POLICE BHAVAN KALABURAGI

POLICE BHAVAN KALABURAGI

02 February 2012

GULBARGA DIST REPORTED CRIMES

ಕಳ್ಳತನ ಪ್ರಕರಣ:
ವಾಡಿ ಪೊಲೀಸ್ ಠಾಣೆ
  :
ಶ್ರಿ ಗೊವರ್ಧನ ರಾಠೋಡ ಮುಖ್ಯಾಧಿಕಾರಿಗಳು ಪುರಸಭೆ ವಾಡಿ ರವರು ದಿನಾಂಕ 20/21-12-2011 ರಂದು ರಾತ್ರಿ ವೇಳೆಯಲ್ಲಿ ವಾಡಿ ಪುರಸಭೆ ಕಾರ್ಯಾಲಯದ ಹತ್ತಿರ ನಿಲ್ಲಿಸಿದ ಟ್ಯಾಕ್ಟರ ನಂಬರ ಕೆಎ-32 5751 ನೇದ್ದಕ್ಕೆ ಅಳವಡಿಸಿದ ಎರಡು ಬ್ಯಾಟರಿಗಳು  || ಕಿ|| 6000/- ರೂ ಒಂದು ಆಟೋ ತಿಪ್ಪರ ಸಂಖ್ಯೆ ಇರುವುದಿಲ್ಲಾ ಅದಕ್ಕೆ ಅಳವಡಿಸಿದ ಬ್ಯಾಟರಿ ಹಾಗು ಗೈಡ್ರಾಲಿಕ ಜಾಕ (ಎರಡು) ಒಟ್ಟು ಅ|| ಕಿ|| 10000/- ರೂ ಹಿಗೆ ಎಲ್ಲಾ ಒಟ್ಟು ಅ|| ಕಿ|| 16000/- ಬೆಲೆ ಬಾಳುವುದನ್ನು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 16/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಮುದೋಳ ಠಾಣೆ:
ಶ್ರೀ ಭೀಮಶಪ್ಪಾ ತಂದೆ ಹಣಮಪ್ಪಾ ಸಾ|| ಯಾನಗುಂದಿ ರವರು ನನಗೆ 27 ವರ್ಷದ ಕಮಲೇಶ ಅಂತಾ 27 ವರ್ಷದ ಮಗನಿದ್ದು, ಇತನು ಲೇಬರ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ: 01-02-2012 ರಂದು ಮುಂಜಾನೆ ನಮ್ಮೂರ ಮಹದೇವಮ್ಮ ಗಂಡ ಚನ್ನಬಸವರೆಡ್ಡಿ ಇವರ ಟ್ರಾಕ್ಟರ ಕೆಎ 32 ಟಿಎ-1795/96 ನೇದ್ದರ ಮೇಲೆ ಹೊಟ್ಟು ತುಂಬುವ ಕೆಲಸಕ್ಕೆ ಹೋಗಿದ್ದು, ಸದರಿ ಟ್ರಾಕ್ಟರ ಚಾಲಕ ಮೊಗಲಪ್ಪಾ ಪಕ್ಕದಲ್ಲಿ ಕುಳಿತಿದ್ದ ಕಮಲೇಶ ಇತನು ಟ್ರಾಕ್ಟರನ್ನು ಅಲಕ್ಷತನದಿಂದ ನಡೆಯಿಸುತ್ತಿದ್ದಾಗ ಚಾಲಕನ ಪಕ್ಕದಲ್ಲಿ ಕುಳಿತ್ತಿದ್ದ ಕಮಲೇಶ ಇತನು ಟ್ರಾಕ್ಟರದಿಂದ ಕೆಳಗೆ ಬಿದ್ದು ಭಾರಿ ಗಾಯ ಹೊಂದಿದ್ದು ಉಪಚಾರ ಕುರಿತು ನಾರಯಣಪೇಟ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:12/2012 ಕಲಂ, 279, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಅನಧಿಕೃತವಾಗಿ ಸೀಮೆ ಎಣ್ಣೆ ಸಾಗುಸುತ್ತಿದ್ದ ಬಗ್ಗೆ:
ಸೇಡಂ ಪೊಲೀಸ ಠಾಣೆ
:
ದಿನಾಂಕ:- 01-02-2012 ರಂದು ರಾತ್ರಿ 11-20 ಪಿ.ಎಮ್.ಕ್ಕೆ ಸೇಡಂ ಪಟ್ಟಣದ ಉಡಗಿ ರಸ್ತೆಯಲ್ಲಿ ಅನಧಿಕೃತವಾಗಿ ಸಿಮೇ ಎಣ್ಣೆ ತಗೆದುಕೊಂಡು ಹೋಗುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ಸಂತೋಷ.ಬಿ.ಬನ್ನಟಿ ಸಿಪಿಐ ಸೇಡಂ ರವರು ಮತ್ತು ಸಿಬ್ಬಂದಿಯವರೊಂದಿಗೆ 00-05 ಎ.ಎಮ್.ಕ್ಕೆ ಸೇಡಂ ಕಡೆಯಿಂದ ಅತಿವೇಗವಾಗಿ ಹೋಗುತ್ತಿದ್ದ ಬುಲೋರೊ ಪಿಕ್ ಅಪ. ವ್ಯಾನ ನಂ ಕೆ-ಎ-33-7414 ನೇದ್ದಕ್ಕೆ ಉಡಗಿ ಗ್ರಾಮದ ಉರ್ದು ಸರಕಾರಿ ಶಾಲೆಯ ಮುಂದೆ ಹಿಡಿದು ಪರಿಶೀಲಿಸಲು ವಾಹನ ಚಾಲಕನು ತನ್ನ ಹೆಸರು ಚನ್ನಪ್ಪ ತಂದೆ ಶಿವನಾಗಪ್ಪ ಸಾ:ಹಂಗನಳ್ಳಿ ಆತನ ಪಕ್ಕದಲ್ಲಿ ಸಿಮೇ ಎಣ್ಣೆ ಮಾಲಿಕ ಶಾಂತಕುಮಾರ ತಂದೆ ಭೀಮರಾವ ಚವ್ಹಾಣ ಸಾ: ಸ್ಟೇಶನ ತಾಂಡ ಮಳಖೇಡ ಅಂತಾ ತಿಳಿಸಿದರು ಸದರಿ ಸುಮಾರು 600 ಲೀಟರ ಸೀಮೆ ಎಣ್ಣೆ ಅಂದಾಜು ಕಿಮ್ಮತ್ತು 12000-00 ರೂ. ಗಳ ಸಿಮೇ ಎಣ್ಣೆ ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ ಅವರು ಇರುವುದಿಲ್ಲಾ ಅಂತಾ ತಿಳಿಸಿದ್ದರಿಂದ ಸರಕಾರ ಸಾರ್ವಜನಿಕರ ಪಡಿತರ ಚೀಟಿಯ ಮೇಲೆ ಹಂಚಿಕೆ ಮಾಡಲು ಪೊರೈಯಿಸಿದ ನೀಲಿ ಸಿಮೇ ಎಣ್ಣೆಯನ್ನು ಅನಧಿಕೃತ ಕಳ್ಳ ಸಂತೆಯಲ್ಲಿ ಮಾರಲು ಹೋಗುತ್ತಿದ್ದಾಗ ಹಿಡಿದು ಜಪ್ತಿ ಪಂಚನಾಮೆ ಮುಖಾಂತರ ಜಪ್ತಿ ಮಾಡಿಕೊಂಡು ಮುಂದಿನ ಕ್ರಮ ಕೈಕೊಳ್ಳಲು ಜ್ಞಾಪನ ಪತ್ರದ ಮೂಲಕ ಸೂಚಿಸಿದ ಮೇರೆಗೆ ಸೇಡಂ ಠಾಣೆ ಗುನ್ನೆ ನಂ 25/2012 ಕಲಂ 7 ಇ.ಸಿ Essential Commodity Act ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ