POLICE BHAVAN KALABURAGI

POLICE BHAVAN KALABURAGI

08 August 2014

Gulbarga District Reported Crimes

ಅಪಘಾತ ಪ್ರಕರಣಗಳು :
ವಾಡಿ ಠಾಣೆ : ಶ್ರೀ ಸಣ್ಣಬುಡ್ಡಪ್ಪ ತಂದೆ ಹಣಮಂತ ಹಳ್ಳಿ ಸಾ|| ಲಕ್ಷ್ಮಿಪೂರ ವಾಡಿ ಇವರ ಮಗ ಹಣಮಂತ ಇವನು ದಿನಾಂಕ 07-08-2014 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ತನ್ನ ಹೆಂಡಿಯ ಮನೆಗೆ ಹೋಗಿ ಬರುತ್ತೆನೆ ಅಂತಾ ಹಲಕಟ್ಟಿಗೆ ಹೋಗಿದ್ದು ರಾತ್ರಿ 11 ಗಂಟೆಯ ಸುಮಾರಿಗೆ ನಾವು ಮನೆಯಲ್ಲಿದ್ದಾಗ ನಮ್ಮ ಭಿಗ ನಿಂಗಪ್ಪಾ ಕೊಡಚಿ @ ಚೌದ್ರಿ ಇವರು ಫೊನಮಾಡಿ ತನಗೆ ನಮ್ಮೂರ ಗೊರಖಪಾಶಾ ಫೊನಮಾಡಿ ತಾನು ವಾಡಿಯಿಂದ ಮೊಟರ ಸೈಕಲ ಮೆಲೆ ಹಲಕಟ್ಟಾಗೆ ಹೊರಟಿದ್ದೆ ವಾಲ್ಮಿಕಿ ಪೆಟ್ರೊಲಬಂಕ ಹತ್ತಿರ ಒಬ್ಬ ಮನುಷ್ಯನಿಗೆ ಯಾವುದೊ ವಾಹನ ಡಿಕ್ಕಿ ಹೊಡೆದು ಹೊಗಿದ್ದರಿಂದ ನರಳುತ್ತಾ ಬಿದ್ದಿದ್ದು ನೋಡಿ ಯಾರು ನೀನು ನಿನ್ನ ಹೆಸರು ಏನು ಅಂತಾ ವಿಚಾರಿಸಲು ಹಲಕಟ್ಟಾದಲ್ಲಿ ನಿಂಗಪ್ಪಾ ಚೌದ್ರಿ ನಮ್ಮ ಮಾವ ಇದ್ದಾನೆ ಲಕ್ಷಿಪೂರ ವಾಡಿಯಲ್ಲಿ ಸಣ್ಣಬುಡ್ಡಪ್ಪಾ ಅಂತಾ ನನ್ನ ತಂದೆಯವರಿದ್ದಾರೆ. ಈಗ 10 ನಿಮಿಷದ ಮುಂಚೆ ಯಾವುದೊ ವಾಹನ ನಾನು ನಡೆದುಕೊಂಡು ಹಲಕಟ್ಟಾಗೆ ಹೊರಟಿದ್ದೆ ಹಿಂದಿನಿಂದ ಡಿಕ್ಕಿ ಹೊಡೆದು ಹೋಗಿದೆ ಆಗ ರಾತ್ರಿ 10-30 ಗಂಟೆಯಾಗಿದ್ದು ಅಂತಾ ನನಗೆ ಫೋನಮಾಡಿ ಹೇಳಿದನು. ಉಪಚಾರ ಕುರಿತು ಸರಕಾರಿ ಆಸ್ಪತ್ರೆ ವಾಡಿಗೆ ಕಳುಹಿಸುತ್ತಿದ್ದೆನೆ ಅಂತಾ ಹೇಳಿದನು. ಕೂಡಲೆ ನಾನು ನನ್ನ ಹೆಂಡತಿ ಆಸ್ಪತ್ರೆಗೆ ಹೊಗಲು ನನ್ನ ಬೀಗ ನಿಂಗಪ್ಪಾ ಚೌದ್ರಿ ನನ್ನ ಸೊಸೆ ಲಲಿತಾ ಇವರು ಆಸ್ಪತ್ರೆಗೆ ಬಂದಿದ್ದರು ನೊಡಲು ನನ್ನ ಮಗ ಹಣಮಂತನ ಎಡಗಾಲ ಪಾದದ ಹತ್ತಿರ ಮುರಿದಿದ್ದು, ಬಲಗಾಲ ಸಿಳಿದ ಹಾಗೆ ಆಗಿತ್ತು ಮತ್ತು ಹಿಂದುಗಡೆ ತೆಲೆಗೆ ಭಾರಿ ರಕ್ತಗಾಯವಾಗಿ ರಕ್ತ ಬರ ಹತ್ತಿತು ಮತ್ತು ಎರಡು ಕೈಗಳಿಗೆ ತೆರಚಿದ ಗಾಯಗಳಾಗಿತ್ತು ನನ್ನ ಮಗ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಭರತ ತಂದೆ ದೀಪಕ ಮಾಳಗೆ ಸಾ: ಎಲ್,ಎಲ್, ಕೇರ ಆಸ್ಪತ್ರೆ ಎದುರು ಆದರ್ಶ ನಗರ ರಿಂಗ ರೋಡ  ಗುಲಬರ್ಗಾ ಇವರು  ದಿನಾಂಕ 08-08-2014 ರಂದು ಬೆಳಿಗ್ಗೆ 8-30 ಗಂಟೆಗೆ ತನ್ನ ಮೋಟಾರ ಸೈಕಲ ನಂಬರ ಕೆಎ-32 ಇಡಿ-5906 ನೇದ್ದನ್ನು ಚಲಾಯಿಸಿಕೊಂಡು ಆರ್.ಟಿ.ಓ ಕ್ರಾಸ್, ಜಿ.ಜಿ.ಹೆಚ್ ಸರ್ಕಲ ಮುಖಾಂತರ ಅನ್ನಪೂರ್ಣ ಕ್ರಾಸ್ ಕಡೆಗೆ ಬರುತ್ತಿದ್ದಾಗ ಕುಳಗೇರಿ ಕ್ರಾಸ್ ಹತ್ತಿರ ಎದುರಿನಿಂದ ಮೋ/ಸೈಕಲ ನಂಬರ ಕೆಎ-32 ವಾಯಿ-8162 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಬಲಗಾಲ ಮೊಳಕಾಲಿಗೆ ಗುಪ್ತಪೆಟ್ಟು, ತರಚಿದಗಾಯ ಮತ್ತು ಬಲ ಮುಂಗೈಗೆ ತರಚಿದಗಾಯ ಹಾಗು ಬಲುಭುಜಕ್ಕೆ ಗುಪ್ತಪೆಟ್ಟು ಮಾಡಿ ಮೋ/ಸೈಕಲ ಸ್ಥಳದಲ್ಲಿ ಬಿಟ್ಟು ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.