POLICE BHAVAN KALABURAGI

POLICE BHAVAN KALABURAGI

17 October 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 17/10/2014 ರಂದು ರಾತ್ರಿ ನಾಗಾರ್ಜುನ ಲಾಡ್ಜದಲ್ಲಿರುವ ರೂಮ್ ನಂಬರ 205 ರಲ್ಲಿ ಸುಮಾರು 6-7 ಜನರು ಕುಳಿತುಕೊಂಡು ಇಸ್ಪಿಟ ಎಲೆಗಳ ಸಹಾಯದಿಂದ ಅಂದರ ಬಹಾರ ಎಂಬ ಇಸ್ಪಿಟ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇಲೆಗೆ ಪಿ.ಐ ಸಾಹೇಬರು ಹಾಗು ರಾತ್ರಿ ಗಸ್ತಿನ ಸಿಬ್ಬಂದಿಯವರಾದ ಉದಂಡಪ್ಪಾ ಎ.ಎಸ್.ಐ, ಪಿಸಿ 632 ವಿಜಯ ಕುಮಾರ ಮಾನೆ, ಪಿಸಿ 619 ಮಲ್ಲನಗೌಡ, ಪಿಸಿ 369 ಹಮೀಮೊದ್ದೀನ, ಪಿಸಿ 1070 ವಿರೇಶ ಹಾಗು ಜೀಪ ಚಾಲಕ ನದಾಫ ಹೀಗೆ ಕೂಡಿಕೊಂಡು ಮಾನ್ಯ ಡಿ.ಎಸ್.ಪಿ ಸಾಹೇಬ '' ಉಪ ವಿಭಾಗ ಗುಲಬರ್ಗಾರವರ ನೇತೃತ್ವದಲ್ಲಿ ಹೋಗಿ ನಾಗಾರ್ಜುನ ಲಾಡ್ಜ ರೂಮ್ 205 ನೇದ್ದರಲ್ಲಿ ಹೋಗಿ ನೋಡಿ ಖಚೀತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಜೂಜಾಟ ಆಟಕ್ಕೆ ಉಪಯೋಗಿಸಿದ ನಗದು ಹಣ 1,14,900/-ರೂ ಹಾಗು 6 ಮೊಬೈಲ ಗಳು ಅ.ಕಿ 21,000/-ರೂ ಹಾಗು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿದ್ದು ಇರುತ್ತದೆ ಮತ್ತು ಸದರಿ ನಾಗಾರ್ಜುನ ಲಾಡ್ಜಿನ ಮಾಲಕರು ಈ ಅಂದರ ಬಾಹರ ಜೂಜಾಟಕ್ಕೆ ಅನುಕುಲ ಮಾಡಿಕೊಟ್ಟಿದ್ದು ಸದರಿ ಆಪಾದಿತರೊಂದಿಗೆ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 16/10/2014 ರಂದು ನಿಂಬರ್ಗಾ ಗ್ರಾಮದ ಅಂಬೇಡ್ಕರ ಸರ್ಕಲ ಹತ್ತಿರ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಬಾತ್ಮಿ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ನಿಂಬರ್ಗಾ ಗ್ರಾಮದ ಅಂಬೇಡ್ಕರ ಸರ್ಕಲ ಹತ್ತಿರ ಹೋಗಿ ಮರೆಯಲ್ಲಿ ನಿಂತು  ನೋಡಲಾಗಿ ಅಂಬೇಡ್ಕರ ಸರ್ಕಲ ಹತ್ತಿರ ರೋಡಿನ ಮೇಲೆ ಸಾರ್ವಜನಿಕ  ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ದಶರಥ ತಂದೆ ಮೈಲಾರಿ ಮೂಲಿಮನಿ ಸಾ|| ನಿಂಬರ್ಗಾ ಅಂತ ತಿಳಿಸಿದ್ದು  ಸದಿಯವನಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 1170/-,  ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ,  ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡಿ ಸದಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಪ್ರೇಮಾ ಗಂಡ ರಾಜಾ ರಾಠೋಡ  ಸಾ:  ಭೀಮ ನಗರ ಕಾಕಡೆ ಚೌಕ ರಿಂಗ ರೋಡ ಗುಲಬರ್ಗಾ  ರವರಿಗೆ ರಾಜಾ ತಂದೆ ರತ್ನಸಿಂಗ ರಾಠೋಡ ಇವನೊಂದಿಗೆ ಸಂಪ್ರದಾಯದ ಪ್ರಕಾರ ಭವಾನಿ ನಗರದಲ್ಲಿ ಇರುವ ಭವಾನಿ ದೇವಸ್ಥಾನದಲ್ಲಿ ಮದುವೆಯಾಗಿದ್ದು ನಂತರ ಗುಲಬರ್ಗಾ ಸಬ್ ರಿಜಿಸ್ಟರ ಆಫೀಸನಲ್ಲಿ ಕೂಡಾ ರಜಿಸ್ಟರ ಮ್ಯಾರೇಜ ಮಾಡಿಕೊಂಡು ಗಂಡನೊಂದಿಗೆ ಸಂಸಾರ ಮಾಡುತ್ತಾ ಬಂದಿದ್ದು. ಮದುವೆಯಾದ ಕೆಲವು ದಿವಸಗಳ ವರೆಗೆ ಗಂಡ ಮತ್ತು ಗಂಡನ ಮನೆಯವರು ಫಿರ್ಯಾದಿರಾಳಿಗೆ ಸರಿಯಾಗಿ ನೋಡಿಕೊಂಡಿದ್ದು, ಮುಂದೆ  2) ಚಂದುಬಾಯಿ ಗಂಡ ರತ್ನಸಿಂಗ ರಾಠೋಡ  3)ತಾರಾಬಾಯಿ ಗಂಡ ರತ್ನಸಿಂಗ ರಾಠೋಡ  4)ವಿಜಯಕುಮಾರ ತಂದೆ ರತ್ನಸಿಂಗ ರಾಠೋಡ 5)ಶಶಿಕಲಾ ಗಂಡ ವಿಜಯಕುಮಾರ ರಾಠೋಡ  6) ಕಿಶನ ತಂದೆ ರತ್ನಸಿಂಗ ರಾಠೋಡ 7)ಶ್ರೀದೇವಿ ಗಂಡ ಕಿಶನ ರಾಠೋಡ 8)ಸತೀಷ ತಂದೆ ರತ್ನಸಿಂಗ ರಾಠೋಡ 9) ಶಕುಂತಲಾ ತಂದೆ ರತ್ನಸಿಂಗ ರಾಠೋಡ 10) ಸುನಿತಾ ತಂದೆ ರತ್ನಸಿಂಗ ರಾಠೋಡ ಸಾ: ಎಲ್ಲರೂ  ಮುನೀಮ ಸಂಘ ಗಂಜ ರೋಡ ಗುಲಬರ್ಗಾ ಕೇರಾಫ ಬ್ರೇಕ್ಸ ಫ್ಯಾಕ್ಟರಿ ಭೀಮ ನಗರ ಕಾಕಡೇ ಚೌಕ ರಿಂಗ ರೋಡ  ಗುಲಬರ್ಗಾ ಎಲ್ಲರು   ಫಿರ್ಯಾದಿದಾರಳಿಗೆ ವಿನಾಕಾರಣ ಅವಾಚ್ಯವಾಗಿ ಬೈಯ್ಯುತ್ತಾ  ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡಲು ಪ್ರಾರಂಭಿಸಿ ತವರು ಮನೆಯಿಂದ ವರದಕ್ಷಿಣೆಯಲ್ಲಿ ರೂಪದಲ್ಲಿ ಹಣ ಮತ್ತು ಬಂಗಾರ ಆಭರಣಗಳು ತರುವಂತೆ  ಪೀಡಿಸುತ್ತಾ ಬಂದು  ದಿನಾಂಕ 01-09-14 ರಂದು  ಎಲ್ಲಾ ಆರೋಪಿತರು ಸದರಿಯವಳಿಗೆ ಊಟ ಹಾಕದೇ  ಹೊಡೆ ಬಡಿ ಮಾಡಿ ಮಾನಸಿಕ ಹಿಂಸೆ ಕೊಟ್ಟಿದ್ದರಿಂದ ಅವಳು  ಹಿಂಸೆ ತಾಳಲಾರದೇ ತವರು ಮನೆಯಲ್ಲಿ ಉಳಿದುಕೊಂಡಿದ್ದು, ಆದರೂ ಕೂಡಾ ಗಂಡ ಫಿರ್ಯಾದಿರಾಳಿಗೆ ಅಪಹರಣ ಮಾಡುವ ಬಗ್ಗೆ ಬೆದರಿಕೆ ಹಾಕುತ್ತಿದ್ದಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಾನಂದ ತಂದೆ ಲಕ್ಷ್ಮಣ ಭೀಮಳ್ಳಿ ಸಾಃ ಓಂ ನಗರ ಗುಲಬರ್ಗಾ ಇವರ ಮಗನಾದ ಸುರೇಶ ತಂದೆ ಯೋಗಪ್ಪಾ ವಯಃ 14 ವರ್ಷ ಈತನು  ದಿನಾಂಕ: 13/10/2014 ರಂದು ಬೆಳಗ್ಗೆ 04:00 ಎ.ಎಂ. ದಿಂದ 05:00 ಎ.ಎಂ. ಅವಧಿಯಲ್ಲಿ ನನ್ನ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲಾ ಕಾಣೆಯಾಗಿರುತ್ತಾನೆ. ನಮ್ಮ ಸಂಬಂಧಿಕರಲ್ಲಿ ಹಾಗು ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.