POLICE BHAVAN KALABURAGI

POLICE BHAVAN KALABURAGI

25 October 2019

KALABURAGI DISTRICT REPORTED CRIMES.


C¥sÀd®¥ÀÆgÀ ¥Éưøï oÁuÉ : ದಿನಾಂಕ: 24-10-2019 ರಂದು 7.00 ಎಎಮ್ಕ್ಕೆ ಪರಶುರಾಮ ತಂದೆ ಹಣಮಂತ ಮಾಸ್ತರ ಸಾ|| ಅಫಜಲಪೂರ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಸಾರಾಂಶವೇನೆಂದರೆ ನಾನು ಮೇಲೆ ಹೇಳಿದ ವಿಳಾಸದವನಿದ್ದು ವಿದ್ಯಾಬ್ಯಾಸ ಮಾಡಿಕೊಂಡು ತಂದೆ ತಾಯಿಯೊಂದಿಗೆ ವಾಸವಾಗಿರುತ್ತೇನೆ. ನನ್ನದು ಹಿರೊ ಹೊಂಡಾ ಸ್ಪೆಂಡರ್ ಪ್ರೋ ಕಂಪನಿಯ ಮೋಟಾರ ಸೈಕಲ ಇದ್ದು, ಅದರ ನಂಬರ ಚೆಸ್ಸಿ ನಂಬರ:- MBLHA10ASDHA52971 ಇಂಜೆನ ನಂಬರ:- HA10ELDHA30883 ಅಂತಾ ಸಿಲವರ್ ಬಣ್ಣದ್ದು ಇರುತ್ತದೆ. ಅಂದಾಜು 25,000/- ರೂ ಕಿಮ್ಮತ್ತಿನದು ಇರುತ್ತದೆ.  ದಿನಾಂಕ 21-10-2019 ರಂದು ರಾತ್ರಿ 10:00 ಗಂಟೆಗೆ ಸದರಿ ನನ್ನ ಮೋಟರ ಸೈಕಲನ್ನು ಅಫಜಲಪೂರ ಪಟ್ಟಣದ ಅಂಬಿಗರ ಚೌಡಯ್ಯ ನಗರದಲ್ಲಿರುವ ನನ್ನ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಮಲಗಿರುತ್ತೇನೆ. ದಿನಾಂಕ 22-10-2019 ರಂದು ಬೆಳಿಗ್ಗೆ 06:00 ಎದ್ದು ನೋಡಲಾಗಿ, ಮನೆಯ ಮುಂದೆ ನಿಲ್ಲಿಸಿದ ನನ್ನ ಮೋಟರ ಸೈಕಲ ಇರಲಿಲ್ಲ. ಸದರಿ ನನ್ನ ಮೋಟರ ಸೈಕಲನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ನಂತರ ಸದರಿ ನನ್ನ ಮೋಟಾರ ಸೈಕಲನ್ನು ನಿನ್ನೆ ನಾನು ಮತ್ತು ನನ್ನ ಮಾವನಾದ ಶಾಂತಪ್ಪ ಅಗಸಿ ಸಾ|| ಸೋನ್ನ, ನನ್ನ ಚಿಕ್ಕಪ್ಪನ ಮಗನಾದ ರಾಜಕುಮಾರ ನಾಟಿಕಾರ ಸಾ|| ಹವಳಗಾ ಮೂರು ಜನರು ಕೂಡಿ ಅಫಜಲಪೂರ, ದುದನಿ, ಘತ್ತರಗಾದಲ್ಲಿ ಹುಡಕಾಡಿದರು ಕಳ್ಳತನವಾದ ನನ್ನ ಮೋಟರ ಸೈಕಲ್ ಸಿಕ್ಕಿರುವುದಿಲ್ಲ. ಕಳ್ಳತನವಾದ ನನ್ನ ಮೋಟರ ಸೈಕಲ ಸಿಗದಿದ್ದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ.  ದಿನಾಂಕ 21-10-2019 ರಂದು 10:00 ಪಿ ಎಮ್ ದಿಂದ ದಿನಾಂಕ 22-10-2019 ರಂದು ಬೆಳಿಗ್ಗೆ 06:00 ಎಎಮ್ ಗಂಟೆಯ ಮದ್ಯಧ ಅವಧಿಯಲ್ಲಿ ಅಫಜಲಪೂರ ಪಟ್ಟಣದ ಅಂಬಿಗರ ಚೌಡಯ್ಯ ನಗರದಲ್ಲಿರುವ ನನ್ನ ಮನೆಯ ಮುಂದೆ ನಿಲ್ಲಿಸಿದ ನನ್ನ ಮೋಟರ ಸೈಕಲ ನಂ ಚೆಸ್ಸಿ ನಂಬರ:- MBLHA10ASDHA52971 ಇಂಜೆನ ನಂಬರ:- HA10ELDHA30883 ನೇದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಾರಣ ಮಾನ್ಯರವರು ಕಳ್ಳತನವಾದ ನನ್ನ ಮೋಟರ ಸೈಕಲನ್ನು ಪತ್ತೆಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಎಂದು ಹೇಳಿಕೆ ನಿಡಿದ್ದು ನೀಜ ವಿರುತ್ತದೆ. ಪ್ರಕರಣ ದಾಖಲಿಸಿಕೊಂಡು ಬಗ್ಗೆ ಮಾಹಿತಿ..
C¥sÀd®¥ÀÆgÀ ¥Éưøï oÁuÉ :  ದಿನಾಂಕ 24-10-2019 ರಂದು 7-15 ಪಿಎಮ್‍ಕ್ಕೆ ಶ್ರೀ ಮುಸ್ತಾಪ ತಂದೆ ಅಹ್ಮದಸಾಬ ಚಂದನ ಸಾ|| ಕರಜಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾಧಿಸಲ್ಲಿಸಿದ್ದು ಸದರಿ ಹೇಳಿಕೆ ಸಾರಾಂಶವೆನೆಂದರೆ ನಾನು ಮೇಲೆ ಹೇಳಿದ ವಿಳಾಸದವನಿದ್ದು ಕಾರ ಚಾಲಕನಾಗಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನಾವು ಇಬ್ಬರು ಅಣ್ಣ ತಮ್ಮರಿದ್ದು ನನ್ನ ಅಣ್ಣನಾದ ನಬಿಲಾಲ ಈತನಿಗೆ 02 ತಿಂಗಳ ಹಿಂದೆ ಪಾರ್ಶುವಾಯು ಆಗಿರುತ್ತದೆ. ಮನೆಯಲ್ಲಿ ನನ್ನ ಕುಟುಂಬ ಮತ್ತು ನನ್ನ ಅಣ್ಣನ ಕುಟುಂಬ ಎಲ್ಲರೂ ಕೂಡಿ ಒಂದೆ ಮನೆಯಲ್ಲಿ ಒಟ್ಟಿಗೆ ವಾಸವಾಗಿರುತ್ತೇವೆ. ನನ್ನ ಅಣ್ಣನ ಹೆಂಡತಿಯಾದ ಪರವೀನ್ ಇವಳ ತವರು ಮನೆ ಅಫಜಲಪೂರ ತಾಲೂಕಿನ ಮೈನಾಳ ಗ್ರಾಮ ಇದ್ದು, ನನ್ನ ಅತ್ತಿಗೆಯ ಅಣ್ಣನಾದ ಮೈಹಿಬೂಬ ಇವರು ಕಲಬುರಗಿಯಲ್ಲೆ ವಾಸವಾಗಿರುತ್ತಾರೆ. ನನ್ನ ಅಣ್ಣನ ಹೆಂಡತಿಯಾದ ಪರವೀನ್ ಇವರಿಗೆ ಒಂದು ತಿಂಗಳಿಂದ ಹೊಟ್ಟೆನೋವು ಆಗುತ್ತಿದ್ದರಿಂದ ಕಲಬುರಗಿಯಲ್ಲಿ ಆಸ್ಪತ್ರೆಗೆ ತೋರಿಸಿರುತ್ತಾರೆ. ದಿನಾಂಕ 22-10-2019 ರಂದು ನನ್ನ ಅಣ್ಣನ ಹೆಂಡತಿಗೆ ಅವರ ಅಣ್ಣನಾದ ಮೈಹಿಬೂಬ ಇವರು ಪೋನ್ ಮಾಡಿ ನಿನು ಆಸ್ಪತ್ರೆಗೆ ತೋರಿಸಿದ ರಿಪೋರ್ಟ ಬಂದಿದೆ ನಾಳೆ ಆಸ್ಪತ್ರೆಗೆ ತೋರಿಸೊಣ ಭಾ ಎಂದು ಹೇಳಿದ್ದರಿಂದ ನನ್ನ ಅತ್ತಿಗೆ ನಿನ್ನೆ ದಿನಾಂಕ 23-10-2019 ರಂದು ಮದ್ಯಾಹ್ನ 12:00 ಗಂಟೆಗೆ ಕರಜಗಿ ಗ್ರಾಮದ ನಮ್ಮ ಮನೆಯಿಂದ ಕಲಬುರಗಿಗೆ ಹೋಗಿ ಆಸ್ಪತ್ರೆಗೆ ತೋರಿಸಿಕೊಂಡು ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿರುತ್ತಾರೆ. ಸಾಯಂಕಾಲ 6:00 ಗಂಟೆ ಸುಮಾರಿಗೆ ನಾವು ಮನೆಯಲ್ಲಿದ್ದಾಗ ನನ್ನ ಅತ್ತಿಗೆಯ ಅಣ್ಣನಾದ ಮೈಹಿಬೂಬ ಇವರು ನನಗೆ ಪೋನ್ ಮಾಡಿ ನಮ್ಮ ತಂಗಿ ಕಲಬುರಗಿಗೆ ಬಂದಿದ್ದಾಳೆ ಹೇಗೆ, ಅವಳ ಪೋನ್ ಸ್ವೀಚ್ ಆಫ್ ಬರುತ್ತಿದೆ ಎಂದು ಹೇಳಿದಾಗ ನಾವು ಮದ್ಯಾಹ್ನ 12:00 ಗಂಟೆಗೆ ಮನೆಯಿಂದ ಹೋದ ವಿಚಾರವನ್ನು ತಿಳಿಸಿರುತ್ತೇವೆ. ನನು ಸಹ ನನ್ನ ಅತ್ತಿಗೆಯ ಪೋನ್ ನಂಬರ 9535430586 ನೇದ್ದಕ್ಕೆ ಪೋನ್ ಮಾಡಿದ್ದು ಸ್ವೀಚ್ ಆಫ್ ಆಗಿರುತ್ತದೆ. ನನ್ನ ಅತ್ತಿಗೆಯ ಬಗ್ಗೆ ಯಾವುದೆ ಮಾಹಿತಿ ಸಿಗದಿದ್ದ ಕಾರಣ ನಾನು ಮತ್ತು ನನ್ನ ಅತ್ತಿಗೆಯ ಅಣ್ಣನಾದ ಮೈಹಿಬೂಬ ಹಾಗೂ ನಮ್ಮ ಅಣ್ಣ ತಮ್ಮಕಿಯ ರಮಜಾನ್ ಮೂರು ಜನರು ಕೂಡಿ ಅಫಜಲಪೂರ, ಗೌರ , ಬಂಕಲಗಾ, ಕಲಬುರಗಿ ಕಡೆ ಹುಡುಕಾಡಿದ್ದು ನನ್ನ ಅತ್ತಿಗೆ ಎಲ್ಲಿಯೂ ಪತ್ತೆ ಆಗಿರುವುದಿಲ್ಲ. ನನ್ನ ಅತ್ತಿಗೆಯಾದ ಪರವೀನ್ ಇವರು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಂಡು ಬರುತ್ತೇನೆ ಅಂತಾ ಹೇಳಿ ದಿನಾಂಕ 23-10-2019 ರಂದು ಮದ್ಯಾಹ್ನ 12:00 ಗಂಟೆಗೆ ಕರಜಗಿ ಗ್ರಾಮದ ನಮ್ಮ ಮನೆಯಿಂದ ಹೋಗಿ ಕಾಣೆಯಾಗಿರುತ್ತಾರೆ. ಕಾರಣ ನಮ್ಮ ಅತ್ತಿಗೆಯನ್ನು ಪತ್ತೆ ಮಾಡಬೆಕೆಂದು ಹೇಳಿ ಬರೆಸಿದ ಹೇಳೀಕೆ ನೀಜವಿರುತ್ತದೆ. ಕಾಣೆಯಾದ ಹೆಣ್ಣು ಮಗಳ  ಚಹರಾಪಟ್ಟಿಹೆಸರು ಮತ್ತು ವಿಳಾಸ     ಪರವೀನ್ ಗಂಡ ನಬಿಲಾಲ ಚಂದನ್ ವಯ|| 42 ವರ್ಷ ಜಾ|| ಮುಸ್ಲಿಂ ಉ|| ಕೂಲಿ ಕೆಲಸ ಸಾ|| ಕರಜಗಿ ಗ್ರಾಮ ತಾ|| ಅಫಜಲಪೂರ ಜಿ|| ಕಲಬುರಗಿ ಎತ್ತರ  ಅಂದಾಜು 5 ಪೀಟ್ 6 ಇಂಚು ಮುಖ  ಚಹರೆ  ಕೋಲು ಮುಖ, ಗೋದಿ ಬಣ್ಣ, ಸಾದಾರಣ ಮೈಕಟ್ಟು ಇರುತ್ತದೆಕಾಣೆಯಾದ ದಿನದಂದು ದರಸಿದ ಉಡುಪುಗಳು         ಗುಲಾಬಿ ಬಣ್ಣದ ಸೀರೆ ಇದ್ದು ಅದರ ಮೇಲೆ ಕಪ್ಪು ಬಣ್ಣದ ಬುರ್ಖಾ ಧರಿಸಿರುತ್ತಾಳೆಮಾತನಾಡುವ ಬಾಷೆಗಳು  ಕನ್ನಡ, ಹಿಂದಿ  ಅಂತಾ ದೂರು ಸಲ್ಲಿಸಿದ್ದರ ಸಾರಾಂಶದ ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಬಗ್ಗೆ ಮಾಹಿತಿ.
gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:24/10/2019 ರಂದು 6.30 .ಎಂಕ್ಕೆ ಜಿ.ಜಿ.ಹೆಚ್ ಆಸ್ಪತ್ರೆಯಿಂದ ಎಂ.ಎಲ್.ಸಿ ವಸೂಲಾಗಿದ ಪ್ರಯುಕ್ತ ಎಂ.ಎಲ್.ಸಿ ತರಲು ಹೊರಟು 7.00 .ಎಂಕ್ಕೆ ಆಸ್ಪತ್ರೆಗೆ ತಲುಪಿ ನಂತರ ಗಾಯಾಳು ಶ್ರೀಮತಿ ಸುನೀತಾ ಗಂಡ ಮಲ್ಲಿಕಾರ್ಜುನ ಬುಕ್ಕಾ :34 ವರ್ಷ ಜಾ:ಲಿಂಗಾಯತ :ಸ್ಟಾಪ ನರ್ಸ ಸಾ:ಜೆ.ಆರ್.ನಗರ ಕಲಬುರಗಿ ಇವರಿಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ಜೀಮ್ಸ್ ಆಸ್ಪತ್ರೆಯಲ್ಲಿ ಸ್ಟಾಪ ನರ್ಸ ಕೆಲಸ ಮಾಡಿಕೊಂಡು ಗಂಡ ಮಕ್ಕಳೊಂದಿಗೆ ಜೆ.ಆರ್ ನಗರದಲ್ಲಿ ವಾಸವಾಗಿರುತ್ತೇನೆ. ನನ್ನ ಗಂಡನಾದ ಮಲ್ಲಿಕಾರ್ಜುನ ಇತನು ಸಹ ಸ್ಟಾಪ ನರ್ಸ ಇರುತ್ತಾನೆ. & ಇಬ್ಬರು ಮಕ್ಕಳು ಇರುತ್ತಾರೆ. ನಾವೆಲ್ಲರೂ ಒಂದೇ ಮನೆಯಲ್ಲಿ ಶ್ರೀ ಹಣಮಂತರಾವರವರ ಮನೆಯಲ್ಲಿ ವಾಸವಾಗಿರುತ್ತೇನೆ. ನನ್ನ ಗಂಡನಾದ ಮಲ್ಲಿಕಾರ್ಜುನ ಇತನು ನಮ್ಮ ಮನೆಯ ಪಕ್ಕದ ನಿವಾಸಿಯಾದ ಪ್ರೀತಿ ಎಂಬುವಳ ಜೊತೆಯಲ್ಲಿ ಅನೈತಿಕ ಸಂಬಂಧ ಇಟ್ಟು ಕೊಂಡಿರುವದರಿಂದ ನನ್ನೊಂದಿಗೆ ದಿನಾಲು ಜಗಳ ಮಾಡುತ್ತಾ ಬಂದಿರುತ್ತಾನೆ. ಹೀಗೆ ಇರುವಾಗ ದಿನಾಂಕ:22/10/2019 ರಂದು ಮಧ್ಯಾಹ್ನ 2.30 ಗಂಟೆಯ ಸುಮಾರಿಗೆ ಇಬ್ಬರೂ ನಮ್ಮ ಮನೆಯಲ್ಲಿ ರೇಢ್ ಹ್ಯಾಂಡಾಗಿ ಸಿಕ್ಕಿಬಿದ್ದಿರುತ್ತಾರೆ. ಆಗ ಇಬ್ಬರೂ ನನಗೆ ಕ್ಷಮೇ ಕೇಳಿದ್ದು ಇರುತ್ತದೆ. ಅದಕ್ಕೆ ನಾನು ಸುಮ್ಮನೆ ಇದ್ದೆ ವಿಷಯ ಕುರಿತು ಪ್ರೀತಿ ಇವಳ ತಾಯಿ ಬಂದು ನನ್ನೊಂದಿಗೆ ಅನಾವಶ್ಯಕವಾಗಿ ಜಗಳ ತೆಗೆದು ಹೋಗಿರುತ್ತಾಳೆ. ನಂತರ ನನ್ನ ಗಂಡನಾದ ಮಲ್ಲಿಕಾರ್ಜುನ ಇತನು ಸಹ ನನಗೆ ಕೈಯಿಂದ ಹೊಡೆಬಡೆಮಾಡಿ ರಂಡಿ ನಿನಗೆ ಹೇಗೆ ಹೊಡಿಸುತ್ತೇನೆ ನೋಡು ರಂಡಿ ಭೋಸಡಿ ಅಂತಾ ಅವಾಚ್ಯವಾಗಿ ಬೈದು ಮನೆಯಿಂದ ಹೊರಗೆ ಹೋಗಿರುತ್ತಾನೆ. ನಂತರ ದಿನಾಂಕ:23/10/2019 ರಂದು ರಾತ್ರಿ 8.30 ಪಿ.ಎಂ ಸುಮಾರಿಗೆ ನಾನು ನನ್ನ ಮನೆಯಲ್ಲಿರುವಾಗ ಪ್ರೀತಿ, ಪ್ರೀತಿಯ ತಾಯಿ, ಪ್ರೀತಿಯ ತಮ್ಮ ಇವರು ಬಂದು ನಾನು ಮನೆಯಲ್ಲಿ ಕುಳಿತಿರುವಾಗ  ಪ್ರೀತಿಯ ತಮ್ಮ ಇತನು ನನ್ನ ಎದೆ ಮೇಲಿನ ಡ್ರೇಸ್ ಹಿಡಿದು ರಂಡಿ ನನ್ನ ಅಕ್ಕನ ಮೇಲೆ ಸಂಶಯ ಪಡತಿ ಸುಳಿ ಅಂತಾ ನನ್ನ ಡ್ರೇಸ್ ಹರಿದು ಕೈ ಹಿಡಿದು ಮನೆಯ ಒಳಗಿನಿಂದ ಹೊರಗೆ ಎಳೆದುಕೊಂಡು ಬಂದು ಕಾಲಿನಿಂದ ಒದ್ದಿರುತ್ತಾನೆ. ಆಗ ಪ್ರೀತಿ ಇವಳು ನನ್ನ ಕೂದಲು ಹಿಡಿದು ಎಳೆದಾಡಿ ಕೈಯಿಂದ ಮುಖದ ಮೇಲೆ ಹೊಡೆದು ಕಾಲಿನಿಂದ ನನ್ನ ಹೊಟ್ಟೆಯ ಮೇಲೆ ಒದ್ದಿರುತ್ತಾಳೆ. ಪ್ರೀತಿಯ ತಾಯಿ ಇವಳು ಕಾಲಿನಿಂದ ಕೈಯಿಂದ ಬೆನ್ನಿಗೆ ಮುಖದ ಮೇಲೆ ಹೊಡೆದು ಅವಾಚ್ಯವಾಗಿ ಬೈಯುತ್ತಿರುವಾಗ ನಮ್ಮ ಮನೆಯ ಮಾಲಿಕರಾದ ಹಣಮಂತರಾವ ಮತ್ತು ಅವರ ಹೆಂಡತಿ ಹಾಗೂ ಪುಷ್ಪಾ ಎಂಬುವರು ಬಂದು ಜಗಳ ಬಿಡಿಸಿರುತ್ತಾರೆ. ನಂತರ ಹೋಗುವಾಗ ಮಲ್ಲಿಕಾರ್ಜುನಗೆ ಯಾವುದೇ ರೀತಿ ಬೈಯುವದು ಕೇಳುವದು ಮಾಡಿದರೆ ರಂಡಿ ನಿನಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಭಯ ಬೆದರಿಕೆ ಹಾಕಿರುತ್ತಾಳೆ. ದಿನಾಂಕ:23/10/2019 ರಂದು ರಾತ್ರಿ 8.30 ಪಿ.ಎಂ ಸುಮಾರಿಗೆ ನಾನು ಮನೆ ಒಳಗೆ ಇರುವಾಗ ನನ್ನ ಗಂಡನಾದ ಮಲ್ಲಿಕಾರ್ಜುನ ಇವರ ಕುಮ್ಮಕ್ಕಿನಿಂದ ಪ್ರೀತಿ ಹಾಗೂ ಪ್ರೀತಿಯ ತಾಯಿ & ಸಹೋದರ ಇವರು ಅನಾವಶ್ಯಕವಾಗಿ ಜಗಳ ತೆಗೆದು ಕೈಯಿಂದ ಹೊಡೆಬಡೆಮಾಡಿ ನನ್ನ ಮಾನ ಹಾನಿಮಾಡಿ ಅವಾಚ್ಯವಾಗಿ ಬೈದು ಜೀವದ ಭಯ ಬೆದರಿಕೆ ಹಾಕಿದವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ  ಹೇಳಿ ಬರೆಯಿಸಿದ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 1.00 ಪಿ.ಎಂಕ್ಕೆ ಠಾಣೆಗೆ ಬಂದು ಸದರಿ ಗಾಯಾಳುವಿನ ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಬಗ್ಗೆ ಮಾಹಿತಿ.