POLICE BHAVAN KALABURAGI

POLICE BHAVAN KALABURAGI

10 July 2015

Kalaburagi District Reported Crimes

ಕಳವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 09-07-15 ರಂದು ರಾತ್ರಿ 1-00 ಗಂಟೆಯಿಂದ ಬೆಳಗಿನ 6-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಉಪಳಾಂವ ಸೀಮಾಂತರದ ಮದರತೇರಿಸಾ ಆಸ್ಪತ್ರೆ  ಹತ್ತಿರ ಗ್ಯಾಲಕ್ಸಿ ಆಗ್ರೀಟೆಕ್ಕ್ ಪುಡ್ಡ್ ಗ್ರೇನ್  ಪ್ರೋಸೆಸಿಂಗ್ ಕಾರ್ಖಾನೆ, ಶೆಟರಿಗೆ ಕಲ್ಲು ಹಾಕಿ ಮತ್ತು ಕಟ್ಟಿಗೆಯಿಂದ ಬೆಂಡ ಮಾಡಿ ಮಣಿಸಿ ಆಫೀಸನ ರೂಮಿನಲ್ಲಿಟ್ಟ್ ಕಬ್ಬಿಣದ ಅಲಮಾರಿ ಮತ್ತು ಟೇಬಲದ ಬಲ ಮತ್ತು ಎಡಭಾಗದ  ಡ್ರಾಗಳ ಲಾಕ ಬ್ರೇಕ ಮಾಡಿ , ಅಲಮಾರಿಯಲ್ಲಿದ್ದ 1)ಅರ್ಧ ತೊಲಿಯ ಮೂರು  ಬಂಗಾರದ ನ್ಯಾಣಗಳು ಅ:ಕಿ:30,000/- ರೂ. 2)ಎರಡು ತೊಲಿಯ 5 ಬೆಳ್ಳಿಯ ನ್ಯಾಣಗಳು ಅ:ಕಿ: 4,000/-ರೂ. 3) ಹಳೆಯ 6 ಮೋಬಾಯಿಲಗಳು ಅ:ಕಿ: 6,000/-ರೂ.  ಟೇಬಲ ಡ್ರಾದಲ್ಲಿದ್ದ 4) ನಗದು ಹಣ  15,000/- ರೂ.ದೇವರು ಪೂಜೆ ಮಾಡಲು ಇಟ್ಟ 5)ಗಣಪತಿ ಮತ್ತು ಲಕ್ಷ್ಮೀ  ಬೆಳ್ಳಿಯ ಒಂದೊಂದು ವಿಗ್ರಹ  ಅ:ಕಿ: 4,000 /-ರೂ. 6) ಸಿ.ಸಿ. ಕ್ಯಾಮರಾ ಅ:ಕಿ:12,000/- ರೂ. 7)25ಕೆ.ಜಿಯ 10 ಪಾಕೇಟ್ ಅಕ್ಕಿ ಚೀಲಗಳು ಅ:ಕಿ:10,000/- ರೂ. 8)50ಕೆ.ಜಿ.ಯು 2 ತೊಗರಿ ಪಾಕೇಟಗಳು ಅ:ಕಿ:10,000/- ರೂ. ಹೀಗೆ ಒಟ್ಟು 91,000/- ರೂ. ಮಾಲನ್ನು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ರಾಘವೇಂದ್ರ ತಂದೆ ಲಕ್ಷ್ಮೀನಾರಾಯಣ ಗುಪ್ತಾ ಮು: ಉಪಳಾಂವ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಅಂಜನಮ್ಮಾ ಗಂಡ ದೇವಿಂದ್ರಪ್ಪ ಭಾಲ್ಕೆನವರ ಸಾ: ಮನೆ ನಂ. 82 ಆಶ್ರಯ ಕಾಲೋನಿ ಫೀಲ್ಟರ ಬೆಡ್ ಕಲಬುರಗಿ ಇವರಿಗೆ ಕಳೆದ 10 ವರ್ಷಗಳ ಹಿಂದೆ ಆಶ್ರಯ ಕಾಲೋನಿಯಲ್ಲಿ ಇದ್ದಾಗಲೇ ದೇವಿಂದ್ರಪ್ಪ ಬಾಲ್ಕೆನವರ ಅನ್ನುವವರೊಂದಿಗೆ ಪರಿಚಯವಾಗಿ ಈ ಪರಿಚಯು ಮುಂದೆ ಪ್ರೇಮದಲ್ಲಿ ತಿರುಗಿ ದೇವಿಂದ್ರಪ್ಪ ಇತನು ನನಗೆ ನನ್ನ ಹೆಂಡತಿ ಗೋದಾವರಿ ನನಗೆ ಸರಿಯಾಗಿ ನೋಡಿಕೊಳ್ಳದೆ ಇರುವುದ್ದರಿಂದ ನಾನು ಅವಳಿಗೆ ಡೈವರ್ಸ ಕೊಟ್ಟಿರುತ್ತೇನೆ. ನೀನು ನನಗೆ ಮದುವೆ ಮಾಡಿಕೋ ಅಂತಾ ಹೇಳಿದ್ದರಿಂದ ನಾನು ಅವನ ಮಾತಿಗೆ ಬೇಲೆ ಕೊಟ್ಟು ಪ್ರೇಮಿಸಿ ಮದುವೆ ಮಾಡಿಕೊಂಡಿರುತ್ತೇನೆ. ನನಗೆ ಸುಮಾರು 5-6 ವರ್ಷಗಳ ಕಾಲ ಸದರಿ ದೇವಿಂದ್ರಪ್ಪ ಇತನು ಸರಿಯಾಗಿ ನೋಡಿಕೊಂಡಿದ್ದು ಆ ವೇಳೆಯಲ್ಲಿ ದೇವಿಂದ್ರಪ್ಪನ ಹೆಂಡತಿ ಗೋದಾವರಿ ಇವಳಿಗೆ ತನ್ನ ಗಂಡ ನನಗೆ ಸಂಬಂಧ ಇಟ್ಟುಕೊಂಡು ಬೇರೆ ಮನೆ ಮಾಡಿರುವ ಬಗ್ಗೆ ವಿಷಯ ಗೊತ್ತಾಗಿ ಅವಳು ಆಗಾಗ್ಗೆ ತನ್ನ ಗಂಡನೊಂದಿಗೆ ಮತ್ತು ನನ್ನೊಂದಿಗೆ ಬಂದು ತಕರಾರು ಮಾಡಿ ಹೊಡೆಬಡೆ ಮಾಡಿ ಬೆದರಿಕೆ ಹಾಕಿ ನೀನು ಒಂದು ವೇಳೆ ನನ್ನ ಗಂಡನ ಜೊತೆಗೆ ಸಂಬಂಧ ಇಟ್ಟುಕೊಂಡರೇ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಬೆದರಿಕೆ ಹಾಕಿದ್ದು ಆದರೋ ಸಹ ನಾನು ಸಹನೆ ಮಾಡಿಕೊಂಡು ಆಶ್ರಯ ಕಾಲೋನಿಯಲ್ಲಿ ಮನೆ ಮಾಡಿಕೊಂಡು ಇರುತ್ತೇನೆ. ದೇವಿಂದ್ರಪ್ಪ ಇತನು ನನ್ನೊಂದಿಗೆ ಆಗಾಗ್ಗೆ ಇನ್ನೂ ಅವಳಿಗೆ ಗೊತ್ತಾಗದೇ ಹಾಗೇ ನನ್ನೊಂದಿಗೆ ಸಂಬಂಧ ಇಟ್ಟುಕೊಂಡು ಆಗಾಗ್ಗೆ ನಮ್ಮ ಮನೆಗೆ ಬಂದು ಹೋಗುವುದು ಮಾಡುತ್ತಿರುತ್ತಾನೆ. ನಾನು ವಾಸವಿರುವ ಸದ್ಯದ ಮನೆ ತುಳಜಮ್ಮಾ ಇವರುದು ಇದ್ದು ಆ ಮನೆಯನ್ನು ನಾನು 4 ವರ್ಷದ ಹಿಂದೆ 1 ಲಕ್ಷ 60 ಸಾವಿರ ರೂಪಾಯಿಗೆ ಖರೀಧಿ ಮಾಡಿರುತ್ತೇನೆ. ತುಳಜಮ್ಮಾ ಇವಳು ನನಗೆ ಅಗ್ರಿಮೆಂಟ ಆಫ್ ಸೇಲ್ ಬರೆದುಕೊಟ್ಟಿರುತ್ತಾಳೆ. ಇತ್ತಿಚಿನ ದಿನಗಳಲ್ಲಿ ನಾನು ಆ ಮನೆಯಲ್ಲಿ ಇರುವುದನ್ನು ನೋಡಿರುವ ಗೋದಾವರಿ ಇವಳು ತನ್ನ ಗಂಡ ದೇವಿಂಧ್ರಪ್ಪ ಇವಳಿಗೆ ಮನೆ ಖರೀಧಿ ಮಾಡಿಕೊಟ್ಟಿರುತ್ತಾನೆ. ಅಂತಾ ಅವನಿಗೆ ತೊಂದರೆ ನೀಡಿದ್ದರಿಂದ ಅವನು ಆ ಮನೆಯನ್ನು ನಾನೇ ಖರೀಧಿ ಮಾಡಿಕೊಂಡಿದ್ದು ಅವಳು ಒತ್ತಾಯದಿಂದ ಆ ಮನೆಯಲ್ಲಿ ವಾಸವಾಗಿರುತ್ತಾಳೆ. ಅಂತಾ ದೇವಿಂದ್ರಪ್ಪ ಇತನು ತನ್ನ ಹೆಂಡತಿಗೆ ಹೇಳಿದ್ದು ಈ ಆಸ್ತಿ ತನ್ನ ಗಂಡ ದೇವಿಂದ್ರಪ್ಪನದೇ ಇರುತ್ತದೆ. ಈ ಮನೆ ಅವನಿಗೆ ಸೇರಿದ್ದು ಇರುತ್ತದೆ. ಅಂತಾ ಈ ಮನೆ ಖಾಲಿ ಮಾಡು ಅಂತಾ ದೇವಿಂದ್ರಪ್ಪ ಇತನ ಹೆಂಡತಿ ಗೋದಾವರಿ ಅವನ ಸಂಗಡ ಲೀಡರ ಆಗಿರುವ ಶರಣಪ್ಪ ಸಿಂಗೆ @ ಅಂಕಲಗಿ ಮತ್ತು ಇನ್ನೊಬ್ಬ ವಿ.ಕೆ. ಸಲಗರದವನು ಇವರೆಲ್ಲರೂ ಕೂಡಿಕೊಂಡು ನನಗೆ ಮನೆ ಖಾಲಿ ಮಾಡಿಕೊಡುವಂತೆ ಒತ್ತಾಯ ಮಾಡಿರುತ್ತಾರೆ. ಸದರಿ ಮನೆ ನಾನು ಖರೀಧಿಸಿದ್ದು ಆ ಮನೆಯಲ್ಲಿಯೆ ವಾಸವಾಗಿರುತ್ತೇನೆ. ದಿನಾಂಕ 09.07.2015 ರಂದು ಮದ್ಯರಾತ್ರಿ ನಾನು ಮನೆಯಲ್ಲಿ ಮಲಗಿಕೊಂಡಾಗ ನನ್ನೊಂದಿಗೆ ಸಂಬಂಧ ಇಟ್ಟುಕೊಂಡಿರುವ ದೇವಿಂದ್ರಪ್ಪ ತಂದೆ ಶಿವರಾಮಪ್ಪ ಭಾಲ್ಕೆನವರ  ಅವನ ಹೆಂಡತಿ ಗೋದಾವರಿ ಗಂಡ ದೇವಿಂದ್ರಪ್ಪ ಬಾಲ್ಕೆನವರ, ಲೀಡರ ಶರಣಪ್ಪ ಸಿಂಗೆ @ ಅಂಕಲಗಿ, ಮತ್ತು ವಿ.ಕೆ.ಸಲಗರದ ಹುಡುಗ ಈ 4 ಜನರು ನನ್ನ ಮನೆಗೆ ಬಂದು ರಾತ್ರಿ ವೇಳೆಯಲ್ಲಿ ಬಾಗಿಲು ಬಡೆದು ಬಾಗಿಲು ತೆರೆಯಿಸಿ ನನ್ನ ಮನೆಯಲ್ಲಿ ಬಂದು ದೇವಿಂದ್ರಪ್ಪ ಇತನು ಮನೆ ಖಾಲಿ ಮಾಡು ಅಂತಾ ಹೇಳಿದರೂ ಮನೆ ಯಾಕೆ ಖಾಲಿ ಮಾಡಿಲ್ಲಾ ಈ ಮನೆ ನನ್ನದೇ ಇರುತ್ತದೆ. ನಿನಗೆ ಬಹಳ ಸೋಕ್ಕು ಬಂದಿದ್ದೆ ರಂಡಿ ಅಂತಾ ಅವಾಚ್ಯವಾಗಿ ಬೈಯಲು ಅವನ ಹೆಂಡತಿ ಗೋದಾವರಿ ಇವಳು ಅಲ್ಲಿಯೆ ಹೊರಗಡೆ ಬಿದ್ದ ಒಂದು ಕಲ್ಲು ಎತ್ತಿಕೊಂಡು ಬಂದು ನನ್ನ ಮನೆಯ ಕಿಟಕಿಯ ಗ್ಲಾಜುಗಳನ್ನು ಒಡೆದು ಹಾಕು ಮಾಡಿರುತ್ತಾಳೆ. ಮತ್ತು ನನಗೆ ಅದೇ ಕಲ್ಲಿನಿಂದ ಹಣೆಯ ಮೇಲೆ ಹೊಡೆದು ರಕ್ತಗಾಯ ಮಾಡಿದ್ದು ಅಲ್ಲದೆ ಬಲಗಾಲ ತೊಡೆಯ ಮೇಲೆ ಕಲ್ಲಿನಿಂದ ಹೊಡೆದು ಗುಪ್ತಗಾಯ ಮಾಡಿರುತ್ತಾಳೆ. ಶರಣಪ್ಪ ಸಿಂಗೆ ಮತ್ತು ವಿ.ಕೆ. ಸಲಗರ ಹುಡುಗ ಈ ರಂಡಿಗೆ ಜೀವ ಸಹಿತ ಬಿಡಬೇಡಿರಿ ಖಲಾಸ ಮಾಡಿರಿ ಅಂತಾ ಜೀವ ಬೆದರಿಕೆ ಹಾಕುತ್ತಾ ಇವಳಿಗೆ ಮನೆಯಿಂದ ಹೊರ ಹಾಕಿರಿ ಅಂತಾ ಅವರಿಗೆ ಕುಮ್ಮಕ್ಕು ನೀಡಿದ್ದರಿಂದ ಗೋದಾವರಿ ಇವಳು ನನಗೆ ಕೈಹಿಡಿದು ಹೊರಗಡೆ ದೂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.