POLICE BHAVAN KALABURAGI

POLICE BHAVAN KALABURAGI

04 January 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ :
ಶ್ರೀ ಗುರುನಾಥ ತಂದೆ ಶರಣಪ್ಪಾ ಸಿಂಗೆ ಸಾಃ ಬಾಪು ನಗರ ಗುಲಬರ್ಗಾ ರವರು ನಾನು ನನ್ನ ಮಕ್ಕಳಿಗೆ ಶಾಲೆಗೆ ಕರೆದುಕೊಂಡು ಹೋಗುತ್ತಿರುವಾಗ ಎಸ್.ಟಿ.ಬಿ.ಟಿ ಬಸ್ ಸ್ಟಾಂಡ ಹತ್ತಿರ ಎದರುಗಡೆಯಿಂದ ಮೋಟಾರ ಸೈಕಲ್ ನಂ. ಕೆ.ಎ 32 ವಿ 6476 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಗಾಯಗೊಳಿಸಿ ಮೋಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2012 ಕಲಂ 279,337 ಐ.ಪಿ.ಸಿ. ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆಕ್ರಮ:
ಶಹಾಬಾದ ನಗರ ಪೊಲೀಸ ಠಾಣೆ:
ಶಹಾಬಾದ ನಗರ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಂಕರವಾಡಿ ಗ್ರಾಮದಲ್ಲಿ ದಿನಾಂಕ: 1/01/2012 ರಿಂದ ಇಲ್ಲಿಯವರೆಗೆ ಹರಿಜನ ಕೋಮಿನವರ ನಡುವೆ ಮತ್ತು ಕೂಲಿ ಸಮಾಜ ಕೊಮಿನವರ ನಡುವೆ ಹೊಸ ವರ್ಷದ ಸಲುವಾಗಿ ರಾತ್ರಿ ಸ್ವೀಕರ ಹಚ್ಚುವ ಸಂಬಂಧ ವೈ ಮನಸ್ಸು ಬೆಳಸಿಕೊಂಡು ದ್ವೇಶ ಸಾಧಿಸಿ ಜಗಳ ಮಾಡಿಕೊಂಡಿದ್ದು ಎರಡು ಗುಂಪಿನವರ ಮೇಲೆ ಶಹಾಬಾದ ನಗರ ಠಾಣೆ ಗುನ್ನೆ ನಂ: 1/2012 ಕಲಂ: 341, 324, 504, ಸಂ: 34 ಐಪಿಸಿ ಮತ್ತು 3[1] [10] ಎಸಸಿ/ಎಸ್ಟಿ ಪಿ.ಎ ಆಕ್ಟ್. ನೇದ್ದರಲ್ಲಿ ಶ್ರೀ ರಾಣೊಜಿ ತಂದೆ ದೇವಪ್ಪಾ ಹಾದಿಮನಿ ಸಾ: ಶಂಕರವಾಡಿ ಇವರು ದೂರು ಸಲ್ಲಿಸಿರುತ್ತಾರೆ. ಪ್ರಕರಣದಲ್ಲಿ ಆರೋಪಿತರಾದ ರಾಜು ತಂದೆ ಮಲ್ಲಪ್ಪಾ ಸಂತಿ ಸಂ: 4 ಜನರು ಸಾ: ಎಲ್ಲರೂ ಶಂಕರವಾಡಿರವರು ಇವರ ಮೇಲೆ ಶ್ರೀ ರಾಮು ತಂದೆ ಸಿದ್ದಣ್ಣಾ ಹೊನಗುಂಟಿ ಸಾ: ಶಂಕರವಾಡಿ ಸಹ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 2/2012 ಕಲಂ: 323, 324, 504, 506 ಸಂ: 34 ಐಪಿಸಿ ನೇದ್ದರಲ್ಲಿ ರಾಣೋಜಿ ತಂದೆ ದೇವಪ್ಪಾ ಸಂ: 4 ಜನರು ಸಾ: ಎಲ್ಲರೂ ಶಂಕರವಾಡಿ ಇದ್ದು ಮೊದಲನೇ ಪಾರ್ಟಿ ಜನರು ಒಟ್ಟು 17 ಜನರಿದ್ದು ಹಾಗೂ ಎರಡನೇಯ ಪಾರ್ಟಿ ಜನರು 17 ಜನರು ಇದ್ದು ಸದರಿಯವರು ಎರಡು ಕೋಮಿನ ಜನಾಂಗದವರು ಪಾರ್ಟಿ ಕಟ್ಟಿಕೊಂಡು ಗುಂಪು ಗುಂಪಾಗಿ ತಿರುಗಾಡುವುದು ತಿಳಿದು ಬಂದಿದ್ದರಿಂದ ಯಾವುದೇ ವೇಳೆಯಲ್ಲಿ ಶಂಕರವಾಡಿ ಗ್ರಾಮದಲ್ಲಿ ಹೊಡೆದಾಟ ಬಡೆದಾಟ ಮಾಡಿ ಸಾರ್ವಜನಿಕ ಶಾಂತತೆಗ ಭಂಗವನ್ನುಂಟು ಮಾಡುವುದಲ್ಲದೇ ಆಸ್ತಿ ಹಾನಿ, ಜೀವ ಹಾನಿ, ಮಾಡುವ ಸಂಭವವಿರುವದರಿಂದ ಸದರಿಯವರ ಮೇಲೆ ಮುಂಜಾಗೃತೆ ಕ್ರಮ ಕೈಕೊಂಡಿರುವದರಿಂದ ಠಾಣೆ ಗುನ್ನೆ ನಂ: 03/2012 ಕಲಂ 107 ಸಿಅರ್ಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: