POLICE BHAVAN KALABURAGI

POLICE BHAVAN KALABURAGI

28 July 2011

GULBARGA DIST REPORTED CRIMES

ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಆರೋಪ :

ಸ್ಟೇಷನ ಬಜಾರ ಠಾಣೆ: ಶ್ರೀ. ಎಮ್.ಬಿ.ಶಾಸ್ತ್ರಿ. ಅಪರ ಜಿಲ್ಲಾಧಿಕಾರಿಗಳು ಮಿನಿ ವಿಧಾನ ಸೌಧ, ಗುಲಬರ್ಗಾ ರವರು ಆಧಾರ ಗುರುತಿನ ಚೀಟಿ ಯೋಜನೆ ಕೇಂದ್ರ ಜೋನಲ್ ನಂ 1 ನೇದ್ದಕ್ಕೆ ಬೇಟಿ ನೀಡಿದಾಗ ಶ್ರೀ. ಶರಣಯ್ಯಾ ಹಿರೇಮಠ ಎಂಬುವರು ತಮಗೆ ಸಂಬಂಧ ಇರಲಾರದ ಜನರ ಅರ್ಜಿಗಳನ್ನು ತಂದು ಆಧಾರ ನೊಂದಣಿ ಮಾಡಲು ಅಲ್ಲಿದ್ದ ಸಿಬ್ಬಂದಿಯವರಿಗೆ ಒತ್ತಾಯಿಸುತಿದ್ದು ಹಾಗೂ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸುತ್ತಿರುವದು ನನ್ನ ಗಮನಕ್ಕೆ ಬಂತು, ಸದರಿಯವನಿಗೆ ವಿಚಾರಿಸಲಾಗಿ ತಾನು ನೀರಾವರಿ ಇಲಾಖೆಯ ಸಿಬ್ಬಂದಿ ಇರುವದಾಗಿ ಹೇಳಿಕೊಂಡಿದ್ದು, ನಾನು ಆಧಾರ ನೊಂದಣಿ ಮಾಡಿಸಿಕೊಳ್ಳಲು ಬಂದಿರುವದಾಗಿ ಹೇಳಿಕೆ ನೀಡಿರುತ್ತಾರೆ, ಆದರೆ ಆಧಾರ ಕೇಂದ್ರದಲ್ಲಿ ಇವರ ಹೆಸರಿನ ಯಾವುದೆ ಅರ್ಜಿಯು ನೊಂದಣಿ ಆಗಿರುವದಿಲ್ಲಾ , ಇವರು ಜನರಿಂದ ಹಣ ಪಡೆದು ದಿನಾಲು ಇದೆ ರೀತಿ ಕೇಂದ್ರಕ್ಕೆ ಬಂದು ತೊಂದರೆ ಕೊಡುತ್ತಾರೆ ಅಂತ ಅಲ್ಲಿನ ಸಿಬ್ಬಂದಿ ತಿಳಿಸಿರುತ್ತಾರೆ, ಈ ವ್ಯಕ್ತಿಯು ಸರಕಾರಿ ಕೆಲಸದಲ್ಲಿ ಅಡಚಣೆ ಉಂಟು ಮಾಡಿ, ಸಿಬ್ಬಂದಿ ಜನರಿಗೆ ಹೆದರಿಸುವದು ಮಾಡುತ್ತಿದ್ದಾನೆ ಅಂತಾ ಅಪರ ಜಿಲ್ಲಾಧಿಕಾರಿಗಳು ಲಿಖಿತ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಂದಿ ಜಪ್ತಿ ಪ್ರಕರಣ :
ಸೇಡಂ ಠಾಣೆ
: ದಿನಾಂಕ: 28-7-11 ರಂದು  ಮುಂಜಾನೆ ಬಸವ ನಗರ ತಾಂಡಾದಲ್ಲಿ ಅಕ್ರಮ ಸೆಂದಿ ಮಾರಾಟ ಮಾಡುತ್ತಿದ್ದ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ಹಾಗು ಸಿಬ್ಬಂದಿ ಹಾಗೂ ಪಂಚರೊಂದಿಗೆ ಆ ಸ್ಥಳಕ್ಕೆ ಹೋಗಿ ನೋಡಲಾಗಿ ಪ್ರಕಾಶ ತಂದೆ ಬಾಬುಸಿಂಗ ಚವ್ಹಾಣ ಸಾ|| ಬಸವನಗರ ಸೇಡಂ ರವರು ಅಕ್ರಮ ಸೆಂದಿ ಮಾರಾಟ ಮಾಡುತ್ತಿದ್ದು ಅವನನ್ನು ವಶಕ್ಕೆ ತೆಗೆದುಕೊಂಡು ಅವನಿಂದ 150 ಲೀಟರ ಸೆಂದಿ ಜಪ್ತಿ ಮಾಡಿಕೊಂಡಿದ್ದರಿಂದ ಸೇಡಂ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ
:
ಶ್ರೀ ರಾಮಚಂದ್ರ ತಂದೆ ಮಾಹಾದೇವಪ್ಪ ಹರಸೂರ ಸಾ: ಆಲಗೂಡ ಗ್ರಾಮ ರವರು ನಾವು 4 ಜನ ಅಣ್ಣ ತಮ್ಮಂದಿರರಿದ್ದು, ನಾವು ಬೇರೆಯಾಗಿ 4 ವರ್ಷವಾಗಿದ್ದು, ಬೇರೆಯಾಗುವ ಸಮಯದಲ್ಲಿ 25,000/-ರೂಯಪಾಯಿಗಳು ಇತ್ತು ಆ ಹಣ ಎಲ್ಲಾ ಅಣ್ಣ ತಮ್ಮಂದಿರಿಗೆ ಸಮನಾಗಿ ಕೊಡುತ್ತೇನೆ ಅಂತಾ ಹೇಳಿದ್ದು, ನನಗೆ ಕೊಡಬೇಕಾದ ಹಣ ಕೊಡು ಅಂತಾ ಕೇಳಲು ಹೋದಾಗ ನನ್ನ ತಮ್ಮ & ಅವನ ಹೆಂಡತಿ ಇಬ್ಬರೂ ಅವ್ಯಾಚ್ಛವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:

ಮಳಖೇಡ ಠಾಣೆ: ಸಂಗಮ್ಮ ಗಂಡ ತುಕಾರಾಮ ಕಲಗುರ್ತಿ ಸಾ|| ಮಳಖೇಡ ರವರು ನಾನು ರಜನಿಕಾಂತ, ಶಶಿಕಲಾ, ಮಾಣಿಕಮ್ಮ  ಇವರೊಂದಿಗೆ ಶಿವಭದ್ರಮ್ಮ ರವರ ಮನೆಯ ಹತ್ತಿರ ನಿಂತಾಗ   ಗೌತಮ ಮತ್ತು ಭಗವಾನ, ಗೈಬಣ್ಣ ಕಾಳಿಂಗ ಸುಭಾಸ, ದೇವಿಂದ್ರಪ್ಪ, ಪಾರಮ್ಮ ಸಾ|| ಎಲ್ಲರೂ ಮಳಖೇಡ ರವರು   ಕುಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ವಿನಾಕಾರಣ ಕಲ್ಲುಗಳಿಂದ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಗಾಯಗೊಳಿಸಿ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ಮಳಖೇಡ ಠಾಣೆ: ಶ್ರೀದೇವಿ ಗಂಡ ದೇವಿಂದ್ರಪ್ಪ ನಿಂಗಮಾರಿ ಸಾ|| ಮಳಖೇಡ ತಾ|| ಸೇಡಂ ರವರು ನನ್ನ ಗಂಡನೊಂದಿಗೆ ನನ್ನ ಮನೆಯ ಮುಂದೆ ನಿಂತಾಗ   ಶ್ರೀಕಾಂತ ಮತ್ತು ಮಹಾಂತೇಶ, ಮಾರುತಿ, ದೇವಿಂದ್ರ, ಚಂದ್ರಪ್ಪ, ಶಿವರಾಯ, ರಾಮು, ಶಿವಭದ್ರಮ್ಮ, ಸರಡಗಿ ರವರು ಸಾ|| ಎಲ್ಲರೂ ಮಳಖೇಡ ರವರು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗೆ ಹಿಡಿದುಕೊಂಡು ವಿನಾಕಾರಣ ಆವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ನನಗೆ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ :
ಬಸವರಾಜ ತಂದೆ ಶರಣಪ್ಪ ನಿಂಬರಗಿ ಸಾ|| ಗೌರ (ಬಿ) ಹಾ|| ವ|| ಅಫಜಲಪೂರ ರವರು ನನಗೆ ಶರಣು ದೆಗಿನಾಳ ಈತನು ವಿನಾಯಕ ಹೋಟಲಕ್ಕೆ ಊಟ ಮಾಡಲು ಕರೆದಿದ್ದರಿಂದ ನಾನು ವಿನಾಯಕ ಹೋಟಲಕ್ಕೆ ಬರುತ್ತಿದ್ದಾಗ ಎದುರಿನಿಂದ ಶರಣು ತನ್ನ ಕಾರನ್ನು ನಡೆಸಿಕೊಂಡು ಬಂದಿದ್ದು ಅದರಲ್ಲಿ ಕೂಡಿಸಿಕೊಂಡು ಮಣೂರ ಗ್ರಾಮದ ಮುಖಾಂತರ ಅಗರಖೇಡ ರೋಡಿಗೆ ಹೋಗಿ ಆಚೆ ಕಡೆ ಭೀಮಾ ಬ್ರಿಡ್ಜ ಗೆ ಕಾರ ನಿಲ್ಲಿಸಿ ತನಗೆ 2 ಲಕ್ಷ ರೂ ಕೊಡು ಇಲ್ಲದಿದ್ದರೆ ಭೀಮಾ ನದಿಯಲ್ಲಿ ಹಾಕುತ್ತೇವೆ ಎಂದು ಹೆದರಿಕೆ ಹಾಕಿದ್ದರಿಂದ ನಾನು ಹೆದರಿಕೊಂಡು ನನ್ನ ಹತ್ತಿರ ಹಣವಿಲ್ಲ. ಬ್ಯಾಂಕಿನಲ್ಲಿ 1 ಲಕ್ಷ ರೂ. ಇರುತ್ತವೆ. ಎ ಟಿ ಎಂ ಇದೆ ತೆಗೆದುಕೊಳ್ಳಿರಿ ಎಂದು ಅವರಿಗೆ ಹೆದರಿಕೊಂಡು ನನ್ನ ಹತ್ತಿರವಿದ್ದ ಎ.ಟಿ.ಎಂ. ಶರಣು ದೆಗಿನಾಳ ಈತನಿಗೆ ಕೊಟ್ಟಿರುತ್ತೇನೆ. ಅಲ್ಲಿಂದ ಕಾರಿನಲ್ಲಿ ಇಂಡಿ. ಸಿಂದಗಿ, ಗ್ರಾಮಕ್ಕೆ ಹೋಗಿ ಅಲ್ಲಿಂದ ದೇವರ ಹಿಪ್ಪರಗಿ ರೋಡಿಗೆ ಹೊರಟು ಸಿಂದಗಿಯಿಂದ 2 ಕಿ.ಮೀ. ಅಂತರ ಕಾರ ಕೆಟ್ಟು ನಿಂತಿತು. ಶರಣು ಮತ್ತು ಆತನ ಜೊತೆಗೆ ಇನ್ನು ಒಬ್ಬನು ಸಿಂದಗಿಗೆ ಕರೆದುಕೊಂಡು ಬಂದು ದಿನಾಂಕ 27/7/2011 ರಂದು ಬೆಳಿಗ್ಗೆ ಯುನಿಯನ್ ಬ್ಯಾಂಕಿಗೆ ಹೋಗಿ ನನ್ನ ಎ.ಟಿ.ಎಂ. ದಿಂದ 20,000=00 ರೂ. ಡ್ರಾ ಮಾಡಿಕೊಂಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ಅಶೋಕ ನಗರ ಠಾಣೆ : ಶ್ರೀ ಶರಣು ತಂದೆ ಮಲ್ಲಪ್ಪ ತೆಕಡರ ಸಾ|| ಬಸವ ನಗರ ಗುಲಬರ್ಗಾ ರವರ   ನಾನು ದಿನಾಂಕ 27/07/2011 ರಂದು ಮಧ್ಯಾಹ್ನ ನನ್ನ ಬಾಡಿಗೆ ಮನೆಯ ಹತ್ತಿರ ನಿಂತಾಗ ನಮ್ಮ ಮನೆಯ ಸಮೀಪದಲ್ಲಿಯೆ ಇರುವ ಶರಣಬಸಪ್ಪ, ಮತ್ತು ಆತನ ಹೆಂಡತಿ ರೇಣುಕಾ ಅವರ ತಾಯಿ ವಿಠಾಬಾಯಿ ಅಲ್ಲದೆ ಇತರೆ ಇನ್ನೂ ಇಬ್ಬರು ಹುಡುಗರು ಕೂಡಿಕೊಂಡು ನನ್ನ ಹತ್ತಿರ ಬಂದು ಅವಾಚ್ಯವಾಗಿ ಬೈದು ನಮ್ಮ  ಹುಡುಗಿಗೆ ನೋಡಿ ಚುಡಾಯಿಸುತ್ತಿ ಮಗನೇ ಅಂತಾ ಹೊಡೆದು ಭಾರಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡಗಿಗೆ ಚುಡಾಯಿಸಿ ಹುಡಗಿಯ ತಂದೆ ತಾಯಿಯ ಮೇಲೆ ಹಲ್ಲೆ:

ಅಶೋಕ ನಗರ ಠಾಣೆ : ಶರಣಬಸಪ್ಪ ತಂದೆ ಬಸಣ್ಣ ಅನ್ವರ ಸಾ|| ಬಸವ ನಗರ ಗುಲಬರ್ಗಾ ರವರು ನಾನು ದಿನಾಂಕ 27/07/2011 ರಂದು ಮನೆಯಲ್ಲಿ ಇದ್ದಾಗ ಶರಣು ತಂದೆ ಮಲ್ಲಪ್ಪ ಇತನು ಬಂದವನೇ ಅವಾಚ್ಯವಾಗಿ ಬೈದು ನಿನ್ನ ಮಗಳಿಗೆ ಚುಡಾಯಿಸಿದ್ದೇನೆ. ಅಂತಾ ಬೈಯುತ್ತಿರಿ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಹೊರಗೆ ಬರಲು ಎದೆಯ ಮೇಲೆ ಮತ್ತು ಹೊಟ್ಟೆಯಲ್ಲಿ ಹೊಡೆದಿದ್ದು, ಬಿಡಿಸಲು ಬಂದ ನನ್ನ ಹೆಂಡತಿ ರೇಣುಕಾ ಇವಳಿಗೂ ಸಹ ಕೈಯಿಂದ ಹೊಡೆದಿರುತ್ತಾನೆ, ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.