POLICE BHAVAN KALABURAGI

POLICE BHAVAN KALABURAGI

16 September 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :ಶ್ರೀಮತಿ ಫೈಮೀದಾ ಗಂಡ ಇಸ್ಮಾಯಿಲ ಸಾ:ಖಾನ ಸಾಬ ಅಂಗಡಿ ಹತ್ತಿರ ಮಿಜಗುರಿ ಗುಲಬರ್ಗಾರವರು ನನ್ನ ಮಗನಾದ ಸೋಹೆಲ್ ಮತ್ತು ಸೊಸೆ ದಿನಾಂಕ:14-09-2012 ರಂದು 20-30 ಗಂಟೆಗೆ ಇಸ್ಮಾಯಿಲ ಇತನ ಅಟೋರೀಕ್ಷಾ ನಂ: ಕೆಎ 32- 9720 ನೇದ್ದರಲ್ಲಿ ಕುಳಿತು ಎಮ್.ಎಸ್.ಕೆ.ಮಿಲ್ ದಿಂದ ಕೇಂದ್ರ ಬಸ್ ನಿಲ್ದಾಣದ ಮೇನ ರಸ್ತೆಯ ಕಣ್ಣಿ ಮಾರ್ಕೆಟ ಹತ್ತಿರ ಅಟೋರೀಕ್ಷಾ ಚಾಲಕನು ತನ್ನ ಅಟೋವನ್ನು ಅತೀವೇಗವಾಗಿ ಚಲಾಯಿಸಿ ಕಟ್ ಹೊಡೆಯಲು ಹೋಗಿ ಅಟೋರಿಕ್ಷಾ ಪಲ್ಟಿ ಮಾಡಿದ್ದರಿಂದ ನನ್ನ ಮಗ ಸೊಹೆಲ ಈತನು ಗಾಯಹೊಂದಿರುತ್ತಾನೆ  ಅಂತಾ ಶ್ರೀಮತಿ ಪೈಮಿದಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:93/2012 ಕಲಂ, 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIME


ಕಂಕರ ಮಷಿನದ ಖಣಿಯಲ್ಲಿ ಈಜಾಡುತ್ತಿರುವಾಗ ಮೃತ ಪಟ್ಟ ಬಗ್ಗೆ:
ವಿಶ್ವ ವಿದ್ಯಾಲಯ ಪೊಲೀಸ ಠಾಣೆ: ಮಾನ್ಯ 3 ನೇ ಅಪಾರ ಜೆ.ಎಮ್,ಎಪ್.ಸಿ ನ್ಯಾಯಾಲಯದ ಆದೇಶದ ಮೇರೆಗೆ ಶ್ರೀ ಕಾಶೀನಾಥ ತಂದೆ ಲಕ್ಷ್ಮಣ ರಾಠೋಡ ಇವರ ಮಗಳಾದ ಸುನೀತಾ, ಸೀತಾ ತಂದೆ ಹರೀಸಿಂಗ  ಮತ್ತು ಶ್ಯಾಮಬಾಯಿ ತಂದೆ ದುರ್ಗಪ್ಪಾ ಇವರು ದಿನಾಂಕ:11-09-2011 ರಂದು ಶಹಾಬಾದ ರೋಡದಲ್ಲಿರುವ ಲಾಹೋಟಿ ಕಂಕರ ಮಷಿನದ ಖಣಿಯಲ್ಲಿ  ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಸಂತೋಷ ತಂದೆ ಸುರೇಶ ಲಾಹೋಟಿ, ಸುರೇಶ ತಂದೆ ರಾಮವಿಲಾಸ ಲಾಹೋಟಿ ಸಾ:ಲಾಹೋಟಿ ಕಂಕರ ಮಿಷನ ಗುಲಬರ್ಗಾ ರವರು ಮೃತಪಟ್ಟವರಿಗೆ ಯಾವದೇ ಪರಿಹಾರ ಧನ ಕೊಡದೆ ಮೃತಪಟ್ಟ ವಾರಸುದಾರರಿಂದ ಬಿಳಿ ಹಾಳಿ ಮೇಲೆ ಸಹಿ ತಗೆದುಕೊಂಡಿರುತ್ತಾರೆ. ಸದರಿ ಖಣಿಯಲ್ಲಿ ಲೇಬರ ಕೆಲಸ ಮಾಡುತ್ತಿರುವವರಿಗೆ ಯಾವದೇ ಸುರಕ್ಷತೆ ಒದಗಿಸದೆ ಇರುವದರಿಂದ ನಮ್ಮ  ಮಗಳು ಮತ್ತು ಸೀತಾ ತಂದೆ ಹರೀಸಿಂಗ  ಮತ್ತು ಶ್ಯಾಮಬಾಯಿ ತಂದೆ ದುರ್ಗಪ್ಪಾ ಇವರು ಮೃತಪಟ್ಟಿರುತ್ತಾರೆ.  ಸದರಿ ಲಾಹೋಟಿ ಕಂಕರ ಮಿಷನ ಮಾಲಿಕರ ಮೇಲೆ ಕ್ರಮ ಜರುಗಿಸಬೇಕು ಅಂತಾ ಶ್ರೀ ಕಾಶೀನಾಥ ತಂದೆ ಲಕ್ಷ್ಮಣ ರಾಠೋಡ ತಾ||ರೇವೂರ ತಾಂಡಾ ರವರು ದೂರು ಸಲ್ಲಿಸಿದ  ಸಾರಂಶದ ಮೇಲಿಂದ  ಠಾಣೆ ಗುನ್ನೆ ನಂ:205/2012 ಕಲಂ 304(ಎ)  ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.