POLICE BHAVAN KALABURAGI

POLICE BHAVAN KALABURAGI

06 May 2014

Gulbarga District Reported Crimes

ಅಪಘಾತ ಪ್ರಕರಣಗಳು :
ವಿಶ್ವವಿದ್ಯಾಲಯ ಠಾಣೆ : ಶ್ರೀ ಗಣೇಶ ತಂದೆ ಕಮಲಾಕರ್ ಸುತ್ತಾರ ಸಾ: ಸಣ್ಣೂರ ಗ್ರಾಮ ತಾ:ಜಿ: ಗುಲಬರ್ಗಾ ಇವರು ದಿನಾಂಕ  05-0514 ರಂದು 06-00 ಪಿ,ಎಮ ಸುಮಾರಿಗೆ ನ್ನ ಕಾಕನ ಮಗನಾದ ರಾಜಕುಮಾರ @ ರೇವಣಸಿದ್ದಪ್ಪ ಇವನು ತನ್ನ ಮೋಟಾರ ಸೈಕಲ ನಂಬರ ಕೆಎ-36-ಎಚ್-3165 ನೇದ್ದರ ಮೇಲೆ ನಮ್ಮ ಮಾವನಾದ ರಾಜು ತಂದೆ ಕಲ್ಯಾಣರಾವ ಇಬ್ಬರೂ ಕೂಡಿ ಗುಲಬರ್ಗಾ ಹೊರಟರು ಸದರಿ ಮೋಠಾರ ಸೈಕಲ ನಮ್ಮ ಮಾವ ಚಲಾಯಿಸಿಕೊಂಡು ಹೋದರು ಅಂದಾಜು 06-30 ಪಿ,ಎಮ ಸುಮಾರಿಗೆ ನನ್ನ ಕಾಕನ ಮೋಬೈಲ ಪೋನದಿಂದ ನನಗೆ ಯಾರೋ ಅಪರಿಚತರು ಪೋನ ಮಾಡಿ ಶ್ರೀನಿವಾಸ ಸರಡಗಿ ದಾಟಿ ಚೆಂಗಟಿ ತೋಟದ ಹತ್ತೀರ ಅವರ ಮೋಟಾರ ಸೈಕಲಗೆ ಯಾವುದೋ ಒಂದು  ನಾಲ್ಕು ಚಕ್ರದ ವಾಹನ ಡಿಕ್ಕಿಪಡಿಸಿ ಸ್ಥಳದಲ್ಲಿಯೆ ಒಬ್ಬನು ಮೃತಪಟ್ಟಿದ್ದು ಇನ್ನೊಬ್ಬನಿಗೆ ಗಾಯಗಳಾಗಿದ್ದು ಸದರಿಯವನು ಮಾತನಾಡುವ ಸ್ಥತಿಯಲ್ಲಿಲ್ಲ ಅಂತಾ ತಿಳಿಸಿದ್ ಮೇರೆಗೆ ನಾನು ಬಂದು ನೋಡಲಾಗಿ ರಾಜಕುಮಾರ @ ರೇವಣಸಿದ್ದಪ್ಪ ಇತನಿಗೆ ನೊಡಲು ಎಡಗಾಲಿನ ಮೊಳಕಾಲಿಗೆ ತರಚಿದ ಗಾಯ ಬಲ ಕಿವಿಯಿಂದ ರಕ್ತ ಸೋರುತ್ತಿದ್ದು ಬಲಗೈ ಹಸ್ತದ ಮೇಲ್ಭಗದ ಮೇಲೆ ತರಚಿದ ಗಾಯವಾಗಿರುತ್ತದೆ,ನನ್ನ ಮಾವನಿಗೆ ನೋಡಲು ಅವರಿಗೆ ತೆಲೆಯ ಮೇಲೆ ಭಾರಿ ರಕ್ತಗಾಯವಾಗಿದ್ದು ಮತ್ತು ಪಕ್ಕೆಗೆ ಒಳಪೆಟ್ಟಾಗಿರುತ್ತದೆ, ಸದರಿ ನನ್ನ ಮಾವ ಈ ಅಪಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀ ಮೋಹನ ತಂದೆ ದನಸಿಂಗ ರಾಠೋಡ ಸಾ: ಮದಿಹಾಳ ತಾಂಡಾ  ತಾ:ಜಿ: ಗುಲಬರ್ಗಾ ಇವರು ದಿನಾಂಕ 05-05-14 ರಂದು ಮನೆಯಿಂದ ನನ್ನ ತಮ್ಮ 04-30 ಪಿ, ಎಮ ಸುಮಾರಿಗೆ ಬಿಸಿ ಹಣ ಸಂಗ್ರಹಿಸಲು ತನ್ನ ಮೋಟಾರ ಸೈಕಲ ನಂಬರ ಕೆಎ-33-ಜ-1143 ನೇದ್ದರ ಮೇಲೆ ಹೋದನು ಅಂದಾಜು 07-00 ಪಿ,ಎಮ ಸುಮಾರಿಗೆ ವಿಶ್ವ ವಿದ್ಯಾಲಯ ಪೊಲೀಸ ಠಾಣೆಯ ಪೊಲೀಸರು ನನ್ನ ತಮ್ಮನ ಮೋಬೈಲ ಪೊನದಿಂದ ನನ್ನ ಮೋಬೈಲ ಪೋನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಈ ಮೋಬೈಲ ಪೋನ ವ್ಯಕ್ತಿ ನಿಮಗೆ ಏನು ಆಗಬೇಕೆಂದು ಕೇಳಲು ನಾನು ಅವನು ನನ್ನ ತಮ್ಮ ಪ್ರಕಾಶ ತಂದೆ ಧನಸಿಂಗ ರಾಠೊಡ ಇರುತ್ತನೆ. ಅಂತ  ತಿಳಿಸಿದಾಗ ಅವರು ನಿಮ್ಮ ತಮ್ಮ ಸೇಡಂ ರೋಡ ಗುರುಕುಲ ಕ್ರಾಸ ಹತ್ತೀರ ರೋಡಿನ ಎಡ ಬದಿಯಲ್ಲಿ ನಿಂತಿದ್ದ ಟ್ರ್ಯಾಕ್ಟರಿಗೆ ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಟ್ರ್ಯಾಕ್ಟರ ಹಿಂದೆ ಡಿಕ್ಕಿಪಡಿಸಿ ತೆಲೆಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ. ಅಂತಾ ತಿಳಿಸಿದ ಮೇರೆಗೆ  ನಾನು ಬಂದು ನೋಡಲಾಗಿ ನನ್ನ ತಮ್ಮ ರೋಡಿನ ಸೈಡಿಗೆ ನಿಂತ ಟ್ರ್ಯಾಕ್ಟರ ನಂ ಎಪಿ-23-8428 ಇಂಜಿನ ಟ್ರ್ಯಾಲಿ ನಂ ಕೆಎ32-ಟಿ-8623 ನೇದ್ದಕ್ಕೆ ಡಿಕ್ಕಿಪಡಿಸಿ ಭಾರಿ ರಕ್ತಗಾಯವಾಗಿ ಸ್ಥಲದಲ್ಲಿಯೇ  ಮೃತಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಂಕರ ತಂದೆ ಸಂಗಪ್ಪ ಚವಡಿ ಇವರು ದಿನಾಂಕ 05-05-2014 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ತನ್ನಬೈಸಿಕಲ ಮೇಲೆ ವಿರೇಶ ನಗರ ಕ್ರಾಸ ದಿಂದ ಜಿ.ಜಿ.ಹೆಚ್ ಸರ್ಕಲ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಮೋಟಾರ ಸೈಕಲ ನಂಬರ ಕೆಎ-32 ಇಡಿ-1539 ರ ಸವರನಾದ ಕಾಶಿನಾಥ ತನ್ನ ಮೋ/ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಬೈಸಿಕಲಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಗಾಯಗೊಳಿಸಿ ತಾನು ಸಹ ಕೂಡಾ ಗಾಯಹೊಂದಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 04-05-2014 ರಂದು ನಮ್ಮ ಗ್ರಾಮದ ಬಸವಣ್ಣಪ್ಪ ದೇವರ ಜಾತ್ರೆ ಇದ್ದರಿಂದ ಜಾತ್ರೆಗೆ ಶ್ರೀಮತಿ ಪಾರ್ವತಿ ಗಂಡ ಲಾಡಪ್ಪ ಸಕ್ಕರಗಿ ಸಾ : ಬಳೂರ್ಗಿ ರವರು ಹೋಗಿದ್ದು  ಜಾತ್ರೆ ಮುಗಿಸಿಕೊಂಡು ಅಂದಾಜು ಸಾಯಂಕಾಲ 6:45 ಗಂಟೆ ಸುಮಾರಿಗೆ ನಮ್ಮ ಗ್ರಾಮದ ಚಂದವ್ವ ತೋಳೆ ಇವರ ಮನೆಯ ಮುಂದೆ ಬರುತ್ತಿದ್ದಾಗ, ನಾನು ನನ್ನ ಮಗಳಿಗೆ ಮಾತಾಡಿಸಬೇಕು ಎಂದು ಅವಳ ಹತ್ತಿರ ಹೋಗಿ ಮಾತಾಡಿಸುತ್ತಿದ್ದಾಗ, ಅವಳ ಜೊತೆಗೆ ಇದ್ದ ನನ್ನ ಗಂಡ ಶೈಲಶ್ರೀ ದೊಡ್ಡಮನಿ, ರೇಖಾ ದೊಡ್ಡಮನಿ, ಶ್ರೀಧೇವಿ ಜಳಕಿ, ರೂಪಾ ದೊಡ್ಡಮನಿ, ಮಲ್ಲಮ್ಮ ದೊಡ್ಡಮನಿ, ರೇಣುಕಾ ಬಸವಕಲ್ಯಾಣ, ಪ್ರೀಯಾಂಕ ಕೋಳೆಕರ ಇವರೆಲ್ಲರು ನನ್ನನ್ನು ಸುತ್ತುಗಟ್ಟಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ನನಗೂ ಮತ್ತು ಅವರೀಗೂ ಬಾಯಿ ತಕರಾರು ಆಗುತ್ತಿದ್ದಾಗ ಸಿದ್ದಪ್ಪ ಜಳಕಿ, ನೇಹರು ದೊಡ್ಡಮನಿ, ಸುರೇಶ ದೊಡ್ಡಮನಿ, ಇವರು ಬಂದು ಏನ ಅಂತಾ ಇದಾಳ ರಂಡಿ, ರಂಡಿಗಿ ಕಲಾಸ ಮಾಡ್ರಿ ಅಂತಾ ಎಲ್ಲರೂ ಬೈಯುತ್ತಾ ಕೈಯಿಂದ ಹೊಡೆಯುತ್ತಾ ಎಲ್ಲರೂ ಕೂಡಿ ನನ್ನನ್ನು ಆಕಡೆ  ಈಕಡೆ ತಳ್ಳಾಡಿದರೂ, ಆಗ ನಾನು ಅವರಿಂದ ತಪ್ಪಿಸಿಕೊಂಡು ಹೊಗುತ್ತಿದ್ದಾಗ ಎಲ್ಲರೂ ಕೂಡಿ ನನ್ನನ್ನು ಗಟ್ಟಿ ಆಗಿ ಯಾವಕಡೆ ಹೊಗದಂತೆ ಹಿಡಿದುಕೊಂಡರು, ಸದರಿಯವರು ನನಗೆ ತಳ್ಳಾಡಿ ಕೈಯಿಂದ ಹೊಡೆದರಿಂದ ನನ್ನ ಮೈ ಕೈಗೆ ಹಾಗೂ ತಲೆಗೆ ಗುಪ್ತ ಪೆಟ್ಟುಗಳು ಆಗಿರುತ್ತದೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ:
ಅಶೋಕ ನಗರ ಠಾಣೆ :  ಶ್ರೀ. ಸುಭಾಷ ದುಂಡಪ್ಪ ಸರಿಕಾರ ಸಾ:  ಪ್ಲಾಟ ನಂ. 8-ಸಿ ನ್ಯೂ ಘಾಟಗೆ ಲೇಔಟ ಗುಲಬರ್ಗಾ ರವರು ಘಾಟಗೇ ಲೇಔಟ ಬುದ್ದ ಮಂದಿರ ಹತ್ತಿರ ಪ್ಲಾಟ ಸಂ. 62/01 ರಲ್ಲಿ ಹೊಸದಾಗಿ ಮನೆ ನಿರ್ಮಿಸುತ್ತಿದ್ದು ಸದರಿ ಮನೆಯ ಕೆಳಅಂತಸ್ಥಿನ ಅಡುಗೆ ಮನೆ ಕೆಳ ಅಂತಸ್ಥಿನ ಮೋದಲನೆ ಬೆಡ್ ರೂಮಿನ ಬಾತ ರೂಮು, ಹಾಗು ಮೊದಲನೆ ಅಂತಸ್ಥಿನ ಬಾತ್ ರೂಮುನಲ್ಲಿ ಹಾಕಲಾದ ಬೇಲೆ ಬಾಳುವ ಸ್ಟೀಲ್ ನಳಗಳನ್ನು ಮತ್ತು ಶವರಗಳನ್ನು ದಿನಾಂಕ 04-05-2014 ರಂದು ರಾತ್ರಿ ಕಳವು ಅಗಿರುತ್ತದೆ.  ಯಾರೋ ಕಳ್ಳರು ಮನೆ ಬೀಗವನ್ನು ಒಡೆದು ಕಳ್ಳತನ ಮಾಡಿರುತ್ತಾರೆ. ಕಳ್ಳತನವಾದ ಸಾಮಾನುಗಳ ಬೇಲೆ ಸುಮಾರು 15,000/- ರೂ ಆಗಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. 
ಅಪಹರಣ ಪ್ರರಕರಣ :
ಮಹಿಳಾ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ದಿ;ಗುರುಲಿಂಗಯ್ಯ ಗುಡಿ ಇವರ ಮಗಳಾದ ಕುಮಾರಿ ಭವಾನಿ ತಂದೆ ದಿ;ಗುರುಲಿಂಗಯ್ಯ ಗುಡಿ ವಯ;14 ವರ್ಷ ಇವಳು ನಿನ್ನೆ ದಿನಾಂಕ 04.05.2014 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದವಳು ಇಲ್ಲಿಯವರೆ ಮರಳಿ ಮನೆಗೆ ಬಂದಿರುವದಿಲ್ಲಾ. ನಾನು ನಮ್ಮ ಸಂಬಂದಿಕರಲ್ಲಿ ಸ್ನೇಹಿತರಲ್ಲಿ ಹುಡುಕಾಡಿದರೂ ಪತ್ತೆ ಆಗಿರುವದಿಲ್ಲಾ ಕಾರಣ ನನ್ನ ಮಗಳಾದ ಭವಾನಿ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.