POLICE BHAVAN KALABURAGI

POLICE BHAVAN KALABURAGI

05 December 2012

GULBARGA DISTRICT REPORTED CRIMES


ಎಲ್.ಐ.ಸಿ ಏಜೆಂಟನಿಂದ ಮಹಿಳೆಯ ಅಪಹರಣ::
ಚಿಂಚೋಳಿ ಪೊಲೀಸ್ ಠಾಣೆ: ಶ್ರೀ ರಾಜಕುಮಾರ ತಂದೆ ರಾಮಚಂದ್ರ ವ|| 40 ಉ|| ಸೈಕಲ್ ಮೆಕ್ಯಾನಿಕ ಸಾ|| ಚಂದಾಪೂರ, ತಾ|| ಚಿಂಚೋಳಿ ರವರು ನಾನು ಸುಮಾರು 12 ವರ್ಷಗಳ ಹಿಂದೆ ಆಂದ್ರ ಪ್ರದೆಶದ ಖಾಜಾಮಲ್ಕಾಪೂರ ಗ್ರಾಮದ ಗಣಪತಿ ಇವರ ಮಗಳಾದ ರಾಣಿಬಾಯಿ ಇವಳನ್ನು ಮದುವೆಯಾಗಿದ್ದು, ನನಗೆ ನಾಲ್ಕು ಜನ ಮಕ್ಕಳಿರುತ್ತಾರೆ. ಶಶಿಕಾಂತ ಇತನು ಎಲ್. ಐ.ಸಿ ಏಜೆಂಟ ಅಂತಾ  ಕೆಲಸ ಮಾಡುತ್ತೆನೆಂದು ಹೇಳಿ ಚಂದಾಪೂರದಲ್ಲಿರುವ ನಮ್ಮ ಮನೆಯನ್ನು ಬಾಡಿಗೆ  ತೆಗೆದುಕೊಂಡು ಮೂರು ತಿಂಗಳವರೆಗೆ ವಾಸ ಮಾಡಿರುತ್ತಾನೆ ನಾನು ಚಿಂಚೋಳಿಯಲ್ಲಿ ನನ್ನ ಸ್ವಂತದೊಂದು ಸೈಕಲ್ ಅಂಗಡಿ ಇದ್ದು ಅದರಲ್ಲಿ  ನಾನು ಸೈಕಲ್ ರೀಪೆರಿ  ಕೆಲಸ ಮಾಡುತ್ತೆನೆ. ದಿನಾಲು ಮುಂಜಾನೆ  ಮನೆಯಿಂದ 10.00 ಗಂಟೆಗೆ ಅಂಗಡಿ ಕಡೆಗೆ ಬಂದರೆ ರಾತ್ರಿ  9.00 ಗಂಟೆಗೆ ಮನೆಗೆ ಹೋಗುತ್ತೆನೆ. ಶಶಿಕಾಂತ ಇತನು ಎರಡು ತಿಂಗಳ ಹಿಂದೆ ನನಗೆ ನಿನ್ನ ಹೆಂಡತಿಯನ್ನು ಒಂದಿಲ್ಲ ಒಂದು ದಿವಸ ಅಪಹರಣ ಮಾಡಿಕೊಂಡು ಹೋಗುತ್ತನೆಂದು ಹೇಳಿದ್ದ. ಆಗ ನಾನು ಮತ್ತು ನನ್ನ ತಂದೆ- ತಾಯಿಯವರು ಅವನಿಗೆ ಹಾಗೆಲ್ಲ ಮಾತಾಡುವುದು ಸರಿಯಲ್ಲಾ ಎಂದು ತಿಳಿ ಹೇಳಿರುತ್ತೆವೆ. ಕಳೆದ 10 ದಿನಗಳ ಹಿಂದೆ ನನ್ನ ಮನೆಯನ್ನು ಖಾಲಿ ಮಾಡಿ ಹೋಗಿರುತ್ತಾನೆ.ದಿನಾಂಕ:02-12-2012 ರಂದು ಬೆಳಿಗ್ಗೆ 10-00 ಗಂಟೆ  ಸುಮಾರಿಗೆ ನಾನು  ನನ್ನ ಕೆಲಸಕ್ಕೆಂದು ದಿನ ನಿತ್ಯದಂತೆ ಅಂಗಡಿಗೆ ಹೋಗಿರುತ್ತೆನೆ, ನಮ್ಮ ಮನೆಯಲ್ಲಿ ನನ್ನ ತಾಯಿ ಮತ್ತು ಹೆಂಡತಿ ಇಬ್ಬರು ಮನೆಯಲ್ಲಿದ್ದಾಗ ಸಾಯಾಂಕಾಲ 6.00 ಗಂಟೆಗೆ ಶಶಿಕಾಂತ ಇವನು ನಮ್ಮ  ಮನೆಗೆ ಬಂದು ನನ್ನ ಹೆಂಡತಿಗೆ ನಂಬಿಸಿ ಪುಸಲಾಯಿಸಿ,ನಿನಗೆ ಮದುವೆಯಾಗುತ್ತೆನೆ ಅಂತಾ ಹೇಳಿ ಆಕೆಯನ್ನು ಅಪಹರಣ ಮಾಡಿಕೊಂಡು  ಹೋಗಿರುತ್ತಾನೆ.ಮನೆಯಲ್ಲಿದ್ದ ವಯಸ್ಸಾದ ನನ್ನ ತಾಯಿಯು ಏ ಶಶಿಕಾಂತ ನನ್ನ ಸೋಸೆಗೆ ಈ ತರಹ ಅಪಹರಣ ಮಾಡಿಕೊಂಡು ಹೋಗಬೇಡ ಅವಳಿಗೆ ನಾಲ್ಕು ಜನ ಚಿಕ್ಕ ಚಿಕ್ಕ ಮಕ್ಕಳು  ಇದ್ದಾರೆ ಅವಳಿಗೆ ಇಲ್ಲಿಯೇ ಬಿಡು ಎಂದು ಚೀರಾಡಿದರೂ ಕೇಳದೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂಬರ:122/2012 ಕಲಂ 366,498,504,506, ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ:ಶ್ರೀ ಶಬ್ಬೀರ ತಂದೆ ಹಾಜಿಲಾಲ ಕಾರೋಬಾರಿ ಉ:ಖಣಿ ವ್ಯಾಪಾರ ಸಾ:ಮಿಲ್ಲತ ನಗರ  ಶಹಾಬಾದರವರು ನಮ್ಮ ಖಣಿಯಲ್ಲಿ  ದಿನಾಂಕ:27/11/2012 ರಂದು ರಾತ್ರಿ 7 ಗಂಟೆಯವರೆಗೆ ಖಣಿಯಲ್ಲಿಯ ಕಲ್ಲುಗಳು ಕತ್ತರಿಸುವ ಕೆಲಸ ಮುಗಿಸಿ ಮನೆಗೆ ಹೋಗಿರುತ್ತೆನೆ. ದಿನಾಂಕ:28/11/2012 ರಂದು ಬೆಳ್ಳಿಗ್ಗೆ 7.00 ಗಂಟೆಗೆ  ಖಣಿಗೆ ಬಂದು ನೋಡಲು ಖಣಿಯಲ್ಲಿಯ ಕಲ್ಲುಗಳ ಕತ್ತರಿಸುವ ಕ್ವಾರಿ ಕಟ್ಟಿಂಗ ಮಶೀನಗೆ ಜೋಡಿಸಿದ ಕೇಬಲ ವೈರ್ 150 ಪೀಟ ಅ.ಕಿ. 12,000/-ರೂಪಾಯಿಗಳದ್ದು ಯಾರೋ ಕಳ್ಳರು ಕತ್ತಿರಿಸಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:160/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಜೂಜಾಟ ಪ್ರಕರಣ:
ನಿಂಬರ್ಗಾ ಪೊಲೀಸ್ ಠಾಣೆ:ದಿನಾಂಕ:04-12-2012 ರಂದು 10-30 ಗಂಟೆಗೆ ದುತ್ತರಗಾಂವ ಗ್ರಾಮದ ವೀರೇಶ್ವರ ಗುಡಿಯ ಹತ್ತಿರ ಆಲದ ಮರದ ಕೆಳಗೆ ಒಬ್ಬನು ಸಾರ್ವಜನಿಕರಿಂದ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ನೀಡುವ ಕರಾರಿನ ಮೇಲೆ ಅಂಕಿ-ಸಂಖ್ಯೆಯ ಮೇಲೆ ಹಣವನ್ನು ಪಣಕ್ಕೆ ಪಡೆದು ದೈವಲೀಲೆ ನಡೆಯುವ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಭಾತ್ಮಿ ಬಂದ ಮೇರೆಗೆ ಸಿಪಿಐ ಶ್ರೀ ಜಿ.ಎಸ್. ಉಡಗಿ ಆಳಂದ ವೃತ್ತ ರವರು  ಸಿದ್ದಣ್ಣ ತಂದೆ ವೀರಣ್ಣ ಪೊಲೀಸ್ ಪಾಟೀಲ ಸಾ|| ದುತ್ತರಗಾಂವ ಇತನನ್ನು ವಶಕ್ಕೆ ತೆಗೆದುಕೊಂಡು ಅಕ್ಕಲಕೋಟದ ನಿವಾಸಿ ಶಪೀ ಇತನಿಗೆ ಕೊಡುತ್ತಿದ್ದ ಮಟಕಾ ಜೂಜಾಟ ಚೀಟಿಗಳು, ಮತ್ತು ಆತನ ಹತ್ತಿರವಿರುವ ಮೊಬಾಯಿಲ್, ನಗದು ಹಣ, ಪೆನ್ನ ಇತ್ಯಾದಿ ಜಪ್ತಿ ಮಾಡಿಕೊಂಡು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:103/2012 ಕಲಂ 78 (3) ಕೆ.ಪಿ.ಆಕ್ಟ ಮತ್ತು 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

GULBARGA DISTRICT


ಗುಲಬರ್ಗಾ ಜಿಲ್ಲಾ ವಿಶೇಷ ತನಿಖಾ ದಳದ  ಪೊಲೀಸ್ ಅಧಿಕಾರಿಗಳಿಂದ, ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಮಾಡುತ್ತಿರುವ ಮೇಲೆ ದಾಳಿ, ಸುಮಾರು 18,63,500/- ಮೌಲ್ಯದ ಅಕ್ಕಿ,ವಾಹನ ಜಪ್ತಿ, ಹಾಗು 6 ಜನ ಆರೋಪಿತರ ಬಂದನ:
ಮಾನ್ಯ ಶ್ರೀ ಎನ್. ಸತೀಶಕುಮಾರ ಐ.ಪಿ.ಎಸ್., ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರ ಆದೇಶದ ಮೇರೆಗೆ ಮತ್ತು ಶ್ರೀ ಕಾಶೀನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಗುಲಬರ್ಗಾ, ಮತ್ತು ಪೊಲೀಸ್ ಉಪಾಧೀಕ್ಷಕರು ಶಹಾಬಾದ ಶ್ರೀ ಎಮ.ವಿ.ಸೂರ್ಯವಂಶಿ ರವರ ಮಾರ್ಗದರ್ಶನದ ಮೇರೆಗೆ ದಿನಾಂಕ:04/12/2012 ರಂದು ಶ್ರೀ ಎಸ್. ಎಸ್. ಹುಲ್ಲೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕ ಮತ್ತು ಅವರ ಸಿಬ್ಬಂದಿಯವರು ಹಾಗು ಚಿತ್ತಾಪೂರ ಪೊಲೀಸ್ ಠಾಣೆ ಪಿ,ಎಸ,ಐ ಹಾಗೂ ಅವರ ಸಿಬ್ಬಂದಿಯವರು ಕೂಡಿಕೊಂಡು ಶ್ರೀ ಸಿದ್ದಲಿಂಗೇಶ್ವರ ದಾಲ್ ಮಿಲ್ ದ ಮೇಲೆ ದಾಳಿ ಮಾಡಿ, ಖೊಟ್ಟಿ ದಾಖಲಾತಿಗಳನ್ನು ಸೃಷ್ಠಿ ಮಾಡಿ ಪಡಿತರ ಚೀಟಿಯ ಆಹಾರ ಧಾನ್ಯ ಸಾಗಾಣಿಕೆ ಮಾಡಿ ಬೇರೆಯವರಿಗೆ ಮಾರಾಟ ಮಾಡುತ್ತಿರುವ ಆರೋಪಿತರ ಮೇಲೆ ದಾಳಿ ಮಾಡಿದ್ದು, ಲಾರಿ ನಂಬರ ಕೆ.ಎ.32 ಬಿ-3290 ನೇದ್ದರ ಚಾಲಕ ಮಂಜುನಾಥ ತಂದೆ ಚನ್ನವೀರಪಾ ಗಡೇದವರ ಸಾ: ರಿಕ್ಕಿನ ಆಲೂರ ತಾ: ಆಳಂದ, ಶ್ರೀಕಾಂತ ತಂದೆ ಭೀಮಸೇನ,ರಾಮು ತಂದೆ ಹಣಮಂತ ಬೋವಿ, ಸಂಜೀವ ತಂದೆ ಪ್ರಭು,ಶಿವರಾಯ ತಂದೆ ಹಣಮಂತ ವಡ್ಡರ, ರಾಜು ತಂದೆ ಸಾಬಯ್ಯ ಸಾ: ಎಲ್ಲರೂ ಚಿತ್ತಾಪೂರ ಇವರನ್ನು ವಶಕ್ಕೆ ತೆಗೆದುಕೊಂಡು ಇನ್ನೂ ಓಡಿ ಹೋದವರ ಹೆಸರು ವಿಚಾರಿಸಲಾಗಿ ಶಾಂತಕುಮಾರ ಹತ್ತಿ, ಮತ್ತು ಸೋಮಶೇಖರ ಪಾಟೀಲ ಬೆಳಗುಂಪಾ ಅಂತಾ ತಿಳಿದು ಬಂದಿರುತ್ತದೆ. ಸದರಿ ಲಾರಿ ಕೆ.ಎ.32 ಬಿ 3290 ನೇದ್ದು ಅ:ಕಿ: 12 ಲಕ್ಷ ರೂ. ಮತ್ತು ಅದರಲ್ಲಿದ್ದ  25 ಕೆ.ಜಿ ಅಕ್ಕಿ ತುಂಬಿದ 680 ಚೀಲಗಳು ಅದರ ಮೇಲೆ ಅನ್ನಪೂರ್ಣ ಗೋಲ್ಟ ಅಂತಾ ಬರೆದಿದ್ದು  ಅ:ಕಿ: 4,08,000-00 ರೂ ಹಾಗೂ ಗೋದಾಮಿನಲ್ಲಿದ್ದ 25 ಕೆ,ಜಿ ಅಕ್ಕಿ 290  ಚೀಲಗಳು ಅ:ಕಿ:2,17500-00 ರೂ . ಮತ್ತು 25 ಕೆ,ಜಿ.ತುಂಬಿದ 10 ಗೋದಿ ಚೀಲಗಳು ಅ:ಕಿ:5000-00 ರೂ , 50 ಕೆಜಿಯ ಅಕ್ಕಿ ತುಂಬಿದ 12 ಚೀಲ ಕಿಮ್ಮತ್ತು 18000-00 ರೂ ಚೀಲದ ಮೇಲೆ ಬಿಳಿ ಬಟ್ಟೆಯಲ್ಲಿ ಕೆ.ಎಫ.ಸಿ.ಎಸ. ಇಂಡಿಯಾ ಅಂತಾ ಚೀಟಿ ಹೊಲೆದಿದ್ದು ಇರುತ್ತದೆ ಮತ್ತು ಒಂದು ತೂಕದ ಯಂತ್ರ ಹಾಗೂ ಕಾಟ ಕಿಮ್ಮತ್ತು 15,000-00 ರೂ ಮತ್ತು 2 ಬಂಡಲ ಖಾಲಿ ಚೀಲಗಳು ಅದರ ಮೇಲೆ ಅನ್ನಪೂರ್ಣ ಗೋಲ್ಢ ಅಂತಾ ಬರೆದಿದ್ದು ಹಾಗೂ 2 ಖಾಲಿ ಚೀಲ ಅದರ ಮೇಲೆ ಗೌರಮೆಂಟ ಆಫ ಪಂಜಾಬ ಅಂತಾ ಬರೆದಿದ್ದು ಹೀಗೆ ಒಟ್ಟು 18,63,500=00 ರೂ. ಸದರಿಯವುಗಳನ್ನು ಪಂಚರ ಸಮಕ್ಷಮ  ಜಪ್ತಿ ಮಾಡಿಕೊಂಡು ಶ್ರೀ ಎಸ್. ಎಸ್. ಹುಲ್ಲೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕರವರು ತಮ್ಮ ವರದಿಯೊಂದಿಗೆ ಮತ್ತು 6 ಜನ ಆರೋಪಿತರನ್ನು ಠಾಣೆಗೆ ಹಾಜರಪಡಿಸಿದ್ದರಿಂದ ಚಿತ್ತಾಪೂರ ಪೊಲೀಸ್ ಠಾಣೆ ಗುನ್ನೆ ನಂ:118/2012 ಕಲಂ, 406, 409, 420, 468, ಐಪಿಸಿ ಸಂಗಡ 3,7, ಇ.ಸಿ. ಆಕ್ಟ 1955 ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIME


ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:ವಿಶ್ವನಾಥ ತಂದೆ ಪಿ.ಕೆ.ಎನ್ ಮೂರ್ತಿ ಸಾ|| ಪ್ಲಾಟ ನಂ-07 2ನೇ ಮಹಡಿ ಶ್ರೀರಾಮ ಆರ್ಕೆಡ ಹಳೇ ಜೇವರ್ಗಿ ರೋಡ ಗುಲಬರ್ಗಾ ರವರು ನಾನು ದಿನಾಂಕ.04.12.2012 ರಂದು ಬೆಳಿಗ್ಗೆ 8.15 ಎ.ಎಂಕ್ಕೆ ಎಂದಿನಂತೆ ನಾನು ಕಛೇರಿಗೆ ಹೋಗಿದ್ದು, ನಂತರ  10.30 ಎ.ಎಂಕ್ಕೆ ನನ್ನ ಪತ್ನಿ ಪದ್ಮಜಾ  ಮನೆಗೆ ಬೀಗ ಹಾಕಿಕೊಂಡು ಟೆಲರಿಂಗ್ ಕಲಿಯಲು ಹೋಗಿ ಮರಳಿ ಮಧ್ಯಾಹ್ನ 3.30 ಪಿ.ಎಂ ಕ್ಕೆ ಮನೆಗೆ ಬಂದು ನೋಡುವಷ್ಟರಲ್ಲಿ ಮನೆಯ ಬೀಗ ಮುರಿದಿದ್ದು ನೋಡಿ, ನನಗೆ ಕರೆ ಮಾಡಿದಾಗ ನಾನು ಹೋಗಿ ನೋಡಲು ನಮ್ಮ ಮನೆಯ ಬೀಗ ಮುರಿದು ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ಒಂದು ನಿಕಾನ ಕಂಪನಿಯ ಕ್ಯಾಮರಾ ಅ.ಕಿ|| 40,000/-, ನಗದು ಹಣ 19,500/- ಹೀಗೆ ಒಟ್ಟು. 1,51,500/- ರೂ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:150/2012 ಕಲಂ. 454.380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.