POLICE BHAVAN KALABURAGI

POLICE BHAVAN KALABURAGI

18 June 2011

GULBARGA DISTRICT REPORTED CRIMES

ಇಸ್ಪೀಟ ಆಟದ ಮೇಲೆ ದಾಳಿ :

ಬ್ರಹ್ಮಪೂರ ಠಾಣೆ : ದಿನಾಂಕ: 18-06-2011 ರಂದು ಮಧ್ಯ ರಾತ್ರಿ ನಾನು ವೀರಣ್ಣ ಕುಂಬಾರ ಪಿ.ಎಸ.ಐ ಮತ್ತು ಮಾನ್ಯ ರವಿ ಎಸ.ಪಿ (ಪ್ರೋಬೆಶನರಿ) ಹಾಗು ಠಾಣೆಯ ಸಿಬ್ಬಂದಿಯವರಾದ ಶಿವಪುತ್ರಪ್ಪಾ , ರಾಜಕುಮಾರ, ಆನಂದ, ವೀರಶೈವ ಕಲ್ಯಾಣ ಮಂಟಪ ಎದುರುಗಡೆ ಸಾರ್ವಜನಿಕ ಸ್ತಳದಲ್ಲಿ ಲೈಟಿನ ಬೆಳಕಿನಲ್ಲಿ ಅಂದರ ಬಾಹರ ಇಸ್ಪೀಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದರಿಂದ, ನಾವೆಲ್ಲರೂ ಹೋಗಿ ನೋಡಲಾಗಿ ಇಸ್ಪೀಟ ಜೂಜಾಟ ಆಡುತ್ತಿರುವವರ ಮೇಲೆ ಇಬ್ಬರ ಪಂಚರ ಸಮಕ್ಷಮ ದಾಳಿ ಮಾಡಿ ಹೆಸರು ವಿಚಾರಿಸಲಾಗಿ ಭರತ ತಂದೆ ತಿಮ್ಮಯ್ಯಾ ತಾಂಡೂರಕರ, ಸಿದ್ದು ತಂದೆ ಸೂರೆಕಾಂತಕರ್, ಶ್ರಾವಣ ತಂದೆ ಕಲ್ಲಪ್ಪಾ ಹಿರೇಮಠ, ಸಂತೋಷ ತಂದೆ ಭಾಗಣ್ಣ ನಾಟಿಕಾರ, ಸುಭಾಶ ತಂದೆ ನಾಗಣ್ಣ ಸರಡಗಿ, ರಾಚಯ್ಯ ತಂದೆ ಶಾಂತಲಿಂಗಯ್ಯಾ, ರಾಜಶೇಖರ ತಂದೆ ಸಿದ್ರಾಮಪ್ಪಾ, ಶರಣಬಸಪ್ಪಾ ತಂದೆ ಅಂಬಣ್ಣ, ಮಲ್ಲಿಕಾರ್ಜುನ ತಂದೆ ಸಂಗಣ್ಣ, ಶಿವಕುಮಾರ ತಂದೆ ಬಸವಣಪ್ಪಾ ಸಾ|| ಎಲ್ಲರೂ ಗುಲಬರ್ಗಾರವರಿಂದ ಒಟ್ಟು ಹಣ 10,045-00 ರೂಪಾಯಿಗಳು ಮತ್ತು ಜೂಜಾಟಕ್ಕೆ ಬಳಸಿದ ಇಸ್ಪೀಟ ಕಾರ್ಡಗಳು ಜ್ತಪಿ ಪಡಿಸಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

ಇಸ್ಪೀಟ ಆಟದ ಮೇಲೆ ದಾಳಿ :

ಸ್ಟೇಶನ ಬಜಾರ ಠಾಣೆ : ದಿನಾಂಕ: 18-06-2011 ರಂದು ಮಧ್ಯರಾತ್ರಿ ನಾನು ಬಿ.ಡಿ ಬುರ್ಲಿ ಪಿ.ಎಸ.ಐ ಕರ್ತವ್ಯಲ್ಲಿದ್ದಾಗ ಜೇಸ್ಕಾಂ ಕಛೇರಿಯ ಒಳಾಂಗಣದಲ್ಲಿ ಕೆಲವು ಜನರು ಇಸ್ಪೀಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ್ದಿದರಿಂದ, ನಾನು ಮತ್ತು ಸಿಬ್ಬಂದಿಯವರು ಇಸ್ಪೀಟ ಆಡುತ್ತಿರುವವರ ಮೇಲೆ ದಾಳಿ ಮಾಡಲಾಗಿ ಮಸೂದ ಅಹ್ಮದ ಎಮ.ಎಸ.ಕೆ.ಮಿಲ್ಲ, ಬಾಬಾ ತಂದೆ ಮಹಿಮೂದ ಸ್ಟೇಶನ ಏರಿಯಾ, ಅಶೋಕ ತಾರಪೈಲ್, ಸಂಜಯ ಐವಾನ ಶಾಹಿ ರಸ್ತೆ, ಖಲೀಲ ಉಪ್ಪರ ಲೈನ, ಶಕೀಲ ಹಳೆ ಜೇವರ್ಗಿ ರಸ್ತೆ ಮತ್ತು ಸಂಗಮನಾಥ ಕಪಾಳೆ ಸಾ|| ಎಲ್ಲರೂ ಗುಲಬರ್ಗಾರವರಿಗೆ ದಸ್ತಗಿರಿ ಮಾಡಿ ಇಸ್ಪೀಟ ಜೂಜಾಟಕ್ಕೆ ಬಳಸುತ್ತಿದ್ದ ನಗದು ಹಣ 3750/- ರೂಪಾಯಿಗಳು ಮತ್ತು 52 ಇಸ್ಪೀಟ ಎಲೆಗಳು ಸದರಿಯವರಿಂದ ವಶಪಡಿಸಿಕೊಂಡು ಬಂದು ಠಾಣೆಗೆ ವರದಿ ನೀಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ಕಳವು ಪ್ರಕರಣ :

ಬ್ರಹ್ಮಪೂರ ಠಾಣೆ : ಶ್ರೀ ಶರಣಬಸಪ್ಪಾ ತಂದೆ ಚಂದ್ರಶೇಖರ ಕೋಬಾಳ ಸಾ|| ಶಹಾಬಾದ ತಾ|| ಚಿತ್ತಾಪೂರ ಗುಲಬರ್ಗಾ ರವರು, ದಿನಾಂಕ: 14-04-2011 ರಂದು ಮದ್ಯಾಹ್ನ ತಮ್ಮ ಹಿರೋ ಹೊಂಡಾ ಕೆಎ 32 ಜೆ 8851 ಅಂದಾಜು ಕಿಮ್ಮತ್ತು 20,000-00 ನೇದ್ದು, ಜವಳಿ ಕಾಂಪ್ಲೇಕ್ಸ ಎದುರುಗಡೆ ನಿಲ್ಲಿದಾಗ, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ, ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ :
ವಾಡಿ ಠಾಣೆ :
ಶ್ರೀಮತಿ ಸುಭದ್ರಭಾಯಿ ಗಂಡ ಗೋವಿಂದ ಕೈತಾಪೂರಕರ ಸಾ|| ಮರಗಮ್ಮ ಗುಡಿ ಹತ್ತಿರ ವಾಡಿ ಗುಲಬರ್ಗಾ ರವರು ನನ್ನ ಮಗನಾದ ಹಣಮಂತ @ ಪಾಪ್ಯಾ ಇತನು ತಾನು ಪ್ರೀತಿಸಿದ ಹುಡುಗಿಗೆ ಮದುವೆಯಾಗುದಕ್ಕೆ ಬೇಡ ಅಂದಿದಕ್ಕೆ, ತಾನು ಕೊರ್ಟ ಮದುವೆಯಾಗಿ ಬೇರೆ ಕಡೆ ಮನೆ ಮಾಡಿಕೊಂಡು ವಾಸವಾಗಿದ್ದು ನಾನು ನನ್ನ ಮಗಳ ಮದುವೆ ಪ್ರಯುಕ್ತ ಮದುವೆಗೆ ಬರಲು ಹೇಳಿ ಬಂದಿರುತ್ತೆನೆ. ದಿನಾಂಕ : 17-06-2011 ರಂದು ಹಣಮಂತ ಇತನು ತನ್ನ ಹೆಂಡಿತ ಭಾರತಿ, ಅತ್ತೆ ಸುಶೀಲಭಾಯಿ ರವರೊಂದಿಗೆ ನಾವಿರುವ ಮನೆಗೆ ಬಂದು ನಮಗೆ ಮನೆಯಿಂದ ಹೊರಗಡೆ ಹಾಕಿ ಮತ್ತೆ ಮದುವೆಗೆ ಕರೆಯುವದಕ್ಕೆ ಬಂದಿದ್ದಿಯಾ ಅಂತಾ ನನಗೆ ಅವಾಚ್ಯವಾಗಿ ಬೈದು ನನಗೆ ಕೆಳಗೆ ಕೆಡವಿದಾಗ ನನ್ನ ಮತ್ತೊಬ್ಬ ಮಗ ಲಕ್ಷ್ಮಣ ಇತನು ಯಾಕೊ ತಾಯಿಗೆ ಹೊಡೆತಿಯಾ ಅಂದಿದಕ್ಕೆ ಹಣಮಂತ ಇತನು ಹೆಂಡತಿ ಮತ್ತು ಅತ್ತೆ ಪ್ರಚೋದನೆಯಿಂದ ಲಕ್ಷ್ಮಣನ ಕುತ್ತಿಗಿಗೆ ಹಿಡಿದು ಎದೆಗೆ ಜೋರಾಗಿ ಗುದ್ದಿದರಿಂದ ಲಕ್ಷ್ಮಣ ಇತನು ಸ್ಥಳದಲ್ಲಿಯೇ ಮರಣ ಹೊಂದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :

ಮಾದನ ಹಿಪ್ಪರಗಾ ಠಾಣೆ: ಶ್ರೀಮಂತ ತಂದೆ ಶಾಂತಪ್ಪಾ ಹೊಸಳ್ಳಿ ಸಾ|| ಝಳಕಿ (ಬಿ) ರವರು ನಾನು ದಿನಾಂಕ: 15-06-2011 ರಂದು ಮನೆಯಲ್ಲಿದ್ದಾಗ ಚಿದಾನಂದ ಹೊಸಳಿ, ಮದುಕರನ, ಸುದಾಕರ, ಪ್ರಭಾಕರ, ಮಹಾದೇವಿ ಸಾ|| ಎಲ್ಲರೂ ಝಳಕಿ ರವರು ನನ್ನ ತಂದೆಗೆ ಮತ್ತು ನನ್ನ ಹೆಂಡತಿಗೆ ಜಗಳ ತೆಗೆದು ಕೈಯಿಂದ ಬಡಿಗೆಯಿಂದ ಹೊಡೆದು ಅವಾಚ್ಯವಾಗಿ ಬೈದು ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.