POLICE BHAVAN KALABURAGI

POLICE BHAVAN KALABURAGI

24 May 2012

GULBARGA DIST REPORTED CRIMES


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಬಗ್ಗೆ:
ಬ್ರಹ್ಮಪೂರ ಪೊಲೀಸ್ ಠಾಣೆ:ಮಾನ್ಯ ತಾಲೂಕ ದಂಡಾಧಿಕಾರಿಗಳು ಗುಲಬರ್ಗಾರವರು  ಈಶಾನ್ಯ ಪದವೀಧರ ಮತಕ್ಷೇತ್ರದ  ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಾದಂತ  ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇದೆ ಎಂದು ತಿಳಿಸುತ್ತಾ , ಸನ್ಮಾನ್ಯ ಪ್ರಾದೇಶಿಕ ಆಯುಕ್ತರು ಹಾಗು ಚುನಾವಣಾ  ಈಶ್ಯಾನ್ಯ ಪದವಿಧರರ ಮತಕ್ಷೇತ್ರ  ಇವರು ಇಂಡೀಯನ್ ಎಕ್ಸಪ್ರೇಸ್ ದಿನ ಪತ್ರಿಕೆ ದಿನಾಂಕ 18/05/2012 ವರದಿಯನ್ನು ಆಧರಿಸಿ  ಗುಲಬರ್ಗಾ ನಗರದಲ್ಲಿರುವ ಡಾ|| ಎಸ್.ಎಂ ಪಂಡಿತ ರಂಗಮಂದಿರದಲ್ಲಿ ದಿನಾಂಕ 16/05/2012 ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತೇಂದು. ಈ ರಂಗ ಮಂದಿರದ ಹೊರಭಾಗದಲ್ಲಿ ಒಂದು ಭಿತ್ತಿ ಪತ್ರವನ್ನು ಲಗತ್ತಿಸಲಾಗಿತ್ತೆಂದು, ಹಾಗು ಈ ಭಿತ್ತಿ ಪತ್ರ ಭಾರತಿ ಜನತಾ ಪಾರ್ಟಿಯ ಅಭ್ಯರ್ಥಿಯಾದ ಶ್ರೀ. ಅಮರನಾಥ ಪಾಟೀಲ್ ಇವರ ಪರವಾಗಿ ಮತಗಳನ್ನು ಚಲಾಯಿಸಲು ಕೋರಿಕೊಳ್ಳಲಾಗಿತ್ತೆಂದು ತಿಳಿಸಿರುತ್ತಾರೆ. ಮುಖ್ಯವಾಗಿ ಈ  ಸಮಾರಂಭವು  ಶಂಕರ ಶಾಲಾ ಸಮಾರಂಭವು ಎಂಬ  ಪುಸ್ತಕ ಬಿಡುಗಡೆಗಾಗಿ ಆಯೋಜಿಸಲಾಗಿತ್ತು. ಆದರೆ ಈ ಸಮಾರಂದ ಉಪಯುಕ್ತತೆಯನ್ನು ಶ್ರೀ ಅಮರನಾಥ ಪಾಟೀಲ್ ಇವರು ತಮ್ಮ ಪರವಾಗಿ ಮತ ಚಲಾಯಿಸಲು ಭಿತ್ತಿ ಪತ್ರ  ಲಗತ್ತಿಸಿ ಕೋರಿಕೊಳ್ಳುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿರುವದು ವ್ಯಕ್ತವಾಗುತ್ತದೆ ಅಂತಾ ಅರ್ಜಿ ವಸೂಲಾಗಿದ್ದರಿಂದ ಭಾರತೀಯ ದಂಡ ಸಂಹಿತೆ 171(ಸಿ) ಹಾಗು ಪ್ರಜಾಪ್ರತಿನಿದಿ ಕಾಯ್ದೆ 1951 ಕಲಂ 123 ರನ್ವಯ ಪ್ರಕರಣ ದಾಖಲಿಸಲು ಕೋರಿದ್ದರಿಂದ ಠಾಣೆ ಗುನ್ನೆ ನಂ: 64/2012 ಕಲಂ: 171(ಸಿ) ಐ.ಪಿ.ಸಿ ಮತ್ತು 123 ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಆಕಸ್ಮಿಕ ಬೆಂಕಿ ಅಪಘಾತ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀಮತಿ ಸೈದಾಬಿ ಗಂಡ ಖಾಸಿಂ ಪಟೇಲ್ ಸಾ|| ರಹಿತಮ ನಗರ ಗುಲಬರ್ಗಾ ರವರು ನಮ್ಮ ಮನೆಗೆ ಈ ದಿನಾಂಕ : 21/05/2012 ಮಧ್ಯರಾತ್ರಿ 1.00 ಗಂಟೆಗೆ ಸುಮಾರಿಗೆ ಮನೆಗೆ ಹತ್ತಿ ಮನೆಯಲ್ಲಿರುವ ಸಾಮಾನುಗಳು ಹಾಗೂ ಮನೆಯು                                                ಸುಟ್ಟ ಅಂದಾಜು  56,700=ರೂಗಳಷ್ಟು ಸುಟ್ಟು ಹಾನಿಯಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಆಕಸ್ಮಿಕ ಬೆಂಕಿ ಅಪಘಾತ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು,ಡಿ,ಅರ್ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀಮತಿ ಬಸಮ್ಮ ಗಂಡ ಭೂತಾಳಿ ಟಕ್ಕಳಿಕಿ ಸಾ|| ವಿವೇಕಾನಂದ ನಗರ ಆಳಂದರೋಡ ಗುಲಬರ್ಗಾ ರವರು ನನ್ನ ಗಂಡನು ಕೇಂದ್ರ ಮೀಸಲು ಪಡೆ  ಶ್ರೀನಗರದಲ್ಲಿ ಕರ್ತವ್ಯ ಮಾಡುತ್ತಿರುತ್ತಾರೆ, ನಾನು ನನ್ನ ಮಕ್ಕಳೊಂದಿಗೆ ಮನೆಯಲ್ಲಿಯೆ ಇರುತ್ತೆನೆ. ಮಗ ರವಿಕಿರಣ ಈತನು ಸ್ವಾಮಿ ವಿವೇಕಾನಂದ ಕಾಲೇಜದಲ್ಲಿ ಎಮ್.ಬಿ.ಎ. ಅಂತಾ ವಿದ್ಯಾಭ್ಯಾಸ ಮಾಡುತ್ತಿರುತ್ತಾನೆ ಕೆಲವು ದಿವಸಗಳಿಂದ ನಾನು ವಿಧ್ಯಾಭ್ಯಾಸ ಮಾಡುವದಿಲ್ಲಾ ಅಂತಾ ಹೇಳುತ್ತಿದ್ದನು. ದಿನಾಂಕ 23.05.2012 ರಂದು ರಾತ್ರಿ 10-00 ಗಂಟೆ ಸುಮಾರಿಗೆ ನನ್ನ ಮಕ್ಕಳೊಂದಿಗೆ ಊಟ ಮಾಡಿ ಮನೆಯ ಛತ್ತಿನ ಮೇಲೆ ಮಲಗಿಕೊಳ್ಳಲು ಹೋಗಿರುತ್ತೆನೆ. ಸ್ವಲ್ಪ ಸಮಯದ ನಂತರ  ಯಾಕೆ ಇವನು ಮೇಲೆ  ಬರಲಿಲ್ಲ ಅಂತಾ ಕೆಳಗೆ ಬಂದು ನೋಡಲಾಗಿ ರವಿ ಈತನು ಛತ್ತಿನ ಕಬ್ಬಿಣದ ಕೊಂಡಿಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ.ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಯು.ಡಿ.ಆರ್ ನಂ: 5/12 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES

ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ವೈಜನಾಥ ತಂದೆ ಧರ್ಮರಾವ ರಾವಗೊಂಡ ಸಾ:ತರನಳ್ಳಿ ರವರು ನಾನು ದಿನಾಂಕ:23/05/2012 ರಂದು ಸಾಯಂಕಾಲ 6.00 ಗಂಟೆಗೆ ಕೂಲಿ ಕೆಲಸ ದಿಂದ ಮನೆಗೆ ಬಂದಾಗ ನನ್ನ ಹೆಂಡತಿ ಮನೆಯಲ್ಲಿ ಇರದೆ ನನ್ನ ಮಾವನ ಮನೆಗೆ ಹೋಗಿದ್ದು ಗೊತ್ತಾಗಿ ಕರೆಯಲು ಹೋಗಿ ಮನೆಯಲ್ಲಿ ಇರದೆ ಇಲ್ಲಿ ಏಕೆ ಬಂದಿರುವೆ ಅಂತಾ ಕೇಳಿದಾಗ ಅಲ್ಲಿಯೇ ಇದ್ದ ಶರಣಗೌಡ ಮಾಲಿ ಪಾಟೀಲ ಹಾಗೂ ಜಗನ್ನಾಥ ಪೊಲೀಸ ಪಾಟೀಲ ಇಬ್ಬರೂ ಬಂದು ನನಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಹಿಡಿ ಗಾತ್ರದ ಕಲ್ಲಿನಿಂದ ತಲೆಯ ಬಲಭಾಗಕ್ಕೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 73/2012 ಕಲಂ:323, 324, 504 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ಮಲ್ಲಮ್ಮ ಗಂಡ ಬಂಡೇಪ್ಪ ಖಣಜೇಗೋಳ ಸಾ: ಸೈಯದ ಚಿಂಚೋಳಿರವರು ನಾವು ಮನೆಯರೆಲ್ಲರೂ  ದಿನಾಂಕ 23/5/12 ರಂದು 8 ಎಎಮಕ್ಕೆ ಹೊಲದಲ್ಲಿದ್ದಾಗ ರಾಜು@ರಾಜಶೇಖರ ತಂದೆ ಭೀಮಾಶಂಕರ ಖಣಜೇಗೋಳ  ಉಮೇಶ ತಂದೆ ಭೀಮಾಶಂಕರ ಖಣಜೇಗೋಳ ಸಾ: ಇಬ್ಬರೂ ಸೈಯ್ಯದ ಚಿಂಚೋಳಿ ಗ್ರಾಮ ರವರು  ನಾವು ಹೊಲದಲ್ಲಿ ಗಳೇ ಹೊಡೆಯುತ್ತಿ ದ್ದನ್ನು ನೋಡಿ ತಕರಾರು ಮಾಡಿ ಅವ್ಯಾಚ್ಛವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 167/2012 ಕಲಂ, 504 323 324 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ: 23/5/2012 ರಂದು ಮದ್ಯಾಹ್ನ  ಮಿಲ್ಲತ್ತ ನಗರ ಏಸೆಂಟ ಶಾಲೆಯ ಎದರು ಮಹ್ಮದ ಹುಸೇನ ತಂದೆ ಮಹ್ಮದ ದಾವಲಸಾಬ ಮಡ್ಡಿ ಸಾ: ಬುಲಂದ ಪರವೇಜ ಕಾಲನಿ ಗುಲಬರ್ಗಾ,ಬಾಬುಲಾಲ ತಂದೆ ಮಶಾಕಸಾಬ ಸಾ;ಮಿಲ್ಲತ್ತ ನಗರ ಗುಲಬರ್ಗಾ  ಸಂಜುಕುಮಾರ ತಂದೆ ನೀಲಕಂಠಪ್ಪ ಬಿರಾದಾರ ಸಾ:ಶಿವಾಜಿ ನಗರ ಗುಲ್ಬರ್ಗಾ ರವರು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಡಿವೈಎಸ್‌ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ಹಾಗೂ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯರೊಂದಿಗೆ ದಾಳಿ ಮಾಡಿ ಆರೋಪಿತರನ್ನು ದಸ್ತಗಿರಿ ಅವರಿಂದ ನಗದು ಹಣ 4800/- ರೂ ಹಾಗೂ  ಮಟಕಾ ಚೀಟಿ ಅಲ್ಲದೆ ಒಂದು ಬಾಲ ಪೆನ್ನು, ಒಂದು ಮೋಬೈಲ ವಶಪಡಿಸಿಕೊಂಡಿದ್ದರ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 168/2012 ಕಲಂ 78 (3) ಕೆಪಿ ಆಕ್ಟ್‌‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ಅಂಬು ಗಂಡ ಪಾಂಡು ಗೌಳಿ ಸಾ:ಸೈಯ್ಯದ ಚಿಂಚೋಳಿ ಹಾ:ವ:ಪಟ್ಟಣ ತಾ:ಜಿ:ಗುಲಬರ್ಗಾರವರು  ನನ್ನ ಗಂಡನು ದಿನಾಲು ಕುಡಿದು ಬಂದು ವಿನಾಃಕಾರಣ ಜಗಳ ತೆಗೆದು ಶೀಲದ ಶಂಕೆ ಮಾಡಿ ನೀನು ಬೇರೆಯವರ ಜೊತೆಗೆ ಮಲಗುತ್ತಿಯಾ ಅಂತಾ ಮಾನಸಿವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟು ಹೊಡೆ ಬಡೆ ಮಾಡುತ್ತಿದ್ದನು.ನನ್ನ ತವರು ಮನೆಯ ಸಂಬಂದಿಕರೆಲ್ಲರೂ ತೀರಿಕೊಂಡಿದ್ದರಿಂದ ಯಾರಿಗೂ ಹೇಳದೇ ನನ್ನ ಗಂಡ ಕೊಡುತ್ತಿದ್ದ ಹಿಂಸೆ ಸಹಿಸಿಕೊಂಡು ಇಷ್ಟು ದಿನ ಬಂದಿರುತ್ತೆನೆ. ನಿನ್ನೆ ದಿನಾಂಕ:-23/05/2012 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಮಲಗಿಕೊಂಡಾಗ ನನ್ನ ಗಂಡನು ಹೊರಗಿನಿಂದ ಬಂದು ವಿನಾಕಾರಣ ಜಗಳ ತೆಗದು ಹೊಡೆ ಬಡೆ  ಮಾಡುತ್ತಿದ್ದನು. ನಾನು ವಿರೋದಿಸಿದ್ದಕ್ಕೆ ನನಗೆ ಅವಚ್ಯವಾಗಿ ಬೈದು ಕೊಲೇ ಮಾಡುವ ಉದ್ದೇಶದಿಂದ ಸೀಮೆ ಎಣ್ಣೆ ನನ್ನ ಮೈ ಮೇಲೆ ಹಾಕಿ ಕಡ್ಡಿ ಕೊರೆದು ಮೈಗೆ ಬೆಂಕಿ ಹಚ್ಚಿದನು ನಾನು ಚೀರಾಡುತ್ತಿದ್ದಾಗ ಅಲ್ಲಿಯೇ ಇದ್ದ ಹೊಟೇಲ ಮಾಲಿಕ ಅಂಬಾರಾಯ ತಂದೆ ಅಯ್ಯಪಗೌಡ ಮತ್ತು ಶರಣಪ್ಪಾ ತಂದೆ ಲಾಡಪ್ಪಾ ನಾಟೀಕಾರ ಇಬ್ಬರೂ ಕೂಡಿ ಬಂದು ನನ್ನ ಮೈಗೆ ಹತ್ತಿದ ಬೆಂಕಿಯನ್ನು ಆರಿಸಿದರು ನಂತರ ನಾನು ನೋಡಿಕೊಳ್ಳಲು ನನಗೆ ಎರಡು ಕೈಗಳ ಮೊಳಕೈಯಿಂದ ಅಂಗೈವರೆಗೆ (ಬೆರಳುಗಳು) ಸುಟ್ಟ ಗಾಯಗಳಾಗಿ ಚರ್ಮ ಸುಲಿದ್ದಿದ್ದು ಎರಡು ತೊಡೆಗಳಿಗೆ, ಎಡ ಮಗ್ಗಲಿಗೆ ಹೊಟ್ಟೆಗೆ , ಸುಟ್ಟಗಾಯಗಳಾಗಿರುತ್ತವೆ. ಯಾರೋ 108 ಅಂಬುಲೆನ್ಸಗೆ ಪೋನ ಮಾಡಿ ವಿಷಯ ತಿಳಿಸಿದ್ದರಿಂದ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ.ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ : 169/2012 ಕಲಂ 498 (ಎ)  504 307 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.