿ ನನಗೆ ಕುರಿ ಬೇಕಾಗ್ಯವ ಕುರಿ ಅದವ್ ಏನು ಅಂತಾ ಅಂದಾಗ ನಾನು ನನ್ನಲ್ಲಿ ಕುರಿ ಇಲ್ಲಾ ಅಂತಾ ಹೇಳುತ್ತಿದ್ದಾಗ ನನಗೆ ಅವಾಚ್ಯವಾಗಿ ಬೈದು ನನ್ನ ಕೊರಳಲ್ಲಿಯ ಬಂಗಾರ ತೆಗಿ ಅಂತಾ ಅಂದು ಬೆನ್ನ ಹಿಂದಿನಿಂದ ಒಂದು ತಲವಾರ ತೆಗೆದು ನನಗೆ ತೋರಿಸಿ ಕೊರಳಲ್ಲಿಯ ಬಂಗಾರದ ತಾಳಿ ಪತ್ತಿ ಹರಿದುಕೊಂ

ಡು ಮತ್ತು ಎರಡು ಕಿವಿಯಲ್ಲಿಯ ಬಂಗಾರದ ಹೂವಾ ಹರಿದುಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೊಂಬಿ ಮತ್ತು ಹಲ್ಲೆ ಪ್ರಕರಣ

ಬ್ರಹ್ಮಪೂರ ಪೊಲೀಸ್ ಠಾಣೆ : ಶ್ರೀ ಮಹೆಬೂಬಸಾಬ ತಂದೆ ಅಬ್ದುಲ ರಹೆಮಾನ ಸಾ|| ಆಜಾದಾಪೂರ ರೋಡ ಗುಲಬರ್ಗಾ ರವರು ನಾನು ಹಾಗೂ ಸೈಯದ ಸಲಿಂ, ದಸ್ತಗಿರ ತಂದೆ ಬಾಬುಮಿಯಾ, ಬಾಬಾ ತಂದೆ ಹನ್ನುಮಿಯಾ ಎಲ್ಲರೂ ಕೂಡಿ ತಹಶೀಲ ಕಾರ್ಯಾಲಯದ ಹತ್ತಿರ ನಿಂತಿರುವಾಗ  ನಾಸೀರ ಮೌಲಾನ, ನಾಸೀರ ಮೌಲಾನನ  ತಮ್ಮ,, ಶಬೀರ ಶಾ, ಜಿಲಾನಿ ಶಾ, ಖಾಸಿಂ ಶಾ, ರಂಜಾನಬಿ, ಶಬೀರ ಶಾನ ತಮ್ಮ, ಜಿಲಾನಿ ಶಾನ ಹೆಂಡತಿ,  ಎಲ್ಲರೂ ಸಾ|| ಗುಲಬರ್ಗಾರವರು ಬಂದು ನನ್ನೊಂದಿಗೆ ಜಗಳಕ್ಕೆ ಬಿದ್ದು, ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಸಂಚಾರಿ ಪೊಲೀಸ್ ಠಾಣೆ : ರಾಜಶೇಖರ ತಂದೆ ಶಿವಲಿಂಗಪ್ಪ ಪೊಲೀಸ್  ಸಾಃ  ಆದರ್ಶ ನಗರ  ಗುಲಬರ್ಗಾ  ರವರು ನಾನು ಸಂತ್ರಾಸವಾಡಿ ಕ್ರಾಸ್ ದಿಂದ ಬಸವೇಶ್ವರ ಕಾಲೋನಿ ಕಡೆಗೆ ರಸ್ತೆಯಿಂದ ನಡೆದುಕೊಂಡು ಹೋಗುವಾಗ ತನ್ನ ಹಿಂದಿನಿಂದ ಯಾವುದೋ ಒಂದು ಟಂ ಟಂ ಚಾಲಕನು ತನ್ನ ವಾಹನ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು  ಫಿರ್ಯಾದಿಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ವಾಹನ ಸಮೇತ ಓಡಿ ಹೋಗಿರುತ್ತನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಜಾಗ್ರತೆ ಕ್ರಮ:

ಬ್ರಹ್ಮಪೂರ ಠಾಣೆ : ಶ್ರೀ.ಗಜೇಂದ್ರ ಸಿ.ಪಿ.ಸಿ 549 ಬ್ರಹ್ಮಪೂರ ರವರು ತಮ್ಮ ವರದಿ ಸಲ್ಲಿಸಿದ್ದು ಸಾರಾಂಶವೆನೆಂದರೆ ನಾನು ಸಾಯಂಕಾಲ 5:00 ಗಂಟೆಯಿಂದ ನಾನು ಮತ್ತು ತುಕಾರಾಮ ಸಿ.ಪಿ.ಸಿ 689 ರವರು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು  ಹೋದಾಗ ನಗರದ ಸಿಟಿ ಬಸ ನಿಲ್ದಾಣದ ಹತ್ತಿರ ರಾತ್ರಿ 8 ಸುಮಾರಿಗೆ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವರನ್ನು ಹಿಡಿದು ಹೆಸರು ಮತ್ತು ವಿಳಾಸ  ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡಲಿಲ್ಲಾ ಇವರನ್ನು ಹೀಗೆಯೇ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಢಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಕೂಲಂಕೂಶವಾಗಿ ವಿಚಾರಿಸಿ ಶಿವಲಿಂಗ ತಂದೆ ಸಾಯಿಬಣ್ಣ ಹೊಲೆನವರ್, ಶಿವಕುಮಾರ ತಂದೆ ಅರ್ಜುನ ಮದ್ಯಾಣಕರ್, ರವರನ್ನು ದಸ್ತಗಿರಿ ಮಾಡಿ ಮುಂಜಾಗ್ರತೆ ಕ್ರಮವಾಗಿ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಲಲಾಗಿದೆ.

09 August 2011

GULBARGA DISTRICT REPORTED CRIMES


ಹೆಣ್ಣು ಮಗಳು ಕಾಣೆಯಾದ ಪ್ರಕರಣ:

ಅಶೋಕ ನಗರ ಠಾಣೆ :ಶ್ರೀ ಸಂಗಯ್ಯಾ ಸ್ವಾಮಿ ತಂದೆ ಶರಣಯ್ಯ ಸ್ವಾಮಿ ಮಠಪತಿ ಸಾ:ತೋಳನವಾಡಿ ತಾ:ಆಳಂದ ಜಿ: ಗುಲಬರ್ಗಾ ರವರು ನನ್ನ ತಂಗಿ ಶ್ರೀಮತಿ ನಾಗಮ್ಮ ಗಂಡ ಬೂದಯ್ಯಾಸ್ವಾಮಿ ಹಿರೇಮಠ ವಯ: 19 ಜಾತಿ: ಸ್ವಾಮಿ ಸಾ: ರಾಮಪೂರ ತಾ: ಜೇವರ್ಗಿ ಜಿ: ಗುಲಬರ್ಗಾರವರು ತನ್ನ ಗಂಡನ ಮನೆಗೆ ಹೋಗುವ ಕುರಿತು ದಿನಾಂಕ 08/08/2011 ರಂದು ಮಧ್ಯಾಹ್ನ ಗುಲಬರ್ಗಾಕ್ಕೆ ಬಂದು ಗುಲಬರ್ಗಾ ಕೇಂದ್ರ ಬಸ್ಸ ನಿಲ್ದಾಣದಿಂದ ತನ್ನ ಗಂಡ ನಾದ ಬೂದಯ್ಯಾ ಇತನು ಹೂವು ತೆಗದುಕೊಂಡು ಬರುವಷ್ಠರಲ್ಲಿಯೆ ಬಸ್ಸ ನಿಲ್ದಾಣದಿಂದ ಕಾಣೆಯಾಗಿರುತ್ತಾಳೆ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :
ಶ್ರೀ ಮಹ್ಮದ ಆರೀಫ ತಂದೆ ಮಹ್ಮದ ಮಹಿಮೂದ ಸೋನಿಯಾಗಾಂದಿ ಕಾಲೋನಿ ಮಾಲಗತ್ತಿ ರೋಡ ಗುಲಬರ್ಗಾ ರವರು ನಾನು ದಿನಾಂಕ:08-08-2011 ರಂದು ರಾತ್ರಿ ರಾಷ್ಟ್ರಪತಿ ಸರ್ಕಲ್ ದಿಂದ ಪಟೇಲ್ ಸರ್ಕಲ್ ಮೇನ ರೋಡಿನಲ್ಲಿ ಬರುತ್ತಿರುವಾಗ ಕೆ .ಎಸ್.ಆರ್.ಟಿ.ಸಿ.ಬಸ್ ಡಿಪೊ ನಂ: 01 ಮೇನ ಗೇಟ ಎದುರು ರೋಡಿನ ಮೇಲೆ ಅಟೋರಿಕ್ಷಾ ನಂ: ಕೆಎ 32 -8896 ನೆದ್ದರ ಚಾಲಕ ಕೇಂದರ ಬಸ್ ನಿಲ್ದಾಣ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಅಟೋರಿಕ್ಷಾ ನಂ: ಕೆಎ 32 ಬಿ 1739 ನೆದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ಎರಡು ಅಟೋರೀಕ್ಷಾ ಪಲ್ಟಿಯಾಗಿದ್ದು ಅಟೋರೀಕ್ಷಾ ನಂ; ಕೆಎ 32 ಬಿ 1739 ನೆದ್ದರಲ್ಲಿದ್ದ ಚಾಲಕನಿಗೆ ಮತ್ತು ಅಟೋರೀಕ್ಷಾ ನಂ: ಕೆಎ 32 -8896 ನೆದ್ದರಲ್ಲಿ ಪ್ರಯಾಣಿಸುತ್ತಿದ್ದವರಿಗೆ ಗಾಯಗಳಾಗಿದ್ದು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟಕಾ ಪ್ರಕರಣ:

ಸುಲೇಪೇಟ ಠಾಣೆ : ದಿನಾಂಕ: 08-08-2011 ರಂದು ಹೂವಿನಹಳ್ಳೀ ಗ್ರಾಮದಲ್ಲಿ ಶ್ರೀ ಬೀರಣ್ಣ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಖಚಿತ ಮಾಃಇತಿ ಬಂದ ಮೇರೆಗೆ ಸಿಪಿಐ ಸುಲೇಪೇಟ ರವರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಮಾಶೆಪ್ಪಾ ತಂದೆ ಬುದ್ದಪ್ಪಾ ವಡ್ಡರ ಸಾ|| ಹೂವಿನಹಳ್ಳಿ ತಾ|| ಚಿಂಚೋಳಿ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ಮಟಕಾ ಚೀಟಿ ಬರೆದುಕೊಂಡ ಸಂಗ್ರಹಿಸಿದ ರೂ 3040/- ಹಾಗು ಮಟಕಾ ಚೀಟಿಗಳು ಹಾಗು ಇನ್ನಿತರ ವಸ್ತುಗಳನ್ನು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.