POLICE BHAVAN KALABURAGI

POLICE BHAVAN KALABURAGI

20 August 2016

Kalaburagi District Press Note

ಪತ್ರಿಕಾ ಪ್ರಕಟಣೆ

ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಪೊಲೀಸ್ ಸುಧಾರಣೆಗೆ ಸಂಬಂದಿಸಿದಂತೆ, ರಾಜ್ಯ ಮಟ್ಟದಲ್ಲಿ ರಾಜ್ಯ ಪೊಲೀಸ್ ದೂರುಗಳ ಪ್ರಾದಿಕಾರ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪೊಲೀಸ್ ಪ್ರಾಧಿಕಾರವನ್ನು ರಚಿಸಲು ಮಂಜೂರಾತಿ ನೀಡಿ ಸರ್ಕಾರದ ಆದೇಶ ಸಂಖ್ಯೆ: ಹೆಚ್.ಡಿ/150/ಪೊಸಿಇ/2014  ದಿನಾಂಕ: 20/10/2014 ರಂದು ಆದೇಶ ಹೊರಡಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಪೊಲೀಸ್ ದೂರುಗಳ ಪ್ರಾಧಿಕಾರ ದಿನಾಂಕ 17/03/2015 ರಂದು ರಚನೆಯಾಗಿರುತ್ತದೆ. ಕಲಬುರಗಿ ಜಿಲ್ಲಾ ದೂರು ಪ್ರಾಧಿಕಾರವು ಈ ಕೆಳಕಂಡ ಪದಾಧಿಕಾರಿಗಳನ್ನು ಹೊಂದಿರುತ್ತದೆ.
1] ಜಿಲ್ಲಾಧಿಕಾರಿ ಕಲಬುರಗಿ ಜಿಲ್ಲೆ  ಕಲಬುರಗಿ                                    ಅದ್ಯಕ್ಷರು,               
2] ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ಕಲಬುರಗಿ                           ಸದಸ್ಯ ಕಾರ್ಯದರ್ಶಿಗಳು
3] ಎಸ್.ಜಿ.ವಾಲಿ ನಿವೃತ್ತ ಕೆ.ಎ.ಎಸ್. ಅಧಿಕಾರಿಗಳು ಕಲಬುರಗಿ ಜಿಲ್ಲೆ           ಸದಸ್ಯರು,
ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರವು ಡಿ.ವೈ.ಎಸ್.ಪಿ ಮತ್ತು ಕೆಳಗಿನ ಹಂತದ ಪೊಲೀಸ್ ಅಧಿಕಾರಿ/ ಸಿಬ್ಬಂದಿರವರುಗಳ ವಿರುದ್ದ ಪೊಲೀಸ್ ಅಭಿರಕ್ಷೆಯಲ್ಲಿ ನಡೆದ ಸಾವು, ತೀವೃ ಸ್ವರೂಪದ ಗಾಯ ಅಥವಾ ಅತ್ಯಾಚಾರದ ದೂರಿನ ಬಗ್ಗೆ ವಿಚಾರಣೆ ಮಾಡಬಹುದಾಗಿದೆ. ಇದಕ್ಕೆ ಸಂಬಂದಿಸಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ, ವೃತ್ತ ಕಛೇರಿ ಹಾಗೂ ಉಪ ವಿಭಾಗಗಳ ಕಛೇರಿಯ ಮುಂಭಾಗದಲ್ಲಿ ಶಾಶ್ವತ ಫಲಕಗಳನ್ನು ಈಗಾಗಲೇ ಅಳವಡಿಸಲಾಗಿದೆ. ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಅರ್ಜಿಯನ್ನು ಜಿಲ್ಲಾಧಿಕಾರಿ ರವರ ಕಛೇರಿ ಹಾಗೂ ಪೊಲೀಸ ಅಧೀಕ್ಷಕರು ರವರ ಕಛೆರಿ ಕಲಬುರಗಿ ರವರಿಗೆ ಸಲ್ಲಿಸಬಹುದಾಗಿದೆ. ಮತ್ತು ರಾಜ್ಯ ಪೊಲೀಸ ದೂರುಗಳ ಪ್ರಾಧಿಕಾರದಿಂದ ಸಾರ್ವಜನಿಕರಿಗಾಗಿ ವೆಬ್ ಸೈಟ್ ಪ್ರಾರಂಬಿಸಲಾಗಿರುವ www.karnataka.gov.in/spca ಆಗಿದ್ದು, ಸಾರ್ವಜನಿಕರು ಇದನ್ನು ವೀಕ್ಷಿಸಬಹುದಾಗಿದೆ. ಅದೇ ರೀತಿ ಕಲಬುರಗಿ ಜಿಲ್ಲಾ ದೂರುಗಳ ಪ್ರಾಧಿಕಾರದ ಇ-ಮೇಲ್ ವಿಳಾಸ dpcagba@karnataka.gov.in ಮುಖಾಂತರ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಅರ್ಜಿಯನ್ನು ಇದರಿಲ್ಲಿಯೂ ಸಹ ಸಲ್ಲಿಸಬಹುದಾಗಿದೆ.
                                                                                              ಸಹಿ/-
                                                                                      ಪೊಲೀಸ್ ಅಧೀಕ್ಷಕರು,
                                                                                            ಕಲಬುರಗಿ.

Kalaburagi District Reported Crimes

ಅಪಘಾತ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ನರಸಮ್ಮ ತಂದೆ ಮಾಣಿಕಪ್ಪ ಆಕುಲ ಸಾ|| ಹುಲಿಗುಂಡಂ ಮಂಡಲ|| ದಾಮರಗಿಡ್ಡ ರಾಜ್ಯ|| ತೆಲಂಗಾಣ ಇವರು ಹಾಗೂ ನಮ್ಮೂರ 1) ಬಸಮ್ಮ ಗಂಡ ರಾಮಪ್ಪ ಕುರುಬರು 2) ಯಂಕಟಮ್ಮ ಗಂಡ ಆಶಪ್ಪ ಕುರುಬರು 3) ಕವೀತಾ ತಂದೆ ಶಾಮುಲು ಕಡ್ಡಮೊಳ 4) ನರಸಮ್ಮ ಗಂಡ ಹಣಮಂತ ದಾನಪ್ಪೊಲ್ 5) ಅನಂತಮ್ಮ ಗಂಡ ಸಾಯಲಪ್ಪ ಪೊಗುಲೊಲ 6) ಮಾಣೇಮ್ಮ ಗಂಡ ಬುಗ್ಗಪ್ಪ ಕುರುಬರು 7) ಮದರಮ್ಮ ಗಂಡ ನರಸಿಂಹಲು ಚನ್ನಪೊಳ 8) ಮೊಗಲಮ್ಮ ಗಂಡ ಸಾಯಪ್ಪ ಕುರುಬರು 9) ಸಾವಿತ್ರಮ್ಮ ಗಂಡ ಶ್ರೀನಿವಾಸ ಸಾಕಲಿ 10) ಕೀಷ್ಟಮ್ಮ ಗಂಡ ಲಾಲಪ್ಪ ಕುರುಬರು 11) ಮಾಣಿಕಮ್ಮ ಗಂಡ ಮಾಣಿಕಪ್ಪ ಆಕಲೊಲ ಎಲ್ಲರೂ ಕೂಡಿ ಇಂದು ದಿನಾಂಕ 19.08.16 ರಂದು ಮುಂಜಾನೆ 11:30 ಗಂಟೆ ಸುಮಾರಿಗೆ ನಮ್ಮೂರದಿಂದ ಶೀಲಾರಕೊಟ ಗ್ರಾಮದ ಚಂದ್ರಮ್ಮ ಕಬ್ಬಲಿಗೇರ ಇವರ ಹೊಲಕ್ಕೆ ಹೆಸರಿನಕಾಯಿ ಬಿಡಿಸಲು ಹೋಗಿದ್ದೇವು ಸಾಯಂಕಾಲ 6:30 ಗಂಟೆಯವರೆಗೆ ಹೊಲದಲ್ಲಿ ಕೂಲಿ ಕೆಲಸ ಮಾಡಿ ನಂತರ ನಮಗೆ ಹೊಲದ ಮಾಲಿಕರು ಒಂದು ಟಂ ಟಂ ಅಟೋ ನಂಬರ ಟಿ ಎಸ್-06, ಯು ಎ-3155 ನೇದ್ದರಲ್ಲಿ ಶೀಲಾರಕೊಟದಿಂದ ನಮ್ಮೂರಿಗೆ ಬಿಟ್ಟು ಬರಲು ಕಳುಹಿಸಿದ್ದು ನಾವು ಎಲ್ಲಾ 12 ಜನರು ಸದರಿ ಟಂ ಟಂ ಅಟೋದಲ್ಲಿ ಕುಳಿತು ನಮ್ಮೂರಿಗೆ ಬರುತ್ತಿದ್ದಾಗ ಕೊಡಂಗಲದಿಂದ ಗುರುಮಿಠಕಲಗೆ ಹೋಗುವ ಮುಖ್ಯ ರಸ್ತೆಯಲ್ಲಿ ಅಂತಾರಮ್ ಗೇಟ ಹತ್ತಿರ ರಸ್ತೆಯ ಎಡಬದಿಯಿಂದ ಹೊಗುತ್ತಿದ್ದಾಗ ಇಂದು ರಾತ್ರಿ 7 ಗಂಟೆ ಸುಮಾರಿಗೆ ಎದುರುಗಡೆಯಿಂದ ಅಂದರೆ ಗುರುಮಿಠಕಲ್ ಕಡೆಯಿಂದ ಒಂದು ಕಾರನ ಚಾಲಕನು ತನ್ನ ಕಾರನ್ನು ಅತೀ ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯಿಂದ ಹೋಗುತ್ತಿದ್ದ ನಮ್ಮ ಅಟೋಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದು ಇದರಿಂದ ನಮ್ಮ ಅಟೋ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದು ನಾವು ಎಲ್ಲರೂ ಕೆಳಗಡೆ ಬಿದ್ದಿದ್ದು ಆಗ ರಸ್ತೆಯಿಂದ ಹೋಗಿ ಬರುವ ಜನರು ನಮಗೆ ಅಟೋದಿಂದ ಹೊರಗೆ ತೆಗೆದು ನೊಡಲಾಗಿ ನನಗೆ ಎರಡು ಕಾಲುಗಳಿಗೆ ತೊಡೆಗೆ ಹಾಗೂ ಬಲಮಗ್ಗಲಿಗೆ ಗುಪ್ತಗಾಯವಾಗಿದ್ದು ಅಲ್ಲದೆ ಉಳಿದ ಜನರಾದ 1) ಬಸಮ್ಮ 2) ಯಂಕಟಮ್ಮ 3) ಕವೀತಾ 4) ನರಸಮ್ಮ 5) ಅನಂತಮ್ಮ 6) ಮಾಣೇಮ್ಮ 7) ಮದರಮ್ಮ 8) ಮೊಗಲಮ್ಮ 9) ಮಾಣಿಕಮ್ಮ 10) ಕೀಷ್ಟಮ್ಮ ಇವರುಗಳಿಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು 1) ಸಾವಿತ್ರಮ್ಮ ಗಂಡ ಶ್ರೀನಿವಾಸ ಸಾಕಲಿ ಇವಳು ತಲೆಗೆ ಹಾಗೂ ಇತರೆ ಕಡೆ ಭಾರಿ ಗಾಯಹೊಂದಿ ಅಲ್ಲೆ ಸ್ಥಳದಲ್ಲಿಯೆ ಮೃತಪಟ್ಟಿದ್ದು ನಮ್ಮ ಎಲ್ಲಾ ಗಾಯಾಳುದಾರರಿಗೆ ನಮ್ಮೂರ ವಿಜಯರಾವ ಕುಲಕರ್ಣಿ ಹಾಗೂ ಅಟೋ ಚಾಲಕ ಮಹೇಶ ತಂದೆ ತಿಪ್ಪಣ್ಣ ಹಾಗೂ ಇತರರೂ ಕೂಡಿ 108 ಅಂಬುಲೇನ್ಸನಲ್ಲಿ ಹಾಗೂ ಜೀಪನಲ್ಲಿ ಹಾಕಿ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆ ಗುರುಮಿಠಕಲ್ ಗೆ ಸೇರಿಕೆ ಮಾಡಿದ್ದು ಇರುತ್ತದೆ. ಇದರಲ್ಲಿ 2) ಕಿಷ್ಟಮ್ಮ ಗಂಡ ಲಾಲಪ್ಪ ಕುರುಬರು ಹಾಗೂ 3) ಮಾಣಿಕಮ್ಮ ಗಂಡ ಮಾಣಿಕಪ್ಪ ಆಕಲೊಲ ಇವರುಗಳಿಗೆ ಕಾಲು ಮುರಿದು ಭಾರಿಗಾಯಗಳಾಗಿ ಗುರುಮಿಠಕಲ್  ಆಸ್ಪತ್ರೆಗೆ ತಂದು ಸೇರಿಕೆ ಮಾಡುವಷ್ಟರಲ್ಲಿ ರಾತ್ರಿ 8:30 ಗಂಟೆ ಸುಮಾರಿಗೆ ಇವರು ಆಸ್ಪತ್ರೆಯಲ್ಲಿಯೆ ಮೃತಪಟ್ಟಿದ್ದು ಇರುತ್ತದೆ. ಸದರಿ ಅಪಘಾತ ಪಡಿಸಿದ ಕಾರ ನಂಬರ ಟಿ ಎಸ್-09 ಈಜಿ-7189 ಇದ್ದು ಇದರ ಚಾಲಕನು ತನ್ನ ಕಾರನ್ನು ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀ. ಬಸವರಾಜ ತಂದೆ ಸಿದ್ದಣ್ಣ ವಡ್ಡರ, ಸಾ: ಯಲ್ಲಮ್ಮಪೇಟ್ ಕೊಡ್ಲಾ, ತಾ:ಸೇಡಂ. ಇವರು ಸುಮಾರು 14-15 ವರ್ಷಗಳ ಹಿಂದೆ ಚಿತ್ತಾಪೂರ ತಾಲೂಕಿನ ಡೊಣಗಾಂವ ಗ್ರಾಮದ ಭೀಮಬಾಯಿ ಎಂಬುವವಳೊಂದಿಗೆ ಮದುವೆಯಾದ್ದು ನಂತರ ನಮಗೆ 1) ಭಾರತಿ ಅಂತಾ ಹೆಣ್ಣು ಮಗಳು 2) ಸಿದ್ರಾಮ ಮತ್ತು 3) ಮಲ್ಲಿಕಾರ್ಜುನ ಅಂತಾ 2 ಇಬ್ಬರು ಗಂಡು ಮಕ್ಕಳಿರುತ್ತಾರೆ ನನ್ನ ಹೆಂಡತಿಯಾದ ಭೀಮಬಾಯಿ ಇವರು ಈಗ ಸುಮಾರು 2 ವರ್ಷಗಳ ಹಿಂದೆ ಅನಾರೊಗ್ಯದಿಂದ ಮೃತಪಟ್ಟಿರುತ್ತಾಳೆ. ನಂತರ ನನ್ನ ಮಕ್ಕಳಿಗೆ ಅಡುಗೆ ವಗೈರೆ ಮಾಡುವದು ತೊಂದರೆಯಾಗುತ್ತಿದ್ದರಿಂದ ಮಕ್ಕಳನ್ನು ನೊಡಿಕೊಳ್ಳಲು ನಮ್ಮೂರ ಬುಗ್ಗಮ್ಮ ಎಂಬುವವಳೊಂದಿಗೆ ರಜಿಷ್ಟರ್ ಮ್ಯಾರೆಜ್ ಮಾಡಿಕೊಂಡಿರುತ್ತೆನೆ. ಮದುವೆಯಾದ ನಂತರ ನನ್ನ ಎರಡನೆ ಹೆಂಡತಿ ಬುಗ್ಗಮ್ಮ ಹಾಗೂ ನನ್ನ ತಾಯಿ ಮಕ್ಕಳು ಕೂಡಿಕೊಂಡು ಇದ್ದೆವು ಬರುಬರುತ್ತಾ ಬುಗ್ಗಮ್ಮ ಇವಳು ನನ್ನ ಮಕ್ಕಳಿಗೆ ಅಡುಗೆ ಮಾಡುವದು ಬಟ್ಟೆಯೊಗೆಯುವದು ನನಗೆ ತ್ರಾಸ ಆಗುತ್ತಿದೆ ನಿನ್ನ ಮಕ್ಕಳಿದ್ದಾರೆ ನಿನು ಏನಾದರು ಮಾಡುಕೊ ನನಗಂತೂ ಮಕ್ಕಳಾಗಲ್ಲ ನಾನು ಆಪ್ರೆಷನ್ ಮಾಡಿಸಿಕೊಂಡಿದ್ದೆನೆ ಅಂತಾ ಹೆಳುತ್ತಾ ನನ್ನೊಂದಿಗೆ ಆಗಾಗ ತಕರಾರು ಮಾಡುತಿದ್ದಳು ನಿನ್ನ ಮಕ್ಕಳು ನನಗೆ ಮೂಲ ಮಾಡಿದಿ ಈ ಮಕ್ಕಳು ನನಗೆ ಹುಟ್ಟಿಲ್ಲ ಇವಕ್ಕ ಕೊಂದುಹಾಕ ನನ್ನೊಂದಿಗೆ ಸಂಸಾರ ಮಾಡು ಇಲ್ಲಂದ್ರ ನಾನು ನಿನ್ನೊಂದಿಗೆ ಸಂಸಾರ ಮಾಡಲ್ಲ ಅಂತಾ ಹೇಳುತ್ತಿದ್ದಳು. ನಂತರ ಈಗ ಸುಮಾರು ಒಂದು ತಿಂಗಳ ಹಿಂದೆ ನನ್ನ ಮಕ್ಕಳಾದ ಭಾರತಿ ಮತ್ತು ಸಿದ್ರಾಮ ಹಾಗೂ ನನ್ನ ತಾಯಿಯಾದ ಬಂಗಾರಮ್ಮ ಇವರೆಲ್ಲರಿಗೆ ನನ್ನ ಮೊದಲನೆ ಹೆಂಡತಿಯ ತವರು ಮನೆಯಲ್ಲಿ ಬಿಟ್ಟು ಬಂದಿರುತ್ತೆನೆ. ನನ್ನ ಮಗನಾದ ಮಲ್ಲಿಕಾರ್ಜುನ ಇತನು ನನಗೆ ಬಿಟ್ಟು ಹೊಗದ ಕಾರಣ ಅವನು ನನ್ನ ಹತ್ತಿರ ಇದ್ದನು ನಂತರ ನನ್ನ ಎರಡನೆ ಹೆಂಡತಿ ಬುಗ್ಗಮ್ಮ ಇವಳು ನಿನ್ನ ಮಕ್ಕಳಿಗೆ ಡೊಣಗಾಂವದಲ್ಲಿ ಬಿಟ್ಟು ಬಂದಿದಿ ಮಲ್ಲಿಕಾರ್ಜುನ ಇವನಿಗೆ ಯಾಕ ಇಲ್ಲಿ ಇಟ್ಟುಕೊಂಡಿದ್ದಿ ಇವನಿಗೂ ಹೊಗಿ ಬಿಟ್ಟು ಬಾ ಇಲ್ಲಂದ್ರ ಕೊಂದು ಹಾಕು ನನಗೆ ಅಡುಗೆಮಾಡಿ ಹಾಕಲಿಕ್ಕೆ ಆಗಲ್ಲ ಇಲ್ಲಂದ್ರ ನಾನು ಕೊಂದುಹಾಕತಿನಿ ಅಂತಾ ಹೇಳುತ್ತಿದ್ದಳು. ಸುಮಾರು ಒಂದು ವಾರದ ಹಿಂದೆ ಅಂದರೆ ಹೊದ ಗುರುವಾರ ದಿನಾಂಕ : 11-08-2016 ರಂದು ಮುಂಜಾನೆ 8 ಗಂಟೆಗೆ ಮನೆಯಲ್ಲಿ ಅಡುಗೆ ಮಾಡದಿರುವದಕ್ಕೆ ನಾನು ನನ್ನ ಹೆಂಡತಿಗೆ ಕೇಳಿದ್ದು ಆಗ ಅವಳು ನಿನ್ನ ಮಗನಿಗೆ ಅಡುಗೆ ಮಾಡಿ ಹಾಕಿ ನನಗೆ ಸಾಕಾಗಿದೆ ಇವನನ್ನು ಎಲ್ಲಾದರು ಕೊಂದುಹಾಕು ಅಂತಾ ಅಂದಾಗ ನಾನು ಅವಳೊಂದಿಗೆ ಜಗಳ ಮಾಡಿದ್ದು ನಂತರ ನನ್ನ ಹೆಂಡತಿ ಬುಗ್ಗಮ್ಮ ಇವಳು ನನ್ನ ಮಗನಾದ ಮಲ್ಲಿಕಾರ್ಜುನ ಇವನಿಗೆ ಕರೆದುಕೊಂಡು ಮನೆಯಿಂದ ಹೊದಳು ನಂತರ ನಾನು ಎಲ್ಲಾ ಕಡೆ ಹುಡುಕಾಡಿದರು ನನ್ನ ಹೆಂಡತಿ ಮತ್ತು ಮಗ ಮಲ್ಲಿಕಾರ್ಜುನ ಇವರು ಮನೆಗೆ ಬರಲಿಲ್ಲ ಅವರು ಇಲ್ಲೆ ಎಲ್ಲಾದರು ಇರಬಹುದು ಜಗಳವಾಡಿದ ಸಿಟ್ಟಿನಲ್ಲಿ ಅವರ ತವರು ಮನೆಯಲ್ಲಿ ಇರಬಹುದು ಅಂತಾ ನಾನು ಸುಮ್ಮನಾಗಿದ್ದೆನು. ನಂತರ 4 ದಿವಸಗಳಾದ ಮೇಲೆ ನನ್ನ ಹೆಂಡತಿ ಬುಗ್ಗಮ್ಮ ಒಬ್ಬಳ ಮನೆಗೆ ಬಂದಳು ಅವಳಿಗೆ ಮಗ ಮಲ್ಲಿಕಾರ್ಜುನ ಎಲ್ಲಿದ್ದಾನೆ ನಿನ್ನ ಸಂಗಡ ಕರೆದುಕೊಂಡು ಹೊಗಿದ್ದಿ ಅಂತಾ ಕೇಳಲಾಗಿ ನನ್ನೊಂದಿಗೆ ಬಂದಿಲ್ಲ ನನಗೆ ಗೊತ್ತಿಲ್ಲ ಅಂತಾ ಹೇಳಿದಳು. ನಾನು ನನ್ನ ಮಗ ಬರಲಾರದ ವಿಷಯವನ್ನು ನನ್ನ ಮೊದಲನೆ ಹೆಂಡತಿಯ ತವರು ಮನೆಯವರಿಗೆ ಮತ್ತು ನಮ್ಮ ಮನೆಯ ಅಕ್ಕಪಕ್ಕದವರಿಗೆ ತಿಳಿಸಿ ಅಲ್ಲಲ್ಲಿ ಹುಡುಕಾಡಿದರು ನನ್ನ ಮಗ ಮಲ್ಲಿಕಾರ್ಜುನ ಸಿಕ್ಕಿರುವದಿಲ್ಲ. ದಿನಾಂಕ : 19-08-2016 ರಂದು ಬೆಳಿಗ್ಗೆ 6 ಗಂಟೆಯ ಸಮಯಕ್ಕೆ ನಾನು ನನ್ನ ಹೆಂಡತಿಯಾದ ಬುಗ್ಗಮ್ಮ ಇವಳಿಗೆ ಜಬರದಸ್ತಿಯಿಂದ ನನ್ನ ಮಗ ಎಲ್ಲಿದ್ದಾನೆ ಅವತ್ತು ನೀನೆ ಅವನನ್ನು ಮನೆಯಿಂದ ಕರೆದುಕೊಂಡು ಹೊಗಿದ್ದಿ ಅಂತಾ ಕೇಳಿದಾಗ ಅವಳು ನನಗೆ ಹೇಳಿದ್ದೆನೆಂದರೆ ನಿನ್ನ ಮಗ ಮಲ್ಲಿಕಾರ್ಜುನ ನನಗೆ ಸಾಕ ಮಾಡ್ಯಾನ ಅವನಿಗೆ ಅಡುಗೆ ಮಾಡಿ ಹಾಕೊದು ನನಗೆ ಆಗಲಾರದಕ್ಕೆ ಅವನಿಗೆ ಗುರುವಾರ ಸಂಜೆ ಹೊತ್ತಿನಲ್ಲಿ ಆರಕೊಟಿಯವರ ಹೊಲದಾಗ ರಾಚಪ್ಪ ಬಾವಿಯಾಗ ಬಡಿಗೆಯಿಂದ ಹೊಡೆದು ಕೊಂದ ಹಾಕಿನಿ ನೊಡ ಹೊಗು ಅಂತಾ ಹೇಳಿದಳು ಆಗ ನಾನು ಸದರಿ ರಾಚಪ್ಪ ಬಾವಿಗೆ ಹೊಗಿ ನೋಡಲಾಗಿ ಬಾವಿನ ನೀರಿನ ಮೇಲೆ ನನ್ನ ಮಗ ಮಲ್ಲಿಕಾರ್ಜುನ ಇತನ ಹೆಣ ಬೊರಲು ಬಿದ್ದು ತೆಲಾಡುತ್ತಿತ್ತು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖದಾಗಿದೆ.