POLICE BHAVAN KALABURAGI

POLICE BHAVAN KALABURAGI

20 October 2016

KALABURAGI DISTRICT REPORTED CRIMES

ಅಪಘಾತ ಪ್ರಕರಣ;
ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ 18-10-16 ರಂದು ಶ್ರೀ ಮಲ್ಲಿಕಾರ್ಜುನ ತಂ. ಬಾಬುರಾವ ಕೋಬಾಳ ಸಾ: ಜೇವರ್ಗಿ ರವರು ರಾ.ಹೆ 218 ರಲ್ಲಿ ತಮ್ಮ ಮೋ ಸೈಕಲ್ ಮೇಲೆ ಹೋಗುತ್ತಿರುವಾಗ ಶಹಾಬಾದ ಕ್ರಾಸ್ ಹತ್ತಿರ ಲಾರಿ ನಂ ಆರಜೆ 19-ಜೆಬಿ 5339 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ರಸ್ತೆ ಮೇಲೆ ಮೋ ಸೈಕಲ್ ಮೇಲೆ ಹೋಗುತ್ತಿದ್ದ ಶ್ರೀ ಮಲ್ಲಿಕಾರ್ಜುನ ತಂ. ಬಾಬುರಾವ ಕೋಬಾಳ ಸಾ: ಜೇವರ್ಗಿ ರವರಿಗೆ ಅಪಘಾತ ಪಡಿಸಿದ್ದು ಮಲ್ಲಿಕಾರ್ಜುನ ರವರಿಗೆ ಗಾಯಗಳಾಗಿದ್ದು. ತಮ್ಮ ಮೋ.ಸೈಕಲ್ ಗೆ ಅಪಘಾತ ಪಡಿಸಿದ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುತಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜುಕೋರರ ಬಂಧನ:
ಬ್ರಹ್ಮಪೂರ ಪೊಲೀಸ್ ಠಾಣೆ: ದಿನಾಂಕ. 19-10-2016 ರಂದು ಶ್ರೀಮತಿ ಎಸ್. ಜಾಹ್ನವಿ ಡಿ.ಎಸ್.ಪಿ ಉಪವಿಭಾಗ ಕಲಬುರಗಿ ರವರು ಒಬ್ಬ ಗಸ್ತಿನಲ್ಲಿರುವಾಗ ಕಲಬುರಗಿ ನಗರದ ಸೂಪರ ಮಾರ್ಕೆಟದ ಸಿಟಿ ಬಸ್ ಸ್ಟ್ಯಾಂಡ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಜೂಜಾಟದ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಇಬ್ಬರು ಪಂಚರಾದ 1. ಶಾರುಖ ತಂದೆ ಮಸ್ತಾನ ಪಟೇಲ ಸಾ: ಓರಿಯಂಟ ಲಾಡ್ಜ ಹಿಂದುಗಡೆ ಸ್ಟೇಷನ ಬಜಾರ ಕಲಬುರಗಿ, 2.ಶರಣು ತಂದೆ ಅಂಬಣ್ಣ ಹೀರಾಪೂರ ಸಾ: ಅಂಬಿಕಾ ನಗರ ಕಲಬುರಗಿ ಇವರ ಸಮಕ್ಷಮ ಸಿಬ್ಬಂದಿಯವರಾದ ಬಸವರಾಜ ಪಾಟೀಲ .ಎಸ., ಚಂದ್ರಕಾಂತ ಪಿಸಿ, ಶಂಕರಲಿಂಗ ಪಿಸಿ ಇವರ ಸಹಾಯದಿಂದ ದಾಳಿ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದ ಅಕ್ಬರ ತಂದೆ ಮಸ್ತಾನಸಾಬ ಮಗರಾಬಿ ಸಾ: ಶಹಾಬಜಾರ ನಾಕಾ ಈತನನ್ನು ದಸ್ತಗೀರ ಮಾಟಿ ಆತನಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 2,100/-, ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೆನ್ ಎರಡು ಮೊಬೈಲಗಳನ್ನು ಜಪ್ತಿಪಡಿಸಿಕೊಂಡು ಆಪಾದಿನ ವಿರುದ್ದ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದವನ ಬಂಧನ:
ಕಾಳಗಿ ಪೊಲೀಸ್ ಠಾಣೆ: ದಿನಾಂಕ: 19-10-2016  ರಂದು ಪಿ.ಎಸ್. ಕಾಳಗಿ ಪೊಲೀಸ್ ಠಾಣೆ ರವರು ಠಾಣೆಯಲ್ಲಿದ್ದಾಗ ಕಂದಗೂಳ ಗ್ರಾಮದ ಕ್ರಾಸ ಹತ್ತಿರ ಚನ್ನವೀರಯ್ಯ ಮಠಪತಿ ಇವರ ಹೋಟೆ ಹತ್ತಿರ ಒಬ್ಬ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಮಟಕಾ ಚೀಟಿ ಬರೆದು ಕೊಟ್ಟು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದ ಆದೇಶ ಪಡೆದುಕೊಂಡು ಡಿ.ಎಸ್.ಪಿ. ಶಹಾಬಾದ ಮತ್ತು ಸಿ.ಪಿ. ಕಾಳಗಿ ವೃತ್ತ ರವರ ಮಾರ್ಗದರ್ಶನದಲ್ಲಿ ಪಂಚರಾದ 1.ಶ್ರೀ ಸಂಬಣ್ಣ ತಂದೆ ನಾಗಪ್ಪ ಮಾಡಬೂಳ  2. ಶ್ರೀ ವೀರಯ್ಯ ತಂದೆ ನಾಗಯ್ಯ ಸ್ವಾಮಿ ರವರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ  ಹೆಚ್.ಸಿ296, ಪಿ.ಸಿ 319, 351, 694, 453 ರವರೊಂದಿಗೆ ಚನ್ನವೀರಯ್ಯ ಮಠಪತಿ ಹೋಟಲ ಹತ್ತಿರ ಹೋಗಿ ನೋಡಲು ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಒಂದು ರೂಪಾಯಿಗೆ 80/-  ರೂ ಕೊಡುವದಾಗಿ ಅಂತಾ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಚೀಟಿ ಬರೆದು ಕೊಡುತ್ತಿದ್ದನ್ನು ನೋಡಿ ಸಿಬ್ಬಂದಿಯೊಂದಿಗೆ ಮುತ್ತಿಗೆ ಹಾಕಿ ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಬಸವರಾಜ ತಂದೆ ಚನ್ನವೀರಯ್ಯ ಮಠಪತಿ ಸಾ:ಕಂದಗೂಳ ಅಂತಾ ಹೇಳಿದ್ದು ಆತನಿಂದ ರೂ 3095/-  ನಗದು ಹಣಒಂದು ಮಟಕಾ ನಂಬರ ಬರೆದ ಚೀಟಿ ಮತ್ತು  ಒಂದು  ಬಾಲ ಪೆನ್ನು ಇದ್ದು  ಮತ್ತು ಮಟಕಾ ನಂಬರ ಬರೆದುಕೊಳ್ಳಲು ಉಪಯೋಗಿಸಿದ ಸಾಮಸಂಗ ಮೋಬೈಲ ಅಂ.ಕಿ 500/-  ರೂ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಆರೋಪಿ ಮತ್ತು ಮುದ್ದೆಮಾಲು ಸಮೇತ ಠಾಣೆಗೆ ಬಂದು ಆಪಾದಿತನ ವಿರುದ್ದ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಇಸ್ಪೀಟು ಜೂಜುಕೋರರ ಬಂಧನ:
ರಟಕಲ್ ಪೊಲೀಸ್ ಠಾಣೆ: ದಿನಾಂಕ1-9-10-2016 ರಂದು ಪಿ.ಎಸ್.ಐ ರಟಕಲ್ ಠಾಣೆರವರು  ಠಾಣೆಯಲ್ಲಿರುವಾಗ ಚಂದನಕೇರ ಗ್ರಾಮದ ಬಸ್ ನಿಲ್ದಾಣದ ಹಿಂದುಗಡೆ ಖುಲ್ಲಾ ಜಾಗದಲ್ಲಿ ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಠಾಣೆಯ ಸಿಬ್ಬಂದಿ ಶ್ರೀ ಮಹಾದೇವ ಪಿಸಿ , ಶ್ರೀ ಸುನಿಲ ಪಿ.ಸಿ. , ಹಾಗೂ ವಾಹನ ಚಾಲಕ ಶ್ರೀ ನಿಂಗಪ್ಪ ಹೆಚ್.ಸಿ ರವರೊಂದಿಗೆ ಬಾತ್ಮಿ ಸ್ಥಳಕ್ಕೆ ತಲುಪಿ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿಯಲಾಗಿ ಜೂಜಾಟದಲ್ಲಿ ತೊಡಗಿದ್ದ 9 ಜನರನ್ನು ಹಿಡಿದು ಅವರಿಂಧ ಜೂಜಾಟದ ಪಣಕ್ಕೆ ಇಟ್ಟಿದ್ದ ನಗದು ರೂ 2,070/- ಮತ್ತು ಜೂಜಾಟಕ್ಕೆ ಬಳಸಿದ್ದ 52 ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ದ ರಟಕಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಜಪ್ತಿ:
 ಮಳಖೇಡ ಪೊಲೀಸ್ ಠಾಣೆ: ದಿನಾಂಕ 19-10-2016  ರಂದು ಶ್ರೀ ಶ್ರೀಮಂತ ,ಎಸ್, ರವರು ಮಳಖೇಡದಲ್ಲಿ ರಾತ್ರಿ ಗಸ್ತು ಕರ್ತವ್ಯದಲ್ಲಿರುವಾಗ ಮುಖಾಂತರ ಮಳಖೇಡ ಗ್ರಾಮದ ಸೀಮಾಂತರದಲ್ಲಿರುವ ಕಾಗಿಣಾ ನದಿಯಿಂದ ಟ್ರಾಕ್ಟರನಲ್ಲಿ ಅಕ್ರಮವಾಗಿ ಸರಕಾರದಿಂದ ಯಾವುದೇ ರಾಜ ಧನ ಪರವಾನಿಗೆ ಇಲ್ಲದೆ ನದಿಯಿಂದ ಮರಳು ತುಂಬಿಕೊಂಡು ಮಳಖೇಡ ಗ್ರಾಮದ ದರ್ಗಾ ಕ್ರಾಸ ಕಡೆಗೆ ಬರುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಶ್ರೀ ಶ್ರೀಮಂತ ಎ.ಎಸ್.ಐ ರವರು ಠಾಣೆಯ  ಸಿಬ್ಬಂದಿ  ಜಗದೇವಪ್ಪ ಪಿಸಿ, ಹಾಗು ಇಬ್ಬರು ಪಂಚರಾದ 1. ಶ್ರೀ ನಾಗಪ್ಪ ತಂದೆ ಸಾಬಣ್ಣ ನಂದೂರ, ಸಾ:ಮಳಖೇಡ ಹಾಗೂ 2.  ಶ್ರೀ ಜಾವಿದ ತಂದೆ ನವಾಬಮಿಯ್ಯಾ ಸೈಯದ , ಸಾ:ಮಳಖೇಡ ಗ್ರಾಮ ವರನ್ನು ಪಂಚರನ್ನಾಗಿ ಬರಮಾಡಿಕೊಂಡು ಪಂಚರೊಂದಿಗೆ ಮಳಖೇಡ ಗ್ರಾಮದ ದರ್ಗಾ ಕ್ರಾಸ  ಹತ್ತಿರ ಚಿತ್ತಾಪೂರ ರೋಡ ಕಡೆಯಿಂದ ದರ್ಗಾ ಕ್ರಾಸ ಕಡೆಗೆ ಒಂದು ಟ್ರಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು  ಪಂಚರ ಸಮಕ್ಷದಲ್ಲಿ ನಾನು ನಮ್ಮ ಸಿಬ್ದಬಂದಿ ಜನರೊಂದಿಗೆ  ದಾಳಿ ಮಾಡಿ ಹಿಡಿಯಲು ಹೋದಾಗ ಟ್ರಾಕ್ಟರ  ಚಾಲಕ ಟ್ರಾಕ್ಟರನ್ನು ರೋಡಿನ ಪಕ್ಕದಲ್ಲಿ ಬಿಟ್ಟು ಅಲ್ಲಿಂದ ಓಡಿ ಹೋದನು  ನಂತರ ಹತ್ತಿರ  ಹೋಗಿ ಟ್ರಾಕ್ಟರ ಪರಶೀಲಿಸಿ ನೋಡಿದಾಗ ಕೆಂಪು ಬಣ್ಣದ ಮಾಸ್ಯೇ ಫರ್ಗುಸನ್ ಕಂಪನಿಯ ಟ್ರಾಕ್ಟರ  ಇದ್ದು  ಅದರ ನಂಬರ ನೋಡಲಾಗಿ ಅದರ ಮೇಲೆ ಯಾವುದೇ ನಂಬರ ಕಂಡುಬರಲಿಲ್ಲ  ಟ್ರಾಕ್ಟರದಲ್ಲಿ  ಪೂರ್ತಿ  ಉಸುಕು ತುಂಬಿದ್ದು, ಉಸುಕು  :ಕಿ 600/-  ರೂ ಹಾಗೂ ಟ್ರಾಕ್ಟರ :ಕಿ. 35,000/-  ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಟ್ರಾಕ್ಟರನ ಚಾಲಕ ಮತ್ತು ಮಾಲಿಕನ ವಿರುದ್ದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.