POLICE BHAVAN KALABURAGI

POLICE BHAVAN KALABURAGI

12 December 2016

Kalaburagi District Reported Crimes.

ಯಡ್ರಾಮಿ ಪೊಲೀಸ್ ಠಾಣೆ : ದಿನಾಂಕ 11-12-2016 ರಂದು 8;10 ಪಿ.ಎಂ ಕ್ಕೆ ಫಿರ್ಯಾದಿ ಶ್ರೀಶೈಲ ತಂದೆ ಬಸಪ್ಪ ದೊಡಮನಿ ವಯ; 20 ವರ್ಷ ಜಾ; ಹರಿಜನ ಉ; ಕೂಲಿ ಕೆಲಸ ಸಾ|| ಹಂಗರಗಾ (ಕೆರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ಅರ್ಜಿ ತಂದು ಹಾಜರ ಪಡಿಸಿದ್ದರ ಸಾರಾಂಶವೇನೆಂದರೆ,  ಈ ಮೊದಲು ನಮ್ಮೊಂದಿಗೆ ನಮ್ಮೂರ ನಾಗರಾಜ ಹೊಸಮನಿ ಹಾಗು ಇತರರು ಕೂಡಿ ಮೋಹರಮ ಸಮಯದಲ್ಲಿ ತಂಟೆ ತಕರಾರು ಮಾಡಿಕೊಂಡಿರುತ್ತಾರೆ.     ಇಂದು ದಿನಾಂಕ 11-12-2016 ರಂದು ಬೆಳಿಗ್ಗೆ 10;00 ಗಂಟೆಗೆ ನಾನು ಮತ್ತು ನಮ್ಮೋಣಿಯ ಹರೀಶ್ಚಂದ್ರ ತಂದೆ ಮರೆಪ್ಪ ದೊಡಮನಿ, ಭೀಮಣ್ಣ ತಂದೆ ಚನ್ನಪ್ಪ ದೊಡಮನಿ, ಮಡಿವಾಳಪ್ಪ ತಂದೆ ಶರಣಪ್ಪ ದೊಡಮನಿ ರವರು ಕೂಡಿಕೊಂಡು ನಮ್ಮು ಎತ್ತುಗಳು ಮತ್ತು ದನ ಕರಗಳನ್ನು ಮೈಸಲು ಮನೆಯಿಂದ ಹೋಗಿರುತ್ತೇವೆ. ಮೈಸುತ್ತಾ ಮದ್ಯಾಹ್ನ 3;30 ಗಂಟೆ ಸುಮಾರಿಗೆ ನಮ್ಮೂ ದನಗಳನ್ನು ನಮ್ಮೂರ ಗೌರಿಶಂಕರ ಸಗರದವರ ರವರ ಹೊಲದಲ್ಲಿ ಮೈಸುತ್ತಿದ್ದೇವು, ಆಗ ಅಲ್ಲೆ ಕೆಲಸ ಮಾಡುತ್ತಿದ್ದ ನಮ್ಮೂರ ನಾಗರಾಜ ತಂದೆ ರಾಮಣಗೌಡ ಹೊಸಮನಿ ಈತನು ನಮ್ಮ ಹತ್ತಿರ ಬಂದು ನಮಗೆ ಏ ಹೊಲ್ಯಾ ಸುಳಿ ಮಕ್ಕಳ್ಯಾ ಇಲ್ಲಿ ದನಗಳು ಬಿಡಬ್ಯಾಡರಿ ಅಂತಾ ಅನ್ನುತಿದ್ದಾಗ ನಾವು ಈ ಹೊಲಕ್ಕೆ ನಿನಗೇನು ಸಂಬಂಧ ಅಂತಾ ಅಂದಾಗ ಸದರಿ ನಾಗರಾಜ ಈತನು ತನ್ನ ಅಣ್ಣತಮ್ಮಂದಿರರಿಗೆ ಫೋನ ಮಾಡಿ ನಮ್ಮ ಹತ್ತಿರ ಕರೆಯಿಸಿದಾಗ 1] ನಾಗರಾಜ ತಂದೆ ರಾಮಣಗೌಡ ಹೊಸಮನಿ, 2] ವೆಂಕಟೇಶ ತಂದೆ ಸಂಜೀವಪ್ಪಗೌಡ ಹೊಸಮನಿ, 3] ಬಸವರಾಜ ತಂದೆ ರಾಮಣಗೌಡ ಹೊಸಮನಿ, 4] ಶರಣು ತಂದೆ ದೇವಿಂದ್ರ ದೊರೆ, 5] ಚಂದ್ರಕಾಂತ ತಂದೆ ಸಾಹೇಬಗೌಡ ದ್ಯಾವಾಪೂರ, 6] ನಿಂಗಪ್ಪ ತಂದೆ ಧನರಾಜ ದ್ಯಾವಾಪೂರ, 7] ಹಣಮಂತ್ರಾಯ ತಂದೆ ರಾಮಣಗೌಡ ಹೊಸಮನಿ, 8] ಗೌಡಪ್ಪ ತಂದೆ ಸಿದ್ದಣ್ಣ ಹೊಸಮನಿ ರವರೆಲ್ಲರು ಕೂಡಿಕೊಂಡು ಈ ಸೂಳಿ ಮಕ್ಕಳಿಗೆ ಇವತ್ತ ಜೀವ ಸಹಿತ ಬಿಡಬ್ಯಾಡರಿ ಅಂತಾ ಅನ್ನುತ್ತಾ ಬಂದವರೆ ಅವರಲ್ಲಿ ನಾಗರಾಜ ಈತನು ಕೊಲೆ ಮಾಡುವ ಉದ್ದೇಶದಿಂಧ ತನ್ನ ಕೈಯಲ್ಲಿದ್ದ ಬಾರಕೊಲನಿಂದ ನನ್ನ ಕುತ್ತಿಗೆಗೆ ಸುತ್ತಿ ಒತ್ತಿ ಜೊಗ್ಗಾಡಿದನು, ವೆಂಕಟೇಶ ಬಸವರಾಜ ರವರು ನನಗೆ ತಡೆದುನಿಲ್ಲಿಸಿ ಕೈಯಿಂದ ಮೈಕೈಗೆ ಹೊಡೆ ಬಡೆ ಮಾಡಿದರು, ಆಗ ಬಿಡಿಸಲು ಬಂದ ಹರೀಶ್ಚಂದ್ರ ಈತನಿಗೆ ಶರಣು ಮತ್ತು ಚಂದ್ರಕಾಂತ ರವರು ಹರೀಶ್ಚಂದ್ರನಿಗೆ ಕಾಲಿನಿಂದ ಬೆನ್ನಿನ ಮೇಲೆ, ಮತ್ತು ತೊರಡಿನ ಮೇಲೆ ಒದ್ದಿರುತ್ತಾರೆ. ನಂತರ ನಮ್ಮೊಂದಿಗೆ ಇದ್ದ ಭೀಮಣ್ಣ ಮತ್ತು ಮಡಿವಾಳಪ್ಪ ರವರು ಬಿಡಿಸಲು ಬಂದಾಗ ಅವರಿಗೆ ನಿಂಗಪ್ಪ, ಹಣಮಂತ್ರಾಯ, ಗೌಡಪ್ಪ ರವರು ಕೈಯಿಂದ, ಕಾಲಿನಿಂದ ಹೊಡೆ ಬಡೆ ಮಾಡಿರುತ್ತಾರೆ. ನಂತರ ಅಲ್ಲೆ ಇದ್ದ ಸದ್ದಾಂ ತಂದೆ ಗಫೂರಸಾಬ, ಬುಡ್ಡೇಸಾಭ ತಂದೆ ಅಬ್ದುಲಸಾಬ, ನಿಂಗಪ್ಪ ತಂದೆ ಚಂದಪ್ಪ ರವರು ಬಂದು ಬಿಡಿಸಿಕೊಂಡಿರುತ್ತಾರೆ. ಇಲ್ಲದಿದ್ದರೆ ಇನ್ನು ಹೊಡೆ ಬಡೆ ಮಾಡುತ್ತಿದ್ದರು. ಮೇಲ್ಕಂಡ 08 ಜನರು ಹಳೆ ವೈಷಮ್ಯದಿಂದ ಕೊಲೆ ಮಾಡುವ ಉದ್ದೇಶದಿಂದ ನನಗೆ ಬಾರಕೋಲನಿಂದ ಕುತ್ತಿಗೆಗೆ ಹಾಕಿ ಜೊಗ್ಗಾಡಿದ್ದು, ಅಲ್ಲದೆ ಹರಿಶ್ಚಂದ್ರನಿಗೆ ತೊರಡಿನ ಮೇಲೆ ಒದ್ದು ಗುಪ್ತ ಪೆಟ್ಟು ಮಾಡಿರುತ್ತಾರೆ, ಈ ಬಗ್ಗೆ ನಮ್ಮ ಮನೆಯವರೊಂದಿಗೆ ವಿಚಾರಿಸಿ ಫಿರ್ಯಾದಿ ಕೊಡಲು ಇಂದು ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ. ಆದ್ದರಿಂದ ನನಗೆ ಹಾಗು ಹರೀಶ್ಚಂದ್ರನಿಗೆ ಉಪಚಾರ ಕುರಿತು ದವಾಖಾನೆಗೆ ಕಳುಹಿಸಿಕೊಟ್ಟು ಸದರಿಯವರ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.