POLICE BHAVAN KALABURAGI

POLICE BHAVAN KALABURAGI

25 February 2013

GULBARGA DISTRICT REPORTED CRIMES


ಅತ್ಯಾಚಾರ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ನನ್ನ ತಂದೆ-ತಾಯಿಯವರು ಕೂಲಿ ಕೆಲಸ ಹೋದ ವೇಳೆಯಲ್ಲಿ  ನಾನೋಬ್ಬಳೆ  ಮನೆಯಲ್ಲಿರುತ್ತಿರುವಾಗ ನನ್ನ ತಂದೆಯ ಸಹೋದರ ಮಾವನ ಮಗನಾದ ಶಿವಲಿಂಗ ತಂದೆ ದೇವಂದ್ರಪ್ಪ ಜುಮ್ಮಾನೋರ ಸಾ|| ಧೋಟಿಕೋಳ ಇತನು ನಮ್ಮ ಮನೆಗೆ ಬಂದು ನನಗೆ (ಹೆಸರು ಸೂಚಿಸಿರುವದಿಲ್ಲ) ಎರಡು (2) ತಿಂಗಳುಗಳಿಂದ ಜಬರ ದಸ್ತಿಯಿಂದ ಸಂಭೋಗ ಮಾಡುತ್ತಾ ಬಂದಿರುತ್ತಾನೆ. ಈ ವಿಷಯ ನನ್ನ ತಂದೆ-ತಾಯಿಯವರಿಗೆ ಹೇಳಿದರೆ ಬೈಯ್ಯುತ್ತಾರೆ ಅಂತಾ ತಿಳಿದು ಯಾರ ಹತ್ತಿರವು ಹೇಳಿರುವುದಿಲ್ಲ. ದಿನಾಂಕ:15-02-2013 ರಂದು ಮಧ್ಯಾಹ್ನ 3.00 ಗಂಟೆಗೆ ಮತ್ತೆ ನಾನೋಬ್ಬಳೇ  ಮನೆಯಲ್ಲಿದ್ದಾಗ ಶಿವಲಿಂಗ ಇತನು ತನ್ನ ಅಣ್ಣನ ಮನೆಗೆ ನನಗೆ ಕರೆದುಕೊಂಡು ಹೋಗಿ ನಾನು ಬೇಡ ಅಂದರು ಜಬರ ದಸ್ತಿಯಿಂದ ಸಂಭೋಗ ಮಾಡಿದನು. ದಿನಾಂಕ:23.02.2013 ರಂದು ಬೆಳೆಗ್ಗೆ ಸಮಯದಲ್ಲಿ ವಾಂತಿಯಾಗುತ್ತಿರುವದರಿಂದ ನನ್ನ ತಾಯಿಯೊಂದಿಗೆ ಆಸ್ಪತ್ರೆಗೆ ಹೋದಾಗ ವೈಧ್ಯಾಧಿಕಾರಿಗಳು ಗರ್ಭಿಣಿಯಿರುವ ಬಗ್ಗೆ ತಿಳಿಸಿರುತ್ತಾರೆ. ಈ ವಿಷಯ ಗುರು ಹಿರಿಯರಲ್ಲಿ ವಿಚಾರಿಸಿ ದೂರು ಕೊಡಲು ತಡವಾಗಿರುತ್ತದೆ ಅಂತಾ ನೊಂದ ಯುವತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ:32/2013 ಕಲಂ,448,376 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ:ದಿನಾಂಕ:25.02.2013 ರಂದು ಮಧ್ಯಾಹ್ನ 12;50 ಗಂಟೆಯ ಸಮಯಕ್ಕೆ  ಕಾರ್ಪೊರೇಷನ್ ಬ್ಯಾಂಕಿನಿಂದ 9,50,000=00 ರೂಪಾಯಿಗಳು ಡ್ರಾ ಮಾಡಿಕೊಂಡು ಸರಾಫ ಬಜಾರದಲ್ಲಿ ತನ್ನ  ಸುಜಕಿ ಎಕ್ಸಸ್ ಮೊಟಾರ ಸೈಕಲ ಡಿಕ್ಕಿಯೊಳಗಡೆ ಇಟ್ಟು ಸರಾಫ ಬಜಾರದಲ್ಲಿರುವ ನನ್ನ ಸ್ನೇಹಿತನಾದ ನಾಗೇಂದ್ರ ಪಾಟೀಲ ಇವರ ಸಂಗಡ ಮಾತನಾಡಿ ಮರಳಿ ಬಂದು ನೋಡಲಾಗಿ ಡಿಕ್ಕಿಯೊಳಗಡೆ ಇಟ್ಟಿರುವ ಹಣ ಇರಲ್ಲಿಲ ಯಾರೋ ಕಳ್ಳರು ನನ್ನ ಸುಜಕಿ ಎಕ್ಸಸ ಡಿಕ್ಕಿಯೊಳಗಿನ 9 ಲಕ್ಷ 50 ಸಾವಿರ ರೂಪಾಯಿಗಳು ಹಾಗೂ ಅದರ ಜೋತೆಗಿದ್ದ ನಾಲ್ಕು ಚೆಕ್ಕ ಬುಕ್ಕ ಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಬಸವರಾಜ ತಂದೆ ರೇವಪ್ಪಾ ಏರಿ ವಯಾ||45 ಉ|| ದಾಲ್ ಮಿಲ್ ವ್ಯಾಪಾರ್ ಸಾ|| ಬ್ಯಾಂಕ್ ಕಾಲೋನಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:52/2013 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀಮತಿ ದೊಂಡಬಾಯಿ ಗಂಡ ಅಶೋಕ ಹೌಶೆಟ್ಟಿ ಸಾ:ದುದ್ದನಿ ತಾ:ಅಕ್ಕಲಕೋಟ ಜಿಲ್ಲಾ:ಸೋಲಾಪೂರ ರವರು ನನ್ನ ಗಂಡ ಅಶೋಕ ತಂದೆ ಸಾದಾಶಿವ ಹೌಶೆಟ್ಟಿ ಇವರು ತನ್ನ ಮೋಟರ್ ಸೈಕಲ್ ನಂ:ಎಮ್.ಹೆಚ್.15 ಎಟಿ-9700 ನೇದ್ದರ ಮೇಲೆ ತನ್ನ ಅಣ್ಣನ ಮಗನಾದ ಸೂರ್ಯಕಾಂತ ಇತನಿಗೆ ಕಾಮಣಿ ಔಷಧ ಹಾಕಿಕೊಂಡು ಬರಲು ದಿನಾಂಕ:24/02/2013 ರಂದು ಬೆಳಿಗ್ಗೆ ಹೋಗುತ್ತಿರುವಾಗ ಚಲಗೇರಾ ರಸ್ತೆಯಲ್ಲಿ ಅತೀವೇಗದಿಂದ ನಡೆಯಿಸಿ ನಿಂಬಾಳ ಕೆರೆಯ ಹತ್ತಿರ ತೆಗ್ಗಿನಲ್ಲಿ ಮೋಟರ್ ಸೈಕಲ್ ಸಮೇತ ಬಿದ್ದು ಅಫಘಾತವಾಗಿ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಜೋತೆಗಿದ್ದ ಸೂರ್ಯಕಾಂತನಿಗೆ ಎಡಗೈಗೆ ಭಾರಿ ಪೆಟ್ಟಾಗಿರುತ್ತದೆ. ರಸ್ತೆಯಲ್ಲಿ ಬ್ರಿಡ್ಜ್ ಕೆಲಸ ಮಾಡಿಸುತ್ತಿದ್ದ ಗುತ್ತಿಗೆದಾರ ಮತ್ತು ಇಂಜಿನಿಯರ ರವರು ಯಾವದೇ ಮುನ್ನೆಚ್ಛರಿಕೆಯ ಸೂಚನೆಯ ಫಲಕಗಳು ಹಾಕದೆ ಇರುವುದರಿಂದ ಅಫಘಾತ ಸಂಭವಿಸಿರುತ್ತದೆ ಅಂತಾ ಶ್ರೀಮತಿ ದೊಂಡಭಾಯಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:22/2013 ಕಲಂ: 279, 338, 304(ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:24-02-2013 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಬೀಮ್ಮಳ್ಳಿ ಗ್ರಾಮದ ಸೀಮಾಂತರದಲ್ಲಿ ಬರುವ ವಿಠಲ ಜಮಾದಾರ ಇವರ ಹೊಲದಲ್ಲಿ ಜೂಜಾಟ ಆಡುತ್ತಿರುವ ಮಾಹಿತಿ ಬಂದ ಮೇರೆಗೆ  ಡಿಎಸ್‌ಪಿ ಗ್ರಾಮೀಣ ಉಪ-ವಿಭಾಗ ಮತ್ತು ಸಿಪಿಐ ಗ್ರಾಮೀಣ  ವೃತ್ತ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಪಿ.ಎಸ.ಐ ಶ್ರೀ ಆನಂದರಾವ ರವರು ತಮ್ಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ಮಹ್ಮದ ಶಫೀ ತಂದೆ ಚಾಂದಸಾಬ ಮಡಕಿ ಸಾ||ಭೀಮಳ್ಳಿ, ಸಂತೋಷ ತಂದೆ ಕಾಶಿನಾಥ ಪಾಟೀಲ ಸಾ: ಭೀಮಳ್ಳಿ, ಬಸವರಾಜ ತಂದೆ ರಾಜೇಂದ್ರ ಗುತ್ತೆದಾರ ಸಾ: ಭೀಮಳ್ಳಿ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 6150/- ರೂಪಾಯಿಗಳು ಮತ್ತು ಜೂಜಾಟದ ಎಲೆಗಳು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ: 109/2013 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.