POLICE BHAVAN KALABURAGI

POLICE BHAVAN KALABURAGI

14 May 2015

KALABURAGI DISTRICT CRIME REPORTS.

ಸಂಚಾರಿ ಪೊಲೀಸ ಠಾಣೆ ಕಲಬುರಗಿ: ದಿನಾಂಕ:13/05/2015 ರಂದು ರಾತ್ರಿ 8=45 ಗಂಟೆಗೆ ನೆಹರು ಗಂಜ ಎ.ಪಿ.ಎಮ್.ಸಿ ಮೇನ ಕಮಾನ ಗೇಟ ಹತ್ತಿರ ಫಿರ್ಯಾದಿ ನಿಂತಾಗ ಲಾರಿ ನಂ: ಎಮ್.ಹೆಚ್.13 ಆರ್ 2968 ರ ಚಾಲಕ ಹುಮನಾಬಾದ ರೋಡಿನಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಪಕ್ಕಕ್ಕೆ ನಿಂತಿದ ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಬಲಗಾಲಿನ ಪಾದದ ಮೇಲೆ ಲಾರಿ ಹಾಯಿಸಿ ತನ್ನ ಲಾರಿ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅಪಘಾತದಲ್ಲಿ ಬಲಗಾಲ ಪಾದಕ್ಕೆ ಮತ್ತು ಬೆರಳುಗಳಿಗೆ ರಕ್ತಗಾಯವಾಗಿದ ಬಗ್ಗೆ ಅಪರಾಧ.
ಜೇವರ್ಗಿ ಪೊಲೀಸ್ ಠಾಣೆ : ಇಂದು ದಿನಾಂಕ 13.05.2015 ರಂದು 23:45 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ನಾನು ಮಾಹಂತಪ್ಪ ತಂದೆ ಸಿದ್ದಪ್ಪ ಹೂಗಾರ ವಯಃ 50 ವರ್ಷ ಜಾತಿಃ ಲಿಂಗಾಯತ  ಉಃ ಗ್ರಾಮ ಲೇಖಪಾಲಕ ಕೂಡಿ ಸಾಃ ಹರವಾಳ ತಾಃ ಜೇವರಗಿ ಈ ಮೂಲಕ ಫಿರ್ಯಾದಿ ವರದಿ ಸಲ್ಲಿಸುವುದೆನೆಂದರೆ, ನಾನು ದಿ 13-05-2015 ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ ಜೇವರಗಿಯಲ್ಲಿದ್ದಾಗ, ಜೇವರಗಿ ತಾಲೂಕಿನ ಕೊನಾಹಪ್ಪರಗಾ ಗ್ರಾಮ ಸೀಮಾಂತರದಲ್ಲಿ ಬ್ರೀಡ್ಜ್ ಹತ್ತಿರ ಬೀಮಾ ನದಿಯ ದಂಡೆಯಿಂದ  ಟಿಪ್ಪರಗಳಲ್ಲಿ ಮತ್ತು  ಟ್ಯಾಕ್ಟರಗಳಲ್ಲಿ ಸಂಬಂಧಪಟ್ಟ ಇಲಾಖೆಯ ಪರವಾನಿಗೆ ಇಲ್ಲದೆ ಮರಳು (ಉಸಕು) ಆಕ್ರಮವಾಗಿ ಕಳ್ಳತನದಿಂದ ರಾಯಲ್ಟಿ ಇಲ್ಲದೆ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮೀದಾರರಿಂದ ಪೊನ ಮೂಲಕ ಖಚಿತ ಬಾತ್ಮೀ ಬಂದಿದ್ದು ಇರುತ್ತದೆ. ನಾನು ಜೇವರಗಿ ಪೊಲೀಸ್ ಠಾಣೆಗೆ ಬಂದು, ಮಾನ್ಯ ಶ್ರೀ ಎಸ್.ಎಸ್. ಹೂಲ್ಲೂರ ಸಿಪಿಐ ಜೇವರಗಿ, ಮತ್ತು ಶ್ರೀ ಪಂಡಿತ ವಿ ಸಗರ  ಪಿಎಸ್ಐ ಜೇವರಗಿ ಪೊಲೀಸ್ ಠಾಣೆ ರವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿ ಮಾಡುವ ಕಾಲಕ್ಕೆ ಹಾಜರಿದ್ದು ಸಹಕರಿಸಲು ಕೋರಿಕೊಂಡು ನಂತರ ಇಬ್ಬರೂ ಪಂಚ ಜನರಿಗೆ ಬರಮಾಡಿಕೊಂಡು ಅವರಿಗೂ ಮತ್ತು ಠಾಣೆಯ ಸಿಬ್ಬಂದಿಯವರಾದ ಶ್ರೀ ಮಲ್ಲಿಕಾರ್ಜುನ ಸಿಪಿಸಿ 841, ಶ್ರೀ ಶಶಿಕಾಂತ ಸಿಪಿಸಿ 685 ಶ್ರೀ ಬೀರಣ್ಣಾ ಸಿಪಿಸಿ 1187 ಶ್ರೀ ತುಕರಾಮ ಸಿಪಿಸಿ 219, ಮತ್ತು ಶ್ರೀ ರವಿ ಎಪಿಸಿ 33 ಇವರಿಗೂ ದಾಳಿ ಮಾಡುವ ವಿಷಯ ತಿಳಿಸಿ ನಂತರ ನಾನು ಮತ್ತು ಮಾನ್ಯ ಸಿಪಿಐ ಹಾಗೂ ಪಿ.ಎಸ್.ಐ ಸಾಹೇಬರು ಅವರ ಸಿಬ್ಬಂದಿ ಜನರು ಪಂಚರೊಂದಿಗೆ ಒಂದು ಖಾಸಗಿ ಜೀಪನಲ್ಲಿ ಕುಳಿತು ಎಲ್ಲರೂ ಜೇವರಗಿ ಪೊಲೀಸ್ ಠಾಣೆಯಿಂದ ಸಾಯಂಕಾಲ 6.30 ಗಂಟೆಗೆ ಕೊನಾಹಿಪ್ಪರಗಾ ಗ್ರಾಮದ ಕಡೆಗೆ ಹೊರಟು ರಾತ್ರಿ 7.30 ಗಂಟೆಗೆ ಕೊನಾಹಿಪ್ಪರಗಾ ಬ್ರೀಡ್ಜ್ ಹತ್ತಿರ ಹೋಗಿ ಜೀಪನ್ನು ಗಿಡಗಂಟಿಗಳ ಮರೆಯಾಗಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ನಾವು ಬ್ರೀಡ್ಜ ಹತ್ತಿರ ಗಿಡಗಳ ಮರೆಯಾಗಿ ನಿಂತು ಬಾಟರಿ ಬೇಳಕಿನಲ್ಲಿ ನೊಡಲು ಭೀಮಾ ನದಿಯ ಕಡೆಯಿಂದ ಬರುತ್ತಿದ್ದ ಮರಳು ತುಂಬಿದ ಟಿಪ್ಪರ ಮತ್ತು ಟ್ರ್ಯಾಕ್ಟರಗಳಿಗೆ ನೋಡಿ ಕೈ ಮಾಡಿ ನಿಲ್ಲಿಸಲು ಸದರಿ ಮರಳು ತುಂಬಿ ಟಿಪ್ಪರಗಳ ಚಾಲಕರು ಮತ್ತು ಟ್ರ್ಯಾಕ್ಟರ್ ಚಾಲಕರು ಟಿಪ್ಪರಗಳನ್ನು ಮತ್ತು ಟ್ರ್ಯಾಕ್ಟರಗಳು ನಿಲ್ಲಿಸದೆ ಸ್ವಲ್ಪ ಮುಂದೆ ಬ್ರೀಡ್ಜ ಹತ್ತಿರ ತೆಗೆದುಕೊಂಡು ಹೋಗಿ ನಿಲ್ಲಿಸಿದರು. ಹಾಗೇಯೇ ತರಾತುರಿಯಲ್ಲಿ ಸದರಿ ಟಿಪ್ಪರಗಳ ಮತ್ತು ಟ್ರ್ಯಾಕ್ಟರಗಳ ಚಾಲಕರು ತಮ್ಮ ತಮ್ಮ ವಾಹನಗಳಿಂದ ಇಳಿದು ಕತ್ತಲ್ಲಲಿ ಓಡಿ ಹೋಗುತ್ತಿದ್ದಾಗ ನಾನು ಮತ್ತು ಪೊಲೀಸ ರು ಕೂಡಿ ಅವರ ಹಿಂದೆ ಬೇನ್ನು ಹತ್ತಿ ಹಿಡಯಲು ಇಬ್ಬರೂ ಸಿಕ್ಕಿದ್ದು ಇನ್ನೂ ನಾಲ್ಕು ಡ್ರೈವರ್ ಗಳು ಕತ್ತಲಲ್ಲಿ ಓಡಿ ಹೊದರು  ಸಿಕ್ಕ ಇಬ್ಬರಿಗೆ ಹೆಸರು ವಿಳಾಸ ಕೇಳಲಾಗಿ ಅವರಲ್ಲಿ ಒಬ್ಬನು ತನ್ನ ಹೆಸರು 1] ರವಿ ತಂದೆ ಆಶೋಕ ಜಾದವ ವಯಃ 26 ವರ್ಷ, ಜಾತಿಃ ಲಮಾಣಿ, ಉಃ ಟಿಪ್ಪರ ಡ್ರೈವರ ಕೆಲಸ ಸಾಃ ಕೆಸರಟಗಿ ತಾಂಡಾ, ತಾಃಜಿಃ ಕಲಬುರಗಿ, ಟಿಪ್ಪರ ನಂ ಎಮ್.ಹೆಚ್.-04-ಸಿಯು-5681 ನೇದ್ದರ ಚಾಲಕ ಅಂತಾ ಹೇಳಿದನು, ಮತ್ತೊಬ್ಬನು ತನ್ನ ಹೆಸರು 2] ಲಕ್ಷ್ಮಣ ತಂದೆ ಹೂವಣ್ಣಾ  ಲಕ್ಕಪ್ಪ ವಯಃ 28 ವರ್ಷ, ಜಾತಿಃ ಕಬ್ಬಲಿಗ ಉಃ ಟ್ರ್ಯಾಕ್ಟರ ಡ್ರೈವರ್ ಕೆಲಸ ಸಾಃ ಹೊಳಿ ಸರಡಗಿ ತಾಃಜಿಃ ಕಲಬುರಗಿ ಟ್ರ್ಯಾಕ್ಟರ ನಂ ಕೆ.ಎ.-32- ಟಿ- 9683 ನೇದ್ದರ ಚಾಲಕ ಅಂತಾ ಹೇಳಿದನು ಓಡಿ ಹೊದ ಡ್ರೈವರಗಳ ಹೆಸರು ಕೇಳಲಾಗಿ ಅವರು ನಮಗೆ  ಗೊತ್ತಿರುವುದಿಲ್ಲಾ ಅಂತಾ ತಿಳಿಸಿದರು. ನಂತರ ಟಿಪ್ಪರ ಮತ್ತು ಟ್ರ್ಯಾಕ್ಟರ್  ನಿಂತ ಸ್ಥಳಕ್ಕೆ ಬಂದು ಅಲ್ಲಿದ್ದ ಮರಳು ತುಂಬಿದ ಟಿಪ್ಪರಗಳು ನೊಡಲಾಗಿ 1] ಎಮ್.ಹೆಚ್.-04-ಸಿಯು-5681 ನೇದ್ದರಲ್ಲಿ ಅಂದಾಜು 3 ಬ್ರಾಸ್ ಮರಳು ಅ.ಕಿ. 1500/-ರೂ,ಮತ್ತು ಟಿಪ್ಪರ ಅ.ಕಿ 2,00,000/-ರೂ 2] ಎಮ್.ಹೆಚ್.-04-ಡಿಡಿ-6516 ನೇದ್ದರಲ್ಲಿ  ಅಂದಾಜು 3 ಬ್ರಾಸ್ ಮರಳು ಅ.ಕಿ. 1500/-ರೂ, ಮತ್ತು ಟಿಪ್ಪರ ಅ.ಕಿ 2,00,000/-ರೂ 3] ಕೆ.ಎ-35-ಎ-6175, ನೇದ್ದರಲ್ಲಿ ಅಂದಾಜು 3 ಬ್ರಾಸ್ ಮರಳು ಅ.ಕಿ. 1500/-ರೂ, ಮತ್ತು ಟಿಪ್ಪರ ಅ.ಕಿ 2,00,000/-ರೂ 4] ಕೆ.ಎ.35-6747 ನೇದ್ದರಲ್ಲಿ ಅಂದಾಜು 3 ಬ್ರಾಸ್ ಮರಳು ಅ.ಕಿ. 1500/-ರೂ, ಮತ್ತು ಟಿಪ್ಪರ ಅ.ಕಿ 2,00,000/-ರೂ ಮತ್ತು ಟ್ರ್ಯಾಕ್ಟರ್ ಗಳು ನೊಡಲಾಗಿ 5] ಕೆ.ಎ.32-ಟಿ-9683  ನೇದ್ದರಲ್ಲಿ ಅಂದಾಜು 1 ಬ್ರಾಸ್ ಮರಳು ಅ.ಕಿ. 500/-ರೂ, ಮತ್ತು ಟ್ರ್ಯಾಕ್ಟರ ಅ.ಕಿ 1,50,000/-ರೂ 6] ಕೆ.ಎ-32 ಅಂತಾ ಇದ್ದು ಅದರ ಇಂಜೀನ್ ನಂ 39.1340/ಎಸ್.ಕೆ.ಹೆಚ್.04116  ಚೇಸ್ಸಿ ನಂ ಕ್ಯೂ.ಎಸ್.ಟಿ.ಕೆ31619078845 ನೇದ್ದರಲ್ಲಿ  ಅಂದಾಜು 1  ಬ್ರಾಸ್ ಮರಳು ಟ್ರ್ಯಾಕ್ಟರ ಅ.ಕಿ 1,50,000/-ರೂ ಇದ್ದು ಸದರಿ ಟಿಪ್ಪರಗಳಲ್ಲಿ ಮತ್ತು ಟ್ರ್ಯಾಕ್ಟರಗಳಲ್ಲಿ ಭೀಮಾ ನದಿಯಿಂದ ಮರಳು [ಉಸುಕು] ತುಂಬಿಕೊಂಡು ಸಾಗಾಣಿಕೆ ಮಾಡಲು ನೀಮ್ಮ ಹತ್ತಿರ ಸಂಬಂದಪಟ್ಟ ಇಲಾಖೆಯಿಂದ ಪರವಾನಿಗೆ ಪತ್ರ ರಾಯಲಟೀ ವಗೈರೆ ಇದೇಯೇ ಅಂತಾ ಕೇಳಲಾಗಿ ಅವರು ನಮ್ಮ ಹತ್ತಿರ ಯಾವುದೇ ಪರವಾನಿಗೆ ಪತ್ರ ಮತ್ತು ರಾಯಲ್ಟಿ ಪತ್ರ ಇರುವುದಿಲ್ಲಾ ಕಳ್ಳತನದಿಂದ ಮರಳು ಸಾಗಿಸುತ್ತಿದ್ದೆವೆ ಅಂತಾ ತಿಳಿಸಿದಾಗ ಹೀಗೆ ಎಲ್ಲಾ ಟಿಪ್ಪರಗಳಲ್ಲಿ ಮತ್ತು ಟ್ರ್ಯಾಕ್ಟರ ಗಳಲ್ಲಿ ಸಂಭಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪತ್ರಗಳು ಪಡೆಯದೆ ಕಳ್ಳತನದಿಂದ ಮರಳು (ಉಸಕು) ಸಾಗಿಸುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡ ನಂತರ ಒಟ್ಟು 04 ಟಿಪ್ಪರಗಳಲ್ಲಿ ಮತ್ತು 2 ಟ್ರ್ಯಾಕ್ಟರ ಗಳಲ್ಲಿನ ಒಟ್ಟು 14 ಬ್ರಾಸ್ ಮರಳು ಅ.ಕಿ 7,000/-ರೂ ಕಿಮ್ಮತ್ತಿನದು ಮತ್ತು ಟಿಪ್ಪರಗಳನ್ನು ಟ್ರ್ಯಾಕ್ಟರಗಳನ್ನು ಸ್ಥಳದಲ್ಲಿಯೇ ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಪಡಿಸಿಕೊಳಲಾಯಿತು, ಸದರಿ ಜಪ್ತಿ ಪಂಚನಾಮೆಯನ್ನು ದಿ 13-05-2015 ರಂದು ರಾತ್ರಿ 07.30 ಗಂಟೆಯಿಂದ 08.30 ಗಂಟೆಯವರೆಗೆ ಬ್ಯಾಟರಿ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಬರೆದು ಮುಗಿಸಲಾಯಿತು. ನಂತರ ಪೊಲೀಸ್ ಸಿಬ್ಬಂದಿಯವರ ಸಹಾಯದಿಂದ ಮೇಲೆ ನಮೂದಿಸಿದ ಟಿಪ್ಪರಗಳನ್ನು ಮತ್ತು ಟ್ರ್ಯಾಕ್ಟರಗಳನ್ನು ಹಾಗೂ ಇಬ್ಬರು ಆರೊಪಿತರೊಂದಿಗೆ ಮರಳಿ ಪೊಲೀಸ್ ಠಾಣೆಗೆ ದಿ. 13-05-2015 ರಂದು ರಾತ್ರಿ 11.45 ಗಂಟೆಗೆ ಬಂದು ಮೇಲೆ ನಮೂದಿಸಿದ ಟಿಪ್ಪರಗಳ ಚಾಲಕರ ವಿರುದ್ದ ಮುಂದಿನ ಕಾನೂನು ಕ್ರಮ ಕೈಕೊಳಲು ಜಪ್ತಿ ಪಂಚನಾಮನೆಯೊಂದಿಗೆ ವರದಿ ಸಲ್ಲಿಸಲಾಗಿದೆಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 118/2015 ಕಲಂ 379 ಐಪಿಸಿ ಮತ್ತು 21 (1) ಎಮ್.ಎಮ್.ಆರ್.ಡಿ ಆಕ್ಟ್ 1957 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.