POLICE BHAVAN KALABURAGI

POLICE BHAVAN KALABURAGI

08 October 2012

GULBARGA DISTRICT REPORTED CRIME


ದರೋಡೆ ಪ್ರಕರಣ:
ಶಹಾಬಾದ ನಗರ ಠಾಣೆ  ನಗರ ಠಾಣೆ: ಶ್ರೀ ಆನಂದ ಕುಮಾರ ತಂದೆ ಕೆರೆಪ್ಪಾ ಧನ್ನಾ ವ:39 ಜಾ:ಹರಿಜನ ಉ:ಪೋರಮ್ಯಾನ ಸಾ:ಭಂಕೂರ ರವರು ನಾನು ದಿನಾಂಕ:06-10-2012 ರಂದು ಸಾಯಂಕಾಲ ನನ್ನ ಮೋಟಾರ ಸೈಕಲ ನಂ: ಕೆಎ 32 ಡಬ್ಲೂ 7238 ನೇದ್ದರ ಮೇಲೆ ಗುಲಬರ್ಗಾಕ್ಕೆ ಹೋಗಿ ವಾಪಸ್ ಭಂಕೂರಕ್ಕೆ ರಾತ್ರಿ 10-30 ಗಂಟೆ ಸುಮಾರಿಗೆ ದೇವನ ತೆಗನೂರ ಇಳಿಜಾರ ರೋಡಿನ ಮೇಲೆ ಬರುತ್ತಿರುವಾಗ ಹಿಂದುಗಡೆಯಿಂದ ಇಬ್ಬರೂ ಮೋಟಾ ಸೈಕಲ ಮೇಲೆ ಬಂದವರೆ ನನ್ನ ಮೋಟಾರ ಸೈಕಲ್ ಗೆ ಸೈಡ ಹೊಡೆದು ಮುಂದೆ ಬಂದು ಅಡ್ಡ ನಿಲ್ಲಿಸಿ, ಅದರಲ್ಲಿ ಒಬ್ಬನು ಚಾಕು ತೆಗೆದು ತೊರಿಸಿ ಮಾಲ ನಿಕ್ಕಾಲ್ ಮಗನೇ ಅಂತಾ ಅಂದು ಇನ್ನೊಬ್ಬನು ಅವನ ಕೈಯಲ್ಲಿ ಉಂಗುರ ಇದೆ ಕಸಿದುಕೊ ಅಂತಾ ಇಬ್ಬರೂ ಜಬರ ದಸ್ತಿಯಿಂದ ನನ್ನ ಕೈಯಲ್ಲಿದ್ದ ಬಂಗಾರದ ½ ಅರ್ದ ತೊಲೆಯ ಉಂಗುರ ಅ.ಕಿ.:15,000/-,ಅಲಿಜಂಟ ಕೈ ಗಡಿಯಾರ ಅ.ಕಿ 1000/-, ನೋಕೀಯಾ ಕಂಪನಿಯ 6300  ಮೋಬೈಲ ಅ.ಕಿ 4,000/- ನಗದು ಹಣ 1,800/- ರೂ ಮತ್ತು ಮೋಟರ ಸೈಕಲ ನಂ   ನಂ ಕೆಎ-32 ಡಬ್ಲೂ-7238  ಅ.ಕಿ. 40,000/- ನೇದ್ದವುಗಳು ಹೀಗೆ  ಒಟ್ಟು 61,800/- ಮೌಲ್ಯದ್ದು ಕಸಿದುಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 126/2012 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.