POLICE BHAVAN KALABURAGI

POLICE BHAVAN KALABURAGI

14 May 2013

GULBARGA DISTRICT REPORTED CRIMES


ದರೋಡೆ ಪ್ರಕರಣ:
ಬ್ರಹ್ಮಪೂರ ಪೊಲೀಸ ಠಾಣೆ:ದಿನಾಂಕ:14/05/2013 ರಂದು ಶ್ರೀಮತಿ.ಎಮ್.ಮಮತಾ ಮಕಮ್  ವಯ|| 35, ಸಾ|| ಖೂಬಾ ಪ್ಲಾಟ್ ಗುಲಬರ್ಗಾರವರು ಬೆಳಿಗ್ಗೆ 11:30 ಗಂಟೆಯ ಸುಮಾರಿಗೆ ತಮ್ಮ ಮನೆಯಿಂದ ಮಗಳ ಸ್ಕೂಲಿನ ಫೀಸ್ ಕಟ್ಟುವು ಸಲುವಾಗಿ ಎನ್.ವ್ಹಿ ಶಾಲೆಗೆ ಬಸ್ಸಮ್ಮ ಕುಂಬಾರ ರವರ ಜೋತೆಯಲ್ಲಿ ಹೋಗುತ್ತಿರುವಾಗ ನವಣಿ ಆಸ್ಪತ್ರೆಯ ಹತ್ತಿರ ಎದುರಿನಿಂದ ಒಬ್ಬನು 20 ರಿಂದ 25 ವರ್ಷ ವಯಸ್ಸಿನು ಬಿಳಿ ಮತ್ತು ಹಸಿರು ಬಣ್ಣದ ಚೌಕಡಿ ಆಫ್ ಶರ್ಟ ನೀಲಿ ಬಣ್ಣದ ಜೀನ್ಸ ಪ್ಯಾಂಟ್ ಧರಿಸಿದವನು ಶ್ರೀಮತಿ ಎಮ.ಮಮತಾ ಮಕಮ್ ರವರ ಕೊರಳಿಗೆ ಕೈ ಹಾಕಿ ಕೊರಳ್ಳಲ್ಲಿ ಇದ್ದ 40 ಗ್ರಾಂ ಬಂಗಾರದ ಮಂಗಳ ಸೂತ್ರ ಅ||ಕಿ|| 1,20,000/- ಬೆಲೆಬಾಳುವುದನ್ನು ದೋಚಿಕೊಂಡು ಹೋಗಿದ್ದರ ಬಗ್ಗೆ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗುನ್ನೆ ನಂ: 88/2013 ಕಲಂ: 392 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಅರುಣಕುಮಾರ ತಂದೆ ನಾಗೇಂದ್ರ ಕೂಡಿಕರ, ಸಾಃ ಹಾಗರಗುಂಡಗಿ, ತಾಃ ಗುಲಬರ್ಗಾರವರು ನಾನು ಮತ್ತು ಕಾಕನ ಮಗನಾದ ಅನೀಲಕುಮಾರ ಇಬ್ಬರು ಕೂಡಿಕೊಂಡು ದಿನಾಂಕ:13-05-2013 ರಂದು  12-00 ಗಂಟೆ ಸುಮಾರಿಗೆ ಆಳಂದ ರೋಡಿಗೆ ಇರುವ ಖಾದ್ರಿ ಚೌಕ ಹತ್ತಿರ ನಡೆದುಕೊಂಡು ಬರುತ್ತಿದ್ದಾಗ ಯಾವುದೋ ಒಂದು ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಆಳಂದ ಚಕ್ ಪೊಸ್ಟ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ನಿಲ್ಲಿಸದೇ ಓಡಿ ಹೋಗಿದ್ದರಿಂದ  ಬಲಗಾಲು ತೊಡೆಗೆ ಮತ್ತು ಮೊಳಕಾಲು ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 30/2013 ಕಲಂ, 279,338 ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಆನಂದ ತಂದೆ ಶರಣಪ್ಪಾ ಕೌವಲಗಿ ಸಾ:ಭೋಸಗಾ (ಕೆ) ತಾ||ಜೇವರ್ಗಿ ಹಾ:ವ:ಯಡವನಹಳ್ಳಿ ಕಾಂಪ ಲೆಕ್ಸ ಬಿದ್ದಾಪುರ ಕಾಲೋನಿ ಗುಲಬರ್ಗಾರವರು ನಾನು  ದಿನಾಂಕ:12/05/2013 ರಂದು ಮಧ್ಯಾಹ್ನ 3:30 ಗಂಟೆ ಸುಮಾರಿಗೆ ಹೀರಾಪುರ ಪೆಟ್ರೋಲ ಪಂಪಗೆ ಬರುವ ಕುರಿತು ಕಾಂತಾ ಕಾಲೋನಿ ಕ್ರಾಸ ಹತ್ತಿರ ಬರುವಾಗ ಎದುರಗಡೆಯಿಂದ ಹಿರೋ ಹೊಂಡಾ ಸ್ಪ್ಲೇಡರ ಮೋಟಾರ ಸೈಕಲ ನಂ ಕೆಎ-32 ಕ್ಯೂ-5477 ನೇದ್ದರ ಮೇಲೆ ಇಬ್ಬರು ಸವಾರರು ಅಡ್ಡಾ-ತಿಡ್ಡಿಯಾಗಿ ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವರೆ ನಾನು ಕುಳಿತುಕೊಂಡು ಬರುತ್ತಿದ್ದ ನನ್ನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನಾನು ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದಿದರಿಂದ ನನಗೆ ಮತ್ತು ಡಿಕ್ಕಿ ಪಡಿಸಿದ ಮೋಟಾರ ಸೈಕಲ ಸವಾರನಿಗೆ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:240/2013 ಕಲಂ,279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:

ಸಂಚಾರಿ ಪೊಲೀಸ್ ಠಾಣೆ:ಶ್ರೀಮತಿ, ಮಮತಾಜ ಬೇಗಂ ಗಂಡ ಗೌಸ್ ಪಟೇಲ ಸಾಃ ಮಹಿಬೂಬ ನಗರ ಗುಲಬರ್ಗಾರವರು ನಾನು ದಿನಾಂಕ:12-05-2013 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ಮಹಿಬೂಬ ನಗರದಲ್ಲಿರುವ ಮದಿನಾ ಮಜೀದ ಹತ್ತಿರ ನಾನು ಮತ್ತು ನನ್ನ ಮಗ ಜಿಶಾನ ಇಬ್ಬರು ಕೂಡಿ ನಡೆದುಕೊಂಡು ಹೋಗುತ್ತಿದ್ದಾಗ ಯಾದುಲ್ಲಾ ಕಾಲೋನಿ ಕಡೆಯಿಂದ ಟವೇರಾ ಜೀಪ ನಂ. ಕೆಎ-17 ಎಮ್. ಸಿ-3355 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನಿಗೆ ಅಪಘಾತ ಪಡಿಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:29/2013 ಕಲಂ 279,337 ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.