POLICE BHAVAN KALABURAGI

POLICE BHAVAN KALABURAGI

31 January 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ
:
ಶ್ರೀ ಶಿವಶಂಕರ ತಂದೆ ಬಸವಂತರಾಯ
ಸಾ:ಮನೆ ನಂ 11-/823 ಬಸವ ನಗರ ಗುಲಬರ್ಗಾರವರು ನನ್ನ ಮಗ ಗೌತಮ ಇತನು ದಿನಾಂಕ 31-01-2012 ರಂದು 9-40 ಗಂಟೆಗೆ ಮಗನಾದ ಗೌತಮ ಇತನು ಶಾಂತಿ ನಗರದಲಿದ್ದ ಚಾಣುಕ್ಯ ಶಾಲೆ ಎದುರು ರೋಡಿನ ಬಾಜು ನಿಂತಿರುವಾಗ ಆಟೋರಿಕ್ಷಾ ನಂ ಕೆಎ-32 1869 ನೇದ್ದರ ಚಾಲಕ ಶಾಂತಿ ನಗರ ಕ್ರಾಸ್ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಮಗನಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಾಗೋಳಿಸಿ ತನ್ನ ಆಟೋರಿಕ್ಷಾ ಸಮೇತ ಹೊರಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 16/2012 ಕಲಂ: 279,337 ಐ.ಪಿ.ಸಿ ಸಂ 187 ಐ.ದಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:
ಶ್ರೀಶೈಲ ತಂದೆ ಅಂದಪ್ಪ ಕೊಳಸೂರೆ ಸಾ:ಕಿಣ್ಣಿಅಬ್ಬಾಸ್ ರವರು ನಾನು ದಿನಾಂಕ: 26/01/2012 ರಂದು ರಾತ್ರಿ 8:30 ಗಂಟೆಗೆ ವಾಗ್ದಾರಿ ಆಳಂದ ರಸ್ತೆಯ ಕಲ್ಯಾಣ ಗುಡ್ಡದ ಹತ್ತಿರ ತಿರುವಿನಲ್ಲಿ ಲಾರಿ ನಂಬರ ಎಮ್.ಡಬ್ಲೂ.ಟಿ 8245 ನೇದ್ದರ ಚಾಲಕನು ನನಗೆ ಮತ್ತು ನನ್ನ ಚಿಕ್ಕಮ್ಮ ನಿಂಬ್ಬೆವ್ವ ಇವಳಿಗೆ ಹಾಗು ಪಂಡರಿಗೆ ರಕ್ತ ಗಾಯ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 01/2012 ಕಲಂ 279,337,338, ಐಪಿಸಿ ಸಂಗಡ 187 ಐ,ಎಮ್,ವಿ ಆಕ್ಷ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಆಳಂದ ಪೊಲೀಸ ಠಾಣೆ:
ಹಲ್ಲೆ ಪ್ರಕರಣ:
ಇಬ್ರಾಹಿಂ ತಂದೆ ರಹಿಮಾನ ಸಾಬ ಭಾಗವಾನ ಸಾ:ಖಾನಬೌಡಿ ಆಳಂದ ರವರು ನಾನು ದಿನಾಂಕ 30/01/2012 ರಂದು 3.30 ಗಂಟೆಗೆ ನಾನು ಉಮರ್ಗಾ ರೋಡಿನಲ್ಲಿ ಇರುವ [ದುದನಿ] ಕಸ್ತೂರಿ ಬಾರ ಹತ್ತಿರ ನಾಗೇಂದ್ರ ಬಿರಾದಾರ ರವರ ಪಾನ ಅಂಗಡಿ ಹೋಗಿ 2 ರೂ ನಾಣ್ಯ ಕೊಟ್ಟು ಬೀಡಿಕೊಡು ಅಂತಾ ಹೇಳಿದೆನು, ನಾಗೇಂದ್ರಪ್ಪನು 2 ಬೀಡಿಗಳನ್ನು ಕೊಟ್ಟನ್ನು ಅದಕ್ಕೆ ನಾನು 2 ರೂ ಗೆ 4 ಬೀಡಿಗಳು ಬರುತ್ತವೆ ಅಂತಾ ಹೇಳಿದಕ್ಕೆ ನಾಗೇಂದ್ರನು ನೀನು ಒಂದೆ ರೂಪಾಯಿಯನ್ನು ಕೊಟ್ಟಿದಿ 2 ರೂ ನಾಣ್ಯ ಕೊಟ್ಟಿರುವದಿಲ್ಲ ಅಂತಾ ಜಗಳಕ್ಕೆ ಬಿದ್ದು ಕೈ ಮುಷ್ಠಿಮಾಡಿ ನನ್ನ ಹೊಟ್ಟಗೆ ಅಲ್ಲಲ್ಲಿ ಹೊಡೆದನು , ಮತ್ತು ಅಟೋ ಮೋಬೈಲ ಅಂಗಡಿಯವನಾದ ಸಿದ್ದು ಗೌಡ ಇತನು ಸಹ ಬಂದವನೆ ಕಲ್ಲಿನಿಂದ ಮತ್ತು ರಾಡಿನಿಂದ ಹೊಡೆದನು ಇನ್ನೂ ಇನ್ನೂ ಇಬ್ಬರು ಸಹ ಹೊಡೆದಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನ: 22/2012 ಕಲಂ 324.323.504.ಸಂ.34 IPC ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜಾತಿ ನಿಂದನೆ ಪ್ರಕರಣ:
ಮುದೋಳ ಠಾಣೆ:
ಶ್ರೀ ಲಕ್ಷಮಪ್ಪಾ ತಂದೆ ಮಲ್ಲಪ್ಪಾ ಹರಿಜನ ಸಾ|| ಕೊಂತನಪಲ್ಲಿಗ್ರಾಮ ರವರು ನಾನು ಲಕ್ಷಯ್ಯ ವಡ್ಡರ ಹುಡಾ ಇವರ ಹೊಲ ನಮ್ಮೂರ ಗೇಟ ಹತ್ತಿರ ಇರುತ್ತದೆ. ನಾನು ಇವರ ಹೊಲದಲ್ಲಿ ಆಳು ಮಗನಾಗಿ ದುಡಿಯುತ್ತಿರುತ್ತೆನೆ , ಲಕ್ಷ್ಮಯ್ಯ ಇವರ ಹೊಲದಲ್ಲಿ ನೀರಿನ ಪೈಪ ಯಾರೋ ಮುರಿದಿದ್ದರು ಇದರಿಂದ ನಾನು ಯಾರು ಪೈಪ ಮುರಿದಿದ್ದಾರೆ ಅಂತಾ ಬೈದ್ದದರಿಂದ ಹೊಲದ ಪಕ್ಕದ ಹತ್ತಿರ ಹೊಲ ಇರುವ ರವಿ ಗಾಣಗಾಪೂರ ಹಾಗು ಆತನ ತಮ್ಮಂದಿರಾದ ಶಿವು, ಗಣಪತಿ, ಮತ್ತು ನಾಗಪ್ಪಾ ಇವರು ನನ್ನನ್ನು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಹೊಡೆ ಬಡೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 10/2012 ಕಲಂ, 341, 323, 504, ಸಂಗಡ 34 ಐಪಿಸಿ ಮತ್ತು 3(1) (10) ಎಸ.ಸಿ ಮತ್ತು ಎಸ.ಟಿ ಆಕ್ಟ ಪ್ರಕಾರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

GULBARGA DIST REPORTED CRIME

ವಾಯು ಮಾಲಿನ್ಯ ಕಲುಷಿತಗೊಳಿಸುತ್ತಿರುವ ಬಗ್ಗೆ :
ಗುಲಬರ್ಗಾ ಗ್ರಾಮೀಣ ಠಾಣೆ
:
ಶ್ರೀ ಜಟ್ಟೆಪ್ಪ ತಂದೆ ನಾಗಪ್ಪ ಜಾನಕರ ಉ: ಹಿರಿಯ ನಿರ್ಮಲ್ಯ ನಿರೀಕ್ಷಕರು ಮಾಹಾ ನಗರ ಪಾಲಿಕೆ ಗುಲಬರ್ಗಾರವರು ನಾನು ದಿನಾಂಕ 31-01-12 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಪರೀಶಿಲನೆ ಮಾಡಲು ಉಸ್ಮಾನಮಿಯ್ಯಾ ತಂದೆ ಖಾಸೀಮ ಅಲಿ ಸಾ||ಚಾಂದಬೀಬಿ ಬಿ.ಎಡ್. ಕಾಲೇಜ ಹತ್ತಿರ ಬುಲಂದ ಪರವೇಜ ಕಾಲನಿ ಗುಲಬರ್ಗಾ, ಮಹ್ಮದ ಜಾಕೀರ ಅಬ್ದುಲ ಸತ್ತಾರ ಸಾ||ಇಸ್ಲಾಂಬಾದ ಕಾಲನಿ ಗುಲಬರ್ಗಾ, ಮಹ್ಮದ ರಜಾಕ ತಂದೆ ಉಸ್ಮಾನಮಿಯ್ಯಾ ಸಾ: ಚಾಂದಬೀಬಿ ಬಿ.ಎಡ್. ಕಾಲೇಜ ಹತ್ತಿರ ಬುಲಂದ ಪರವೇಜ ಕಾಲನಿ ಗುಲಬರ್ಗಾ ಅಹ್ಮದ ಪಾಶಾ ತಂದೆ ಬಾಬುಮಿಯ್ಯಾ ಸಾ||ಇಸ್ಲಾಂಬಾದ ಕಾಲನಿ ಗುಲಬರ್ಗಾ ಇವರು ಗುಲಬರ್ಗಾ ಮಾಹಾ ನಗರ ಪಾಲಿಕೆಯವರಿಂದ ಪರವಾನಿಗೆ ಪಡೆದುಕೊಳ್ಳದೇ ಮಿಲ್ಲತ ನಗರ ಬಡಾವಣೆಯ ಲತೀಫ ತಂದೆ ಅಬ್ದುಲ ರಜಾಕ ಇವರಿಗೆ ಸೇರಿದ ಸ್ಥಳದಲ್ಲಿ ರಾತ್ರಿ ಸಮಯದಲ್ಲಿ ಅನಧಿಕೃತವಾಗಿ ಪ್ರಾಣಿಗಳ ಕೊಳೆತು ಮಾಂಸ (ಕರಳು) ಮತ್ತು ಚರ್ಬಿ ಸಂಗ್ರಹಿಸಿದ್ದು, ಇದರಿಂದ ಸುತ್ತ ಮುತ್ತಲಿನ ಸಂಪೂರ್ಣ ಪ್ರದೇಶ ದುವಾರ್ಸನೆಯಿಂದ ಕುಲಸಿತಗೊಂಡು ಸಾರ್ವಜನಿಕರ ಆರೋಗ್ಯ ಹಾನಿ ಉಂಟಾಗುವ ಅಥವಾ ರೋಗ ಹರಡುವದು ಮತ್ತು ವಾಯು ಮಾಲಿನ್ಯ ಕಲುಷಿತಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 30/2012 ಕಲಂ ಕಲಂ 269, 278, 290, 336 ಸಂ.149 ಐಪಿಸಿ ಮತ್ತು ಕರ್ನಾಟಕ ಕಾರ್ಪೋರೇಶನ ಎಕ್ಟ ಕಲಂ 387 ಮತ್ತು ಎನ್ವವಾರಮೆಂಟ್ ಪ್ರೊಟೆಕ್ಷನ ಎಕ್ಟ 1986 ಕಲಂ 7,8, 15 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

30 January 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ
:
ಶ್ರೀಮತಿ ಮಹಾದೇವಿ ಗಂಡ ಸಿದ್ದಣ್ಣಾ ಶಹಾಬಾದ ಸಾ:; ಹನುಮಾನ ದೇವಸ್ಥಾನದ ಹತ್ತಿರ ಜಗತ ಗುಲಬರ್ಗಾ ರವರು ನಾನು ದಿನಾಂಕ: 29-01-2012 ರಂದು 9=30 ಪಿ.ಎಮ್.ಕ್ಕೆ ಪಟೇಲ್ ಸರ್ಕಲದಿಂದ ಜಗತ ಸರ್ಕಲ ಮೇನ ರೋಡಿನಲ್ಲಿ ಬರುವ ಅನ್ನಪೂರ್ಣ ಆಸ್ಪತ್ರೆಯ ಕ್ರಾಸ್ ಹತ್ತಿರ ರೋಡಿನ ಮೇಲೆ ಬರುತ್ತಿರುವಾಗ ಮೋಟಾರ ಸೈಕಲ ನಂ:ಕೆಎ 38 ಹೆಚ್ 521 ನೇದ್ದರ ಚಾಲಕ ಜಗತ ಸರ್ಕಲ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದಾಗ ನನಗೆ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 14/2012 ಕಲಂ: 279,337 ಐ.ಪಿ.ಸಿ ಸಂ 187 ಐ.ದಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಶ್ರೀರಾಜೇಶ ತಂದೆ ಚಂದ್ರಶೇಖರ ಸಿಂಗೆ ಸಾ:ಮನೆ ನಂ 11-9543/1 ಅಶೋಕ ನಗರ ಗುಲಬರ್ಗಾರವರು ನಾನು ದಿನಾಂಕ 30-01-2012 ರಂದು 9 ಗಂಟೆ ಸುಮಾರಿಗೆ ಆರ್.ಪಿ ಸರ್ಕಲದಿಂದ ಕೇಂದ್ರ ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಬರುವ ಸಂಗಮೇಶ್ವರ ಆಸ್ಪತ್ರೆ ಎದುರು ರೋಡಿನ ಮೇಲೆ ಹೊರಟಾಗ ಮೋಟಾರ ಸೈಕಲ ನಂ ಕೆಎ-02 ಹೆಚ್ ಇ 3609 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 15/2012 ಕಲಂ: 279,337 ಐ.ಪಿ.ಸಿ ಸಂ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:
ಸುಲೇಪೇಟ ಠಾಣೆ
:ಶ್ರೀ ರಾಜಪ್ಪಾ ತಂದೆ ಮರೆಪ್ಪಾ ತಳವಾರ ಸಾ|| ತೇಗಲತಿಪ್ಪಿ ರವರು ನಾನು ದಿನಾಂಕಃ 30.01.2012 ರಂದು 11.30 ಎ.ಎಮ್ಮ.ಕ್ಕೆ ಮುಂಜಾನೆ ಕೆಲಸದ ನಿಮಿತ್ಯ ಗಡೀಕೇಶ್ವರ ಪೋಸ್ಟ ಆಫೀಸಗೆ ಹೋಗಿ ವಾಪಸ್ ತೇಗಲತಿಪ್ಪಿಗೆ ಬರುವ ಕುರಿತು ಗಡಿಕೇಶ್ವರ ಗ್ರಾಮದ ಅಂಬೇಡ್ಕರ ಚೌಕ ಹತ್ತಿರ ಬರುತ್ತಿರುವಾಗ ಮುಂಜಾನೆ 8.30 ಗಂಟೆಯ ಸುಮಾರಿಗೆ ಗ್ರಾಮದ ರಮೇಶ ತಂದೆ ಶರಣಪ್ಪಾ ಭೈಲ ಮತ್ತು ಇತರರು ಸೇರಿ ಕೊಂಡು ನನಗೆ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಮತ್ತು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 6/2012 ಕಲಂ 323,324,341,504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES


ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:
ಶ್ರೀ ಹಣಮಂತ ತಂದೆ ಲಕ್ಷ್ಮಣ ಮಾನೆ ಸಾ:ಭೀಮಶಪ್ಪ ನಗರ ಶಾಹಾಬಾದ ರವರು ನನ್ನ ತಮ್ಮ ವೇಂಕಟ @ ವೇಂಕಟಿ ಇತನು ದಿನಾಂಕ 28/1/2012 ರಂದು ಸಾಯಂಕಾಲ 16:00 ಗಂಟೆಯ ಸುಮಾರಿಗೆ ಕೂಲಿ ಕೆಲಸಕ್ಕೆ ಶಾಹಾಪೂರಕ್ಕೆ ಹೋಗಿ ಬರುತ್ತೆನೆ ಎಂದು ಮನೆಯಲ್ಲಿ ನನಗೆ ಮತ್ತು ನನ್ನ ತಾಯಿಗೆ ಹೇಳಿ ಹೋಗಿರುತ್ತಾನೆ. ದಿನಾಂಕ 29/1/2012 ರಂದು ಸಾಯಂಕಾಲ 16:30 ಗಂಟೆಯ ಸುಮಾರಿಗೆ ಫರಹತಾಬಾದ ಪೊಲೀಸರು ದೂರವಾಣಿ ಮುಖಾಂತರ ವಿಷಯ ತಿಳಿಸಿದೇನೆಂದರೆ. ಮದ್ಯಾಹ್ನ 14:30 ಗಂಟೆಯ ಸುಮಾರಿಗೆ ಭೀಮಾ ಬ್ರೀಡ್ಜ, ಹಸನಾಪೂರ ಕ್ರಾಸ ಮದ್ಯೆ ರಾಷ್ಟ್ರೀಯ ಹೆದ್ದಾರಿ ಮೇಲೆ ಒಬ್ಬ ಮನುಷ್ಯನು ಮೃತ್ತ ಪಟ್ಟಿದ್ದಾನೆ ಅವನ ಜೇಬಿನಲ್ಲಿ ಡೈರಿನಲ್ಲಿ ನಿಮ್ಮ ಮೊಬೈಲ ನಂಬರ ಇದ್ದು ಕೂಡಲೆ ಮೃತ್ತ ದೇಹವನ್ನು ಗುರುತಿಸಲು ಹೇಳಿದ ಮೇರೆಗೆ ನಾನು ಮತ್ತು ನನ್ನ ತಾಯಿ ನನ್ನ ಹೆಂಡತಿ ನಮ್ಮೂರಿನವರಾದ ನಾಗರಾಜ ಧೋತರೆ. ಭಾಲಪ್ಪಾ ಮರತೂರ ಇವರೊಂದಿಗೆ ಆಸ್ಪತ್ರೆಗೆ ಬಂದು ಮೃತ್ತ ದೇಹವನ್ನು ನೋಡಲಾಗಿ ನನ್ನ ತಮ್ಮ ವೇಂಕಟ @ ವೇಂಕಟಿಯಾಗಿದ್ದು ಆತನು ರಸ್ತೆಯ ಎಡಭಾಗದಲ್ಲಿ ಹಸನಾಪೂರ ಕ್ರಾಸ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ಒಂದು ವಾಹನ ಚಾಲಕ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ತಮ್ಮನಿಗೆ ಡಿಕ್ಕಿ ಪಡಿಸಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ್ತ ಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 12/2012 ಕಲಂ 279 304(ಎ) ಐ,ಪಿ.ಸಿ ಸಂಗಡ 187 ಐ.ಎಮ್.ವಿ ಎಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ದಿನಾಂಕ 29-01-12 ರಂದು ಮಧ್ಯಾಹ್ನ 4-30 ಗಂಟೆ ಸುಮಾರಿಗೆ ಸಿಂದಗಿ (ಬಿ) ಸೀಮೆಯಲ್ಲಿ ಬರುವ ಹಣಮಂತ ಲೊಡ್ಡನ ಹೊಲದಲ್ಲಿ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಂಚರ ಸಮಕ್ಷಮ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ಹೋಗಿ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ಶ್ರೀ ಹಣಮಂತ ತಂದೆ ಬಸವಣಪ್ಪ ಲೊಡ್ಡನ ಸಂಗಡ 3 ಜನರು ಇವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 6140 ರೂ. ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 29/2012 ಕಲಂ 87 ಕೆ.ಪಿ.ಎಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

29 January 2012

GULBARGA DIST REPORTED CRIMES


ಜಾತಿ ನಿಂದನೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:
ಶ್ರೀ ಚಂದ್ರಶೇಖರ ತಂದೆ ಮರೇಪ್ಪ ಹೊಸಮನಿ ಸಾ: ರಾಜವಾಳ ರವರು ನಾನು ದಿನಾಂಕ: 26/01/2012 ರಂದು ಸಾಯಂಕಾಲ ಗುರಪ್ಪ ತಂದೆ ಗಂಗಪ್ಪ ಸೂಗುರ, ಶರಣಪ್ಪ , ಮತ್ತು ಮಲ್ಲಪ್ಪ ಇವರು ನಮ್ಮ ತಂದೆ ಮರೆಪ್ಪ ಹೊಸಮನಿ ಇವರಿಗೆ ಸರಾಯಿ ಕುಡಿದ ಹಣ ಕೋಡುವ ವಿಷಯದಲ್ಲಿ ಜಗಳ ತೆಗೆದು ಹೊಡೆದು ಜಾತಿ ಎತ್ತಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ . ಬಿಡಿಸಲು ಹೋದ ನನಗೆ ಮತ್ತು ನನ್ನ ತಾಯಿಗೆ ನೂಕ್ಕಿಸಿ ಕೊಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 14/2012 ಕಲಂ 323, 324, 354, 355, 504, 506, ಸಂಗಡ 34 ಐಪಿಸಿ ಮತ್ತು ಕಲಂ 3 (1) (10) ಎಸ್.ಸಿ. ಎಸ್..ಟಿ ಪಿ. ಎ. ಅಕ್ಟ 1989 ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀಮತಿ ಮಲ್ಲಮ್ಮ ಗಂಡ ಚಂದ್ರಕಾಂತ ನಾಟಿಕಾರ ಸಾ|| ಎಸ.ಎಂ.ಕೃಷ್ಣಾ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ:27-01-2012 ರಂದು ರಾತ್ರಿ ಸುಮಾರಿಗೆ ಮನೆಯಲ್ಲಿ ಇದ್ದಾಗ ಕಲ್ಯಾಣಿ, ಕಾಶಿನಾಥ ಮಡಕಿ ಇಬ್ಬರು ಬಂದು ನನ್ನ ಗಂಡನ ಹೆಸರು ಕೂಗಿದಾಗ ನಾನು ಹೊರಗೆ ಬಂದು ಕೇಳಲು ನಿನ್ನ ಗಂಡ ಎಲ್ಲಿದ್ದಾನೆ ಅಂತಾ ಕೇಳಿದರು ನಾನು ಮನೆಯಲ್ಲಿಲ್ಲ ಅಂದಿದಕ್ಕೆ ನಿನ್ನ ಗಂಡ ಕೊಡಬೇಕಾದ ಹಣ ಕೊಡಬಾರದೆಂದು ಗಂಡನನ್ನು ಮನೆಯಲ್ಲಿ ಮುಟ್ಟಿದ್ದು ಮನೆಯಲ್ಲಿ ಇಲ್ಲಾ ಅಂತಾ ಹೇಳುತ್ತಿ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ತಲೆ ಮತ್ತು ಬೆನ್ನು ಮೆಲೆ ಹೊಡೆ ಮಡಿ ಅವಮಾನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:28/2012 ಕಲಂ 504, 323, 341, 354, 506, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

GULBARGA DIST REPORTED CRIMES

ಜಾತಿ ನಿಂದನೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:
ಶ್ರೀ ಚಂದ್ರಶೇಖರ ತಂದೆ ಮರೇಪ್ಪ ಹೊಸಮನಿ ಸಾ: ರಾಜವಾಳ ರವರು ನಾನು ದಿನಾಂಕ: 26/01/2012 ರಂದು ಸಾಯಂಕಾಲ ಗುರಪ್ಪ ತಂದೆ ಗಂಗಪ್ಪ ಸೂಗುರ, ಶರಣಪ್ಪ , ಮತ್ತು ಮಲ್ಲಪ್ಪ ಇವರು ನಮ್ಮ ತಂದೆ ಮರೆಪ್ಪ ಹೊಸಮನಿ ಇವರಿಗೆ ಸರಾಯಿ ಕುಡಿದ ಹಣ ಕೋಡುವ ವಿಷಯದಲ್ಲಿ ಜಗಳ ತೆಗೆದು ಹೊಡೆದು ಜಾತಿ ಎತ್ತಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ . ಬಿಡಿಸಲು ಹೋದ ನನಗೆ ಮತ್ತು ನನ್ನ ತಾಯಿಗೆ ನೂಕ್ಕಿಸಿ ಕೊಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 14/2012 ಕಲಂ 323, 324, 354, 355, 504, 506, ಸಂಗಡ 34 ಐಪಿಸಿ ಮತ್ತು ಕಲಂ 3 (1) (10) ಎಸ್.ಸಿ. ಎಸ್..ಟಿ ಪಿ. ಎ. ಅಕ್ಟ 1989 ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀಮತಿ
ಮಲ್ಲಮ್ಮ ಗಂಡ ಚಂದ್ರಕಾಂತ ನಾಟಿಕಾರ ಸಾ|| ಎಸ.ಎಂ.ಕೃಷ್ಣಾ ಕಾಲೋನಿ ಗುಲಬರ್ಗಾ ರವರು ನಾನು
ದಿನಾಂಕ:27-01-2012 ರಂದು ರಾತ್ರಿ ಸುಮಾರಿಗೆ ಮನೆಯಲ್ಲಿ ಇದ್ದಾಗ ಕಲ್ಯಾಣಿ, ಕಾಶಿನಾಥ ಮಡಕಿ ಇಬ್ಬರು ಬಂದು ನನ್ನ ಗಂಡನ ಹೆಸರು ಕೂಗಿದಾಗ ನಾನು ಹೊರಗೆ ಬಂದು ಕೇಳಲು ನಿನ್ನ ಗಂಡ ಎಲ್ಲಿದ್ದಾನೆ ಅಂತಾ ಕೇಳಿದರು ನಾನು ಮನೆಯಲ್ಲಿಲ್ಲ ಅಂದಿದಕ್ಕೆ ನಿನ್ನ ಗಂಡ ಕೊಡಬೇಕಾದ ಹಣ ಕೊಡಬಾರದೆಂದು ಗಂಡನನ್ನು ಮನೆಯಲ್ಲಿ ಮುಟ್ಟಿದ್ದು ಮನೆಯಲ್ಲಿ ಇಲ್ಲಾ ಅಂತಾ ಹೇಳುತ್ತಿ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ತಲೆ ಮತ್ತು ಬೆನ್ನು ಮೆಲೆ ಹೊಡೆ ಮಡಿ ಅವಮಾನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:28/2012 ಕಲಂ 504, 323, 341, 354, 506, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

28 January 2012

GULBARGA DIST REPORTED CRIME

ಹಣದ ಬ್ಯಾಗ್ ಕಳ್ಳತನ ಮಾಡಿದ ಬಗ್ಗೆ:

ಸ್ಟೇಶನ ಬಜಾರ ಠಾಣೆ: ಶ್ರೀ ಸಯದ್ ಅಲಿಉಲ್ಲಾ ತಂದೆ ಸಯದ್ ಖುದ್ರತುಲ್ಲಾ ಸಾ:ಮ.ನಂ.11-1041/49/74 ಖದೀರ ಫಂಕ್ಷನ ಹಾಲ್ ಎದುರುಗಡೆ ಎಂ.ಎಸ್.ಕೆ.ಮಿಲ್ ಗುಲಬರ್ಗಾರವರು ನಾನು ಇಂದು ದಿನಾಂಕ:28.01.2012 ರಂದು ಮಧ್ಯಾಹ್ನ 1240 ಪಿ.ಎಮ್.ಕ್ಕೆ ಐ.ಡಿ.ಬಿ.ಎಸ್. ಬ್ಯಾಂಕಿನಿಂದ 50,000/- ರೂಪಾಯಿ ಡ್ರಾ ಮಾಡಿಕೊಂಡು ಕೋರ್ಟ ರೋಡ ಮುಖಾಂತರ ಭೀಮಳ್ಳಿ ಪೆಟ್ರೋಲ ಪಂಪ್ ಹತ್ತಿರ ಬರುತ್ತಿರುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಪೆಟ್ರೋಲ್ ಪಂಪ ಹತ್ತಿರ ನಿಂತಿದ್ದು ಅದರಲ್ಲಿ ಒಬ್ಬನು ಬಂದು ನಿಮ್ಮ ಬೈಕಿನ ಇಂಧನ ಸೋರುತ್ತಿದೆ ಅಂತಾ ಹೇಳಿದನು ನನ್ನ ಗಮನ ಬೇರೆ ಕಡೆಗೆ ಸೆಳೆದು ಇನ್ನೊಬ್ಬ ವ್ಯಕ್ತಿ ಹಣವಿರುವ ಕೆಂಪು & ಗ್ರೇ ಕಲರ್ ಬ್ಯಾಗನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ.9/2012 ಕಲಂ.379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

27 January 2012

GULBARGA DIST REPORTED CRIME

ಹಲ್ಲೆ ಪ್ರಕರಣ:
ರೋಜಾ ಠಾಣೆ: ದಿನಾಂಕ:26/01/2012 ರಂದು ನಮ್ಮ ಕಾಲೇಜಿನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಫರಾನಾ ಕಾಲೇಜಿನಲ್ಲಿ ಸಾಯಂಕಾಲ 4 ಗಂಟೆ ಸುಮಾರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದರಿಂದ ಫರಾನಾ ಕಾಲೇಜಿಗೆ ಬಂದಿದ್ದು ಸ್ವಲ್ಪ ಹೊತ್ತು ಕಾರ್ಯಕ್ರಮಗಳು ನೋಡಿ ಕಾಲೇಜಿನ ಮುಂದೆ ಹೊರಗಡೆ ಬಂದಾಗ ಅಲ್ಲಿ ಜೈನ್ ಬಿಜಾಪುರಿ ಮತ್ತು ಅವನ ಜೊತೆಗೆ ಇನ್ನೊಬ್ಬ ಹುಡುಗ ಅವಾಚ್ಯವಾಗಿ ಬೈದು ಕರೆದು ನನಗೆ ನೀನು 10,000/-ರೂಪಾಯಿಗಳು ಕೊಡುವಂತೆ ಕೇಳಿದರು ಆಗ ನಾನು ನಾನು ಯಾಕೆ ನಿಮಗೆ ಹಣ ಕೊಡಬೇಕು ಅಂತಾ ಕೇಳಿದಕ್ಕೆ ಜೈನ ಬಿಜಾಪುರಿ ಇತನು ಬೆಲ್ಟ ತೆಗೆದು ನನಗೆ ಹೊಡೆಯಲು ಪ್ರಾರಂಭಿಸಿದನು, ಅವನ ಜೋತೆಗೆ ಇದ್ದ ಅವನ ಗೆಳೆಯ ಅವನು ಸಹ ಕೈ ಮುಷ್ಟಿ ಮಾಡಿ ಹೊಟ್ಟೆಯಲ್ಲಿ ಬೆನ್ನಿನಲ್ಲಿ ಹೊಡೆದನು. ಅವನ ಹೆಸರು ನನಗೆ ಗೊತ್ತಿಲ್ಲ, ನೋಡಿದರೆ ಗುರ್ತಿಸುತ್ತೇನೆ. ಅವರಿಬ್ಬರೂ ನನಗೆ ಟವೇರಾ ಗಾಡಿ ನಂ: ಕೆಎ-34-ಎಮ್.ಡಿ-2007 ಪರ್ಪಲ್ ಕಲರ್ ಗಾಡಿಯಲ್ಲಿ ಒತ್ತಾಯ ಪೂರ್ವಕವಾಗಿ ಗಾಡಿಯಲ್ಲಿ ಕೂಡಿಸಿಕೊಂಡು ಸೋನಿಯಾ ಗಾಂಧಿ ಕಾಲೋನಿಯ ಹತ್ತಿರ ಖುಲ್ಲಾ ಬಯಲು ಜಾಗೆಯ ಹತ್ತಿರ ಹೊಸದಾಗಿ ಕಟ್ಟುತ್ತಿರುವ ಕಟ್ಟಡ ಕೋಣೆಯಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಕೂಡಿ ಹಾಕಿ ಅಲ್ಲಿಯೂ ಸಹ ನನಗೆ ಜೈನ ಬಿಜಾಪುರಿ ಇತನು ಬೇಲ್ಟದಿಂದ ಹೊಡೆದಿದ್ದರಿಂದ ರಕ್ತ ಕಂದುಗಟ್ಟಿದ್ದು ಅಲ್ಲದೆ ಕೂದಲನ್ನು ಹಿಡಿದು ಗೋಡೆಗೆ ಹೊಡೆದಿದ್ದರಿಂದ ಹಿಂದಲೆಯಲ್ಲಿ ಭೂಗುಟಿ ಬಂದು ರಕ್ತ ಕಂದು ಗಟ್ಟಿರುತ್ತದೆ. ಅಲ್ಲದೆ 2 ಗಲ್ಲಗಳಿಗೆ ಹೊಡೆದಿದ್ದು ಬಾವು ಬಂದಿರುತ್ತದೆ.ಅಲ್ಲಿ ನನಗೆ ಸುಮಾರು 2 ಗಂಟೆಗಳ ಕಾಲ ಆ ಮನೆಯಲ್ಲಿಯೆ ಕೂಡಿ ಹಾಕಿ ತಮ್ಮ ಹತ್ತಿರ ಇದ್ದ ಟಾವೇಲದಿಂದ ನನ್ನ ಕುತ್ತಿಗೆಗೆ ಒತ್ತಿ ಹಿಡಿದು ಕೊಲೆ ಮಾಡಲು ಪ್ರಯತ್ನಿಸಿದ್ದು ಹಾಗೂ ಹೀಗೂ ಅವರು ನನ್ನ ಕುತ್ತಿಗೆಗೆ ಹಾಕಿರುವ ಟಾವೇಲನ್ನು ಕೈಗಳಿಂದ ಹಿಡಿದು ಜೊಗ್ಗಿಕೊಂಡು ಸತ್ತವನಂತೆ ಒಮ್ಮೆಲೆ ಬಿದ್ದಿದ್ದು ಆಗ ಅವರು ನಾನು ಸತ್ತಿರುತ್ತೇನೆಂದು ಭಾವಿಸಿ ನನ್ನ ಕುತ್ತಿಗೆಗೆ ಹಾಕಿದ ಟವೇಲ ಬಿಚ್ಚಿದ್ದು ಅಷ್ಟರಲ್ಲಿ ಅಲ್ಲಿ ಇನ್ನೋಬ್ಬ ಇಮ್ತಿಯಾಜ ಬಿಜಾಪುರಿಯವರು ಅಲ್ಲಿಗೆ ಬಂದು ಏ ಸಾಲೆಕೊ ಖತಂಕರೋ ಅಂತಾ ಹೇಳುತ್ತಿರುವ ವಿಷಯ ನಾನು ಬಿದ್ದಲ್ಲೆ ನೋಡಿ ಕೇಳಿಸಿಕೊಂಡಿದ್ದು ನನಗೆ ಇವರು ಕೊಲೆ ಮಾಡಿ ಬಿಡುತ್ತಾರೆಂದು ತಿಳಿದು ನನ್ನ ಜೀವದ ಹಂಗು ತೊರೆದು ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದು ರಾತ್ರಿ 8 ಪಿ ಎಮ ಕ್ಕೆ ಮನೆಯಲ್ಲಿ ವಿಷಯ ತಿಳಿಸಿದ್ದು ನಮ್ಮ ತಂದೆ ಸುಲೇಮಾನ ಇವರು ನನಗೆ ಆದ ಗಾಯವನ್ನು ಕಂಡು ಉಪಚಾರಕ್ಕಾಗಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ಶ್ರೀ ಮಹ್ಮದ ಅಮನ ತಂದೆ ಮಹ್ಮದ ಸುಲೇಮಾನ ಪಟೇಲ್ ಸಾ||ಮ.ನಂ:5-993/61/ಎಂ ಮಹಿಬೂಬ ನಗರ ರಿಂಗ ರೋಡ ಗುಲ್ಬರ್ಗಾ ರವರು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ರೋಜಾ ಠಾಣೆ ಗುನ್ನೆ ನಂ:08/2012 ಕಲಂ: 323,324,342,363,109,504,506,307 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ವಿನೋದ ತಂದೆ ರಾಮಲಿಂಗ ಬಿಸನಾಳ ಸಾ||ಸುವರ್ಣ ನಗರ ಶಹಾ ಬಜಾರ ಗುಲಬರ್ಗಾರವರು ನಾನು ಮತ್ತು ನನ್ನ ಗೆಳೆಯರಾದ ಸಂತೋಷ ಮತ್ತು ನಿತೇಶ ರನ್ನಿಂಗ ಮಾಡುತ್ತಾ ಚೋರ ಗುಮ್ಮಜ ನೀರಿನ ಟ್ಯಾಂಕಿನ ಎದುರಿನ ರೋಡಿನಲ್ಲಿ ಹೊರಟಾಗ ಹಿಂದಿನಿಂದ ಹಿರೋ ಹೊಂಡಾ ಸಿಬಿಜಡ್. Chassi No. MBLKC12EFBGH07527 ಮತ್ತು Engine No: KC12EDBGH09131 ನೇದ್ದು ಅತಿವೇಗದಿಂದ ಚಲಾಯಿಸಿ ನನ್ನ ಬಲಗಾಲಿಗೆ ಡಿಕ್ಕಿ ಹೊಡೆದು ಭಾರಿ ರಕ್ತ & ಗುಪ್ತಗಾಯಗೊಳಿಸಿ ಮೋಟಾರ ಸೈಕಲ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 25/2012 ಕಲಂ 279,338 ಐಪಿಸಿ ಸಂ. 187 ಎಂ.ವಿ.ಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

26 January 2012

GULBARGA DIST REPORTED CRIMES

ಕಳೆದ ತಿಂಗಳು ಅಫಜಲಪೂರ ತಾಲೂಕಿನ ಬಳುಂಡಗಿ ಗ್ರಾಮದ ಹತ್ತಿರ ಭೀಮರಾಯ ತಳವಾರ ಎಂಬಾತನಿಗೆ ಗುಂಡು ಹಾರಿಸಿ ಕೊಲೆ ಮಾಡಿ ನಾಪತ್ತೆಯಾಗಿದ್ದ ಹಾಗು 2000 ಹಾಗೂ 2005 ನೇ ಸಾಲಿನ ಕೊಲೆ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿತನ ಬಂಧನ.
ದಿನಾಂಕ 03-12-2011 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಬಳುಂಡಗಿ ಗ್ರಾಮದ ಹತ್ತಿರ ಬಾಬು ಮುಜಾವರ ಇವರ ಹೊಲದ ಪಕ್ಕದಿಂದ ಅಳ್ಳಗಿ ಗ್ರಾಮಕ್ಕೆ ಹೋಗುವ ರೋಡಿನ ಮೇಲೆ ಬಳುಂಡಗಿ ಗ್ರಾಮದ ಭೀಮರಾಯ ತಂದೆಸೈದಪ್ಪ ತಳವಾರ ಎಂಬಾತನಿಗೆ ಅರ್ಜುನ ತಂದೆ ರಾಮಚಂದ್ರ ತಳವಾರ, ಶಿವಕಾಂತಬಾಯಿ ಗಂಡ ಅರ್ಜುನ ತಳವಾರ, ಪ್ರಕಾಶ ತಂದೆ ಅರ್ಜುನ ತಳವಾರ, ಸುರೇಶ ತಂದೆ ಅರ್ಜುನ ತಳವಾರ ಸಾ ಎಲ್ಲರೂ ಬಳುಂಡಗಿ ಇವರು ಹಳೆಯ ವೈಷಮ್ಯದಿಂದ ಗುಂಡು ಹಾರಿಸಿ ಮತ್ತು ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಈ ಘಟನೆಗೆ ಸಂಬಂದಿಸಿದ ಆರೋಪಿತರಲ್ಲಿ ಪ್ರಕಾಶ ಮತ್ತು ಸುರೇಶ ಎಂಬುವರು ಇಲ್ಲಿಯವರೆಗೆ ತಲೆಮರೆಸಿಕೊಂಡಿದ್ದರು ಅಫಜಲಪೂರ ಪೊಲೀಸ್ ಠಾಣೆಯಲ್ಲಿ 2000 ಮತ್ತು 2005 ನೇ ಸಾಲಿನಲ್ಲಿ ವರದಿಯಾದ ಹಿಂದಿನ 2 ಕೊಲೆ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದವನು ಇಲ್ಲಿಯವರೆಗೆ ಸಿಕ್ಕಿರುವುದಿಲ್ಲ. ಇಂದು ದಿನಾಂಕ:26-01-2012 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಈ ಪ್ರಕರಣದ ಆರೋಪಿ ಪ್ರಕಾಶ ತಳವಾರ (ಜಮಾದಾರ) ಎಂಬಾತನು ಸೊನ್ನ ಗ್ರಾಮದ ಹೊಸ ಬ್ರಿಡ್ಜ ಹತ್ತಿರ ಇದ್ದಾನೆ ಎಂಬ ಬಗ್ಗೆ ಖಚಿತ ಬಾತ್ಮಿ ದೊರೆತಿದ್ದರಿಂದ ಮಾನ್ಯ ಎಸ್.ಪಿ.ಸಾಹೇಬರಾದ ಶ್ರೀ ಪ್ರವೀಣ ಪವಾರ, ಮಾನ್ಯ ಅಪರ ಎಸ್.ಪಿ.ಸಾಹೇಬರವರಾದ ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಡಿ.ಎಸ್.ಪಿ.ಸಾಹೇಬರು ಆಳಂದ ಶ್ರೀ ಎಸ್.ಬಿ.ಸಂಬಾ ರವರ ಮಾರ್ಗದರ್ಶನದಲ್ಲಿ ಅಫಜಲಪೂರ ವೃತ್ತ ನಿರೀಕ್ಷಕರಾದ ಕೆ.ರಾಜೇಂದ್ರ ಮತ್ತು ಅಫಜಲಪೂರ ಠಾಣೆ ಪಿ.ಎಸ್.ಐ.ಮಂಜುನಾಥ ಎಸ್ ರವರು ಹಾಗು ಸಿಬ್ಬಂದಿಯವರಾದ ರಾಮಚಂದ್ರ, ಅರವಿಂದ, ರಾಜಶೇಖರ, ಭೀಮಾಶಂಕರ, ತುಳಜಪ್ಪ, ಚಂದ್ರಕಾಂತ, ಶಿವಾನಂದ ರವರೆಲ್ಲರು ಸದರ ಆರೋಪಿತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಭೀಮರಾಯ ತಳವಾರ ಎಂಬಾತನಿಗೆ ಕೊಲೆ ಮಾಡಲು ಉಪಯೋಗಿಸಿದ ಒಂದು ನಾಡ ಪಿಸ್ತೂಲನ್ನು ವಶಪಡಿಸಿಕೊಂಡಿರುತ್ತಾರೆ. ಈ ಪತ್ತೆ ಕಾರ್ಯವನ್ನು ಮಾನ್ಯ ಎಸ್.ಪಿ.ಸಾಹೇಬರಾದ ಶ್ರೀ ಪ್ರವೀಣ ಪವಾರವರು ರವರು ಅಫಜಲಪೂರ ಠಾಣೆಯ ಪೊಲೀಸರ ಪತ್ತೆ ಕಾರ್ಯವನ್ನು ಪ್ರಶಂಸಿರುತ್ತಾರೆ.
ಮಹಿಳೆ ಮತ್ತು ಮಗು ಕಾಣೆಯಾದ ಪ್ರಕರಣ:
ಚಿಂಚೋಳಿ ಠಾಣೆ:
ಶ್ರೀ ವಿಶ್ವಾನಾಥ ತಂದೆ ವೀರಭದ್ರಪ್ಪಾ ಶಂಕರ ಸಾ: ಮರಪಳ್ಳಿ ರವರು ನನ್ನ ಮಗಳಾದ ಆಶಾರಾಣಿ ಇವಳು ತನ್ನ 4 ವರ್ಷದ ಮಗನಾದ ಪವನ ಇತನನ್ನು ಕರೆದುಕೊಂಡು ದಿನಾಂಕ: 23-01-2012 ರಂದು ಸಾಯಂಕಾಲ 1800 ಗಂಟೆಯ ಸುಮಾರಿಗೆ ಚಂದಾಪೂರ ಗ್ರಾಮದ ತಮ್ಮ ಮನೆಯಿಂದ ತಂಗಿಯ ಮನೆಗೆ ಹೊಗುತ್ತೇನೆ ಅಂತಾ ಹೇಳಿ ಹೋದವಳು ಮರಳಿ ಬಂದಿರುವದಿಲ್ಲ ಎಲ್ಲಾ ಕಡೆ ಹುಡುಕಾಡಿದರು ಅವರ ಬಗ್ಗೆ ಯಾವುದೆ ಸುಳಿಯು ಸಿಕ್ಕಿರುವದಿಲ್ಲಾ. ಕಾರಣ ಕಾಣೆಯಾದ ನನ್ನ ಮಗಳಾದ ಆಶಾರಾಣಿ ಮತ್ತು ನನ್ನ ಮಮ್ಮೊಗನಾದ ಪವನ ಇವರನ್ನು ಹುಡುಕಿ ಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 10/2012 ಕಲಂ ಮಹಿಳೆ ಮತ್ತು ಮಗು ಕಾಣೆಯಾದ ಬಗ್ಗೆ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಕಾಣೆಯಾದ ಆಶಾರಾಣಿ ಗಂಡ ಶಿವಕುಮಾರ ಪಾಟೀಲ್ ವ23 ವರ್ಷ, ಎತ್ತರ- 5 ಅಡಿ, ಸಾದಾರಣ ಮೈಕಟ್ಟು, ಗೋದಿಬಣ್ಣ, ಕಪ್ಪು ಕೂದಲು, ಬಿಳಿ ಬಣ್ಣದ ಪಂಜಾಬಿ ಉಡುಪುಗಳು ಧರಿಸಿರುತ್ತಾರೆ, ಕನ್ನಡ ಮತ್ತು ಭಾಷೆ ಬಲ್ಲವಳಾಗಿರುತ್ತಾರೆ. ಹಾಗು ಅವಳ ಮಗು ಕುಮಾರ ಪವನ ಇತನು ವಯ4 ವರ್ಷ, ಎತ್ತರ-3 ಅಡಿ, ಗೋದಿಬಣ್ಣ, ಕೆಂಪು ಬಣ್ಣದ ಟಿಶರ್ಟ,ಹಾಗು ನೀಲಿ ಬಣ್ಣದ ಅಂಡರವಿಯರ್ ಉಡುಪು ಹಾಕಿರುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಚಿಂಚೋಳಿ ಪೊಲೀಸ್ ಠಾಣಯ ದೂರವಾಣಿ ಸಂ: 08475-273033, ಮೋಬಾಯಿಲ್ ನಂ: 9480803588 ಅಥವಾ ಸಿಪಿಐ ಚಿಂಚೋಳಿ ರವರ ಮೋಬಾಯಿಲ್ ನಂ: 9480803540 ಅಥವಾ ಡಿ.ಎಸ.ಪಿ ಚಿಂಚೋಳಿ ರವರ ಮೋಬಾಯಿಲ್ ನಂ:9480803524 ಅಥವಾ ಗುಲಬರ್ಗಾ ಕಂಟ್ರೋಲ್ ರೂಮ್ ನಂ:08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:
ಶ್ರೀ ಫಕಿ ಅಹ್ಮದ ತಂದೆ ಜಮೀರ ಅಹ್ಮದ ಗೋಳಾ ಸಾ: ಮನೆ ನಂ. 6 ಅಂಭಾ ಭವಾನಿ ಗುಡಿಯ ಎದುರುಗಡೆ ಗೋದುತಾಯಿ ನಗರ ಗುಲಬರ್ಗಾರವರು ನಾನು ದಿನಾಂಕ 25/08/2011 ರಂದು ರಾತ್ರಿ 10 ಗಂಟೆ ಸುಮಾರಿಗೆ ಬಜಾಜ ಪಲ್ಸರ ಮೋಟಾರ ಸೈಕಲ್ ಕೆ.ಎ-32 ಕ್ಯೂ- 5821 ನೇದ್ದು ನಿಲ್ಲಿಸಿ ದಿನಾಂಕ:26/08/2011 ರಂದು ಬೆಳಿಗ್ಗೆ ಎದ್ದು ನೋಡಲು ಮೋಟಾರ ಸೈಕಲ್ ಇರಲಿಲ್ಲಾ ಯಾರೋ ಕಳ್ಳರು ನನ್ನ ಬಜಾಜ ಪಲ್ಸರ್ ಮೋಟಾರ ಸೈಕಲ್ ನಂ. ಕೆ.ಎ-32 ಕ್ಯೂ- 5821 ಇಂಜನ ನಂ. DHGBLF56920, ಚಸ್ಸಿ ನಂ. DHVBLF58155, ಮಾಡಲ್ ನಂ. 2004, ಅ.ಕಿ. 30,000/- ರೂ ನೇದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 9/2012 ಕಲಂ. 379 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.


ಅಪಹರಣ ಪ್ರಕರಣ:
ನರೋಣಾ ಠಾಣೆ:
ಶ್ರೀ ಯಲ್ಲಯ್ಯ ತಂದೆ ಈರಯ್ಯ ಇಳಗೇರ ಸಾ: ಚಿಂಚನಸೂರ ರವರು ನನಗೆ ಮಾಣಿಕಮ್ಮ ಎಂಬುವ 16 ವರ್ಷದ ಮಗಳಿದ್ದು ಅವಳು ನನ್ನ ಹೆಂಡತಿ ಜೋತೆಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದು ನಿನ್ನೆ ದಿನಾಂ:25/01/2012 ರಂದು ಹೊಲದಿಂದ ಮುಂಜಾನೆ ಮನೆಗೆ ಬಂದಾಗ ಹೆಂಡತಿಯು ತಿಳಿಸಿದ್ದೇನಂದರೆ , ಮಗಳಾದ ಮಾಣಿಕಮ್ಮ ಇವಳು ನಿನ್ನೆ ರಾತ್ರಿ ಮನೆಯಿಂದ ಏಕಿಗಾಗಿ ಹೊರಗೆ ಬಂದವಳು ಮರಳಿ ಬಂದಿರುವದಿಲ್ಲ ಎಲ್ಲಾ ಕಡೆ ಹುಡುಗಾಡಿದರೂ ಸಿಕ್ಕಿರುವುದಿಲ್ಲ್. ಎಂದು ತಿಳಿಸಿದಕ್ಕೆ ನಾನು ಮತ್ತು ಹೆಂಡತಿ ಹುಡುಕಾಡಿದ್ದು ಗ್ರಾಮದ ಸುಗಲಾಬಾಯಿ ಇವಳಿಂದ ಗೊತ್ತಾಗಿದ್ದೇನಂದರೆ ದಿನಾಂಕ:24/01/2012 ರಂದು ರಾತ್ರಿ 9-10 ನಿಮಿಷ ಸುಮಾರಿಗೆ ಮಾಣಿಕಮ್ಮ ಇವಳಿಗೆ ಹಣಮಂತ ಒಡ್ಡರ್ ಇತನು ಜಬರ ದಸ್ತಿಯಿಂದ ಕರೆದುಕೊಂಡು ಹೋಗುತ್ತಿರುವದ್ದನ್ನು ನೋಡಿರುದ್ದಾಗಿ ತಿಳಿಸಿದ್ದು ಅಲ್ಲದೆ ನನ್ನ ಹೆಂಡತಿ ಕೂಡ ಮೊದಲು ಹಣಮಂತನು ಮಗಳಿಗೆ ನೋಡಿದ ವಿಷಯದಲ್ಲಿ ಸೀಟ್ಟು ಮಾಡಿ ಬೈದ ವಿಷಯ ತಿಳಿಸಿದ್ದು ಕಾರಣ ಮಗಳು ಅಪ್ರಾಪ್ತ ವಯಸ್ಕಳಾಗಿ ಆತನು ಯಾವುದೋ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 14/2012 ಕಲಂ 366 [ಎ] ಐಪಿಸಿ ಪ್ರಕಾರ ಪ್ರಕರಣದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಎಟಿಎಂ ದಿಂದ ಹಣ ಲಪಾಟಿಸಿದ ಬಗ್ಗೆ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ
ಕರಬಸಯ್ಯ ತಂದೆ ಮಳೇಂದ್ರಯ್ಯ ಹೀರೆಮಠ ಸಾ:ಕೆರಾಫ ಅಬ್ದುಲ ರಹೀಮಸಾಬ ಚೌದ್ರಿ ಮನೆ ನಂ ಎಲ್.ಐ.ಜಿ 40 ಹೌಸಿಂಗ ಬೋರ್ಡ ಕಾಲೋನಿ ಶಾಂತಿನಗರ ಗುಲಬರ್ಗಾ ರವರು ನಾನು ದಿನಾಂಕ 01/01/2012 ರಂದು ರಾತ್ರಿ 9-15 ರ ಸುಮಾರಿಗೆ ಎಸ್.ಬಿ.ಎಚ್.ಬ್ಯಾಂಕ ವಿದ್ಯಾನಗರ ಶಾಖೆಯ ಎ.ಟಿ.ಎಂ.ಕ್ಕೆ ಹಣ ಡ್ರಾ ಮಾಡಿಕೊಳ್ಳಲು ಹೋದಾಗ 24 ವರ್ಷದ ಒಬ್ಬ ಯುವಕ ಎ.ಟಿ.ಎಂ.ದಲ್ಲಿ ನಿಂತಿದ್ದನ್ನು ನಾನು ಹಣ ಡ್ರಾ ಮಾಡಲು ನನ್ನ ಎ.ಟಿ.ಎಂ. ಮಷಿನದಲ್ಲಿ ಹಾಕಿ ನನ್ನ ಕಾರ್ಡ ರಹಸ್ಯ ನಂಬರ ಹೊಡೆಯುವಾಗ ರಹಸ್ಯ ನಂಬರನ್ನು ತಿಳಿದುಕೊಂಡು ನೀವು ಸರಿಯಾಗಿ ಕಾರ್ಡ ಹಾಕಿರುವದಿಲ್ಲಾ ನಾನು ಸರಿಪಡಿಸಿಕೊಡುತ್ತೇನೆ ಅಂತಾ ಹೇಳಿದನು. ನಾನು ಬೇಡ ಅಂದರೂ ಸಹ ಅವನು ಎ.ಟಿ.ಎಂ. ಮಷಿನದಲ್ಲಿದ್ದ ನನ್ನ ಕಾರ್ಡನ್ನು ತೆಗೆದು ನನಗೆ ಕೊಟ್ಟು ಹೋದನು. ಅವನು ಹೊದ ನಂತರ ನಾನು ಎ.ಟಿ.ಎಂ.ಕಾರ್ಡನ್ನು ಮಷಿನದಲ್ಲಿ ಹಾಕಿ ನನ್ನ ರಹಸ್ಯ ನಂಬರ ಹೊಡೆದು ನೋಡಲಾಗಿ ಹಣ ಬರಲಿಲ್ಲ , ದಿನಾಂಕ 02/01/2012 ರಂದು ಬ್ಯಾಂಕಿಗೆ ಹಣ ಡ್ರಾ ಮಾಡಲು ಹೋದಾಗ ನನ್ನ ಅಕೌಂಟ ನಂ 52011409786 ನೇದ್ದರಲ್ಲಿ ಹಣ ಶಿಲ್ಕಿನಲ್ಲಿ ಇಲ್ಲಾ ಅಂತಾ ಗೊತ್ತಾಯಿತು. ಕಾರಣ ದಿನಾಂಕ 01/01/2012 ರ ರಾತ್ರಿ ಎಸ್.ಬಿ.ಎಚ್. ಬ್ಯಾಂಕಿನ ವಿದ್ಯಾನಗರದ ಎ.ಟಿ,ಎಂ.ದಲ್ಲಿ ಆಪರಿಚಿತ ಯುವಕನೊಬ್ಬ ನನ್ನ ಹತ್ತಿರ ಇದ್ದ ಬೇರೆ ಕಾರ್ಡನ್ನು ನನಗೆ ಕೊಟ್ಟು ನಂಬಿಕೆ ದ್ರೋಹ ಮಾಡಿ ನನ್ನ ಕಾರ್ಡನ್ನು ಲಪಟಾಯಿಸಿ ನನಗೆ ಮೋಸ ಮಾಡಿ ಎ.ಟಿ.ಎಂ. ಕಾರ್ಡನ್ನು ಲಪಟಾಯಿಸಿ ದಿನಾಂಕ 01/01/2012 ರ ದಿವಸದ ರಾತ್ರಿ ವೇಳೆಯಲ್ಲಿ ಯುಕೊ ಬ್ಯಾಂಕ ಎ.ಟಿ.ಎಂ.ದಿಂದ 10,000=00 ರೂ ಹಾಗೂ 8,500=00 ರೂ ಹೀಗೆ ಒಟ್ಟು 18,500=00 ರೂಪಾಯಿಗಳನ್ನು ಅಪರಿಚಿತ ವ್ಯಕ್ತಿ ನನ್ನ ಅಕೌಂಟಿನಲ್ಲಿದ್ದ ಹಣವನ್ನು ನನ್ನ ಎ.ಟಿ.ಎಂ.ಕಾರ್ಡನಲ್ಲಿದ್ದ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 08/2012 ಕಲಂ 406, 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹೆಂಡತಿಗೆ ಕಿರುಕುಳ ನೀಡಿದ ಬಗ್ಗೆ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮಂಜುಳಾ ಗಂಡ ಚನ್ನಪ್ಪ ಗುತ್ತೇದಾರ ಗ ಸಾ: ಹುಮನಾಬಾದ ಹಾವಹೀರಾಪೂರ ತಾಜಿಗುಲಬರ್ಗಾರವರು ನನಗೆ ನನ್ನ ಗಂಡ ಚೆನ್ನಪ್ಪ ತಂದೆ ಅಂಬಯ್ಯ ಗುತ್ತೇದಾರ ಸಾ: ಹೀರಾಪೂರ ಮತ್ತು ನಾದಿನಿ ಚಂದ್ರಕಲಾ ಗಂಡ ಭೀಮ್ಮಯ್ಯ ಗುತ್ತೇದಾರ ಸಾ: ಹೀರಾಪೂರ ರವರು ನನ್ನ ಶೀಲದ ಬಗ್ಗೆ ಸಂಶಯ ಪಟ್ಟು ಕೈಯಿಂದ ಹೊಡೆ ಬಡೆ ಮಾಡಿ ದೈಹಿಕ ಮಾನಸಿಕ ಕಿರುಕುಳ ಕೊಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 24/2012 ಕಲಂ 498 (ಎ) 341 323 504 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಆಳಂದ ಪೊಲೀಸ್ ಠಾಣೆ :
ಶ್ರೀ ಬಸವರಾಜ ತಂದೆ ಶಾಂತಪ್ಪ ಮೋರೆ ಸಾ ಮಾದನ ಹಿಪ್ಪರರ್ಗಾ ರವರು ನಾನು ದಿನಾಂಕ 22/01/2012 ರಂದು ಆಳಂದದಲ್ಲಿ ಎ.ವಿ.ಮಾಲಿಪಾಟೀಲ ಮಲ್ಯಾಣ ಪಂಟಪದ ಹತ್ತಿರ ಮಾಳಿ ಸಮಾಜದ ಜನ ಜಾಗ್ರತಿ ಸಮಾವೇಶಕ್ಕೆ ಬಂದಾಗ ನಾನು ಮತ್ತು ನನ್ನ ಸ್ನೆಹಿತನಾದ ಕೃಷ್ಣರಾಜ ಕಲ್ಯಾಣಿ ಸಿಂಗೆ ಇಬ್ಬರು ಕುಡಿಕೊಂಡು ನನ್ನ ದ್ವಿ-ಚಕ್ರ ವಾಹನ ಕೆಎ-32 ಆರ್-4282 ನೇದ್ದು ಹನುಮಾನ ಟಾಕೀಜ ಹತ್ತಿರ ನಿಲ್ಲಿಸಿ ಕಾರ್ಯಕ್ರಮಕ್ಕೆ ಹೋಗಿರುತ್ತೆವೆ. ಕಾರ್ಯಕ್ರಮ ಮುಗಿಸಿಕೊಂಡು ಬಂದು ನೋಡಿದಾಗ ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿಚಕ್ರವಾಹನ ಇರಲ್ಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಲಿಖಿತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 19/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

25 January 2012

GULBARGA DIST REPORTED CRIME

ಜೂಜಾಟ ಪ್ರಕರಣ:
ಬ್ರಹ್ಮಪೂರ ಠಾಣೆ:
ದಿನಾಂಕ: 25/01/2012 ರಂದು ಗಾಜೀಪೂರ ಬಡಾವಣೆಯ ಮಿಲನ ಚೌಕದಲ್ಲಿ ರಾಜಶೇಖರ ಡೆಂಕಿ ಈತನು ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೆರೆಗೆ ಮಾನ್ಯ ಎಸ್.ಪಿ ಸಾಹೇಬ ಗುಲಬರ್ಗಾ ಹಾಗೂ ಮಾನ್ಯ ಹೆಚ್ಚುವರಿ ಎಸ್.ಪಿ ಸಾಹೇಬ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ನಾನು ಹಾಗೂ ಬ್ರಹ್ಮಪೂರ ಪೊಲೀಸ ಠಾಣೆಯ ಪಿ.ಐ ಶ್ರೀ.ಶರಣಬಸವೇಶ್ವರ ಬಿ ರವರು ಹಾಗೂ ಡಿ.ಸಿ.ಐ.ಬಿ ಸಿಬ್ಬಂದಿ ಮತ್ತು ಇಬ್ಬರು ಪಂಚರೊಂದಿಗೆ ಸ್ಥಳಕ್ಕೆ ಭೇಟಿಕೊಟ್ಟು ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ಚೀಟಿ ಬರೆದುಕೊಳ್ಳುತ್ತಿರುವದನ್ನು ನೋಡಿ ಖಾತ್ರಿ ಪಡೆಸಿಕೊಂಡು ಒಮ್ಮೇಲೆ ಅವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ರಾಜಶೇಖರ ತಂದೆ ಚಂದ್ರಶೇಖರ ಡೆಂಕಿ ವಯ 42, ಸಾ ನರೋಣಾ, ಹಾವ ಮಕ್ತಂಪೂರ ಗುಲಬರ್ಗಾ ಅಂತಾ ಹೇಳಿದ್ದು, ಸದರಿಯವನ ಹತ್ತಿರ ಮಟಕಾ ಜೂಜಾಟಕ್ಕೆ ಬಳಸಿದ 1) ನಗದು ಹಣ 8000/- ರೂಪಾಯಿ, 2) ಮೂರು ಮಟಕಾ ಚೀಟಿ, 3) ಒಂದು ಬಾಲ ಪೆನ್ನ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊಟ್ಟ ವರದಿ ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ್ ಠಾಣೆ ಗುನ್ನೆ ನಂ: 15/12 ಕಲಂ: 78(III) ಕೆ.ಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

GULBARGA DIST REPORTED CRIMES

ಕೊಲೆ ಪ್ರಕರಣ:
ಮಳಖೇಡ ಠಾಣೆ:
ಚಂದ್ರಪ್ಪಾ ತಂದೆ ಭೀಮಣ್ಣಾ ಹಲಗೇರಿ ಸಾ: ಹೂಡಾ(ಬಿ) ಗ್ರಾಮ ರವರು ನನ್ನ ನಮ್ಮ ಮಗಳು ರೇಖಾ ಇವಳು ಅಂದಾಜು 4-5 ವರ್ಷಗಳ ಹಿಂದೆ ನಮ್ಮೂರ ಮಹ್ಮದ ಗೌಸ್ ಎಂಬುವವನೊಂದಿಗೆ ಪ್ರಿತಿಸಿ ಮದುವೆ ಮಾಡಿಕೊಂಡಿರುತ್ತಾಳೆ. ರೇಖಾ ಇವಳಿಗೆ ಮದುವೆ ಆದ ಬಳಿಕ 2 ವರ್ಷಗಳ ನಂತರ ಅವಳ ಗಂಡ ಮಹ್ಮದ ಗೌಸ್ ಹಾಗೂ ಅವಳ ತಾಯಿ ಆಶಾಬಿ ಇವರು ನೀನೂ ಸರಿ ಇಲ್ಲಾ ನಿನಗೆ ಕೇಲಸ ಬರುವದಿಲ್ಲಾ ಅಂತಾ ಬೈದು ಮಾನಸಿಕ ಕಿರಕುಳ ಕೂಡಲು ಪ್ರಾರಂಭಿಸಿದರು. ನನ್ನ ಮಗಳು ರೇಖಾ ಇವಳು ತನ್ನ ಅತ್ತೆ ಮಾವನ ಮನೆಯಲ್ಲಿ ಕಿರಕುಳ ಜಾಸ್ತಿ ಆಗಿದ್ದರಿಂದ ಈ ಗ 5-6 ತಿಂಗಳ ಹಿಂದೆ ನನ್ನ ಮನೆಯ ಪಕ್ಕದಲ್ಲಿ ಒಂದು ಬೇರೆ ಮನೆಯನ್ನು ಮಾಡಿಕೊಂಡು ತನ್ನ ಮಗಳಒಂದಿಗೆ ವಾಸವಾಗಿದ್ದಳು. ದಿನಾಂಕ: 23.01-2012 ರಂದು ಮದ್ಯಾಹ್ನ 1.30 ಗಂಟೆಯ ಸುಮಾರಿಗೆ ನನ್ನ ಹೆಂಡತಿಯು ನನ್ನ ಮಗಳಾದ ರೇಖಾಳಿಗೆ ಅವಳ ಗಂಡನ ಮನೆಗೆ ಬಿಟ್ಟು ಬರಲು ಹೋದರು ರೇಖಾಳಿಗೆ ಅವಳ ಗಂಡನ ಮನೆಯವರು ಮನೆಯಲ್ಲಿ ಕರೆದುಕೊಂಡಿರುವದಿಲ್ಲಾ. ಅವಳಿಗೆ ಸಿಕ್ಕಾಪಟ್ಟೆ ಬೈದು ಮನೆಯ ಹೊರಗಡೆ ಹಾಕಿ ಎಲ್ಲಿಯಾದರು ಸಾಯಿ ಅಂತಾ ತ್ರಾಸು ಕೊಟ್ಟರು ಅಂತಾ ತಿಳಿಸಿದರು. ದಿನಾಂಕ;- 23.01.2012. ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ ಮಗಳು ರೇಖಾ ಮಮ್ಮೂಗಳು ಪರೀದಾ ಇವರು ಮನೆಯಿಂದ ಹೊರಹೋದರು ರಾತ್ರಿ ಯಾದರು ಮನೆಗ ಬರಲಿಲ್ಲಾ ನಾವು ಎಲ್ಲಾ ಕಡೆ ಹೂಡಕಾಡಿದೆವು. ಸಿಕ್ಕಿರುವದಿಲ್ಲಾ ರಾತ್ರಿಯಾಗಿದ್ದರಿಂದ ಸುಮ್ಮನಾದೆವು. ದಿನಾಂಕ 24.01.2012. ರಂದು ಬೆಳಗ್ಗೆ ಮಳಖೇಡ ಕಾಗೀಣಾ ನದಿಯಲ್ಲಿ ಒಂದು ಹೆಣ್ಣು ಮಗು ಮತ್ತು ಒಂದು ಹೆಣ್ಣು ಮಗಳು ನೀರಿನಲ್ಲಿ ಮುಳಗಿ ಸತ್ತಿರುತ್ತಾರೆ ಅಂತಾ ವಿಷಯ ತಿಳಿದ ಮೇರೆಗೆ ನಾವು ಮಳಖೇಡ ಕಾಗೀಣಾ ಬ್ರೀಜ್ ಬಳಿ ಹೊಗಿ ನೋಡಲಾಗಿ ಅಲ್ಲಿ ಸತ್ತಿರುವ ಹೆಣ್ಣುಮಗಳು ನಮ್ಮ ಮಗಳಾದ ರೇಖಾ ಮತ್ತು ನನ್ನ ಮಮ್ಮೋಗಳಾದ ಪರೀದಾ ರವರೇ ಆಗಿದ್ದು ನೋಡಿದೆವು. ನನ್ನ ಮಗಳು ರೇಖಾ ಇವಳು ತನಗೆ ತನ್ನ ಗಂಡ ಮತ್ತು ಅತ್ತೆ ಯವರು ನೀಡಿದ ಕಿರಕುಳ ತಾಳಲಾರದೆ ದಿನಾಂಕ 23.01.2012. ರಂದು ರಾತ್ರಿ ವೇಳೆಯಲ್ಲಿ ನನ್ನ ಮೋಮ್ಮಗಳಾದ ಪರೀದಾಳಿಗೆ ನೀರಿನಲ್ಲಿ ಬೀಸಾಕಿ ತಾನು ನೀರಿಗೆ ಹಾರಿ ಸತ್ತಿರುತ್ತಾಳೆ,ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 05/12. ಕಲಂ. 302. ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜಾತಿ ನಿಂದನೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಹುಸನಪ್ಪ ತಂದ ಧೂಳಪ್ಪ ಬಡಿಗೇರ ಜಾತಿ ಪರಿಶಿಷ್ಟ ಜಾತಿ ಸಾ: ಬೇಲೂರ (ಜೆ) ಗ್ರಾಮ ರವರು ನಾನು ದಿನಾಂಕ 24-01-12 ರಂದು ರಾತ್ರಿ 8-45 ಗಂಟೆ ಸುಮಾರಿಗೆ ದೇವಪ್ಪ ಇತನು ತನ್ನ ತಮ್ಮ ಶ್ರೀಶೈಲನಿಗೆ ಕುಡಿದ ಅಮಲಿನಲ್ಲಿ ಬೈಯ್ಯುತ್ತಿದ್ದಾಗ, ಅಂಬಾರಾಯ ಪೂಜಾರಿ ಈತನು ದೇವಪ್ಪ ತನಗೆ ಬೈಯ್ಯುತ್ತಿದ್ದಾನೆ ಎಂದು ತಪ್ಪಾಗಿ ತಿಳಿದುಕೊಂಡು ಅಂಬಾರಾಯ ತಂದೆ ಅಣ್ಣೆಪ್ಪ ಪೂಜಾರಿ, ಬಸವರಾಜ ತಂದೆ ವಿಶ್ವನಾಥ ಮೊಲಗೆ , ರವಿ ಮೊಲಗೆ ಮಾಸ್ಟರ, ಬಸವರಾಜ ಗೋಳಾ,ಪಾಪು ತಂದೆ ಚಂದಪ್ಪ ಗೋಳಾ,ಚಂದಪ್ಪ ಗೋಳಾ, ಪ್ರಭು ತಂದೆ ಸಾತಲಿಂಗಪ್ಪ ಸಾ: ಎಲ್ಲರೂ ಬೇಲೂರ (ಜೆ) ಗ್ರಾಮ ಮತ್ತು ಇತರರು ಕೂಡಿಕೊಂಡು ನನಗೆ ಮತ್ತು ನನ್ನ ದೇವಪ್ಪ ಶ್ರೀಶೈಲನಿಗೆ ಜಾತಿ ಎತ್ತಿ ಬೈದು ಜಗಳಾ ತೆಗೆದು ಕಲ್ಲಿನಿಂದ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿ, ಮನೆಯ ಮೇಲ ಕಲ್ಲು ತೂರಾಟ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 22/2012 ಕಲಂ 143,147,148, 504, 323,324,307,336 ಸಂ.149 ಐಪಿಸಿ ಮತ್ತು 3(1) (10) ಎಸ್.ಸಿ./ಎಸ್.ಟಿ. ಎಕ್ಟ 1989 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಅಂಬಾರಾಯ ತಂದೆ ಅಣ್ಣೆಪ್ಪ ಪೂಜಾರಿ ಜಾತಿ ಕುರುಬ ಸಾ: ಬೇಲೂರ (ಜೆ) ಗ್ರಾಮ ರವರು ನಾಣು ದಿನಾಂಕ 24-01-12 ರಂದು ರಾತ್ರಿ 8-45 ಗಂಟೆ ಸುಮಾರಿಗೆ ನನ್ನ ಹೆಂಡತಿಯಾದ ಪಾರ್ವತಿ ಇವಳಿಗೆ ಬೈದ ವಿಷಯದಲ್ಲಿ ದೇವಪ್ಪ ಈತನಿಗೆ ಕೇಳಲು ಹೋದಾಗ ದೇವಪ್ಪ ತಂದೆ ಧೂಳಪ್ಪ ಬಡಿಗೇರ, ಶ್ರೀಶೈಲ ತಂದೆ ಧೂಳಪ್ಪ ಬಡಿಗೇರ , ಹುಸನಪ್ಪ ತಂದೆ ಧೂಳಪ್ಪ ಬಡಿಗೇರ, ಮಲ್ಲಿಕಾರ್ಜುನ ಕೆಸರಟಗಿ , ಸುರೇಶ ತಂದೆ ಧೂಳಪ್ಪ ಮತ್ತು ಇತರರು ಎಲ್ಲರೂ ಬೇಲೂರ (ಜೆ) ಗ್ರಾಮ ದವರು ಕೂಡಿಕೊಂಡು ಕೈಯಲ್ಲಿ ಕಲ್ಲು, ಕುಡುಗೋಲು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಮತ್ತು ಕುಡುಗೋಲಿನಿಂದ ಹೊಡೆದು ರಕ್ತಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2012 ಕಲಂ 143,147,148, 504, 324, 506(2) ಸಂ.149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

24 January 2012

GULBARGA DIST REPORTED CRIME

ಕೊಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:
ಬಸವರಾಜ ತಂದೆ ಚಂದಪ್ಪ ಸಿಂಗೆ ಸಾ ಸಂಗೊಳಗಿ ತಾ ಅಕ್ಕಲಕೋಟ ಜಿ ಸೋಲಾಪೂರರವರು ನನ್ನ ತಂಗಿಯಾದ ಸತ್ಯವ ಇವಳಿಗೆ ನಂದರಗಾ ಗ್ರಾಮದ ಚಂದ್ರಕಾಂತ ತಂದೆ ಚನ್ನಪ್ಪ ದೊಡ್ಡಮನಿ ಎಂಬುವನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು ಇರುತ್ತದೆ. ಬಳೂರ್ಗಿ ಗ್ರಾಮದಲ್ಲಿ ಹಿಟ್ಟಿನ ಗಿರಣಿ ಹಾಕಿಕೊಂಡು ಅಲ್ಲಿಯೇ ಕೆಲಸ ಮಾಡುತ್ತಿದ್ದಾಗ ನನ್ನ ತಂಗಿಯ ಮೇಲೆ ಶೀಲದ ಬಗ್ಗೆ ಶಂಕೆ ಪಟ್ಟು ಆಗಾಗ ತಕರಾರು ಮಾಡುತ್ತಾ ಇದ್ದನು. ಬಳೂರ್ಗಿ ಗ್ರಾಮದಲ್ಲಿನ ಹಿಟ್ಟಿನ ಗಿರಣಿಯನ್ನು ಮಾರಾಟ ಮಾಡಿ ತಮ್ಮ ಗ್ರಾಮವಾದ ನಂದರಗ ಗ್ರಾಮದಲ್ಲಿ ಮೂರು ತಿಂಗಳಿಂದ ಬಂದು ವಾಸವಾಗಿರುತ್ತಾರೆ ಇಲ್ಲಿಯೂ ಸಹ ತನ್ನ ಹೆಂಡತಿ ಸತ್ಯವ್ವ ಇವಳ ಮೇಲೆ ಸಂಶಯ ಪಟ್ಟು ಅವಳ ಜೊತೆಗೆ ತಕರಾರು ಮಾಡುತ್ತಿದ್ದನು ದಿನಾಂಕ 23.01.12 ರಂದು ರಾತ್ರಿ 9 ಗಂಟೆಯಿಂದ ದಿನಾಂಕ 24.01.12 ಬೆಳಿಗ್ಗೆ 7 ಗಂಟೆಯ ಮಧ್ಯದ ಅವಧಿಯಲ್ಲಿ ನನ್ನ ಮಾಮ ನನ್ನ ತಂಗಿಯ ಮೇಲೆ ಸಂಶಯ ಪಟ್ಟು ಮನೆಯಲ್ಲಿಯೆ ಅವಳ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 17/2012 ಕಲಂ 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಶ್ರೀ ಮತಿ ಖೈರುನ ಬಿ ಗಂಡ ಅಬ್ದುಲ ನಬಿ ಗೋಳಾ ಸಾ: ರಾವೂರ ತಾ: ಚಿತ್ತಾಪೂರ ರವರು ನಾನು ದಿ 23-01-2012 ರಂದು ಮಧ್ಯಾಹ್ನ ಸುಪರ ಮಾಕೇಟ ಅಟೋ ಸ್ಟ್ಯಾಂಡ ರೋಡಿನ ಮೇಲೆ ಮಹಿಂದ್ರಾ ಟಾಟಾ ಎ.ಸಿ. ಗೂಡ್ಸ ನಂ: ಕೆಎ 33 -9511 ನೇದ್ದರ ಚಾಲಕ ಇಮಾಮೋದ್ದಿನ ಇತನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ತನ್ನ ವಾಹನ ಅಲ್ಲಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 12/2012 ಕಲಂ 279, 337, ಐಪಿಸಿ ಸಂಗಡ 187 ಐ.ಎಮ.ವಿಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ
: ಶ್ರೀ ಶಾಮ ತಂದೆ ವಾಸುದೇವ ನಾನಾವತೆ ಸಾ: ಮನೆ £ÀA:1-16 ಬಿ ವೆಂಕಟೇಶ ನಗರ ಗುಲಬರ್ಗಾರವರು ನಾನು ದಿ 23-01-2012 ರಂದು ಮಧ್ಯಾಹ್ನ ಅನಂದ ಓ.ಪಿ ಕ್ರಾಸದಿಂದ ಕೋರ್ಟ ಕ್ರಾಸ್ ಮೇನ ರೋಡಿನಲ್ಲಿ ಬರುವ ಜಿಲ್ಲಾ ಅರಣ್ಯ ಇಲಾಖೆ ಕಾರ್ಯಾಲಯ ಎದುರು ರೋಡಿನ ಮೇಲೆ ನನ್ನ ಮೋಟಾರ ಸೈಕಲ ನಂ ಕೆಎ-32 ವಾಯಿ-2368 ನೇದ್ದರ ಮೇಲೆ ಹೋಗುತ್ತಿದ್ದಾಗ, ಮೋಟಾರ ಸೈಕಲ ನಂ: ಕೆಎ 32 ವಿ 9394 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ತನ್ನ ಮೋಟಾರಸೈಕಲ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 11/2012 ಕಲಂ 279, 337, ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಆಳಂದ ಪೊಲೀಸ ಠಾಣೆ:
ನಾನು ಸಿದ್ರಾಮ ತಂದೆ ಸೈಬಣ್ಣಾ ಕಟಗೆ ಸಾ:ಸುಲ್ತಾನಪೂರ ಗಲ್ಲಿ ಆಳಂದ ರವರು ನಮ್ಮ ಮತ್ತು ನಮ್ಮ ಮನೆಯ ಪಕ್ಕದ ಮಾರುತಿ ತಂದೆ ಪಕ್ಕಿರಪ್ಪ ಗಾಜರೆ ನಡುವೆ ಜಾಗಯ ಸಂಬಂದ ತಕರಾರು ಇರುತ್ತದೆ. ದಿನಾಂಕ 23/01/2012 ರಂದು ಬೆಳಿಗ್ಗೆ 8.00 ಗಂಟೆ ಸುಮಾರಿಗೆ ನನ್ನ ತಾಯಿಯಾದ ಚಾಂಗುನಾಬಾಯಿ ಇವಳು ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಕೂಳಿತು ಮುಸರಿ ಪಾತ್ರೆ ತೊಳೆಯುವಾಗ ಕೋಳಿ ಬಂದಿದೆ ಸೂ ಎಂದು ಅದಕ್ಕೆ ಹಳ್ಳ[ಚಿಕ್ಕ ಕಲ್ಲು] ದಿಂದ ಹೊಡೆದಾಗ ಸದರಿ ಹಳ್ಳಾ ಮಾರುತಿಯವರ ಮನೆಯ ಮುಂದೆ ಹೋದಾಗ ನಮ್ಮೊಂದಿಗೆ ಜಗಳ ತೆಗೆಯುವ ಉದೇಶದಿಂದ ಮಾರುತಿ ಮೊಮ್ಮಕ್ಕಳಾದ ಚಂದ್ರಕಾಂತ ತಂದೆ ಮೈಲಕಾರಲಿಂದ, ಪ್ರಕಾಶ ತಂದೆ ಮೈಲಾರಲಿಂಗ , ಸುಸಿಲಾಬಾಯಿ [ಸೊಸೆ] ಕೂಡಿ ಬಂದು ಚಂದ್ರಕಾಂತನು ಅವಾಚ್ಯವಾಗಿ ಬೈದಿರುತ್ತಾರೆ ಇವರೆಲ್ಲರೂ ಕಲ್ಲಿನಿಂದ ಬಡಿಗೆಯಿಂದ ಹೊಡೆದು ಹಿರಾಚಂದ ಇತನು ನಾಯಿಗೆ ಚೌ ಹಚ್ಚಿ ನಾಯಿಯಿಂದ ಕಚ್ಚಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 14/2012 ಕಲಂ 324.323.504.506.289.ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ
: ಶ್ರೀ ಶರಣಪ್ಪಾ ತಂದೆ ನರಸಪ್ಪಾ ಪರೀಟ್ ಸಾ: ಶಂಕರವಾಡಿ ರವರು ನಾನು ದಿನಾಂಕ:23/01/2012 ರಂದು ರಾತ್ರಿ ಶಂಕರವಾಡಿಯಿಂದ ಶಾಂತ ನಗರಕ್ಕೆ ಊಟ ಮಾಡಲು ಮೋಟಾರ ಸೈಕಲ್ ಕೆ.ಎ-32/ಎಫ್-1334 ನೇದ್ದರ ಮೇಲೆ ಬಂದು ಊಟ ಮಾಡಿ ನಂತರ ಶಂಕರವಾಡಿ ಗ್ರಾಮಕ್ಕೆ ಹೋಗುತ್ತಿರುವಾಗ ಸ್ಕೀಡ್ ಆಗಿ ನಾನೆ ಕೆಳಗೆ ಬಿದ್ದೇನು. ನನಗೆ ತಲೆಯ ಹಿಂದೆ ಬಾರಿ ರಕ್ತಗಾಯವಾಗಿದ್ದು ಮತ್ತು ಬಲತೊಳು ತರಚಿದ ಗಾಯ , ಮುಖಕ್ಕೆ ಮತ್ತು ಕೈ ಕಾಲುಗಳೀಗೆ ಸಣ್ಣ ಪುಟ್ಟ ರಕ್ತಗಾಯಗಳಾಗಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 10/2012 ಕಲಂ: 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

23 January 2012

GULBARGA DIST REPORTED CRIMES

ಕಳ್ಳತನ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಮಹ್ಮದ ಶಕೀಲ ತಂದೆ ಬಾಬು ಮಿಯ್ಯಾ ಸಾ|| ಮನೆ ನಂ 109 ಮಜಿದ-ಎ-ಹುದಾ ಹತ್ತಿರ ರೇಹಮತನಗರ ಹಳೇ ಜೇವರ್ಗಿ ರಸ್ತೆ ಗುಲಬರ್ಗಾರವರು ನಾನು ದಿ: 21.01.12 ರಂದು ಮದ್ಯಾಹ್ನ 2-00 ಪಿ.ಎಮ್ ಕ್ಕೆ ಮನೀಷ ಬೇಕರಿ ಹತ್ತಿರ ನನ್ನ ಬಜಾಜ ಪಲ್ಸರ ನಂ ಕೆಎ 32 ಡಬ್ಲೂ 9520 ಅಕಿ 25000/- ರೂ ನೇದ್ದು ನಿಲ್ಲಿಸಿ ಜಿರೆಕ್ಸ ಮಾಡಿಕೊಂಡು ಮರಳಿ ಬಂದು ನೋಡಲಾಗಿ, ನಿಲ್ಲಿಸಿದ ಸ್ಥಳದಲ್ಲಿ ನನ್ನ ವಾಹನ ಇರಲಿಲ್ಲಾ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 06/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. .

ಜೂಜಾಟ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 22/01/2012 ರಂದು ಆಲೂರ (ಬಿ) ಗ್ರಾಮದ ಸಂತೆ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ ಜೂಜಾಟ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಶ್ರೀ ಎಸ್.ಎಸ್ ದೊಡಮನಿ ಪಿ.ಎಸ್.ಐ ನಿಂಬರ್ಗಾ ಠಾಣೆ ಮತ್ತು ಸಿಬ್ಬಂದಿ ಜನರಾದ ರಾಮಚಂದ್ರ ಸಿಪಿಸಿ ವಿಶ್ವನಾಥ ರೆಡ್ಡಿ ಸಿಪಿಸಿ, ಮತ್ತು, ಭೀಮಾಶಂಕರ ಇವರೆಲ್ಲರೂ ಕೂಡಿಕೊಂಡು ದಾಳಿ ಮಾಡಿ 6 ಜನರನ್ನು ಹಿಡಿದು ವಿಚಾರಿಸಲು ಅವರ ಹೆಸರು ಚಂದ್ರಕಾಂತ ತಂದೆ ಬಸವಂತರಾವ ಪಾಟೀಲ, ಸಿದ್ದಪ್ಪ ತಂದೆ ಚಂದಪ್ಪ ಜ್ಯೋತಿ, ಶಿವಪುತ್ರ ತಂದೆ ಸೈಬಣ್ಣಾ ಮದರಿ, ಸೈಬಣ್ಣಾ ತಂದೆ ಭೀಮಶ್ಯಾ ಚಿತಲಿ, ಶಿಪುತ್ರ ತಂದೆ ಶಿವಲಿಂಗಪ್ಪ ಹೊಸಮನಿ ಮತ್ತು ರಹೇಮಾನ ಸಾಬ ತಂದೆ ಇಮಾಮಸಾಬ ವಾಡಿ ಸಾ|| ಎಲ್ಲರೂ ಆಲೂರ ( ಬಿ ) ಗ್ರಾಮ ಇವರನ್ನು ಚೆಕ ಮಾಡಲಾಗಿ ಸದರಿಯವರಿಂದ ನಗದು ಹಣ ಒಟ್ಟು 1250/- ಮತ್ತು ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 4/2012 ಕಲಂ 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಅನಂತರಾಮ ತಂದೆ ನಾಗಪ್ಪ ಪೇಂಟರ ವ:30 ವರ್ಷ ಜಾ:ಕಬ್ಬಲಿಗೇರ ಉ: ಕೆ.ಎಸ್.ಅರ್. ಟಿ.ಸಿ.ಬಸ್ಸ ಚಾಲಕ ಡಿ. ನಂ. 1188 ಹುಮನಾಬಾದ ಡಿಪೋ ಸಾ: ಚಿನ್ನಕೇರಾ ತಾ: ಹುಮನಾಬಾದರವರು ನಾನು ದಿನಾಂಕ 22-01-12 ರಂದು ಬೆಳಿಗ್ಗೆ 5-00 ಗಂಟೆ ಸುಮಾರಿಗೆ ಬೆಂಗಳೂರದಿಂದ ಗುಲಬರ್ಗಾ ಕೇಂದ್ರ ಬಸ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕೂಡಿಸಿಕೊಂಡು ಹುಮನಾಬಾದಕ್ಕೆ ಹೊರಟಿದ್ದು, ನನ್ನ ಬಸ್ಸ ನಂಬರ ಕೆಎ 38 ಎಫ 686 ಚಾಲನೆ ಮಾಡುತ್ತಾ ಬೆಳಗಿನ 5-30 ಗಂಟೆ ಸುಮಾರಿಗೆ ಗುಲಬರ್ಗಾ-ಹುಮನಾಬಾದ ರಿಂಗ ರೋಡಿನ ಮಧ್ಯದ ಸರ್ಕಲ ದಾಟುತ್ತಿರುವಾಗ ಸೇಡಂ ರಿಂಗ ರೋಡ ಕಡೆಯಿಂದ ಲಾರಿ ನಂಬರ ಎಪಿ 22 ವಾಯ್ 3132 ಚಾಲಕ ನರಸಿಂಹ ಇತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದವನೇ ನಾನು ಕುಳಿತ ಹಿಂದಿನ ಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದನು. ಹಾಗೇ ಲಾರಿ ರಿಂಗ ರೋಡಿಗೆ ಲೈಟಿನ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಡ್ಯಾಮೇಜ ಆಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 18/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ 22/1/2012 ರಂದು ಸಾಯಂಕಾಲ ಸೈಯ್ಯದ ಚಿಂಚೋಳಿ ಸೀಮಾಂತರದಲ್ಲಿ ಬರುವ ಸೈಯದಮಿಯ್ಯ ಜಾಗೀರದಾರ ಇವರ ಹೊಲದಲ್ಲಿ ಬಂದಾರಿ ಗಿಡದ ಕೆಳಗೆ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿ ದ್ದಾಗ ಶ್ರೀ ಆನಂದರಾವ ಎಸ್‌ ಎನ್‌ ಪಿಎಸ್‌ಐ ಮತ್ತು ಸಿಬ್ಬಂದಿಯವರು ಗುಲಬರ್ಗಾ ಗ್ರಾಮೀಣ ಠಾಣೆರವರು ದಾಳಿ ಮಾಡಿ ಜೂಜಾಟ ಆಡುತ್ತಿದ್ದ ಶರಣಬಸಪ್ಪ @ ಶಿವು ತಂದೆ ಮಲ್ಲಪ್ಪ ಬೆಕನಾಳ ಸಾ: ಶೇಖರೋಜಾ ಗುಲ್ಬರ್ಗಾ ಸಂಗಡ ಇನ್ನೂ 9 ಜನರು ಜನರನ್ನು ಹಿಡಿದು ಅವರಿಂದ ನಗದು ಹಣ 7400/- ರೂ ಇಸ್ಪೇಟ ಎಲೆಗಳು, 10 ಮೋಬೈಲಗಳು, 9 ಮೋಟಾರ ಸೈಕಲಗಳು ಹೀಗೆ ಒಟ್ಟು 2,37,400/- ರೂ ಗಳು ವಸಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 19/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಬಸವರಾಜ ತಂದೆ ಹಣಮಂತಪ್ಪ ಗೌಡಪ್ಪಗೌಡ ಸಾ: ಅವರಾದ(ಬಿ) ತಾ: ಜಿ: ಗುಲಬರ್ಗಾರವರು ನನಗೆ ಶರಣಪ್ಪ @ ಶರಣು ತಂದೆ ಬಾಬುರಾವ ಬೇಲೂರ ಸಾ: ಅವರಾದ(ಬಿ) ತಾ; ಜಿ: ಗುಲಬರ್ಗಾ ಇನತು ನನಗೆ ಈ ಮೊದಲು ಹೊಟೇಲ ಬಾಕಿ ಕೊಡುವ ವಿಷಯದಲ್ಲಿ ಜಗಳವಾಡಿದ್ದು, ಅದೆ ವೈಷ್ಯಮ್ಯದಿಂದ ಇಂದು ದಿನಾಂಕ 22/1/12 ರಂದು ಮಧ್ಯಾಹ್ನ ಈರಣ್ಣ ಡೋಣಿ ಇವರ ಹೊಲದಲ್ಲಿ ಊಟ ಮಾಡುತ್ತಿದ್ದಾಗ ಅಲ್ಲಿಗೆ ಬಂದು ಜಗಳ ತೆಗೆದು ಅವ್ಯಾಚ್ಛ ಶಬ್ದಗಳಿಂದ ಬೈದು ಕೈಯಿಂದ ಕಲ್ಲಿನಿಂದ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 20/2012 ಕಲಂ 341, 323, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

21 January 2012

GULBARGA DIST REPORTED CRIMES



ಮೋಟಾರ ಸೈಕಲ್ ಮೇಲೆ ಬಂದು ಬಂಗಾರದ ಆಭರಣಗಳು, ನಗದು ಹಣ ದೋಚಿದ ಆರೋಪಿಯ ಬಂದನ .
ನಿನ್ನೆ ದಿನಾಂಕ: 19-01-2012 ರಂದು ರಾತ್ರಿ 11-30 ಗಂಟೆಗೆ ಪ್ರಮೋದ ತಂದೆ ಟಿ.ವಿ ವಾಸುದೇವ ಸಾ ತಳಗಾರ ತಾ ಚಿಂತಾಮಣಿ ಜಿ ಚಿಕ್ಕ ಬಳ್ಳಾಪೂರ ಹಾವ ಗುಬ್ಬಿ ಕಾಲೋನಿ ಗುಲಬರ್ಗಾ ರವರು ನಗದರ ಸೆಂಟರ್ ಕಾಮತ ಮುಖಾಂತರ ಮನೆಗೆ ಹೋಗುವ ಕುರಿತು ಮೋಟಾರ ಸೈಕಲ್ ಮೇಲೆ ಹೋರಟಾಗ ಅವರನ್ನು ನಿಲ್ಲಿಸಿ ಅವನಿಂದ ಬಂಗಾರದ ಆಭರಣ ಮತ್ತು ನಗದು ಹಣ ದೋಚಿದ್ದಾರೆ ಅಂತಾ ಪ್ರಮೋದ ಇವರು ಬ್ರಹ್ಮಪೂರ ಠಾಣೆಯಲ್ಲಿ ದೂರು ಸಲ್ಲಿಸಿದರಿಂದ ಗುನ್ನೆ ದಾಖಲ ಮಾಡಿಕೊಳ್ಳಲಾಗಿತ್ತು, ಮಾನ್ಯ ಎಸ.ಪಿ ಸಾಹೇಬರು, ಹೆಚ್ಚುವರಿ ಎಸಪಿ ಸಾಹೇಬರು ಮತ್ತು (ಎ) ಉಪ-ವಿಭಾಗದ ಎ.ಎಸ.ಪಿ ರವರ ಮಾರ್ಗದರ್ಶನದ ಮೇರೆಗೆ ಬ್ರಹ್ಮಪೂರ ಠಾಣೆಯ ಪಿಐ ರವರು ಮತ್ತು ಸ್ಟೇಶನ ಬಜಾರ ಠಾಣೆರವರು,ಮತ್ತು ಸತ್ಯನಾರಯಣ ಪಿ.ಎಸ.ಐ ಮತ್ತು ಅಪರಾದ ಪತ್ತೆ ದಳದ ಸಿಬ್ಬಂದಿಯವರಾದ ಮಾರುತಿ ಎ.ಎಸ.ಐ, ರಪೀಕ, ಶಿವರಾಜ, ಶಿವಪ್ರಕಾಶ, ಶಶಿಕಾಂತ, ರಾಮು, ದೇವಿಂದ್ರ ಇವರೆಲ್ಲರೂ ಕೂಡಿಕೊಂಡು ಪ್ರಕರಣದ ತನಿಖೆ ಕೈಕೊಂಡಿದ್ದರಿಂದ ದರೋಡೆ ಮಾಡಿದ ಆರೋಪಿ ರಾಮು ಪವಾರ ಇತನನ್ನು ವಶಕ್ಕೆ ತೆಗೆದುಕೊಂಡು ಆತನು ದೋಚಿದ ಬಂಗಾರದ ಆಭರಣಗಳು, ನಗದು ಹಣ ಮತ್ತು ಪಲ್ಸರ್ ಮೊಟಾರ ಸೈಕಲ್ ನಂ ಕೆಎ-32 ಡಬ್ಲೂ-0011 ನೇದ್ದು ವಶಪಡಿಸಿಕೊಂಡಿರುತ್ತಾರೆ. ದಸ್ತಿಗಿರಿ ಮಾಡಿದ ಆರೋಪಿತನನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಲಾಗಿದೆ.
ಜೂಜಾಟ ಪ್ರಕರಣ:
ಸ್ಟೇಶನ ಬಜಾರ ಠಾಣೆ:
ಅಶೋಕ ತಂದೆ ಅವನಪ್ಪ ಉದನೂರ ಸಾಪ್ಲಾಟ ನಂ.117 ಮ.ನಂ.891 ಭಾಗ್ಯವಂತಿ ನಗರ ಗುಲಬರ್ಗಾ, ಸತ್ಯನಾರಾಯಣ ತಂದೆ ಶಂಕರ ಸಾ:2 ನೇ ಬ್ಲಾಕ ಕೆ.ಎಸ್.ಆರ್.ಟಿ.ಸಿ,.ಕ್ವಾಟರ್ಸ ಗುಲಬರ್ಗಾ, ಶರಣಕುಮಾರ ತಂದೆ ರೇವಣಸಿದ್ದಯ್ಯಾ ಪುರಾಣಿಕ ಸಾರಾಘವೇಂದ್ರ ಗುಡಿ ಹತ್ತಿರ ಬ್ರಹ್ಮಪೂರ ಗುಲಬರ್ಗಾ, ರಾಜು ತಂದೆ ಶಿವಶರಣಪ್ಪ ಬೋಸಗಾ, ಕುಮಾರ ತಂದೆ ಸರ್ವೋತ್ತಮ್ಮ ಸಾ ಚಹಾ ಹುಸೇನ್ ಚಿಲ್ಲಾ ಗುಲಬರ್ಗಾ ರವರು ದಿನಾಂಕ:20.01.2012 ರಂದು ಕೆ.ಎಸ್.ಎಸ್.ಐ.ಡಿಸಿ. ಕಾಂಪ್ಲೆಕ್ಸ್ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದಾರೆ ಅಂಥಾ ಮಾಹಿತಿ ಬಂದ ಮೇರೆಗೆ ಪಿ.ಐ.ಸ್ಟೇಷನ ಬಜಾರ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ 4100/-ರೂಪಾಯಿ ನಗದು ಹಣ ಹಾಗೂ ಇಸ್ಪೀಟ್ ಎಲೆಗಳು ಮತ್ತು 5 ಮೋಬೆಲ್ ಗಳು ಜಪ್ತಿ ಪಡಿಸಿಕೊಂಡಿದ್ದರಿಂದ ಗುನ್ನೆ ನಂ: 5/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ:
ಶ್ರೀ ಸಿರಾಜುದ್ದಿನ್ ತಂದೆ ಮೊಹ್ಮದ ಹುಸೇನ ಕೌಲಗಾ ಸಾಸಿಬರಕಟ್ಟಾ ಶಹಾಬಾದ ರವರು ನಾನು ಸೈಕಲ ಮೇಲೆ ಹೋಗುವಾಗ ದಾದಪೀರ ದರ್ಗಾದ ಹತ್ತಿರ ಎದರುಗಡೆಯಿಂದ ಮೋಟಾರ ಸೈಕಲ ನಂ: ಕೆಎ-32 ಎಸ್-6081 ನೇದ್ದರ ಚಾಲಕ ರಾಚಪ್ಪಾ ತಂದೆ ನಿಂಗಪ್ಪಾ ಉಪ್ಪಿನ ಸಾ: ಕಿರಣಗಿ ಇತನು ತನ್ನ ಮೊಟಾರ ಸೈಕಲನನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿದ್ದರಿಂದ ನಾನು ಕೆಳಗೆ ಬಿದ್ದೇನು ಅಪಘಾತದಿಂದಾಗಿ ನನಗೆ ಭಾರಿ ಒಳಪೆಟ್ಟಾಗಿದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 9/2012 ಕಲಂ 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ದರೋಡೆ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀ.ಪ್ರಮೋದ ಟಿ.ವಿ ತಂದೆ ವಾಸುದೇವ ಸಾ ತಳಗವಾರ, ತಾ ಚಿಂತಾಮಣಿ, ಜಿ ಚಿಕ್ಕಬಳ್ಳಾಪೂರ, ಹಾವ ಗುಬ್ಬಿ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ: 19/01/2012 ರಂದು 2330 ಗಂಟೆಯಿಂದ 2345 ಗಂಟೆಯ ಮದ್ಯದ ಅವಧಿಯಲ್ಲಿ ನನ್ನ ಮೋಟರ ಸೈಕಲ ನಂ: ಕೆಎ 53 ಕ್ಯೂ 9393 ನೇದ್ದರ ಮೇಲೆ ಮನೆಗೆ ಹೋಗುವ ದಾರಿ ಮದ್ಯದ ಸೆಂಟರ ಕಾಮತ ಎದುರುಗಡೆಯಿಂದ ಪಲ್ಸರ್ ಮೋಟರ ಸೈಕಲ ನಂ: ಕೆಎ 32 ಡಬ್ಲು 0011 ನೇದ್ದರ ಸವಾರನು ನನ್ನನ್ನು ನಿಲ್ಲಿಸಿ ಕೈಯಿಂದ ಮುಖದ ಮೇಲೆ ಹೊಡೆದು, ತಲೆ ಹಿಡಿದು ಕಂಬಕ್ಕೆ ಹೊಡೆದು ಎಡಹಲ್ಲನ್ನು ಮುರಿದು ಕುತ್ತಿಗೆಗೆ ಭಾರಿಗಾಯ ಪಡಿಸಿ ನನ್ನ ಹತ್ತಿರವಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ ಹೀಗೆ ಒಟ್ಟು ಅಕಿ 74500/- ಮೌಲ್ಯದ್ದು ಕಸಿದುಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 14/12 ಕಲಂ: 397 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

20 January 2012

GULBARGA DIST REPORTED CRIMES

ಕೊಲೆ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀಶೈಲ್ ತಂದೆ ಕಲ್ಯಾಣಿ ಭಿಮಪೂರೆ ಮುಖಜೂರಿ ತಾಆಳಂದ ರವರು ನಮ್ಮ ತಂದೆ ಕಲ್ಯಾಣಿ ಭೀಮಾಪುರೆ ಇವರು ಮತ್ತು ನಾವೆಲ್ಲರೂ ಕೂಲಿ ಕೆಲಸ ಮಾಡಿಕೊಂಡು ಮನೆಗೆ ಬಂದಿದ್ದು, ನಮ್ಮ ತಂದೆಯವರು ನಾವು ಪಾಲದಿಂದ ಮಾಡಿದ ಘಾಡೆಯವರ ಹೋಲಕ್ಕೆ ಉಳ್ಳಾಗಡ್ಡಿ ಕಿತ್ತುವ ಕೆಲಸಕ್ಕೆ ಹೋಗಿ ಬಂದಿರುತ್ತಾರೆ. ರಾತ್ರಿ 8.00 ಗಂಟೆ ಸುಮಾರಿಗೆ ನಮ್ಮ ತಂದೆಯವರು ಮನೆಯಿಂದ ಹೋರಗೆ ಹೋದರು ನಾನು ಸಹ ಮನೆಯ ಹೋರಗೆ ಹೋದೆನು ರಾತ್ರಿ 9.00 ಗಂಟೆಯ ಸುಮಾರಿಗೆ ನಾನು ಹೋರಗಿನಿಂದ ಮನೆಗೆ ಬಂದಿದ್ದು ನಮ್ಮ ತಮ್ಮ ದತ್ತಾ ಇವನು ನಾನು ನಾವು ಪಾಲದಿಂದ ಮಾಡಿದ ಘಾಡೆಯವರ ಹೋಲಕ್ಕೆ ಹೋಗಿದ್ದು ನಮ್ಮ ತಂದೆಯವರು ಹೋರಗೆ ಹೋದವರು ಮನೆಗ ಬಂದಿಲ್ಲ ನಾನು ಬರಬಹುದು ಅಂತಾ ತಿಳಿದು ಊಟ ಮಾಡಿಕೊಂಡು ಮನೆಯಲ್ಲಿ ಮಲಗಿದೆನು, ಇಂದು ದಿನಾಂಕ 20/01/2012 ರಂದು ಮುಂಜಾನೆ ನಮ್ಮ ತಂದೆ ನಿನ್ನೆ ರಾತ್ರಿ ಮನೆಗೆ ಬರದೆ ಇರುವದರಿಂದ ಅವರ ಮೋಬೈಲ ಪೋನ ನಂಬರ
9739107677 ಕ್ಕೆ ಪೋನ ಮಾಡಿದೆನು ಪೋನ ಹತ್ತಿಲ್ಲಿಲ್ಲ, ಬೀಮರಾಯ ಡಗೆ ಇವರು ನನಗೆ ಕರೆದು ನಿಮ್ಮ ತಂದೆಯವರಿಗೆ ತಳವಾರ ಹೋಲದಲ್ಲಿ ಹೊಡೆದು ಬಿಸಾಡಿದ್ದಾರೆ ಅಂತಾ ಹೇಳಿದ್ದರಿಂದ ನಾನು ಮತ್ತು ಶರಣಪ್ಪ ಹೋಸಮನಿ ಹಾಗೂ ಇತರರೊಂದಿಗೆ ತಳವಾರ ಹೊಲಕ್ಕೆ ಹೋಗಿ ನೋಡಲು ಹೋಲದ ಬಂದಾರಿ ಹತ್ತಿರ ಶವ ಬಿದಿದ್ದು ಅವರಿಗೆ ನೋಡಲು ದೇಹದ ಭಾಗದಲ್ಲಿ ಭಾರಿ ರಕ್ತಗಾಯವಾಗಿರುತ್ತವೆ, ನಮ್ಮ ತಂದೆಯವರಿಗೆ ಯಾರೋ ಅಪರಿಚಿತರು ದಿನಾಂಕ:19/01/2012 ರ ರಾತ್ರಿ 8.00 ಗಂಟೆಯಿಂದ ದಿನಾಂಕ 20/01/2012 ರ ಮುಂಜಾನೆ ಅವಧಿಯಲ್ಲಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 13/2012 ಕಲಂ 302, 201 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಶಹಾಬಾದ ನಗರ ಪೊಲೀಸ ಠಾಣೆ:
ದಿನಾಂಕ:20/01/2012 ರಂದು ಶ್ರೀ ಬಸವರಾಜ ಸಿಪಿಸಿ ಶಹಾಬಾದ ನಗರ ಠಾಣೆರವರು ಸ್ವತ್ತಿನ ಪ್ರಕರಣದಲ್ಲಿ ಆರೋಪಿತರ ಪತ್ತೆ ಕುರಿತು ಮಾಹಿತಿ ಸಂಗ್ರಹಿಸಲು ಶಹಾಬಾದ ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಭಂಕೂರ, ದೇವನ ತೆಗನೂರ ಕಡೆಗೆ ಹೋಗುವಾಗ ದೇವನ ತೆಗನೂರ ಬಸಸ್ಟಾಂಡ ಹತ್ತಿರ ಒಬ್ಬನು ಸರಾಯಿ ಕುಡಿದ ಅಮಲಿನಲ್ಲಿ ಚಿರಾಡುವದು, ಬೈಯುವದು, ಮಾಡುತ್ತಿದ್ದು ಸಾರ್ವಜನಿಕ ಸ್ಥಳದಲ್ಲಿ ಶಾಂತತಾ ಭಂಗವನ್ನುಂಟು ಮಾಡುತ್ತಿದದ್ದನ್ನು ನೋಡಿ ವಶಕ್ಕೆ ತೆಗೆದುಕೊಂಡು ಆತನ ಹೆಸರು ವಿಚಾರಿಸಲು ವಿಠ್ಠಲ ತಂದೆ ಖೂಬು ಚವ್ಹಾಣ ಸಾ:ದೇವನತೆಗನೂರ ಅಂತಾ ಹೇಳಿದನು. ಸದರಿಯವನಿಗೆ ಹಾಗೆ ಬಿಟ್ಟಲ್ಲಿ ಶಾಂತತೆ ಭಂಗವನ್ನುಂಟು ಮಾಡಬಹುದೆಂದು ತಿಳಿದು ವರದಿ ಸಲ್ಲಿಸಿದ ಮೇರೆಗೆ ಠಾನೆ ಗುನ್ನೆ ನಮ: 8/2012 ಕಲಂ 110 (ಇ) & (ಜಿ) ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹುಡಗಿ ಅಪಹರಣ ಪ್ರಕರಣ:
ಸೇಡಂ ಠಾಣೆ:
ಶ್ರೀ ಈರಣ್ಣ ತಂದೆ ಚಂದ್ರಶೇಖರ ಕಲಕಂಬಾ ಸಾ: ಊಡಗಿ ರವರು ನನ್ನ ಮಗಳಾದ ಸಂಗಿತಾ ಇವಳಿಗೆ ಗ್ರಾಮದ ಭಾಗೇಶ ತಂದೆ ಪರಮೇಶ್ವರ ಬಡಿಗೇರ ಇತನು 6 ತಿಂಗಳ ಹಿಂದೆ ನನ್ನ ಮಗಳಾದ ಸಂಗಿತಾ ಇವಳಿಗೆ ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ದಿನಾಲು ಪಿಡಿಸುವುದು ಮಾಡುತ್ತಿದ್ದು ಈ ಬಗ್ಗೆ ಅವಳ ತಲೆ ಕೆಡಸಬೇಡ ಅಂತಾ ಭಾಗೇಶ ಇತನಿಗೆ ಎಚ್ಚರಿಕೆ ನೀಡಿದರೂ ಕೂಡ ಅವನು ಒಂದಿಲ್ಲ ಒಂದು ದಿವಸ ಸಂಗೀತ ಇವಳಿಗೆ ಓಡಿಸಿಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ತಕರಾರು ಮಾಡಿದನು ದಿನಾಂಕ:12-01-2012 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಸಂಗಿತಾ ಇವಳಿಗೆ ಭಾಗೇಶ ಮತ್ತು ಅವನ ಅಣ್ಣ ಗಣೇಶ ಅಲ್ಲದೆ ರಜಾಕ ನಾಯ್ಕೋಡಿ 3 ಜನರು ಕೂಡಿ ಸಂಗಿತಾ ಇವಳಿಗೆ ಕೈ ಹಿಡಿದು ಎಳೆದುಕೊಂಡು ದಿಗ್ಗಾವಂ ರಸ್ತೆ ಕಡೆಗೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆನಂ 19/2012 ಕಲಂ 366(ಎ) ಸಂಗಡ 34 ಐಪಿಸಿ ನ್ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಮಾನನಷ್ಟ ಮೊಖದೊಮ್ಮೆ ಪ್ರಕರಣ:
ಆಳಂದ ಪೊಲೀಸ ಠಾಣೆ:
ಆಳಂದ ತಾಲೂಕಾ ಪಂಚಾಯಿತ ಅಧ್ಯಕ್ಷರ ಚುನಾವಣೆ ನಡೆದ ನಂತರದ ಸಂದರ್ಭದಲ್ಲಿ ಆಳಂದ ತಾಲುಕಿನ ತೀರ್ಥ ಗ್ರಾಮದ ಶ್ರೀ ಗೋಪಿನಾಥ ತಂದೆ ರೇವಣಪ್ಪ ಸಿಂಗೆ ಮತ್ತು ನಸಿರವಾಡಿ ಗ್ರಾಮ, ಬಾಬು ತಂದೆ ಅಂಬರಾಯ ಬೇಮಣಗೆ, ಶಾಂತಪ್ಪ ತಂದೆ ಹಣಮಂತ ಹುಲ್ಲೆ ಇವರುಗಳು ಸಾರ್ವಜನಿಕರ ಎದುರುಗಡೆ ನನ್ನ ವೈಯಕ್ತಿಕ ಹೆಸರಿನಿಂದ ಅವಾಚ್ಯೆ ಶಬ್ದಗಳಿಂದ ಮಾನ ಹಾನಿಯಾಗುವಂತೆ ಬೈಯ್ದಾಡಿರುತ್ತಾರೆ. ಅಂತಾ ಕೆಲವರು ನನ್ನ ಗಮನಕ್ಕೆ ತಿಂದಿರುವದರಿಂದ ಸುಭಾಷ ಆರ್ ಗುತ್ತೆದಾರ ಸಾ:ಆಳಂದರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 12/2012 ಕಲಂ 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಯತ್ನ ಪ್ರಕರಣ:
ಮಹಾಗಾಂವ ಪೊಲೀಸ ಠಾಣೆ:
ಮಹೇಶ ತಂದೆ ಗುಂಡಪ್ಪಾ ಸಾಹು ಸಾ:ಕುರಿಕೋಟಾ ತಾ;ಜಿ: ಗುಲಬರ್ಗಾ ರವರು ನಾನು ಮತ್ತು ನನ್ನ ಅಣ್ಣನಾದ ರಮೇಶ ಈತನು ನಮ್ಮೂರಲ್ಲಿ ಸಾರ್ವಜನಿಕರೊಂದಿಗೆ ಬೆರೆತು ನ್ಯಾಯ ಪಂಚಾಯತಿ ಹಾಗೂ ಸಮಾಜದಲ್ಲಿಯ ಆಗುಹೋಗುವ ಸಮಸ್ಯೆ ಬಗೆಹರಿಸುವುದು ಮಾಡುತ್ತಾನೆ.ಅಲ್ಲದೇ ಈಗ ಎರಡು-ಮೂರು ದಿವಸಗಳಿಂದ ನಮ್ಮ ಗ್ರಾಮದ ಹರಿಜನ ಓಣಿಯ ಕೈಲಾಸ ತಂದೆ ತಿಪ್ಪಣ್ಣ ಕಲ್ಲಾ ಎಂಬುವವನು ಸಾರ್ವಜನಿಕರಿಗೆ ಬೈಯುವುದು, ಹೊಡೆಯಲಿಕ್ಕೆ ಹೋಗುವುದು ಮಾಡುತ್ತಾ ಸಿಕ್ಕ ಸಿಕ್ಕವರಿಗೆ ತೊಂದರೆ ಕೊಡುವುದು ಮಾಡುತ್ತಿದ್ದು., ಆದ್ದರಿಂದ ಆತನಿಗೆ ನನ್ನ ಅಣ್ಣ ರಮೇಶ ಈತನು ಈ ರೀತಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿ ಅಲ್ಲ ಅಂತಾ ಬುದ್ದಿವಾದ ಹೇಳಿದ್ದರಿಂದ ಆತನು ನನ್ನ ಅಣ್ಣನಿಗೆ ಅವಾಚ್ಯ ಶಬ್ದಗಳಿಂದ ಬೈದು ನಿನಗೆ ನೋಡಿಯೇ ಬಿಡುತ್ತೇನೆ ಅಂತಾ ಅಂದು ತಕರಾರು ಮಾಡಿರುತ್ತಾನೆ ದಿನಾಂಕ: 19/01/2012 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಮತ್ತೆ ಕೈಲಾಸ ತಂದೆ ತಿಪ್ಪಣ್ಣ ಕಲ್ಲಾ ಈತನು ಪುನಃ ಅದೇ ರೀತಿ ಸಾರ್ವಜನಿಕರಿಗೆ ಹೊಡೆಯುವುದು ಮಾಡುತ್ತಿದ್ದರಿಂದ ನನ್ನ ಅಣ್ಣ ರಮೇಶ ಮತ್ತು ನಮ್ಮೂರ ಪ್ರಮುಖರು ಸಮಕ್ಷಮದಲ್ಲಿ ಬುದ್ದಿವಾದ ಹೇಳಬೇಕೆಂದು ನಮ್ಮೂರ ಬಸ್ ನಿಲ್ಲುವ ಸ್ಥಳದ ಹತ್ತಿರ ಕೈಲಾಸ ತಂದೆ ತಿಪ್ಪಣ್ಣ ಕಲ್ಲಾ ಹಾಗೂ ತಮ್ಮ ಮಲ್ಲು ತಂದೆ ತಿಪ್ಪಣ್ಣ ಕಲ್ಲಾ ಹಾಗೂ ಆತನ ತಂದೆ ತಿಪ್ಪಣ್ಣ ತಂದೆ ಭೀಮಶ್ಯಾ ಕಲ್ಲಾ ಇವರುಗಳಿಗೆ ಕರೆಯಿಸಿ ಮಲ್ಲು ಹಾಗೂ ತಿಪ್ಪಣ್ಣನಿಗೆ ಈ ರೀತಿ ಮಾಡುವುದು ಸರಿ ಅಲ್ಲ ಅಂತಾ ಹೇಳಿರಿ ಅಂತಾ ಹೇಳುವಾಗ ಮಲ್ಲು ಹಾಗೂ ತಿಪ್ಪಣ್ಣ ಇವರು ಈ ಭೋಸಡಿ ಮಗನದು ಬಹಳ ಆಗಿದೆ ನೋಡಿಯೇ ಬಿಡು, ಖಲಾಸ ಮಾಡು ಅಂತಾ ಅಂದಾಗ ಕೈಲಾಸ ತಂದೆ ತಿಪ್ಪಣ್ಣ ಕಲ್ಲಾ ಇತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ಅಣ್ಣ ರಮೇಶ ಈತನ ತೆಲೆಯ ಬಲಗಡೆ ಹೊಡೆದು ಭಾರಿ ರಕ್ತಗಾಯ ಮಾಡಿ ನನ್ನ ಅಣ್ಣನಿಗೆ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 04/2012 ಕಲಂ 307.504.114. ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

19 January 2012

GULBARGA DIST REPORTED CRIME

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:
ಶ್ರೀ ರಾಜಶೇಖರ ತಂದೆ ಧೂಳಪ್ಪ ಗುಡ್ಡಾ ಸಾಬಿದನೂರ ಹಾವಪ್ಲಾಟ ನಂ:75 ಕರುಣೇಶ್ವರ ನಗರ ಗುಲಬರ್ಗಾ ರವರು ನನ್ನ ಮನೆಯ ಹತ್ತಿರದಲ್ಲಿರುವ ನಾಗಪ್ಪ ತಂದೆ ಶಿವಶರಣಪ್ಪ ಹಯ್ಯಾಳ ಇವರ ಕಾಂಪ್ಲೇಕ್ಸದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೆನೆ. ಮುಂಜಾನೆ 11 ಗಂಟೆಗೆ ಮನೆಗೆ ಕೀಲಿ ಹಾಕಿಕೊಂಡು ರಾಮ ಮಂದಿರ ಕಡೆಗೆ ಕಿರಾಣಿ ಸಾಮಾನು ತರಲು ಹೋಗಿ ಮರಳಿ ನನ್ನ ಕಿರಾಣಿ ದುಕಾನಕ್ಕೆ ಬಂದು ನನ್ನ ಹೆಂಡತಿಯಿಂದ ಮನೆಯ ಕೀಲಿ ಕೈ ತೆಗೆದುಕೊಂಡು ಮನೆಗೆ ಬಂದಾಗ ಮನೆಯ ಬಾಗಿಲಿಗೆ ಹಾಕಿದ ಕೀಲಿ ಕೊಂಡಿ ಮುರಿದು ಬಾಗಿಲು ಖುಲ್ಲಾ ಇದ್ದು ಗಾಬರಿಗೊಂಡು ನೋಡಲಾಗಿ ಬೆಡ್ ರೂಮನಲ್ಲಿ ಎಲ್ಲಾ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿರುತ್ತವೆ. ಲಾಕರದಲ್ಲಿಟ್ಟ ಬಂಗಾರದ ಆಭರಣಗಳು ಇರಲಿಲ್ಲಾ. ನನ್ನ ಹೆಂಡತಿಗೆ ತಿಳಿಸಿದ್ದರಿಂದ ಅವಳು ಸಹ ಅಂಗಡಿಯಿಂದ ಬಂದು ಇಬ್ಬರು ನೋಡಲಾಗಿ ಯಾರೋ ಕಳ್ಳರು ಬಂಗಾರದ ಆಭರಣಗಳು 14 ತೊಲೆ, ಬೆಳ್ಳಿಯ ಆಭರಣಗಳು 6 ತೊಲೆ, ಮತ್ತು ನಗದು ಹಣ 5000/- ರೂ ಹೀಗೆ ಒಟ್ಟು 3,19,700/- ರೂ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 7/2012 ಕಲಂ. 454, 380 ಐಪಿಸಿ ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಮಹಿಳೆಯ ಮೇಲೆ ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀಮತಿ ಪಾರ್ವತಿ ಗಂಡ ಮಾರ್ತಂಡ ಆಲೂರ ಸಾ:ಮಾಲಗತ್ತಿ ಗ್ರಾಮ ರವರು ನಾನು ದಿ:18/01/2012 ರಂದು ಸಂಜೆ 7.30 ಗಂಟೆ ಸುಮಾರಿಗೆ ಆರಾಮ ವಿಲ್ಲದ ಕಾರಣ ಕಿರಣಾ ಅಂಗಡಿಯಲ್ಲಿ ಔಷದ ತೆಗೆದುಕೊಳ್ಳಲು ಹೋಗುತ್ತಿದ್ದಾಗ ರಾಜಪ್ಪಾ ಇತನು ಭೂಮಿಯ ಸಂಬಂಧ ಅವಾಚ್ಯವಾಗಿ ಬೈಯುತಿದ್ದು ಯಾಕೆ ಬೈಯುತ್ತಿ ಅಂತಾ ಅಂದಿದ್ದಕ್ಕೆ ಕುತ್ತಿಗೆ, ಹೆಣಲು ಹಿಡಿದು ಜಗ್ಗಾಡಿ ಕೆಳಗೆ ಕೆಡವಿ ಕೈಯಿಂದ ಮತ್ತು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದನು. ಜಗಳ ಸಪ್ಪಳ ಕೇಳೆ ನನ್ನ ಸವತಿ ನಾಗಮ್ಮ ಜಗಳ ಬಿಡಿಸಲು ಬಂದಾಗ ಅವಳಿಗೂ ಕೂಡಾ ಕೈಯಿಂದ ಮತ್ತು ಕಾಲಿನಿಂದ ಹೊಟ್ಟೆಗೆ ಒದ್ದನು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 7/2012 ಕಲಂ 323, 354, 504 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗ್ರಾಮೀಣ ಠಾಣೆ:
ಶ್ರೀ ಮಹಮ್ಮದ ಮೈನೊದ್ದಿನ ತಂದೆ ಅನಸರ ಪಟೇಲ್ ಮತ್ತು ಗೋವಿಂದ ತಂದೆ ಗಂಗಣ್ಣಾ ಜಮದಾರ ಸಾ;ತಾವರಗೇರಾ ತಾ;ಜಿ ಗುಲಬರ್ಗಾರವರು ದಿನಾಂಕ. 18-1-2012 ರಂದು ಮುಂಜಾನೆ ತಾವರಗೇರಾ ಗ್ರಾಮದ ಮಲ್ಲಿಕಾರ್ಜುನ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ರಸ್ತೆಗೆ ಹೋಗಿ ಬರುವ ಜನರಿಗೆ ಹೆದರಿಸುತ್ತಾ ಮತ್ತು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು ಸಾರ್ವಜನಿಕ ಶಾಂತತೆಯನ್ನು ಭಂಗವನ್ನುಂಟು ಮಾಡುತ್ತಿದ್ದಾಗ ಸದರಿಯವರನ್ನು ಅಧಿಕಾರಿ ಮತ್ತು ಸಿಬ್ಬಂದಿಯವರು ಹಿಡಿದು ವಿಚಾರಿಸಲು ಪೊಲೀಸ್ ರೊಂದಿಗೆ ತಕರಾರು ಮಾಡುತ್ತಿದ್ದಾಗ ಸದರಿಯವರು ಮುಂಜಾಗೃತ ಕ್ರಮ ಕುರಿತು ಠಾಣೆ ಗುನ್ನೆ ನಂ. 12/2012 ಕಲಂ. 110 (ಇ.&ಜಿ) ಸಿ.ಆರ್.ಪಿ.ಸಿ.ನೆದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡಿರುತ್ತಾರೆ.

18 January 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ :
ಶ್ರೀ ಜಳಬಾ ತಂದೆ ಮಾರುತಿ ಗೋಸನರ ಸಾ ಪಂಫಳಗುಟ್ಟಾ ತಾ ಮುಖ್ಯಾಡ ಜಿ ನಾಂದೇಡರವರು ನಾನು ಮತ್ತು ಸಚೀನ ಸರಪತಿ ಇಬ್ಬರೂ ದಿನಾಂಕ 07/01/2012 ರಂದು 10 ಗಂಟೆ ಸಮಯಕ್ಕೆ ಹಿರೋ ಹೊಂಡಾ ಮೊಟಾರ ಸೈಕಲ ನಂ. ಎಮ್ ಹೆಚ್-20 ಜಿ-5445 ನೇದ್ದರ ಮೇಲೆ ಅಫಜಲಪೂರಕ್ಕೆ ಬಂದು ಮರಳಿ ಪ್ಯಾಕ್ಟರಿ ಕಡೆಗೆ ಹೋಗುತ್ತಿದ್ದಾಗ ಮೋಟಾರ ಸೈಕಲ್ ನ್ನು ಸಚೀನನು ನಡೆಸುತ್ತಿದ್ದು ಘತ್ತರಗಾ ರೋಡ ಕಡೆಯಿಂದ ಒಂದು ಟ್ರ್ಯಾಕ್ಟರ ಟ್ರಾಲಿ ನಂ. ಕೆ ಎ-32 ಟಿ-0646 ಟ್ರ್ಯಾಲಿ ನಂ. ಕೆ ಎ-32 ಟಿ ಎ-0525 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಅಪಘಾತ ಪಡೆಸಿದ್ದರಿಂದ ನನಗೆ ಮತ್ತು ಸಚೀನ ಇತನಿಗೆ ಭಾರಿ ರಕ್ತಗಾಯವಾಗಿರುತ್ತದೆ. ಉಪಚಾರ ಸಲುವಾಗಿ ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು, ಉಪಚಾರ ಪಡೆಯುತ್ತಾ ಸಚಿನ ಇತನು ಮೃತಪಟ್ಟಿರುತ್ತಾನೆ ಟ್ರಾಕ್ಟರ ಚಾಲಕ ಟ್ರಾಕ್ಟರ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 12/2012 ಕಲಂ 279 337 304 (ಎ) ಐ ಪಿ ಸಿ ಸಂ. 187 ಐ ಎಮ್ ವಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ರೋಜಾ ಪೊಲೀಸ್ ಠಾಣೆ:
ಶ್ರೀ ಹಸನಲಿ ಜಾಹೀದ ತಂದೆ ಮಿರಾನಸಾಬ ಸಾ:ಖಮರ ಕಾಲೋನಿ ಗುಲಬರ್ಗಾ ರವರು ನಾನು ನ್ಯೂಜ ಪೇಪರ ಓದುತ್ತಾ ಕುಳಿತಿದ್ದ, ಮಗನಾದ ಇರ್ಪಾನ ಇತನು ಅಂಗಡಿಗೆ ಹೋದನು, ನನ್ನ ಹೆಂಡತಿಯಾದ ಜಾಹಿದಾ ಬೇಗಂ ಇವರು ಮಗಳ ಮನೆಗೆ ಹೋಗಿದ್ದು, ಸೊಸೆಯಾದ ಅಜಮತ ಯಾಸ್ಮಿನ ಇವಳು ಸ್ನಾನ ಮಾಡಲು ಸ್ನಾನದ ಕೋಣೆಗೆ ಹೋಗಿದ್ದಳು ಸಮಯ ಬೆಳಗಿನ 11:30 ಗಂಟೆಯಾಗಿದ್ದು ನಮ್ಮ ಸೊಸೆಯಾದ ಅಜಮತ ಯಾಸ್ಮೀನ ಇವಳು ಒಮ್ಮೆಲೆ ಚೀರಿದ ಶಬ್ದ ಕೇಳಿ ಹೊರಗಡೆ ಹಾಲಿನಲ್ಲಿ ಬಂದು ನೋಡಿದಾಗ ಒಬ್ಬ ಅಪರಿಚಿತ ಮನುಷ್ಯನು ಮತ್ತು ಒಬ್ಬಳು ಬುರ್ಕಾದ ಹೆಣ್ಣು ಮಗಳು ಬಾಗಿಲಿನಿಂದ ಹೊರಗಡೆ ಓಡಿ ಹಿಂದಿನ ಬಾಗಿಲದಿಂದ ಓಡಿ ಹೋದರು ನಂತರ ನನ್ನ ಸೊಸೆಗೆ ಕೈಗೆ ನೋಡಲು ರಕ್ತಗಾಯವಾಗಿರುತ್ತದೆ, ಸೊಸೆ ಅಪರಿಚಿತ ಮನುಷ್ಯನಿಗೆ ತಡೆಗಟ್ಟಲು ಹೋದಾಗ ಆತನು ಚಾಕುದಿಂದ ಹೊಡೆದು ಗಾಯ ಪಡೆಸಿರುತ್ತಾನೆ ಅಂತಾ ತಿಳಿಸಿದಳು ಬೆಡ್ ರೂಮಿನಲ್ಲಿ ಬಂದು ನೋಡಲು ಅಲಮಾರಿ ಲಾಕರ ಮುರಿದು ಬಾಕ್ಸದಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು ಒಂದು ಲೇಡಿಸ್ ರಿಸ್ಟ್ ವಾಚ್ ಹೀಗೆ ಒಟ್ಟು 79,000/- ರೂಪಾಯಿ ಬೆಲೆಬಾಳುವ ಬಂಗಾರದ ಆಭರಣ ಮತ್ತು ಲೇಡೀಜ ವಾಚ್ ದೋಚಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:04/2012 ಕಲಂ 394 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಜಗದೇವಪ್ಪ @ ಜಗನ್ನಾಥ ತಂದೆ ಮಾಧುರಾಯ ರೇವಣಿ ಸಾ: ಕಲ್ಲಹಂಗರಗಾರವರು ನಾನು ದಿ: 17/1/12 ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ ಮೋಟಾರ ಸೈಕಲ್ ನಂ ಕೆಎ 32 ಡಬ್ಲು 6393 ನೇದ್ದರ ಮೇಲೆ ಪಟ್ಟಣ್ಣ ಗ್ರಾಮಕ್ಕೆ ಹೊರಟಾಗ ಆಳಂದ ರಸ್ತೆಯ ಶಾಂತಪ್ಪ ಕಾರವಾರಿ ಇವರ ಹೊಲದ ಹತ್ತಿರ ಟಾಟಾ ಇಂಡಿಕಾ ಕಾರ ನಂ ಕೆಎ 32 ಎಮ್‌ 7590 ನೇದ್ದರ ಚಾಲಕ ತನ್ನ ಕಾರನ್ನು ಅತೀವೇಗ & ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿ ಪಡೆಯಿಸಿ ಭಾರಿ ಹಾಗೂ ಸಾದಾ ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:11/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

17 January 2012

GULBARGA DIST REPORTED CRIME

ಕೊಲೆ ಪ್ರಕರಣ:
ನರೋಣಾ ಪೊಲೀಸ ಠಾಣೆ:
ದಿನಾಂಕ:16/01/2012 ರಂದು ನಾನು ಶ್ರೀಮಂತರಾವ ಎ ಎಸ್ ಐ ನರೋಣಾ ಪೊಲೀಸ ಠಾಣೆಯಲ್ಲಿದ್ದಾಗ ನನಗೆ ಬೇರೆ ಮೋಬೈಲ್ ನಂ: 9886382800 ರ ದಿಂದ ಕರೆ ಬಂದಿದ್ದೆನೆಂದರೆ, ಕಡಗಂಚಿ ಗ್ರಾಮದ ಸಿಮಾಂತರ ಸಿದ್ದಾರೂಡ ಚೌಲ ಇವರ ಹೊಲದ ಹತ್ತಿರದ ಕಚ್ಚ ದಾರಿಯಲ್ಲಿ ಅಪರಿಚಿತ ಒಬ್ಬಹೆಣ್ಣು ಮಗಳು ಅಂದಾಜು 22-25 ವರ್ಷದವಳು ಇವಳು ಸತ್ತು ಬಿದ್ದಿರುತ್ತಾಳೆ. ಮುಖದ ಮೇಲೆ ಭಾರಿಗಾಯವಾಗಿರುತ್ತದೆ ಅಂತಾ ಹೇಳಿದ್ದರಿಂದ ನಾನು ನನ್ನ ಸಂಗಡ ಹೆಚ ಸಿ ಮಹಾಂತಪ್ಪ ಇವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲು ಒಬ್ಬ ಹೆಣ್ಣು ಮಗಳು ಅಪರಿಚಿತವಿದ್ದು ಅವಳ ಹೆಸರು ವಿಳಾಸ ಗೊತ್ತಾಗಿಲ್ಲ. ಶವ ಪರಿಶೀಲಿಸಿ ನೋಡಲು ಎಡಕಪಾಳ ಮೇಲೆ ಕಣ್ಣಿಗೆ , ಹುಬ್ಬಿನ ಮೇಲೆ. ಬಾಯಿಗೆ , ಭಾರಿಗಾಯ ಮಾಡಿ ಕೋಲೆ ಮಾಡಿದ್ದು ಕಂಡು ಬಂದಿರುವದರಿಂದ ನಾನು ಠಾಣೆಗೆ ಬಂದು ವರದಿ ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ 10/2012 ಕಲಂ 302 201 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

16 January 2012

Gulbarga Dist Reported Crimes

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಶಿವಕುಮಾರ ತಂದೆ ಬಸಯ್ಯ ಸಾ: ಮನೆ :ಸಿ 2-01 ಹೈ ಕೋರ್ಟ ಕ್ವಾಟರ್ಸ ಗುಲಬರ್ಗಾ ರವರು ನಾನು ದಿನಾಂಕ 16-01-2012 ರಂದು 12-00 ಗಂಟೆಗೆ ಜಗತ ಸರ್ಕಲ್ ದಿಂದ ಎಸ್.ವಿ.ಪಿ.ಸರ್ಕಲ್ ಮೇನ ರೋಡಿನಲ್ಲಿ ಬರುವ ಸಿದ್ದಿ ಪಾಶಾ ದರ್ಗಾ ಹತ್ತಿರ ಕಾರ ನಂ: ಕೆಎ 01 ಜಿ 4860 ನೇದ್ದರಲ್ಲಿ ಹೋಗುತ್ತಿದ್ದಾಗ ಅಟೋರೀಕ್ಷಾ ನಂ: ಕೆಎ 32 ಎ 889 ನೇದ್ದರ ಚಾಲಕ ಜಗತ ಸರ್ಕಲ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮುಂದಗಡೆ ಹೋಗುತ್ತಿದ್ದ ಕಾರಿಗೆ ನೆದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಕಾರಿಗೆ ಜಕಂ ಮಾಡಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 9/2012 ಕಲಂ 279 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಾವು ಕಚ್ಚಿ ಬಾಲಕ ಸಾವು:
ಗುಲಬರ್ಗಾ ಗ್ರಾಮೀಣ ಠಾಣೆ:
ಗೌಸ @ ಗೌಸಮಿಯ್ಯಾ ತಂದೆ ಜಿಲಾನಮಿಯ್ಯಾ @ ಜಿಲಾನಿ ಮುಜಾವರ @ ಖಾದೀಮ ವ:16 ವರ್ಷ ಇತನು ದಿನಾಂಕ 16-01-12 ರಂದು ಮಧ್ಯಾಹ್ನ 12-30 ಸುಮಾರಿಗೆ ತಮ್ಮ ಅಡುಗೆ ಮನೆಯಲ್ಲಿ ಗೋಳಕಲ್ಲಿನ ಗೋಡೆಗೆ ಹತ್ತಿ ನಿಂತಾಗ ಗೋಡೆ ಒಳಗಿನಿಂದ ಹಾವು ಬಂದು ಗೌಸನ ಎಡಗಾಲ ಹಿಂಬದಿಯ ಹಿಂಭಾಗದ ಮೇಲೆ ಕಚ್ಚಿದ್ದರಿಂದ ರಕ್ತ ಚಿಮ್ಮಿದ ಗಾಯವಾಗಿದ್ದು, ಅವನಿಗೆ ಉಪಚಾರ ಕುರಿತು ಸರಕಾರಿ ದವಾಖಾನೆಗೆ ತರುವಾಗ ಮೃತಪಟ್ಟಿರುತ್ತಾನೆ ಅಂತಾ ವೈಧ್ಯರು ತಿಳಿಸಿರುತ್ತಾರೆ. ಈತನ ಸಾವಿನಲ್ಲಿ ಯಾವದೇ ಸಂಶಯ ಇರುವುದಿಲ್ಲಾ ಅಂತಾ ಶ್ರೀ ಜಾನಿಮಿಯ್ಯಾ ತಂದೆ ಮಹಿಮೊದಮಿಯ್ಯಾ ಮುಜಾವರ @ ಖಾದೀಮ ಸಾ: ಸೈಯ್ಯದ ಚಿಂಚೋಳಿ ಗ್ರಾಮ ತಾ:ಜಿ: ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಯು,ಡಿ,ಅರ್, ನಂ: 04/2012 ಕಲಂ 174 ಸಿಅರಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಜಾತಿ ನಿಂದನೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:
ಶರಣು@ ಶರಣಪ್ಪಾ ತಂದೆ ಶಂಕರ ಬಾಳ ಸಾ:ಫರಹತಾಬಾದ ತಾ:ಜಿ: ಗುಲಬರ್ಗಾ ರವರು ನಾನು ದಿನಾಂಕ 14/1/2012 ರಂದು ರಾತ್ರಿ 20:30 ಗಂಟೆಯ ಸುಮಾರಿಗೆ ನಮ್ಮೂರಿನ ಕ್ರಾಸ ಹೆದ್ದಾರಿಯ ಪಕ್ಕದಲ್ಲಿರುವ ಶಕ್ತಿ ವೈನ ಶಾಪ ಹತ್ತಿರ ನನ್ನ ಗೆಳೆಯರಾದ ಶ್ರೀ ವಿಜಯಕುಜಮಾರ ಬುಳ್ಳಾ. ಶ್ರೀ ಸಂಗಮೇಶ ವಡಗೇರಾ, ಶ್ರೀಶರಣು ಡೆಂಗಿ, ಮತ್ತು ಅಶೋಕ ಹಯ್ಯಳಿ ಎಲ್ಲರೂ ಕೂಡಿಕೊಂಡು ಮಾತಾನಾಡುತ್ತಾ ನಿಂತಾಗ 3 ಜನರು ಹುಡುಗರು ಕುಡಿದ ಅಮಲಿನಲ್ಲಿ ತಮ್ಮ ತಮ್ಮಲ್ಲಿಯೆ ಜಗಳಾಡುತ್ತಿದ್ದರು ನಾನು ಇದನ್ನು ನೋಡಿ ಯಾಕೆ ಜಗಳಾಡುತ್ತಿದ್ದಿರಿ ಅಂತಾ ಕೇಳಿ ಬಿಡಿಸಲು ಹೋದಾಗ ಅವರಲ್ಲಿ ಶ್ರೀನೀವಾಸ @ ಶಿನು ತಂದೆ ಬಸಯ್ಯಾ ಗುತ್ತೆದಾರ ಸಾ: ಸಿರನೂರ ಸಂಗಡ ಇನ್ನೂ ಎರಡು ಜನರು ಅದರಲ್ಲಿ ಒಬ್ಬನು ಜಾತಿ ನಿಂದನೆ ಮಾಡಿ ನಾವು ಎನಾದರು ಮಾಡಿಕೊಳ್ಳುತ್ತೆವೆ ನೀನ್ಯಾರು ನಮಗೆ ಕೇಳುವದಕ್ಕೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಬೀಯರ ಬಾಟಲಿಯಿಂದ ತಲೆಗೆ, ಮುಗಿಗೆ ಹೋಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆಯ ಗುನ್ನೆ ನಂ 8/2012 ಕಲಂ 323.324.504. ಸಂಗಡ 34 ಐ.ಪಿ.ಸಿ ಮತ್ತು 3 (1)(10) ಎಸ್.ಸಿ./ಎಸ್.ಟಿ ಪಿ.ಎ ಎಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಆಳಂದ ಪೊಲೀಸ್ ಠಾಣೆ:
ಶ್ರೀ ಉಮೇಶ @ ಹೋಮು ತಂದೆ ರಾಂಚಂದ್ರ ರಾಠೋಡ ಸಾ: ಕುಶಪ್ಪ ತಾಂಡಾ ನರೋಣ ತಾ: ಆಳಂದ ರವರು ನಾನು ಹಾಗೂ ರೂಪಸಿಂಗ ರಾಠೋಡ, ರಾಮು ಹಾಗೂ ನಮ್ಮ ಹೆಂಡತಿ ಮಕ್ಕಳು ಇತರರು ಕೂಡಿಕೊಂಡು ಮಟಕಿ ಗ್ರಾಮ ಸಾಯಬಣ್ಣ ಬೀರಾದಾರ ಇವರ ಹೊಲದಲ್ಲಿ ಕೆಲಸ ಮಾಡಿ ದಿನಾಂಕ 15/01/2012 ರಂದು ಮದ್ಯಾನ್ಹ 3.45 ಗಂಟೆ ಸುಮಾರಿಗೆ ನಮ್ಮ ತಾಂಡಕ್ಕೆ ಹೋಗಿ ಬರಬೇಕೆಂದು ನಾನು ಹಾಗೂ ರೂಪಸಿಂಗ್ ರಾಠೋಡ ಕೂಡಿಕೊಂಡು ಕಬ್ಬಿನ ಮಾಲಕ ಸಾಯಬಣ್ಣ ಬಿರಾದಾರ ಇವರ ಹೀರೊ ಹೊಂಡಾ ಮೋಟರ ಸೈಕಲ್ ಕೆ.ಎ 32 ಆರ್ 3290 ನೇದ್ದನ್ನು ರೂಪಸಿಂಗ್ ತೆಗೆದುಕೊಂಡು ಆಳಂದ ಮುಖಾಂತರ ಹೋಗುವಾಗ ಆಳಂದ ರಜೀವಿ ರೋಡಿನ ಎಡಬದಿಯಿಂದ ನೈಸ್ ಚಿಕ್ಕನ್ ಸೇಂಟರ್ ಎದುರಿನಲ್ಲಿ ಹೋಗುತ್ತಿದ್ದಾಗ ಲಾರಿ ನಂ ಎಂ. ಡ್ಲೂ. ಪಿ. 2333 ನೇದ್ದರ ಚಾಲಕನ ಅಬ್ದುಲ ಹಮೀದ ತಂದೆ ಇಸಾಕ್ ಚೌದರಿ ಸಾ: ರೇವಣಸಿದ್ದೇಶ್ವರ ಕಾಲೋನಿ ಆಳಂದ ಇತನು ತನ್ನ ಲಾರಿಯನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ನಡೆಯಿಸಿ ನಮ್ಮ ಮೋಟರ ಸೈಕಲಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದಾಗ ನಾನು ರೋಡಿನ ಎಡಗಡೆ ಬಿದ್ದೆನು ರೂಪಸಿಂಗನು ಇತನು ಲಾರಿಯ ಹಿಂದಿನ ಬಲಟೈರಿನ ಕೆಳಗೆ ಬಿದ್ದನು ಆಗ ಜನರು ನೋಡಿ ಕೂಗಿದಾಗ ಲಾರಿ ನಿಲ್ಲಿಸಿದ್ದು ಲಾರಿಯ ಟೈರು ಅವನ ಹೊಟ್ಟೆಯ ಮೇಲೆ ಹಾಯ್ದಿದರಿಂದ ಸ್ಥಳದಲೇ ಮೃತಪಟ್ಟನು ನನಗೆ ಭಾರಿ ಗಾಯವಾಗಿರುತ್ತವೆ ಲಾರಿ ಚಾಲಕನು ವಾಹನ ಸ್ಥಳದಲಿಯೇ ಬಿಟ್ಟು ಒಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 11/2012 ಕಲಂ 279, 337, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ :
ಸುನಂದಾ ಮೂರ್ತಿ ತಂದೆ ವೀರಾಪೂರ ಶಿವಮೂರ್ತಿ ವಯ:55 ಉ;ಆಕಾಶವಾಣಿಯಲ್ಲಿ ಕೆಲಸ ಸಾ; ಪ್ಲಾಟ ನಂ. 12 ಐಶ್ವರ್ಯ ಜಯನಗರ ಸೇಡಂ ರೋಡ ಗುಲಬರ್ಗಾ ರವರು ದಿನಾಂಕಃ 14/01/2012 ರಂದು ರಾತ್ರಿ 8:00 ಗಂಟೆಗೆ ಮನೆಯಿಂದ ಅಂಗಡಿಗೆ ಸಾಮಾನು ತರಲು ಹೋಗಿ ಮರಳಿ ಮನೆಗೆ ಬರುತ್ತಿರುವಾಗ ಹುನುಮಾನ ಮಂದಿರದ ರೋಡಿನ ಮೇಲೆ ಶ್ರೀ ವಿದ್ಯಾಸಾಗರ ರವರ ಮನೆಯ ಮುಂದೆ ಒಬ್ಬ ಅಪರಿಚಿತ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲದ ಮೇಲೆ ವೇಗವಾಗಿ ಬಂದವನೇ ನನ್ನ ಕೊರಳಿಗೆ ಕೈ ಹಾಕಿ ಕೊರಳಲ್ಲಿದ್ದ 15 ಗ್ರಾಂ ಬಂಗಾರದ ಹಳವವಿದ್ದ ಲಾಕೆಟ್ ಅಃಕಿಃ 45,000/- ರೂ ನೇದ್ದನ್ನು ಜಬರ ದಸ್ತಿಯಿಂದ ಕಸಿದುಕೊಂಡು ಹೋದನು. ಕತ್ತಲು ಇರುವುದರಿಂದ ಸದರಿ ಮೋಟಾರ ಸೈಕಲ ನಂಬರ ನೋಡಿರಲಿಲ್ಲಾ. ಸದರಿಯವನ ವಯಸ್ಸು ಅಂದಾಜು 25-30 ಇರಬಹುದು ವೈಟ್ ಪಿಂಕ್ ಶರ್ಟ ಹಾಕಿಕೊಂಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 03/2012 ಕಲಂ. 392 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.

13 January 2012

GULBARGA DIST REPORTED CRIMES

ವರದಕ್ಷಿಣೆ ಕಿರುಕುಳದಿಂದ ಗೃಹಿಣೆಯ ಮರಣ :
ಮಹಿಳಾ ಪೋಲಿಸ ಠಾಣೆ.
ಶ್ರೀಮತಿ ಲಕ್ಷ್ಮಿಭಾಯಿ ಗಂಡ ಶಾಂತಪ್ಪ ಬಿರಾದಾರ ಸಾ: ಕದಲಾಬಾದ ತಾ: ಬಾಲ್ಕಿ ಜಿಲ್ಲಾ: ಬೀದರ ರವರು ನನ್ನ ಮಗಳಾದ ಬಸಮ್ಮ ಇವಳಿಗೆ ದಿನಾಂಕ: 10.07.2011 ರಂದು ಗುಲಬರ್ಗಾದ ಬಸವರಾಜ ಸಾ: ದುಬೈ ಕಾಲೋನಿ ಗುಲಬರ್ಗಾ ಇತನೊಂದಿಗೆ ಮದುವೆ ಮಾಡಿದ್ದು, ಮದುವೆ ಕಾಲಕ್ಕೆ 1 ಲಕ್ಷ ರೂ. ಮತ್ತು 4 ತೊಲೆ ಬಂಗಾರ ನೀಡಲಾಗಿದೆ. ಮದುವೆಯಾದಾಗಿನಿಂದ ಮೃತಳಿಗೆ ಮಾನಸಿಕ, ದೈಹಿಕವಾಗಿ ಹಿಂಸೆ ನೀಡುತ್ತಾ ತವರು ಮನೆಯಿಂದ ಇನ್ನೂ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಬಸಮ್ಮನ ಗಂಡ ಮಾವ. ಅತ್ತೆ , ಮೈದುನ, ನಾದಿನಿರವರೆಲ್ಲರೂ ಸೇರಿ ದಿನಾಂಕ: 12.01.2012 ರಂದು ಸಾಯಂಕಾಲ ಮೈಮೇಲೆ ಸೀಮೇ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರಿಂದ ಸುಟ್ಟಗಾಯಗಳಾಗಿ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಉಪಚಾರ ಪಡೆಯುತ್ತಿದ್ದಾಗ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 05/12 ಕಲಂ. 498 (ಎ),302, 304(ಬಿ), ಸಂ. 149 ಐ.ಪಿ.ಸಿ & 3, 4, ಡಿ.ಪಿ.ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. .
ಅಪಘಾತ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀ ಶರಣಬಸಪ್ಪ ತಂದೆ ಸಿದ್ರಾಮಪ್ಪ ಬಂಡೆ ಇವರ ಕರೆಂಟ ಮೋಟರ ದುರಸ್ತಿ ಮಾಡುವದಿದೆ ಅಂತಾ ಹೇಳಿದರಿಂದ ನಮ್ಮೂರ ವೆಂಕಟೇಶ @ ವೇಂಕಟಗಿರಿ ತಂದೆ ಬಸಣ್ಣ ಆಲೂರೆ ಈತನು ನಮ್ಮ ಹೊಲಕ್ಕೆ ಹೋಗಲು ಆತನ ಗೆಳೆಯ ಯುವರಾಜ ತಂದೆ ಶಿವಲಿಂಗಪ್ಪ ಖಾರಬಾರಿ ಸಾ:ಬೆಳಂ ಇವನ ಹೊಸದಾದ ಹೋಂಡಾ ಸ್ವಸ್ಟಾರ್ ಮೋಟರ ಸೈಕಲ್ ನೊಂದಣಿ ಆಗಿರುವದಿಲ್ಲ [ಪಾಸಿಂಗ ಆಗದ] ದ್ವಿಚಕ್ರ ವಾಹನ ಚೆಸಿ ನಂ ಎಮ್.ಇ. 4.ಜೆಸಿ 475.ಕೆ.ಬಿ. 7018483.ಇಂಜನ್ ನಂ ಜೆ.ಜಿ. 47ಇ 206079 ನೇದ್ದರ ಮೇಲೆ ಹೊಲಕ್ಕೆ ಹೋಗುವಾಗ ವೇಂಕಟೇಶ ಇತನು ಮೋಟಾರ ಸೈಕಲ್ ಅತೀವೇಗವಾಗಿ ಚಲಾಯಿಸುವಾಗ ಹಿಂದೆ ನಾನು ಸಾವಕಾಶವಾಗಿ ನಡೆಸು ಎಂದು ಹೇಳಿದರು ಕೇಳದೆ ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿ ಖಜೂರಿ –ಉಮರ್ಗಾ ರೋಡಿನ ಕೆ.ಇ.ಬಿ. ಖಜಾನಿಯ ಹತ್ತಿರ ರೋಡಿನ ತಿರುವಿನಲ್ಲಿ ಒಮ್ಮಲೇ ಸ್ಕಿಡ ಮಾಡಿದಾಗ ಇಬ್ಬರು ರೋಡಿನ ಮೇಲೆ ಬಿದ್ದು ರಕ್ತಗಾಯ ಮಾಡಿಕೊಂಡಿರುತ್ತಾರೆ. ಅಂತಾ ಶ್ರೀ ಶರಣಬಸಪ್ಪ ತಂದೆ ಕರಬಸಪ್ಪ @ ಸಂಗಪ್ಪ ಪಾಟೀಲ ಸಾ: ಖಜೂರಿ ತಾ: ಆಳಂದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 10/2012 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ವರದಕ್ಷಿಣೆ ಕಿರುಕುಳ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :
ಶ್ರೀಮತಿ ಮಿನಾಕ್ಷಿ ಗಂಡ ಯಲ್ಲಪ್ಪಾ ಮೇಳಕುಂದಿ ಸಾ: ಸಿರನೂರ ರವರು ನನ್ನ ಮದುವೆಯು 2009 ಸಾಲಿನಲ್ಲಿ ಶಿರನೂರ ಗ್ರಾಮದ ಯಲ್ಲಪ್ಪಾ ತಂದೆ ಶೇಟ್ಟೆಪ್ಪಾ ಮೇಳಕುಂದಿ ಇವರ ಸಂಗಡ 4 ಲಕ್ಷ್ಯ 50 ಸಾವಿರ ರೂಪಾಯಿ ಖರ್ಚು ಮದುವೆ ಮಾಡಿ ಕೊಟ್ಟಿರುತ್ತಾರೆ. ಈಗ ನನಗೆ 2 ಹೆಣ್ಣು ಮಕ್ಕಳು ಇರುತ್ತಾರೆ. ಒಂದು ವರ್ಷದಿಂದ ನನ್ನ ಗಂಡನು ದಿನಾಲು ಕೂಡಿದು ಬಂದು ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಟ್ಟು ತೊಂದರೆ ಮಾಡುತ್ತಿದ್ದನು ಮತ್ತು ಅತ್ತೆ ಮಾವಂದಿರು ಕೂಡಾ ನನಗೆ ವಿನಾಃಕಾರಣ ಅವಾಚ್ಯ ಶಬ್ದಗಳಿಂಗ ಬೈಯುತ್ತಿದ್ದರು. ಈ ವಿಷಯವನ್ನು ತವರು ಮನೆಯಲ್ಲಿ ನನ್ನ ತಂದೆ ತಾಯಿಯವರಿಗೆ ತಿಳಿಸಿದ್ದು 6-7 ತಿಂಗಳ ಹಿಂದೆ ನಮ್ಮ ಸಂಬಂಧಿಕರಾದ ಮಲ್ಲಿಕಾರ್ಜುನ ತಂದೆ ಭೀಮಯ್ಯಾ ಕುಸ್ತಿ ತಿಮ್ಮಯ್ಯಾ ತಂದೆ ಯಲ್ಲಪ್ಪಾ ಗುತ್ತೆದಾರ, ರಾಮಯ್ಯಾ ತಂದೆ ಯಲ್ಲಪ್ಪಾ ಕೆರಂಬಗಿ. ಇವರು ಸಮ್ಮಖದಲ್ಲಿ ನ್ಯಾಯ ಪಂಚಾಯತಿ ಮಾಡಿ ನನ್ನ ಗಂಡ ಅತ್ತೆ ಮಾವಂದರಿಗೆ ಬುಧ್ಧಿ ಮಾತು ಹೇಳಿ ಹೋಗಿರುತ್ತಾರೆ. ನನ್ನ ಗಂಡ ನಮ್ಮೂರಿನ ರೂಪಾ ತಂದೆ ಗಿಡ್ಡೆಪ್ಪ ಗುತ್ತೆದಾರ ಇವಳ ಸಂಗಡ ಓಡಾಡಿ ಅವಳಿಗೆ ಮದುವೆ ಮಾಡಿಕೊಳ್ಳುವ ಸಂಭವ ಕಂಡು ಬಂದಿರುತ್ತದೆ. ದಿನಾಂಕ 8/1/2012 ರಂದು ನನ್ನ ಗಂಡನು ನಿನ್ನ ಮಕ್ಕಳನ್ನು ತಗೆದುಕೊಂಡು ಮನೆ ಬಿಟ್ಟು ಹೋಗು ಅಂತಾ ಹೋಡೆದು ಒದ್ದು ನಿನಗೆ ಸಿಮೇ ಎಣ್ಣೆ ಹಾಕಿ ಸಾಯಿಸುತ್ತೆನೆ ಅಂತಾ ಜೀವದ ಭಯ ಬೇದರಿಕೆ ಹಾಕಿರುತ್ತಾನೆ. ಅಂತಾ ಲಿಖಿತ ದೂರು ಸಲ್ಲಿಸದಿ ಸಾರಾಂಶ ಮೇಲಿಂದ ಠಾಣೆಯ ಗುನ್ನೆ ನಂ 6/2012 ಕಲಂ 143.147.498 (ಎ).323.504.506 ಸಂಗಡ 149 ಐ.ಪಿ.ಸಿ ಮತ್ತು 3&4 ಡಿ.ಪಿ.ಎಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀ. ಮಲ್ಲಿಕಾರ್ಜುನಯ್ಯಾ ತಂದೆ ದಿ:ಶಿವರಾಚಯ್ಯಾ ಹಿರೇಮಠ ಸಾ: ಮನೆ ನಂ. 1-1495/ಸಿ ಭಗವತಿ ನಗರ ಯಾತ್ರಿಕ ನಿವಾಸ ಹಿಂದುಗಡೆ ಗುಲಬರ್ಗಾ ರವರು ನಾನು ನನ್ನ ಹೆಂಡತಿ ದಿನಾಂಕ 12/01/2012 ರಂದು ಮುಂಜಾನೆ ಪ್ರತಿನಿತ್ಯದಂತೆ ನಮ್ಮ ಕೆಲಸಕ್ಕೆ ಹೊಗಿದ್ದು ಮನೆಯಲ್ಲಿ ನನ್ನ ತಾಯಿ ಮುಂಜಾನೆ 10-30 ಸಮಯಕ್ಕೆ ಮನೆಗೆ ಕೀಲಿ ಹಾಕಿಕೊಂಡು ನನ್ನ ಹೆಂಡತಿಯ ತಂಗಿಯ ಮನೆಗೆ ಹೋಗಿ ಅಲ್ಲಿ ನಮ್ಮ ಮನೆಯ ಕೀಲಿ ಕೊಟ್ಟು ಊರಿಗೆ ಹೊಗಿರುತ್ತಾರೆ. ಮುಂಜಾನೆ 10-30 ಗಂಟೆಯಿಂದ ಮದ್ಯಾಹ್ನ 4-30 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆ ಬಾಗಿಲು ಬೀಗ ಮುರಿದು ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ನಗದು ಹಣ 2 ಸಾವಿರ ರೂಪಾಯಿಗಳು ಹೀಗೆ ಒಟ್ಟು ಅ:ಕಿ: 1,62,000/- ರೂಪಾಯಿ ಬೆಲೆಬಾಳುವದವುಗಳ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 04/2012 ಕಲಂ. 454, 380 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಠಾಣೆ:
ದಿನಾಂಕ; 08-06-2008 ರಿಂದ ದಿನಾಂಕ 12-1-12 ವರೆಗೆ ಈ ಡಿಸೆಂಟ್ ದಾಲ್ ಮಿಲ್ಲ ಫ್ಯಾಕ್ಟರಿ ಸ್ಥಳ ಮತ್ತು ಫ್ಯಾಕ್ಟರಿಯ ಮಾರಾಟ ಸಂಬಂಧ ಮಹ್ಮದ ಹಸ್ಮತ ಅಲಿ ತಂದೆ ಇಲಾಯತ ಅಲಿ ವ:28 ವರ್ಷ ಉ:ವ್ಯಾಪರ ಸಾ: ಪ್ಲಾಟ ನಂ.14/ಎ ದರ್ಶನಾಪೂರ ಲೇಔಟ್ ಜಿ.ಡಿ.ಎ. ಕಾಲನಿ ಎದುರುಗಡೆ ಸಂತ್ರಸವಾಡಿ ಗುಲಬರ್ಗಾ, )ಮತೀನ ಜೂಹರಾ ಸಿದ್ದಿಕಿ ಗಂಡ ಮಹ್ಮದ ಇಲಾಯತ ಅಲಿ ವ: 46 ವರ್ಷ ಉ: ಮನೆಗೆಲಸ ಮತ್ತು ವ್ಯಾಪರ ಸಾ: ಪ್ಲಾಟ ನಂ.14/ಎ ದರ್ಶನಾಪೂರ ಲೇಔಟ್ ಜಿ.ಡಿ.ಎ. ಕಾಲನಿ ಎದುರುಗಡೆ ಸಂತ್ರಸವಾಡಿ ಗುಲಬರ್ಗಾ ಇಬ್ಬರಲ್ಲಿ ವ್ಯವಹಾರ ಆಗಿ ತಂಟೆ ತಕರಾರು, ಅಂದಿನಿಂದ ಇಬ್ಬರಲ್ಲಿ ಗಾಢವಾದ ವೈಮನಸ್ಸು ಬೆಳೆದಿರುತ್ತದೆ ಎರಡು ಜನರು ಯಾವ ವೇಳೆಯಲ್ಲಿ ಜಗಳವಾಗಿ ಪ್ರಾಣ ಹಾನಿ ಮತ್ತು ಆಸ್ತಿ ಸಂಭವಿಸುತ್ತದೆ ಎಂಬುದರ ಬಗ್ಗೆ ತಿಳಿದು ಬರುತ್ತಿಲ್ಲಾ. ಕಾರಣ ಮುಂಜಾಗ್ರತೆ ಕ್ರಮ ಕುರಿತು ಪಿ.ಎಸ.ಐ ರವರು ಠಾಣೆ ಗುನ್ನೆ ನಂ: 09/2012 ಕಲಂ 107 ಸಿಅರ.ಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.

12 January 2012

GULBARGA DIST REPORTED CRIME

ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಠಾಣೆ :
ದಿನಾಂಕ: 12/01/12 ರಂದು ಠಾಣೆಯ ಹದ್ದಿಯಲ್ಲಿ ಶ್ರೀ.ಗಜೇಂದ್ರ ಸಿ.ಪಿ.ಸಿ ಮತ್ತು ಸುಧಾಕರ ಸಿ.ಪಿ.ಸಿ ರವರು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ತಿರಂದಾಜ ಟಾಕೀಜ ಹತ್ತಿರ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಹಿಡಿದು ವಿಚಾರಿಸಲು ತನ್ನ ಹೆಸರು ಶಂಕರ ತಂದೆ ನಿಜಲಿಂಗಪ್ಪ ಕಡಾಮಗೇರಿ, ಸಾ ಬಾಪೂನಗರ ಹನುಮಾನ ಗುಡಿಯ ಹತ್ತಿರ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡಲಿಲ್ಲಾ. ಸದರಿಯವನನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ ಠಾಣಾ ಗುನ್ನೆ ನಂ: 1/12 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಕಳ್ಳತನ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀ.ತೌಸಿಫ ಅಹ್ಮದ ತಂದೆ ಅಬ್ದುಲ ರಸೀದ ಅಹ್ಮದ ಸಾ ಮನೆ ನಂ 1-629 ಅಪ್ಪರ ಲೈನ ಸ್ಟೇಷನ ಬಜಾರ ಗುಲಬರ್ಗಾ ರವರು ನಾನು ದಿನಾಂಕ: 20/11/2011 ರಂದು ಸಾಯಂಕಾಲ 6-00 ಗಂಟೆಗೆ ನನ್ನ ಗೆಳೆಯನಾದ ಸೋಯಲ ರಶೀದ ಇಬ್ಬರು ಕೂಡಿಕೊಂಡು ಸುಪರ ಮಾರ್ಕೆಟ ಚೌಪಾಟಿ ಗೇಟ ಹತ್ತಿರ ಪಾನಿ ಪೂರಿ ಬಂಡಿ ಎದುರುಗಡೆ ನಿಂತು ಪಾನಿ ಪೂರಿ ತಿನ್ನುತ್ತಿರುವಾಗ ನನ್ನ ಪ್ಯಾಂಟಿನ ಹಿಂದುಗಡೆ ಜೇಬಿನಲ್ಲಿದ ಡೇಲ ಮೊಬೈಲ್ ಸ್ಟ್ರೀಕರ ಹ್ಯಾಂಡ ಸೆಟ ಐ.ಎಮ್.ಇ.ಐ ನಂ: 012214000087992 ಅಕಿ 25,302/- ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 09/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀ.ಪ್ರದೀಪ ತಂದೆ ಅಮೃತ ಭಾಸ್ಕರ ಸಾ ಗುಲಬರ್ಗಾರವರು ನಾನು ಸುಮಾರು ಒಂದು ವರ್ಷದ ಹಿಂದೆ ನನ್ನ ಮತ್ತು ನನ್ನ ಅತ್ತೆಯ ಮಕ್ಕಳಾದ ರೋಷನ, ಸಂತೋಷ ನವರಂಗ ಇವರ ನಡುವೆ ಜಗಳವಾಗಿದ್ದು, ಆಗಿನಿಂದ ನಮ್ಮ ನಡುವೆ ವೈಮನಸ್ಸು ಬೆಳೆಸಿಕೊಂಡು ಬಂದಿರುತ್ತದೆ. ನಾನು ವಿಶ್ವನಾಥ ಪೊಲೀಸ ಪಾಟೀಲ ಇವರ ಸಂಗಡ ಮಾತಾಡುತ್ತಾ ನಿಂತಿತ್ತಿರುವಾಗ ರೋಷನ, ಸುಭಾಶ ಇವರು ಬಂದು ತಮ್ಮ ಹತ್ತಿರವಿದ್ದ ತಲವಾರ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 8/2012 ಕಲಂ: 323, 324, 307, 504 ಸಂಗಡ 34 ಐ.ಪಿ.ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ನಾಗಪ್ಪಾ ತಂದೆ ಬೀರಪ್ಪಾ ಮುತ್ಯಾ ಸಾ:ಬನ್ನೂರ ರವರು ನನ್ನ ಮಗನಾದ ಚೆನ್ನವೀರ ವಯಾ:7 ವರ್ಷ ಇತನು ದಿನಾಂಕ: 10/1/2012 ರಂದು ಸಾಯಂಕಾಲ 5 ಗಂಟೆಯ ಗ್ರಾಮದ ಶಕೀಲ ಹೋಟೇಲ ಮುಂದಿನ ರೋಡ ಬದಿ ಹಿಡಿದು ಹೊರಟಾಗ ಗಣಜಲಖೇಡ ರೋಡ ಕಡೆಯಿಂದ ಜಗಪ್ಪಾ ತಂದೆ ಮಾದುರಾಯ ಮಂಠಾಣ ಸಾ:ಗಣಜಲಖೇಡ ಇತನು ತನ್ನ ಮೋಟಾರ ಸೈಕಲ ನಂ ಕೆ.ಎ 04 ಇ.ಎಂ 7752 ನೇದ್ದರ ಚಾಲಕನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ರೋಡ ಬದಿಗೆ ಹೊರಟ ಚೆನ್ನವೀರಯ್ಯಾ ಇತನ ಬಲಗಾಲಿಗೆ ಡಿಕ್ಕಿ ಹೊಡೆದು ಬಾರಿ ಗುಪ್ತಗಾಯ ಪಡಿಸಿ ಮೋಟಾರ ಸೈಕಲ ಹಾಗೇ ಓಡಿಸಿಕೊಂಡ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 06/2011 ಕಲಂ 279 338 ಐ.ಪಿ.ಸಿ ಸಂ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ರಮೇಶ ತಂದೆ ಶಿವರಾಮ ರಾಠೋಡ ಸಾ:ಹರಸೂರ ತಾಂಡಾ ತಾ:ಜಿ:ಗುಲಬರ್ಗಾ ರವರು ನಾನು ದಿನಾಂಕ:10/01/2012 ರಂದು ಸಂಜೆ 05:30 ಗಂಟೆ ಸುಮಾರಿಗೆ ನನ್ನ ಹಿರೋಹೊಂಡಾ ಮೋಟಾರ ಸೈಕಲ ನಂ ಕೆ.ಎ 32 ಡಬ್ಲೂ-6043 ನೇದ್ದರ ಮೇಲೆ ಹರಸೂರದಿಂದ ದೇವಿ ತಾಂಡಾದ ಪಂಚಲಗಿ ದೇವಿ ಚಾತ್ರೆಗೆ ಹೊರಟಿದ್ದು ಆಲಗೂಡ ಕ್ರಾಸ ಸಮೀಪ ಬಂದಾಗ ಹುಮನಾಬಾದ ರೋಡ ಕಡೆಯಿಂದ ಆಟೋ ರಿಕ್ಷಾ ನಂ ಕೆ,ಎ32 ಎ-1661 ನೇದ್ದರ ಚಾಲಕನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿ ಹೊಡೆದು ಆಟೋ ಸ್ದಳದಲ್ಲಿ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 7/2012 ಕಲಂ 279 338 ಐ.ಪಿ.ಸಿ ಸಂ 187 ಐ.ಎಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾ

11 January 2012

GULBARGA DIST REPORTED CRIME

ಹಲ್ಲೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:
ಶ್ರೀ ಅಜೀತ ತಂದೆ ಶ್ರೀಕಾಂತ ಯಳಮೇಲಿ ಸಾ: ಪ್ಲಾಟ ನಂ. 18 'ಸೂರ್ಯ ಕಿರಣ'ಬೇಂದ್ರೆ ನಗರ ಎನ್.ಜಿ.ಓ ಕಾಲೋನಿ ಗುಲಬರ್ಗಾ ರವರು ನನ್ನ ತಮ್ಮ ಮಂಜುನಾಥನು ಶಿವಾನಂದರೆಡ್ಡಿಯ ತಂಗಿಯೊಂದಿಗೆ ‘ಲವ’ ಮಾಡುತ್ತಿದ್ದಾನೆ ಎಂದು ತಪ್ಪಾಗಿ ಅರ್ಥೈಸಿಕೊಂಡು ನನಗೆ ಮತ್ತು ನನ್ನ ತಮ್ಮನಿಗೆ ಹೊಡೆಯಲು ಹೊಂಚು ಹಾಕುತ್ತಿದ್ದನು. ನಾನು ಮೋಟಾರ ಸೈಕಲ್ ಮೇಲೆ ಮೋಬಾಯಿಲ್ ಅಂಗಡಿಗೆ ಬರುತ್ತಿರುವಾಗ ಶಿವಾನಂದರೆಡ್ಡಿ ತಂದೆ ಭೂತನಗೌಡ ಮಾಲಿ ಪಾಟೀಲ ಸಾ: ದತ್ತ ನಗರ ಗುಲಬರ್ಗಾ ಇತನು ಮೋಟಾರ ಸೈಕಲ್ ಮೇಲೆ ಬಂದು ನನಗೆ ಡಾ: ಎಸ್.ಎಸ್ ಪಾಟೀಲ ಮನೆಯ ಹತ್ತಿರ ರಸ್ತೆ ಮೇಲೆ ಅಡ್ಡಗಟ್ಟಿ ನಿಲ್ಲಿಸಿ ' ಏ ಹುಚ್ಚ ಸುಳ್ಯಾ ಮಗನೇ ನಿನಗೆ ಇವತ್ತು ಬಿಡಲ್ಲಾ' ಅಂತಾ ಬೈದವನೇ ನನ್ನ ತೆಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ಮುಖಕ್ಕೆ ಹೊಡೆದನು ಮತ್ತು ಅಲ್ಲೆ ಬಿದ್ದಿದ್ದ ಕಲ್ಲಿನಿಂದ ನನ್ನ ತಲೆಗೆ ಹೊಡೆದಿದ್ದರಿಂದ ತಲೆ ಒಡೆದು ರಕ್ತ ಸ್ರಾವ ಆಗಿರುತ್ತದೆ. ಬಾಯಿ, ತುಟಿಗೆ, ಮುಗಿಗೆ, ಗಾಯವಾಗಿ ಮೂಗಿನಿಂದ ರಕ್ತ ಸ್ವಾವ ಆಗುತ್ತಿದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:3/2012 ಕಲಂ. 341,323,324,504,506 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

Gulbarga Dist Reported Crimes

ಅಪಘಾತ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀ ತೇಜು ತಂದೆ ಮೋನು ಚಿನ್ನಾರಾಠೋಡ ಸಾ;ಬಾಚನಾಳ ಸೂಳಗುತ್ತಿ ತಾಂಡಾ ರವರು ನನ್ನ ತಮ್ಮ ವಿಜಯಕುಮಾರ ಈತನು ಖಲಖೋರಾ ದೇವಿ ತಾಂಡಾದ ಮರಿಯಮ್ಮ ದೇವಿಗೆ ದೇವರು ಮಾಡುವ ಕುರಿತು ನಾನು ಮತ್ತು ತಮ್ಮಂದಿರಾದ ಸತೀಶ್ ಮತ್ತು ಸವಿತಾ ಹಾಗೂ ತನ್ನ ಸಂಭಂದಿಕರನ್ನು ಕರೆದುಕೊಂಡು ಟಂಟಂ ನಂ: ಕೆಎ-32-ಬಿ-2919 ನೇದ್ದರಲ್ಲಿ ಬಾಚನಾಳ ಸೂಳಗುತ್ತಿ ತಾಂಡಾದಿಂದ ಖಲಖೋರಾ ತಾಂಡಾಕ್ಕೆ ಹೋಗುವ ಕುರಿತು ಟಂಟಂದಲ್ಲಿ ಕಮಲಾಪೂರ ಮಾರ್ಗವಾಗಿ ಹೋಗುತ್ತಿದ್ದಾಗ ಟಂಟಂ ಚಾಲಕನಾದ ಕಾಂತು @ ಶ್ರೀಕಾಂತ ಸಾ: ರಾಜನಾಳ ಈತನು ಟಂಟಂನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ತಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಪಡಿಸಿದ್ದು, ಈ ಅಪಘಾತದಲ್ಲಿ ನನಗೆ ಮತ್ತು ಟಂಟಂ ದಲ್ಲಿ ಕುಳಿತವರಿಗೆ ಸಾದಾ ಮತ್ತು ಭಾರಿ ರಕ್ತಗಾಯಗಳಾಗಿದ್ದು, ಸತೀಶ್ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಟಂಟಂ ಚಾಲಕನು ಟಂಟಂನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಆತನ ಮೇಲೆ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 03/2012 ಕಲಂ 279.337.338 .304[ಎ] ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಧರ್ಮಣ್ಣ ತಂದೆ ದವಲಪ್ಪ ದರೆನವರು ಸಾ: ಮನೆ ನಂ: 11 -585 ಬೋರಾಬಾಯಿ ನಗರ ಬ್ರಹ್ಮಪೂರ ಗುಲಬರ್ಗಾರವರು ನಾನು ಲಾಲಗೇರಿ ಕ್ರಾಸ್ ದಿಂದ ಗೋವಾ ಹೊಟೇಲ್ ರೋಡಿನಲ್ಲಿ ಬರುವ ಚಾಹೂಸ ಹೊಟೇಲ ಎದುರು ರೋಡಿನ ಹೋಗುತ್ತಿದ್ದಾಗ ಮೋಟಾರ ಸೈಕಲ್ ನಂ:ಕೆಎ 32 ಎಕ್ಸ 3636 ನೆದ್ದರ ಚಾಲಕ ಲಾಲಗೇರಿ ಕ್ರಾಸ್ ಕಡೆಯಿಂದ ತನ್ನ ಮೋಟಾರ ಸೈಕಲ್ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಎದುರಿನಿಂದ ಡಿಕ್ಕಿ ಪಡಿಸಿ ಮೋಟಾರ ಸೈಕಲ್ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಆನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 07/2012 ಕಲಂ: 279,338 ಐ.ಪಿ.ಸಿ ಸಂ: 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ :
ಶ್ರೀ ಮಹ್ಮದ ಅಬ್ದುಲ ಖದೀರ ತಂ ಮಹ್ಮದ ಅಬ್ದುಲ ಹಮೀದ ಸಾಃ ಮಹೇಬೂಬ ನಗರ ಕಾಲೋನಿ ಗುಲಬರ್ಗಾರವರು ನನ್ನ ಹಿರೊ ಹೊಂಡಾ ಸ್ಪೆಲೆಂಡರ ಮೊಟಾರ ಸೈಕಲ ನಂ ಕೆಎ-32-ವಿ-2673 ಅಃಕಿಃ 30,000/- ರೂ. ನೇದ್ದು ಕಿಂಗ ಕೊರ್ಟ ಕಾಂಪ್ಲೇಕ್ಸ ಮುಂದೆ ನಿಲ್ಲಿಸಿದ ಮೋಟಾರ ಸೈಕಲ ದಿನಾಂಕ 09.01.2012 ರಂದು 2100 ಗಂಟೆಯಿಂದ 2200 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 08/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

10 January 2012

GULBARGA DIST REPORTED CRIME

ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:
ಶ್ರೀ ನಾಗಪ್ಪಾ ತಂದೆ ಭೀಮಣ್ಣಾ ಜಮಖಂಡಿ ಸಾ: ಗುಗ್ಗರಿಹಾಳ ತಾ: ಸೂರಪೂರ ರವರು ನನ್ನ ಮಗನಾದ ಭೀಮಣ್ದ ಇತನು ದಿನಾಂಕ 9/1/2012 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ಮೊ.ಸೈ ನಂ ಕೆಎ-33 ಜೆ-6465 ನೇದ್ದರಲ್ಲಿ ತನ್ನ ಹೆಂಡತಿಯಾದ ಮಲ್ಲಮ್ಮ ಇವಳಿಗೆ ಬೇಟಿಯಾಗುವ ಕುರಿತು ಗುಗ್ಗರಿಹಾಳದಿಂದ ಗುಲಬರ್ಗಾಕ್ಕೆ ಹೋಗುತ್ತೆನೆ ಅಂತಾ ಹೋಗಿದ್ದು ದಿನಾಂಕ 10/1/2012 ರಂದು ರಾತ್ರಿ 2:00 ಗಂಟೆಯ ಸುಮಾರಿಗೆ ದೂರವಾಣಿ ಮುಖಾಂತ ತಿಳಿದು ಬಂದಿದ್ದನೆಂದರೆ. ಭೀಮಣ್ದ ಇತನು ಗುಲಬರ್ಗಾ ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ ಸರಡಗಿ ಪೆಟ್ರೋಲ ಬಂಕ ಮುಂದೆ ರಸ್ತೆಯ ಮೆಲೆ ತನ್ನ ಮೊಟಾರ ಸೈಕಲ ಮೇಲಿಂದ ಬಿದ್ದು ಮೃತ್ತ ಪಟ್ಟಿರುತ್ತಾನೆ. ಅಂತಾ ಸುದ್ದಿ ತಿಳಿದ ಕೂಡಲೆ ನಾನು ಮತ್ತು ನನ್ನ ಹೆಂಡತಿ ಸೊಸೆ ಮಲ್ಲಮ್ಮ ಸಂಬಂಧಿಕರಾದ ಅಳ್ಳೆಪ್ಪಾ ಬೈಮನಿ. ನಿಂಬಣ್ಣಾ ತಂದೆ ಶರಣಪ್ಪಾ ಇವರೊಂದಿಗೆ ಘಟನಾ ಸ್ಥಳಕ್ಕೆ ಹಾಗು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಭೆಟಿ ನೀಡಿ ಮಗನ ಮೃತ್ತ ದೇಹವನ್ನು ಗುರುತಿಸಿ ನೋಡಲಾಗಿ ಭೀಮಣ್ಣಾ ಇತನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ವೇಗದ ಹತೋಟಿ ತಪ್ಪಿ ಮೊಟಾರ ಸೈಕಲನಿಂದ ಬಿದ್ದು ಮುಖಕ್ಕೆ ಮತ್ತು ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ್ತ ಪಟ್ಟಿರುತ್ತಾನೆ, ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 4/2011 ಕಲಂ 279.304(ಎ) ಐ.ಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

Gulbarga Dist Reported Crimes

ಆತ್ಮಹತ್ಯೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ :
ಶ್ರೀ ಗೌತಮ ತಂದೆ ಬಾಬುರಾವ ಹೋಳಕರ ವ: 25 ವರ್ಷ ಜಾ: ಎಸ್‌ಸಿ ಉ: ಖಾಸಗಿ ಶಾಲೆ ಶಿಕ್ಷಕ ಸಾ; ಕಾಳ ಮೈಂದರ್ಗಿ ತಾ: ಜಿ: ಗುಲಬರ್ಗಾ ಇವರು ದಿನಾಂಕ: 8/1/2012 ರಂದು ಸಾಯಂಕಾಲ 5 ರಿಂದ 6 ಗಂಟೆಯ ಅವಧಿಯಲ್ಲಿ ಸಿದ್ದರಾಮೇಶ್ವರ ಶಾಲೆಯ ಕೋಣೆಯಲ್ಲಿ ಒಳ ಕೊಂಡಿ ಹಾಕಿಕೊಂಡು ಕೋಣೆಯ ಛತ್ತಿನ ಪೈಪಿಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮ,ಹತ್ಯೆ ಮಾಡಿಕೊಂಡಿರುತ್ತಾರೆ ಇವರ ಸಾವಿನ ಬಗ್ಗೆ ಸಂಶಯವಿರುತ್ತದೆ ಅಂತಾ ಶ್ರೀಹುಸನಪ್ಪ ತಂದೆ ಸಂತಪ್ಪ ನಡುಕರ ಸಾ; ಹಿಪ್ಪರಗಾ ಭಾಗ ತಾ: ಬಸವಕಲ್ಯಾಣ ಜಿ: ಬೀದರ ರವರು ಸಲ್ಲಿಸಿದ ದೂರು ಸಾರಂಶದ ಮೇಲಿಂದ ಯು.ಡಿ.ಅರ್. ಸಂ: 2/2012 ಕಲಂ 174 (ಸಿ) ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಆತ್ಮಹತ್ಯೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ :
ಶ್ರೀ ಶಶಿಕಾಂತ ತಂದೆ ಗಿರೇಪ್ಪ ವಾಮನಕರ ಸಾ: ಯಳವಂತಗಿ (ಬಿ) ತಾ: ಜಿ: ಗುಲಬರ್ಗಾರವರು ನನ್ನ ತಾಯಿಯಾದ ಶ್ರೀಮತಿ ಗಂಗಮ್ಮ ಇವರು ದಿನಾಂಕ:7/1/2012 ರಂದು ಮದ್ಯಾಹ್ನ ಸುಮಾರಿಗೆ ಮನೆಯ ಬಾಟಿಯ ಮೇಲೆ ಇಟ್ಟಿದ್ದ ತೋಗರಿ ಬೆಳೆ ಡಬ್ಬಿಯನ್ನು ತೆಗೆದುಕೊಳ್ಳಲು ಹೋಗಿ ಅದರ ಪಕ್ಕದಲ್ಲಿದ್ದ ತೋಗರಿ ಬೆಳೆಗೆ ಹೊಡೆಯುವ ಕ್ರಿಮೀನಾಶಕ ಜೌಷದ ಡಬ್ಬಿ ಒಮ್ಮೇಲೆ ಸಿಡಿದು ಮೈಮೇಲೆ ಹಾಗು ಬಾಯಿಯಿ ಮೂಲಕ ಹೋಗಿದ್ದು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ ದಿನಾಂಕ 9/1/2011 ರಂದು ಮದ್ಯಾಹ್ನ ಮೃತಪಟ್ಟಿದ್ದು. ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.ಡಿ.ಅರ್. ನಂ: 3/.2012 ಕಲಂ 174 ಸಿ.ಅರ್.ಪಿ ಸಿ್ ಪ್ರಕಾರ ಪ್ರಕರಣ ದಾಖಲ ಮಾಡಿ ಕೈಕೊಂಡಿರುತ್ತಾರೆ.

09 January 2012

GULBARGA DIST REPORTED CRIMES

ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಸುರೇಶ ತಂದೆ ಡಂಬಯ್ಯ ಪೂಜಾರಿ ಸಾ: ಆನಂದ ನಗರ ಗುಲಬರ್ಗಾ ರವರು ದಿನಾಂಕ 10/04/2010 ರಂದು ನಾನು ನಾಗಾರ್ಜುನ ಲಾಡ್ಜ ಎದುರುಗಡೆ ಇಟ್ಟ ಮೋಟರ ಸೈಕಲ್ ನಂ ಕೆ.ಎ 25 ಡಬ್ಲೂ 5758 ಅ.ಕಿ 30,000=00 ರೂ ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಅಲ್ಲಿಂದ ಇಂದಿನವರೆಗೆ ಹುಡಕಾಡಿದರೂ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ 04/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ದೇವಲಗಾಣಗಾಪುರ ಪೊಲೀಸ ಠಾಣೆ
: ಎಮ್.ರವೀಂದ್ರ ತಂದೆ ಎಮ್, ಲಕ್ಷ್ಮಾ ಸಾ ಮನೆ. ನಂ. 6-9/1 ಬಿಸೈಡ ಭಾರತ ಗಾರ್ಡನ ಚಂಪಾ ಪೇಠೆ ಸಾಗರ ರೋಡ ಹೈದ್ರಾಬಾದ ರವರು ನಾನು ದಿನಾಂಕ 09-01-2012 ರಂದು ನಾನು ತನ್ನ ಮತ್ತು ಗೆಳೆಯರಾದ ಸಂಪತಕುಮಾರ, ಮಲೇಶ್ವರ, ನರಸಿಂಹರಾವ, ಓಂ ಪ್ರಕಾಶ ರವರೆಲ್ಲರೂ ಕೂಡಿ ದೇವಲಗಾಣಗಾಪೂರಕ್ಕೆ ಬಂದು ಮುಂಜಾನೆ 5;45 ಗಂಟೆಗೆ ಸಂಗಮದಲ್ಲಿ ಸ್ನಾನ ಮಾಡಲು ಪ್ಯಾಂಟ, ಶರ್ಟ ಕಳೆದು ಅದರಲ್ಲಿ ಒಂದು ಕೈ ಗಡಿಯಾರ ಐಡಿ ಕಾರ್ಡ, ಎ.ಟಿ.ಎಂ ಕಾರ್ಡ, 31,000=00 ನಗದು ಹಣ ಇಟ್ಟು ನದಿಯಲ್ಲಿ ಸ್ನಾನ ಮಾಡಿ ಬರುವಷ್ಟರಲ್ಲಿ ಯಾರೋ ಕಳ್ಳರು ಪ್ಯಾಂಟಿನಲ್ಲಿ ಇಟ್ಟಿದ್ದ ಕೈ ಗಡಿಯಾರ, ಐಡಿ ಕಾರ್ಡ, ಎಟಿಎಂ ಕಾರ್ಡ, ನಗದು ಹಣ 31,000=00 ರೂಪಾಯಿ ಹೀಗೆ ಒಟ್ಟು 31,800=00 ರೂಪಾಯಿ ಪ್ಯಾಂಟ ಸಮೇತ ಕಳುಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ: 01/2012 ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ:
ಸೇಡಂ ಠಾಣೆ:
ಶ್ರೀ. ಶಿವಾಜಿ ತಂದೆ ಪುಂಡಲಿಕರಾವ ಪತಂಗೆ ನಾನು ದಿನಾಂಕ:09-01-2012 ರಂದು ಬೆಳಗ್ಗೆ 5-00 ಗಂಟೆಗೆ ನಮ್ಮ ಸಮಾಜದ ದೇವಸ್ಥಾನದಲ್ಲಿ ಕಸಗುಡಿಸಲೆಂದು ಶಾಂತಬಾಯಿ ಇವಳು ಹಿಂಗುಲಾಂಬಿಕಾ ಗುಡಿಗೆ ಬಂದಿದ್ದು, ಗುಡಿಯ ಬಾಗಿಲು ಕೀಲಿಯು ಮುರಿದಿದ್ದು ಕಂಡು ನನಗೆ ಬಂದು ತಿಳಿಸಿದ್ದರಿಂದ ನಾನು ನಿತೀಶ ಪ್ರೇಮಕುಮಾರ ಗಡಾಳೆ ರವರು ಕೂಡಿಕೊಂಡು ನೋಡಲಾಗಿ ದೇವಸ್ಥಾನದಲ್ಲಿರುವ ದೇವಿಯ ಬೆಳ್ಳಿಯ ಕಿರಿಟ 250 ಗ್ರಾಮ ತೂಕದ್ದು ಅಂ.ಕಿ 11,000/- ರೂಪಾಯಿ, ಬಂಗಾರದ ಆಭರಣಗಳು ಹೀಗೆ ಒಟ್ಟು 24,000/- ರೂಪಾಯಿ ಕಿಮ್ಮತ್ತಿನ ಬಂಗಾರದ ಹಾಗು ಬೆಳ್ಳಿಯ ಸಾಮಾನುಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ.13/2012 ಕಲಂ. 457, 380 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮುಂಜಾಗ್ರತೆ ಕ್ರಮ:
ಆಳಂದ ಪೊಲೀಸ ಠಾಣೆ:
ವಿಜಯ ಕುಮಾರ ಪಿಎಸ್ಐ [ಕಾ.ಸು] ಆಳಂದ ಠಾಣೆ ರವರು ನಾನು ಮತ್ತು ಸಿಬ್ಬಂದಿ ಜನರಾದ ಉಮಾಕಾಂತ. ಬಾಬು ಇವರೊಂದಿಗೆ ಪೇಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಮಟಕಿ ರೋಡಿನ ಹಳಯ ಧನಗರ್ ಗಲ್ಲಿ ಹಿರೆಮಠದ ಹತ್ತಿರ ಒಬ್ಬ ಮನುಷ್ಯ ಅವಾಚ್ಯವಾಗಿ ಬೈಯುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದನು ಸದರಿವನನ್ನು ಸಿಬ್ಬಂದಿಯವರು ಬೆನ್ನಟ್ಟಿ ಹಿಡಿದು ಅವನ ಹೆಸರು ವಿಚಾರಿಸಲು ಹೀರಾಚಂದ ತಂದೆ ಪದ್ಮರಾಜ ದುರ್ಗೆ ಸಾ: ಧನಗರ್ ಗಲ್ಲಿ ಆಳಂದ ಅಂತಾ ತಿಳಿಸಿದನು. ಸದರಿಯವನು ಸಾರ್ವಜನಿಕರ ಶಾಂತತೆ ಭಂಗವನ್ನುಂಟು ಮಾಡುತ್ತಿದ್ದರಿಂದ ಮುಂಜಾಗ್ರತಾ ಕ್ರಮ ಕುರಿತು ಠಾಣೆ ಗುನ್ನೆ 08/2012 ಕಲಂ 151.110 (ಈ) & (ಜಿ) ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,

GULBARGA DIST REPORTED CRIMES

ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಠಾಣೆ:
ದಿನಾಂಕ: 08/01/12 ರಂದು ಮಧ್ಯಾಹ್ನ ಜನತಾ ಬಜಾರ ಕ್ರಾಸ ಹತ್ತಿರ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವರನ್ನು ವಿಚಾರಿಸಲು ಅಲತಾಫ ತಂದೆ ಅಬ್ದುಲ ಖದೀರ ತಾಬಂಡಗರ, ವಯ 21 ವರ್ಷ, ಉ ಕೂಲಿ ಕೆಲಸ, ಸಾ ಬಿಲಾಲಾಬಾದ ಚಿಕ್ಕಡ ಮೊಹಲ್ಲಾ ಗುಲಬರ್ಗಾ, ಆಸೀಫ @ ಮಹ್ಮದ ಇಸ್ಮಾಯಿಲ ತಂದೆ ಮಹ್ಮದ ಶರಫೋದ್ದಿನ ಶೇಖ, ವಯ 25 ವರ್ಷ, ಉ ವೆಲ್ಡಿಂಗ ಕೆಲಸ, ಸಾ ಗಂಗಾ ನಗರ ಹನುಮಾನ ಮಂದಿರ ಹತ್ತಿರ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡಲಿಲ್ಲಾ. ಸದರಿಯವರನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಯ ಸಿ.ಪಿ.ಸಿ ಶ್ರೀ.ರಾಜಕುಮಾರ ಮತ್ತು ಗಜೇಂದ್ರ ಸಿ.ಪಿ.ಸಿ ರವರು ವರದಿ ಸಲ್ಲಿಸಿದ್ದರಿಂದ ಠಾಣಾ ಗುನ್ನೆ ನಂ: 5/12 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಟಾರ ಸೈಕಲ್ ಸುಟ್ಟ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀ.ಕಲ್ಲಪ್ಪಾ ತಂದೆ ಸಿದ್ರಾಮಪ್ಪ ಹೀರೆಗೌಡವಯ 35 ವರ್ಷ ಸಾ ನಂದೂರ (ಕೆ) ಗ್ರಾಮ ತಾ ಜಿ ಗುಲಬರ್ಗಾ ರವರು ನಾನು ನನ್ನ ಹಿರೋ ಹೊಂಡಾ ಮೋಟರ ಸೈಕಲ ನಂ: ಕೆಎ-32-ಇಎ-0655 ನೇದ್ದರ ಮೇಲೆ ಗುಲಬರ್ಗಾಕ್ಕೆ ಬಂದಿದ್ದು. ಗುಲಬರ್ಗಾದಲ್ಲಿ ತಡ ರಾತ್ರಿಯಾಗಿರುವದರಿಂದ ನಮ್ಮ ಗ್ರಾಮದ ಮಹಾಂತಗೌಡ ತಂದೆ ಶಿವಲಿಂಗಪ್ಪ ಪೊಲೀಸ್ ಪಾಟೀಲ ಇವರ ಬಾಡಿಗೆ ಮನೆ ಇರುವ ವಾರ್ಡ ನಂ:2 ಗಾಜೀಪೂರ ತಿರಂದಾಜ ಟಾಕಿಜ ಹಿಂದುಗಡೆ ನನ್ನ ಹಿರೋ ಹೊಂಡಾ ವಾಹನ ಸಂ: ಕೆಎ-32-ಇಎ-0655 ಅಕಿ 40,866/- ರೂಪಾಯಿ ಬೆಲೆ ಬಾಳುವದನ್ನು ನಿಲ್ಲಿಸಿ ಮನೆಗೆ ಹೊಗಿದ್ದು. ದಿನಾಂಕ: 08/01/2012 ರಂದು ರಾತ್ರಿ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 06/2012 ಕಲಂ 427 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತರೆ.
ಕೊಲೆ ಪ್ರಕರಣ:
ಸೇಡಂ ಪೊಲೀಸ ಠಾಣೆ:
ಶ್ರೀ ನಾಗಪ್ಪ ತಂದೆ ಕಾಶಪ್ಪ ಬುನಟ್ಟಿ ಸಾ ಗಾಜರಕೋಟ, ರವರು ನನ್ನ ಮಗ ಭೀಮಪ್ಪ ಬುನಟ್ಟಿ ಇತನು ಒಂದು ವರ್ಷದಿಂದ ತನ್ನ ಹೆಂಡತಿ ಜೊತೆಗೆ ಸೇಡಂದಲ್ಲಿರುತ್ತಿದ್ದು. ಮಹಾಪೂರ ಬಂದಿದ್ದರಿಂದ ಮನೆಯಲ್ಲಿ ನೀರು ಹೋಗಿದ್ದು ಸರಕಾರದ ವತಿಯಿಂದ ಮನೆ ಮಂಜೂರಾಗಿ ತನ್ನ ಹೆಸರಿಗೆ ಹಕ್ಕು ಪತ್ರ ಮಾಡಿಕೊಂಡಿರುತ್ತಾನೆ ಅದರಂತೆ ಬಸವ ನಗರದ ಅಶೋಕ ತಂದೆ ಹಸನಪ್ಪ ಕೊಡದೂರ ಇತನು ಕೂಡಾ ನನ್ನ ಮಗನಿಗೆ ಮನೆ ಕೊಡಿಸಿ ಹಕ್ಕು ಪತ್ರ ಮಾಡಿಕೊಟ್ಟರೆ, 10,000/- ರೂಪಾಯಿ ಕೊಡುತ್ತೇನೆ ಅಂತ ಒಪ್ಪಿಕೊಂಡಿದ್ದು ಅದರಂತೆ ನನ್ನ ಮಗ ಅಶೋಕನಿಗೆ ಮನೆ ಮಾಡಿಕೊಟ್ಟು ಹಕ್ಕು ಪತ್ರ ತನ್ನ ಹತ್ತಿರ ಇಟ್ಟುಕೊಂಡಿದ್ದು ಇದೇ ವಿಷಯವಾಗಿ ಅಶೋಕನು ಜಗಳ ತೆಗೆದು ನನ್ನ ಮಗನಿಗೆ ಹೊಡೆಬಡೆ ಮಾಡಿ ಹಕ್ಕು ಪತ್ರ ಕೇಳಿದ್ದು ಅಂದಿನಿಂದ ಅವರಿಬ್ಬರ ಮಧ್ಯೆ ವೈಮನಸ್ಸುಂಟಾಗಿತ್ತು ದಿ:07-01-2012 ರಂದು ಸಾಯಂಕಾಲ 6-00 ಪಿ.ಎಮ್.ಕ್ಕೆ ಸೊಸೆ ಗಂಗಮ್ಮ ಇವಳು ಫೋನ ಮಾಡಿ ತಿಳಿಸಿದ್ದೇನೆಂದರೆ ನನ್ನ ಗಂಡ ಬೆಳಗ್ಗೆ 8-00 ಗಂಟೆಗೆ ಮನೆಯಿಂದ ಅಶೋಕ ಕೊಡದೂರ ಇವನ ಜೊತೆಗೆ ಹೋಗಿ ಮರಳಿ ಬರದೇ ಇದ್ದರಿಂದ ಹುಡುಕಾಡಿದ್ದು ರಾತ್ರಿ 8-00 ಗಂಟೆ ಸುಮಾರಿಗೆ ಗೊತ್ತಾಗಿ ಹೋಗಿ ನೋಡಲಾಗಿ ನನ್ನ ಮಗನಿಗೆ ಅಶೋಕ ಕೊಡದೂರ ಇವನೇ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಭೋಯರಗಡ್ಡಿ ಸ್ಮಶಾನದ ಹಳ್ಳದಲ್ಲಿ ಮಲಗಿಸಿ ಹೋಗಿರುತ್ತಾನೆ. ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.10/2012 ಕಲಂ. 302 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಸೇಡಂ ಠಾಣೆ:
ದಿನಾಂಕ:08-01-2011 ರಂದು ಸಾಯಂಕಾಲ ಮಾಹಿತಿ ಬಂದಿದ್ದೇನೆಂದರೆ, ಲೋಹಾರಗಲ್ಲಿಯ ನಯೂಮ್ ರವರ ಹಿಟ್ಟಿನ ಗಿರಣಿಯಲ್ಲಿ ಕ್ರಿಕೇಟ ಪಂದ್ಯಾವಳಿ ಮೇಲೆ ಹಣವನ್ನು ಹಚ್ಚಿ ಬೆಟ್ಟಿಂಗ್ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ (ಕಾ.ಸು) ಶ್ರೀ. ರಾಜಶೇಖರ ವ್ಹಿ. ಹಳಗೋದಿ ಹಾಗೂ ಪಿ.ಎಸ್.ಐ (ಪ್ರೋಬೆಶನರಿ) ಸಾಗರ್ ಎಸ್.ಎಲ್. ಮತ್ತು ಸಿಬ್ಬಂದಿಯವರಾದ ಬಸವರಾಜ, ವಿಠಲರೆಡ್ಡಿ, ಸಿದ್ರಾಮೇಶ, ಸುಭಾಶ ಹಾಗೂ ಅಲ್ಲಾಭಕ್ಷ ಇವರು ದಾಳಿ ಮಾಡಿ ನೋಡಲು ಮೂರು ಜನ ಹುಡುಗರು ಟಿ.ವಿ. ಹಚ್ಚಿ ಸ್ಟಾರ ಕ್ರಿಕೇಟ್ ಚಾನಲ್ ಮೇಲೆ ನಡೆಯುತ್ತಿರುವ ಕ್ರಿಕೇಟ ಆಟದ ಪ್ರತಿ ಬಾಲಿನ ಮೇಲೆ ಸಿಕ್ಸರ, ಔಟ್, ವೈಡ್ ಬಾಲ, ಚೌಕಾ, ಅಂತ ಮುಂದೆ ಆಗುವ ಸಂಭವನೆಗಳ ಮೇಲೆ ದೈವಲೀಲೆಯ ಕ್ರಿಕೇಟ ಆಟದ ಮೇಲೆ ಹಣವನ್ನು ಪಣಕ್ಕೆ ಹಚ್ಚಿ ಆಡುತ್ತಿದ್ದು, ಮೂರು ಜನರನ್ನು ಹಿಡಿದುಕೊಂಡು ಅವರಿಂದ ಒಂದು ಪೋರ್ಟೆಬಲ್ ಟಿ.ವ್ಹಿ ಅಂ.ಕಿ.2000/- ಮೂರು ಮೊಬೈಲ್ ಅಂ.ಕಿ 1500/- ಹಾಗೂ ಪಣದಲ್ಲಿ ಇಟ್ಟಿರುವ ನಗದು ಹಣ 6200/- ರೂಪಾಯಿ ನೇದ್ದವುಗಳನ್ನು ಪಂಚರ ಸಮಕ್ಷಮ ಜಫ್ತಿ ಪಂಚನಾಮೆ ಮಾಡಿಕೊಂಡಿದ್ದರಿಂದ ಸೇಡಂ ಠಾಣೆ ಗುನ್ನೆ ನಂ.12/2012 ಕಲಂ.78 A (VI) ಕೆ.ಪಿ. ಆಕ್ಟ್ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಸಿಂದಗಿ (ಬಿ) ಗ್ರಾಮದ ಸೀಮಾಂತರಲದಲಿ ಇಸ್ಪೇಟ ಜೂಜಾಟವನ್ನು ಆಡುತ್ತಿದ್ದಾರೆ ಅಂತಾ ಬಂದ ಖಚಿತ ಬಾತ್ಮಿ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂದಿಯವರು ಜೂಜಾಟ ಆಡುತ್ತಿದ್ದ ಬೂಪೇಂದ್ರ ತಂದೆ ಶರದ ಠಾಕುರ ಸಂಗಡ 10 ಜನರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 17,400-00 ಮೋಟಾರ ಸೈಕಲ್, ಮೋಬಾಯಿಲ್ ಹೀಗೆ ಒಟ್ಟು 155,400-00 ಮೌಲ್ಯದನ್ನು ವಶಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 5/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

08 January 2012

GULBARGA DIST REPORTED CRIMES

ಅನಧಿಕೃತವಾಗಿ ಸರಾಯಿ ಮಾರಾಟ ಮಾಡಿದ ಬಗ್ಗೆ:
ಶಹಾಬಾದ ನಗರ ಪೊಲೀಸ ಠಾಣೆ :
ಶಹಾಬಾದ ನಗರ ಪೊಲಿಸ ಠಾಣಾ ವ್ಯಾಪ್ತಿಯ ಮಾಲಗತ್ತಿ ಗ್ರಾಮದ ಭೀಮಾಶಂಕರ ಖಣದಾಳೆ ಇವರ ಮನೆಯ ಎದರು ಅನಧಿಕೃತವಾಗಿ ಲೈಸನ್ಸಯಿಲ್ಲದೇ ಸರಾಯಿ ಕ್ವಾಟರ್ ಬಾಟಲಿಗಳು ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರಗೆ ಪಿಐ ಶಹಾಬಾದ ನಗರ ಠಾಣೆ ಹಾಗೂ ಸಿಬ್ಬಂದಿಯವರಾದ ಗುಂಡಪ್ಪಾ, ಯೆಜಿಕಲ್ , ಪರಶುರಾಮ, ಬಸವರಾಜ ಹಾಗೂ ಜೀಪ ಚಾಲಕ ಹಣಮಂತ ರವರೊಂದಿಗೆ ದಾಳಿ ಮಾಡಿ ಭೀಮಾಶಂಕರ ತಂದೆ ಶಿವಶರಣಪ್ಪಾ ಖಣದಾಳೆ ಸಾ: ಮಾಲಗತ್ತಿ ಇತನು ಅನಧಿಕೃತವಾಗಿ ಲೈಸನ್ಸ್ ಇಲ್ಲದೇ ಸರಾಯಿ ಕ್ವಾಟರ್ ಬಾಟಲಿಗಳ 4 ಕಾಟನ್ ಬಾಕ್ಸಗಳು ಅ.ಕಿ. 6240=00 ರೂಪಾಯಿ ನೇದ್ದು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 5/2012 ಕಲಂ 32, 34 ಕೆ.ಇ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,

07 January 2012

Gulbarga Dist Reported Crimes

ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀ.ಬಸಲಿಂಗಪ್ಪ ತಂದೆ ಹನುಮಂತಪ್ಪ ಬೂಪುರ, ಸಾ ಗಾಜೀಪೂರ ಗುಲಬರ್ಗಾ ರವರು ನಾನು ದಿನಾಂಕ: 03/12/2011 ರಂದು ಮನೆಯ ಮುಂದೆ ಹೀರೊ ಹೊಂಡಾ ಸಿ.ಡಿ 100 ನಂ: ಕೆಎ 32 ಹೆಚ್ 3069 ನೇದ್ದನ್ನು ನಿಲ್ಲಿಸಿದ್ದು ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಆವಾಗಿನಿಂದ ಇಲ್ಲಿಯವರೆಗೆ ಹುಡುಕಾಡಿದರು ಪತ್ತೆ ಆಗಿರುವದಿಲ್ಲ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 04/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಯತ್ನ ಪ್ರಕರಣ:
ಚೌಕ ಪೊಲೀಸ್ ಠಾಣೆ :
ಶ್ರೀ ಕಿರಣಕುಮಾರ ತಂದೆ ಮೊಹನದಾಸ ಕಾಳೆ ಸಾ: ಬಾಪುನಗರ ಗುಲಬರ್ಗಾರವರು ನಾನು ಸುಮಾರು 15 ದಿವಸಗಳ ಹಿಂದೆ ನಾನು ಯುನಿವರಿಸಿಯಲ್ ಜಿಮ್ ದಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ವ್ಯಾಯಾಮ ಮಾಡುವ ವಿಷಯದಲ್ಲಿ ಗಂಗಾನಗರದ ಹುಡುಗನ ಸಂಗಡ ತಕರಾರು ಆಗಿದ್ದು ಆಗ ಬಸವನಗರದ ಚನ್ನು ಇತನು ನಮ್ಮಿಬ್ಬರಿಗೆ ತಿಳಿಹೇಳಿ ರಾಜಿ ಮಾಡಿಸಿದ್ದನು. ದಿನಾಂಕ: 06.01.2012 ರಂದು ಸಾಯಂಕಾಲ ನಾನು ಮತ್ತು ಸುನೀಲ ಪಾಟೀಲ ಇಬ್ಬರು ಕೂಡಿ ವ್ಯಾಯಾಮ ಮಾಡಲು ಜಿಮ್ಮಿಗೆ ಹೋಗಿ ವ್ಯಾಯಾಮ ಮಾಡುತ್ತಿದ್ದಾಗ ಬಸವನಗರದ ಅಮರ, ಚನ್ನು, ಬಸವರಾಜ, ಪ್ರದೀಪ ಎಲ್ಲರೂ ಕೂಡಿ ಬಂದವರೆ ಎಲ್ಲರೂ ಸೇರಿ ಕೈಯಲ್ಲಿದ್ದ ತಲವಾರದಿಂದ ಹೊಡೆದು ಭಾರಿ ರಕ್ತಗಾಯಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 05/2012 ಕಲಂ 307 ಸಂ. 34 L¦¹ ಮತ್ತು 3(1)(10) ಎಸ್ಸಿ/ಎಸ್ಟಿ ಕಾಯ್ದೆ 1989 ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಹಲ್ಲೆ ಪ್ರರಕರಣ:
ಬ್ರಹ್ಮಪೂರ ಠಾಣೆ :
ಶ್ರೀ ಲೋಕೇಶ ತಂದೆ ಹುಚ್ಚಪ್ಪ ಹೊಸಮನಿ, ಸಾ ಅಫಜಲಪೂರ ಹಾವ ಶಕೀಲ ಅನ್ಸಾರಿ ಇವರ ಮನೆಯ ಹತ್ತಿರ ವಿದ್ಯಾನಗರ ಗುಲಬರ್ಗಾ ರವರು ನಾನು ದಿನಾಂಕ: 06/01/2012 ರಂದು ಮಧ್ಯಾಹ್ನ ಕಾಲೇಜ ಮುಗಿಸಿಕೊಂಡು ಬರುತ್ತಿರುವಾಗ ಯಮಹಾ ಶೋರೂಮ ಎದುರುಗಡೆ ಗಿನೇಶ @ ಗಿನಿಕ @ ಚಿಂಟು ಪೊಲೀಸ ಕ್ವಾಟರ್ಸ, ಭೀಮಾಶಂಕರ ಸಂಗಡ 10 ಜನರು ಸೇರಿಕೊಂಡು ನನಗೆ ಗಾಡಿ ಹಾಯಿಸುವ ಸಂಬಂಧ ಜಗಳ ಮಾಡಿದಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಎಲ್ಲರೂ ಸೇರಿ ಪರಸಿ ತುಕಡಿಯಿಂದ ಮತ್ತು ಬಡಿಗೆಯಿಂದ ತಲೆಗೆ ಕಾಲಿಗೆ ಕೈಗೆ ಟೊಂಕಕ್ಕೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 03/2012 ಕಲಂ: 143, 147, 148, 341, 323, 324, 504, 506 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

06 January 2012

Gulbarga Dist Reported Crime

ಅಡಿಗೆ ಮಾಡುವ ಸಲುವಾಗಿ ಉಪಯೋಗಿಸುವ ಗ್ಯಾಸ್ ಸಿಲೆಂಡರಗಳಿಂದ ಅನಧಿಕೃತವಾಗಿ ಗ್ಯಾಸನ ಯಂತ್ರದ ಮೂಲಕ ತೆಗೆದು ಅಟೋರಿಕ್ಷಾಗಳಿಗೆ ತುಂಬುತ್ತಿರುವ ಬಗ್ಗೆ.
ಬ್ರಹ್ಮಪೂರ ಠಾಣೆ: ಇಂದು ನಗರದ ಸಿ.ಟಿ ಬಸ್ಸ ನಿಲ್ದಾಣದ ಹತ್ತಿರ ಶರಣು ಭೂಸಾ ಈತನು ಅನಧಿಕೃತವಾಗಿ ಗೃಹ ಬಳಕೆಗೆ ಗ್ಯಾಸನ್ನು ಆಟೋರಿಕ್ಷಾ ಸಿಲೆಂಡರಗಳಿಗೆ ಯಂತ್ರದ ಮೂಲಕ ಗ್ಯಾಸ ತುಂಬುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಶ್ರೀ ರಾಮಪ್ಪ ವಿ ಸಾವಳಗಿ ಪಿ.ಐ ಎ.ಡಿ.ಎಸ್/ಆರ್.ಸಿ.ಐ.ಬಿ ಸಿ.ಐ.ಡಿ ಗುಲಬರ್ಗಾ ರವರು ತಾವು ಮತ್ತು ತಮ್ಮ ಘಟಕದ ಸಿಬ್ಬಂದಿಯವರದೊಂದಿಗೆ ದಾಳಿ ಮಾಡಿ ಒಂದು ಹೆಚ್.ಪಿ ಕಂಪನಿಯ ಗ್ಯಾಸ ಸಿಲೇಂಡರ, ಎಲೆಕ್ಟ್ರಾನಿಕ ತೂಕದ ಮಷೀನ, ಎಲೆಕ್ಟ್ರಿಕಲ್ ಪಂಪ ಮಷೀನ, ಟೇಬಲ ಫ್ಯಾನ, ಒಂದು ಬ್ಲೂಮ ಮೊಬೈಲ, ಆಟೋ ರಿಕ್ಷಾ ನಂಬರಗಳು : ಕೆಎ 32 ಎ 4079, ಮತ್ತು ಕೆಎ 32 9787 ಹೀಗೆ ಒಟ್ಟು 2,59,300/- ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2012 ಕಲಂ: 3 LPG (REGULATION OF SUPPLY & DISTRUBUTION) ORDER 2000 & 3 & 7 EC ACT ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ :
ಶ್ರೀ ಸೈಯದ ಮೊಜಮ ಅಲಿ ತಂದೆ ಸೈಯದ ಮಜರ ಅಲಿ ಸಾ:ಮ.ನಂ. ಎಲ್.ಐ.ಜಿ 11 ಶಾಂತಿನಗರ ಗುಲಬರ್ಗಾ ರವರು ನನ್ನ ದ್ವಿಚಕ್ರ ವಾಹನ ನಂ:ಕೆಎ-32 ಎಸ್-3892 ನೇದ್ದನ್ನು ದಿನಾಂಕ:22/08/2011 ರಂದು ರಾತ್ರಿ 11:50 ಕ್ಕೆ ಶಾಂತಿನಗರ ಬಡಾವಣೆಯ ನನ್ನ ಮನೆಯ ಮುಂದೆ ಮೋಟರ ಸೈಕಲ್ ನಂ:ಕೆಎ-32 ಎಸ್-3892 ಚೆಸ್ಸಿ ನಂ:07ಸಿ16ಎಫ್39669 ಇಂಜಿನ ನಂ:07ಸಿ15ಇ46081 ಅ.ಕಿ 40,000 ರೂ.ಗಳ ಕಿಮ್ಮತ್ತಿನ ವಾಹನ ನಿಲ್ಲಿಸಿದ್ದು ದಿನಾಂಕ:23/08/2011 ರಂದು ಬೆಳಗಿನ ಜಾವ 4:00 ಎಎಮ್ ಸುಮಾರಿಗೆ ನೋಡಲಾಗಿ ನನ್ನ ವಾಹನ ಕಾಣಲಿಲ್ಲ ಯಾರೋ ಕಳ್ಳರು ನನ್ನ ದ್ವಿ ಚಕ್ರವಾಹನ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:02/2012 ಕಲಂ:379 ಐಪಿಸಿ ನೇದ್ದರ ಪ್ರಕಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಸುರೇಶ ತಂದೆ ನಾಗಣ್ಣಾ ಸುತಾರ ಸಾ: ಕಲ್ಲಹಂಗರಗಾ ತಾ & ಜಿ ಗುಲಬರ್ಗಾರವರು ನಾನು ಟಂ ಟಂ ನಂ ಕೆಎ-32-ಬಿ-4257 ನೇದ್ದರಲ್ಲಿ ಕಲ್ಲಹಂಗರಗಾದಿಂದ ಗುಲಬರ್ಗಾಕ್ಕೆ ಬರುತ್ತಿರುವಾಗ ತಾಜಸುಲ್ತಾನಪೂರ ಗ್ರಾಮದ ಹತ್ತಿರ ಗುಲಬರ್ಗಾ ಕಡೆಯಿಂದ ಒಂದು ಲಾರಿ 608 ಲಾರಿ ನಂ ಕೆಎ-37-1 ನೇದ್ದರ ಚಾಲಕ ಜೈಭೀಮ ಇತನು ತನ್ನ ವಾಹನವನ್ನು ಅತೀವೇಗ & ನಿಸ್ಕಾಳಜೀತನದಿಂದ ವಾಹನ ನಡೆಸಿಕೊಂಡು ಬಂದು ಟಂಟಂ ಕ್ಕೆ ಡಿಕ್ಕಿ ಹೊಡೆದಿದ್ದರಿಂದ ನನಗೆ ಮತ್ತು ಸಿದ್ದು @ ಸಿದ್ದಾರೋಡ ತಂದೆ ಶರಣಪ್ಪಾ ಎಕಲೂರ ವಯ ; 18 ವರ್ಷ , ಸಿದ್ದ @ ಸಿದ್ದಾರೋಡ ತಂದೆ ಶಂಕರ ಸುಲ್ತಾನಪೂರ ವಯ ;18 ವರ್ಷ , ಶಿವಕುಮಾರ ತಂದೆ ಶಿವಶರಣಪ್ಪಾ ಕಿಣಗಿ ವ;24 ವರ್ಷ ಸಾ ಎಲ್ಲರೂ ಕಲ್ಲಹಂಗರಗಾ ಇವರುಗಳಿಗೆ ಸಾದಾ ಮತ್ತು ಭಾರಿಗಾಯಾಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ:: 279.337.338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

05 January 2012

GULBARGA DIST REPORTED CRIME

ವಿದೇಶ ಪ್ರಯಾಣಕ್ಕೆ ಕಳುಹಿಸುತ್ತೆವೆ ಅಂತಾ ಮೋಸ ಮಾಡಿದ ಬಗ್ಗೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಬಸವರಾಜ ತಂದೆ ಭೀಮರಾಯ ಗುಂಡಲಗೇರಿ ಸಾ: ಗುಂಡಲಗೇರಿ ತಾ: ಸುರಪೂರ ಹಾವ ಪ್ಲಾಟ ನಂ 50 ಪಿ & ಟಿ ಕ್ವಾಟ್ರಸ್ ಹಿಂದುಗಡೆ ಹಳೆ ಜೇವರ್ಗಿ ರಸ್ತೆ ಗುಲಬರ್ಗಾ ರವರು ನಾನು ಅಶ್ವಿನಕುಮಾರ ಎಂಬುವವರ ಗೆಳೆಯನಾಗಿದ್ದು, ಅಶ್ವಿನಿಕುಮಾರ ಇವರು ವಿದೇಶ ಪ್ರವಾಸಕ್ಕಾಗಿ ಡ್ರಿಮ್ ವೇ ಹಾಲಿಡೇಜ್ ಪ್ರೈ ಲಿಮಿಟೆಡ (ಇಂಡಿಯಾ) ಕಂಪನಿ ಯುನಿಟ ನಂ 407. 3ನೇ ಹಂತ ಕರೀಮ್ ಟವರ ಕನ್ನಿಂಗ ಹ್ಯಾಂ ರೋಡ ಬೆಂಗಳೂರು–560052 ಕಂಪನಿಯವರು ವಿದೇಶ ಪ್ರವಾಸಕ್ಕೆ ಕರೆದೊಯ್ಯುವ ಬಗ್ಗೆ ಒಂದು ಚೈನ್ ಸಿಸ್ಟಮ್ ಮಾಡಿದ್ದು ನಾನು ಈ ಕಂಪನಿಯಲ್ಲಿ ಸದಸ್ಯನಾಗಿದ್ದು ನೀನು ಸದಸ್ಯನಾಗು ಅಂತ ನನಗೆ ಹೇಳಿದಕ್ಕೆ ನಾನು ಸದಸ್ಯನಾಗಿದ್ದೆನೆ, ನನ್ನಂತೆ ಇನ್ನೂ ಎರಡು ಜನರನ್ನು ನನ್ನ ಪರವಾಗಿ ಈ ಕಂಪನಿಗೆ ಸದಸ್ಯರನ್ನಾಗಿ ಮಾಡಿದಲ್ಲಿ ನನಗೆ ಈ ಕಂಪನಿಯವರು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಾರೆ ಆದ್ದರಿಂದ ನೀನು ನನ್ನ ಕೇಳಗೆ ಸದಸ್ಯನಾಗಬೇಕು ಮತ್ತು ಈ ಕಂಪನಿಯವರು ನವೆಂಬರ ತಿಂಗಳಲ್ಲಿ ಗುಲಬರ್ಗಾಕ್ಕೆ ಬರುತ್ತಾರೆ ಬೇಟಿ ಮಾಡಿಸುತ್ತೇನೆ ಅಂತಾ ಮನವರಿಕೆ ಮಾಡಿಕೊಟ್ಟಿದ್ದರಿಂದ ನಾನು ಈ ಕಂಪನಿಗೆ ಸದಸ್ಯನಾದೆನು. ಈ ಕಂಪನಿಯವರಾದ ಶ್ರೀನಿವಾಸರೆಡ್ಡಿ ಮತ್ತು ಓಬಾರೆಡ್ಡಿ ಎಂಬವರು ನವೆಂಬರ 2010 ರಲ್ಲಿ ಗುಲಬರ್ಗಾಕ್ಕೆ ಬಂದ ವೇಳೆಯಲ್ಲಿ ಅಶ್ವಿನಕುಮಾರ ಇತನು ನನ್ನನ್ನು ಶ್ರೀನಿವಾಸರೆಡ್ಡಿ ಮತ್ತು ಓಬಾರೆಡ್ಡಿ ಎಂಬವರನ್ನು ಪರಿಚಯ ಮಾಡಿಕೊಟ್ಟನು. ಆಗ ಶ್ರೀನಿವಾಸರೆಡ್ಡಿ ಮತ್ತು ಓಬಾರೆಡ್ಡಿ ಎನ್ನುವವರು 10,000=00 ರೂಪಾಯಿಗಳನ್ನು ಐ.ಸಿ.ಐ.ಸಿ.ಐ ಬ್ಯಾಂಕ ಅಕೌಂಟ ನಂ 020405003352 ನೇದ್ದರ ಅಕೌಂಟ ನಮ್ಮ ಕಂಪನಿಯದ್ದಾಗಿದ್ದು ಈ ಅಕೌಂಟಿಗೆ ಹಣ ಸಂದಾಯ ಮಾಡಬೇಕು ಅಂತಾ ಹೇಳಿ 3 ವರ್ಷಗಳ ಅವಧಿಯಲ್ಲಿ ಯಾವಾಗಾದರೂ ವಿದೇಶ ಪ್ರವಾಸಕ್ಕೆ ಹೋಗಬಹುದು ಅಂತಾ ನನಗೆ ಹೇಳಿದರು. ಅಲ್ಲದೆ ವಿದೇಶ ಪ್ರಯಾಣಕ್ಕೆ ಹೋಗುವ ಸಮಯದಲ್ಲಿ ಟ್ಯಾಕ್ಸ ಅಂತಾ 7500=00 ರೂಪಾಯಿಗಳನ್ನು ಸಂದಾಯ ಮಾಡಬೇಕು ಅಂತಾ ತಿಳಿಸಿದರು. ನಾನು ಅದರಂತೆ ಐ.ಸಿ.ಐ.ಸಿ.ಐ ಬ್ಯಾಂಕಿಗೆ ಹೋಗಿ ಡ್ರಿಮ್ ವೇ ಹಾಲಿಡೇಜ್ ಪ್ರೈ. ಲಿಮಿಟೆಡ (ಇಂಡಿಯಾ) ಕಂಪನಿಯ ಅಕೌಂಟ ನಂ 020405003352 ನೇದ್ದಕ್ಕೆ ನಗದು 10,000=00 ರೂಪಾಯಿಗಳನ್ನು ಜಮಾ ಮಾಡಿದೆನು. ನಂತರ ನಾನು ಕಂಪನಿಯವರಿಗೆ ಬೆಂಗಳೂರಿಗೆ ಹೋಗಿ ಕೇಳಲಾಗಿ ಮಂದಿನ ತಿಂಗಳು ಕಳಹಿಸುತ್ತೇವೆ ಅಂತಾ ವಿನಾಃಕಾರಣ 10 ತಿಂಗಳ ಕಾಲ ವ್ಯರ್ಥ ಮಾಡಿ ಮುಂದೂಡುತ್ತಾ ಬಂದಿರುತ್ತಾರೆ. ಅಲ್ಲದೆ ಇದೆ ಕಂಪನಿಯಲ್ಲಿ ಶಿವರಾಜ ತಂದೆ ಚನ್ನಬಸಯ್ಯ ಸ್ವಾಮಿ ಸಾ: ಬಾಲಾಜಿ ನಗರ ಗುಲಬರ್ಗಾ ಎಂಬವವರು ಸಹ ಸದಸ್ಯರಾಗಿದ್ದು ಇವರಿಗೂ ಸಹ ಇದೆ ತರಹ ಕಂಪನಿಯವರು ಸುಳ್ಳು ಹೇಳುತ್ತಾ ದಿನಗಳನ್ನು ಮಂದೂಡುತ್ತಾ ಬಂದಿರುತ್ತಾರೆ. ಅಲ್ಲದೆ ದಿನಾಂಕ 18/04/2011ರಂದು 10,000=00 ರೂ ದಿನಾಂಕ 29/01/2011 ರಂದು 10,000=00 ರೂಪಾಯಿಗಳನ್ನು ಕಂಪನಿಯ ಅಕೌಂಟ ನಂ 020405003352 ಹಾಗೂ ದಿನಾಂಕ 25/08/2011 ರಂದು ಒಟ್ಟು 1,40,000=00 ರೂಪಾಯಿ ಹೀಗೆ ಒಟ್ಟು 1,70,000=00 ರೂಪಾಯಿ ಕಂಪನಿಗೆ ಸಂದಾಯ ಮಾಡಿಸಿಕೊಂಡು ಕಂಪನಿಯವರು ನನಗೆ ಮೋಸ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 03/12 ಕಲಂ 420 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ :
ದಿನಾಂಕ 02-01-2012 ರಂದು ಸಾಯಂಕಾಲ ಶಿವಶಂಕರ ತಂದೆ ರುಕ್ಮಣ್ಣಾ ಹಾಗರಗಿ ಇವರು ತಮ್ಮ ಮೋಟಾರ ಸೈಕಲ ನಂ. ಕೆ.ಎ 32 ಕ್ಯೂ 2942 ನೇದ್ದರ ಮೇಲೆ ಗುಬ್ಬಿ ಕಾಲೂನಿ ಕಡೆಯಿಂದ ಜಿ.ಜಿ.ಎಚ್ ಕಡೆಗೆ ಬರುತ್ತಿದ್ದಾಗ ಆರ್.ಟಿ.ಓ ಆಫೀಸ ಹತ್ತಿರ ಒಬ್ಬ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹಿಂದಿನಿಂದ ಬಂದು ಶಿವಶಂಕರ ಇವರ ವಾಹನಕ್ಕೆ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಅಂಜನಾಬಾಯಿ ಗಂಡ ಶಿವಶಂಕರ ಹಾಗರಗಿ ಸಾಃ ಸುಂದರ ನಗರ ಗುಲಬರ್ಗಾರವರು ದೂರು ಸಲಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 03/2012 ಕಲಂ 279,338 ಐ.ಪಿ.ಸಿ. ಸಂಗಡ 187 ಐ.,ಎಂವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಹಿಳೆಯ ಮೇಲೆ ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀಮತಿ ಕಲ್ಪನಾ ಗಂಡ ನಾರಾಯಣ ಜಾಧವ ಸಾ;ಭೀಮಳ್ಳಿ ಗ್ರಾಮ ತಾ;ಜಿ; ಗುಲಬರ್ಗಾರವರು ನಾನು ದಿನಾಂಕ.3-01-2012 ರಂದು ನನ್ನ ತೋಟದ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ರಾಣೋಜಿ ಮತ್ತು ಪ್ರಭು ಜಾಧವ ಬಂದು ನಿನ್ನ ಗಂಡ , ಮೈದುನ ಎಲ್ಲಿ ಈ ಜಮೀನು ನಮಗೆ ಸೇರಬೇಕು , ಜಮೀನು ಬಿಟ್ಟು ಹೋಗು ಅಂತಾ ಅವಾಚ್ಯ ಶಬ್ದಗಳಿಂದ ಬೈಯುವಾಗ ಬೈಯ ಬೇಡಾ ಅಂದುದಕ್ಕೆ ಅವಳನ್ನು ಕೈ ಒತ್ತಿ ಹಿಡಿದು ಎಳೆದಾಡಿ ಕೈಯಿಂದ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2012 ರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

04 January 2012

Gulbarga Dist Reported Crimes

ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ನವಲಸಿಂಗ್ ತಂದೆ ಗೋಪಾಲಸಿಂಗ್ ಸಿಕ್ಕಲಗರ್ ಸಾ ಆಶ್ರಯ ಕಾಲೊನಿ ಗುಲಬರ್ಗಾರವರು ನಮ್ಮ ಸಂಬಂಧಿಕರು ಪಂಚ ಶೀಲನಗರದಲ್ಲಿದ್ದ ಅವರು ಸಹ ಲೋಹಾರ ಕೆಲಸ ಮಾಡುತ್ತಾರೆ ನಾವು ಊರು-ಊರು ಮತ್ತು ಪಟ್ಟಣಗಳಲ್ಲಿ ನಡೆಯುವ ಸಂತೆ ಜಾತ್ರೆಗಳಿಗೆ ಹೋಗಿ ಲೋಹದ ಸಾಮಾನುಗಳಾದ ಇಳಿಗೆ ಜಾರಿ ಮಾರಾಟ ಮಾಡುತ್ತೇವೆ ಪಂಚ ಶೀಲನಗರದಲ್ಲಿರುವ ನಮ್ಮ ಸಂಬಂಧಿಕರ ಮತ್ತು ನನ್ನ ನಡುವೆ ವ್ಯಾಪಾರದ ಸಲುವಾಗಿ ಆಗಾಗ ಬಾಯಿ ಮಾತಿನ ಜಗಳ ಆಗಿದ್ದು ಅಲ್ಲದೆ ಅವರ ಮತ್ತು ನನ್ನ ನಡುವೆ ವೈಮನಸ್ಸು ಆಗಿತ್ತು ದಿನಾಂಕ: 3-1-2012 ರಂದು ಮಧ್ಯಾನ 2 ಗಂಟೆ ಸುಮರಿಗೆ ನಾನು ಮತ್ತು ವಿಜಯಸಿಂಗ್ ಮತ್ತು ನಾನಕೂರ, ದರ್ಶನಸಿಂಗ್, ಕರ್ತಾರಸಿಂಗ್, ತಾರಸಿಂಗ್ ಎಲ್ಲರು ಕೂಡಿ ಪಂಚ ಶೀಲನಗರದ ಮುಖ್ಯ ರಸ್ತೆಗೆ ಹೊಂದಿ ಕೊಂಡಿರುವ ಹೊಟೇಲ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನಾವೆಲ್ಲರು ವ್ಯಾಪರಕ್ಕಾಗಿ ಜೇವರ್ಗಿಗೆ ಹೋಗುತ್ತಿರುವಾಗ ನಮ್ಮನ್ನು ನೋಡಿದ ಜೇವರ ಸಿಂಗ್, ಜಗಬಾರಸಿಂಗ್ , ಲಖನಸಿಂಗ್ ಲಾತೂರ , ಶಾನಾಸಿಂಗ್ , ಆಕಾಶ ಸಿಂಗ್ , ರಾಮಾಸಿಂಗ್ ಲಾತೂರ ಸಂಗಡ 2 ಜನರು ಇವರೆಲ್ಲರು ಕೂಡಿ ಬಂದು ನನಗೆ ಎಡ ತೊಡೆಗೆ ತಲವಾರದಿಂದ ರಾಡಿನಿಂದ ಹೊಡೆದು ಬಲವಾದ ರಕ್ತ ಗಾಯ ಗುಪ್ತಗಾಯ ಮಾಡಿದನು ಬಿಡಿಸಲು ಬಂದ ವಿಜಯ ಸಿಂಗ್ ಇವನಿಗೂ ಸಹ ತಲವಾರಿದಂದ ಹೊಡೆದು ಭಾರಿ ರಕ್ತಗಾಗಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 1/2012 ಕಲಂ 143,147,148,341,324,325,323,506, [2] ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. .
ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಠಾಣೆ:
ಶ್ರೀ.ಗಜೇಂದ್ರ ಸಿ.ಪಿ.ಸಿ ಬ್ರಹ್ಮಪೂರ ಠಾಣೆರವರು ನಾನು ಮತ್ತು ಸುಧಾಕರ ಸಿ.ಪಿ.ಸಿ ರವರು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ದಿನಾಂಕ: 04/01/12 ರಂದು ನಗರದ ಸಿ.ಟಿ ಬಸ್ ನಿಲ್ದಾಣ ಹತ್ತಿರ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವನನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಚನ್ನಾರೆಡ್ಡಿ ತಂದೆ ಬಾಬುರೆಡ್ಡಿ, ಸಾ ನಂದಮ್ಮ ಹೊಟೇಲ ಹತ್ತಿರ ಮಿನಾರ ಶೇಖ ರೋಜಾ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡಲಿಲ್ಲಾ. ಸದರಿಯವನನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ಸಲ್ಲಿಸಿದ್ದರ ಮೇರೆಗೆ ಠಾಣಾ ಗುನ್ನೆ ನಂ: 1/12 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹುಡಗ ಕಾಣೆಯಾದ ಪ್ರಕರಣ:
ಚಿತ್ತಾಪೂರ ಠಾಣೆ:
ದಿನಾಂಕ:31-12-2011 ರಂದು ಮಧ್ಯಾಹ್ನ ಸುಮರಿಗೆ ನಾಜೀಮ ತಂದೆ ಮಹಿಬೂಬಸಾಬ ವ 11 ಎತ್ತರ 4” ದುಂಡು ಮುಖ, ಸಾದಾರಣ ಮೈಕಟ್ಟು, ಕೆಂಪು ಬಣ್ಣ, ಕಪ್ಪು ಕೂದಲು, ನೀಟಾಗ ಮೂಗು, 5 ನೇ ತರಗತಿ ಒದುತ್ತಿದ್ದು, ಕನ್ನಡ, ಉರ್ದು ಭಾಷೆ ಬಲ್ಲವನಾಗಿರುತ್ತಾನೆ, ಶಾಲೆ (ಬಿಳಿ ಶರ್ಟ ಬಿಳಿ ಹಾಪ್ ಪ್ಯಾಂಟ) ಸಮವಸ್ತ್ರ ಧರಿಸಿರುತ್ತಾನೆ ಇತನು ಬಾರೆಹಣ್ಣು ತರುತ್ತೆನೆಂದು ಮನೆಯಿಂದ ಹೋದವನು ಇಲ್ಲಿಯವರೆಗೆ ಮನೆಗೆ ಬಂದಿರುವದಿಲ್ಲ ಎಲ್ಲಾ ಕಡೆಗೆ ಹುಡಕಾಡಿದರೂ ಸಿಕ್ಕಿರುವದಿಲ್ಲ ಅಂತಾ ಹುಸೇನ ಖಾನ ತಂದೆ ಶೇಖ ಖಾನ ಗುಂಡಗುರ್ತಿ ಸಾ ಬಸವ ನಗರ ಚೀತ್ತಾಪೂರ ರವರು ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 03/2012 ಕಲಂ ಹುಡಗ ಕಾಣೆಯಾದ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ಚಿತ್ತಪೂರ ಠಾಣೆ ಪೋನ ನಂ: 08474-236123 ಅಥವಾ ಮೋಬಾಯಿಲ್ ನಂಬರ: 9480803573 ಅಥವಾ ಗುಲಬರ್ಗಾ ಕಂಟ್ರೋಲ್ ರೂಮ ನಂ: 08472-263604 ನೇದ್ದಕ್ಕೆ ಸಂಪರ್ಕಿಸಲು ಕೊರಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ :
ಶ್ರೀ ಗುರುನಾಥ ತಂದೆ ಶರಣಪ್ಪಾ ಸಿಂಗೆ ಸಾಃ ಬಾಪು ನಗರ ಗುಲಬರ್ಗಾ ರವರು ನಾನು ನನ್ನ ಮಕ್ಕಳಿಗೆ ಶಾಲೆಗೆ ಕರೆದುಕೊಂಡು ಹೋಗುತ್ತಿರುವಾಗ ಎಸ್.ಟಿ.ಬಿ.ಟಿ ಬಸ್ ಸ್ಟಾಂಡ ಹತ್ತಿರ ಎದರುಗಡೆಯಿಂದ ಮೋಟಾರ ಸೈಕಲ್ ನಂ. ಕೆ.ಎ 32 ವಿ 6476 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಗಾಯಗೊಳಿಸಿ ಮೋಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2012 ಕಲಂ 279,337 ಐ.ಪಿ.ಸಿ. ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆಕ್ರಮ:
ಶಹಾಬಾದ ನಗರ ಪೊಲೀಸ ಠಾಣೆ:
ಶಹಾಬಾದ ನಗರ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಂಕರವಾಡಿ ಗ್ರಾಮದಲ್ಲಿ ದಿನಾಂಕ: 1/01/2012 ರಿಂದ ಇಲ್ಲಿಯವರೆಗೆ ಹರಿಜನ ಕೋಮಿನವರ ನಡುವೆ ಮತ್ತು ಕೂಲಿ ಸಮಾಜ ಕೊಮಿನವರ ನಡುವೆ ಹೊಸ ವರ್ಷದ ಸಲುವಾಗಿ ರಾತ್ರಿ ಸ್ವೀಕರ ಹಚ್ಚುವ ಸಂಬಂಧ ವೈ ಮನಸ್ಸು ಬೆಳಸಿಕೊಂಡು ದ್ವೇಶ ಸಾಧಿಸಿ ಜಗಳ ಮಾಡಿಕೊಂಡಿದ್ದು ಎರಡು ಗುಂಪಿನವರ ಮೇಲೆ ಶಹಾಬಾದ ನಗರ ಠಾಣೆ ಗುನ್ನೆ ನಂ: 1/2012 ಕಲಂ: 341, 324, 504, ಸಂ: 34 ಐಪಿಸಿ ಮತ್ತು 3[1] [10] ಎಸಸಿ/ಎಸ್ಟಿ ಪಿ.ಎ ಆಕ್ಟ್. ನೇದ್ದರಲ್ಲಿ ಶ್ರೀ ರಾಣೊಜಿ ತಂದೆ ದೇವಪ್ಪಾ ಹಾದಿಮನಿ ಸಾ: ಶಂಕರವಾಡಿ ಇವರು ದೂರು ಸಲ್ಲಿಸಿರುತ್ತಾರೆ. ಪ್ರಕರಣದಲ್ಲಿ ಆರೋಪಿತರಾದ ರಾಜು ತಂದೆ ಮಲ್ಲಪ್ಪಾ ಸಂತಿ ಸಂ: 4 ಜನರು ಸಾ: ಎಲ್ಲರೂ ಶಂಕರವಾಡಿರವರು ಇವರ ಮೇಲೆ ಶ್ರೀ ರಾಮು ತಂದೆ ಸಿದ್ದಣ್ಣಾ ಹೊನಗುಂಟಿ ಸಾ: ಶಂಕರವಾಡಿ ಸಹ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 2/2012 ಕಲಂ: 323, 324, 504, 506 ಸಂ: 34 ಐಪಿಸಿ ನೇದ್ದರಲ್ಲಿ ರಾಣೋಜಿ ತಂದೆ ದೇವಪ್ಪಾ ಸಂ: 4 ಜನರು ಸಾ: ಎಲ್ಲರೂ ಶಂಕರವಾಡಿ ಇದ್ದು ಮೊದಲನೇ ಪಾರ್ಟಿ ಜನರು ಒಟ್ಟು 17 ಜನರಿದ್ದು ಹಾಗೂ ಎರಡನೇಯ ಪಾರ್ಟಿ ಜನರು 17 ಜನರು ಇದ್ದು ಸದರಿಯವರು ಎರಡು ಕೋಮಿನ ಜನಾಂಗದವರು ಪಾರ್ಟಿ ಕಟ್ಟಿಕೊಂಡು ಗುಂಪು ಗುಂಪಾಗಿ ತಿರುಗಾಡುವುದು ತಿಳಿದು ಬಂದಿದ್ದರಿಂದ ಯಾವುದೇ ವೇಳೆಯಲ್ಲಿ ಶಂಕರವಾಡಿ ಗ್ರಾಮದಲ್ಲಿ ಹೊಡೆದಾಟ ಬಡೆದಾಟ ಮಾಡಿ ಸಾರ್ವಜನಿಕ ಶಾಂತತೆಗ ಭಂಗವನ್ನುಂಟು ಮಾಡುವುದಲ್ಲದೇ ಆಸ್ತಿ ಹಾನಿ, ಜೀವ ಹಾನಿ, ಮಾಡುವ ಸಂಭವವಿರುವದರಿಂದ ಸದರಿಯವರ ಮೇಲೆ ಮುಂಜಾಗೃತೆ ಕ್ರಮ ಕೈಕೊಂಡಿರುವದರಿಂದ ಠಾಣೆ ಗುನ್ನೆ ನಂ: 03/2012 ಕಲಂ 107 ಸಿಅರ್ಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.