POLICE BHAVAN KALABURAGI

POLICE BHAVAN KALABURAGI

08 December 2013

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ. 07-12-2013 ರಂದು 19-30 ಗಂಟೆಗೆ ರಾಷ್ಟ್ರಪತಿ ವೃತದ ಸಮಿಪ ಹೊಸ ಜೇವರ್ಗಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾರೆ ಅಂತಾ ಖಚಿತ ಬಾತ್ಮೀ  ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ತೆಗೆದುಕೊಂಡು ಮಟಕಾ ಚೀಟಿ ಬರೆದುಕೊಡುತ್ತದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲು 1. ಹಣಮಂತ ತಂದೆ ಶಿವಶರಣಪ್ಪಾ ಮಾಳಗೆನವರ ಸಾ|| ಅಂಬಿಕಾನಗರ ಗುಲಬರ್ಗಾ 2. ಚೌಡಪ್ಪಾ ತಂದೆ ಶ್ರೀಮಂತ ಕಲ್ಲೂರ ಸಾ|| ಬಿದ್ದಾಪೂರ ಕಾಲೂನಿ  ಅಂತಾ ತಿಳಿಸಿದ್ದು ಸದರಿಯವರಿಂದ 5475/- ರೂ ಮತ್ತು ಎರಡು ಮಟಕಾ ನಂಬರಗಳನ್ನು ಬರೆದ ಚೀಟಗಳನ್ನು ಒಂದು ಬಾಲಪೆನ್ನ ಮತ್ತು ಒಂದು ಮೋಬೈಲ್ ನ್ನು  ಪಂಚರ ಸಮಕ್ಷಮ ವಶಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಸದರಿವರ ವಿರುಧ್ಧ ಸ್ಟೇಞನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 07-12-2013 ರಂದು 2:30 ಪಿ.ಎಮ್ ಕ್ಕೆ ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಮಾಡುತ್ತಾ ತಹಸೀಲ್ದಾರ ಕಾರ್ಯಲಯಾ ಹತ್ತಿರ ಇದ್ದಾಗ ನಂದರ್ಗಿ ಗ್ರಾಮದ ಬಸ್ಸ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೇಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆ ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಿ ಬಸ್ಸ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೇಕ್ತಿ  ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಕೊಡದೆ ಸಾರ್ವಜನಿಕರಿಂದ ಹಣ ಪಡೆದು ಅವರನ್ನು ಮೋಸ ಮಾಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಶರಣಪ್ಪ ತಂದೆ ಸಾತಲಿಂಗಪ್ಪ ಪಾಸೋಡಿ ವಯ; 50 ವರ್ಷ ಉ; ಕೂಲಿ ಸಾ|| ಲಿಂಗಾಯತ ಸಾ|| ನಂದರ್ಗಿ  ಇವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನ ವಶದಿಂದ 170/- ರೂ ನಗದು ಹಣ ಮತ್ತು ಅಂಕಿ ಸಂಕ್ಯೆ ಬರೆದ ಮಟಕಾ ಚೀಟ ಹಾಗು ಬಾಲ ಪೆನ್ನ ವಶಪಡಿಸಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಜಗಪ್ಪ ತಂದೆ ನಾಗಪ್ಪ ಉಪ್ಪಾರ ವ; 28 ವರ್ಷ ಉ; ಕೂಲಿಕೆಲಸ ಜಾ; ಉಪ್ಪಾರಸಾ; ಚಂದ್ರಂಪಳ್ಳಿ ತಾ; ಚಿಂಚೋಳಿ ರವರು ದಿನಾಂಕ 07.12.2013 ರಂದು ನಮ್ಮೂರಿನ ಝರಣಪ್ಪ ತಂದೆ ಗುಂಡಪ್ಪ, ರಾಜಪ್ಪ ತಂದೆ ಗುಂಡಪ್ಪ ಕಂಠೆಪ್ಪ ತಂದೆ ಗುಂಡಪ್ಪ ತುಕ್ಕಪ್ಪ ತಂದೆ ಕಲ್ಲಪ್ಪ ಐದು ಜನರು ಕೂಡಿಕೊಂಡು ಟ್ರ್ಯಾಕ್ಟರ್ ನಂ ಕೆಎ 32. ಟಿಎ 1344 ನೇದ್ದರಲ್ಲಿ ಕುಳಿತುಕೊಂಡು ಸಂಜುಕುಮಾರ ತಂದೆ ಗುಂಡಪ್ಪ ತಗ್ಗಿರವರ ಹೋಲದ ಉಸುಕು ತುಂಬಿಕೊಂಡು ಬರಲು ಮದ್ಯಾಹ್ನ 01.00 ಗಂಟೆ ಸುಮಾರಿಗೆ ಹೋದೆವು ಸದರಿ ಟ್ರ್ಯಾಕ್ಟರನ್ನು ನಮ್ಮೂರಿನ  ಅಶೋಕ ತಂದೆ ಚಂದ್ರಪ್ಪ ಮೇತ್ರಿ ಚಲಾಯಿಸುತ್ತಿದ್ದು ನಾವು ಸದರಿಯವರ ಹೋಲದಲ್ಲಿ ಉಸುಕು ತುಂಬಿಕೊಂಡು ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ನಾವೇಲ್ಲರು ಕುಳಿತುಕೊಂಡು ನಮ್ಮೂರ ಕಡೆಗೆ ಬರುವಾಗ ದಾರಿಯಲ್ಲಿ ನಮ್ಮೂರಿನ ಗೋಪಾಲ ನಾಗಪ್ಪ ತುಮಕುಂಟಾ ಎಂಬುವವನು ಕೈ ಸನ್ನೆ ಮಾಡಿ ಟ್ರ್ಯಾಕ್ಟರ ನಿಲ್ಲಿಸಲು ಕೇಳಿದಾಗ ಸದರಿ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರ ನಿಲ್ಲಿಸಿದ್ದು ಆಗ ಅವನು ಸಹ ನಮ್ಮೋಂದಿಗೆ ಉಸುಕು ತುಂಬಿದ ಟ್ರ್ಯಾಕ್ಟರನಲ್ಲಿ ಕುಳಿತುಕೊಂಡನು ನಂತರ ಮತ್ತೆ ಟ್ರ್ಯಾಕ್ಟರ ಚಾಲು ಮಾಡಿಕೊಂಡು ನಮ್ಮೂರ ಕಡೆ ಬರುತ್ತಿದ್ದಾಗ ಸದರಿ ಟ್ರ್ಯಾಕ್ಟರ ಚಾಲಕನಾದ ಅಶೋಕನು ಟ್ರ್ಯಾಕ್ಟರನ್ನು ಅತೀ ವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮೂರ ಶ್ರೀ ಮಾಣಿಕರೆಡ್ಡಿ ರವರ ಹೋಲದ ಹತ್ತಿರವಿರುವ ಬ್ರೀಡ್ಜ್ [ಫೂಲ್] ದಾಟುತ್ತಿದ್ದಂತೆಯೇ ಒಮ್ಮೆಲೆ ಎಡಗಡೆ ಬ್ರಿಡ್ಜ್ ದ ಕೆಳಗೆ ಟ್ರ್ಯಾಕ್ಟರನ್ನು ಪಲ್ಟಿ ಮಾಡಿದ್ದು ಆದ್ದರಿಂದ ನನಗೆ, ಝರಣಪ್ಪ ತಂದೆ ಗುಂಡಪ್ಪ ಹೋಸಮನಿ, ರಾಜಪ್ಪ ತಂದೆ ಗುಂಡಪ್ಪ ವಗ್ಗಿ, ಕಂಠೆಪ್ಪ ತಂದೆ ಗುಂಡಪ್ಪ ಮುನ್ನೂರ, ಗೋಪಾಲ ತಂದೆ ನಾಗಪ್ಪ ತುಮಕುಂಟಾ ರವರುಗಳಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ತುಕ್ಕಪ್ಪ ತಂದೆ ಕಲ್ಲಪ್ಪ ಮೊಗಡಂಪಳ್ಳಿ ಎಂಬುವವನಿಗೆ ತಲೆಯ ಹಿಂಬದಿಗೆ ಭಾರಿ ರಕ್ತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು, ಸದರಿ ಟ್ರ್ಯಾಕ್ಟರ್ ಚಾಲಕನಾದ ಅಶೋಕನಿಗೂ ಸಹ ತಲೆಯ ಎಡಬದಿಗೆ ಭಾರಿರಕ್ತಗಾಯ ಎಡಹಣೆಗೆ ಭಾರಿ ರಕ್ತಗಾಯ ಮತ್ತು ಬೆನ್ನಿಗೆ ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಗಿಸುತ್ತಿದ್ದ ಲಾರಿ ವಶ :
ಅಫಜಲಪೂರ ಠಾಣೆ :  ದಿನಾಂಕ 30-11-2013 ರಂದು ಬೆಳಿಗ್ಗೆ 11:15 ಗಂಟೆಗೆ ಪಿಸಿ 530 ಜಗನ್ನಾಥ, ಮತ್ತು ಪಿಸಿ 894 ನಿಂಗಣ್ಣ ರವರೊಂದಿಗೆ ಪೆಟ್ರೋಲಿಂಗ ಮಾಡುತ್ತಾ ಮಣೂರ, ಮಶಾಳ, ಶಿರವಾಳ ಗ್ರಾಮ ಕಡೆ ಹೋಗಿ ಮರಳಿ ಇಂದು ದಿನಾಂಕ 01-12-2013 ರಂದು ಬೆಳಿಗ್ಗೆ 08;00 ಗಂಟೆಗೆ ಅಫಜಲಪೂರ ಪಟ್ಟಣದ ಬಸವೇಶ್ವರ ವೃತ್ತ ಹತ್ತರಿ ಇದ್ದಾಗ ಖಚೀತ ಬಾತ್ಮಿ ಬಂದಿದ್ದು ಎನೆಂದರೆ, ಆನೂರ ಗ್ರಾಮ ಕಡೆಯಿಂದ ಒಬ್ಬ ವ್ಯಕ್ತಿ ತನ್ನ ಟಿಪ್ಪರನಲ್ಲಿ ಮರಳು ತುಂಬಿ ಕೊಂಡು ಮಲ್ಲಾಬಾದ ಗ್ರಾಮ ಕಡೆ ಹೊರಟಿರುತ್ತಾನೆ ಅಂತಾ ಬಾತ್ಮಿ ಬಂದ ಮೇರೆಗೆ ನನ್ನೊಂದಿಗೆ ಪಂಚರನ್ನು ಬರಮಾಡಿಕೊಂಡು  ಸಿಬ್ಬಂದಿಯವರೊಂದಿಗೆ ನಮ್ಮ ವಾಹನದಲ್ಲಿ ಬೆಳಿಗ್ಗೆ 08;15 ಗಂಟೆಗೆ ಹೊರಟು 08;30 ಗಂಟೆಗೆ ಮಾತೋಳಿ ಕ್ರಾಸ್ ಹತ್ತಿರ ನಮ್ಮ ವಾಹನ ನಿಲ್ಲಿಸಿದೆವು. ನಂತರ 08;40 ಗಂಟೆಗೆ ಆನೂರ ಗ್ರಾಮದ ಕಡೆಯಿಂದ ಒಂದು ಸಣ್ಣ ಟಿಪ್ಪರ ಬರುತ್ತಿದ್ದು, ಅದನ್ನು ನೋಡಿ ನಾವು ನಿಲ್ಲಿಸಿದೆವು ಸದರಿ ವಾಹನ  ಚಾಲಕನನ್ನು ಕರೆಯಿಸಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಯಲ್ಲಪ್ಪ ತಂದೆ ಈರಣ್ಣ ಜಮಾದಾಸ ಸಾ|| ಅತನೂರ ಅಂತಾ ತಿಳಿಸಿದನು ವಾಹನದಲ್ಲಿ ಏನಿದೆ ಅಂತಾ ಕೇಳಲಾಗಿ ತಡಪಡಿಸುತ್ತಾ ಮರಳು ಇದೆ ಅಂತಾ ಹೇಳಿದನು, ಆಗ ನಾನು ಪಂಚರ ಸಮಕ್ಷಮ ವಾಹನ ಚಕ್ಕ ಮಾಡಲು ವಾಹನದಲ್ಲಿ ಮರಳು ಇತ್ತು, ಈ ಬಗ್ಗೆ ಚಾಲಕನಿಗೆ ಸಂಬಂಧಪಟ್ಟ ಅಧೀಕಾರಿಯವರಿಂದ ಮರಳು ಸಾಗಾಣಿಕೆ ಮಾಡಲು ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತಾ ತಿಳಿಸಿ ಅಲ್ಲೆ ಬಾಜು ಇದ್ದ ಕಬ್ಬಿನ ಹೊಲದಲ್ಲಿ ಓಡಿದನು. ನಾವು ಬೆನ್ನಟ್ಟಿ ಹುಡುಕಾಡಿದರು ಸಿಗಲಿಲ್ಲಾ. ಸದರಿ ಮಹಿಂದ್ರಾ ಟಿಪ್ಪರ ನಂ ಕೆ-33 ಎ0154 ಅಂತಾ ಇರುತ್ತದೆ. ಅದರಲ್ಲಿ ಮರಳು ತುಂಬಿದ್ದು ಪಂಚರ  ಸಮಕ್ಷಮ ವಶಕ್ಕೆ ತೆಗೆದುಕೊಂಡು ಸದರಿ ಮರಳು ತುಂಬಿದ ಟಿಪ್ಪನೊಂದಿಗೆ ಮರಳಿ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.