POLICE BHAVAN KALABURAGI

POLICE BHAVAN KALABURAGI

24 June 2015

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 23/06/2015 ರಂದು ಯಳಸಂಗಿ ಗ್ರಾಮದ ಕಮಾನ ಹತ್ತಿರ ಮಾಡಿಯಾಳದಿಂದ ನಿಂಬರ್ಗಾಕ್ಕೆ  ಹೋಗುವ ಮುಖ್ಯ ಡಾಂಬರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದ ಮೇಲೆ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಯಳಸಂಗಿ ಗ್ರಾಮದ ಕಮಾನ ಹತ್ತಿರ ಹೋಗಿ ನೋಡಲಾಗಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದುದದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು  ರಾಜು ತಂದೆ ಮಾಹಾದೇವ ಗುತ್ತೇದಾರ ಸಾ: ಬೆಣ್ಣೆಶಿರೂರ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ  ನಗದು ಹಣ 1200/- ಒಂದು ಬಾಲ ಪೆನ್ನ, ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ:
ಚೌಕ ಪೊಲೀಸ್ ಠಾಣೆ :ಶ್ರೀ ಶತ್ರುಘನ್‌ ತಂದೆ ವಾಸುದೇವರಾವ ಬೋರಳಕರ ಸಾಃ ರೇವಣಸಿದ್ದೇಶ್ವರ ಕಾಲೋನಿ ಹುಮನಾಬಾದ ರೋಡ ಕಲಬುರಗಿ ರವರು ತಮ್ಮ ಹೀರೊ ಹೊಂಡಾ ಸ್ಪೆಲಂಡರ್‌ ಪ್ಲಸ್‌ ಮೊಟಾರ ಸೈಕಲ ನಂ ಕೆಎ 32  ಆರ್‌ 4072  ನೇದ್ದನ್ನು ದಿನಾಂಕಃ 13.05.2015 ರಂದು ರಾತ್ರಿ ಸಿಟಿ ಬಸನಿಲ್ದಾಣದ ಎದುರಗಡೆ ಇರುವ ಪಾಲ್‌  ಕಾಂಪ್ಲೇಕ್ಸ್‌ ಹತ್ತಿರ ನಮ್ಮ ಮೋಟಾರ ಸೈಕಿಲ್‌‌ ನಿಲ್ಲಿಸಿ  ಎಲ್‌ಜಿ ಡಿಸ್ಟ್ರೀಬ್ಯೂಟರ ಎಲ್ಕ್‌ಟ್ರಾನಿಕ್ಸ್‌ಗೆ ಸಂಬಂದಪಟ್ಟ ಆರ್ಡರಗಳನ್ನು ಪಡೆಯುವ ಕುರಿತು ಪಾಲ್‌‌ ಕಾಂಪ್ಲೇಕ್ಸ್‌ನಲ್ಲಿರುವ ಪಟಣ್ಣಶೇಟ್ಟಿ  ಎಲ್ಕ್‌ಟ್ರಾನಿಕ್ಸ್‌, ನೀಡ್ಸ್‌ ಮೀಜುಕ್‌ ಪಾಯಿಂಟ್‌, ಶ್ರೀ ಲಕ್ಷ್ಮಿ ಅಪ್ಲೇಯಿನ್ಸ್‌, ರವರ ಹತ್ತಿರ  ಆರ್ಡರಗಳನ್ನು  ತೆಗೆದು ಕೊಂಡು ಮರಳಿ ಬಂದು ನೋಡಲಾಗಿ ತಾನು ನಿಲ್ಲಿಸಿರುವ ಮೋಟಾರ ಸೈಕಿಲ್‌‌  ಇರಲ್ಲಿಲ. ಅಲ್ಲಿದ್ದ ಜನರಿಗೆ ವಿಚಾರಿಸಿ ಕೂಡಾ ಎಲ್ಲ ಕಡೆ ಹುಡಕಾಡಿದ್ದು ಮೋ.ಸೈಕಕಲ ಸಿಕ್ಕರಿವದಿಲ್ಲ.  ನನ್ನ ಮೋಟಾರ ಸೈಕಲನ್ನು ಯೋರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಪತ್ತೆ ಮಾಡಿಕೊಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 10-06-2015 ರಂದು ಸಾಯಂಕಾಲ 4:00 ಗಂಟೆ ಶ್ರೀ ಜ್ಞಾನೇಶ್ವರ @ ನಾನಾಸಾಬ ಇವರು ಅಫಜಲಪೂರಕ್ಕೆ ಹೋಗಿ ಬಾಂಡೆ ಸಾಮಾನುಗಳನ್ನು ಕರಿದಿ ಮಾಡಿಕೊಂಡು ಬರುತ್ತೆನೆ ಅಂತಾ ಹೇಳಿ ಮನೆಯಿಂದ ಹೋಗಿದ್ದು. ಮನೆಯಿಂದ ಹೋದ ಜ್ಞಾನೇಶ್ವರ ಎಷ್ಟೊತ್ತಾದರು ಮರಳಿ ಮನೆಗೆ ಬರದ ಕಾರಣ ಅವರ ಪತ್ನಿ ಜಮುನಾಬಾಯಿ, ಅವರ ತಮ್ಮ ಶ್ರಾವಣ, ಸಂಜಯ ಹಾಗೂ ಅವರ ತಂದೆ  ಸಿದ್ರಾಮ, ನಮ್ಮ ಸಂಭಂದಿಕ ಶ್ರೀಶೈಲ ಎಲ್ಲರೂ ಕೂಡಿ ಅಫಜಲಪೂರ, ಗುಲಬರ್ಗಾ, ಶಹಬಾದ, ವಾಡಿ, ಗಾಣಗಾಪೂರ, ಚೌಡಾಪೂರ, ದುಧನಿ, ಅಕ್ಕಲಕೋಟ, ಸೋಲ್ಲಾಪೂರ, ಹೊಟ್ಟಗಿ, ಪೂನಾ, ಬಿಜಾಪೂರ, ಇಂಡಿ, ಆಲಮೇಲ, ಸಿಂದಗಿ ಕಡೆಗಳಲ್ಲಿ ಹುಡುಕಾಡಿದರೊ ಜ್ಞಾನೇಶ್ವರನ ಪತ್ತೆ ಆಗದ ಕಾರಣ ಅವರ ಪತ್ನಿ ಜಮುನಾಬಾಯಿ ಗಂ. ಜ್ಞಾನೇಶ್ವರ ಇವರು ದಿ: 23-06-2015 ರಂದು ಅಫಜಲಪೂರ ಠಾಣೆಗೆ ಹಾಜರಾಗಿ ತಮ್ಮ ಪತಿ ಜ್ಞಾನೇಶ್ವರ ರವರು ದಿನಾಂಕ 10-06-2015  ರಿಂದ ಕಾಣೆಯಾಗಿದ್ದು ನನ್ನ ಗಂಡನ ಚಹರಾಪಟ್ಟಿ ಹೆಸರು:ಜ್ಞಾನೇಶ್ವರ@ನಾನಾಸಾಬ ತಂ ಸಿದ್ರಾಮ ವಾಗ್ಮೋರೆ ವಯ:34 ವರ್ಷ  ಎತ್ತರ :- 5 ಪೀಟ್ 5 ಇಂಚು ಜಾತಿ:ಗೊಂದಳಿ ಸಾ:ಮಲ್ಲಾಬಾದ ತಾ:ಅಫಜಲಪೂರ ಇವರನ್ನು ಪತ್ತೆ ಮಾಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.