POLICE BHAVAN KALABURAGI

POLICE BHAVAN KALABURAGI

20 September 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕ 19/09/2019 ರಂದು ಶ್ರೀ ತುಕಾರಾಮ ತಂದೆ ನಾರಾಯಣ ಘಾಳೆ ಸಾ|| ಪಡಸಾವಳಿ ತಾ|| ಆಳಂದ ರವರ  ತಂದೆಯವರು ಇಂಡಿಯಲ್ಲಿರುವ ನನ್ನ ತಂಗಿಯ ಮನೆಗೆ ಹೋಗಿ ಬರುತ್ತೆನೆ ಅಂತಾ ಹೇಳಿದಾಗ ನಾನು ಹಾಗೂ ನನ್ನ ಹೆಂಡತಿ ವಿದ್ಯಾ  ಇಬ್ಬರು ಕೂಡಿ ತಂದೆಯವರಿಗೆ ಬಸ್ಸಿಗೆ ಹತ್ತಿಸಿ ಬರಬೇಕೆಂದು ಕರೆದುಕೊಂಡು ಬಂದು ಜಿಡಗಾ ಕ್ರಾಸ್ ಹತ್ತಿರದ ಕಮಾನ ಹತ್ತಿರ ಬಸ್ಸಿಗಾಗಿ ಕಾಯುತ್ತಾ ನಿಂತಿರುವಾಗ ಜಿಡಗಾ ಕಡೆಯಿಂದ ಒಬ್ಬ 407 ಟೆಂಪೊದ ಚಾಲಕ ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ರೋಡಿನ ಪಕ್ಕದಲ್ಲಿ  ನಿಂತಿದ್ದ ನನ್ನ ತಂದೆಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ತಂದೆಯವರು ರೋಡಿನ ಮೇಲೆ ಬಿದ್ದಾಗ ವಾಹನದಲ್ಲಿ ಸಿಕ್ಕಿಕೊಂಡು ಸ್ವಲ್ಪ ಮುಂದೆ ಹೋಗಿದ್ದು ನಾನು ಹಾಗೂ ನನ್ನ ಹೆಂಡತಿ ತಂದೆಯವರಿಗೆ ಎಬ್ಬಿಸಿ ನೋಡಲಾಗಿ ತಂದೆಯವರ ಹೊಟ್ಟೆಯ ಭಾಗದಲ್ಲಿ ಭಾರಿ ಗುಪ್ತ ಗಾಯ, ಬಲಗಾಲ ತೊಡೆ, ಬಲಗಾಲ ಪಾದದ ಹತ್ತಿರ ಭಾರಿ ರಕ್ತ ಗಾಯ ಹಾಗೂ ಅಲ್ಲಲ್ಲಿ ತರಚಿದ ರಕ್ತಗಾಯವಾಗಿದ್ದು 407 ಟೆಂಪೊ ಚಾಲಕ ತನ್ನ ವಾಹನ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದು ನಂಬರ ನೋಡಲಾಗಿ ಕೆಎ 28-3870 ಅಂತಾ ಇದ್ದು ಚಾಲಕ ತನ್ನ ವಾಹನದಲ್ಲಿದ್ದು ಆತನ ಹೆಸರು ವಿಚಾರಿಸಲಾಗಿ ಶರಣಬಸಪ್ಪಾ ತಂದೆ ಕಾಂತು ಬಳಕೋಟೆ ಸಾ|| ಮಾದನ ಹಿಪ್ಪರಗಾ ತಾ|| ಆಳಂದ ಅಂತಾ ಹೇಳಿ ತನ್ನ ಟೆಂಪೋ ಸಮೇತ ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ, ನಂತರ ನಾನು ನನ್ನ ಗೆಳೆಯ ಮುಬಾರಕ ತಂದೆ ರಾಜಾಭಾಯಿ ಇತನಿಗೆ ಫೋನ ಮಾಡಿ ಕರೆಯಿಸಿ ಆತನು ಬಂದ ನಂತರ 108 ವಾಹನಕ್ಕೆ ಫೋನ್ ಮಾಡಿ ಕರೆಯಿಸಿ ನಾವು ಅದರಲ್ಲಿ ನನ್ನ ತಂದೆಯವರಿಗೆ ಕೂಡಿಸಿಕೊಂಡು ಕಲಬುರಗಿಯ ಚಿರಾಯು ಆಸ್ಪತ್ರೆಗೆ ಕರೆದುಕೊಂಡು ತಂದು ಸೇರಿಕೆ ಮಾಡಿರುತ್ತೆವೆ, ಉಪಚಾರ ಫಲಕಾರಿಯಾಗದೆ ನನ್ನ ತಂದೆಯವರು ಇಂದು ಮಧ್ಯಾಹ್ನ 01-30 ಗಂಟೆ ಸುಮಾರಿಗೆ ಮೃತಪಟ್ಟರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.                                                                                                              
ನರೋಣಾ ಠಾಣೆ : ದಿನಾಂಕ:19/08/2019 ರಂದು ಕೋಗನೂರ ಗ್ರಾಮದಲ್ಲಿ ನಮ್ಮ ಸಂಬಂಧಿಕರು ತೀರಿಕೊಂಡ ಕಾರಣ ನಾನು ಕಾರ್ ನಂಬರ್ ಕೆಎ20-ಡಿ5800 ನೇದ್ದನ್ನು ಬಾಡಿಗೆ ಮಾಡಿಕೊಂಡು ಅದರಲ್ಲಿ ಕುಳಿತುಕೊಂಡು ಕೋಗನೂರ ಗ್ರಾಮಕ್ಕೆ ಬಂದು ದಿನಾಂಕ:20/08/2019 ರಂದು ಬೆಳಿಗ್ಗೆ ಕೊಗನೂರ ಗ್ರಾಮದಿಂದ ಗೋಳಾ(ಬಿ) ಗ್ರಾಮಕ್ಕೆ ನನ್ನ ತಂದೆ ತಾಯಿಯವರಿಗೆ ಕರೆದುಕೊಂಡು ಬರಲು ಅದೇ ಕಾರಿನಲ್ಲಿ ಕಡಗಂಚಿ ಮಾರ್ಗವಾಗಿ ಹೊರಟಾಗ ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಕಾರ್ ಚಾಲಕನು ಕಾರನ್ನು ಅತೀವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸುತ್ತಿದ್ದನು. ನಾನು ಆತನ ಪಕ್ಕದ ಸೀಟಿನಲ್ಲಿ ಕುಳಿತಿದ್ದು. ಗೋಳಾ(ಬಿ) ಗ್ರಾಮ ಇನ್ನು 2 ಕಿ.ಮೀ ಇರುವಾಗ ಕಾರ ಚಾಲಕನು ಕಾರನ್ನು ಅತೀವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿದ್ದರಿಂದ ಕಾರ್ ಪಲ್ಟಿಯಾಗಿ ಅಪಘಾತವಾಗಿರುತ್ತದೆ. ಅಪಘಾತದಲ್ಲಿ ನಾನು ನನ್ನ ತಲೆಗೆ, ಹಣೆಗೆ ಹಾಗೂ ಎದೆಗೆ ಗಂಬೀರ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಒದ್ದಾಡುತ್ತಿದ್ದಾಗ ಕಾರಿನ ಡ್ರೈವರ್ ಹಾಗೂ ನಮ್ಮೂರಿನ ರೇವಪ್ಪಾ ತಂದೆ ಗುರುಲಿಂಗಪ್ಪಾ ಉಪ್ಪಿನ, ಕಾಶಿನಾಥ ತಂದೆ ಶರಣಪ್ಪಾ ಬಿರಾದಾರ, ತಮ್ಮಣ್ಣಾ ತಂದೆ ಶಿವಾಜಿ ಪವಾರ್ ಎಲ್ಲರೂ ಸದರಿ ಘಟನೆಯನ್ನು ನೋಡಿ ನನಗೆ ಕಾರಿನಿಂದ ಹೊರಗೆ ತಗೆದು ಅಲ್ಲಿಂದ ನನ್ನ ಸಹೋದರನಾದ ಶಿವಪ್ಪಾ ಈತನಿಗೆ ಸುದ್ದಿ ತಿಳಿಸಿದ್ದು. ನನ್ನ ಸಹೋದರನು ಒಂದು ಖಾಸಗಿ ವಾಹನದೊಂದಿಗೆ ಸ್ಥಳಕ್ಕೆ ಬಂದು ನನಗೆ ಅದರಲ್ಲಿ ಹಾಕಿಕೊಂಡು ಉಪಚಾರಕ್ಕಾಗಿ ಕಲಬುರಗಿಯ ಡೆಕ್ಕನ್ ಕೇರ ಆಸ್ಪತ್ರೆಗೆ ಉಪಚಾರಕ್ಕಾಗಿ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಸೋಲಾಪೂರದ ಬಲವಂತ ಆಸ್ಪತ್ರೆಗೆ ಸೇರಿಕೆಮಾಡಿರುತ್ತಾರೆ ಅಂತಾ ಶ್ರೀ ಶ್ರೀಕಾಂತ ತಂದೆ ಲಕ್ಷ್ಮಣ ಸೇರಿಕಾರ ಸಾ : ಗೋಳಾ (ಬಿ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.