POLICE BHAVAN KALABURAGI

POLICE BHAVAN KALABURAGI

11 September 2016

Kalaburagi District Reported Crimes

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಯುನುಸ್ ಪಾಶಾ ಮುಲ್ಲಾ  ಇವರ ಹೆಂಡತಿಯಾದ ಶ್ರೀಮತಿ ಯಾಸ್ಮೀನ  ಗಂಡ ಯುನುಸ್ ಪಾಶಾ  ಮುಲ್ಲಾ ಸಾ// ಇಂದಿರಾ ನಗರ ಕಲಬುರಗಿ ಹಾ : : ಸಿಂದಗಿ ಜಿ: ವಿಜಪೂರ ಇವರ ಗಂಡ  ಯುನುಸ್ ಪಾಶಾ ತಂದೆ ಶರ್ಪೊದ್ದಿನ ಮುಲ್ಲಾ ಇವರು ವಿಜಯಪೂರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಗ್ಯಾರೇಜ ಕೆಲಸ ಮಾಡುತ್ತಿದ್ದರಿಂದ ತಾವು ಕುಟುಂಬ ಸಮೇತವಾಗಿ ಸಿಂದಗಿ ನಗರದಲ್ಲಿ ವಾಸವಾಗಿದ್ದು ಇಂದು ದಿನಾಂಕ 28/8/2016 ರಂದು ಬೆಳಿಗ್ಗೆ  ತನ್ನ ಗಂಡ ಯುನುಸ್ ಪಾಶಾ ಇವರು ಕಲಬುರಗಿ ನಗರದಲ್ಲಿ ಇರುವ ತನ್ನ ತಾಯಿಯ ಯೋಗಕ್ಷೇಮ ನೋಡಿಕೊಂಡು ಬರಲೆಂದು  ಮೋ/ಸೈ ನಂ ಕೆಎ-32 ಜೆ-5608  ನೇದ್ದರ ಮೇಲೆ ಹೋಗಿ ತನ್ನ ತಾಯಿಯ ಯೋಗಕ್ಷೇಮ  ವಿಚಾರಿಸಿ ಮರಳಿ ಸಿಂದಗಿಗೆ ಸದರಿ ಮೋ/ಸೈ ನಂ ನಂ ಕೆಎ-32 ಜೆ-5608  ನೇದ್ದರಮೇಲೆ ಸಾಯಂಕಾಲ 5 ಗಂಟೆಯ ಸುಮಾರಿಗೆ ಬರುತ್ತೀರುವಾಗ ಕಲಬುರಗಿ ನಗರ ದಾಟಿದ ನಂತರ ನಂದಿಕೂರ ತಾಂಡಾದ ಹತ್ತೀರ  ಎನ್.ಹೆಚ್-218 ರೋಡಿನ ಮೇಲೆ  ಎದುರುಗಡೆಯಿಂದ ಒಂದು ಕ್ರುಜರ ಜೀಪ ನಂ ಕೆಎ- 28 ಎಮ್- 3412 ನೆದ್ದರ ಚಾಲಕ ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡನ ಮೋ/ಸೈಗೆ ಡಿಕ್ಕಿ ಹೋಡೆದ ಪರಿಣಾಮ ನನ್ನ ಗಂಡನಿಗೆ ಬಲಗಾಲ ,ಬಲಗೈ,ಎದೆಗೆ, ತಲೆಗೆ  ಭಾರಿ ಮತ್ತು ಚಿಕ್ಕಪುಟ್ಟ ರಕ್ತಗಾಯ ಮತ್ತು ಗುಪ್ತಗಾಯ ಗಳಾಗಿರುತ್ತವೆ ಈ ಗಟನೆಯ ನಂತರ ಸದರಿ ಕ್ರುಜರ ಜೀಪ ನಂ ಕೆಎ- 28 ಎಮ್- 3412 ನೆದ್ದರ ಚಾಲಕ  ತನ್ನ ಕ್ರುಜರ ಜೀಪ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರ ಪ್ರಕರಣದಲ್ಲಿ ಗಾಯ ಹೊಂದಿ ತಿಕಿತ್ಸೆ ಪಡೆಯುತ್ತಿರುವ ಯುನುಸ ಪಾಶಾ ತಂದೆ ಶಫೋದ್ದಿನ್ ಮುಲ್ಲಾ ಸಾ; ಇಂದಿರಾ ನಗರ ಕಲಬುರಗಿ ಹಾ: ವ: ಸಿಂದಗಿ ಜಿ: ವಿಜಯಪೂರ ಇತನು ಚಿಕಿತ್ಸೆ ಫಲಕಾರಿಯಾಗದೆ ಸದರಿ ಯವನು ದಿನಾಂಕ 30/08/2016 ಮೃತಪಟ್ಟಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರಗಿ ಠಾಣೆ : ಶ್ರೀ ಷಣ್ಮೂಖಪ್ಪ ತಂದೆ ಬಾಬು ಐಗೊಳ ಸಾ: ಬುದ್ದ ನಗರ ಜೇವರಗಿ ಇವರು  ದಿನಾಂಕ 10.09.2016 ರಂದು ಮುಂಜಾನೆ ನಾನು ಕಚೇರಿಯಲ್ಲಿದ್ದಾಗ ಸಾಹೇಬಗೌಡ ಕಲ್ಲಾ ಇವರು ಪೊನ ಮಾಡಿ ತಿಳಿಸಿದ್ದೆನೆಂದರೆ ನಮ್ಮ ಹೊಲಕ್ಕೆ ಹಾಕಿದ ವಿದ್ಯೂತ ಕಂಬದ ವೈಯರ್ (ತಂತಿ) ಸ್ವಲ್ಪ ಕಡಿದು ಬಿದ್ದಿರುತ್ತದೆ ಉಳಿದ ವೈಯರ್ ಕಳುವಾಗಿರುತ್ತದೆ.ಅಂತಾ ತಿಳಿಸಿದ್ದು . ವಿಷಯ ಗೊತ್ತಾದ ಕೂಡಲೆ ನಾನು ಮತ್ತು ಜೇಸ್ಕಂ ಶಾಖಾಧಿಕಾರಿಯಾದ ಅರುಣಕುಮಾರ ತಂದೆ ಮಹಾದೇವರಾವ ಸಲಗರ, ಮಲ್ಲಿನಾಥಗೌಡ ಪೊಲೀಸ್ ಪಾಟೀಲ ಲೈನಮ್ಯಾನ ಮೂವರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೊಡಲಾಗಿ ಜೇವರಗಿ ಪಟ್ಟಣದ ಹೊರವಲಯದ ಷಣ್ಮೂಖ ಶಿವಯೋಗಿ ಕಾಲೇಜ್ ದಿಂದ ಸಾಹೇಬಗೌಡ ಕಲ್ಲಾ ಇವರ ಹೊಲದವರೆಗೆ ವಿದ್ಯುತ ಕಂಬಕ್ಕೆ ಹಾಕಿದ ಅಲೂಮೀನಿಯಮ್ ವಿದ್ಯುತ  ವೈಯರ್ ( ವಿದ್ಯುತ ವಾಹಕ) ಅಂದಾಜು 2400 ಮೀಟರ್ ಉದ್ದದ ಅ.ಕಿ. 95000/- ಕಿಮ್ಮತ್ತಿನ ವೈಯರ್ ಕಳ್ಳತನವಾಗಿದ್ದು  ಅಲ್ಲಿ ಅಕ್ಕಪಕ್ಕದ ಹೊಲದವರಿಗೆ ವಿಚಾರಿಸಲು ಪತ್ತೆ ಹತ್ತಿರುವುದಿಲ್ಲಾ. ಅಲ್ಲಿಯೇ ಇದ್ದ ಸಾಹೇಬಗೌಡ ಕಲ್ಲಾ ಇವರು ಹೇಳಿದ್ದೆನೆಂದರೆ ದಿ. 9.09.2016 ರಂದು ಸಾಯಂಕಾಲ ನಾನು ನಮ್ಮ ಹೊಲಕ್ಕೆ ಹೊದಾಗ ನಮ್ಮ ಹೊಲಕ್ಕೆ ವಿದ್ಯುತ ಸಂಪರ್ಕ ಇದ್ದ ಕಂಬದ ವಿದ್ಯುತ ವೈಯರ್ ಇರಲಿಲ್ಲಾ ಅದು ದಿ. 08.09.2016 ರಂದು ರಾತ್ರಿ ಕಳ್ಳತವಾಗಿರುತ್ತದೆ ಅಂತಾ ಹೇಳಿದರು. ವಿದ್ಯುತ ವೈಯರ್ ಕಳುವಾದ ವಿಷಯವನ್ನು ನಾನು ನಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸಿ ನಂತರ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ  ಠಾಣೆ : ಶ್ರೀ ಸೂಯಱಕಾಂತ ತಂದೆ ಗುರುಶಾಂತಪ್ಪ ಜಿಡಗೆ ಸಾಃ ಭೂಸನೂರ ಇವರು  ಭೂಸನೂರ ಗ್ರಾಮದ ಹೊಲ ಸವೆಱ ನಂ. 258/4 ನೇದ್ದರ ಸಂಭಂಧ ಆಪಾದಿತರಾದ ಮಲ್ಲಿನಾಥ ತಂದೆ ಆನಂದರಾವ ಮಾಲಿಪಾಟೀಲ ಮತ್ತು ಆತನ ಕಡೆಯವರು ದಿನಾಂಕ ದಿನಾಂಕ 08/09/2016 ರಂದು 2030 ಗಂಟೆಗೆ ಕೆ.ಜಿಬಿ ಬ್ಯಾಂಕ ಹತ್ತಿರ ಇವರು ನಗರ ಖಾನೆ ಹತ್ತಿರ ಫಿರ್ಯಾದಿಗೆ ಮತ್ತು ಆತನ ಕಡೆಯವರಿಗೆ ಕೊಲೆ ಮಾಡುವ ಉದ್ದೇಶದಿಂದ ಅಕ್ರಮ ಕೂಟ ರಚಿಸಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ, ಕಲ್ಲಿನಿಂದ, ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ಹೊಡೆ ಬಡೆ ಮಾಡಿ ಜೀವ ಭಯಪಡಿಸಿ ಹೋಗಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.