POLICE BHAVAN KALABURAGI

POLICE BHAVAN KALABURAGI

18 October 2013

Gulbarga District Reported Crimes

ಹಲ್ಲೆ ಪ್ರಕರಣ :
ಮಳಖೇಡ ಠಾಣೆ : ಶ್ರೀ ಮೀರಾಜ ಪಟೇಲ ತಂದೆ ಇಸ್ಮಾಯಿಲ ಪಟೇಲ ಸಾ : ಬೀರನಳ್ಳಿ ದಿನಾಂಕ 17-10-13 ರಂದು  08:30 ಪಿ.ಎಮ್ ಕ್ಕೆ ತನ್ನ ಗ್ರಾಮದ ಭಾರತ ಕಟ್ಟೆಯ ಹತ್ತಿರ ನಿಂತಿದ್ದಾಗ 1) ಶಾಹೀದ ತಂದೆ ಖಾಜಾಮೀಯಾ  2) ಜಾವಿದ ತಂದೆ ಖಾಜಾಮೀಯಾ  3) ತೋಹಿದ ತಂದೆ ಖಾಜಾಮೀಯಾ  4) ಮಹೇಬೂಬ ತಂದೆ ಖಾಜಾಮೀಯಾ  5) ಮಹೇಮೂದ್ ತಂದೆ ಗುಲಾಮೋದ್ದಿನ್  6) ಯಾಶೀನ ತಂದೆ ಗುಲಾಮೋದ್ದಿನ್ 7) ಜಿಲಾನಿ ತಂದೆ ಯಾಜದಾನಿ 8) ಟೀಪು ತಂದೆ ಯಾಜದಾನಿ ಸಾ||ಎಲ್ಲರು ಬೀರನಳ್ಳಿ ಗ್ರಾಮ ತಾ|| ಸೇಡಂ  ಕೂಡಿಕೊಂಡು ಅಕ್ರಮ ಕೂಟರಚಿಸಿಕೊಂಡು ಬಂದು ಫಿರ್ಯಾದಿದಾರನಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ-ಬಡೆ ಮಾಡಿ ದುಃಖಾಪಾತ ಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಸೂರ್ಯಕಾಂತ ತಂದೆ ಯಲ್ಲಪ್ಪ ಯಲ್ಮಾಮಡಗಿ ಸಾ: ರಾಣಾಪೂರ ರವರು ದಿನಾಂಕ 18-10-2013 ರಂಧು 11.30 ಗಂಟೆಗೆ  ಚಿಂಚೊಳಿಯಿಂದ ಚಂದಾಪೂರದ ಕಡೆಗೆ ಒಂದು ಆಟೋ ನಂ ಕೆ ಎ 32 ಎ 5482 ನೇದ್ದರ ಆಟೋದಲ್ಲಿ  ತಾನು ತನ್ನ ಹೆಂಡತಿ ಮತ್ತು ನನ್ನ ತಾಯಿ ಕುಡಿಕೊಂಡು ಆಟೋದಲ್ಲಿ ಹೋಗುತ್ತಿದ್ದಾಗ  ಶ್ರೀ ದೂಲಪ್ಪ ದೋಡ್ಮನಿ ರವರ ಮನೆಯ ಹತ್ತಿರ  ಚಾಲಕನು ತನ್ನ ಆಟೋವನ್ನು ಅತೀ ವೇಗದೀಮದ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ಕೊಂಡು  ರಸ್ತೆಯ ಬಲಬದಿ  ನಾಲೆಯಲ್ಲಿ ಪಲ್ಟಿಮಾಡಿ  ನಮ್ಮ ಎಲ್ಲರೀಗೂ ರಕ್ತ ಮತ್ತು ತರಿಚಿ ಭಾರಿ ಗಾಯ ಗೋಳಿಸಿ ತನ್ನ ಆಟೋವನ್ನು ಅಲ್ಲೆ ಬಿಟ್ಟು ಚಾಲಕನಾದ ಕುಮಾರ ತಂಧೆ  ಬಿಮರಾವ್ ಪವಾರ ಎಂಬುವವನು ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಇಸ್ಪೀಟ ಜುಜಾಟದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 17-10-2013 ರಂದು 4:00 ಪಿ.ಎಂ ಕ್ಕೆ ಎಂ.ಬಿ ನಗರ ಠಾಣಾ ಸರಹದ್ದಿನಲ್ಲಿ ಬರುವ ಹರಳಯ್ಯ ಸಮಾಜದಲ್ಲಿರುವ  ಸಾರ್ವಜನಿಕರ ಗಾರ್ಡನ್ ದಲ್ಲಿ ದುಂಡಾಗಿ ಕುಳಿತು ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಹಣಕ್ಕೆ ಪಣ ಹಚ್ಚಿ ಆಡುತ್ತಿದ್ದ ಬಗ್ಗೆ ಖಚಿತವಾದ ಬಾತ್ಮಿ  ಮೇಲೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ 1) ಪ್ರವೀಣ ತಂದೆ ಬಸವರಾಜ್ ಪಾಟೀಲ್  ಸಾಃ ಜಗತ್ ಗುಲಬರ್ಗಾ 2)  ರೇವಣಸಿದ್ದಯ್ಯ ತಂದೆ ಗಂಗಾಧರ ಹಿರೇಮಠ ಸಾಃ ಮಕ್ತಂಪುರ್ ಗುಲಬರ್ಗಾ 3) ಮನೋಹರ್ ತಂದೆ ಗಣಪತಿ ರಾಥೋಡ್   ಸಾಃ ಶ್ರೀನಿವಾಸ ಸರಡಗಿ ಗುಲಬರ್ಗಾ 4) ಶಂಕರ್ ತಂದೆ ನರಸಿಮಗ್ ರಾಥೋಡ್  ಸಾಃ ಶ್ರೀನಿವಾಸ ಸರಡಗಿ ಗುಲಬರ್ಗಾ 5) ಗುರು ತಂದೆ ಸಿದ್ದಲಿಂಗಪ್ಪ ಬರಾಣಪುರ್  ಸಾಃ ಹನುಮಾನ್ ನಗರ್ ತಾಂಡಾ ಗುಲಬರ್ಗಾ 05 ಜನರನ್ನು ಹಿಡಿದು 05 ಜನ ಆರೋಪಿತರಿಂದ ಹಾಗು ಸ್ಥಳದಲ್ಲಿ ಹೀಗೆ ಒಟ್ಟು 15930/- ರೂ.  ಹಾಗು 52 ಇಸ್ಪೇಟ್ ಎಲೆಗಳು ಪಂಚರ ಸಮಕ್ಷಮ 5.00 ಪಿ.ಎಂ. ದಿಂದ 6:00 ಪಿ.ಎಂ.. ರವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು 05 ಜನ ಆಪಾದಿತರನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ಬಂದು ಆರೋಪಿತರು, ಮುದ್ದೆ ಮಾಲು & ಜಪ್ತಿ ಪಂಚನಾಮೆಯೊಂದಿಗೆ ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ ಎಮ್. ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ 16-07-2013 ರಂದು ಸಂಜೆ 07.00 ಗಂಟೆಯ ಸುಮಾರಿಗೆ ನಯಾ ಮೋಹಲ್ಲಾ ಸಿದ್ದಿಕಿಪುರ ಮಜೀದ ಹತ್ತಿರ ಇರುವ ಶ್ರೀ ಲಾಲ ಪಟೇಲ ತಂದೆ ಹಸನ ಪಟೇಲ,  ಸಾಃ ಸಿದ್ದಿಕಿಪೂರ ಸಿದ್ದಿಕಿ ಮಜೀದ ಹತ್ತಿರ ನಯಾ ಮೊಹಲ್ಲಾ ಗುಲಬರ್ಗಾ ರವರ ಮನೆಯ ಮುಂದೆ ಫಿರ್ಯಾದಿಯ ಮಗಳಾದ ಕುಮಾರಿ ಸುಹಾನಾ ವ || 3 ವರ್ಷ ಇವಳು ಆಟವಾಡುತ್ತಿದ್ದಾಗ ಆರೋಪಿತನು ತನ್ನ ಮೋಟಾರ ಸೈಕಲ ನಂಬರ ಕೆಎ 32 ಎಲ್ 9093 ನೇದ್ದನ್ನು ಜವಾಹರ ಹಿಂದ್ ಸ್ಕೂಲ್ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸುಹಾನಾ ಇವಳಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಎಡಗಾಗೆ ಭಾರಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರಾಹುಲ ತಂದೆ ಸಂಗಣ್ಣಾ ಹಾಲಕಾಯಿ   ಗುಲಬರ್ಗಾ ರವರು ದಿನಾಂಕ: 17-10 2013  ರಂದು  4=30  ಪಿ.ಎಮ್.ಕ್ಕೆ ಡಿ.ಎ.ಆರ್. ಹೆಡ್ ಕ್ವಾಟರ್ಸ ಮೇನ ಗೇಟ ದಿಂದ ಹಳೆ ಡಿ.ಪಿ.ಓ ಕ್ರಾಸ್ ರೋಡ ಕಡೆಗೆ ತನ್ನ ಕಾರ ನಂ;ಕೆಎ 32 ಎಮ್  8663  ನೆದ್ದನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ  ಕ್ರೋಜರ ಜೀಪ ನಂ: ಎಮ್ ಹೆಚ 04 ಬಿಕ್ಯೂ 9723 ರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಫಿರ್ಯಾದಿ ಕಾರಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಕ್ರೋಜರ ಒಳಗೆ ಕುಳಿತ್ತಿದ್ದ ಪ್ರಯಾಣಿಕ ಮಾರುತಿ ಈತನಿಗೆ ಗಾಯಗೊಳಿಸಿ ಕಾರಿಗೆ ಜಕಂ ಮಾಡಿ ಚಾಲಕ ಹೊರಟು ತನ್ನ ವಾಹನದೊಂದಿಗೆ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾಆರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.