POLICE BHAVAN KALABURAGI

POLICE BHAVAN KALABURAGI

09 December 2017

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಚಂದ್ರಶಾ ತಂದೆ ಚನ್ನಮಲ್ಲಪ್ಪ ಅಲ್ದೆ ಸಾ: ಬಡದಾಳ ರವರ ಅಕ್ಕಳಾದ ಶಿವಲೀಲಾ ಅನ್ನು ಹಿರೇ ರೂಗಿ ಗ್ರಾಮದ ಚಂದ್ರಕಾಂತ ತಂದೆ ಸಿದ್ದಪ್ಪ ಬಡಿಗೇರ ವಯ: 34 ವರ್ಷ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ದಿನಾಂಕ 07-12-17 ರಂದು ನಮ್ಮೂರಿನ ಶ್ರೀ ಚನ್ನಮಲ್ಲೇಶ್ವರ ದೇವರ ಜಾತ್ರೆ ಇದ್ದುದ್ದರಿಂದ ನನ್ನ ಅಕ್ಕ ಶೀವಲೀಲಾ ಇವಳು ಮೂರು ನಾಲ್ಕು ದಿನಗಳ ಹಿಂದೆ ನಮ್ಮ ಮನೆಗೆ ಬಂದಿರುತ್ತಾಳೆ ನನ್ನ ಅಕ್ಕಳ ಗಂಡನಾದ ಚಂದ್ರಕಾಂತನು ನಾನು ಜಾತ್ರೆಗೆ ಬರುತ್ತೇನೆ ನಮ್ಮೂರಿಗೆ ಬಾ ಇಬ್ಬರು ಕೂಡಿಕೊಂಡು ಸಾಯಂಕಾಲ ಮೋಟಾರ ಸೈಕಲ್ ಮೇಲೆ ಬಡದಾಳ ಗ್ರಾಮಕ್ಕೆ ಹೋಗೊನ  ಅಂತಾ ಹೇಳಿದ್ದರಿಂದ ನಾನು ನಿನ್ನೆ ಬೆಳಿಗ್ಗೆ ಹಿರೇ ರೂಗಿ ಗ್ರಾಮಕ್ಕೆ ಹೋಗಿದ್ದು ದಿನಾಂಕ 07-12-2017 ರಂದು ಸಾಯಂಕಾಲ ನಾನು ಮತ್ತು ನಮ್ಮ ಮಾವ ಚಂದ್ರಕಾಂತ ಇಬ್ಬರು ಮೋಟಾರ ಸೈಕಲ್ ನಂ ಕೆಎ-28-.ಹೆಚ್-6724 ನೇದ್ದರ ಮೇಲೆ ಹಿರೇ ರೂಗಿ ಗ್ರಾಮದಿಂದ ಹೊರಟಿರುತ್ತೇವೆ. ನಮ್ಮ ಮಾವ ಮೋಟಾರ ಸೈಕಲ್ ನಡೆಸುತ್ತಿದ್ದು ನಾನು ಹಿಂದಿನ ಶೀಟಿನಲ್ಲಿ ಕುಳಿತ್ತಿದ್ದೇನೆ ಸಾಯಂಕಾಲ 07:15 ಗಂಟೆ ಸುಮಾರಿಗೆ ನಮ್ಮ ಮೋಟಾರ ಸೈಕಲ್ ಅಫಜಲಪೂರ ಪಟ್ಟಣ ದಾಟಿ ಧುದನಿ ರೋಡಿಗೆ ಬಸ್ ನಿಲ್ದಾಣ ಹತ್ತಿರ ಹೋಗುತ್ತಿದ್ದಾಗ ಎದುರುಗಡೆ ಟ್ರ್ಯಾಕ್ಟರ ನಂ ಎಮ್.ಹೆಚ್.-45-ಎಫ್-6713 ನೇದ್ದು ಎರಡು ಟ್ರೈಲಿಗಳಲ್ಲಿ ಕಬ್ಬು ತುಂಬಿಕೊಂಡು ಧುದನಿ ಕಡೆಗೆ ಹೊರಟಿತ್ತು ಹಿಂದಿನ ಟ್ರೈಲಿ ನಂ ಎಮ್.ಹೆಚ್.-45--6713 ನೇದ್ದು ಇತ್ತು ಸದರಿ ಟ್ರ್ಯಾಕ್ಟರ ಚಾಲಕ ಮುಂದೆ ತನ್ನ ಟ್ರ್ಯಾಕ್ಟರ ನಡೆಸಿಕೊಂಡು ಹೋರಟ್ಟಿದ್ದು ನಾವು ಟ್ರ್ಯಾಕ್ಟರ ಹಿಂದೆ ಹೊರಟಿದ್ದೇವು. ಆಗ ಸದರಿ ಟ್ರ್ಯಾಕ್ಟರ ಚಾಕಲನು ಟ್ರ್ಯಾಕ್ಟರಗೆ ಅಡ್ಡಲಾಗಿ ರೋಡಿನ ಪಕ್ಕದಿಂದ ದನಗಳು ರೋಡಿನ ಮೇಲೆ ಬಂದಿದ್ದರಿಂದ ತನ್ನ ಟ್ರ್ಯಾಕ್ಟರ ಅನ್ನು ನಿರ್ಲಕ್ಷತನದಿಂದ ಒಮ್ಮೇಲೆ ಬ್ರೇಕ್ ಹಾಕಿ ಹಿಂದೆ ನಿಂತಿದ್ದ ನಮ್ಮ ಮೋಟಾರ ಸೈಕಲ್ ನೋಡದೇ ಹಿಂದಕ್ಕೆ ನಡೆಸಿದ್ದರಿಂದ ಸದರಿ ಟ್ರ್ಯಾಕ್ಟರ ಹಿಂದಿನ ಟ್ರೈಲಿ ನಮ್ಮ ಮೋಟಾರ ಸೈಕಲ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭಂವಿಸಿರುತ್ತದೆ. ಆಗ ನಾನು ಜೋರಾಗಿ ಚೀರಿದ್ದರಿಂದ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಅಪಘಾತದಲ್ಲಿ ನಮ್ಮ ಮಾವನ ಮುಖಕ್ಕೆ ಮತ್ತು ತಲೆಗೆ ಭಾರಿ ರಕ್ತಗಾಯಗಳಾಗಿರುತ್ತವೆ  ನಮ್ಮ ಮಾವನಿಗೆ ಚಿಕಿತ್ಸೆಗಾಗಿ ಅಫಜಲಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ರಾತ್ರಿ 08:45 ಗಂಟೆ ಸುಮಾರಿಗೆ ಮಾರ್ಗ ಮಧ್ಯದಲ್ಲಿ ಗೊಬ್ಬುರ (ಬಿ) ಗ್ರಾಮದ ದಾಟಿ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 08/12/2017 ರಂದು ಬೆಳಿಗ್ಗೆ ನಮ್ಮ ತಮ್ಮ ಸುಭಾಷಚಂದ್ರ ಹಾಗು ಬಸವರಾಜ ಅಂದೊಡಗಿ ಇಬ್ಬರು ಬಸವರಾಜನ ಮೋಟರ್ ಸೈಕಲ್ ನಂ ಕೆಎ-32 ಇಸಿ-9425 ನೇದ್ದರ ಮೇಲೆ ಬಡದಾಳ ಗ್ರಾಮ ಶಾಲೆಗೆ ಹೋಗಿರುತ್ತಾರೆ ಮದ್ಯಾಹ್ನ 2.00 ಗಂಟೆ ಸುಮಾರಿಗೆ ನಾನು ಜೆವರ್ಗಿ(ಬಿ) ಗ್ರಾಮದ ಶಾಲೆಯಲ್ಲಿ ಕರ್ತವ್ಯದಲಿದ್ದಾಗ  ಮಾದಾಬಾಳ ತಾಂಡಾದ ಲಕ್ಷ್ಮಿ ನಗರ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಸಲಿಂಗಪ್ಪ ಪೂಜಾರಿ ರವರು ನನ್ನ ಮೋಬೈಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ  ಈಗ ಸ್ವಲ್ಪ ಸಮಯದ ಹಿಂದೆ ಅಂದರೆ ಮದ್ಯಾಹ್ನ 1.45 ಗಂಟೆ ಸುಮಾರಿಗೆ ನಮ್ಮ ಶಾಲೆಯ ಹತ್ತಿರ ಅಫಜಲಪೂರ ದುದನಿ ರೋಡಿನ ಮೇಲೀಂದ ನಿಮ್ಮ ತಮ್ಮ ಸುಭಾಷಚಂದ್ರ ಮತ್ತು ಬಸವರಾಜ ಅಂದೊಡಗಿರವರು ಮೋಟರ್ ಸೈಕಲ್ ನಂ ಕೆಎ-32 ಇಸಿ-9425 ನೇದ್ದರ ಮೇಲೆ ಅಫಜಲಪೂರದ ಕಡೆಗೆ ಹೊರಟಾಗ ಅವರ ಹಿಂದಿನಿಂದ ಕಾರ ನಂ ಕೆಎ-32 ಸಿ-7742 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆಸಿ ಅಪಘಾತ ಪಡಿಸಿರುತ್ತಾನೆ ನಾನು ಓಡಿ ಹೋಗುವಷ್ಟರಲ್ಲಿ ಕಾರಿನ ಚಾಲಕನು ಕಾರಿನಿಂದ ಇಳಿದು ಓಡಿ ಹೋಗಿರುತ್ತಾನೆ. .ಸದರಿ ಘಟನೆಯಲ್ಲಿ ನಿಮ್ಮ ತಮ್ಮನಾದ ಸುಭಾಷಂದ್ರನಿಗೆ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಬಸವರಾಜನಿಗೂ ಹಣೆಗೆ ಮತ್ತು ತಲೆಗೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದರಿಂದ  ಚಿಕಿತ್ಸೆಗಾಗಿ 108 ವಾಹನದಲ್ಲಿ ಕಳುಹಿಸಿಕೊಡಲಾಗಿರುತ್ತದೆ ಅಂತ ತಿಳಿಸಿದನು ವಿಷಯ ಗೊತ್ತಾದ ಕೂಡಲೆ ನಾನು ಅಫಜಲಪೂರಕ್ಕೆ ಬಂದು ಭೀಮರಾಯ ನಾಗೂರ, ಶಿವಲಿಂಗಪ್ಪ ಜೋಗುರ, ಸುರೇಶ ಅಂದೋಡಗಿ ಮತ್ತಿತರರು ಘಟನೆಯ ಸ್ಥಳಕ್ಕೆ ಹೋಗಿ ನೋಡಿದ್ದು ನಿಜವಿದ್ದು ಸದರಿ ಘಟನೆಯಲ್ಲಿ ಗಾಯ ಹೊಂದಿದ ಬಸವರಾಜ ಅಂದೋಡಗಿ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗುತಿದ್ದಾಗ ಮಾರ್ಗ ಮದ್ಯದಲ್ಲಿ ಗೊಬ್ಬುರ(ಕೆ) ಗ್ರಾಮದ ಹತ್ತಿರ ಮದ್ಯಾಹ್ನ 3.00 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ. ಅಂತಾ ಶ್ರೀ ಶರಣಬಸಪ್ಪ ತಂದೆ ಗಣಪತರಾವ ಕಣ್ಣಿ ಸಾ|| ಮಲ್ಲಿಕಾರ್ಜುನ ಚೌಕ  ಹತ್ತಿರ ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 07-12-2017 ಮಿಣಜಗಿ ತಾಂಡಾದ ಬಸ್ ನಿಲ್ದಾಣದ ಹತ್ತಿರ ಅಪ್ಪಾಜಿ ಗುರುಕುಲ ಸ್ಕೂಲ ವ್ಯಾನ ನಂ ಕೆಎ-32 ಎಮ್-9236 ನೇದ್ದರ ಚಾಲಕ ನು ತನ್ನ ವಾಹನವನ್ನು ಅಲಕ್ಷ್ಯ ತನದಿಂದ ಚಲಾಯಿಸಿ ಕೊಂಡು ಬಂದು ಶ್ರೀ ರಾಮಜಿ ತಂದೆ ಶೇವೂ ರಾಠೋಡ ಸಾಃ ಮಿಣಜಗಿ ತಾಂಡಾ ತಾ.ಜಿಃ ಕಲಬುರಗಿ ರವರ ಮಗನಾದ ಸುರಜ್ ವಯಾಃ 07 ವರ್ಷ ಈತನಿಗೆ ಡಿಕ್ಕಿಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-12-2017 ರಂದು ಚಿಂಚೋಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಚಿಂಚೋಳಿ ಗ್ರಾಮಕ್ಕೆ ಹೋಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿ ದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ದತ್ತು ತಂದೆ ಭಾಗಪ್ಪ ಜಮಾದಾರ ಸಾ||ಚಿಂಚೋಳಿ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 600/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹೆಣ್ಣು ಮಗಳು ಕಾಣೆಯಾದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 06-12-2017 ರಂದು ಶ್ರೀಮತಿ ಮಲ್ಲಮ್ಮ ಗಂಡ ಸೈಬಣ್ಣ ತಳವಾರ ಸಾಃ ಫರಹತಾಬಾದ ಗ್ರಾಮ ತಾ.ಜಿಃ ಕಲಬುರಗಿ ರವರ  ಮಗಳಾದ ಕುಮಾರಿ ಭಾಗ್ಯವಂತಿ ವಯಾಃ 19 ವರ್ಷ ಇವಳು ಸಂಡಾಸಕ್ಕೆ ಹೊಗಿ ಬರುತ್ತೇ ನೆಂದು ಹೇಳಿ ಹೊದವಳು ಮರಳಿ ಮನೆಗೆ ಬಂದಿರುವುದಿಲ್ಲ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡು ಕಾಡಲಾಗಿ ಸಿಕ್ಕಿರುವುದಿಲ್ಲ. ಪತ್ತೆ ಮಾಡಿ ಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.