POLICE BHAVAN KALABURAGI

POLICE BHAVAN KALABURAGI

07 August 2012

GULBARGA DISTIRCT REPORTED CRIME


ಕಳ್ಳತನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶಿವಬಾಯಿ ಗಂಡ ಧರ್ಮಣ್ಣ ದೊಡ್ಡಮನಿ ಸಾ: ಜೇವರ್ಗಿ ರವರು ನಾನು  ಮತ್ತು ನನ್ನ ಮಗನಾದ ಬಸವರಾಜ, ಸೊಸೆಯಾದ ಭಾಗ್ಯಶ್ರೀ, ಮಗಳಾದ ಶ್ರೀದೇವಿ, ಹಾಗೂ ಅವಳ ಗಂಡನಾದ ಅಯ್ಯಣ್ಣ ತಂದೆ ಮರಗಪ್ಪ ಎಲ್ಲರೂ ಕೂಡಿ ಮನೆಯ ಬಾಗಿಲಿಗೆ ಕೀಲಿ ಹಾಕಿಕೊಂಡು ಶಹಾಬಾದ ಪಟ್ಟಣಕ್ಕೆ ದಿನಾಂಕ:01-08-2012 ರಂದು ರಕ್ಷಾ ಬಂದನ ಹುಣ್ಣಿಮೆ ಇದ್ದ  ಪ್ರಯುಕ್ತ ಹೋಗಿರುತ್ತೆವೆ. ನಾವೆಲ್ಲರೂ ಮರಳಿ ಜೇವರ್ಗಿಗೆ ಬಂದು ನೋಡಲಾಗಿ ಮನೆಯಲ್ಲಿದ್ದ ಆಲಮಾರಿಯಲ್ಲಿಟ್ಟಿದ್ದ ನಗದು ಹಣ 13,000/- ರೂ, 7 ಗ್ರಾಂ ಬಂಗಾರದ ಬೋರಾಮಳ ಸರ ಅಂ.ಕಿ. 18,000/- ರೂ, 5 ಗ್ರಾಂ ಬಂಗಾರದ ಜೀರಾಮಣಿ ಅ.ಕಿ:14,000/- ರೂ 5 ಗ್ರಾಂ ಬಂಗಾರದ ಲಾಕೇಟ ಅಕಿ|| 14,000/- ರೂ, 3 ಗ್ರಾಂ ಕಿವಿಯಲ್ಲಿನ ಹೂವು ಅಕಿ||5,000/- ರೂ ತಲಾ ಒಂದು ಗ್ರಾಮ್  5 ಬಂಗಾರದ ಉಂಗುರುಗಳು ಅಕಿ|| 14,000/- ರೂ ಮೌಲ್ಯದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 115/2012 ಕಲಂ 454, 457, 480 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT

ನಿಧಿಗಾಗಿ ಆಸೆಗಾಗಿ ಮಹಾವೀರ ಜೈನ ತಿರ್ಥಂಕರ್ ಮೂರ್ತಿಯನ್ನು ದ್ವಂಸ ಮಾಡಿದ ಆರೋಪಿತರ ಬಂದನ;
ಮಾನ್ಯ ಜಿಲ್ಲಾ ಪೊಲೀಸ ಅಧೀಕ್ಷಕರಾದ ಶ್ರೀ ಪ್ರವೀಣ ಪಧುಕರ ಪವಾರ ಐಪಿಎಸ್ ಗುಲಬರ್ಗಾ ರವರು ಮತ್ತು ಅಪರ ಜಿಲ್ಲಾ ಪೊಲೀಸ ಅಪರ್ ಪೊಲೀ್ಸ ಅಧೀಕ್ಷಕರಾದ ಶ್ರೀ ಕಾಶೀನಾಥ ತಳಕೇರಿ ರವರು ಹಾಗು ಶಹಾಬಾದ ಪೊಲೀಸ ಉಪಾಧೀಕ್ಷಕರಾದ ಶ್ರೀ,ಎಂ.ವಿ.ಸೂರ್ಯವಂಶಿರವರ ಮೇಲ್ವಿಚಾರಣೆಯಲ್ಲಿ ಚಿತ್ತಾಪೂರ ಸಿಪಿಐ ಶ್ರೀ ಚಂದ್ರಕಾಂತ ಪೂಜಾರಿ ಮತ್ತು ಪಿ.ಎಸ್.ಐ ರವರುಗಳಾದ ಶ್ರೀ ಸೋಮಶೇಖರ ಕೆಂಚರಡ್ಡಿ ಮತ್ತು ವಾಡಿ ಪೊಲೀಸ ಠಾಣೆಯ ಪಿ.ಎಸ್.ಐ ಶ್ರೀ ಶ್ರೀಮಂತ ಇಲ್ಲಾಳ ಹಾಗು ಸಿಬ್ಬಂದಿರವರೊನ್ನೊಳಗೊಂಡ ತಂಡವನ್ನು ರಚಿಸಿ, ಚಿತ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ದಿ.25/26-07-2012 ರಂದು ರಾತ್ರಿ ಚಿತ್ತಾಪೂರ ತಾಲೂಕಿನ ಅಲ್ಲುರ(ಬಿ) ಗ್ರಾಮದ ಜೈನ ಸಮುದಾಯಕ್ಕೆ ಸೇರಿದ ಪಾರ್ಶ್ವನಾಥ ಬಸದಿಯಲ್ಲಿನ ಮಹಾವಿರ ಜೈನರವರ ಕಲ್ಲಿನ ಮೂರ್ತಿಯನ್ನು ಅಪರಿಚಿತ ನಿಧಿಗಳ್ಳರು ನಿಧಿ ಆಸೆಗಾಗಿ ಒಡೆದು ದ್ವಂಸಗೊಳಿಸಿದ್ದರಿಂದ ಶ್ರೀ ರಾಮಣ್ಣ ಕೆ.ನಾಟೀಕರ ಗ್ರಾಮ ಪಂಚಾಯತ ಅಧ್ಯಕ್ಷರು ಅಲ್ಲೂರ(ಬಿ) ರವರು ದೂರು ಸಲ್ಲಿಸಿದ ಮೇರೆಗೆ ಚಿತ್ತಾಪೂರ ಠಾಣೆ ಗುನ್ನೆ ನಂ.72/2012 ಕಲಂ.295 ಐಪಿಸಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿಯ ಆರೋಪಿಗಳನ್ನು ಪತ್ತೆ ಹಚ್ಚಿ ಪ್ರಕರಣದಲ್ಲಿ ಭಾಗಿಯಾದ ದುರ್ಜನಪ್ಪ ತಂದೆ ದೇವಿಂದ್ರಪ್ಪ ಗಮಗಾನವರ,ಮೋನಪ್ಪ ತಂದೆ ಶರಣಪ್ಪ ಚಾಮನವರ,ದೇವಿಂದ್ರಪ್ಪ ಬೋಗೋಣಿ ಸಾ|| ಆಲ್ಲೂರ(ಬಿ) ಮತ್ತು ಕಾಸೀಮ ತಂದೆ ಮಹೆಬೂಬಸಾಬ ಖುರೇಸಿ ಸಾ||ಡೊಣಗಾಂವ ರವರನ್ನು ಬಂದಿಸಿ ಅಪರಾಧ ಕೃತ್ಯಕ್ಕೆ ಬಳಸಿದ ಉಳಿ (ಛನ್ನಿ)ಮತ್ತು ಹ್ಯಾಮರ (ಸುತ್ತಿಗೆ) ವಶಪಡಿಸಿಕೊಂಡು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.ಇನ್ನೂಳಿದ ಆರೋಪಿತರ ಪತ್ತೆ ಕುರಿತು ಶೋದನೆ ಕಾರ್ಯ ಜಾರಿಯಲ್ಲಿದೆ.

GULBARGA DISTRICT

ಮನೆಗಳ್ಳನ ಬಂದನ,
2.5 ಲಕ್ಷ ರೂಪಾಯಿ ಮೌಲ್ಯಗಳ ಬಂಗಾರ, ಬೆಳ್ಳಿ ಆಭರಣ ವಶ.
ಮಾನ್ಯ ಶ್ರೀ ಪ್ರವೀಣ ಮಧುಕರ ಪವಾರ ಎಸ್.ಪಿ ಗುಲಬರ್ಗಾ,ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್.ಪಿ. ಗುಲಬರ್ಗಾ, ಮತ್ತು ಶ್ರೀ ಹೆಚ್. ತಿಮ್ಮಪ್ಪ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ದಿನಾಂಕ:06-0-8-2012ರಂದು ಗುಲಬರ್ಗಾ ನಗರದ ಆರ್.ಟಿ.ಓ ಕ್ರಾಸ ಹತ್ತಿರ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು ಕುಖ್ಯಾತ ಮನೆ ಕಳ್ಳತನ ಮಾಡುವ ಕಳ್ಳನನ್ನು ಬಂದಿಸಿ,ಆತನಿಂದ ಎಮ್.ಬಿ ನಗರ ಪೊಲೀಸ ಠಾಣೆ ವ್ಯಾಪ್ತಿಯ ಸ್ವಸ್ತಿಕ ನಗರ ಬಡಾವಣೆಯ ಮನೆಯಲ್ಲಿ ಕಳ್ಳತನ ಮಾಡಿದ ಬಂಗಾರದ ಮತ್ತು ಬೆಳ್ಳಿ ಆಭರಣಗಳು, ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ,ಶ್ರೀ ಪಂಡಿತ ಸಗರ ಪಿ.ಎಸ್.ಐ ವಿಶ್ವವಿದ್ಯಾಲಯ ಠಾಣೆ,ಶ್ರೀ ಸಂಜೀವಕುಮಾರ ಪಿ.ಎಸ್.ಐ ಎಂ.ಬಿ ನಗರ ಠಾಣೆ ಮತ್ತು ಸಿಬ್ಬಂದಿಯವರಾದ ಶ್ರೀ ಗುರುಶರಣ ಹೆಚ್.ಸಿ, ಶಿವಪುತ್ರಸ್ವಾಮಿ ಹೆಚ್.ಸಿ, ಶ್ರೀ ಶ್ರೀನಿವಾಸರೆಡ್ಡಿ ಪಿಸಿ, ಸಿದ್ರಾಮಯ್ಯಸ್ವಾಮಿ ಪಿಸಿ, ಅಶೋಕ ಪಿಸಿ, ಅರ್ಜುನ ಎ.ಪಿ.ಸಿ, ಪ್ರಭಾಕರ ಪಿಸಿ, ಚಂದ್ರಕಾಂತ ಪಿಸಿ, ವೇದರತ್ನಂ ಪಿಸಿ, ಶಂಕರ ಹೆಚ್.ಸಿ, ರವರು ದಾಳಿ ಮಾಡಿ  ಮನೆ ಕಳವು ಮಾಡಿದ ಅರವಿಂದ ತಂದೆ ಶಾಹೀರ ಉಪಾಧ್ಯಾಯ ವಯಃ 25 ವರ್ಷ ಉಃ ಬೇಕಾರ ಜಾತಿಃ ಮಂಗರವಾಡಿ ಸಾಃ ಬಾಪು ನಗರ ಮಂಗಾರವಾಡಿ ಗಲ್ಲಿ ಗುಲಬರ್ಗಾ ಇತನನ್ನು ವಿಚಾರಣೆಗೆ ಒಳಪಡಿಸಿದಾಗ, ಸುಮಾರು 8 ದಿವಸಗಳ ಹಿಂದೆ ಗುಲಬರ್ಗಾ ನಗರದ ಸ್ವಸ್ತಿಕ ನಗರದಲ್ಲಿ ಬೀಗ ಹಾಕಿದ ಮನೆಯ ಬಾಗಿಲ ಕಿಲಿಕೈಯನ್ನು ಮುರಿದು ಅಲಮಾರಿಯಲ್ಲಿದ್ದ ಸುಮಾರು 2.5ಲಕ್ಷ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಕಳವು ಮಾಡಿಕೊಂಡಿದ್ದನ್ನು ಜಪ್ತಿ ಮಾಡಿಕೊಂಡು ಅರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ. ಮಾನ್ಯ ಎಸ್.ಪಿ ಸಾಹೇಬರು ಪ್ರಕರಣವನ್ನು ಭೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಸೂಕ್ತ ಬಹುಮಾನ ಘೋಷಿಸಿರುತ್ತಾರೆ.

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ದಿನಾಂಕ 06-08-12 ರಂದು ಬೆಳಗ್ಗೆ   9-30 ಗಂಟೆಗೆ ಶಹಾ ಬಜಾರ  ದಿಂದ ಆಳಂದ ಚೆಕ್ ಪೊಸ್ಟ ಮೇನ ರೋಡಿನಲ್ಲಿ ಬರುವ ಶೆಟ್ಟಿ ಶಾಲೆಯ ಎದುರು ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ-32 ವಾಯ್-6291 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಆಳಂದ ಚೆಕ್ಕಪೊಸ್ಟ  ಕಡೆಯಿಂದ  ಅತೀವೇಗವಾಗಿ  ಮತ್ತು ಅಲಕ್ಷತನದಿಂದ  ಚಲಾಯಿಸಿಕೊಂಡು ಬಂದು ನವೀನ ಈತನಿಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ಮೋಟಾರ ಸೈಕಲ ಸಮೇತ ಸವಾರ ಓಡಿ ಹೋಗಿರುತ್ತಾನೆ ಅಂತಾ ಶ್ರೀ ಶರಣಬಸಪ್ಪ ತಂದೆ ಗುಂಡಪ್ಪಾ ಪುಟಪಾಕ ಉ:ದಿನಗೂಲಿ ನೌಕರ ಸಾ:ಆರಾಧನ ಕಾಲೇಜ ಹತ್ತಿರ ಆಳಂದ ರೋಡ ಶಹಾಬಜಾರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 80/2012 ಕಲಂ 279, 337 ಐಪಿಸಿ ಸಂಗಡ 187 ಐ.ಎಮ.ವಿಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ಥಾರೆ.
ಹಲ್ಲೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ಬಾಬು ತಂದೆ ಪೀರಪ್ಪ ಸಿಂಗೆ ಸಾ: ಅಶೋಕ ನಗರ ಗುಲಬರ್ಗಾ ರವರು ನಾನು  ಕರ್ನಾಟಕ ಗೃಹ ಮಂಡಳಿ ಗುಲಬರ್ಗಾ ವತಿಯಿಂದ ಕೆ.ಎಚ್.ಬಿ ಪ್ಲಾಜಾ ಶಾಪಿಂಗ ಕಾಂಪ್ಲೇಕ್ಸ ಕೇಂದ್ರ ಬಸ್ಸ ನಿಲ್ದಾಣ ಎದುರುಗಡೆ ದಿನಾಂಕ: 04/03/2004 ರಂದು ಕೆಳ ಭಾಗದ ಒಂದು ಮಳಿಗೆ ಸಂಖ್ಯೆ : ಸಿ.ಎಫ್ 20 ಕೆ.ಹೆಚ್.ಬಿ ಪ್ಲಾಜಾ ಶಾಪಿಂಗ್ ಕಾಂಪ್ಲೇಕ್ಸ್ 15 9’’ Xx 18 6’’ ಅನ್ನು ರೂಪಾಯಿ 4,38,225/- ಗಳಿಗೆ ನನ್ನ ಮಗನಾದ ರವಿಕುಮಾರ ತಂದೆ ಬಾಬು ಸಿಂಗೆ ಹೆಸರಿಗೆ ಖರೀಸಿದ್ದೇನೆ. ಸದರಿ ಖರೀದಿ ಪತ್ರವು ದಿನಾಂಕ 085/03/20114 ರಂದು ಗುಲಬರ್ಗಾ ಜಿಲ್ಲಾ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ದಸ್ತಾವೇಜ ಸಂಖ್ಯೆ :8513/2004 ಎಂದು ಇರುತ್ತದೆ. ದಿನಾಂಕ 29/03/2010 ರಂದು ಮೊಹ್ಮದ ತನವೀರ ತಂದೆ ಮೊಹ್ಮದ ಹನೀಫ್ ಸಾ: ಜೀಲಾನಾಬಾದ ಎಮ್.ಎಸ್.ಕೆ ಮಿಲ್ ಗುಲಬರ್ಗಾ ಇವರಿಗೆ ನನ್ನ ಮಕ್ಕಳಾದ ರವಿಕುಮಾರ ಮತ್ತು ಲಕ್ಷ್ಮಿಕಾಂತ ಸಿಂಗೆ ಇವರು ರೂ 7100/- ರಂತೆ 1 ತಿಂಗಳ ಬಾಡಿಗೆ ಮತ್ತು 1,00,000/- ಗಳು ಮುಂಗಡ ಹಣವನ್ನು ಕೊಡುವಂತೆ ಗುಲಬರ್ಗಾ ನ್ಯಾಯಾಲಯದಲ್ಲಿ ನೋಟರಿ ಮಾಡಿಸಿಕೊಂಡು ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದು ನಿಜವಿರುತ್ತದೆ. ಆದರೆ ಮೊಹ್ಮದ ತನ್ವೀರ ತಂದೆ ಮೊಹ್ಮದ ಹನೀಫ್ ಇವರು ಒಪ್ಪಂದ ಪತ್ರದ ಪ್ರಕಾರ ರೂ 1,00,000/- ಗಳು ಮುಂಗಡ ಹಣ ನೀಡದೇ ಇದ್ದುದ್ದರಿಂದ ನಾವು ಅವನಿಗೆ ಮೂಲ ದಾಖಲೆ ಪತ್ರವನ್ನು ನೀಡಿರುವುದಿಲ್ಲಾ. ನಮ್ಮ ಅಂಗಡಿ (ಮಳಿಗೆ)ಯನ್ನು ಖಾಲಿ ಮಾಡಿಕೊಡುವಂತೆ ಹಲವು ಬಾರಿ ವಿನಂತಿಸಿಕೊಂಡಿರುತ್ತೇವೆ.ಆದರೆ ತಾವಾಗಿಯೇ ಮಾನ್ಯ ಸಿವಿಲ್ ನ್ಯಾಯಾಲಯ ಗುಲಬರ್ಗಾದಲ್ಲಿ ನಮ್ಮ ವಿರುದ್ದ ನಾವೆ ಅಂಗಡಿ ಮಾಲಿಕರು ಅಂತಾ ದಾವೆ ಹೂಡಿದರು ಮಾನ್ಯ ನ್ಯಾಯಾಲಯವು (ಅರ್ಜಿ ಸಂಖ್ಯೆ : 361/2010 ) ಅವರ ಅರ್ಜಿಯನ್ನು ಪುರಸ್ಕರಿಸದೇ ದಿನಾಂಕ 21/06/2012 ರಂದು ಅವರ ಬೇಡಿಕೆಯನ್ನು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿರುತ್ತಾರೆ. ದಿನಾಂಕ 06/08/2012 ರಂದು ಸುಮಾರು ಮಧ್ಯಾಹ್ನ 1-30 ಗಂಟೆಗೆ ನಾನು ಮತ್ತು ನನ್ನ ಮಕ್ಕಳಾದ ಲಕ್ಷ್ಮಿಕಾಂತ ಮತ್ತು ಯೊಗೇಂದ್ರ ಸಿಂಗೆ ಜೊತೆಗೂಡಿ ಅಂಗಡಿಗೆ ಹೋಗಿ ಮೊಹ್ಮದ ತನ್ವಿರನಿಗೆ ಅಂಗಡಿ ಖಾಲಿ ಮಾಡುವಂತೆ ವಿನಂತಿಸಿಕೊಂಡೇವು. ವಾದ-ವಿವಾದಗಳಿಂದ ರೊಚ್ಚಿಗೆದ್ದ ಮೊಹ್ಮದ ತನವೀರ ಮತ್ತು ಆತನ ಸಹೋದರರಾದ ಮುಕ್ತಾದೀರ, ಬಜ್ಜು, ಪಾಶಾ ಮನ್ನನ್ ಮತ್ತು ಸುಮಾರು 15-20 ಜನರನ್ನು ಕರೆಯಿಸಿಕೊಂಡು ನನ್ನ ಮೇಲೆ ಹಲ್ಲೆ ಮಾಡಿ ಹೊಟ್ಟೆಗೆ ಕೈ ಮುತ್ತಿಗೆಯಿಂದ ಗುದ್ದಿ, ಹೊಡೆದು ಎದೆಯ ಮೇಲಿನ ಅಂಗಿ ಹಿಡಿದು ‘’ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನಂತರ ಅಂಗಡಿಯ ಶಟ್ಟರನ್ನು (ಬಾಗಿಲು) ಮುಚ್ಚಿ ಕೀಲಿ ಹಾಕಿಕೊಂಡು ಹೋಗುವ ದೃಶ್ಯಾವಳಿಯನ್ನು ನನ್ನ ಮಗ ಯೊಗೇಂದ್ರ ಮೊಬೈಲ್ ( 9901085408) ಸೇರೆ ಹಿಡಿದದ್ದನ್ನು ನೋಡಿ ಬಜ್ಜು ಎಂಬಾತನ್ನು ನನ್ನ ಮಗನ ಕೈಯಲ್ಲಿದ್ದ ಮೊಬೈಲನ್ನು ಕಸಿದುಕೊಂಡು ನೆಲಕ್ಕೆ ಬಡಿದು ಅದರಲ್ಲಿದ್ದ ಮೆಮೋರಿ ಕಾರ್ಡನ್ನು  ಕಿತ್ತುಕೊಂಡು ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:67/2012 ಕಲಂ 143, 147, 323, 504, 506, ಸಂ:149  ಐಪಿಸಿ ಮತ್ತು 3(1) (10) ಎಸ್.ಸಿ ಎಸ್.ಟಿ 1989 ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಆಳಂದ ಪೊಲೀಸ್ ಠಾಣೆ:ಶ್ರೀನಿವಾಸ ತಂದೆ ಭೀಮಾಶಂಕರ ಏಕಬೋಟೆ ಮು|| ಬಾಹೇರಪೇಠ  ಆಳಂದ ರವರು ನಾನು ದಿನಾಂಕ: 06/08/2012 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ನನ್ನ ಕೊನೆಯ ಮಗನಾದ ವಿಶಾಲ ತಂದೆ ಶ್ರೀನಿವಾಸ  ಏಕಬೋಟೆ ನನ್ನ ಕುಟುಂಬ ಪರಿವಾರ ಸಮೇತ ಹಸ್ತ ಮಲ್ಲಿಕೇಶ್ವರ ದೇವಿಸ್ತಾಲಕ್ಕೆ ಶ್ರಾವಣ ಸೋಮಾವಾರ ನಿಮೀತ್ಯ ದರ್ಶನಕ್ಕಾಗಿ ಆಳಂದ ಉಮರ್ಗಾ ರೋಡಿನಂದ ಹೋರಟಿದ್ದು ಹಸ್ತ ಮಲ್ಲಿಕಾ ದೇವಾಲಯಕ್ಕೆ ಹೋಗುವ ದಾರಿ ತಪ್ಪಿ ನನ್ನ ಮಗ ಆಳಂದ ಉಮರ್ಗಾ ರೋಡನಲ್ಲಿರುವ ಬ್ರಿಡ್ಜ್ ದಾಟಿ ಸ್ವಲ್ಪು ಮುಂದೆ ಹೋಗಿ ತೆಲೆಕುಣಿ ಹೊಡ್ಡಿನ ಕೆಳಭಾಗದಲ್ಲಿರುವ ನೀಲಕಾಯಿ ಹಣ್ಣಿನ ಮರದ ಕೆಳಗೆ ಹಣ್ಣನ್ನು ತರಲು ಗೀಡದ ಕೆಳಗೆ ನಿಂತಾಗ ಉಮರ್ಗಾ ಕಡೆಯಿಂದ ಆಳಂದಕ್ಕೆ ಬರುತ್ತಿದ್ದ ಬಸ್ಸ ನಂ ಕೆ.ಎ 32 ಎಫ್ 995 ನೇದ್ದರ ಚಾಲಕನು ತನ್ನ ಬಸ್ಸನು ಅತೀವೇಗದಿಂದ ಮತ್ತು ಅಜಾಗರಕತೆಯಿಂದ ಅಡ್ಡಾತ್ತಿಡಿಯಾಗಿ ನಡೆಸಿಕೊಂಡು ರಸ್ತೆ ಕೆಳಭಾಗದಲ್ಲಿರುವ ಗಿಡದ ಕೆಳಗೆ ನಿಂತಿರುವ ನನ್ನ ಮಗ ವಿಶಾಲ ಇತನಿಗೆ ಭಲವಾಗಿ ವೇಗದಿಂದ ಡಿಕ್ಕಿ ಹೊಡೆದು ಬಸ್ಸಿನ ನಡುಭಾಗಕ್ಕೆ ಸಿಲುಕಿ ಎಳದುಕೊಂಡು ಹೋಗಿರುವದರಿಂದ ನನ್ನ ಮಗ ಸ್ಥಳದಲ್ಲಿಯೇ ಮೃತ್ತ ಪಟಿರುತ್ತಾನೆ. ಹಿಂದೆ ಬರುತ್ತಿದ್ದ ನಾನು ನನ್ನ ಹೆಂಡತಿ ವರ್ಷಾ ಓಡಿಬಂದು ನೋಡಲಾಗಿ ನನ್ನ ಮಗ ಮೃತ್ತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 164/2012 ಕಲಂ 279, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.