POLICE BHAVAN KALABURAGI

POLICE BHAVAN KALABURAGI

17 July 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ  16-07-2015 ರಂದು ಸಾಯಂಕಾಲ ಮುದಬಾಳ ಕ್ರಾಸ್ ಹತ್ತಿರ ಜೇವರಗಿ ಶಹಪಾರು ರೋಡಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.33ಎಫ್140 ನೇದ್ದರ ಚಾಲಕನು ತನ್ನ ಬಸ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ನಮ್ಮ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.33ಎಫ್201 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಎರಡು ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಾದಾ ಮತ್ತು ಭಾರಿ ಗಾಯಪಡಿಸಿರುತ್ತಾರೆ ಅಂತಾ ಶ್ರೀ ಬಾಲಪ್ಪ ತಂದೆ ಗುಂಡಪ್ಪ ಪಟ್ಟೆದಾರ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕ ಸುರಪುರ ಡಿಪೋ ಸಾ : ಹೆಗ್ಗಣಿ ತಾ : ಸುರಪುರ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸ ಮಾಡಿ ಲೇವಾ ದೇವಿ ವ್ಯವಹಾರ ಮಾಡುತ್ತಿದ್ದ ಪ್ರಕರಣಗಳು :
ನರೋಣಾ ಠಾಣೆ : ದಿನಾಂಕ: 16/07/2015 ರಂದ ಮುಂಜಾನೆ  ಬೆಳಮಗಿ ತಾಂಡದ ಕಾಂತು ಪವಾರ ಎಂಬ ವ್ಯಕ್ತಿಯು ಬೆಳಮಗಿ ಗ್ರಾಮದ ರೈತರಿಗೆ, ಸಾರ್ವಜನಿಕರಿಗೆ ಸಾಲ ರೂಪದಲ್ಲಿ ಹಣವನ್ನು ಕೊಟ್ಟು ಮೀಟರ್ ಬಡ್ಡಿ ರೂಪದಲ್ಲಿ ಹಣವಸೂಲಿ ಮಾಡುತ್ತಿದ್ದ ಬಗ್ಗೆ ಮತ್ತು ಸದರಿವನು ಇಂದು ಮೀಟರ್ ಬಡ್ಡಿ ವಸೂಲಿಗಾಗಿ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಬಾಂಡ ಸಮೇತವಾಗಿ ನಿಂತಿರುವ ಬಗ್ಗೆ ಖಚಿತವಾದ ಬಾತ್ಮಿ ಮೇರೆಗೆ ಪಿ ಎಸ್ ಐ ನರೋಣಾ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಬಂದ ಸ್ಥಳವಾದ ಬೆಳಮಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ, ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಒಂದು ಕೈಚೀಲ ಹಿಡಿದುಕೊಂಡು ನಿಂತಿದ್ದು ನಾನು ಮತ್ತು ಸಿಬ್ಬಂದಿವರು ಕೂಡಿ ಸದರಿ ವ್ಯಕ್ತಿಯ ಮೇಲೆ ದಾಳಿ  ಮಾಡಿ ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಕಾಂತು ತಂ ದೇವಲು ಪವಾರ ಸಾ:ಬೆಳಮಗಿ ತಾಂಡ ನಂ 1 ಅಂತಾ ತಿಳಿಸಿದನು ಅವನ ಹತ್ತಿರ ಇರುವ ಬ್ಯಾಗನ್ನು ಚೆಕ್ ಮಾಡಲಾಗಿ ಬ್ಯಾಗಿನಲ್ಲಿ ಒಂದು ಪ್ಲಾಸ್ಟೀಕ್ ಚೀಲದಲ್ಲಿ ನೂರು ರೂಪಾಯಿ ಬೆಲೆಯ ಒಂದು ಬಾಂಡ ಪೇಪರ್ ಇದ್ದು ಇದರ ಮೇಲೆ ಸಿದ್ಧಾರೂಡ ಮುರಡ, ರಾಜಕುಮಾರ ಮುರಡ ಇಬ್ಬರು ಸಾ:ಬೆಳಮಗಿ ಇವರಿಗೆ ಕಾಂತು ಈತನು ದಿನಾಂಕ: 30/03/2009 ರಂದು 5,50,000/- ರೂಪಾಯಿಗಳನ್ನು ಶೇಕಡಾ 3% ರಂತೆ ಬಡ್ಡಿ ಠರಾವು ಮಾಡಿ ಸಾಲಕೊಟ್ಟಿರುವ ಬಗ್ಗೆ ವಿಷಯವನ್ನು ನಮೂದಿಸಿದ್ದು ಮತ್ತು  ಸದರಿ ಬಾಂಡ್ ಮೇಲೆ ಹಣ ಪಡೆದವರ ರುಜು ಹಾಗೂ ಸಾಕ್ಷಿಧಾರರ ರುಜು ಸಹ ಇರುತ್ತದೆ. ನಂತರ ನಾನು ಸದರಿ ವ್ಯಕ್ತಿಯನ್ನು ವಿಚಾರಿಸಲಾಗಿ ಬಡ್ಡಿ ವ್ಯವಾಹರ ಮಾಡಲು ತನ್ನ ಹತ್ತಿರ ಸರ್ಕಾರದಿಂದಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಯವರಿಂದಾಗಲಿ ಯಾವುದೇ ಪರವಾನಿಗೆ ಪಡೆದಿರುವುದಿಲ್ಲ ಕಾನೂನು ಭಾಹಿರವಾಗಿ ಅನಾಧಿಕೃತವಾಗಿ ಜನರಿಗೆ / ರೈತರಿಗೆ ಹಣವನ್ನು ಸಾಲವಾಗಿ ಕೊಟ್ಟು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕುಗಳ ಬಡ್ಡಿದರಕಿಂತಲು ಹೆಚ್ಚಿನ ಬಡ್ಡಿಧರ ಅಂದರೆ ಶೇಕಡಾ 3% ರಂತೆ ಮೀಟರ್ ಬಡ್ಡಿ ರೂಪದಲ್ಲಿ ಹಣ ವಸೂಲಿ ಮಾಡುತ್ತೇನೆ ಮತ್ತು ದಿನಾಂಕ: 30/03/2009 ರಿಂದ ಇಲ್ಲಿಯವರೆಗೆ ಸಿದ್ಧಾರೂಡ ಹಾಗೂ ರಾಜಕುಮಾರ ಇವರಿಂದ ಮೀಟರ್ ಬಡ್ಡಿ ರೂಪದಲ್ಲಿ ಹಣವನ್ನು ವಸೂಲಿಮಾಡಿರುತ್ತೇನೆಂದು ತಿಳಿಸಿದನು. ಸದರಿಯವನನ್ನು ವಶಕ್ಕೆ ತಗೆದುಕೊಂಡು ಮರಳಿ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

ರಾಘವೇಂದ್ರ ನಗರ ಠಾಣೆ : ಶ್ರೀ ಟಿ.ಫೈರೋಜ ಸಹಕಾರ ಸಂಘಗಳ ಉಪ-ನಿಬಂಧಕರು ಹಾಗೂ ಲೇವಾದೇವಿ ನಿಬಂಧಕರು ಕಲಬುರಗಿ ರವರು ಇತ್ತೀಚಿಗೆ ಫೈನಾನ್ಸದಾರರು ಹಾಗೂ ಬಡ್ಡಿ ವ್ಯವಹಾರದಾರರು ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಸಾಲದ ರೂಪದಲ್ಲಿ ಹಣ ಕೊಟ್ಟು ಮೀಟರ ಬಡ್ಡಿ ರೂಪದಲ್ಲಿ ಹಣ ವಸೂಲು ಮಾಡಿತ್ತಿದ್ದು ಈ ಬಗ್ಗೆ ಅನೇಕ ಪ್ರಕರಣಗಳು ಘಟಿಸುತ್ತಿರುವದರಿಂದ ನಾನು ನನ್ನ ಮೇಲಾಧಿಕಾರಿಯವರ ಆದೇಶದಂತೆ ಇಂತಹ ಮೀಟರ್‌ ಬಡ್ಡಿ ನಡೆಸುತ್ತಿರುವ ಜನರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ ದಿನಾಂಕ: 16-07-2015 ರಂದು ಮಧ್ಯಾನ 2 ಗಂಟೆ ಸುಮಾರಿಗೆ ಜೆ.ಆರ್‌ ನಗರ ಬಡಾವಣೆಯಲ್ಲಿರುವ ಶ್ರೀ ನಂದಿ ಬಸವೇಶ್ವರ ಫೈನಾನ್ಸನಲ್ಲಿ ಜನರಿಗೆ ಸಾಲ ಬಡ್ಡಿಯಿಂದ ಕೊಟ್ಟು ಅವರಿಂದ ಅನೇಕ ಬ್ಲ್ಯಾಂಕ್‌ ಚಕಗಳು ಪಡೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು  ನಾನು ರಾಘವೇಂದ್ರ ನಗರ ಪೊಲೀಸ ಠಾಣೆಗೆ ಭೇಟಿ ನೀಡಿ ರಾಘವೇಂದ್ರ ನಗರ ಪೊಲೀಸ ಠಾಣೆಯ ಪಿ.ಎಸ್‌.ಐ ಶ್ರೀ ಡಬ್ಲೂ. ಹೆಚ್‌. ಕೊತ್ವಾಲ್‌ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಲೇವಾದೇವಿ ಸಂಸ್ಥೆಗೆ ಭೇಟಿ ನೀಡಿ ಅಲ್ಲಿ ಸದರಿ ಲೇವಾದೇವಿ ಸಂಸ್ಥೆಯ ಪಾಲುದಾರ ಸಿದ್ದಪ್ಪಾ ಪಾಟೀಲ ಮತ್ತು ರಾಜೇಂದ್ರ ಪಾಟೀಲ ಇವರು ಹಾಜರಿದ್ದು ಅವರ ಮುಂದೆ ಟೇಬಲ ಮೇಲೆ ನೋಡಲು ಸಾರ್ವಜನಿಕರಿಗೆ ಸಾಲದ ರೂಪದಲ್ಲಿ ಹಣ ಕೊಟ್ಟಿರುವ ಬಗ್ಗೆ ಎಮ್‌.ಎಸ್‌‌.ಶ್ರೀ ನಂದಿ ಬಸವೇಶ್ವರ ಫೈನಾನ್ಸ ಕಾರ್ಪೋರೇಶನ (ರಿ) ಪ್ಲಾಟ.ನಂ.20 ಶಾಪ ನಂ.02 ಜೆ.ಆರ್‌ ನಗರ ಖಾದ್ರಿಚೌಕ ಅಂತಾ ಬರೆದಿದ್ದು ಅದರ ಮೇಲೆ ತೇಜೆರಾವ ಶಾಂತಪ್ಪಾ ಇವರಿಗೆ ಹಣ ಕೊಟ್ಟಿರುವ ಬಗ್ಗೆ ನಮೂದುಮಾಡಿ ಸಹಿ ಪಡೆದುಕೊಂಡಿದ್ದು ಮತ್ತು PRONOTE ಅಂತಾ ಒಂದು ಖಾಲಿ ರಸೀದಿ ಮೇಲೆ ಸಹಿ ಪಡೆದಿದ್ದು ಅಲ್ಲದೆ ಅದೆ ಹೆಸರಿನ ಪ್ರಾಮಿಸರಿ ನೋಟ ಅದರ ಮೇಲೆ ಕೂಡ ಏನು ಬರೆಯದೆ ಸಹಿ ಪಡೆದುಕೊಂಡಿದ್ದು ಇರುತ್ತದೆ. ಮತ್ತು ಕಾರ್ಪೋರೇಶನ ಬ್ಯಾಂಕಿನ ಚಕ್‌.ನಂ.394252, 394253,  AXIS BANK LTD ಚಕ್‌ ನಂ.027290, ಸ್ಟೇಟ್‌‌ ಬ್ಯಾಂಕ ಆಫ್‌ ಹೈದ್ರಾಬಾದ ಚಕ್‌.ನಂ.475179, ಕೆ.ಜಿ.ಬಿ ಬ್ಯಾಂಕ ಚಕ್‌.ನಂ.659126, 167387 ಮತ್ತು 659127 ಸ್ಟೇಟ್‌‌ ಬ್ಯಾಂಕ ಆಫ ಇಂಡಿಯಾ ಚಕ್‌ ನಂ.858414, ಗಣೇಶ ಕೋ.ಆಪರೇಟಿವ್‌ ಬ್ಯಾಂಕ ಚಕ್‌ ನಂ.608126, ಛತ್ರಪತಿ ಶಿವಾಜಿ ಬ್ಯಾಂಕ್‌ ಚಕ ನಂ.044045, 044044 ಎಸ್‌.ಡಿ.ಎಫ್‌‌.ಸಿ ಬ್ಯಾಂಕ್‌ ಚಕ.ನಂ.438120, 438119, ವಿಶ್ವೇಶ್ವರಯ್ಯಾ ಕೋ.ಆಪರೇಟಿವ ಬ್ಯಾಂಕ ಚಕ ನಂ.003536, 107172, ವಿಜಯ ಬ್ಯಾಂಕ ಚಕ.ನಂ.865024 ಬ್ಯಾಂಕ ಆಫ ಬರೋಡಾ ಚಕ.ನಂ.074317, ಬಸವೇಶ್ವರ ಸಹಕಾರ ಬ್ಯಾಂಕ ಚಕ.ನಂ.0020770 ಇವುಗಳು ಇದ್ದು ಅವುಗಳ ಮೇಲೆ ಸಾಲ ಪಡೆದವರ ಸಹಿ ಪಡೆದುಕೊಂಡಿರುತ್ತಾರೆ. ಚಕಗಳು ಖಾಲಿ ಇರುತ್ತವೆ. ಸದರಿಯವರು ಸಾಲಗಾರರಿಗೆ ಸಾಲಕೊಟ್ಟು ಸಹಿ ಮಾಡಿದ ಬ್ಲ್ಯಾಂಕ್‌ ಚಕ್‌ಗಳನ್ನು ಪಡೆದುಕೊಂಡು ಮೋಸ ಮಾಡುತ್ತಿದ್ದು ಸದರಿ ಚಕ್‌ಗಳನ್ನು ನಾನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಮರಳಿ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ನೆಲೋಗಿ ಠಾಣೆ : ಶ್ರೀಮಂತ ತಂದೆ ಬಸಣ್ಣಾ ಕೊಲ್ಹಾರ ರವರ ತಮ್ಮನಾದ ಶ್ರೀಶೈಲ ತಂದೆ ಬಸಣ್ಣಾ ಕೊಲ್ಹಾರ ಇವನು ಸುಮಾರು  5-6 ತಿಂಗಳಿಂದ  ತಲೆ ಸರಿಯಾಗಿ ಇರಲಿಲ್ಲಾ ಅವನಿಗೆ ಧಾರವಾಡ ಆಸ್ಪತ್ರೆಯಲ್ಲಿ ಉಪಚಾರ ಮಾಡಿದ್ದು ಅವನಿಗೆ ಆರಾಮವಾಗಿರಲಿಲ್ಲಾ ಅಂದಿನಿಂದಅವನು ಒಂದು ತಹರ ಮಾನಸಿಕನಾಗಿ ತಿರುಗಾಡುತ್ತಿದ್ದು ದಿನಾಂಕ:14/7/2015 ರಂದು ನಾನು ಧಾರವಾಡಕ್ಕೆಅವನ ಸಲುವಾಗಿ ಔಷದ ತರಲು ಹೊಗಿದ್ದೆ ನನ್ನ ತಮ್ಮ ಅಂದು ಮನೆಯಲ್ಲಿ ಇದ್ದನು  ನಂತರ ನನ್ನ ಹೆಂಡತಿ ಮತ್ತು  ಅವನ  ಹೆಂಡತಿ ಹೊಲಕ್ಕೆ  ಹೊಗಿದ್ದು ಅವನು ಮನೆಯಲ್ಲಿ ಒಬ್ಬನೆ ಇದ್ದಾಗ  2ಪಿ.ಎಂ.ಕ್ಕೆ  ಮೈ ಮೇಲೆ ಸಿಮೆ ಎಣ್ಣಿ ಸುರಿದುಕೊಂಡು  ಮೈಗೆಬೆಂಕಿ ಹಚ್ಚಿಕೊಂಡಿದ್ದು ಆಗ ನಮ್ಮ ಮನೆಯ ಬಾಜು ಇರುವಶಬ್ಬಿರ ಮೈನಾಳ ನೋಡಿ ಬಾಗಿಲು ತೆರೆದು ನನಗೆ  2-30 ಪಿ.ಎಂಕ್ಕೆ  ಫೊನಮಾಡಿ  ಹೇಳಿದರು  ನಂತ್ರ ನನ್ನ ಹೆಂಡತಿ ಮತ್ತು ನಮ್ಮ ತಮ್ಮನ ಹೆಂಡತಿ ನಿರ್ಮಲಾ ಇವರಿಗೆ ಫೋನಮಾಡಿ ಹೇಳಿದ್ದು ನಂತ್ರ  ಅವರು ಮನೆಗೆ ಬಂದಾಗ ನನ್ನ ತಮ್ಮನನ್ನು ಜೀಪಿನಲ್ಲಿ ಹಾಕಿಕೊಂಡು  ಜೇವರ್ಗಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿ ನಂತರkಕಲಬುರ್ಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ನನ್ನ  ತಮ್ಮ ಶ್ರೀಶೈಲ ಇತನನ್ನು ನನ್ನ ಮಗ ಅಮೊಗಸಿದ್ದ ಮತ್ತು ಸಿದ್ದುಕೊಲ್ಹಾರ ಇವನು ತಂದು ಸೇರಿಕೆ ಮಡಿದರು ನನ್ನ ತಮ್ಮ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತತಾ ಇಂದು ದಿನಾಂಕ;16/7/2015ರಂದು ಬೆಳಿಗ್ಗೆ 4-30  ಎ.ಎಂ.ಕ್ಕೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಕೊಳದಪ್ಪಾ ತಂದೆ ಬಸಪ್ಪಾ ಬಾರಕೇರ ಉ:ಕೆ.ಎಸ್‌.ಆರ್‌.ಟಿ.ಸಿ ಡಿಪೋ.ನಂ.03  ವಿದ್ಯಾನಗರ ಕಲಬುರಗಿ ಸಾ:ಮರೋಳ ತಾ:ಹುನಗುಂದ ಜಿ:ಬಾಗಲಕೋಟ ಹಾ:ವ: ವಿದ್ಯಾನಗರ ಕಲಬುರಗಿ ಇವರು ದಿನಾಂಕ: 15-03-2015 ಶರಣಬಸವೇಶ್ವರ ಜಾತ್ರೆಯಲ್ಲಿ ಶರಣಬಸವೇಶ್ವರ ಗುಡಿಯ ಆವರಣದ ಒಳಗೆ ತನ್ನ ದ್ವಿಚಕ್ರ ವಾಹನ ಸುಜುಕಿ ಕೆಎ-28 ಎಲ್‌‌-0434 ನೇದ್ದನ್ನು ನಿಲ್ಲಿಸಿ ದೇವರ ದರ್ಶನ ಪಡೆದುಕೊಂಡು ಮರಳಿ ನಾನು ನನ್ನ ಮೋಟರ ಸೈಕಲ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮೋಟಾರ ಸೈಕಲ ಇರಲಿಲ್ಲ. ಆಗ ನಾನು ಜಾತ್ರಾ ವಿಶೇಷ ಹೊರ ಪೊಲೀಸ ಠಾಣೆಗೆ ಹೋಗಿ ನನ್ನ ವಾಹನ ಕಾಣಿಯಾದ ಬಗ್ಗೆ ತಿಳಿಸಿರುತ್ತೇನೆ. ಸದರಿ ವಾಹನವನ್ನು ಇಲ್ಲಿಯವರೆಗೆ ಹುಡುಕಾಡಿದರೂ ಪತ್ತೆಯಾಗಿರುವದಿಲ್ಲಾ ಕಾರಣ ಮಾನ್ಯರು ನನ್ನ ಸುಜುಕಿ ಮೋಟಾರ ಸೈಕಲ ನಂ.ಕೆಎ-28 ಎಲ್‌‌-0434 ಅ.ಕಿ.15000/-ರೂ ನೇದ್ದನ್ನು ಪತ್ತೆ ಮಾಡಿಕೊಡಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೌಕ ಠಾಣೆ : ಶ್ರೀ ಮಹ್ಮದ ವಾಸೀಮ್ ತಂದೆ ಮಹ್ಮದ ಇಸಾಮೋದ್ದಿನ್ ಸಾಃಜಾಮಿಯಾ ಮಜೀದ ಹತ್ತೀರ ಮೋಮಿನಪೂರ ,ಮಹಾಗಾಂವ  ಕಲಬುರಗಿ ರವರು ದಿನಾಂಕಃ 09.07.2015 ರಂದು ನನ್ನ ಕೆಲಸ ಇದ್ದ ಪ್ರಯುಕ್ತ ಸಾಯಂಕಾಲ 4.00 ಗಂಟೆ ಸುಮಾರಿಗೆ ಚೈನಾ ಕಾಂಪ್ಲೇಕ್ಸ್ ಮುಂದೆ ನನ್ನ ಹೋಂಡಾ ಶೈನ್ ಮೊಟಾರ ಸೈಕಲ ನಂ ಕೆಎ 32  ವಿ0744 ನೇದ್ದನ್ನು ನಿಲ್ಲಿಸಿ ಸೈಡ್ ಲಾಕ್ ಮಾಡಿ ಹೊಗಿದ್ದು ನಂತರ ರಾತ್ತಿ 8.00ಗಂಟೆ ಸುಮಾರಿಗೆ ಬಂದು ನೋಡಿದಾಗ ನಾನು ನಿಲ್ಲಿಸಿದ ಜಾಗೆಗೆ  ಹೋಗಿ ನೋಡಲಾಗಿ ಮೋಟಾರ ಸೈಕಿಲ್‌‌  ಇರಲ್ಲಿಲ ನಂತರ ಸುತ್ತು-ಮುತ್ತಿನ ಜನರಿಗೆ ವಿಚಾರಿಸಿದ್ದು ಯಾವುದೇ ಉಪಯುಕ್ತ ಮಾಹಿತಿ ಸಿಕ್ಕಿರುವದಿಲ್ಲ. ಸದರಿ ನನ್ನ ಮೋಟಾರ ಸೈಕಲನ್ನು ಯೋರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅದರ ಅಂಜು ಕಿಮ್ಮತ್ತು 40,000/- ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.