POLICE BHAVAN KALABURAGI

POLICE BHAVAN KALABURAGI

05 September 2017

KALABURAGI DISTRICT PRESS NOTE


KALABURAGI DISRTICT REPORTED CRIMES

ಅಪಘಾತ ಪ್ರಕರಣ :
ಆಳಂದ ಠಾಣೆ : ದಿನಾಂಕ; 25/08/2017 ರಂದು ಆಳಂದದಲ್ಲಿ ಗಣೇಶ ಬಂದೋಬಸ್ತ ಸಲುವಾಗಿ ಕೆ.ಎಸ್‌.ಆರ್‌.ಪಿ, ಸಿ-1 ಪ್ಲಟೂನ್‌ ಆನಂದ ಎ.ಆರ್‌.ಎಸ್‌.ಐ  ಪ್ರಭು ಭೀಮಶ್ಯಾ ಎ.ಆರ್‌.ಎಸ್‌.ಐ , ಜಯಪ್ರಕಾಶ ಎ.ಆರ್‌.ಎಸ್‌.ಐ, ಹೊಸಗೌಡ ಎ.ಆರ್‌.ಎಸ್‌.ಐ, ಮತ್ತು ಪ್ರಭು ಧನಂಜಯ ಎ.ಆರ್‌.ಎಸ್‌.ಐ ಮತ್ತು ಇತರರೊಂದಿಗೆ ಕರ್ತವ್ಯಕ್ಕೆ ಬಂದಿರುತ್ತಾನೆ. ದಿನಾಂಕ: 04/09/2017 ರಂದು ರಾತ್ರಿ 9-15 ಸುಮಾರಿಗೆ ಅನಿಲ್‌ ಈತನು ತನ್ನ ಸಹವರ್ತಿಗಳೊಂದಿಗೆ ಕರ್ತವ್ಯದ ಮೇಲೆ ಜಿಡಗಾ ಓ.ಪಿ ಠಾಣೆಗೆ ಊಟಕ್ಕೆ ಹೋಗಿದ್ದನು. ನಂತರ ದಿನಾಂಕ: 05/09/2017 ರಂದು 12-30 ಘಂಟೆಗೆ ನನ್ನ ಮೈದುನನ ಮಗನಾದ ಶ್ರೀ.ಶಿವಪುತ್ರ ನಡಗೇರಿ ಈತನು ಪೋನ್‌ ಮಾಢಿ ವಿಷಯ ತಿಳಿಸಿದ್ದೇನೆಂದರೆ ದಿನಾಂಕ; 04/09/2017 ರಂದು ರಾತ್ರಿ 10-15 ಪಿಎಮ್‌ ದಿಂದ 10-30 ಪಿಎಮ್‌ ಮದ್ಯದ ಅವಧಿಯಲ್ಲಿ ಅನಿಲ್‌ ಈತನು ಮೋಟಾರ್‌ ಸೈಕಲ್‌ ನಂ: ಕೆ.ಎ-04-ಹೆಚ್‌.ಪಿ-9509 ನೇದ್ದರ ಮೇಲೆ ಜಿಡಗಾ ಕಡೆಯಿಂದ ಆಳಂದ ಕಡೆಗೆ ಬರುವಾಗ ವಾಘ್ದರಿ ರೋಡಿನ ಜಿಡಗಾ ಕಮಾನ ಹತ್ತಿರ ಮೋಟಾರ್‌ ಸೈಕಲ್‌ ಮೇಲಿಂದ ಬಿದ್ದು ತಲೆಗೆ, ಎದೆಗೆ ಬಾಯಿಗೆ ಮೂಗಿಗೆ ಭಾರಿ ರಕ್ತ ಗಾಯ ಮತ್ತು ಗುಪ್ತಗಾಯವಾಗಿ ಬೇಹೋಷ್‌ ಆಗಿ ರೋಡಿನ ಪಕ್ಕದಲ್ಲಿ ಬಿದ್ದಿದ್ದನು. ಅದನ್ನು ಜಿಡಗಾ ಒ.ಪಿ ಠಾಣೆಯ ಕರ್ತವ್ಯ ಮುಗಿಸಿಕೊಂಡು  ಆಳಂದ ಕಡೆಗೆ ಬರುತ್ತಿದ್ದ ನಾಗೇಂದ್ರಪ್ಪ ಹೆಚ್‌ಸಿ ರವರು ನೋಡಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಆಳಂದಕ್ಕೆ ತಂದಿರುತ್ತಾರೆ. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾನೆ ಎಂದು ತಿಳಿಸಿರುತ್ತಾರೆ. ಎಂದು ನನಗೆ ತಿಳಿಸಿದ್ದು ನಾನು ಕೂಡ ಬಂದು ನೋಡಲಾಗಿ ಘಟನೆ ನಿಜವಿರುತ್ತದೆ ಎಂದು ತಿಳಿಸಿದ ಮೇರೆಗೆ ನಾನು ಗಾಬರಿ ಬಿದ್ದು ಆಸ್ಪತ್ರೆಗೆ ಬಂದು ನೋಡಲು ನನ್ನ ಮಗನ ಎಡ ಕೈ ಮುರಿದು ಭಾರಿ ಗಾಯವಾಗಿ ಎದೆಗೆ, ಬಾಯಿಗೆ ಮತ್ತು ತಲೆಗೆ ಭಾರಿಗಾಯವಾಗಿ ಮೃತಪಟ್ಟಿದ್ದನು. ನಂತರ ವಿಷಯ ಗೊತ್ತಾಗಿದ್ದೇನೆಂದರೆ ಆನಂದ ಎ.ಆರ್‌.ಎಸ್‌.ಐ ರವರು ನನ್ನ ಮಗ ಅನಿಲ್‌ ಈತನಿಗೆ ದಿನಾಂಕ: 04/09/2017 ರಂದು ರಾತ್ರಿ 10-00 ಘಂಟೆಗೆ ಆಳಂದ ಪೊಲೀಸ್ ಠಾಣೆಗೆ ಹೋಗಿ ಆಳಂದ ಪಟ್ಟಣದಲ್ಲಿ ನಾಳೆಯ ಗಣೇಶ ಬಂದೋಬಸ್ತ ಕರ್ತವ್ಯದ ಕುರಿತು ಮಾಹಿತಿ ತಿಳಿದುಕೊಂಡು ಬರಲು ಕಳುಹಿಸಿದ್ದರಿಂದ ಅನಿಲ್‌ ಈತನು ಪಲ್ಸರ್‌ ಮೋಟಾರ್‌ ಸೈಕಲ್‌ ನಂ; ಕೆ.ಎ-04-ಹೆಚ್‌ಪಿ-9509 ಇದರ ಮೇಲೆ ಆಳಂದ ಕಡೆಗೆ ಬರುವಾಗ ವಾಗದರಿ ರೋಡಿನ ಜಿಡಗಾ ಕಮಾನ ಹತ್ತಿರ ಬರುವಾಗ ತನ್ನ ವಶದಲ್ಲಿದ್ದ ಮೋಟಾರ್ ಸೈಕಲ್‌ನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುವಾಗ ನಿಯಂತ್ರಣ ತಪ್ಪಿ ರೋಡಿನ ಪಕ್ಕ ತಗ್ಗಿನಲ್ಲಿ ಮೋಟಾರ್‌ ಸೈಕಲ್‌ ಸಮೇತ ಬಿದ್ದು ಬಾರಿ ಗಾಯ ಹೋಂದಿ ಮೃತಪಟ್ಟಿರುತ್ತಾನೆ. ಎಂದು ವಿಷಯ ಗೊತ್ತಾಗಿರುತ್ತದೆ. ಅಂತಾ ಶ್ರೀಮತಿ.ಕಳಸಾಬಾಯಿ ಗಂಡ ಪರಮೇಶ್ವರ ನಡಗೇರಿ ಸಾ; ಭೀಮನಗರ ಆಳಂದ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಅಬ್ದುಲ ಲತೀಫ್ ಪಟೇಲ ತಂದೆ ಅಬ್ದುಲ ಹಮ್ಮಿದ ಪಟೇಲ ಸಾ: ಅಫಜಲಪೂರ ರವರ ದಿನಾಂಕ 03-09-2017 ರಂದು ಮಧ್ಯಾಹ್ನ ಅಫಜಲಪೂರ ಸೀಮಾಂತರದ ಮಹಿಬೂಬ ಪಟೇಲ ತಂದೆ ಸತ್ತಾರ ಪಟೇಲ  ಇವರ ಹೊಲದ ಮನೆಯಲ್ಲಿ ಬಕ್ರೀದ ಹಬ್ಬದ ನಿಮಿತ್ಯ ಶಾಂತಿ ಸೌಹಾರ್ದತೆ ಸಭೆ ನಡೆಯುತ್ತಿತ್ತು ರೌಫಫಟೇಲ ತಂದೆ ಫಪ್ಜರಪಟೇಲ ಅಧ್ಯಕ್ಷತೆ ವಹಿಸಿದ್ದರು. ನಾನು ಸಭೆಯ ಗೌರವ ಅಧ್ಯಕ್ಷ ಸ್ಥಾನ ವಹಿಸಿದ್ದೆ ಸಮಯದಲ್ಲಿ ಎಲ್ಲಾ ನಮ್ಮ ಜನಾಂಗದ ಸಲಹೆ ಸೂಚನೆ ಹಾಗೂ ತೊಂದರೆಗಳ ಬಗ್ಗೆ ಚರ್ಚಿಸಲಾಗುತ್ತಿತ್ತು. ಸಮಯದಲ್ಲಿ ಅಲ್ತಾಫ್ ಪಟೇಲ ತಂದೆ ಅಬ್ದುಲ ರಜಾಕ ಪಟೇಲ, ಪಪ್ಪು ಪಟೇಲ  ತಂದೆ ಅಬ್ದುಲ ರಜಾಕ ಪಟೇಲ, ಚಿಂಟು ಪಟೇಲ @ ಅಶ್ರಾಫ್ ಪಟೇಲ ತಂದೆ ಅಬ್ದುಲ ರಜಾಕ ಪಟೇಲ ಹಾಗೂ ಇತರರು ಸಾ: ಎಲ್ಲರೂ ಅಫಜಲಪೂರ ಇವರು ಕೂಡಿಕೊಂಡು ನನ್ನ ಮೇಲೆ ಬಡಿಗೆ, ಹಾಗೂ ಬಾಟಲಿಗಳಿಂದ ಎರಡು ಮುಂಡಿಗೆ, ಹೊಟ್ಟೆಯ ಮೇಲೆ, ಮೋಣಕಾಲು ಮೇಲೆ ಹೊಡೆದು ಹಾಗೂ ಬಾಯಿ ಮೇಲೆ ಹೊಡೆದಿದ್ದು ಹಲ್ಲು ಅಳುಗಾಡುತ್ತಿದ್ದು ಗುಪ್ತಗಾಯ ಪಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಅಲ್ಲದೇ ಪಪ್ಪುಪಟೇಲ ಹಾಗೂ ಅಲ್ತಾಫ್ ಪಟೇಲ ಕೂಡಿಕೊಂಡು ಅವರಲ್ಲಿದ್ದ ರೀವಾಲ್ ವಾರ ತಗೆದು ನನಗೆ ತೋರಿಸಿ ನಿನ್ನ ಜೀವ ತಗೆಯುತ್ತೇವೆಂದು ಬದರಿಸಿದರು ಹಾಗೂ ಅಲ್ಲಿಯೇ ಇದ್ದ ನನ್ನ ಮಗ ಮಾಜೀದ ಪಟೇಲ, ಮೋಸಿನ್ ಪಟೇಲ, ಮತೀನ ಪಟೇಲ, ರೌಫ್ ಪಟೇಲ ಹಾಗೂ ಸಂತೋಷ ಬಳೂರ್ಗಿ ಹಾಗೂ ಅಸ್ಪಾಕ್ ಪಟೇಲ ಇವರೆಲ್ಲರೂ ಬಂದು ಬಿಡಿಸಿದರು ಇಲ್ಲದಿದ್ದರೆ ಅವರೆಲ್ಲರೂ ಕೂಡಿ ನನ್ನನ್ನು ಕೊಲೆ ಮಾಡಿಯೇ ಬಿಡುತ್ತಿದ್ದರು.  ಆರೋಪಿಗಳ ಬೀಗರಾದ ಶೀರಾಜ್ ಪಟೇಲ ಇವರು ಬನ್ನೆಟ್ಟಿಯಲ್ಲಿ ಮರಳಿನ ಟೆಂಡರ ತಗೆದುಕೊಂಡಿದ್ದು ಅವರು ಮರಳು ಸಾಗಾಣಿಕೆ ಮಾಡುವ ವಾಹನಗಳು ನಮ್ಮ ಹೊಲದಲ್ಲಿಯೇ ಹಾದು ಹೋಗುತ್ತಿದ್ದವು ನಮ್ಮ ಹೊಲದಲ್ಲಿಯ ಬೆಳೆಗಳು ಹಾಳಾಗುವುದರಿಂದ ನನಗೆ ಪರಿಹಾರವಾಗಿ ನನ್ನಗೆ ತಿಂಗಳಿಗೆ ಇಂತಿಷ್ಟು ಹಣ ಕೊಡುತ್ತೇವೆಂದು ಹೇಳಿದ್ದರು ಅದರ ಪ್ರಕಾರ ಅವರು ಮಾತನಾಡಿದಂತೆ ನನಗೆ ಕೊಡಬೇಕಾದ ಹಣ ಕೊಟ್ಟಿರಲಿಲ್ಲ ಅದನ್ನು ಕೇಳಿದಕ್ಕೆ ರೀತಿಯಾಗಿ ನನ್ನ ಮೇಲೆ ಹಲ್ಲೆ ಮಾಡಿ ಗುಪ್ತಗಾಯ ಪಡೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿ ಹಾಗೂ ಘಟನೆಗೂ ಮುಂಚೆ ಬೆಳಿಗ್ಗೆ 10:30 ರಿಂದ 11:00 ಗಂಟೆಯವರೆಗೆ ನಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ನನ್ನ ಹೆಂಡತಿ ಶಕೀರಾ ಬಾಬು ಹಾಗೂ ಮಗಳು ಶೀಪಾ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನ ಗಂಡ ಎಲ್ಲಿದ್ದಾನೆ ನಮಗೆ ದುಡ್ಡು ಕೇಳಿದರೆ ಜೀವ ಸಹಿತ ಖಲಾಸ ಮಾಡುತ್ತೇವೆಂದು ರಂಡಿ, ಭೋಸಡಿ  ಎಂದು ಅವರಿಗೆ ಬೈದು ಅವರಿಗೆ ಜೀವ ಭಯ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಫಜಲಪೂರ ಠಾಣೆ : ದಿನಾಂಕ 06-08-2017ಗ ರಂದು ಶ್ರೀ ಬಸವರಾಜ ತಂದೆ ವಿಠಲಗೌಡಾ ಪಾಟೀಲ ಸಾ : ಅಫಜಲಪೂರ ರವರ ಹೆಂಡತಿಯ ಹೆಸರಲ್ಲಿಯ ಸರ್ವೇ ನಂ 126/2 ಕ್ಕೆ ಹೋದಾಗ ಶರಣಗೌಡ ತಂದೆ ವಿಠಲಗೌಡಾ ಪಾಟೀಲ ಸಂಗಡ 6 ಜನರು ಸಾ : ಎಲ್ಲರು ಆರೋಪಿ 1 ರಿಂದ 7 ರವರು ಹೊಲದಲ್ಲಿ ಅತೀಕ್ರಮ ಪ್ರವೇಶಸಿ ಈಗಾಗಲೇ ದಾಖಲಿಸಿರುವ ಗುನ್ನೆ ನಂ 109/2017 ನ್ನು ಮರಳಿ ಪಡೆಯಲು ಜೀವ ಬೇದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ  ಹಲ್ಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.