POLICE BHAVAN KALABURAGI

POLICE BHAVAN KALABURAGI

30 September 2011

GULBARGA DIST REPORTED CRIMES

ಅಪಹರಣ ಪ್ರಕರಣ :

ಮಹಿಳಾ ಠಾಣೆ :ಶ್ರೀ ವೀರಣ್ಣ ತಂದೆ ಚನ್ನಬಸಪ್ಪಾ ಪಾಟೀಲ ಸಾ:ಆಳಂದ ಕಾಲೂನಿ ಗುಲಬರ್ಗಾ ರವರ ಮೋಮ್ಮಗಳಾದ ಕುಮಾರಿ ಸುಶೀಳಾ ತಂದೆ ಶರಣಪ್ಪ ಸಾ: ಅಂಕೇರಾ ತಾ: ಚಿತ್ತಾಪೂರ ಇವಳು 5 ವರ್ಷಗಳಿಂದ ನಮ್ಮ ಹತ್ತಿರ ಇರುತ್ತಾಳೆ ನಮ್ಮ ಮನೆಯಲ್ಲಿ ಬಾಡಿಗೆಯಿಂದ ಇರುವ ಶಿವಾನಂದ ಹಡವೆ ಇವನು ನನ್ನ ಮಮ್ಮಗಳೋಂದಿ ಸಲುಗೆಯಿಂದ ಇದ್ದು ಅವಳನ್ನು ಹಿಂಬಾಲಿಸುವುದನ್ನು ಮಾಡುತ್ತಿದ್ದು ಇದಕ್ಕೆ ಬಸವರಾಜ ಪ್ರೋತ್ಸಾಹಿಸುತ್ತಿದ್ದು ಇದು ನಮಗೆ ಗೊತ್ತಾಗಿ ಸದರಿಯವರನ್ನು ಮನೆ ಬಿಡಿಸಿದ್ದು ನಮ್ಮ ಮನೆಯ ಹತ್ತಿರ ಬಾಡಿಗೆ ಮನೆ ಮಾಡಿಕೊಂಡು ಇದ್ದು ದಿನಾಂಕ 28-09-2011 ರಂದು 11 ಗಂಟೆಯ ಸುಮಾರಿಗೆ ಸುಶೀಲಾ ಇವಳು ಮನೆಯಿಂದ ಹೋದವಳು ಮರಳಿ ಬಂದಿರುವುದಿಲ್ಲಾ ಎಲ್ಲ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ನನ್ನ ಮಮ್ಮಗಳನ್ನು ಶಿವಾನಂದ ಇತನು ಬಸವರಾಜನ ಕುಮ್ಮಕ್ಕಿನಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ :

ನರೋಣಾ ಠಾಣೆ :ಶ್ರೀ ತಾಜೋದ್ದಿನ ತಂ ಮಹಿಬೂಬಸಾಬ ಮುಲ್ಲಾ ಸಾ:ಧಮ್ಮೂರ ಇವರ ಮಗನಾದ ನಸಿರೊದ್ದೀನ ಇದ್ದು, ನಸೀರೊದ್ದೀನ ಇತನು ಒಂದು ತರದ ಸಿಟ್ಟಿನ ಸ್ವಭಾವದವನು ಇದ್ದು ದಿನಾಂಕ 28-09-2011 ರಂದು ಬೆಳಿಗ್ಗೆ ಮನೆಯಲ್ಲಿ ನನ್ನ ಮಗ ಮತ್ತು ಸೋಸೆ ಇಬ್ಬರು ಬಾಯಿ ಮಾತಿನ ಜಗಳ ಮಾಡಿಕೊಂಡಿದ್ದು ವಿಷಯ ಗೊತ್ತಾಗಿ ನಾನು ಇಬ್ಬರಿಗೆ ಕೂಡಿಸಿಕೊಂಡು ಬುದ್ದಿ ಹೇಳಿದ್ದೆ, ದಿನಾಂಕ 29-09-2011 ರಂದು ಬೆಳಿಗ್ಗೆ 09 ಗಂಟೆಗೆ ನಾನು ಮತ್ತು ಮಗನಾದ ಮಶಾಖ ಹಾಗೂ ಮಾಲಾನಬಿ ಸೋಸೆಯಂದಿರು ಇಬ್ಬರು ಕೂಡಿಕೊಂಡು ಹೋಲದಲ್ಲಿ ಕಲಸಕ್ಕೆ ಹೋಗಿದೆವು. ಮನೆಯಲ್ಲಿ ನನ್ನ ಹೆಂಡತಿ ಜೋತೆಯಲ್ಲಿ ಮಗನಾದ ಖಮರೋದ್ದಿನ ಬಿಟ್ಟು ಹೋಗಿರುತ್ತೇನೆ. ನನ್ನ ಮಗ ನಸಿರೋದ್ದಿನ ಮನೆಗೆ ಬಂದು ಒಂದು ವರಿ ಗಂಟೆಗೆ ನಮಾಜ ಮಾಡಿಕೊಂಡು ತನ್ನ ಮಗನಿಗೆ ಕರೆದುಕೊಂಡು ಹೋರಗೆ ಹೋಗಿರುತ್ತಾನೆ. 02-45 ಗಂಟೆಗೆ ತನ್ನ ಫೊನದಿಂದ ನನ್ನ ಹಿರಿಯ ಮಗನ ಫೊನಿಗೆ ಇದು ಲಾಷ್ಟ ನಮಸ್ತೆ ಎಂದು ಹೇಳಿ ಪೋನ ಕಟ್ ಮಾಡಿದನು. ನಾನು ಮತ್ತು ಸೋಸೆಯಂದಿರು, ಮಕ್ಕಳು ಬಂದು ನೋಡಲು ತನ್ನ ಹೆಂಡತಿ ತಿಳಿಸಿದೆನೇಂದರೆ ಮಗ ಮಮ್ಮಗನಿಗೆ ಕರೆದುಕೊಂಡು ಹೋಗಿರುತ್ತಾನೆಂದು ಹೇಳಿದ್ದು ನಾವೆಲ್ಲರು ಊರಲ್ಲಿ ನೋಡಲು ಕಾಣಲಿಲ್ಲ ಹಾಗೆ ನಮ್ಮ ಹೋಲ ಸರ್ವೇ ನಂ 52 ರಲ್ಲಿ ಹೋಗಿ ನೋಡಲು ಬೆವಿನ ಗಿಡದಲ್ಲಿ ಮನುಷನ ಕಾಲು ಕಾಣುತ್ತಿದ್ದವು ಗೀಡದ ಹತ್ತಿರ ನೋಡಲಾಗಿ ನನ್ನ ಮಗ ನಸಿರೋದ್ದಿನ ಮಮ್ಮಗ ಖಮರೊದಿನ ಇಬ್ಬರು ಹಗ್ಗದಿಂದ ಕುತ್ತಿಗೆಗೆ ಉರಿಲು ಹಾಕಿಕೊಂಡಿದ್ದು ನೋಡಿದೇವು ನನ್ನ ಮಗನು ಮಮ್ಮಗನಿಗೆ ಕೋಲೆ ಮಾಡುವ ಇರಾದೆಯಿಂದ ಕುತ್ತಿಗೆಗೆ ಹಗ್ಗದಿಂದ ಉರಿಲು ಹಾಕಿ ಸಾಯಿಸಿ ತಾನು ಕೂಡಾ ಅದೆ ಹಗ್ಗದಿಂದ ಊರಿಲು ಹಾಕಿಕೊಂಡು ಆತ್ಮ ಹತ್ಯಾ ಮಾಡಿಕೊಂಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಅಪಹರಣ ಪ್ರಕರಣ ;
ಚಿಂಚೋಳಿ ಠಾಣೆ :
ಶ್ರೀ ತಿಮ್ಮಯ್ಯಾ ತಂದೆ ತಿಪ್ಪಯ್ಯಾ ವಡ್ಡರ ಸಾಃ ಚಂದಾಪೂರ ಇವರ ಮಗಳಾದ ಕು. ಸುಜಾತ ವ: 15ವರ್ಷ, ಇವಳಿಗೆ ದಿನಾಂಕ: 26-09-2011 ರಂದು ಮಧ್ಯಾಹ್ನ 1.ಸುಶೀಲಾಬಾಯಿ ಗಂಡ ಕಾಶು ಜಾ: ಲಂಬಾಣಿ 2.ಅನುಶಾ ಬಾಯಿ ತಂದೆ ಕಾಶು 3.ರೇಣುಕಾ ತಂದೆ ಮೋನು ಜಾ: ಲಂಬಾಣಿ 4. ಅಂಬು ತಂದೆ ಕಾಶು ಸಾ: ಎಲ್ಲರು ಗಂಗೂ ನಾಯಕ ತಾಂಡಾ ಚಂದಾಪೂರ ಕೂಡಿಕೊಂಡು ಮಗಳಿಗೆ ಅವಾಚ್ಚ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿ ಅಪಹರಿಸಿಕೊಂಡು ಹೊಗಿರುತ್ತಾರೆ. ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಡುಗೆ ಮಾಡುವಾಗ ಆಕಸ್ಮಿಕ ಬೆಂಕಿ ತಗುಲಿ ಗೃಹಿಣಿ ಸಾವು :
ಗ್ರಾಮೀಣ ಠಾಣೆ :
ಶ್ರೀಮತಿ ಶರಣಮ್ಮ ಗಂಡ ಶಿವಕುಮಾರ ದುತ್ತರಗಾಂವ ಸಾ: ಶರಣ ಶಿರಸಗಿ ಗುಲಬರ್ಗಾ ಇವಳು ಮಾನಸಿಕ ಅಸ್ಥವಸ್ಥಳಿದ್ದು ದಿನಾಂಕ 17-9-11 ರಂದು ಮುಂಜಾನೆ ತನ್ನ ಮನೆಯಲ್ಲಿ ಅಡುಗೆ ಮಾಡುವ ಕಾಲಕ್ಕೆ ಆಕಸ್ಮಿಕ ಸ್ಟೋದ ಬೆಂಕಿ ಅವಳು ತೊಟ್ಟ ಬಟ್ಟೆಗೆ ಹತ್ತಿ ಮುಖಕ್ಕೆ ಕೈಗೆ ಎದೆಗೆ ಬೆನ್ನಿಗೆ ಅಲ್ಲಲ್ಲಿ ಸುಟ್ಟ ಗಾಯಗಳು ಆಗಿದ್ದು ಅದರ ಉಪಚಾರ ಕುರಿತು ಅವಳನ್ನು ಬಸವೇಶ್ವರ ಆಸ್ಪತ್ರಗೆ ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ, ಗುಣ ಮುಖ ಹೊಂದದೆ ಇಂದು ದಿನಾಂಕ 29-9-11 ರಂದು ಮದ್ಯಾಹ್ನ 12 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತ್ತ ಪಟ್ಟಿದ್ದು ಇರುತ್ತದೆ ಅಂತಾ ಶ್ರೀಮತಿ ನಾಗಮ್ಮ ಗಂಡ ಶಿವಕುಮಾರ ಮೂಲಗೆ ಸಾ: ಅಂಕಲಗಾ ತಾ: ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 September 2011

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ಐದು ಜನರ ಬಂಧನ :
ಕಮಲಾಪೂರ ಠಾಣೆ :
ದಿನಾಂಕ 28-09-2011 ರಂದು ಮಧ್ಯಾಹ್ನ ಜೀವಣಗಿ ಗ್ರಾಮದ ಹನುಮಾನ ದೇವರ ಗುಡಿಯ ಎದುರುಗಡೆ ಇರುವ ಸಾರ್ವಜನಕ ಕಟ್ಟೆಯ ಮೇಲೆ ಕೆಲವು ಇಸ್ಪೀಟ ಜೂಜಾಟದಲ್ಲಿ ನಿರತರಾಗಿರುವ ಬಗ್ಗೆ ಬಾತ್ಮಿ ಮೇರೆಗೆ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಪಂಚರು ಠಾಣೆಯ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಜೂಜಾಟವನ್ನು ಆಡುತ್ತಿದ್ದ 1.ಗುಂಡಪ್ಪಾ ಸಾಲಹಳ್ಳಿ 2.ರಾಜಣ್ಣಾ ಬಿರೆದಾರ 3.ಇಮಾಮೋದ್ದಿನ್ 4.ರಾಜಣ್ಣಾ ಚಳಕಾಪೂರ 5.ಚಂದ್ರಕಾಂತ ಸಮಗಾರರತವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ 2050-00 ರೂ. ಗಳ ಮತ್ತು 52 ಇಸ್ಪೇಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡಿದ್ದು ಈ ಬಗ್ಗೆ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾತಿ ನಿಂದನೆ ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ತಿಪ್ಪಣ್ಣಾ ತಂದೆ ಶರಣಪ್ಪಾ ಜಾನೆ ಸಾ;ಸಿಂದಗಿ (ಬಿ) ತಾ;ಜಿ;ಗುಲಬರ್ಗಾ ಇವರು ದಿನಾಂಕ. 28-9-2011 ರಂದು ಬೆಳಿಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಮಧ್ಯಾಹ್ನ ಹೊಲದ ಕೆಳಗಿನ ಬದುವಿನ ಹತ್ತಿರ ನಮ್ಮ ಪಕ್ಕದ ಹೊಲ ಪಾಲಿಗೆ ಮಾಡಿದ ಗುಡು ತಂದೆ ಅಜ್ಜು @ ಅಜೀಜ ಇತನು ತಮ್ಮ ದನಗಳನ್ನು ನಮ್ಮ ಹೋಲದಲ್ಲಿ ಬಿಟ್ಟಿದನು ಆಗ ನಾನು ಕರೆದು ಗುಡು ಇತನಿಗೆ ಹೊಲದಲ್ಲಿ ದನಗಳನ್ನು ಏಕೆ ಬಿಟ್ಟಿರುವಿ ಬೆಳೆ ಹಾಳಾಗುತ್ತವೆ ಅಂತಾ ಅಂದುದಕ್ಕೆ ಸದರ ಗುಡು ಇತನು ಸ್ವಲ್ಪ ಬೆಳೆ ತಿಂದರೆ ಏನಾಗುತ್ತದೆ ಎಂಬ ವಿಷಯದಲ್ಲಿ ಬಾಯಿ ತಕರಾರು ಆಗಿ ಜಗಳ ತೆಗೆದು ಹೊಲದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಏನೋ ಹೊಲೆ ಸೂಳೆ ಮಗನೆ ನನ್ನ ತಮ್ಮನ ಸಂಗಡ ಜಗಳ ಮಾಡುತಿಯಾ ಎಂದು ಜಾತಿ ಎತ್ತಿ ಬೈದು 1.ಗುಡು ತಂದೆ ಅಜ್ಜು @ ಅಜೀಜ ಕಡಗಂಚಿ , 2.ಮಹಿಬೂಬ ತಂದೆ ಅಜ್ಜು @ ಅಜೀಜ ಕಡಗಂಚಿ ,3.ರಫೀಕ ತಂದೆ ಮಸ್ತಾನ ಸಾ: ಎಲ್ಲರೂ ಡಬರಾಬಾದ ಸಂಗಡ ಇನ್ನೊಬ್ಬ ನಿಲ್ಲಿಸಿ ಕಲ್ಲಿನಿಂದ ಮತ್ತು ಕೈಯಿಂದ ಬೆನ್ನ ಮೇಲೆ ಹೊಡೆದು ಕಾಲಿನಿಂದ ಒದ್ದು ರಕ್ತಗಾಯ ಮತ್ತು ಗುಪ್ತಗಾಯಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರಣಾಂತಿ ಹಲ್ಲೆ ಪ್ರಕರಣ :
ವಾಡಿ ಠಾಣೆ :
ಶ್ರೀ ಮಹ್ಮದ ಗೌಸ ತಂದೆ ಹಾಜಿ ಕರೀಮ ಸಾ: ಬಿರ್ಲಾ ಏರಿಯಾ ವಾಡಿ ಇವರು ಹಣ್ಣಿನ ವ್ಯಾಪಾರ ಮಾಡಿಕೊಂಡು ಉಪಜೀವಿಸುತ್ತಿದ್ದು ಈ ಮೊದಲು 1.ಶಬ್ಬಿರ ತಂದೆ ನಾಸೀರ ಖಾನ 2.ಶಮಶೀರ ತಂದೆ ನಾಸೀರ ಖಾನ 3.ಬಾಬಾ ಪಟೇಲ ಸಾ: ಎಲ್ಲರು ವಾಡಿ ಇವರೊಂದಿಗೆ ಜಗಳವಾಗಿದ್ದು ಆ ಬಗ್ಗೆ ಕೋರ್ಟನಲ್ಲಿ ಕೇಸ ನಡೆದಿದ್ದು ಅದೇ ವಿಷಯದಲ್ಲಿ ವೈಮನಸ್ಸು ಇಟ್ಟುಕೊಂಡು ನಿನ್ನೆ ದಿನಾಂಕ 28-09-2011 ರಂದು ಸಾಯಂಕಾಲ ವಿ:ನಾ ಕಾರಣ ಜಗಳ ತೆಗೆದು ಮಾರಣಾಂತಿಕ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 September 2011

GULBARGA DIST REPORTED CRIMES

ಜೂಜಾಡುತ್ತಿದ್ದವರ ಬಂಧನ :-
ಕಮಲಾಪುರ ಠಾಣೆ : ಜೀವಣಗಿ ಗ್ರಾಮದ ಹನುಮಾನ ದೇವರ ಗುಡಿಯ ಎದುರುಗಡೆ ಇರುವ ಸಾರ್ವಜನಕ ಕಟ್ಟೆಯ ಮೇಲೆ ಜೂಜಾಟ ಆಡುತ್ತಿದ್ದ ಗುಂಡಪ್ಪಾ ತಂದೆ ಬಸವಣ್ಣಪ್ಪಾ ಸಾಲಹಳ್ಳಿ ಸಾಃ ಜೀವಣಗಿ, ರಾಜಣ್ಣಾ ತಂದೆ ಗುಂಡಪ್ಪಾ ಬಿರೆದಾರ ಸಾಃ ಬೇಲೂರ(ಕೆ), ಇಮಾಮೋದ್ದಿನ್ ತಂದೆ ಇಮಾಮಸಾಬ ದಂಡೋತಿ ಸಾಃಕಲಗುರ್ತಿ, ರಾಜಣ್ಣಾ ತಂದೆ ಭೀಮರಾವ ಚಳಕಾಪೂರ ಸಾಃ ಭೂಂಯಾರ, ಚಂದ್ರಕಾಂತ ತಂದೆ ಅವ್ವಣ್ಣಾ ಸಮಗಾರ ಸಾಃ ಜೀವಣಗಿ ತಾಃಜಿಃ ಗುಲಬರ್ಗಾ ರವರನ್ನು ಶ್ರೀ ಶಾಂತಿನಾಥ ಬಿ.ಪಿ ಪಿಎಸ್ಐ ಕಮಲಾಪೂರ ಠಾಣೆ ಮತ್ತು ಸಿಬ್ಬಂದಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ವಶಕ್ಕೆ ತೆಗೆದುಕೊಂಡಿದ್ದು ಬಂಧಿತರಿಂದ ಒಟ್ಟು 2050-00 ರೂ. ಗಳು ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಈ ಕುರಿತು ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crime


ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಠಾಣೆ :ದಿನಾಂಕ:
28-09-2011 ರಂದು ಬೆಳಗ್ಗೆ ಮಾರ್ಕೇಟ ಅಫಜಲಪೂರ ಮೇನ ರೋಡನಲ್ಲಿ ನಡೆದುಕೊಂಡು ರೋಡ ದಾಟುತ್ತಿದ್ದ ಮಲ್ಲು @ ಮಲ್ಲಿಕಾರ್ಜುನ ತಂದೆ ಬೀರಣ್ಣ ಪುಜಾರಿ ಈತನಿಗೆ ಮೋ/ಸೈಕಲ್ ನಂ:ಕೆಎ 32 ಎಸ್ 2678 ನೆದ್ದರ ಚಾಲಕ ಅಫಜಲಪೂರ ರೋಡಿನ ಕಡೆಯಿಂದ ಅತಿವೇಗವಾಗಿ ಅಲಕ್ಷತನದಿಂದ ರಾಂಗ ಸೈಡಿನಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ರೋಡ ದಾಟುತ್ತಿದ್ದ ಮಲ್ಲಿಕಾರ್ಜುನ ಈತನಿಗೆ ಅಪಘಾತಪಡಿಸಿ ಭಾರಿ ಗಾಯಗೋಳಿಸಿ ತನ್ನ ಮೋ/ಸೈಕಲ್ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ಏಳು ಜನರ ಬಂಧನ :
ಗ್ರಾಮೀಣ ಠಾಣೆ :ದಿನಾಂಕ.27-09-2011 ರಂದು ಮಧ್ಯಾಹ್ನ ಉಪಳಾಂವ ಗ್ರಾಮದ ಪರಿವಾರ ಟೇಲರ ಇವರ ಹೊಲ ದ ಬೇವಿನ ಗಿಡದ ಕೆಳಗೆ ಕೆಲವು ಜನರು ದುಂಡಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪೇಟ ಎಲೆಗಳ ಸಹಾಯ ದಿಂದ ಅಂದರ ಬಾಹರ ಎಂಬ ದೈವಲೀಲೆ ಇಸ್ಪೇಟ ಜೂಜಾಟವಾಡುತ್ತಿದ್ದಾಗ ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಹಾಯದಿಂದ ಮೇಲಾದಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಸದರಿ 1.ಬಸವರಾಜ ತಂದೆ ಬಂಡೆಪ್ಪಾ ಚಿಕೋಣಿ ಸಾ;ಬ್ಯಾಂಕ ಕಾಲೂನಿ ಗಂಜ ಗುಲಬರ್ಗಾ 2.ಪರಮೇಶ್ವರ ತಂದೆ ವೇಷಣ್ಣಾ ಚಲಗೇರಿ ಸಾ;ಮಾಕಾ ಲೇಔಟ ಜೇವರ್ಗಿ ರೋಡಗುಲಬರ್ಗಾ 3.ಶ್ರೀಶೈಲ್ ತಂದೆ ಮಲ್ಲಿಕಾರ್ಜುನ ನಾಯಿಕೊಡಿ ಸಾ;ಮನಂ.116 ಸಿಐಬಿ.ಕಾಲೋನಿ ಗುಲ್ಬರ್ಗಾ 4.ಭೀಮಶ್ಯಾ ತಂದೆ ಬಂಡೆಪ್ಪಾ ಸಿಂಧೆ ಸಾ; ಅಶೋಕ ನಗರ ಕಾಲೂನಿ ಗುಲಬರ್ಗಾ 5.ರಮೇಶ ತಂದೆ ಶಿವಶರಣಪ್ಪಾ ನಿಂಬಾಳ ಸಾ; ಉಪಳಾಂವ ತಾ: ಗುಲ್ಬರ್ಗಾ 6.ಅಣವೀರಪ್ಪಾ ತಂದೆ ಮಲ್ಕಣ್ಣಾ ನಂದಿಕೂರ ಸಾ;ಉಪಳಾಂವ ತಾ: ಗುಲ್ಬರ್ಗಾ 7.ಶಂಕರೆಪ್ಪಾ ತಂದೆ ಸಂಗಣ್ಣಾ ಟೆಂಗಳಿ ಸಾ; ಉಪಳಾಂವ ತಾ: ಗುಲಬರ್ಗಾ ಹಿಡಿದು ಜೂಜಾಟಕ್ಕೆ ಬಳಸಿದ 52 ಇಸ್ಪೇಟ ಎಲೆ ಹಾಗೂ ನಗದು ಹಣ 6035/- ರೂಗಳು ಹಾಗೂ 4 ಮೋಬೈಲ ಪೋನಗಳನ್ನು ವಶಪಡಿಸಿಕೊಂಡು ಸದರಿಯವರ ವಿರುದ್ದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ಮಧುಕರ ತಂದೆ ಅಂಬಾಜಿ ಬಂದಿಚೌಡೆ ಸಾ: ಜಂಬಗಾ (ಕೆ) ತಾ: ಆಳಂದ ಜಿ: ಗುಲಬರ್ಗಾ ರವರು ದಿನಾಂಕ 27-09-11 ರಂದು ದಣ್ಣೂರ ಗ್ರಾಮಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ದಣ್ಣೂರ ಗ್ರಾಮದಲ್ಲಿ ಮ್ಯಾಕ್ಸಿ ಕ್ಯಾಬ ಹತ್ತಿ ಗುಲಬರ್ಗಾಕ್ಕೆ ಸಾಯಂಕಾಲ ಆಳಂದ ಚೆಕ್ಕ ಪೋಸ್ಟ್‌ ಹತ್ತಿರ ಬಂದು ಮ್ಯಾಕ್ಸಿ ಕ್ಯಾಬಿನಿಂದ ಇಳಿಯುವಾಗ 3 ಜನ ಅಪರಿಚಿತರು 25 ರಿಂದ 30 ವರ್ಷ ವಯಸ್ಸಿನವರು ನನ್ನ ಪ್ಯಾಂಟಿನ ಹಿಂದಿನ ಜೇಬಿನಲ್ಲಿದ್ದ 10000/- ರೂಪಾಯಿ ಕಳ್ಳತನ ಮಾಡಿಕೊಂಡು ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :
ದಿನಾಂಕ: 27-9-2011 ರಂದು   ನಗರದ ಜಗತ .ಸರ್ಕಲ್  ದಿಂದ ಎಸ್.ವಿ.ಪಿ. ಸರ್ಕಲ್ ರೋಡಿನಲ್ಲಿ ಬರುವ ಟೌನ ಹಾಲ ಕ್ರಾಸ್  ರೋಡಿನ ಮೇಲೆ  ಒಂದು ಅಟೊರೀಕ್ಷಾ ನಂ:ಕೆಎ 32 ಬಿ 409 ನೆದ್ದರ ಚಾಲಕ ಜಿ.ಜಿ.ಹೆಚ್.ಸರ್ಕಲ್ ಕಡೆಯಿಂದ ಅತಿವೇಗವಾಗಿ & ಅಲಕ್ಷತನದಿಂದ  ಚಲಾಯಿಸಿಕೊಂಡು ಬಂದು ಎಸ್.ವಿ.ಪಿ.ಸರ್ಕಲ್ ಕಡೆ ತಿರುಗಿಸಿಕೊಳ್ಳುತ್ತಿದ್ದಾಗ ಒಮ್ಮೇಲೆ ಕಟ್ಟ ಹೊಡೆದು ತನ್ನಿಂದ ತಾನೆ ಅಟೋರೀಕ್ಷಾ ಪಲ್ಟಿಮಾಡಿ  ಅದರಲ್ಲಿ ಕುಳಿತು  ಹೋಗುತ್ತಿದ್ದ ಶ್ರೀ ಶಿವಲಿಂಗಪ್ಪ  ತಂದೆ ಈರಣ್ಣ ಭಂಡಾರಿ ಸಾ: ವಿದ್ಯಾ ನಗರ ಸಿಂದಗಿ     ಇವರಿಗೆ ಗಾಯಗೊಳಿಸಿ ತನ್ನ ಅಟೋರೀಕ್ಷಾ ಅಲ್ಲಿಯೇ ಬಿಟ್ಟು ಓಡಿ.ಹೊಗಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 September 2011

Gulbarga District Reported Crimes

ಜೂಜಾಟದಲ್ಲಿ ನಿರತ ಮೂರು ಜನರ ಬಂಧನ :

ರಾಘವೇಂದ್ರ ನಗರ ಠಾಣೆ :ದಿನಾಂಕ 26-09-2011 ರಾತ್ರಿ 11 ಗಂಟೆಗೆ ಶಹಾಜಿಲಾನಿ ದರ್ಗಾದ ಹತ್ತಿರ ಸಾರ್ವಜನಿಕ ಸ್ಥಳಸದಲ್ಲಿ ಆನೆ ಕುದುರೆ ಸಿಂಹ ಚಿತ್ರವುಳ್ಳ ಬ್ಯಾನರ ತೋರಿಸಿ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಮಾನ್ಯ ಎ.ಎಸ್.ಪಿ ಸಾಹೇಬರು ಎ ಉಪವಿಭಾಗ ಗುಲಬರ್ಗಾರವರು ತಮ್ಮ ಉಪವಿಭಾಗದ ಅಧಿಕಾರಿಗಳಾದ ಶರಣಬಸವೇಶ್ವರ ಪಿಐ ಬ್ರಹ್ಮಪೂರ ಠಾಣೆ ಬಸವರಾಜ ತೇಲಿ ಪಿ.ಎಸ್.ಐ ರಾಘವೆಂದ್ರ ನಗರ ಹಾಗೂ ರಾಘವೇಂದ್ರ ಠಾಣೆಯ ಸಿಬ್ಬಂದಿ ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ 1.ಸದ್ದಾಮತ ತಂದೆ ಪಾಶಾಮಿಯಾ ಪಟೇಲ ಸಾ|| ಹಿರಾಪೂರ ಗುಲಬರ್ಗಾ 2. ಖಲೀಲ ತಂದೆ ಖಾಜಾಮಿಯಾ ಖುದಾವನ ಸಾ|| ಖದೀರ ಚೌಕ ಗುಲಬರ್ಗಾ 3. ಖಾಜಾ ಮೈನೋದ್ದೀನ ತಂದೆ ಖುದಾಬಕ್ಸ ಬಂಬಾಯಿ ಮಿಟಾಯಿ ಸಾ|| ಎಮ್.ಎಸ್.ಕೆ ಮಿಲ ಗುಲಬರ್ಗಾ 3 ಜನರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿದ ನಗದು ಹಣ 7600/-ರೂಪಾಯಿಗಳು, ಆನೆ ಕುದುರೆ ಸಿಂಹ ಚಿತ್ರವುಳ್ಳ ಜೂಜಾಟಕ್ಕೆ ಸಂಬಂಧಪಟ್ಟ ಬ್ಯಾನರ, 7 ಇಸ್ಪೇಟ ಎಲೆಗಳು ಜಪ್ತು ಮಾಡಿಕೊಂಡಿದ್ದು ಈ ಬಗ್ಗೆ ರಾಘವೆಂದ್ರ ನಗರ ಠಾಣೆಯ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಫರತಾಬಾದ ಠಾಣೆ :
ದಿನಾಂಕ: 26-09-2011 ರಂದು ಸಂಪತಬಾಯಿ ಗಂಡ ಶಿವಶರಣಪ್ಪಾ ತಿಪ್ಪನವರ ಶಾ: ಹಾಗರಗಾ ಇವರಿಗೆ ಆರಮ ಇಲ್ಲದ ಕಾರಣ ತೋರಿಸಿಕೊಂಡು ಬರಲು ನನ್ನ ತಮ್ಮನಾದ ಅಂಬರಾಯ ಕೂಡಿಕೊಂಡು ಹುಣಸಿಹಡಗಿಲಗ್ರಾಮದಿಂದ ಗುಲಬರ್ಗಾಕ್ಕೆ ಬಂದು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಗುಲಬರ್ಗಾದಿಂದ ಪ್ಯಾಸೇಂಜರ ರೇಲ್ವೆನಲ್ಲಿ ಕುಳಿತುಕೊಂಡು ಸಾವಳಗಿ ಸ್ಠೇಷನದಲ್ಲಿ ಇಳಿದು ಹುಣಸಿ ಹಡಗಿಲ ಗ್ರಾಮಕ್ಕೆ ನಡೆದುಕೊಂಡು ಹುಣಸಿ ಹಡಗಿಲ ಗ್ರಾಮದ ಹತ್ತಿರ ಇರುವ ಫೊಲ್ ಮೇಲೆ ಹೋಗುತ್ತಿದ್ದಾಗ ಹಿಂದುಗಡೆ ಬರುತ್ತಿದ್ದ ಮೋಟಾರ ಸೈಕಲ ನಂ: ಕೆಎ-32 ವ್ಹಿ- 6591 ನೇದ್ದರ ಸವಾರನು ತನ್ನ ವಾಹವನ್ನು ಅತಿವೇಗದಿಂದ, ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿದ ಪರಿಣಾಮ ನನ್ನ ಎಡಗಡೆ ತೆಲೆಗೆ ಭಾರಿ ರಕ್ತಗಾಯವಾಗಿರುತ್ತದೆ, ಮತ್ತು ಎಡ ಕಪಾಳಕ್ಕೆ, ಬಲಗಾಲ ಮೊಳಕಾಲ ಹತ್ತಿರ ರಕ್ತಗಾಯಗಳಾಗಿರುತ್ತವೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :

ಕಮಲಾಪೂರ ಠಾಣೆ :ಶ್ರೀಮತಿ ಪುತಳಾಬಾಯಿ ಗಂಡ ಶ್ರೀಮಂತರಾವ ನಾರಾಯಣಪೂರೆ ಸಾ: ಬೆಕೋಟಾ ಪುನರ ವಸತಿ ಕೇಂದ್ರ ಕಮಲಾಪೂರ ರವರು ದಿನಾಂಕ 26-09-2011 ರಂದು ರಾತ್ರಿ ಊಟ ಮಾಡಿ ಮನಗೆ ಬೀಗ ಹಾಕಿಕೊಂಡ ಮನೆಯ ಅಂಗಳದಲ್ಲಿ ಮಲಗಿಕೊಂಡಾಗ ಯಾರೋ ಕಳ್ಳರು ಮನೆಯ ಕೀಲಿ ತರೆದು ಮನೆಯಲ್ಲಿದ್ದ ಬಂಗಾರ ಬೆಳ್ಳಿಯ ಆಭರ ಮತ್ತು ನಗದು ಹಣ ಹೀಗೆ ಒಟ್ಟು 9400/- ರೂಪಾಯಿ ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಅಲ್ಲದೆ ಪಕ್ಕದ ಮನೆಯವರಾದ ಶ್ರೀ, ದಾನಪ್ಪ ಜಮಾದಾರ ಇವರ ಮನೆಯಲ್ಲಿಯೂ ಕಳ್ಳರು ಬಾಗಿಲ ಕೀಲಿ ಮುರಿದು ಮನೆಯಲ್ಲಿದ್ದ ಬಂಘಾರದ ಬೆಳ್ಳಿಯ ಆಭರಣ ಮತ್ತು ನಗದು ಹಣ ಒಟ್ಟು 21800=00 ರೂಪಾಯಿ ಬೆಲೆಬಾಳುವ ಸಾಮಾನುಗಳನ್ನು ಕಳವು ಂಆಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ :
ಶ್ರೀ ಸುಭಾಸ ತಂದೆ ಈರಣ್ಣಾ ತಿಪ್ಪಿಮನಿ ಸಾ:ಶಂಕರವಾಡಿ ಶಾಹಾಬಾದ ರವರು ದಿನಾಂಕ 26-09-2011 ರಂದು ಸಾಯಂಕಾಲ ರಾಜು ತಂದೆ ಮಲ್ಲಪ್ಪಾ ಇನ್ನೂ 5 ಜನರು ಸಾ:ಎಲ್ಲರೂ ಶಂಕರವಾಡಿ ಕುಡಿಕೊಂಡು ಮಗನಾದ ನಾಗರಾಜ ಇವನನ್ನು ಶಂಕರ ಇವನ ಮನೆಗೆ ಕರೆದುಕೊಂಡು ಹೋಗಿದ್ದು ಸದರಿಯವರ ಸಂಗಡ ನಾನು ಹೋಗಿದ್ದು ಶಂಕರ ಇತನು ನಿನ್ನ ಮಗ ನಾಗರಾಜ ಇವನು ನನ್ನ ಮಗಳನ್ನು ಭಂಕೂರದಿಂದ ಮೋಟಾರ ಸೈಕಲ ಮೇಲೆ ಏಕೆ ಕರೆದುಕೊಂಡು ಬಂದಿದ್ದಾನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ತಲೆಗೆ ಎದೆಗೆ ಬೆನ್ನಿಗೆ ಹೊಡೆದು ಗುಪ್ತ ಗಾಯ ಮತ್ತು ರಕ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಕಾಳ ಸಂತೆಯಲ್ಲಿ ಅಕ್ರಮ ಸೀಮೆ ಎಣ್ಣೆ ಮಾರಾಟ ಮಾಡುತ್ತಿದ್ದವರ ಬಂಧನ :
ಆಳಂದ ಠಾಣೆ :
ದಿನಾಂಕ 26-09-2011 ರಂದು ತಡಕಲ್ ಗ್ರಾಮದ ಹತ್ತಿರ ಜೀಪ ನಂ ಎಮ್.ಹೆಚ್. 14  ಡಿ 2403 ನೇದ್ದರಲ್ಲಿ 50 ಲೀಟರ ಸೀಮೆ ಎಣ್ಣೆ ಹಾಕಿಕೊಂಡು ಕಾಳ: ಸಂತೆಯಲ್ಲಿ ಮಾರಾಟ ಮಾಡಲು ತಡಕಲ್ ಕಡೆಗೆ ಹೊಗುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೊಗಿ ದಾಳಿ ಮಾಡಿ ಜೀಪ ಪರಸಿಲಿಸಿ ನೋಡಲಾಗಿ ಅದರಲ್ಲಿ 50 ಲೀಟರ ಸೀಮೆ ಎಣ್ನೆ ಇದ್ದುದು ಕಂಡು ಬಂದಿದರಿಂದ ಸಿದ್ದಪ್ಪ ತಂದೆ ಪರಮೇಶ್ವರ ಡೊಲೆ ಸಂ 3 ಜನರು ಸಾ: ಎಲ್ಲರೂ ತಡಕಲ್ ರವರನ್ನು ದಸ್ತಗೀರ ಮಾಡಿಕೊಂಡು ಮಾಲು ಸಮೇತ ಠಾಣೆಗೆ ಬಂದು ಸದರಿಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ :
ದಿನಾಂಕ
24-09-2011 ರಂದು ರಾತ್ರಿ ಶ್ರೀ ರಮೇಶ ತಂದೆ ಜರನಪ್ಪಾ ಗಾಜರೆ ಸಾ: ರಾಮ ನಗರ ರೋಡ ಗುಲಬರ್ಗ ರವರ ಟಾಟಾ ಎಸ ಗಾಡಿ ನಂ ಕೆಎ-32 ಬಿ*4661 ನೇದ್ದನ್ನು ಸಚೀನ ತಂದೆ ಶ್ರೀಮಂತ ಹೋಡಲ್ಕರ ಇವರು ರಾಮ ಮಂದಿರ ಕಡೆಯಿಂದ ನಡೆಸಿಕೊಂಡು ಗಂಜ ಕಡೆಗೆ ಹೋರಟಾಗ ನಾಗನಹಳ್ಳಿ ರಿಂಗ ರೋಡ ಸರ್ಕಲ್ ಹತ್ತಿರ ಬಂದಾಗ ಶಾಹಾಬಾದ ರಿಂಗ ರೋಡ ಕಡೆಯಿಂದ ಬಂದ ಮಾರುತಿ ಸ್ವೀಪಟ್ಟ ಕಾರ ನಂ ಕೆಎ-32 ಎಮ್-9149 ನೇದ್ದರ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತ ಪಡಿಸಿದ್ದರಿಂದ ನಮ್ಮ ವಾಹನ ಚಾಲಕ ಸಚೀನಗೆ ಕಾಲಿಗೆ ಮತ್ತು ಹನೆಗೆ ಗಾಯಗಳಾಗಿದ್ದು ನನ್ನ ವಾಹನದ ಮುಂಭಾಗ ಸಂಪೂರ್ಣ ಹಾಳಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 September 2011

Gulbarga District Reported Crime

ಅಪಘಾತ ಪ್ರಕರಣ :

ಕಮಲಾಪೂರ ಠಾಣೆ :ಶ್ರೀ. ಚಂದ್ರಕಾಂತ ತಂದೆ ಮರೇಪ್ಪಾ ಹೊಳ್ಕರ ಸಾಃ ಡೋರಜಂಬಗಾ ತಾ;ಜಿ;ಗುಲಬರ್ಗಾ ಇವರು ದಿನಾಂಕ 25-09-2011 ರಂದು ಸಾಯಂಕಾಲ ರೋಡಕಿಣ್ಣಿ ಗ್ರಾಮದ ವಸಂತ ತಂದೆ ಗೌಡಪ್ಪಾ ಪಾಟೀಲ ಇವರ ಮನೆಯಲ್ಲಿ ಟಿವಿ ರೀಪೆರಿ ಮಾಡಲು ಬಂದಿದ್ದು. ರಾತ್ರಿ 11-00 ಗಂಟೆಯವರೆಗೆ ರಿಪೇರಿ ಮಾಡಿ, ಮರಳಿ ಉರಿಗೆ ಹೋಗಲು ನಾವು ಇಬ್ಬರು ಕೂಡಿಕೊಂಡು ರೋಡಕಿಣ್ಣಿ ಗ್ರಾಮದ ಬಸ್ಸ ಸ್ಟ್ಯಾಂಡದ ಹತ್ತಿರ ಬಂದು ನಿಂತುಕೊಂಡಾಗ ಗುಲಬರ್ಗಾ ಹುಮನಾಬಾದ 218 ರೋಡಿನ ಮುಲ್ಲಾಮಾರಿ ಸೇತುವೆ ಮೇಲೆ ಗುಲಬರ್ಗಾ ಕಡೆಯಿಂದ ಲಾರಿ ನಂ. ಜಿಜೆ:10, ಡಬ್ಲೂ:7745ನೇದ್ದರ ಚಾಲಕ ಇಕ್ಬಾಲ ತಂದೆ ಇಸಾಕಭಾಯಿ ಜೌಂಧಿಯಾ ಸಾಃಜಾಮನಗರ ಕೋಜಾಗೇಟ ಗುಜರಾತ ಮತ್ತು ಹುಮನಾಬಾದ ಕಡೆಯಿಂದ ಲಾರಿ ನಂ. ಎಂಹೆಚ್:04, ಹೆಚ್:9245 ನೇದ್ದರ ಚಾಲಕ ಸಮೀರುದ್ದಿನ್ ತಂದೆ ಮಹ್ಮದ ಉಸ್ಮಾನಸಾಬ ದುಬೈವಾಲೇ ಸಾಃ ನೌಬಾದ ಬೀದರ ಇವರು ತಮ್ಮ ತಮ್ಮ ವಾಹನಗಳನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮುಲ್ಲಾಮಾರಿ ಸೇತುವೆ ನಾನು ಮೊದಲು ತಾನು ಮೊದಲು ಅಂತಾ ಸೇತುವೆ ಮಧ್ಯಭಾಗಕ್ಕೆ ಬಂದು ಒಬ್ಬರಿಗೊಬ್ಬರು ಲಾರಿಗಳನ್ನು ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ್ದರಿಂದ ಸೇತುವೆ ಸುಕ್ಷತೆಗಾಗಿ ಕಲ್ಲಿನಿಂದ ಕಟ್ಟಿದ ತಡೆಗೋಡೆ ಸುಮಾರು 30 ಫೀಟ್ ಉದ್ದಳತೆಯ ಗೋಡೆ ಕೆಡುವಿ ಹಾನಿಪಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಮಾರಣಾಂತಿಕ ಹಲ್ಲೆ ಪ್ರಕರಣ :
ರೋಜಾ ಠಾಣೆ :ಇಂದು ದಿನಾಂಕ
25-09-2011 ರಂದು ಸಾಯಂಕಾಲ ಶ್ರೀ ಜಕಿ ಖಾನ ತಂದೆ ಜಹೀರ ಅಹ್ಮದ ಖಾನ ಸಾ:ಖಾನ ಕಂಪೌಂಡ ಪಾಶಾಪೂರ ಗುಲಬರ್ಗಾ ಇವರು ಬಾಂಬೆ ಹೊಟೆಲ್ ಹತ್ತಿರ ಇರುವ ಚಿಕನ ಸೆಂಟರ ಮುಂದುಗಡೆ ನನ್ನ ವಾಹನಕ್ಕೆ ಕಟ್ ಹೊಡೆದ ಹುಡುಗನಿಗೆ ವಿಚಾರಿಸುತ್ತಿದ್ದಾಗ ಕಲೀಮ, ಸಿ.ಐ.ಬಿ ಕಾಲೋನಿ, ಯುನೂಸ, ಜಾವೀದ, ಚೋಟು ಇವರೆಲ್ಗರು ಕೂಡಿಕೊಂಡು ಬಂದು ಜಂಬ್ಯ ಮತ್ತು ರಾಡಿನಿಂದ ತಲೆಗೆ ಮತ್ತು ಕಣ್ಣಿನ ಹುಬ್ಬಿನ ಮೇಲೆ ಹೊಡೆದು ಭಾರಿ ರಕ್ತಗಾಯ ಪಡೆಸಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಝಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ :ಶ್ರೀ ಶರಣಪ್ಪ ತಂದೆ ಕಾಶಪ್ಪ ಬೊಮ್ಮನಳ್ಳಿ ದಿನಾಂಕ 24-09-2011 ರಂದು ಸಾಯಂಕಾಲ ನಿಂಗಪ್ಪ ಮುತ್ಯನ ಗುಡಿಯ ಹತ್ತಿರ ಕುಳಿತಾಗ ನಮ್ಮೂರ ಸಾಬಣ್ಣ ಧೂಳಪ್ಪ ಅಗಸಿಮನಿ ಇವನು ಬಂದು
 ಅವಾಚ್ಯ ಶಬ್ದಗಳಿಂದ ಬೈದು ನನ್ನ ಜೇಬಿನಿಂದ ಬಿದ್ದ ಹಣ ಯಾಕೆ ತೆಗೆದುಕೊಂಡಿದಿ ಅಂತ ಬೈದಾಡಿದಕ್ಕೆ ನಾನು, ನಿನ್ನ ದುಡ್ಡು ತೆಗೆದುಕೊಂಡಿಲ್ಲ ನನಗೆ ಗೊತ್ತಿಲ್ಲ ಅಂತ ನನ್ನ ಹೊಲದ ಕಡೆಗೆ ಹೋಗುತ್ತಿದ್ದಾಗ, ನನ್ನ ಬೆನ್ನು ಹಿಂದೆ ಓಡುತ್ತಾ ಬಂದು ಅಯ್ಯಣ್ಣ ಸೌಕಾರ ಇವರ ಗೋದಾಮ ಹತ್ತಿರ ರಸ್ತೆಯ ಮೇಲೆ ತಡೆದು ನಿಲ್ಲಿಸಿ ಜಾತಿ ನಿಂದನೆ ಮಾಡಿ  ಎಲ್ಲಿಗೆ ಹೋಗುತ್ತಿ ನನ್ನ ಹಣಕೊಟ್ಟು ಹೋಗು ಅಂತ ಜಾತಿನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ಬಡಿಗೆಯಿಂದ ಹೊಡೆದು ಕಂದುಗಟ್ಟಿದ ಗಾಯ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 September 2011

Gulbarga District Reported Crime

ಕಳ್ಳತನ ಪ್ರಕರಣ :

ಶಾಹಾಬಾದ ನಗರ ಠಾಣೆ: ದಿನಾಂಕ 25-09-11 ರಂದು ಶ್ರಿ ಚಂದ್ರಕಾಂತ ತಂ ಶರಣಪ್ಪಾ ದುದಣಗಿ ಸಾ:ಶಾಂತನಗರ ಶಹಾಬಾದ. ಇವರ ಶಾಂತನಗರದಲ್ಲಿರುವ ತಮ್ಮ ಲಕ್ಷ್ಮಿ ಪೋಟೋ ಸ್ಟೋಡಿಯೋದ ಕಿಟಕಿಯ ಗ್ರೀಲ್ ಬೀಚ್ಚಿ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಸ್ಟೋಡಿಯೋದಲ್ಲಿದ್ದ ಎಲ್.ಜಿ. ಮಾನಿಟರ , ಸಿ.ಪಿ.ಯು,, ಪ್ರೀಂಟರ, ಒಟ್ಟು ಅ.ಕಿ. 22,575/- ರೂ ಬೆಲೆಬಾಳುವ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಕೊಲೆ ಪ್ರಕರಣ:
ಚಿಂಚೋಳಿ ಠಾಣೆ :
ಶ್ರೀ ಬಸಪ್ಪಾ ತಂದೆ ಬೀರಪ್ಪಾ ಧನಗರ ಸಾ: ಬೆನಕೇಪಳ್ಳಿ ತಾ: ಚಿಂಚೋಳಿ ಇವರ ಮಗಳಾದ ಲಕ್ಷ್ಮಿ ಇವಳಿಗೆ 2010 ರಲ್ಲಿ ಸಂಜೀವ ಕುಮಾರ ತಂದೆ ಅಂಬಣ್ಣಾ ಹೀರೆ ಕುರಬರ ಸಾ: ಕೊಡಂಬಲ ಇತನಿಗೆ ಕೊಟ್ಟು ಮಧುವೆ ಮಾಡಿದ್ದು ಮಗಳು ಸುಮಾರು 3-4 ತಿಂಗಳ ಹಿಂದೆ ಬಾಣಂತನಕ್ಕೆ ನಮ್ಮೂರಾದ ಬೆನಕಾಪಳ್ಳಿಗೆ ಬಂದಿದ್ದು ನನ್ನ ಅಳಿಯ ಸಂಜೀವ ಕುಮಾರ ಸಂಶಯ ಪಟ್ಟುಕೊಂಡು ಜಗಳಾ ಮಾಡುವದು ಹೊಡೆ ಬಡಿ ಮಾಡುವದು ಮಾಡುತ್ತಿದ್ದನು. ಇದೆ ವಿಷಯವಾಗಿ ನನ್ನ ಮಗಳು 03 ತಿಂಗಳು ಗರ್ಭಿಣಿ ಇದ್ದಾಗ ಜಗಳಾ ಮಾಡಿ ಅವಳಿಗೆ ಸೀರೆಯಿಂದ ನೇಣು ಹಾಕಿದ್ದು ಆಗಾ ಅವರ ಮನೆಯವರು ಬಿಡಿಸಿಕೊಂಡಿದ್ದರು ದಿನಾಂಕ 24-09-2011 ರಂದು ನಾವು ಮನೆಯಲ್ಲಿ ಇಲ್ಲದಾಗ ಮನೆಯಲ್ಲಿ ನನ್ನ ಅಳಿಯ ಮತ್ತು ನನ್ನ ಮಗಳು ಇಬ್ಬರೆ ಇದ್ದರು. ನಾನು ಐನಾಪೂರದಿಂದ ಮರಳಿ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು ಇದ್ದು, ನಾನು ಮನೆಯ ಒಳಗೆ ಹೊಗಿ ನೋಡಲು ತೊಟ್ಟಿಲಲ್ಲಿ ಮಗು ಮಲಗಿತ್ತು, ನನ್ನ ಮಗಳ ಕೋರಳಿಗೆ ಹಗ್ಗದಿಂದ ನೇಣು ಹಾಕಿಕೊಂಡಂತ್ತೆ ಕಂಡು ಬಂದಿದ್ದು ಒಳಗಡೆ ಹೊಗಿ ನೋಡಲು ಮನೆಯ ಜಂತ್ತಿಗೆ ಹಗ್ಗ ಕಟ್ಟಿದ್ದು ಹಗ್ಗದ ಇನ್ನೊಂದು ತುದಿ ನನ್ನ ಮಗಳ ಕೊರಳಿಗೆ ಸೂತ್ತಿದ್ದು ನನ್ನ ಮಗಳ ಎರಡು ಮೊಣಕಾಲುಗಳು ನೇಲಕ್ಕೆ ಹತ್ತಿದ್ದು, ಮುಖಾ ಬೋರಲಾಗಿ ಬಿದಿದ್ದು ನನ್ನ ಮಗಳನ್ನು ಅಳಿಯ ಸಂಜೀವ ಕುಮಾರ ಹೋಡೆ ಬಡೆ ಮಾಡಿ ಉರುಲು ಹಾಕಿ ಕೊಲೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದ್ಊರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

¸ÀÄ°UÉ ¥ÀæPÀgÀt

ಬ್ರಹ್ಮಪೂರ ಠಾಣೆ :ಶ್ರೀ.ಅಮರೇಶಗೌಡ ತಂದೆ ಸಡಕ ಶರಫಗೌಡ ಮಾಲಿಪಾಟೀಲ, , ಸಾ|| ಅರವಿ ತಾ|| ಮಾನ್ವಿ, ಜಿ|| ರಾಯಚೂರ ಇವರ ಗುಲಬರ್ಗಾದ ವೀರಶೈವ ಕಲ್ಯಾಣ ಮಂಟಪದಲ್ಲಿ ಫರ್ಟಿಲೈಜರ ಸಂಬಂಧ ಮಿಟಿಂಗ ಇದ್ದ ಪ್ರಯುಕ್ತ ದಿನಾಂಕ: 24-09-11 ರಂದು ನಾನು ಮತ್ತು ರಾಯಚೂರಿನ ಬಸವರಾಜ ಪಾಟೀಲ ಇಬ್ಬರೂ ಕೂಡಿ ನನ್ನ ಮಾರುತಿ ಝನ್ ಕಾರ ನಂ:ಕೆಎ 36 ಎಮ್ 2501 ನೇದ್ದರಲ್ಲಿ ಗುಲಬರ್ಗಾಕ್ಕೆ ಬಂದಿದ್ದೇವು. ವೀರಶೈವ ಕಲ್ಯಾಣ ಮಂಟಪದಲ್ಲಿ ಮಿಟಿಂಗ ಲೇಟ ಇದ್ದ ಕಾರಣ ನಾನು ಶರಣಬಸವೇಶ್ವರ ದೇವಸ್ಥಾನಕ್ಕೆ ಹೋಗಬೇಕೆಂದು ನನ್ನ ಕಾರ ತೆಗೆದುಕೊಂಡು ಜಗತ ಸರ್ಕಲ ಕಡೆಗೆ ಬಂದೇನು. ಶರಣಬಸವೇಶ್ವರ ದೇವಸ್ಥಾನಕ್ಕೆ ಹೋಗುವ ದಾರಿ ಗೊತ್ತಿರದ ಕಾರಣ ಜಗತ ಸರ್ಕಲದಲ್ಲಿ ಇಬ್ಬರು ವ್ಯಕ್ತಿಗಳು ನಿಂತಿದ್ದು, ಅವರನ್ನು ನಾನು ಶರಣಬಸವೇಶ್ವರ ದೇವಸ್ಥಾನದ ಕಡೆಗೆ ಹೋಗುವ ದಾರಿ ಯಾವ ಕಡೆ ಇದೆ ಎಂದು ಕೇಳಿದಾಗ ಅವರು ನನಗೆ ನಾವು ಕೂಡ ಆ ಕಡೆ ಹೊರಟಿದ್ದೇವೆ ನಿಮ್ಮ ಕಾರಿನಲ್ಲಿ ಬರುತ್ತೇವೆ ಅಂತಾ ಹೇಳಿದಾಗ ಅವರನ್ನು ಕೂಡಿಸಿಕೊಂಡೇನು. ಅವರು ನನಗೆ ದೇವಸ್ಥಾನದ ಕಡೆಗೆ ಕರೆದುಕೊಂಡು ಹೋಗದೆ ಎಸ್.ಟಿ.ಬಿ.ಟಿ ಕ್ರಾಸದಿಂದ ಸೇಡಂ ರೋಡ ಅಲ್ಲಿಂದ ಖರ್ಗೆ ಪೆಟ್ರೋಲ ಬಂಕದಿಂದ ರಿಂಗ ರೋಡ ಮುಖಾಂತರ ಹುಮನಾಬಾದ ರೋಡ ಕಡೆಗೆ ಕರೆದುಕೊಂಡು ಹೋಗಿ ರಿಂಗ ರೋಡದಿಂದ ಬಲಕ್ಕೆ ನನ್ನ ಕಾರನ್ನು ತೆಗೆದುಕೊಂಡು ಹೋಗುವಂತೆ ಹೇಳಿ ಮಿಲತ ನಗರದ ಹೊರಗಡೆ ಖುಲ್ಲಾ ಸ್ಥಳದಲ್ಲಿ ನನಗೆ ನಿನ್ನ ಹತ್ತಿರ ಏನು ಇದೆ ಕೊಡು ಅಂತಾ ಕೇಳಿದರು ಆಗ ನಾನು ನಿರಾಕರಿಸಿದ್ದೇನು. ಅವರು ನನಗೆ ಕಾರಿನಿಂದ ಕೆಳಗೆ ಇಳಿಸಿ ತಮ್ಮ ಹತ್ತಿರ ಇದ್ದ ಚಾಕುವಿನಿಂದ ಒಬ್ಬನು ನನ್ನ ಎದೆಯ ಮೇಲೆ ಚಾಕುವಿನಿಂದ ಹೊಡೆದು ರಕ್ತಗಾಯ ಪಡಿಸಿದನು. ನಿನ್ನ ಹತ್ತಿರ ಏನು ಇದೆ ಕೊಡು ಅಂತಾ ಕೇಳೀದನು. ಆಗ ನಾನು ಹೆಚ್ಚಿನ ಮಟ್ಟಿಗೆ ನಿರಾಕರಿಸಿದಾಗ ನನ್ನ ಹತ್ತಿರ ಇದ್ದ ನಗದು ಹಣ 15000/-, ಒಂದು 8 ಗ್ರಾಂ ಬಂಗಾರದ ಸರ ಅ||ಕಿ|| 15,000/- ಒಂದು 10 ಗ್ರಾಂ ಬಂಗಾರದ ಉಂಗುರ ಅ||ಕಿ|| 20,000/- ಒಂದು ನೋಕಿಯಾ ಮೊಬೈಲ ಅ||ಕಿ|| 3000/- ಒಟ್ಟು ಅ||ಕಿ|| 53,000/- ರೂಪಾಯಿ ಬಲೆಬಾಳುವ ವಸ್ತುಗಳನ್ನು ಕಸಿದುಕೊಂಡು ಮತ್ತೆ ನನಗೆ ಕಾರಿಯಲ್ಲಿ ಕೂಡಿಸಿ ಒಬ್ಬನು ನನಗೆ ಕೆಳಗೆ ಮಲಗಿಸಿ ಮೇಲೆ ಚಾಕು ಹಿಡಿದನು. ಇನ್ನೊಬ್ಬನು ನನ್ನ ಕಾರು ನಡೆಸುತ್ತಾ ಬಂದು ಮತ್ತೆ ರಿಂಗ ರೋಡ ಹತ್ತಿರ ಬಿಟ್ಟು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾತಿ ನಿಂದನೆ ಪ್ರಕರಣ :
ಗ್ರಾಮೀಣ ಠಾಣೆ :ದಿನಾಂಕ 24-09-11 ರಂದು ಶ್ರೀಸವರಾಜ ತಂದೆ ಹುಸನಪ್ಪ ಬೇಲೂರ ಸಾ:- ಕುಮಸಿ ತಾ:-ಜಿ:-ಗುಲಬರ್ಗಾ ಕುಮಸಿ ಗ್ರಾಮದ ಅಂಬಾರಾಯ ದರಶೆಟ್ಟಿ ಹೋಟಲಕ್ಕೆ ಚಹಾ ಕುಡಿಯಲು ಹೋಗಿ ಹೋಟೇಲದ ಹತ್ತಿರ ಇರುವ ಗುರನಾಥ ಬಡೀಗೇರ ಇವರು ಜನರು ಕೂಡಲಿಕ್ಕೆ ಕಟ್ಟಿಗೆ ಆಸನ ಇಟ್ಟಿದ್ದು ಅದರ ಮೇಲೆ ಕುಳಿತಾಗ ಆಗ ಮಲ್ಲಿಕಾರ್ಜುನ @ ಮಲ್ಲಪ್ಪ ತಂದೆ ಶರಣಪ್ಪ ನಾಟೀಕಾರ ಇತನು ನನ್ನ ಹತ್ತಿರ ಬಂದು ನನಗೆ ಅವಾಚ್ಯ ಶಬ್ದಗಳಿಂದ ಭೈದು ಜಾತಿನಿಂದನೆ ಮಾಡುತ್ತಿರುವಾಗ ಯಾಕ ಬೈಯ್ಯುತ್ತಿ ಚಹಾ ಕುಡಿದು ಹೋಗುತ್ತೇನೆ ಅಂತಾ ಅಂದಿದ್ದಕ್ಕೆ ಇಬ್ಬರಲ್ಲಿ ಬಾಯಿ ತಕರಾರು ಮಲ್ಲಿಕಾರ್ಜುನನ ಮನೆಯಿಂದ ಅವನ ತಮ್ಮಂದಿರರಾದ ಶಿವಪ್ಪ ಮತ್ತು ಸಂತೋಷ ಇವರು ಬಂದವರೆ ಇಬ್ಬರು ನನ್ನೊಂದಗೆ ತೆಕ್ಕಿ ಕುಸ್ತಿಗೆ ಬಿದ್ದು ಇಬ್ಬರು ಎತ್ತಿ ಒಗೆದಿದ್ದರಿಂದ ತಲೆಗೆ ರಕ್ತಗಾವಾಗಿದ್ದು ಮತ್ತು ಚಾಕುವಿನಿಂದ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :
ದಿನಾಂಕ: 24-9-2011 ರಂದು ನಗರದ ಆರ್.ಪಿ.ಸರ್ಕಲ್ ದಿಂದ ಎಸ್.ವಿ.ಪಿ.ಸರ್ಕಲ್ ರೋಡಿನಲ್ಲಿ ಬರುವ ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೊ ಹತ್ತಿರ ರೋಡಿನ ಮೇಲೆ ಒಂದು ಅಟೊರೀಕ್ಷಾ ನಂ:ಕೆಎ 32 835 ನೆದ್ದರ ಚಾಲಕ ಎಸ್.ವಿ.ಪಿ.ಸರ್ಕಲ್ ಕಡೆಯಿಂದ ಅತಿವೇಗವಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆರ್.ಪಿ.ಸರ್ಕಲ್ ಕಡೆಯಿಂದ ಟಿ.ವಿ.ಎಸ್.ಎಕ್ಸ ಎಲ್.ಮೊ/ಸೈಕಲ್ ನಂ:ಕೆಎ 32 ಕೆ 125 ನೆದ್ದರ ಮೇಲೆ ಕುಳಿತು ಹೋಗುತ್ತಿದ್ದ ಶ್ರೀ ಮತಿ ರುಕ್ಸಾನಾ ಬೇಗಂ ಗಂಡ ಮಹ್ಮದ ಇಕ್ಬಾಲ್ ಅಹ್ಮದ ಸಾ: ಜಿಲಾನಾ ಬಾದ ಎಮ್.ಎಸ್.ಕೆ.ಮಿಲ್ ಗುಲಬರ್ಗಾ ಮತ್ತು ಆಕೆಯ ಗಂಡ ಇಕ್ಬಾಲ ಅಹ್ಮದ ಇವರಿಗೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಸಾದಾ & ಭಾರಿಗಾಯಗೊಳಿಸಿ ತನ್ನ ಅಟೋರೀಕ್ಷಾ ಸಮೇತ ಓಡಿ.ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ
:ಶ್ರೀ
ತಿಪ್ಪಣ್ಣ
ತಂದೆ ತುಕಾರಾಮ ಟೋಪೆ ಸಾ|| ಸವಳೇಶ್ವರ
ತಾ|| ಆಳಂದ
ಹಾವ:

ಡಾಮಿನೇಟ ದಾಭಾ ಹತ್ತಿರ ಕುಸನೂರ
ಕ್ರಾಸ್ ಶಹಬಾದ
ರೋಡ ಗುಲಬರ್ಗಾ
ರವರು ಈಶ್ವರಪ್ಪ ಇತನು ಫೀರ್ಯಾದಿ ಮನೆಯ ಹತ್ತಿರ

ಡಾಸಕ್ಕೆ ಹೋಗುತ್ತಿದ್ದಾಗ
ಮನೆಯ ಹತ್ತಿರ
ಸಂಡಾಸ ಕೂಡಬೇಡಾ ಹೆಣ್ಣು ಮಕ್ಕಳು ಇರುತ್ತಾರೆ ಅಂತಾ ಅಂದಿದ್ದಕ್ಕೆ ಇಬ್ಬರ
ಮಧ್ಯೆ
ಬಾಯಿ ಮಾತಿನ ಜಗಳವಾಗಿದ್ದು ನಂತರ 11-.30 ಗಂಟೆ ಸುಮಾರಿಗೆ ಶಹಬಾರ
ರೋಡಿಗೆ ಇರುವ ಜಗನ್ನಾಥ ಹೋಟೆಲ ಹತ್ತಿರ ನಿಂತಾಗ ಅಲ್ಲೆ ಡೊಮಿನೇಟ ದಾಭಾ ಹತ್ತಿರ ನಿಂತಿದ್ದ
ಈಶ್ವರಪ್ಪ ಮತ್ತು ಗಿರೀಶ ಇಬ್ಬರು ನನಗೆ ಅವಾಚ್ಯಶಬ್ದಗಳಿಂದ ಬೈದು ಇಲ್ಲಿ ಬಾ ಅಂತಾ ಕರೆದು ಈಶ್ವರಪ್ಪ ಇತನು ಪಂಚದಿಂದ ನನ್ನ
ಎಡಗಣ್ಣಿನ ಮೇಲೆ ಹೋಡದು ರಕ್ತಗಾಯ ಮಾಡಿದನು ಮತ್ತು ಗಿರೀಶ ಇವನು ಅಲಲ್ಲೆ ಬಿದ್ದಿದ್ದ ಕಲ್ಲನ್ನು
ತೆಗೆದುಕೊಂಡು ನನ್ನ ಬೆನ್ನಿಗೆ ಹೋಡೆದು ಗುಪ್ತಗಾಯ ಮಾಡಿದನು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ಕರಣ ದಾಖಲಾಗಿದೆ.

24 September 2011

Gulbarga District Reported Crimes

ಸುಲಿಗೆ ಪ್ರಕರಣ :

ಜೇವರ್ಗಿ ಠಾಣೆ :ಶ್ರೀ ಸಿದ್ದಣ್ಣ ತಂದೆ ಬಸಪ್ಪ ಫರತಬಾದ ಸಾ: ಚನ್ನೂರ ದಿನಾಂಕ: 23/09/2011 ರಂದು ರವರು ತನ್ನ ಮೋಟಾರ ಸೈಕಲ ನಂಬರ ಕೆ.ಎ. 32 ಎಕ್ಸ 8476 ನೇದ್ದರ ಮೇಲೆ ತಮ್ಮೂರಿನಿಂದ ಜೇವರ್ಗಿ ಪಟ್ಟಣದ ಬಿ.ಎನ್. ಪಾಟೀಲ ಇವರ ದಾಲಮೀಲ್ಲಿಗೆ ಬಂದು ನಾನಾಗೌಡರ ಸಂಗಡ ಮಾತಾನಾಡಿ ಪು:ನ ತಮ್ಮೂರಾದ ಚನ್ನೂರಕ್ಕೆ ಸದರಿ ಮೋಟಾರ ಸೈಕಲ ಮೇಲೆ ಹೋಗುತ್ತಿದ್ದಾಗ ರಾತ್ರಿ 8-30 ಗಂಟೆಯ ಸುಮಾರಿಗೆ ಗುಲಾಮ ಸೇಟ ಇವರ ಹೋಲದ ಹತ್ತಿರ ರೋಡಿನಲ್ಲಿ ಎದುರುಗಡೆಯಿಂದ ಇಬ್ಬರೂ ಮನುಷ್ಯರು ತನ್ನ ಮೋಟಾರ ಸೈಕಲಕ್ಕೆ ಬಡಿಗೆಯಿಂದ ಅಡ್ಡಗಟ್ಟಿ ನಿಲ್ಲಿಸಿ ಬಡಿಗೆಯಿಂದ ಹೊಡೆದು ಅಲ್ಲೆ ಪಕ್ಕದ ಹೊಲದಲ್ಲಿ ಕರೆದುಕೊಂಡು ಹೋಗಿ ಹತ್ತಿರ ಇದ್ದ ನಗದು ಹಣ 6000 ರೂಪಾಯಿ ಮತ್ತು ಒಂದು ನೋಕಿಯಾ ಕಂಪನಿಯ ಮೊಬೈಲ, ಹಾಗೂ ಪಿರ್ಯಾದಿಯ ಮೋಟಾರ ಸೈಕಲ ಹೀಗೆ ಒಟ್ಟು 42000 ರೂ ಜಬರದಸ್ತಿಯಿಂದ ಕಸಿದುಕೊಂಡು ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣಗಳು :

ಮಾದನ ಹಿಪ್ಪರಗಾ ಠಾಣೆ :ಶ್ರೀ. ಬಸವರಾಜ ತಂದೆ ಲಕ್ಷ್ಮಣ ಪಾಟೀಲ ಸಾ:ನಿಂಗದಳ್ಳಿ ದಿನಾಂಕ 23-09-2011 ರಂದು ರಾತ್ರಿ 8: ಗಂಟೆ ಸುಮಾರಿಗೆ 1.ರಾಜಶೇಖರ ತಂದೆ ಕಲ್ಯಾಣಿ ಪಾಟೀಲ 2.ಶ್ರೀಶೈಲ ತಂದೆ ಕಲ್ಯಾಣಿ ಪಾಟೀಲ 3.ಬಸವರಾಜ ತಂದೆ ಕಲ್ಯಾಣಿ ಪಾಟೀಲ 4.ಕಲ್ಯಾಣಿ ತಂದೆ ತೇಜಪ್ಪ ಪಾಟೀಲ ಸಾ: ಎಲ್ಲರೂ ನಿಂಗದಳ್ಳಿ ಕುಡಿಕೊಂಡು ಮನೆಗೆ ಬಂದು ಪಿತ್ರಾರ್ಜಿತ ಆಸ್ತಿಯ ವಿಷಯದ ಸಂಬಂಧದ ವೈಮನಸ್ಸಿನಿಂದ ಜಗಳ ತಗೆದು ಅವ್ಯಾಚ್ಯೆವಾಗಿ ಬೈದು ಹೊಡೆ ಬಡೆ ಮಾಡಿ ಜೀವ ಭಯದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾದನ ಹಿಪ್ಪರಗಾ ಠಾಣೆ :ಶ್ರೀ. ಬಸವರಾಜ ತಂದೆ ಕಲ್ಯಾಣಿ ಪಾಟೀಲ ಸಾ: ನಿಂಗದಳ್ಳಿ ದಿನಾಂಕ 23-09-2011 ರಂದು ರಾತ್ರಿ 8 ಗಂಟೆ ಸುಮಾರಿಗೆ ಮಲ್ಲೇಶಪ್ಪ ಪಾಟೀಲ ರವರ ಮನೆಗೆ ಹಾಲು ಕೊಟ್ಟು ಬರುವಾಗ 1.ಬಸವರಾಜ ತಂದೆ ಲಕ್ಷ್ಮಣ ಪಾಟೀಲ 2.ಸಿದ್ರಾಮ ತಂದೆ ಲಕ್ಷ್ಮಣ ಪಾಟೀಲ 3.ಶಂಕರ ತಂದೆ ಸಿದ್ರಾಮ ಪಾಟೀಲ 4.ಸೋಮನಾಥ ತಂದೆ ಬಸವರಾಜ ಪಾಟೀಲ ಸಾ: ಎಲ್ಲರೂ ನಿಂಗದಳ್ಳಿ ರವರು ಕುಡಿಕೊಂಡು ತನ್ನನ್ನು ನೋಡಿ ಪಿತ್ರಾರ್ಜಿತ ಆಸ್ತಿಯ ವಿಷಯದ ಸಂಬಂಧದ ವೈಮನಸ್ಸಿನಿಂದ ಅವಾಚ್ಯೆ ಶಬ್ದ ಬೈಯುತ್ತಾ ತನ್ನ ಕೈಯಲ್ಲಿದ್ದ ಕಲ್ಲಿನಿಂದ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿ ಮತ್ತು ಪಿರ್ಯಾದಿಯ ಅಣ್ಣತಂಮಂದಿರಿಗೂ ಬಿಡಿಸಲು ಬಂದಾಗ ಅವರಿಗೂ ಸಹ ಕೈಯಿಂದ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆದು ರಕ್ತಗಾಯ ಪಡಿಸಿ ಜೀವ ಭಯದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Gulbarga District Reported Crimes

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ :ಕುಮಾರಿ ದೀಪಾ ತಂದೆ ಅಶೋಕ ಸಿಂಧೇ ವ: 17 ವರ್ಷ ಸಾ: ಶರಣಸಿರಸಗಿ ಮಡ್ಡಿ ತಾ: ಜಿ: ಗುಲಬರ್ಗಾ ಇವಳು 1 ವರ್ಷದಿಂದ ನಮ್ಮೂರ ಶಿವಾನಂದ ಸೀತನೂರ ಇವರ ಹೊಲಕ್ಕೆ ಕೂಲಿಕೆಲಸಕ್ಕೆ ಹೋಗುತ್ತಿದ್ದು. ಸದರಿ ಹೊಲದ ಮಾಲಿಕನಾದ ಶಿವಾನಂದ ಇವನೊಂದಿಗೆ ಕೂಲಿಕೆಲಸಕ್ಕೆ ದಿನ ನಿತ್ಯ ಹೋಗುತ್ತಿದ್ದಾಗ ಅವರ ಹೊಲದ ಹಳ್ಳದ ಹತ್ತಿರ ಹೋಗು ತ್ತಿದ್ದಾಗ ಆರೋಪಿತನಾದ ಶಿವಾನಂದ ಇತನು ಪುಸಲಾಯಿಸಿ ನನಗೆ ದಿನಾಂಕ 24-12-10 ರಂದು ಜಬರದಸ್ತಿಯಿಂದ ಸಂಬೋಗ ಮಾಡಿದ್ದು ಅಲ್ಲದೆ ಹೀಗೆ ಸುಮಾರು 9 ತಿಂಗಳಿಂದ ನನ್ನೊಂದಿಗೆ ಜಬರಿ ಸಂಬೋಗ ಮಾಡುತ್ತಾ ಬಂದಿರುತ್ತಾನೆ ಹಾಗೂ 2011 ನೇ ಸಾಲಿನ ಮಾರ್ಚ ತಿಂಗಳಲ್ಲಿ ಗರ್ಭೀಣಿ ಆದಾಗ ಆ ವಿಷಯ ಆರೋಪಿತನಿಗೆ ತಿಳಿಸಿ ಮದುವೆ ಯಾಗಲು ಹೇಳಿದಾಗ ಅವನು ಮದುವೆಯಾಗುತ್ತೇನೆಂದು ಹೇಳುತ್ತಾ ದಿನಮುಂದೊಡುತ್ತಾ ಬಂದಿದ್ದು ಇರುತ್ತದೆ ಈ ವಿಷಯವನ್ನು ತನ್ನ ತಂದೆ ತಾಯಿಗೆ ಹಾಗೂ ಬೇರೆಯವರಿಗೆ ತಿಳಿಸಿರುವುದಿಲ್ಲ ದಿ: 20-9-11 ರಂದು 11 ಎಎಮಕ್ಕೆ ಗುಲಬರ್ಗಾಕ್ಕೆ ತಂದು ಬಸ್ಸ ಸ್ಟ್ಯಾಂಡ್‌ ಹತ್ತಿರ ಒಂದು ಗುಳಿಗೆ ಕೊಟ್ಟು ಬೇಹುಷ ಮಾಡಿ ನನಗೆ ಅಭಾರಷನ್ ಮಾಡಿಸಿದ್ದು ನಂತರ ಆರೋಪಿತನು ನನ್ನ ತಾಯಿಗೆ ಕರೆಯಿಸಿ ಅವರೊಂದಿಗೆ ಮನೆಗೆ ಕಳುಹಿಸಿದ್ದು ಇರುತ್ತದೆ ಗ್ರಾಮದ ಸಮಾಜದ ಸಮ್ಮುಖದಲ್ಲಿ ಪಿರ್ಯಾದಿಗೆ ಮದುವೆ ಮಾಡಿಕೊಳ್ಳುವಂತೆ ಕೇಳಲು ಹೋದಾಗ ಆರೋಪಿತನ ತಂದೆ ತಾಯಿ ಇವರು ಹೊಲೆಯ ಜಾತಿಗೆ ಸೇರಿದ ಹೆಣ್ಣಿಗೆ ತಮ್ಮ ಮನೆಯ ಸೋಸೆ ಮಾಡಿಕೊಳ್ಳುವುದಿಲ್ಲ ಅಂತಾ ಜಾತಿ ನಿಂದನೆ ಮಾಡಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಪಘಾತ ಪ್ರಕರಣಗಳು :

ಕಮಲಾಪೂರ ಠಾಣೆ :ಶ್ರೀ. ಅಜೀಜಸಾಬ ತಂದೆ ಶಮಶೋದ್ದಿನ ನದಾಫ ಸಾಃಕಮಲಾಪೂರ ತಾಃಜಿಃ ಗುಲಬರ್ಗಾ ನನ್ನ ಮಗನಾದ ಮಹ್ಮದ್ ನಿಜಾಮೋದ್ದೀನ್ ಈತನು ಸುಮಾರು ದಿವಸಗಳಿಂದ ಮಾನಸಿಕ ರೋಗಿಯಂತೆ ಹುಚ್ಚನಂತೆ ವರ್ತಿಸುತ್ತಾ ಯಾವುದೇ ಕೆಲಸ ಮಾಡದೇ ಮನಃಬಂದ ಕಡೆ ತಿರುಗಾಡುತ್ತಿದ್ದು. ಹುಚ್ಚತನದಿಂದ ವರ್ತನೆ ಮಾಡಿಕೊಂಡು ಮನೆಗೆ ಬರದೇ ಊರಲ್ಲಿ ತಿರುಗಾಡುತ್ತಿರುತ್ತಾನೆ. ಆತನಿಗೆ ಎಷ್ಟು ಸಾರಿ ವೈದ್ಯಕೀಯ ಉಪಚಾರ ಕೊಡಿಸಿದರು ಯಾವುದೇ ಫಲಕಾರಿಯಾಗಿರುವುದಿಲ್ಲಾ. ಹೀಗಿದ್ದು. ದಿನಾಂಕ 23-09-2011 ರಂದು ಬೆಳಿಗ್ಗೆ ನಾನು, ನನ್ನ ಹೆಂಡತಿ ಮುಮತಾಜ ಬೇಗಂ ಇಬ್ಬರೂ ಕೂಡಿಕೊಂಡು ಮಗ ಮಹ್ಮದ್ ನಿಜಾಮೋದ್ದೀನ್ ಈತನಿಗೆ ಊಟ ಮಾಡಿಸಿ, ನಂತರ ನನಗೆ ಕೆಲಸವಿದ್ದ ಪ್ರಯುಕ್ತ ಗುಲಬರ್ಗಾಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ ಮರಳಿ ಮನೆಗೆ ಬಂದಾಗ ಗುಲಬರ್ಗಾ-ಹುಮನಾಬಾದ ರಾಷ್ಟ್ರೀಯ ಹೆದ್ದಾರಿ 218 ನೇದ್ದರ ರಸ್ತೆಯ ಕಮಲಾಪೂರ ಸೀಮಾಂತರದ ಹನಿಫಸಾಬ ಓಕಳಿ ರವರ ಹೊಲದ ಹತ್ತಿರ ಇರುವ ಮುಖ್ಯ ರಸ್ತೆಯ ಹತ್ತಿರ ಯಾವುದೋ ಒಬ್ಬ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗ ಮಹ್ಮದ್ ನಿಜಾಮೋದ್ದೀನ್ ಈತನೇ ಅಪಘಾತ ಪಡಿಸಿದ್ದರಿಂದ ತೆಲೆಗೆ, ಮುಖಕ್ಕೆ ಭಾರಿ ರಕ್ತಗಾಯಗಳಾಗಿ ಆತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ :ಶ್ರೀಮತಿ ಜಯಶ್ರೀ ಗಂಡ ಮಹಾಂತಗೌಡ ಪೊಲೀಸ್ ಪಾಟೀಲ್ ಸಾ:ಮನೆ ನಂ.ಎಲ್.ಐ.ಜಿ.-7 ಹೌಸಿಂಗ ಬೋರ್ಡ ಕಾಲೂನಿ ಹೈಕೊರ್ಟ ಎದರುಗಡೆ ರವರು ದಿನಾಂಕ 22-08-11 ರಂದು ರಾತ್ರಿ ತಮ್ಮ ತಾಯಿ ಲಕ್ಷ್ಮೀಬಾಯಿ ಇಬ್ಬರು ಕೂಡಿಕೊಂಡು ಹೈಕೋರ್ಟ ಎದರುಗಡೆ ರಿಂಗರೋಡ ಪಕ್ಕದ ಅಕ್ಕಮಾಹಾದೇವಿ ಕಾಲೂನಿ ಹೌಸಿಂಗ ಬೋರ್ಡ ಕ್ರಾಸ ಸಮೀಪ ಬ್ರಜ್ ಹತ್ತಿರ ವಾಕಿಂಗ ಮಾಡುತ್ತಾ ಹೋಗುತ್ತಿರುವಾಗ ಅದೇ ವೇಳೆಗೆ ನಮ್ಮ ಹಿಂದಿನಿಂದ ಮೋಟಾರ ಸೈಕಲ್ ನಂಬರ ಕೆಎ 32 ಅರ್-6844 ನೇದ್ದರ ಸವಾರ ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ನನ್ನ ತಾಯಿಗೆ ಡಿಕ್ಕಿ ಹೋಡೆದಿದ್ದು. ಡಿಕ್ಕಿ ಹೊಡೆದಿದ್ದರಿಂದ ಗಾಯಾಳು ಲಕ್ಷ್ಮೀಬಾಯಿಗೆ ಟೊಂಕಕ್ಕೆ ಗುಪ್ತ ಪೆಟ್ಟಾಗಿರುತ್ತದೆ. ಎಡಗಣ್ಣಿನ ಹತ್ತಿರ ಮೇಲಕಿಗೆ ರಕ್ತಗಾಯ ವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣಗಳು :

ಕಮಲಾಪೂರ ಠಾಣೆ :ಶ್ರೀ ಗೋಪಾಲ ತಂದೆ ಶಂಕರ ಚವ್ಹಾಣ ಸಾಃ ಸರಫೋಸಕಿಣ್ಣಿ ತಾಂಡಾ ತಾ;ಜಿ; ಗುಲಬರ್ಗಾ ದಿನಾಂಕ: 22-09-2011 ರಂದು ನಾನು ಮನೆಯಲ್ಲಿದ್ದಾಗ ನನ್ನ ಅಣ್ಣತಮ್ಮಕೀಯರಾದ ಲಕ್ಷ್ಮಣ ಮತ್ತು ಆತನ ಸಂಬಂಧಿಕನಾದ ರಮೇಶ ಇಬ್ಬರು ಕೂಡಿಕೊಂಡು ಬಂದು ನಮ್ಮ ಹಿರಿಯರ ಆಸ್ತಿಯಲ್ಲಿ ಸರಿಯಾಗಿ ಹಂಚಿಕೆ ಮಾಡಿರುವುದಿಲ್ಲಾ ಮತ್ತು ನಿನ್ನ ಮಗ ಗುರುನಾಥ ಈತನು ನಮಗೆ ಗುತ್ತೇದಾರಿಕೆ ಕೆಲಸದಿಂದ ಬಿಡಿಸಿರುತ್ತಾನೆ. ತಾಂಡಾದಲ್ಲಿ ನಿಮಗೆ ಬಹಳ ಸೊಕ್ಕು ಬಂದಿದೆ. ಅಂತಾ ಅವಾಚ್ಯವಾಗಿ ಬೈದು ತಕರಾರು ಮಾಡಿ ನಮ್ಮ ತಾಂಡಾದ ವಾಲು ಈತನ ಕಿರಾಣಿ ಅಂಗಡಿ ಹತ್ತಿರ ರೋಡಿನ ಮೇಲೆ ಹೋಗುತ್ತಿದ್ದಾಗ ಸಾಯಂಕಾಲ 1.ಲಕ್ಷ್ಮಣ ತಂದೆ ಖೀರು ಚವ್ಹಾಣ 2.ರಮೇಶ ತಂದೆ ಸೀನು ರಾಠೋಡ ಆತನ ಹೆಂಡತಿಯಾದ 3.ಮೀರಾಬಾಯಿ ಗಂಡ ರಮೇಶ ರಾಠೋಡ 4.ನಾಥೂರಾಮ ತಂದೆ ಲಕ್ಷ್ಮಣ 5.ದಿಲೀಪ ತಂದೆ ಕಿಶನ ರಾಠೋಡ 6.ಸಂತೋಷ ತಂದೆ ಕಾಶಿರಾಮ ರಾಠೋಡ 7.ರವಿ ತಂದೆ ಕಿಶನ ಜಾಧವ 8.ಅಶೋಕ ತಂದೆ ಶೇರು ಚವ್ಹಾಣ 9.ಮುರಳಿ ತಂದೆ ವಿಠಲ ಚಿನ್ನಾರಾಠೋಡ ಎಲ್ಲರೂ ಕೂಡಿ ಏಕೋದ್ದೇಶದಿಂದ ಗುಂಪು ಕಟ್ಟಿಕೊಂಡು ಬಂದುವರೇ ನನಗೆ, ನನ್ನ ಮಗ ಗುರುನಾಥ ಇಬ್ಬರಿಗೂ ತಡೆದು ನಿಲ್ಲಿಸಿ, ಏ ಭೊಸಡಿ ಮಕ್ಕಳೆ ಮುಖ ತಪ್ಪಿಸಿಕೊಂಡು ನೀವು ಎಲ್ಲಿಗೆ ಹೊರಟಿದ್ದಿರಿ ಅಂತಾ ಅವಾಚ್ಯವಾಗಿ ಬೈದು ಕಾಲಿನಿಂದ ಒದ್ದು, ಬಡಿಗೆಯಿಂದ ಹೊಡೆದು, ಕೈಯಿಂದ ನನ್ನ ಕುತ್ತಿಗೆ ಜೋರಾಗಿ ಒತ್ತಿ ಹಿಡಿದು ಗುಪ್ತಗಾಯ ಮತ್ತು ರಕ್ತಗಾಯ ಪಡಿಸಿದ್ದು ಅಲ್ಲದೇ ನನ್ನ ಮಗ ಗುರುನಾಥ ಮತ್ತು ಜಗಳ ಬಿಡಿಸಲು ಬಂದ ಮಾಣಿಕ ಇವರಿಗೂ ಸಹ ಬಡಿಗೆಯಿಂದ ಹೊಡೆಬಡೆ ಮಾಡಿ, ಗುಪ್ತಗಾಯ ಮತ್ತು ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಮಲಾಪೂರ ಠಾಣೆ :ಶ್ರೀಮತಿ ಮೀರಾಬಾಯಿ ಗಂಡ ರಮೇಶ ರಾಠೋಡ ಸಾಃ ಸರಫೋಸಕಿಣ್ಣಿ ತಾಂಡಾ ತಾ
;ಜಿ; ಗುಲಬರ್ಗಾ ರವರು ದಿನಾಂಕ: 22-09-2011 ರಂದು ಸಾಯಂಕಾಲ ತನ್ನ ದೊಡ್ಡಪ್ಪನ ಮಗನಾದ ಗುರುನಾಥ ತಂದೆ ಗೋಪಾಲ ಈತನು ತನ್ನ ತಂದೆಯೊಂದಿಗೆ ವಾಲು ಚವ್ಹಾಣ ಈತನ ಕಿರಾಣಿ ಅಂಗಡಿ ಮುಂದಿನ ರೋಡಿನ ಮೇಲೆ ಬರುತ್ತಿರುವದನ್ನು ನಾವು ನೋಡಿ, ನಾನು, ನನ್ನ ಗಂಡ ರಮೇಶ ಮತ್ತು ತಂದೆ ಲಕ್ಷ್ಮಣ ಎಲ್ಲರೂ ಕೂಡಿಕೊಂಡು ಹೋಗಿ ಗುರುನಾಥ ಈತನಿಗೆ ನಾವು ಮಾಡಿದ ಕೆಲಸದ ಲೆಕ್ಕ ಕೊಡು ಅಂದರೆ ಕೊಡುತ್ತಿಲ್ಲಾ ಯಾಕೆ ಸುಮ್ಮನೇ ಮುಂದಕ್ಕೆ ಹಾಕುತ್ತಿರುವಿ ಅಂತಾ ಕೇಳಿದಕ್ಕೆ ಗುರುನಾಥ ಈತನು ನನ್ನ ಗಂಡನಿಗೆ ಏ ಭೋಸಡಿ ಮಗನೇ ನಿನ್ನದು ಯಾವ ಲೆಕ್ಕ ಕೊಡುವುದಿದೆ. ನಾನು, ನಿನ್ನೊಂದಿಗೆ ಕೆಲಸ ಮಾಡುವದನ್ನು ಬಿಟ್ಟು ಒಂದ ವರ್ಷ ವಾಗಿದೆ. ಯಾವುದೇ ಲೆಕ್ಕ ಕೊಡುವುದು ಬಾಕಿ ಇರುವುದಿಲ್ಲಾ. ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ನನ್ನ ತಂದೆಯು ಹೀಗೆ ಬೈಯುವುದು ಸರಿ ಅಲ್ಲಾ ಸುಮ್ಮನೇ ಲೆಕ್ಕ ಮಾಡಿ ಕೊಡು ಯಾಕೇ ತಕರಾರು ಮಾಡುತ್ತಿದ್ದಿ ಅಂತಾ ಕೇಳಿದಕ್ಕೆ ನಮ್ಮ ಬಾಯಿ ಮಾತಿನ ಸಪ್ಪಳ ಕೇಳಿ, ಗುರುನಾಥ ಈತನ ಅಣ್ಣನಾದ 2. ಭೀಮಶೆಟ್ಟಿ 3.ಗಿನ್ನಾಬಾಯಿ ಗಂಡ ಭೀಮಶೆಟ್ಟಿ 4. ಕವಿತಾಬಾಯಿ ಗಂಡ ಗುರುನಾಥ 5.ಸೀತಾಬಾಯಿ ಗಂಡ ಗೋಪಾಲ ಚವ್ಹಾಣ ಮತ್ತು 6.ಗುರುನಾಥ ಕಲ್ಲೂರ ತಾಂಡಾ ತಾಃಹುಮನಾಬಾದ ಇವರೆಲ್ಲರೂ ಗುಂಪು ಕಟ್ಟಿಕೊಂಡು ಬಂದು ನನ್ನ ಗಂಡನಿಗೆ ವಿನಾಃಕಾರಣ ಜಗಳ ತೆಗೆದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ವವಿದ್ಯಾಲಯ ಠಾಣೆ :ಶ್ರೀ ಶಿವಯೋಗಿ ತಂದೆ ಶರಣಪ್ಪಾ ಗಚ್ಚಿನಮನಿ ಸಾ|| ನಾಗನಹಳ್ಳಿ ಇವರು ದಿನಾಂಕ 23-09-2011 ರಂದು ಬೇಳಿಗ್ಗೆ ಹೊಲಕ್ಕೆ ಹೋಗಬೇಕೆಂದು ನಮ್ಮದೊಂದು ಜರ್ಸಿ ಆಕಳು ಹಿಡಿದುಕೊಂಡು ನಾಗನಹಳ್ಳಿ ರಿಂಗ್ ರೋಡ ಕ್ರಾಸ್ ಕಡೆಗೆ ಹೊರಟಾಗ ನಾಲಿ ನೀರು ಹೋಗುವ ಒಂದು ಬ್ರಿಜ್ ಹತ್ತಿರ ನಾನು ಹೊರಟಾಗ ನಮ್ಮೂರ ಪ್ರಕಾಶ ತಂದೆ ಶಂಕರಲಿಂಗ ಗೂಳನೂರ ಇತನು ತನ್ನ ಎಮ್ಮೆಯನ್ನು ರೋಡ ಬದಿಗೆ ಮೇಯಿಸುತ್ತಾ ಇದ್ದಾಗ ಆತನ ಸಂಗಡ ನಾನು ಮಾತಾಡುತ್ತಾ ರೋಡ ಮೇಲೆ ನಿಂತಾಗ ಧರ್ಮಪಾಲ ತಂದೆ ನಾನು ರಾಠೋಡ ಸಾ|| ಖಣದಾಳ ತಾ|| ಗುಲಬರ್ಗಾ ನಾಗನಹಳ್ಳಿ ಪಿ.ಟಿ.ಸಿ ಕಡೆಯಿಂದ ತನ್ನ ಸೈಕಲ್ ಮೋಟಾರ ಮೇಲೆ ಬಂದವನೇ ನನಗೆ ಅವಾಚ್ಯ ಶಬ್ದಗಳಿಂದ ಬೈದು ರೋಡ ಬಿಟ್ಟು ಸೈಡಿಗೆ ನಿಂತು ಮಾತಾಡಲಿಕ್ಕೆ ಬರುವುದಿಲ್ಲಾ ಅಂತಾ ಬೈದನು ಆಗ ನಾನು ಯಾಕೇ ಅವಾಚ್ಯ ಶಬ್ದ ಬೈದು ಹೇಳುತ್ತೀ ಅಂತಾ ಕೇಳಿದ್ದಕ್ಕೆ ಅಲ್ಲೆ ಬಿದ್ದಿದ್ದ ಬಡಿಗೆಯಿಂದ ನನ್ನ ತಲೆಯ ಎಡಬಾಗಕ್ಕೆ ಹೊಡೆದು ರಕ್ತಗಾಯ ಮಾಡಿದನು. ನಂತರ ನನ್ನ ಕೈಯಲ್ಲಿದ್ದ ಕುಡಗೋಲು ಕಸಿದುಕೊಂಡು ನನ್ನ ಎಡಗಲ್ಲಕ್ಕೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿತರ ಬಂಧನ :
ಚೌಕ ಠಾಣೆ :
ಚೌಕ ಪೊಲೀಸ್ ಠಾಣೆಯ ಗುನ್ನೆ ನಂ. 196/2011 ನೇದ್ದರಲ್ಲಿಯ ಆರೋಪಿತರಾದ 1. ನಾಗೇಶ @ ನಾಗಶಾಸ್ತ್ರಿ ತಂದೆ ಚಂದ್ರಶಾ ಕಲಶೇಟ್ಟಿ ಸಾಃ ಎಲೆನಾದಗಿ ಹಾಃವಃ ಕಬಾಡ ಗಲ್ಲಿ ಗುಲಬರ್ಗಾ 2.ವಿರೇಶ ತಂದೆ ಶರಣಪ್ಪ ಮೈಂದರಗಿ ಸಾಃ ಕಟಗರಪುರ ಶಹಾಬಜಾರ ಗುಲಬರ್ಗಾ 3.ಶರಣು @ ಶರಣಬಸಪ್ಪ ತಂದೆ ಆನಂದ ಪೂಜಾರಿ ಸಾಃ ಕನಕನಗರ ಬ್ರಹ್ಮಪೂರ ಗುಲಬರ್ಗಾ ರವರಿಗೆ ಮಾನ್ಯ ಎಸ್.ಪಿ ಸಾಹೇಬ ಗುಲಬರ್ಗಾ, ಅಪರ ಎಸ್.ಪಿ ಸಾಹೇಬ ಗುಲಬರ್ಗಾ, ಮಾನ್ಯ ಡಿ.ಎಸ್.ಪಿ ಸಾಹೇಬ "ಬಿ" ಉಪವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ವಿರೇಶ ಪಿ.ಐ ಚೌಕಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಚೌಕ ಠಾಣೆಯ ಸಿಬ್ಬಂದಿರವರು ಕೂಡಿಕೊಂಡು ದಿನಾಂಕ 23.09.2011 ರಂದು ಕಪನೂರ ಕ್ರಾಸ ಹತ್ತಿರ ಮತ್ತು ಉಮ್ಮರಗಾ ಕ್ರಾಸ ರಸ್ತೆಯಲ್ಲಿ ಮಿಂಚಿನ ಕಾರ್ಯಚರಣೆಯ ನಡೆಸಿ ಹಿಡಿದು ಆರೋಪಿತರನ್ನು ದಸ್ತಿಗಿರಿ ಮಾಡಿ ನ್ಯಾಯಾಂಗ ಬಂಧನ ಕುರಿತು ಕಳಿಸಿರುತ್ತಾರೆ.

ಕಳವು ಪ್ರಕರಣಗಳು :
ದೇವಲಗಾಣಗಾಪೂರ ಠಾಣೆ :ಶ್ರೀಮತಿ ಬಸಮ್ಮಾ ಗಂಡ ದತ್ತಪ್ಪ ಹೂಗಾರ ಸಾ|| ಅವರಳ್ಳಿ ರವರು ದಿನಾಂಕ 22-09-2011 ರಂದು ಬೆಳಿಗ್ಗೆ ಗಂಡ ದತ್ತಪ್ಪ ಹೂಗಾರ ಸಂಗಡ ಮನೆಯ ಕೀಲಿ ಹಾಕಿ ತಮ್ಮ ಹೊಲಕ್ಕೆ ಹೋಗಿದ್ದು. ಹೊಲದಲ್ಲಿ ಕೆಲಸ ಮುಗಿಸಿಕೊಂಡು ಸಾಯಂಕಾಲ 7-00 ಗಂಟೆಗೆ ಮನಗೆ ಬಂದು ಮನೆಯ ಕೀಲಿ ತೆರೆದು ನೋಡಲಾಗಿ ಒಳಗಡೆ ಕೋಣೆಯ ಬಾಗಿಲು ತೆರೆದಿದ್ದು ನಮಗೆ ಸಂಶಯ ಬಂದು ಒಳಗೆ ಹೋಗಿ ನೋಡಲು ಕಟ್ಟೆಗೆಯ ಪೆಟ್ಟಿಗೆಯಲ್ಲಿರುವ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು, ಪೆಟ್ಟಿಗೆಯಲ್ಲಿದ್ದ ಅಂದಾಜು ಕಿಮ್ಮತ್ತು 49,500/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಹಗಲು ಹೊತ್ತಿನಲ್ಲಿ ನಮ್ಮ ಮನೆಯ ಕೀಲಿ ತೆರೆದು ಪೆಟ್ಟಿಗೆಯ ಕೊಂಡಿ ಮುರಿದು ಬಂಗಾರದ ಒಡವೆಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಠಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಘವೇಂದ್ರ ನಗರ ಠಾಣೆ :ಶ್ರೀ ಹಣಮಂತ ತಂದೆ ಚಂದ್ರಶೇಖರ ಬಿರಾದಾರ ಇವರು ದಿನಾಂಕ 22-09-2011 ರಂದು ರಾತ್ರಿ ಹೊಸ ರಾಘವೇಂದ್ರ ಕಾಲೋನಿಯಲ್ಲಿರುವ ತನ್ನ ಮನೆಯ ಮುಂದೆ ನಿಲ್ಲಿಸಿದ ಟಿ.ವಿ.ಎಸ್. ಎಕ್ಸೆಲ್ ಸೂಪರ್ ಹ್ಯಾವಿ ಡ್ಯೂಟಿ ಮೊಟಾರ್ ಸೈಕಲ್ ನಂ ಕೆಎ-32/ಯು-6503 ಮೊಟಾರ್ ಸೈಕಲ್ಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಹಾಬಾದ ನಗರ ಠಾಣೆ :ದಿನಾಂಕ:22-09-2011 ರಂದು ಬೆಳಗ್ಗೆ 08.00 ಸುಮಾರಿಗೆ ಶ್ರೀ ರಾಜು ತಂದೆ ಮುಕುಂದ ಸಾ:ಶಿಬೀರ ಕಟ್ಟಾ ಶಹಾಬಾದ ತಾ:ಚಿತ್ತಾಪುರ ತಮ್ಮ ಮೋಟಾರ ಸೈಕಲ ಸಿಟಿ-100 ಬಜಾಜ ಕೆ.ವಿ.-32 ಕ್ಯೂ 8412 ಅ.ಕಿ.20000/-ನೇದ್ದು ಬಸವೇಶ್ವರ ಸರ್ಕಲದಲ್ಲಿ ನಿಲ್ಲಿಸಿದಾಗ ಕಳ್ಳತನ ಮಾಡಿಕೊಂಡು ಹೋಗಿದ್ದು ಸಂಶಯುಕ್ತ ರಾಜು ಜಾದವ ಎಂಬುವನು ಕಳ್ಳತನ ಮಾಡಿಕೊಂಡು ಹೋಗಿರಬಹುದೆಂದು ಸಂಶಯವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 September 2011

Gulbarga District Reported Crimes

ಅಪಘಾತ ಪ್ರಕರಣಗಳು :

ಗ್ರಾಮೀಣ ಠಾಣೆ :ದಿನಾಂಕ 22-09-11 ರಂದು ಮುಂಜಾನೆ ಶ್ರೀ ರಾಮು @ ರಾಮಚಂದ್ರ ತಂದೆ ಮರೆಪ್ಪ ಮಾದರ ಸಾ: ಇಟಗಾ (ಕೆ) ಗ್ರಾಮ ತಾ:ಜಿ: ಗುಲಬರ್ಗಾ ಮತ್ತು ತನ್ನ ಮಗ ಮಾಹಾಂತಪ್ಪ ಹಾಗೂ ಗ್ರಾಮದ ತಾರಾಬಾಯಿ ಗಂಡ ಬಾಬು ರಾಠೋಡ, ಮಲ್ಲಪ್ಪ ತಂದೆ ಕಲ್ಲಪ್ಪ ತಳವಾರ, ಅಂಬು ತಂದೆ ಮಲ್ಲಪ್ಪ ಪೂಜಾರಿ, ಶಿವಲಿಂಗಪ್ಪ ತಂದೆ ಶರಣಪ್ಪ ಶೇರಿಕಾರ ಹಾಗೂ ಇನ್ನೂ ಕೆಲವು ಜನರು ಕೂಡಿ ತಮ್ಮೂರನಿಂದ ತುಳಜಾಪೂರ ದೇವಿ ದರ್ಶನಕ್ಕೆ ಪಾದಯಾತ್ರೆ ಹೊರಟಿದ್ದು ಸಂಜೆ 7-30 ಗಂಟೆ ಸುಮಾರಿಗೆ ನಮ್ಮ ಹಿಂದುಗಡೆಯಿಂದ ಅಂದರೆ ಗುಲಬರ್ಗಾ ಕಡೆಯಿಂದ ಹಿರೋ ಹೊಂಡಾ ಸ್ಪೆಂಡರ ಕೆಎ 32 ಯು 7885 ಮೋಟಾರ ಸೈಕಲ ಸವಾರ ತನ್ನ ಹಿಂದೆ ಮತ್ತೊಬ್ಬನನ್ನು ಕೂಡಿಸಿಕೊಂಡು, ಮೋಟಾರ ಸೈಕಲನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಅಡ್ಡಾ ತಿಡ್ಡಿಯಾಗಿ ನಡೆಯಿಸಿಕೊಂಡು ಬಂದವನೇ ರೋಡ ಎಡ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಮಾಹಾಂತಪ್ಪ ಮತ್ತು ತಾರಾಬಾಯಿ ಇಬ್ಬರಿಗೂ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬಿದಿದ್ದು ಇರುತ್ತದೆ. ಮೋಟಾರ ಸೈಕಲ ಚಾಲಕ ವೇಗದಲ್ಲಿದ್ದರಿಂದ ಹಾಗೇ ಸ್ವಲ್ಪ ಮುಂದೆ ಹೋಗಿ ರೋಡಿನ ಎಡಭಾಗದ ತೆಗ್ಗಿನಲ್ಲಿ ಮೋಟಾರ ಸೈಕಲದೊಂದಿಗೆ ಬಿದ್ದರು. ಅದನ್ನು ನಾವು ನೋಡಿ ಓಡುತ್ತಾ ಹೋಗಿ ನೋಡಲಾಗಿ ನನ್ನ ಮಗನ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ :ದಿನಾಂಕ: 22-09-11 ರಂದು ಮುಂಜಾನೆ ಶ್ರೀ. ರಾಹುಲ ತಂದೆ ಸಂತೋಷ ಮಾಲಿಪಾಟೀಲ ಸಾ: ಶಿವಶಕ್ತಿ ನಗರ ಸುಲ್ತಾನಪೂರ ರೋಡ ತಾ: ಜಿ: ಗುಲಬರ್ಗಾ ಮತ್ತು ನನ್ನ ಚಿಕ್ಕಪ್ಪ ಇಬ್ಬರೂ ಕಮಲಾ ಪೂರಕ್ಕೆ ತಮ್ಮ ಮೋ ಸೈಕಲ ನಂ ಕೆಎ 32 ಎಕ್ಸ್ 4391 ನೇದ್ದರ ಮೇಲೆ ಹೊರಟಾಗ ಉಪಳಾಂವ ಗ್ರಾಮದ ಬ್ರೀಡ್ಜಿನ ಹತ್ತಿರ ಲೋಡ ಆಗಿ ನಿಂತ ಲಾರಿ ನಂ ಎಪಿ 36 ಟಿ-7475 ನೇದ್ದಕ್ಕೆ ಅತೀವೇಗ ಹಾಗೂ ಅಜಾಗರೂಕತೆಯಿಂದ ನಡೆಯಿಸಿಕೊಂಡು ಹೋಗಿ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಮೋಟಾರ ಸೈಕಲ ಲಾರಿಯಲ್ಲಿ ಸಿಕ್ಕಿಬಿದ್ದು ಇಬ್ಬರು ರಸ್ತೆಯ ಮೇಲೆ ಬಿದ್ದು ಗಾಯ ಹಾಗೂ ಬಾರಿಗಾಯ ಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    

ಗ್ರಾಮೀಣ ಠಾಣೆ :ದಿನಾಂಕ 22-09-2011 ರಂದು ಯುನಿವರಸಿಟಿಯಲ್ಲಿ ಕ್ಯಾಂಪಸನಲ್ಲಿ ಅಡಿಗೆ ಮಾಡುವುದು ಇರುವದರಿಂದ ಶ್ರೀ. ರಾಜಕುಮಾರ ತಂದೆ ಶರಣಪ್ಪ ಕಲಶೆಟ್ಟಿ ಸಾ: ಸಿದ್ರಾಮೇಶ್ವರ ನಗರ ಆಳಂದ ಚೆಕ್ಕ ಪೋಸ್ಟ ಗುಲಬರ್ಗಾ ತನ್ನ ಟಂ ಟಂ ನಂ ಕೆಎ 32 ಬಿ- 3283 ನೇದ್ದರಲ್ಲಿ ಅಡಿಗೆ ಮಾಡುವರರಾದ ಸರೂಬಾಯಿ ಜೇವರ್ಗಿ, ಪೀರಮ್ಮ ದುತ್ತರಗಾಂವ, ಮಾಯಮ್ಮ ಗಡಸಿ ಹಾಗು ನಮ್ಮ ಅಳಿಯನಾದ ಶ್ರೀಶೈಲ ಕೂಡಿಕೊಂಡು ಟಂಟಂದಲ್ಲಿ ಯುನಿವರಸಿಟಿಗೆ ಹೋಗಿ ಸಾಯಕಾಂಲದವರೆಗೆ ಅಡಿಗೆ ಮಾಡಿ ವಾಪಸ್ಸ ಮನೆಗೆ ಹೋಗಬೇಕೆಂದು ನನ್ನ ಟಂ ಟಂದಲ್ಲಿ ಬರುವಾಗ ಹುಮನಾಬಾದ ರಿಂಗ ರೋಡಮುಖಾಂತರ ಹೋಗುವಾಗ ಕಾಕಡೆ ಚೌಕ ಹತ್ತಿರ ರೋಡಿನ ಮೇಲೆ ಎಡಗಡೆಯಿಂದ ಹೋಗುವಾಗ ಆಗ ಎದುರಗಡೆಯಿಂದ ಒಂದು ಟಂ ಟಂ ಗೂಡ್ಸ ನಂ ಕೆಎ 32 ಎ.7659 ನೆದ್ದರ ಚಾಲಕನು ಅತೀವೇಗದಿಂದ ಅಲಕ್ಷತನದಿಂದ ಎದುರಿನಿಂದ ಬಂದವನೆ ನನ್ನ ಟಂ ಟಂ ನೇದ್ದಕ್ಕೆ ಹಾಯಿಸಿದ್ದರಿಂದ ಆಗ ನಾನು ಕೆಳಗೆ ಇಳಿದು ನೋಡಲು ನನ್ನ ಟಂ ಟಂ ಹಿಂದುಗಡೆ ಕುಳಿತ ವರಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆ ಮಾಡಿಕೊಳ್ಳುತ್ತೆನೆಂದು ನಂಬಿಸಿ ಅಪ್ರಾಪ್ತ ಬಾಕಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ :
ಚಿಂಚೋಳೀ ಠಾಣೆ :ಶ್ರೀ ತುಳಜಪ್ಪಾ ತಂದೆ ಹುಸನಪ್ಪಾ ನಾಗರಾಳ ಸಾ: ಚೆನ್ನೂರ ಇವರ ಮಗಳಾದ
ಶ್ರೀದೇವಿ ವ: 16 ವರ್ಷ ಇವಳು ಐನಾಪೂರ ಪ್ರೌಢ ಶಾಲೆಯಲ್ಲಿ 10ನೇ ತರಗತಿ ಅಭ್ಯಾಸ ಮಾಡುತ್ತಿರುತ್ತಾಳೆ, ನನ್ನ ಹಿರಿಯ ಮಗಳಾದ ಕಾವೇರಿ ಇವಳಿಗೆ ಹಲಚೇರಿ ಗ್ರಾಮದ ನಾಗಪ್ಪಾ ತಂದೆ ಶರಣಪ್ಪಾ ದೋಟಿಕೋಳ ಇತನ ಸಂಗಡ ಮದುವೆ ಮಾಡಿದ್ದು ಸದರಿಯವಳ ಮೈದುನ ವಿನೋದ ಇತನು ಆಗಾಗೆ ನಮ್ಮೂರಿಗೆ ಬಂದು ನನ್ನ ಮಗಳಾದ ಶ್ರೀದೇವಿ ಸಂಗಡ ಅತೀ ಸಲುಗೇಯಿಂದ ಇರುತ್ತಿದ್ದು. ದಿನಾಂಕ: 15.08.2011 ರಂದು ಬೆಳಿಗ್ಗೆ 08.00 ಗಂಟೆಗೆ ವಿನೋದನು ನನ್ನ ಮಗಳಿಗೆ ನಿನ್ನನ್ನು ಮಧುವೆ ಮಾಡಿಕೊಳ್ಳುತ್ತೆನೆ ಅಂತಾ ಪುಸುಲಾಯಿಸಿ ಅಪಹರಿಸಿಕೊಂಡು ಹೋಗಿ ಚಿಮ್ಮಾಯಿದಲಾಯಿ ಕ್ರಾಸ ಹತ್ತರ ತೋಗರಿ ಹೋಲದಲ್ಲಿ ಕರೆದುಕೊಂಡು ಹೋಗಿ ಜಬರಿ ಸಂಭೋಗ ಮಾಡಿ ನಂತರ ಬೆಂಗಳೂರಿಗೆ ಕರೆದುಕೊಂಡು ಹೋಗಿರುತ್ತಾನೆ ಇದಕ್ಕೆ ಸದರ ಘಟನೆಗೆ ವಿನೋದ ತಂದೆ ಶರಣಪ್ಪಾ ತಾಯಿ ಪದ್ಮಾವತಿ, ಅಣ್ಣ ಸುಭಾಸ ಇವರೆಲ್ಲರೂ ಕುಮ್ಮಕ ನೀಡಿರುತ್ತಾರೆ. ಅಂತಾ ನೀಡಿರುವ ದೂರು ಸಾರಾಂಶದ ಮೇಲಿಂದ ಪಿರ್ಯಾದಿ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 September 2011

Gulbarga District Reported Crimes

ಕೊಲೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ :ದಿನಾಂಕ 18-09-2011 ರಂದು ಸಾಯಂಕಾಲ ಶ್ರೀ ಮಹ್ಮದ ಗುಲಾಮ ತಂದೆ ಮೀರಾ ಪಟೇಲ್ ಸಾ;ಕೊಳ್ಳುರ ತಾ: ಜಿ: ಗುಲಬರ್ಗಾ ಹಾವ: ಟಿಪ್ಪು ಸುಲ್ತಾನ ಚೌಕ ಅಹ್ಮದ ನಗರ ಅಜಾದಪೂರ ರೋಡ ಗುಲಬರ್ಗಾ ಕೆಲಸದಿಂದ ಮನೆಗೆ ಬಂದಾಗ ಹೆಂಡತಿ ಅಫ್ರೀನಾ ಸುಲ್ತಾನ ಇವಳು ಈ ತಿಂಗಳ ಪಗಾರ ಹಣ ಕೊಡು ಅಂತಾ ಕೇಳಿದ್ದಕ್ಕೆ 2-3 ದಿವಸ ನಂತರ ಕೊಡುವದಾಗ ಹೇಳಿರುತ್ತಾರೆ ಅಂತಾ ಹೇಳಿದ್ದಕ್ಕೆ ನೀನು ಇದೆ ರೀತಿ ದಿನಾಲು ಸುಳ್ಳು ಹೇಳುತ್ತಾ ಬಂದಿರುತ್ತಿ ನಿನ್ನಿಂದ ನನಗೆ ಸಾಕಾಗಿ ಹೋಗಿದೆ ಅಂತಾ ಅಂದು ಮನೆಯಲ್ಲಿದ್ದ ಸೀಮೇಎಣ್ಣೆ ಡಬ್ಬ ತೆಗೆದುಕೊಂಡು ನನ್ನ ಮೈಮೇಲೆ ಚಲ್ಲಿ ಕಡ್ಡಿ ಕೊರೆದು ಬೆಂಕಿ ಹಚ್ಚಿದ್ದು ಇದರಿಂದಾಗಿ ಮೈಯೆಲ್ಲಾ ಸುಟ್ಟಗಾಯಗಳಾಗಿದ್ದು ಗುಲಬರ್ಗಾ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೆ ದಿನಾಂಕ 22-09-2011 ರಂದು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :
ಯಡ್ರಾಮಿ ಠಾಣೆ :ದಿನಾಂಕ 19-09-2011 ಮತ್ತು 20-09-2011 ರ ರಾತ್ರಿ ಯಾರೋ ಕಳ್ಳರು ದಿ ಉಗಾರ ಸುಗರ ವರ್ಕ್ಸ ಲಿಮಿಟೆಡ್ ಕಂಪನಿ ಮಳ್ಳಿ ನಾಗರಳ್ಳಿ ಕಾರ್ಖಾನೆಯ ಅಕೌಂಟ ಆಫಿಸಗೆ ಹಾಕಿದ ಕೀಲಿ ಕೋಡಿ ಮುರಿದು ಆಫೀಸ ಕಾರ್ಯ ನಿರ್ವಹಿಸಲು ಅಳವಡಿಸಿದ ಐದು ಗಣಕಯಂತ್ರಗಳ ಪೈಕಿ ಮೂರು ಗಣಕಯಂತ್ರಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅವುಗಳ ಅಂದಜ ಕಿಮ್ಮತ್ತು 21,000/- ಆಗಬಹುದು ಅಂತಾ ಶ್ರೀ ಸಾಗರ ತಂದೆ ಅವಿನಾಶ ಕುಲಕರ್ಣಿ ವ್ಯವಸ್ಥಾಪಕರು ದಿ ಉಗಾರ ಸುಗರ ವರ್ಕ್ಸ ಲಿಮಿಟೆಡ್ ಕಂಪನಿ ಮಳ್ಳಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ತವ್ಯೆಕ್ಕೆ ಅಡೆ ತಡೆ ಮಾಡಿದ ಪ್ರಕರಣ :

ವಿಶ್ವವಿದ್ಯಾಲಯ ಠಾಣೆ :ದಿನಾಂಕ 19-09-2011 ರಂದು ಪಿ,ಎಸ,ಐ ಎಂ.ಬಿ ನಗರ ರವರು ಸಿಬ್ಬಂದಿಯೊಂದಿಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆಯ ಗುನ್ನೆ ನಂ 60/11 ಕಲಂ 504, 323, 324, 353, 392 ಐಪಿಸಿ ನೇದ್ದರಲ್ಲಿ ಆರೋಪಿತರಾದ 1.ಜಹೀರಖಾನ ತಂದೆ ಬಶೀರ ಅಹ್ಮದ 2.ಜಮೀರಖಾನ ತಂದೆ ಬಶೀರ ಅಹ್ಮದ 3.ಜುಬೇರಖಾನ ತಂದೆ ಬಶೀರ ಅಹ್ಮದ 4.ಹಜಾರಾ ಗಂಡ ಬಶೀರ ಅಹ್ಮದ 5.ಅಂಜುಮನ ಗಂಡ ಜಮೀರಖಾನ 6.ನಾಜೀಯಾ ಗಂಡ ಜಹೀರಖಾನ 7.ಜಹೂರಖಾನ ತಂದೆ ಬಶೀರ ಅಹ್ಮದ ಸಾ: ಎಲ್ಲರೂ ಜುಂ ಜುಂ ಕಾಲನಿ ಗುಲಬರ್ಗಾ ಪತ್ತೆ ಮಾಡಿ ದಸ್ತಗಿರಿ ಮಾಡಲು ಸಿಬ್ಬಂದಿಯೊಂದಿಗೆ ಜುಂ ಜುಂ ಕಾಲೋನಿಯ ಡೆಕ್ಕನ ಕಾಲೇಜ ಹತ್ತಿರ ಹೋಗಿ ವಿಚಾರಿಸಲು ಸದರಿಯವರು ಹಾಗರಗಾ ರೋಡಿನ ಕಟ್ಟಿಗೆ ಅಡ್ಡಾದ ಹತ್ತಿರ ಇದ್ದ ಬಗ್ಗೆ ಮಾಹಿತಿ ಮೇರೆಗೆ ನಾವೆಲ್ಲರು ಹೋಗಿ ಸದರಿ ಮೂವರನ್ನು ಸುತ್ತುವರಿದಾಗ ಆರೋಪಿತ ಜಹೀರಖಾನ ಇತನು ಕೈಯಲ್ಲಿ ಚಾಕು ಹಿಡಿದುಕೊಂಡು ಬಂದು ಮೈನೆ ಚಾರ್ ಮರ್ಡರ ಕೇಸ ಮೇ ಹೂ ಪೊಲೀಸ ಲೋಗೂ ಕೊ ಬಿ ಮರ್ಡರ ಕರ್ತಾ ಹೂ ಅಂತಾ ಬೈಯ್ಯುತ್ತಿದ್ದು ಆಗ ನಾವು ಹಿಡಿಯಲು ಹೋದಾಗ ಅಲ್ಲಿ ಜಹೀರಖಾನನ ತಮ್ಮ ಹಾಗೂ ಮೂರು ಹೆಣ್ಣು ಮಕ್ಕಳು ಗುಂಪು ಕಟ್ಟಿಕೊಂಡು ತುಮ ಲೊಗೊ ಕೈಸೆ ಹಮಾರ ಆದಮಿಯೊಕೂ ಲೇಕೆ ಜಾತೆ ಹೈ ಹಮ ಬಿ ದೇಖತೆ ಹೂ ಅಂತಾ ಹೇಳಿ ತಡೆ ಹಿಡದದ್ದು ಆಗ ನಾವು ಬೆನ್ನ ಹತ್ತಿದಾಗ ಸದರಿಯವರು ನಮ್ಮನ್ನು ದಬ್ಬಿಕೊಟ್ಟು ತಗ್ಗಿನಲ್ಲಿ ಕಾಂಪೌಂಡ ದಾಟಿ ಓಡಿ ಹೋಗಿ ಬಿದ್ದು ಎದ್ದು ಅಲ್ಲಿಯೆ ನಿಲ್ಲಿಸಿದ ಟಾಟಾ ಸುಮೂ ನಂ ಕೆಎ 33 4122 ನೇದ್ದರಲ್ಲಿ ಕುಳಿತುಕೊಂಡು ಹೋಗುವಾಗ ನಾವು ಸರಕಾರ ಜೀಪನಿಂದ ಬೆನ್ನು ಹತ್ತಿ ಹಿಡಿದು ದಸ್ತಗಿರಿ ಮಾಡಿಕೊಂಡು ಮಾನ್ಯ ಸಿಪಿಐ ಎಂಬಿ ನಗರ ವೃತ್ತ ರವರ ಮುಂದೆ ಹಾಜರುಪಡಿಸಿದ್ದು ನಾವು ದಸ್ತಗಿರಿ ಮಾಡುವ ಕಾಲಕ್ಕೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಪ್ರತಿರೋಧ ಒಡ್ಡಿ ಅಡೆತಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಾಗೂ ಜೀವ ಬೇದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :ದಿನಾಂಕ 21-09-2011 ರಂದು ಸಾಯಂಕಾಲ ನಗರದ ಜಗತ ಸರ್ಕಲ್ ಹತ್ತಿರ ಗುಡ್ಡಾಂಬೆ ಅಂಗಡಿ ಎದುರು ರೋಡಿನ ಮೇಲೆ ಮೋ/ಸೈಕಲ್ ನಂ:ಕೆಎ 32 ಆರ್ 5579 ನೆದ್ದರ ಚಾಲಕ ತನ್ನ ಮೋ/ಸೈಕಲನ್ನು ತಿರಾಂದಾಜ ಟಾಕೀಜ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಪಕ್ಕಕ್ಕೆ ನಿಂತ ಶ್ರೀ ಮತಿ ಅಲಿಯಾ ಬೇಗಂ ಗಂಡ ಅಪ್ಸರಪಟೇಲ ಸಾ: ಅಲ್ದಿಹಾಳ ತಾ:ಚಿತ್ತಾಪೂರ ಜಿ: ಗುಲಬರ್ಗಾ ನನಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ಗುಪ್ತ ಗಾಯ ಪೆಟ್ಟುಗೊಳಿಸಿ ಫಿರ್ಯಾದಿದಾರಳನ್ನು ಒಂದು ಅಟೋರಿಕ್ಷಾದಲ್ಲಿ ಬಸವೇಶ್ವರ ಅಸ್ಪತ್ರೆಗೆ ಒಯ್ದು ಉಪಚಾರ ಕುರಿತು ಸೇರಿಕೆ ಮಾಡಿ ತನ್ನ ಹೆಸರು ಹೇಳದೆ ಮೋ/ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಆಕ್ರಮ ಅಡಿಗೆ ಅನೀಲ ಸಿಲೇಂಡರ ಮಾರಾಟ ಮಾಡುತ್ತಿದ್ದವನ ಬಂಧನ :
ಗ್ರಾಮೀಣ ಠಾಣೆ : ದಿನಾಂಕ: 20-9-11 ರಂದು ಠಾಣಾ ವ್ಯಾಪ್ತಿಯ ರಾಮನಗರ ದಲ್ಲಿರುವ ರಾಘವೇಂದ್ರ ನಿಲಿಯದ ಮಾಲಿಕನು ಅಕ್ರಮವಾಗಿ ಪರವಾಣಿಗೆ ಇಲ್ಲದೆ ಅಡುಗೆ ಅನಿಲ ಸಿಲೆಂಡರ ಗಳನ್ನು ಜನರಿಗೆ ಮೋಸ ಮಾಡಿ ಮಾರಾಟ ಮಾಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಮಾನ್ಯ ಡಿವೈಎಸ್‌ಪಿ ಸಾಹೇಬರು ಗ್ರಾಮೀಣ ಉಪ ವಿಭಾಗ ಹಾಗೂ ಮಾನ್ಯ ಸಿಪಿಐ ಗ್ರಾಮೀಣವೃತ್ತ ಗುಲಬರ್ಗಾ ರವರುಗಳ ನೇತೃತ್ವದಲ್ಲಿ ದಾಳಿ ಮಾಡಿ ಮಂಜುನಾಥ ತಂ/ ಸುಭಾಷ ಬೆಳಕೋಟಾ ವ:25 ಜಾ:ಪೂಜಾರಿ ಸಾ: ರಾಮನಗರ ಗುಲ್ಬರ್ಗಾ ಇವನನ್ನು ವಶಕ್ಕೆ ತೆಗೆದುಕೊಂಡು ಅವನ ಹತ್ತಿರದಿಂದ2 ತುಂಬಿದ ಬಾರತ ಗ್ಯಾಸ 14.2 ಕೆಜಿ ಹಾಗೂ 2 ತುಂಬಿದ ಬಾರತ ಗ್ಯಾಸ ಕಮರ್ಸಿಲ ಗ್ಯಾಸ ಸಿಲೇಂಡ 19 ಕೆಜಿ 2 ತುಂಬಿದ ಇಂಡಿಯನ ಗ್ಯಾಸ ಸಿಲೆಂಡರ, 1 ಖಾಲಿ ಸಿಲೆಂಡರ್ 2 ಖಾಲಿ ಹೆಚ್‌ಪಿ ಕಮರ್ಸಿಯಲ್‌ ಸಿಲೆಂಡರ್‌ಗಳು 1 ಖಾಲಿಇರುವ ಉರ್ಜಾ ಸಿಲೆಂಡರ ಹಾಗೂಗ್ಯಾಸ ಅಳತೆ ಮಾಡುವ ತೂಕಾ 1 ಹೆಚ್‌ಪಿ ಗ್ಯಾಸ ತುಂಬುವ ಮೋಟಾರ ವೈರ ಸಮೇತ ಹಾಗೂ ಇತರೆ ಸಾಮಾನುಗಳು ಹೀಗೆ ಒಟ್ಟು 15870/-ರೂ ಬೆಲೆಬಾಳುವ ಸಾಮಾನುಗಳನ್ನು ಜಪ್ತಿ ಪಡಿಸಿಕೊಂಡಿದ್ದು ಸದರಿಯವನ ಮೇಲೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ :
ಆಳಂದ ಠಾಣೆ : ದಿನಾಂಕ
20-9-211 ರಂದು ರಾತ್ರಿ ಸಂತೋಷ ರಾಠೋಡ ಸಾ/ ಮುಗಳನಾಗಾಂವ ರವರು ತನ್ನ ಹೆಡಂತಿಯೊಂದಿಗೆ ಸಂಸಾರಿಕ ವಿಷಯದಲ್ಲಿ ಬಾಯಿ ಮಾತಿನಿಂದ ತಕರಾರು ಮಾಡುತ್ತಿದ್ದಾಗ ನಾನು ಎದ್ದು ರೋಡಿನ ಕಡೆ ನಡೆದಾಗ ನನ್ನ ಅತ್ತೆಯಾದ ಅನಿತಾ ಗಂಡ ಗೋಪಿ ಸಂಗಡ 3 ಜನರು ಕುಡಿಕೊಂಡು ನನಗೆ ಎಲ್ಲಿಗೆ ಹೊಗುತ್ತಿಯ ಅಂತ ತಡೆದು ನಿಲ್ಲಿಸಿ ವಿನಾ ಕಾರಣವಾಗಿ ಅವಾಚ್ಯ ಶಬ್ದಗಳಿಂದ ಬೈಯ್ದ ಕೈಯಿಂದ ಹೊಡೆದು ನಿನ್ನಗೆ ಇವತ್ತು ಜೀವ ಸಹಿತ ಬಿಡುವುದಿಲ್ಲ ಅಂತ ಅಂಗಿ ಹಿಡಿದು ಎಳೆದಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 20-9-11 ರಂದು ಶ್ರೀ. ಲೋಮೋಕಾಂತ ತಂದೆ ಗುಂಡಪ್ಪ ಸಿಂಗೇ ಸಾ: ಡೊಂಗರಗಾಂವ ತಾ: ಜಿ: ಗುಲಬರ್ಗಾ ಮತ್ತು ಆತನ ಗೆಳೆಯರು ಡೊಂಗರ ಗಾಂವಕ್ಕೆ ಹೋಗುವ ಕುರಿತು ಕ್ರೋಜರ ಜೀಪ ನಂ ಎಪಿ 23 /0751 ನೇದ್ದರಲ್ಲಿ ಕುಳಿತು ಹೊರಟಾಗ ಏರಿಲೈನ್ಸ್‌ ಧಾಬಾದ ಮುಂದೆ ಹೊರಟಾಗ ಸದರಿ ಜೀಪ ಚಾಲಕನು ಜೀಪನ್ನು ಅತೀವೇಗದಿಂದ ನಡೆಯಿಸಿಕೊಂಡು ಹೋಗಿ ಮುಂದೆ ಹೊರಟು ಕೋಳಿಗಳನ್ನು ಸಾಗಿಸುವ ಟೆಂಪೊ ನಂ ಕೆಎ 32 ಬಿ-2528 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ನನ್ನ ಬಲಗಾಲ ಮೋಣಕಾಲ ಕೆಳಗೆ ಗಾಯವಾಗಿರತುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

21 September 2011

Gulbarga District Reported Crimes

ಅಪಘಾತ ಪ್ರಕರಣಗಳು :

ಮಾದನ ಹಿಪ್ಪರಗಾ ಠಾಣೆ :ದಿನಾಂಕ 20-09-2011 ರಂದು ಶ್ರೀಮತಿ ಮಾಹಾದೇವಿ ಗಂಡ ಬಸವಣ್ಣಪ್ಪಾ ಮಾಳಗೆ ಸಾ: ಹಿರೋಳಿ ಮತ್ತು ಗಂಡ ಕುಡಿಕೊಂಡು ಹೋಲದಿಂದ ಮನೆಗೆ ಬರುವಾಗ ಆಳಂದ ವಾಗ್ದರಗಿ ರಸ್ತೆಯಲ್ಲಿ ಹೋಗುತ್ತಿರುವಾಗ ಲಾರಿ ನಂ ಕೆಎ – 32 ಎ-2874 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಗಂಡ ಬಸವಣ್ಣಪ್ಪನಿಗೆ ಅಪಘಾತಪಡಿಸಿ ಭಾರಿಗಾಯಗಳಾಗಿದ್ದು ಉಪಚಾರ ಕುರಿತು ಸೋಲ್ಲಾಪೂರ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಸಂಚಾರಿ ಠಾಣೆ :ದಿನಾಂಕ : 20.09.2011 ರಂದು ನಗರದ ಜೇವರ್ಗಿ ರಿಂಗ ರೋಡ ದಿಂದ ಹೀರಾಪೂರ ರಿಂಗ ರೋಡ ಕಡೆ ಹೋಗುವ ರೋಡಿನಲ್ಲಿ ಬರುವ ಸರ್ವಜ್ಞಾ ಕಾಲೇಜ ಹತ್ತಿರ ರಿಂಗ ರೋಡಿನ ಮೇಲೆ ಶ್ರೀ ಧರ್ಮಣ್ಣ ತಂದೆ ಮನಸುಖ ಸಾ: ಸಾಯಿ ಮಂದಿರ ಕರುಣೆಶ್ವರ ನಗರ ಸರ್ವಜ್ಞಾ ಕಾಲೇಜ ಹತ್ತಿರ ರಿಂಗ ರೋಡ ಗುಲಬರ್ಗಾ ಮತ್ತು ಆತನ ಸಂಗಡಿಗರು ಪಾನಿಪುರಿ ಬಂಡಿ ತಳ್ಳಿಕೊಂಡು ಹೊಗುತ್ತಿದ್ದಾಗ ಶಿವಶರಣಪ್ಪ ಈತನು ಮಧ್ಯ ಸೇವನೆ ಮಾಡಿದ ಅಮಲಿನಲ್ಲಿ ಜೇವರ್ಗಿ ರಿಂಗ ರೋಡ ಕಡೆಯಿಂದ ತನ್ನ ಗುಡ್ಸ ಟಂಟಂ ನಂ:ಕೆಎ 32 ಎ 6734 ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿರುತ್ತಾನೆ. .ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಹಲ್ಲೆ ಪ್ರಕರಣಗಳು :

ಶಹಾಬಾದ ನಗರ ಪೊಲೀಸ ಠಾಣೆ :ದಿನಾಂಕ 20-09-2011 ರಂದು ಸಾಯಂಕಾಲ ಶ್ರೀ ಬಸವರಾಜ ತಂದೆ ಭೀಮಶ್ಯಾ ಬಾಲವುಡಿ ಸಾ:ಸುಣ್ಣಾ ಭಟ್ಟಿ ಶಹಾಬಾದ ಇವರು ಮುಕ್ತಿಯಾರ ಇನಾಮದಾರ ಇವರ ಖಣೆಯಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿಯೇ ಕೆಲಸ ಮಾಡುತ್ತಿದ್ದ ಅವನ ಹೆಂಡತಿಗೆ ಆರೋಪಿ ಶೀವು ಇವನು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ಪಿರ್ಯಾದಿ ವಿನಾಕಾರಣ ಯಾಕೆ ನನ್ನ ಹೆಂಡತಿಗೆ ಬೈಯುತ್ತಿ ಅಂದಿದ್ದಕ್ಕೆ ಆರೋಪಿತರಾದ ಶೀವು ಮತ್ತು ಅವನ ತಮ್ಮ ಶರಣು ಮತ್ತು ಅವನ ಮಾವ ನಾರಾಯಣ ಇವರು ಕುಡಿಕೊಂಡು ಕೈಯಿಂದ ಮತ್ತು ಸಲಿಕೆಯ ಕಾವಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ :ದಿನಾಂಕ: ದಿನಾಂಕ 19-09-2011 ರಂದು ರಾತ್ರಿ ಶ್ರೀ. ಮಹ್ಮದ ಶಾಹಾ ನವಾಜ ತಂ/ ಮಹ್ಮದ ಅಲಿ ಸಾ: ಮಿಲ್ಲತ ನಗರ ಗುಲಬರ್ಗಾ ರವರು ತಂದೆ ತಾಯಿಯೊಂದಿಗೆ ಮನೆಯ ಮುಂದೆ ಮಾತನಾಡುತ್ತಾ ಕುಳಿತಾಗ ಫಯಾಜ ಸಂಗಡ 3 ಜನರು ಬಂದು ಸಮೀನಾ ಎಂಬ ಹುಡಗಿಯ ಹಿಂದೆ ಯಾಕೇ ತಿರುಗಾಡುತ್ತಿ ಅಂತಾ ಅವ್ಯಾಚ್ಛ ವಾಗಿ ಬೈದು ಬಿಡಿಗೆಯಿಂದ ತಲೆಯ ಮೇಲೆ ಬಲ ಗಣ್ಣಿನ ಮೇಲೆ ಮತ್ತು ಕೈಯಿಂದ ಬೆನ್ನು ಮೇಲೆ ಹೊಡೆದು ರಕ್ತಗಾಯ & ಗುಪ್ತಗಾಯ ಮಾಡಿ ಇನ್ನೊಮ್ಮೆ ಹುಡುಗಿಯಿಂದ ತಿರುಗಾಡಿದರೆ ಫೋನ ಮಾಡಿದರೆ ಬಡಿಗೆಯಿಂದ ಹೊಡೆದು ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫರತಾಬಾದ ಠಾಣೆ :ಶ್ರಿ ಸುದಾರಕ ತಂದೆ ಸಿದ್ರಾಮಪ್ಪಾ ದುಧನಿ ಸಾ: ಫೇಠ ಫಿರೋಜಾಬಾದ ಇವರು ದಿನಾಂಕ: 19-09-2011 ರಂದು ಬೆಳಗ್ಗೆ ಹರಿಜನ ವಾಡಕ್ಕೆ ನೀರು ಬಿಟ್ಟಿದ್ದರಿಂದ ನಮ್ಮ ಗ್ರಾಮದ ಬಂಡಪ್ಪ ತಂದೆ ಅಣೇಪ್ಪಾ ಸಿರೂರ ಇವನು ಹರಿಜನ ವಾಡಕ್ಕೆ ಬಿಟ್ಟ ನೀರು ಬಂದ ಮಾಡಿ ನಮ್ಮ ಓಣಿಗೆ ವಾಲು ತಿರುಗಿಸಿಕೊಂಡಿದ್ದರಿಂದ ಸದರಿ ಬಂಡೇಪ್ಪಾ ಇವನು ಯಾಕಪ್ಪಾ ಹರಿಜನ ವಾಡಕ್ಕೆ ಹೋಗುವ ನೀರು ಯಾಕೆ ಬಂದ ಮಾಡಿದ್ದಿ ಈ ಕಡೆ ಯಾಕೆ ವಾಲ ತಿರುಗಿಸಿಕೊಂಡಿದ್ದಿ ಅಂತಾ ಕೇಳಿದಕ್ಕೆ ನೀರು ಬಿಡುವ ವಿಷಯಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಋಆಡಿನಿಂದ ಹೊಡೆದಿದ್ದರಿಂದ ಗುಪ್ತ ಗಾಯಗಳಾಗಿರುತ್ತವೆ. ಮತ್ತು ನೀನು ಇನ್ನೊಮ್ಮೆ ಸಿಕ್ಕರೆ ನಿನ್ನ ಜೀವದ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ,ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವು ಕಚ್ಚಿ ಕಾರ್ಮಿಕ ಮಹಿಳೆಯ ಸಾವು :
ಕಮಲಾಪೂರ ಠಾಣೆ :
ದಿನಾಂಕ 20-09-2011 ರಂದು ಮಧ್ಯಾಹ್ನ ಸೊಂತ ಗ್ರಾಮದ ಲಲ್ಷ್ಮಣ ಈಟೀ ಇವರ ಕಳವಿ ಹೊಲದಲ್ಲಿ ಗಂಗಮ್ಮ ಗಂಡ ಮೈಲಪ್ಪಾ ಭೂಯಾರ ಇವರು ಕಸ ತೆಗೆಯುತ್ತಿದ್ದಾಗ ವಿಷಪೂರಿತ ಹಾವು ಕಚ್ಚಿದ್ದು ಉಪಚಾರ ಕುರಿತು ಆಸ್ಪತ್ರೆಗೆ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ :ದಿನಾಂಕ
20-09-2011 ರಂದು ಮಧ್ಯಾಹ್ನ ನಗರದ ಆರ್.ಪಿ.ಸರ್ಕಲ್ ದಿಂದ ಕೇಂದ್ರ ಬಸ್ ನಿಲ್ದಾಣ ಮೇನ ರೋಡಿನಲ್ಲಿ ಬರುವ ಸಮತೋಷ ಟಾಕೀಜ ಹತ್ತಿರ ಇರುವ ಮಹಾರಾಜ ಹೊಟೆಲ ಎದುರು ರೋಡಿನ ಮೇಲೆ ಮೋ/ಸೈಕಲ್ ನಂ: 28 ಕ್ಯೂ 5105 ಎಮ್.ಎಸ್.ಕೆ.ಮಿಲ್ ರೊಡಿನ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸೈಕಲ್ ಮೇಲೆ ಹೋಗುತ್ತಿದ್ದ ಶ್ರೀ ಎಮ್.ಡಿ.ನಜೀರ ಮಿಯಾ ತಂದೆ ಉಸ್ಮಾನ ಸಾಬ ಸಾ: ಹೆಚ್.ನಂ:151 ವಿದ್ಯಾ ನಗರ ಗುಲಬರ್ಗಾ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ತನ್ನ ಮೋ/ಸೈಕಲ್ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ :ದಿನಾಂಕ: 19-09-2011 ರಂದು ಮುಂಜಾನೆ ಸಮಯದಲ್ಲಿ ಶ್ರೀ ಹಣಮಂತ ತಂದೆ ನಿಂಗಪ್ಪ ಹುಲಕಲ್ಲ ಸಾ: ಚಾಮನಾಳ ತಾ: ಶಹಾಪೂರ ಮತ್ತು ಗ್ರಾಮದ ಅಬ್ದುಲ ಸಾಬ ಮತ್ತು ಇನ್ನಿತರರೂ ಕೂಡಿಕೊಂಡು ಚಾಮನಾಳದಿಂದ ಕೊಳಕೂರ ಗ್ರಾಮಕ್ಕೆ ಬಸವಣ್ಣ ದೇವರ ಪರ್ವ ಕಾರ್ಯಕ್ರಮಕ್ಕೆ ಬಂದು ಮರಳಿ ರಾತ್ರಿ ಸಮಯದಲ್ಲಿ ಕ್ರೋಜರ ಜೀಪ ನಂ ಕೆ.ಎ. 28 ಎಮ್. 4542 ನೇದ್ದರಲ್ಲಿ ಚಾಮನಾಳಕ್ಕೆ ಹೋಗುತ್ತಿರುವಾಗ ರಾತ್ರಿ ಮಾರಡಗಿ ಕ್ರಾಸ ಇನ್ನೂ ಒಂದು ಕೀ.
,ಮಿ ಅಂತರ ಇರುವಾಗ ಕ್ರೋಜರ ಜೀಪ ನಿಲ್ಲಿಸಿ ರೋಡಿನ ಸೈಡಿಗೆ ನಿಂತು ಏಕಿ ಮಾಡುತ್ತಿದ್ದಾಗ ಅದೆ ವೇಳೆಗೆ ಹಿರೋ ಹುಂಡಾ ಸ್ಪ್ಲೇಂಡರ ಮೋಟಾರ ಸೈಕಲ ನಂಬರ ಕೆ.ಎ. 32 ಎಲ್ 4585 ನೇದ್ದರ ಸವಾರ ಸಂತೋಷ ಇತನು ಮೋಟಾರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಬ್ದುಲಸಾಬನಿಗೆ ಡಿಕ್ಕಿ ಪಡಿಸಿ ಗಾಯ ಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 September 2011

Gulbarga district reported crimes

ಕೊಲೆ ಮಾಡುವುದಾಗಿ ಹೆದರಿಸಿ, ಮೊಟಾರ್ ಸೈಕಲ್ ಕಿತ್ತುಕೊಂಡ ಬಗ್ಗೆ :-

ರಾಘವೇಂದ್ರ ನಗರ ಠಾಣೆ :ಸುಮಾರು 6 ತಿಂಗಳ ಹಿಂದೆ ಶ್ರೀ ದಯಾಸಾಗರ ತಂದೆ ಅಮ್ರತರಾವ ಶಹಾಬಾದಿ ಇವರು ಯಂಕವ್ವ ಮಾರ್ಕೆಟನಲ್ಲಿ ನಿಂತಾಗ, ಅಲ್ಲಿಗೆ ಬಂದ ಬಸವ ನಗರದ ಮಲ್ಲಿಕಾರ್ಜುನ ತಂದೆ ದೇವಿಂದ್ರಪ್ಪ ಕಟ್ಟಿಮನಿ, ಸಂಗಡ 3 – 4 ಜನರು ಕೂಡಿಕೊಂಡು ಬಂದು ದಯಾಸಾಗರ ಇವರ ಹೊಂಡಾ ಆ್ಯಕ್ಟಿವ್ ಮೊಟಾರ್ ಸೈಕಲ್ ನಂ ಕೆಎ-32 / ವಿ-3771 ನೇದ್ದು ಕಿತ್ತುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರೆ ಕೊಲೆ ಮಾಡುತ್ತವೆ ಅಂತ ಹೆದರಿಸಿರುತ್ತಾರೆ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಹುಡುಗಿ ಕಾಣೆಯಾದ ಪ್ರಕರಣ :
ಮುಧೋಳ ಠಾಣೆ :
ದಿನಾಂಕ 15-09-2011ರಂದು ಮುಂಜಾನೆ 10-30 ಗಂಟೆಯ ಸುಮಾರಿಗೆ ಕುಮಾರಿ ಬುಜ್ಜಮ್ಮಾ ತಂದೆ ಮಲ್ಲಪ್ಪಾ ವಯಾ 4 ವರ್ಷ ಇವಳು ಬುರಗಪಲ್ಲಿ ಗ್ರಾಮದಲ್ಲಿರುವ ತನ್ನ ಮನೆಯ ಮುಂದಿನ ದರ್ಗಾದ ಹತ್ತಿರ ಆಟವಾಡುತ್ತಾ ಬಂದವಳು ಮರಳಿ ಮನೆಗೆ ಬಂದಿರುವುದಿಲ್ಲಾ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಶ್ರೀ ನಾಗಪ್ಪಾ ತಂದೆ ಆಶಪ್ಪಾ ಸಾ:ಬುರಗಪಲ್ಲಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಡಿದ ಅಮಲಿನಲ್ಲಿ ವಾಹನ ಚಾಲನೆ ಮಾಡಿದ ಚಾಲಕನ ಬಂಧನ :
ಜೇವರ್ಗಿ ಠಾಣೆ : ದಿನಾಂಕ 19-09-2011 ರಂದು ಸಾಯಂಕಾಲ ಸಿಂದಗಿ ಕ್ರಾಸ ಹತ್ತಿರ ಹುಸೇನ ಪಟೇಲ ತಂದೆ ಖಾಜಾ ಪಟೇಲ ಸಾ: ಕಟ್ಟಿಸಂಗಾವಿ ಇತನು ತನ್ನ ಲಾರಿಯನ್ನು ಕುಡಿದ ಅಮಲಿನಲ್ಲಿ ಮಾನವ ಜೀವಕ್ಕೆ ಹಾನಿ ಆಗುವ ರೀತಿಯಲ್ಲಿ ಅಲಕ್ಷತನದಿಂದ ಅಜಾಗುರುಕತೆಯಿಂದ ಅಡ್ಡಾ ದಿಡ್ಡಿಯಾಗಿ ನಡೆಸುತ್ತಿದ್ದರಿಂದ ಸದರಿ ವಾನ ಚಾಲಕನ್ನು ವಾಹನ ಸಮೇತ ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ.

ನಗರಸಭೆ ಅನುದಾನದ ಹಣ ದುರುಪಯೋಗ ಪಡಿಕೊಂಡ ಪ್ರಕರಣ :
ಆಳಂದ ಠಾಣೆ :
1.ಸೈಯ್ಯದ ನಾಸೀರ ಅಲಿ ಹಿಂದಿನ ಮುಖ್ಯಾಧಿಕಾರಿಗಳು ಪುರಸಭೆ ಆಳಂದ 2.ಬಸಣ್ಣಗೌಳಿ ಹಿಂದಿನ ಅಧ್ಯಕ್ಷಕರು ಪುರಸಭೆ ಆಳಂದ 3. ರಾಜಶೇಖರ ಅಧ್ಯಕ್ಷಕರು ಸ್ಥಾಯಿ ಸಮೀತಿ ಪುರಸಭೆ ಆಳಂದ 4.ಪೀರಶೇಟ್ಟಿ ಪುರಸಭೆ ಆಳಂದ 5.ಅಣ್ಣಪ್ಪಾ ಎಫ್‌‌.ಡಿ.ಎ ಪುರಸಭೆ ಆಳಂದ ಇವರುಗಳು 2009-10 ನೇ ಸಾಲಿನ ಪುರಸಭೆ ಅನುದಾನದಲ್ಲಿ ತಮ್ಮ ಅಧಿಕಾರವದಿಯಲ್ಲಿ ಹಣ ದೂರುಪಯೋಗ ಮಾಡಿಕೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

19 September 2011

Gulbarga District Reported Crimes

ಅಪಘಾತ ಪ್ರಕರಣ :

ಜೇವರ್ಗಿ ಠಾಣೆ :ದಿನಾಂಕ: 19-092011 ರಂದು ಬೆಳ್ಳಿಗಿನಜಾವ 3-30 ಗಂಟೆಗೆ ಶಹಾಪೂರ ಜೇವರ್ಗಿ ಮೇನ ರೋಡ ಕೆಲ್ಲೂರ ಗ್ರಾಮದ ಹತ್ತಿರ ಲಾರಿ ನಂ ಕೆ.ಎ. 32 ಬಿ 1869 ನೇದ್ದರ ಚಾಲಕನು ತನ್ನ ಲಾರಿಯನ್ನು ಜೇವರ್ಗಿ ಕಡೆಯಿಂದ ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮೃತ ಅಬ್ದುಲ ಅಜೀಜ ತಂದೆ ಅಬ್ದುಲಗನಿಸಾಬ ಗಿರಣಿ ಸಾ: ಹುಸೇನ ಗಾರ್ಡನ ಗುಲಬರ್ಗಾ ಇವರ ಇಂಡಿಕಾ ಕಾರ ನಂ ಕೆ.ಎ 28 ಎಮ್. 6643 ನೇದ್ದರಲ್ಲಿ  ಶಹಾಪೂರ ಕಡೆಯಿಂದ ಜೇವರ್ಗಿ ಕಡೆಗೆ ಬರುತ್ತಿದ್ದಾಗ  ಎದುರಾಗಿ ಇಂಡಿಕಾ ಕಾರಿಗೆ ಜೋರಾಗಿ ಡಿಕ್ಕಿ ಪಡಿಸಿದ ಪರಿಣಾಮ ಅಬ್ದುಲ ಅಜೀಜ ಇತನು ಭಾರಿ ಗಾಯ ಪೆಟ್ಟು ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ತೋಲಾಭಾಷ ತಂದೆ ಹುಸೇನಸಾಬ ನದಾಫ ಸಾ: ಬಸವೇಶ್ವರ ಕಾಲೋನಿ ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ :
ದಿನಾಂಕ: 18-09-2011 ರಂದು ಚಂದ್ರಶೇಖರ ಇತನು ತನ್ನ ಹೀರೋ ಹುಂಡಾ ಸ್ಲ್ಪೇಂ ಡರ ಪ್ಲಸ್ ಮೋಟಾರ ಸೈಕಲ ನಂಬರ ಕೆ.ಎ. 32 ವಾಯಿ 9575 ನೇದ್ದನ್ನು ನಮ್ಮ ಹೊಟೇಲ ಮುಂದೆ ರೋಡಿನ ಎಡಬದಿಯಲ್ಲಿ ನಿಲ್ಲಿಸಿ ಇಳಿಯುತ್ತಿದ್ದಾಗ ಅದೆ ವೇಳೆಗೆ ಜೇವರ್ಗಿ ಬಸ ಸ್ಟಾಂಡ ಕಡೆಯಿಂದ ಟ್ರಾಕ್ಟರ ನಂ ಕೆ.ಎ. 32 ಟಿಎ 2620 ನೇದ್ದರ ಚಾಲಕನಾದ ಮಹಾಂತಗೌಡ ತಂದೆ ಗುರಲಿಂಗಪ್ಪಗೌಡ ಸಾ: ವರ್ಚನಳ್ಳಿ ಇತನು ತನ್ನ ಟ್ರಾಕ್ಟರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೆ ನನ್ನ ಗಂಡನಿಗೆ ಮತ್ತು ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಪಡಿಸಿ ಭಾರಿ ಗಾಯ ಗೊಳಿಸಿ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನಂತರ ನನ್ನ ಗಂಡನಿಗೆ ಹೆಚ್ಚಿನ ಉಪಚಾರ ಕುರಿತು 108 ಅಂಬುಲ್ಸನ ವಾಹನದಲ್ಲಿ ಗುಲಬರ್ಗಾಕ್ಕೆ ಹೋಗುತ್ತಿದ್ದಾಗ ದಾರಿಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಮಲ್ಲಮ್ಮ ಗಂಡ ಚಂದ್ರಶೇಖರ ಸಜ್ಜನ ಸಾ: ಬಸವೇಶ್ವರ ಕಾಲೋನಿ ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ :ದಿನಾಂಕ 18-9-11 ರಂದು ಮುಂಜಾನೆ ಶ್ರೀ ಮತಿ ಸಾಬಮ್ಮ ಗಂಡ ಧೂಳಪ್ಪ @ ರಮೇಶ ಮಾವನೂರಕರ್‌ ಸಾ: ಶರಣಸಿರಸಗಿ ಮಡ್ಡಿ ತಾ: ಜಿ: ಗುಲಬರ್ಗಾ ರವರ ಗಂಡ ಮತ್ತು ಅವರ ಗೆಳೆಯನಿಗೆ ಟ್ರ್ಯಾಕ್ಟ್‌ರ ಖರೀದಿ ಮಾಡುವ ಕುರಿತು ನಮ್ಮ ಮೋಟಾರ ಸೈಕಲ ನಂ ಕೆಎ32 ಎಸ್‌ 4247 ನೇದ್ದನ್ನು ತೆಗೆದುಕೊಂಡು ಹೋಗಿದ್ದು. ಮದ್ಯಾಹ್ನ 1 ಗಂಟೆಯ ಸುಮಾರಿಗೆ ಉಪಳಾಂವ ಕ್ರಾಸ ಹತ್ತಿರ ಇರುವ ಬಿರಾದಾರ ಪೆಟ್ರೋಲ ಪಂಪ ಹತ್ತಿರ ಹೋಗುವಾಗ ಹುಮನಾಬಾದ ಕಡೆಯಿಂದ ಒಂದು ಕಾರ ನಂ ಕೆಎ 32 ಎಮ್‌‌ ಹೆಚ್‌ 2319 ನೇದ್ದರ ಕಾರ ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ನಡೆಯಿಸಿಕೊಂಡು ಬಂದು ಟಕ್ಕರ ಕೊಟ್ಟಿದ್ದು ಅದರಿಂದ ಮೋ ಸೈಕಲ ಮೇಲೆ ಹೊರಟಿದ್ದ ಮೋ ಸೈಕಲ ಸವಾರ ಧೋಳಪ್ಪ ಹಾಗೂ ಸಂತೋಷ ಇಬ್ಬರಿಗೆ ಬಾರಿಗಾಯ ವಾಗಿರುತ್ತದೆ ಕಾರ ಚಾಲಕ ತನ್ನ ಕಾರನ್ನು ಅಲ್ಲೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಸ್ಪೀಟ ಜೂಜಾಟದಲ್ಲಿ ನಿರತ 6 ಜನರ ಬಂಧನ :
ಗ್ರಾಮೀಣ ಠಾಣೆ :ದಿನಾಂಕ 18/9/11 ರಂದು ಸಾಯಂಕಾಲ ವಿಶ್ವರಾಧ್ಯ ಗುಡಿಯ ಹತ್ತಿರ ಅಂದಾರ ಬಾಹರ ಜೂಜಾಟ ವಾಡುತ್ತಿದ್ದಾರೆಂದು ಬಾತ್ಮಿ ಮೇರೆಗೆ ದಾಳಿ ಮಾಡಿ 1. ವೀರಣ್ಣ ತಂದೆ ಶರಣಬಸಪ್ಪ ಪಾಟೀಲ ಸಾ: ಲಾಲಗೇರಿ ಕ್ರಾಸ ಗುಲ್ಬರ್ಗಾ 2.ಅಂಬರೀಷ ತಂ/ ಶಿವಪುತ್ರ ಜಮಾದಾರ ಸಾ: ಶಹಾಬಜಾರ ಜಿಡಿಎ ಕಾಲನಿ ಗುಲಬರ್ಗಾ 3.ರಾಜು ತಂ/ ಬಸವರಾಜ ಕಣ್ಣಿ ಸಾ: ದೇವಿ ನಗರ ಗುಲಬರ್ಗಾ4.ಜಾವೀದ ತಂ/ ಮಹ್ಮದಖಾಜಾ ಸಾ: ರುಕುಂ ತೋಲಾ ದರ್ಗಾ ಹತ್ತಿರ ಗುಲಬರ್ಗಾ 5.ವಿಶ್ವನಾಥ ತಂ/ ಸಾತಪ್ಪ ದಸ್ತಾಪೂರ ಸಾ: ಸುಂಟನೂರ 6.ರವಿ ತಂ/ ಜಗನ್ನಾಥ ಪೂಜಾರ ಸಾ: ದೇವಿ ನಗರ ಗುಲಬರ್ಗಾ ರವರನ್ನು ಹಿಡಿದು ಅವರಿಂದ ನಗದು ಹಣ 3100/- ರೂ 52 ಇಸ್ಪೇಟ ಎಲೆಗಳು ಹಾಗೂ 4 ಮೋಬೈಲ ಹೀಗೆ ಎಲ್ಲಾ ಒಟ್ಟು 4300/- ರೂಪಾಯಿಗಳನ್ನು ವಶಪಡಿಸಿಕೊಂಡು ಆಪಾದಿತರ ಮೇಲೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮ ಹತ್ಯೆ ಪ್ರಕರಣ :

ಚಿಂಚೋಳಿ ಠಾಣೆ :ದಿನಾಂಕ 17.09.2011 ರಂದು ಮದ್ಯಾಹ್ನ ಶೆಂಕ್ರಪ್ಪಾ ತಂದೆ ಹಸನಪ್ಪಾ ಎನಕೆಪಳ್ಲಿ ಸಾ: ದೇಗಮಡಿ ಇವರು ಮನೆಯಲ್ಲಿ ಯಾರು ಇಲ್ಲದಾಗ ತಾನು ಮಾಡಿದ ಬ್ಯಾಂಕಿನ ಸಾಲ ಹಾಗೂ ಖಾಸಗಿ ಸಾಲ ತಿರಿಸಲು ಆಗಲಿಲ್ಲಾ ಮತ್ತು ಈ ವರ್ಷದ ಹೆಸರು ಮತ್ತು ಉದ್ದಿನ ಬೆಳೆ ಕೂಡಾ ಆಗಲಿಲ್ಲಾ ಎಂಬುದನ್ನು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಕ್ರಿಮಿನಾಷಕ ಎಣ್ಣೆ ಸೆವನೆ ಮಾಡಿ ಆತ್ಮ ಹತ್ಯ ಮಾಡಿಕೊಂಡಿರುತ್ತಾನೆ ಅಂತಾ ಶ್ರೀಮತಿ ರಂಗಮ್ಮ ಗಂಡ ಶೆಂಕ್ರಪ್ಪಾ ಎನಕೆಪಳ್ಳೀ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 September 2011

GULBARGA DIST REPORTED CRIMES

ಮಳಖೇಡ ಠಾಣೆ :ಶ್ರೀ ಸಂಜೀತ ತಂದೆ ಚಂದ್ರ ಕಿಶೋರ ಸಾ|| ಆದಿತ್ಯ ನಗರ ಮಳಖೇಡ ರವರು, ದಿನಾಂಕ 15-9-11 ರಂದು ರಾತ್ರಿ 7-00 ಪಿ,ಎಮ್,ಕ್ಕೆ ರಾಜಶ್ರೀ ಸಿಮೆಂಟ ಕಂಪನಿ ಆದಿತ್ಯ ನಗರ ಮಳಖೇಡ ಕ್ವಾಟರ್ಸ ನಂ ಎವಿ 8 ನೇದ್ದರ ಎದರುಗಡೆ ಜಾನ್ ಢೀರ್ ಕಂಪನಿಯ ಟ್ರ್ಯಾಕ್ಟರ ನಂಬರ ಕೆಎ-32 ಬಿ-0366-0367 ನೇದ್ದನ್ನು ನಿಲ್ಲಿಸಿದ್ದು ರಾತ್ರಿ 10-00 ಪಿ,ಎಮ್,ಕ್ಕೆ ಬಂದು ನೋಡಲಾಗಿ ಇರಲಿಲ್ಲಾ. ಇಲ್ಲಿಯವರೆಗೆ ಹುಡುಕಾಡಿದರು ಪತ್ತೆಯಾಗಲಿಲ್ಲ. ಕಾರಣ ಸದರಿ ಟ್ರ್ಯಾಕ್ಟರ ಅನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಟ್ರ್ಯಾಕ್ಟರ ಹಾಗೂ ಆರೋಪಿಯನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೇವರ್ಗಿ ಠಾಣೆ :ಶ್ರೀ ಮನೋಜ ತಂದೆ ಶ್ರೀಪಾದರಾವ ಕುಲಕರ್ಣ ಸಾ|| ದತ್ತನಗರ ಜೇವರ್ಗಿ ರವರು, ದಿನಾಂಕ 17-09-11 ರಂದು ನಮ್ಮ ಧನಲಕ್ಷ್ಮಿ ಮೆಡಿಕಲ್ ಅಂಗಡಿ ಬಂದ್ ಮಾಡಿಕೊಂಡು ದಿನವಿಡಿ ಮಾಡಿದ ವ್ಯಾಪಾರದ ನಗದು ಹಣ 30,000/- ರೂ ಗಳನ್ನು  ಒಂದು ಬ್ಯಾಗಿನಲ್ಲಿ ಹಾಕಿಕೊಂಡು ರಾತ್ರಿ 9-30 ಪಿ.ಎಮ ಕ್ಕೆ ಮನೆಯ ಮುಂದೆ ಮೋಟಾರ ಸೈಕಲ ನಿಲ್ಲಿಸಿ ಒಳಗೆ  ಹೋಗುವಷ್ಟರಲ್ಲಿ ಹಿಂದಿನಿಂದ ಬಂದ ಇಬ್ಬರು ಅಪರಿಚಿತ ಮನುಷ್ಯರು ನನ್ನನ್ನು ನೂಕಿಸಿಕೊಟ್ಟು, ನನ್ನ ಕೊರಳಲ್ಲಿ ಹಾಕಿಕೊಂಡ ಹಣವಿದ್ದ ಬ್ಯಾಗನ್ನು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆ. ಅವರ ಜೊತೆ ಸ್ವಲ್ಪ ದೂರದಲ್ಲಿದ್ದ ಇನ್ನೋಬ್ಬನು ಹೀಗೆ ಮೂರು ಜನರು ಕೂಡಿ ಗೋಗಿ ಇವರ ತೊಗರಿ ಇದ್ದ ಹೊಲದಲ್ಲಿ ಓಡಿ ಹೋಗಿರುತ್ತಾರೆ. ಕಾರಣ ಅವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ :ಶ್ರೀ ರಾಕೇಶ ತಂದೆ ಶಾಂತಪ್ಪ ಶೀಲವಂತ ಸಾ|| ಬಿದ್ದಾಪೂರ ಕಾಲೋನಿ ಗುಲಬರ್ಗಾ ರವರು, ನನ್ನ ತಾಯಿಯು ಹೈಕೋರ್ಟ ಕಡೆಗೆ ವಾಕಿಂಗ ಹೋಗುತ್ತೇನೆ ಅಂತಾ ಹೇಳಿ ಹೋಗಿದ್ದು, ನಂತರ ಕಾಲನಿಯಲ್ಲಿಯ ಜನರು ಹೈಕೋರ್ಟ ಹತ್ತಿರ ರಸ್ತೆ ಮೇಲೆ ಅಪಘಾತವಾಗಿ ಒಬ್ಬ ಹೆಣ್ಣುಮಗಳೂ ಸತ್ತಿರುತ್ತಾಳೆ. ಅಂತಾ ಅಂದಾಡುತ್ತಿದ್ದಾಗ ನಾನು ಹೋಗಿ ನೋಡಲು ಅಲ್ಲಿ ಅಫಘಾತವಾಗಿದ್ದು, ನನ್ನ ತಾಯಿಗೆ ಯಾವುದೇ ಒಂದು ಲಾರಿಯ ಚಾಲಕ ತನ್ನ ಲಾರಿಯನ್ನು ಅತಿವೇಗದಿಂದ ನಡೆಯಿಸಿಕೊಂಡು ಅಪಘಾತಪಡಿಸಿದ್ದು ತನ್ನ ತಾಯಿ ಸುಭದ್ರಬಾಯಿ ಇವಳಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಕಾರಣ ತನ್ನ ತಾಯಿ ಸಾವಿಗೆ ಕಾರಣವಾದ ಲಾರಿ ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಠಾಣೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ವವಿದ್ಯಾಲಯ ಠಾಣೆ :ಶ್ರೀಮತಿ ಶಬನಾ ಬೇಗಂ ಗಂಡ ನಬಿಸಾಬ ಮುಲ್ಲಾಗೊಳ ಸಾ|| ವೆಂಕಟಬೆನೂರ ಗ್ರಾಮ ತಾ:ಜಿ:ಗುಲಬರ್ಗಾ ರವರು, ಸುಮಾರು 11 ವರ್ಷಗಳ ಹಿಂದೆ ವೆಂಕಟ ಬೇನೂರ ಗ್ರಾಮದ ನಬೀಸಾಬ ತಂಧೆ ರುಕ್ಕುಂಸಾಬ ಮುಲ್ಲಾಗೋಳ ಇತನೊಂದಿಗೆ ಲಗ್ನವಾಗಿದ್ದು ನನ್ನ ಗಂಡ ಲಗ್ನವಾದಾಗಿನಿಂದ ಕುಡಿಯುವ ಚಟಕ್ಕೆ ಬಿದ್ದು ಆಗಾಗ ಮನೆಗೆ ಕುಡಿದು ಬಂದು ನನಗೆ ಅಡಿಗೆ ಸರಿಯಾಗಿ ಮಾಡಿಲ್ಲಾ ಅಂತಾ ಚಿತ್ರಹಿಂಸೆ ಕೊಟ್ಟು ಮಾನಸಿಕ ತೊಂದರೆ ಮಾಡಿ ಹೊಡೆಬಡೆ ಮಾಡುತ್ತಾ ಬಂದಿರುತ್ತಾನೆ, ಹೀಗಿದ್ದು ನನ್ನ ನನ್ನ ತಾಯಿ ನನ್ನ ಗಂಡನಿಗೆ ಹೊಡೆಯ ಬೇಡಾ ಅಂತಾ ಸಮಜಾಯಿಸಿ ಹೋಗಿರುತ್ತಾರೆ.ಹೀಗಿದ್ದು ದಿನಾಂಕ 16-09-11 ರಂದು ರಾತ್ರಿ ನನ್ನ ಗಂಡ ಕುಡಿದ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ಬೈಯ್ದು ನಿನಗೆ ಇವತ್ತು ಖಲಾಸ ಮಾಡುತ್ತೇನೆ ಅಂತಾ ಕುಡಗೋಲಿನಿಂದ ಹೊಡೆಬಡೆ ಮಾಡಿ ರಕ್ತಗಾಯ ಮಾಡಿರುತ್ತಾನೆ. ನಾನು ಚೀರಾಡುವ ಸಪ್ಪಳ ಕೇಳಿ ನಮ್ಮ ಅಣ್ಣಪ್ಪಾ ತಂದೆ ಶಿವರಾಯ ತೊಗರೆನವರ ಮತ್ತು ದೊಡ್ಡಪ್ಪಾ ಆಡಕಿ ಇವರು ಬಂದು ಜಗಳ ಬಿಡಿಸಿದ್ದು ಇರುತ್ತದೆ. ಕಾರಣ ಸದರಿ ನನ್ನ ಗಂಡನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಮಾರಣಾಂತಿಕ ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ
:ಶ್ರೀ ರಾಮು ತಂದೆ ಈರಪ್ಪ ಹಿಂದಿನಮನಿ ಸಾ: ಸಾಥಖೇಡ ಇವರ
ಕಾಕನ ಮನೆಯ ಮುಂದೆ ಶಿವಪ್ಪ ತಂದೆ ಬಸರಾಜ ದೊಡ್ಡಮನಿ ಇತನು ಸುಮಾರು ದಿವಸಗಳಿಂದ ಸೈಕಲ ಮೇಲೆ ತಿರುಗಾಡುವುದು ಮತ್ತು ಕಾಕನ ಮಗಳು ಈರಮ್ಮ ಇವಳಿಗೆ ಚೂಡಾಯಿಸುವುದು ಮಾಡುತ್ತಿದ್ದ ಅವನಿಗೆ ಬುದ್ದಿ ಮಾತು ಹೇಳಿದರೆ ನಮ್ಮ ಕಾಕ ಬಸಂತನಿಗೆ ನಿನ್ನಗೆ ಮುಂದೋಂದು ದಿನ ಒಂದು ಕೈ ನೋಡಿಕೊಳ್ಳುತ್ತೇನೆ ಅಂತಾ ಜಗಳ ಮಾಡಿದ್ದು ಇರುತ್ತದೆ. ದಿನಾಂಕ: 16-09-2011 ರಂದು ಸಾಯಂಕಾಲ ನಾನು ಮತ್ತು ನಮ್ಮ ಕಾಕ ಬಸಂತ ಇಬ್ಬರೂ ನಮ್ಮೂರ ಹಳ್ಳದ ಪುಲಿನ ಹತ್ತಿರ ಮನೆಗೆ ಬರುತ್ತಿದ್ದಾಗ ಶಿವಪ್ಪ ಇತನು ತನ್ನ ಸೈಕಲದೊಂದಿಗೆ ಜಗಳ ಮಾಡುವ ಉದ್ದೇಶದಿಂದ ನಮ್ಮ ಕಾಕನಿಗೆ ಸೈಕಲ ಹಾಯಿಸಿ ಹಾಗೆ ಹೋಗಿದ್ದು ರಾತ್ರಿ ನಮ್ಮ ಮನೆ ಮುಂದೆ ಕಾಕ ಬಸಂತ ಇತನು ಶಿವಪ್ಪ ತಂದೆ ಬಸವರಾಜ ದೊಡ್ಡಮನಿ ಇತನಿಗೆ ಯಾಕೆ ನನಗೆ ಸೈಕಲ ಹಾಯಿಸಿ ಬಂದಿದ್ದಿ ಅಂತಾ ಕೇಳಿದಕ್ಕೆ ಅವನು ಕೊಲೆ ಮಾಡುವ ಉದ್ದೇಶದಿಂದ ಕೈಯಿಂದ ಮುಖದ ಮೇಲೆ ಮತ್ತು ಅವನಿಗೆ ಕೆಳಗೆ ಬಿಳಿಸಿ ಶಿವಪ್ಪನು ತನ್ನ ಕೈಯಲ್ಲಿದ್ದ ಕಬ್ಬಿಣದ ಮಳಿಯಿಂದ ಕಾಕ ಬಸಂತ ಇತನ ಮರ್ಮಾಂಗದ ಹತ್ತಿರ ಚುಚ್ಚಿ ರಕ್ತ ಗಾಯ ಪಡಿಸಿ ಕೊಲೆಗೆ ಪ್ರಯತ್ನ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 September 2011

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ದಿಗಂಬರ ಅವರಾದೆ ದಿನಾಂಕ 16-09-2011 ರಂದು ರಾತ್ರಿ ಲಾರಿ ನಂ. ಎಂ.ಹೆಚ್.25-ಬಿ. 7878 ನೇದ್ದರ ಬ್ಯಾಟರಿ ಕೆಟ್ಟಿದ್ದರಿಂದ ಅವರಾದ ಕ್ರಾಸ್ ದಾಟಿ ಅರ್ದ ಕೀ.ಮಿ. ಅಂತರದ ಮೇಲೆ ರೋಡಿನ ಸೈಡಿಗೆ ಲಾರಿಯನ್ನು ನಿಲ್ಲಿಸಿ ಬ್ಯಾಟರಿಯನ್ನು ಜೋಡಿಸುತ್ತಿದ್ದಾಗ ಹಿರೊ ಹೊಂಡಾ ಸ್ಪೆಂಡರ್ ಮೋಟಾರ ಸೈಕಲ್ ನಂ. ಕೆ.ಎ. 29.ಹೆಚ್.9250. ನೇದ್ದರ  ಚಾಲಕ ಚಿದಾನಂದ ಹಿರೆಮಠ ಇತನು ಮೋಟಾರ
ಸೈಕಲನ್ನು ಅತಿ ವೇಗ ಮತ್ತು ಅಲಕ್ದಷತನದಿಂದ ನಡೆಸಿ ಲಾರಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಗಾಯನಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಮಾರಾಟ ಮಾಡಿದ ಮನೆಯಲ್ಲಿ, ತನ್ನ ತಾಯಿಗೆ ಪಾಲು ಕೊಡದ ಕಾರಣ ಅಳಿಯನಿಂದ ಮಾವನ ಕೊಲೆಗೆ ಯತ್ನ :-
ರಾಘವೇಂದ್ರ ನಗರ ಠಾಣೆ :ಶ್ರೀ ಮಹ್ಮದ ಹಸಿನೂದ್ದಿನ್ ರವರು, ಲಾಲಗೇರಿ ಬಡಾವಣೆಯಲ್ಲಿರುವ ನಮ್ಮ ಹಳೆಯ ಮನೆ ಮಾರಾಟ ಮಾಡಿದ್ದು, ಮಾರಾಟ ಮಾಡಿದ ಹಣದಲ್ಲಿ ತನ್ನ ತಾಯಿಗೆ ಪಾಲು ಕೊಡಬೇಕು ಅಂತ, ಚಿತ್ತಾಪೂರ ತಾಲ್ಲೂಕಿನ ಕಾಳಗಿ ಗ್ರಾಮದ ಸಿರಾಜ್ ತಂದೆ ರಸೀದ ಬೇಗ್ ಈತನು ಆಗಾಗ ಜಗಳ ತೆಗೆದಿದ್ದು, ನಾನು ಹಣ ಕೊಡುವದಿಲ್ಲಾ ಅಂತ ಅಂದಿದ್ದಕ್ಕೆ, ಅದೇ ವೈಶಮ್ಯದಿಂದ ದಿನಾಂಕ 16-09-11 ರಂದು ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ನಮಾಜ್ ಮುಗಿಸಿಕೊಂಡು, ಮಹ್ಮದಿ ಚೌಕ್ ಮದಿನಾ ಕಾಲೋನಿಯಲ್ಲಿರುವ ನನ್ನ ಮನೆಗೆ ಬಂದಾಗ ಹಿಂದಿನಿಂದ ಬಂದ ಸಿರಾಜ್ ತಂದೆ ರಸೀದ ಬೇಗ್ ಈತನು ಅಂಗಿ ಹಿಡಿದು ಹಿಂದಕ್ಕೆ ಜಗ್ಗಿ, ಒಂದು ಜಂಬೆಯಿಂದ ಹೊಟ್ಟೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಹಾಬಾದ ನಗರ ಠಾಣೆ :ಶ್ರೀ ರುಕ್ಮೋದ್ದಿನ ತಂದೆ ಅಲಿಸಾಬ ಇನಾಮದಾರ  ಸಾ:ಶಾಂತನಗರ ಭಂಕೂರ ಇವರು ಮನೆಯಲ್ಲಿದ್ದಾಗ ತಮ್ಮ ತಮ್ಮಂದಿರಾದ ಬಾಸುಮೀಯಾ ಮತ್ತು  ಅಜಗರ ಕೂಡಿ ಹೊಲದ ಮೇಲೆ ನನ್ನ ತಂದೆ  ಅಲಿಸಾಬ ಇನಾಮದಾರ ಇವರು ಸಾಲ ತೆಗೆದುಕೊಳ್ಳುವಾಗ ನೀನು ಸಹಿ ಏಕೆ ಮಾಡಿದೆ ಅಂತಾ ಅಂದವರೆ ಅವಾಚ್ಯ ಶಬ್ದಗಳಿಂದ ನಮ್ಮನ್ನು ಬೈದು ಬಾಸುಮೀಯಾ ಇತನು ಹಲ್ಲಿನಿಂದ ಗದ್ದಕ್ಕೆ ಬಲವಾಗಿ ಕಚ್ಚಿದನು ಮತ್ತು ಅಜಗರ ಇತನು ಕಟ್ಟಿಗೆಯಿಂದ ಬಲಗೈ ಅಂಗೈಗೆ ಹೊಡೆದರಿಂದ ನನಗೆ ಗದ್ದಕ್ಕೆ ರಕ್ತಗಾಯ ಬಲಗೈ ಅಂಗೈಗೆ ರಕ್ತಗಾಯ ಹಾಗೂ ಎದುರಿನ ಹಲ್ಲು ಅಲುಗಾಡುತ್ತಿವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ: ದಾಖಲಾಗಿದೆ.

16 September 2011

GULBARGA DIST REPORTED CRIMES

ಕಳವು ಪ್ರಕರಣ :-
ಗ್ರಾಮೀಣ ಠಾಣೆ :
ಶ್ರೀ ಮಹೇಶ ತಂದೆ ವಿರುಪಣಪ್ಪಾ ಶೀಲವಂತ ಸಾ|| ಜಗತ ಗುಲಬರ್ಗಾರವರು, ದಿನಾಂಕ 14-09-11 ರಂದು ಸಂಜೆ 6-00 ಗಂಟೆ ಸುಮಾರಿಗೆ ನನ್ನ ಟಾಟಾ ಇಂಡಿಕಾ ವಿಸ್ಟಾ ಕಾರ್ ಕೆಎ-41 ಎಮ್-9003 ಕಾರನ್ನು ಚಾಲಕ ಅನಿಲ ತಂದೆ ಶರಣಪ್ಪ ದೇಗಾಂವ ಸಾ|| ರಾಮ ನಗರ ಗುಲಬರ್ಗಾ ಇತನು ರಾಮ ನಗರದಲ್ಲಿರುವ ತನ್ನ ಮನೆಯ ಮುಂದಿನ ಕಲ್ಲಿನ ಕಂಪೌಂಡ ಒಳಗಡೆ ಕಾರು ಹಚ್ಚಿ ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ 15-09-11 ರಂದು ಬೆಳಿಗ್ಗೆ ಎದ್ದು ನೋಡಲಾಗಿ ಮನೆ ಮುಂದೆ ಕಾರ ಇರಲಿಲ್ಲಾ. ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಕಾರು ಕಳ್ಳತನ ಮಾಡಿಕೊಂಡು ಹೋಗಿದ್ದು ಅದರ ಬೆಲೆ 4 ಲಕ್ಷ ರೂ. ಇರುತ್ತದೆ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕಾರಣ ಪತ್ತೆ ಮಾಡಿ ಕೊಡಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಮಾಡಿ, ಜೀವಬೆದರಿಕೆ ಹಾಕಿದ ಪ್ರಕರಣ :-

ಬ್ರಹ್ಮಪುರ ಠಾಣೆ :ಶ್ರೀ ಲಕ್ಷ್ಮಿಕಾಂತ ತಂದೆ ಶಿವಶರಣಪ್ಪ ತಳ್ಳೋಳಿ ಸಾ|| ಕುಮಸಿ, ಹಾ||ವ|| ಪೊಲೀಸ ಕಾಲೋನಿ ಗುಲಬರ್ಗಾ ರವರು, ದಿನಾಂಕ: 15-09-11 ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ನಮ್ಮ ತಮ್ಮನಾದ ರಮಾಕಾಂತ ಈತನು ವಿರೇಶ ನಗರದಲ್ಲಿರುವ ಬಾಲಾಜಿ ಕಿರಾಣಿ ಅಂಗಡಿಯಲ್ಲಿ ನಮ್ಮ ಮೊಬೈಲಗೆ ರಿಚಾರ್ಜ ಮಾಡು ಅಂತಾ ಹೇಳಿ 20 ರೂಪಾಯಿ ಕೊಟ್ಟು ಮರಳಿ ಮನೆಗೆ ಬಂದಿದ್ದು, ಮನೆಗೆ ಬಂದು ಅರ್ಧ ಗಂಟೆಯಾದರು ನಮ್ಮ ಮೊಬೈಲಗೆ ಬ್ಯಾಲನ್ಸ ಬರದ ಕಾರಣ ನಾನು ಬಾಲಾಜಿ ಕಿರಾಣಿ ಅಂಗಡಿಗೆ ಹೋಗಿ ಅಂಗಡಿಯ ಮಾಲಿಕನಾದ ಶರಣಬಸ್ಸು ಖಾನಾಪೂರ ಈತನಿಗೆ ವಿಚಾರಿಸಿದಾಗ ಅವನು ನನ್ನೊಂದಿಗೆ ಜಗಳಕ್ಕೆ ಬಿದ್ದು ಜಾತಿ ನಿಂದನೆ ಮಾಡಿ, ಅವಾಚ್ಯಶಬ್ದಗಳಿಂದ ಬೈಯ್ದು ಹೊಡೆಬಡೆ ಮಾಡಿರುತ್ತಾನೆ. ಅವರ ತಮ್ಮನಾದ ಸಂತೋಷ ಖಾನಾಪೂರ ಮತ್ತು ಮತ್ತೊಬ್ಬನು ಅವಾಚ್ಯಶಬ್ದಗಳಿಂದ ಬೈಯ್ದು ಹೊಡೆಬಡೆ ಮಾಡಿರುತ್ತಾನೆ ಇದರಿಂದ ಗುಪ್ತ ಪೆಟ್ಟಾಗಿರುತ್ತದೆ. ಅಲ್ಲದೇ ಜೀವ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :-
ಸ್ಟೇಷನ ಬಜಾರ ಠಾಣೆ :
ಶ್ರೀ ಶ್ರೀಶೈಲಯ್ಯಾ ಮಠ ಸಾ|| ಶಿವಯೋಗಿ ಸ್ವಾಮಿ ಸರ್ಕಾರಿ ಪ್ರಾಥಮಿಕ ಶಾಲೆ ಸೇಡಂ ರವರು, ದಿ:13-09-11 ರಂದು ಮದ್ಯಾಹ್ನ 15:00 ಗಂಟೆಗೆ ತಿಮ್ಮಾಪೂರ ಸರ್ಕಲ್ ಗುರುಕುಲ ಶಾಲೆ ಪಕ್ಕದಲ್ಲಿ ತಮ್ಮ ವಾಹನ ಹೀರೊ ಹೋಂಡಾ ಸ್ಪ್ಲೆಂಡರ್ ಕಪ್ಪು ಬಣ್ಣದು ನಂ ಎಮ್. ಹೆಚ್ 13 ಟಿ 469 ಅಂದಾಜು 25000/-ರೂ. ಮೌಲ್ಯದ್ದು ನಿಲ್ಲಿಸಿ ಹೋಗಿ ಮರಳಿ 16:00 ಗಂಟೆಗೆ ಬಂದು ನೋಡಲಾಗಿ ನಿಲ್ಲಿಸಿದ ಸ್ಥಳದಲ್ಲಿ ವಾಹನ ಇರಲಿಲ್ಲಾ. ಯಾರೋ ಕಳ್ಳರೂ ಕಳವು ಮಾಡಿಕೊಂಡು ಹೋಗಿರುತ್ತಾರೆ. ಇಂದಿನವರೆಗೆ ಹುಡುಕಾಡಿದರೂ ವಾಹನ ಸಿಕ್ಕಿರುವುದಿಲ್ಲಾ. ಕಾರಣ ಪತ್ತೆ ಹಚ್ಚಿಕೊಡಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಕಳವು ಪ್ರಕರಣ :-
ಎಂ.ಬಿ.ನಗರ ಠಾಣೆ :
ಶ್ರೀ ಆರೀಫ ಮತೀನ ತಂದೆ ಮೌಸಿನೂದ್ದಿನ ಖಟೆ ಖಟೆ ಸಾ|| ಗುಬ್ಬಿ ಕಾಲೋನಿ ಗುಲಬರ್ಗಾ ರವರು, ನಮ್ಮ ತಾಯಿ ತೀರಿಕೊಂಡ ನಿಮಿತ್ಯ ಅಂತಿಮ ಸಂಸ್ಕಾರಕ್ಕಾಗಿ ಯಾದಗಿರಕ್ಕೆ ಹೋಗಿದ್ದು ದಿನಾಂಕ 15-09-11 ರಂದು ಮರಳಿ ಮನೆಗೆ ಬಂದು ನೋಡಲಾಗಿ ಹಿಂದಿನ ಬಾಗಿಲು ತೆರೆದಿದ್ದು ಒಳಗಡೆ ಹೋಗಿ ನೋಡಲು ಮನೆಯಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅಲಮಾರದಲ್ಲಿಟ್ಟಿದ್ದ 25 ಗ್ರಾಂ ಬಂಗಾರದ ಸಣ್ಣ ನೇಕ್ಲೇಸ, 20 ಗ್ರಾಂ ಬಂಗಾರದ ಎರಡು ಎಳೆಯ ಒಂದು ಹಾರ, 10 ಗ್ರಾಂ ಬಂಗಾರದ ಒಂದು ಎಳೆಯ ಚೈನು, ನಗದು ಹಣ 33,000/- ಹೀಗೆ ಒಟ್ಟು 1,43,000/-ರೂ. ಮಾಲ್ಯದ ಸಾಮಾನುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೊಗಿರುತ್ತಾರೆ. ಕಾರಣ ಕಳುವು ಮಾಡಿದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟಕಾ ಪ್ರಕರಣ :-
ಆಳಂದ ಠಾಣೆ :
ಮಟ್ಕಾ ಆಡುತ್ತಿದ್ದಾರೆಂದು ಬಾತ್ಮಿದಾರರಿಂದ ಖಚಿತ ಮಾಹಿತಿ ಬಂದ ಮೇರೆಗೆ ಶ್ರೀ ದೇವಿಂದ್ರಪ್ಪ ಎ.ಎಸ್.ಐ ಮತ್ತು ಸಿಬ್ಬಂದಿಯವರು ಹೋಗಿ ನೋಡಲಾಗಿ, ಆಳಂದ ಪಟ್ಟಣದ ತಹಸಿಲ್ ಆಪೀಸ ಹತ್ತಿರ ಮಟ್ಕಾ ಆಡುತ್ತಿದ್ದ ಅಲಿ ಸಾಬ ತಂದೆ ಅಹ್ಮೆದ ಸಾಬ ಬಾಗವಾನ ಸಾ|| ಆಳಂದ ಎಂಬಾತನನ್ನು ದಾಳಿ ಮಾಡಿ ಬಂಧಿಸಿದ್ದು, ಆತನಿಂದ ಒಂದು ಮಟಕಾ ಚೀಟಿ, 2 ಮೋಬೈಲ ಒಂದು ಪೆನ್ ಮತ್ತು ನಗದು 150/- ರೂ. ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 September 2011

Gulbarga District Reported Crimes

ಸುಲಿಗೆ ಪ್ರಕರಣ :

ವಿಶ್ವ ವಿದ್ಯಾಲಯ ಠಾಣೆ : ಶ್ರೀ ಅನೀಲ್ ತಂದೆ ಮಾಸಯ್ಯಾ ಜಂಬಗಿ ರವರು, ನಾನು ದತ್ತಾ ವೈನ ಶಾಪದಲ್ಲಿ 2 ವರ್ಷಗಳಿಂದ ಕೆಲಸ ಮಾಡುತ್ತಿದ್ದು ಆಗಾಗ ನಮ್ಮ ವೈನ ಶಾಪ ಮಾಲಿಕರ ಹಣ ರವಿ ತಂದೆ ದತ್ತು ಗುತ್ತೇದಾರ ಸಾ :ಗುಲಬರ್ಗಾ ರವರು ನನೆಗೆ ವೈನಶಾಪಗೆ ಬೇಕಾಗುವ ಮಧ್ಯವನ್ನು ತರಿಸುವ ಕುರಿತಂತೆ ಕಳುಹಿಸುತ್ತಿದ್ದರು. ಹಿಗಿದ್ದು ದಿನಾಂಕ 15-09-11 ರಂದು ಬೆಳಿಗ್ಗೆ 10-45 ಎ.ಎಮ ಸುಮಾರಿಗೆ 638800 ರೂಪಾಯಿಗಳನ್ನು ಐಡಿಬಿಐ ಬ್ಯಾಂಕಗೆ ಹಣ ಕಟ್ಟಲು ಗುಲಬರ್ಗಾಕ್ಕೆ ಮೋಟರ ಸೈಕಲ ಮೇಲೆ ಹೋರಟಿದ್ದು ಖಾಜಾಕೋಟನೂರ ದಾಟಿ ಕೆರೆಯ ದಾಟಿ ಒಂದು ಬ್ರೀಡ್ಜ ಮೇಲೆ ಹೋರಟಾಗ ಬ್ರಿಡ್ಜ ಬಾಜು ಮೂರು ಜನರು ಕುಳಿತಿದ್ದು ನಾನು ಅಂದಾಜು ಹತ್ತು ಫೀಟ ಮುಂದೆ ಹೋಗುವಾಗ ಅಲ್ಲಿ ರೋಡಿಗೆ ಎರಡು ಕಲ್ಲು ಮತ್ತು ಯಾವುದೂ ಗಿಡಗಳ ಕಂಟಿ ತಪ್ಪಲು ಅಡ್ಡಾ ಹಾಕಿದ್ದು ಅದನ್ನು ನೋಡಿ ನಾನು ಸಾವಕಾಶವಾಗಿ ದಾಟುತ್ತಿದ್ದಾಗ ಒಮ್ಮೆಲೆ ಮೂರು ಜನರು ಓಡಿ ಬಂದವರೆ ನಮಗೆ ಸೈಕಲ ಮೋಟಾರ ಮೇಲಿಂದ ದಬ್ಬಿ ಕೊಟ್ಟರು ಆಗ ನಾವು ಇಬ್ಬರು ಕೆಳಗೆ ಬಿದ್ದಾಗ ಆ ಮೂರು ಜನರು ಹೆಲ್ಮೇಟದಲ್ಲಿ ಇಟ್ಟಿದ್ದ ಹಣವುಳ್ಳ ಪ್ಲಾಸ್ಟಿಕ ಚೀಲ ಕೆಳಗೆ ಬಿದ್ದದ್ದು ತೆಗೆದುಕೊಂಡವರೆ ಅಲ್ಲಿಂದ ಖಾಜಾಕೋಟನೂರ ಕಡೆಗೆ ಸುಮಾರು 50 ಅಡಿ ಮೇಲೆ ಓಡಿ ಹೋಗಿ ಅವರು ನಿಲ್ಲಿಸಿದ್ದ ಸೈಕಲ ಮೊಟಾರ ತೆಗೆದುಕೊಂಡು ಮೂರು ಜನ ಖಾಜಾಕೋಟನೂರ ಕಡೆಗೆ ಹೋರಟು ಹೋದರು ಅವರಲ್ಲಿ ಇಬ್ಬರು ಮುಖಕ್ಕೆ ಕೆಂಪು ದಸ್ತಿ ಕಟ್ಟಿಕೊಂಡಿದ್ದು ಒಬ್ಬನು ಕರಿ ಟೋಪಿ ಇಟ್ಟುಕೊಂಡಿದ್ದು ಅವರು ಅಂದಾಜು ಸುಮಾರು 22 ರಿಂದ 25 ವಯಸ್ಸಿನವರು ಇರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಹಲ್ಲೆ ಪ್ರಕರಣ :


ಫರಹತಾಬಾದ :ಶ್ರೀ ಲಕ್ಷ್ಮಿನಾರಾಯಣ ತಂದೆ ರಾಮಚಂದ್ರ ಮೂರ್ತಿ ಇವರು ಮಾಚನಾಳ ತಾಂಡಾದ ಸೀಮಾಂತರದಲ್ಲಿ ಎಸ್.ಆರ್.ಕೆ ಕಂಪನಿಯ ಆವರಣದಲ್ಲಿ ಒಂದು ಡಿಜೇಲ್ ಬಂಕ ಹಾಕಿದ್ದು ದಿನಾಂಕ: 13-09-2011 ರಂದು ಸಾಯಂಕಾಲ ಮಾಚನಾಳ ತಾಂಡಾದ ನಿವಾಸಿಗಳಾದ 1
.ಚಂದು ಪವಾರ ಲೈನಮಾನ 2.ಸುಭಾಷ 3.ಶಂಕರ, 4. ಬಾಬು ಈ ನಾಲ್ಕು ಜನರು ತಮ್ಮ ಗ್ರಾಮದ ಇತರೆ ಜನರೊಂದಿಗೆ ನಮ್ಮ ಕಂಪನಿಯೊಳಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಯಾಕೆ ಪ್ಯಾಕ್ಟರಿ ಹಾಕಿದ್ದೀರಿ ನಮಗೆ ಇದರಿಂದ ತೊಂದರೆಯಾಗುತ್ತಿದೆ ಅಂತಾ ಡಿಜೇಲ್ ಬಂಕ ಪಕ್ಕದ ಕೊಣೆಯಲ್ಲಿ ಅಳವಡಿಸಿದ ಟಿವಿಟಿ ಸ್ಟಾಟರ್ ಸ್ಟೇಪ್ಲೇಜರ್ ಗಳು ಕಿತ್ತಿ ಜಮೀನ ಮೇಲೆ ಬಿಸಾಡಿ ಡ್ಯಾಮೇಜ್ ಮಾಡಿದ್ದಲ್ಲದೆ ಕರೆಂಟ ವಾಯರ್ ಕೂಡಾ ಕಟ್ ಮಾಡಿದ್ದು ಇರುತ್ತದೆ. ಆಗ ಕ್ಯಾಂಪ ಮಾನ್ಯೇಜರ್ ಜೈನೋದ್ದೀನ ಬಂದು ಸದರಿಯವರಿಗೆ ಯಾಕೆ ಹೀಗೆ ಮಾಡುತ್ತಾ ಇದ್ದೀರಿ ಅಂತಾ ಕೇಳಿದಕ್ಕೆ ಏ ಸೂಳೆ ಮಗನೇ ಈ ಪ್ಯಾಕ್ಟರಿ ನೀವು ಬಂದ ಮಾಡಬೇಕು ಅಂತಾ ಬೈದು ಈ ಸುದ್ದಿ ಯಾರ ಮುಂದೆ ಹೇಳಿದರೆ ನಿಮ್ಮನ್ನು ಜೀವ ಸಹಿತಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ನಮಗೆ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :
ಕು|| ಅಶ್ವಿನಿ ತಂದೆ ಅಶೋಕ ಕಾಂಬಳೆ ಸಾ:ಮಹಾಲಕ್ಷ್ಮೀ ಲೇ ಔಟ ಪೊಲೀಸ್ ವಸತಿ ಗೃಹ ಗುಲಬರ್ಗಾ ಇವರು ದಿನಾಂಕ: 14-09-2011 ರಂದು ಸಾಯಂಕಾಲ ಪಾಲಟೇಕ್ನಿಕ ಕಾಲೇಜದಿಂದ ಮನೆಗೆ ನಡೆದುಕೊಂಡು ಐವಾನ ಈ ಶಾಹಿ ರೋಡದಿಂದ ಸ್ಟಡಿಯಂ ರೋಡ ಕಡೆಗೆ ಮನೆಗೆ ಹೋಗುತ್ತಿರುವಾಗ ಚರ್ಚ ಕಂಪೌಂಡ ಗೊಡೆ ಹತ್ತಿರ ರೋಡಿನ ಮೇಲೆ ಎದುರಿನಿಂದ ಮೋ/ಸೈಕಲ್ ನಂ:ಕೆಎ 32 ಜೆ 6050 ನೆದ್ದರ ಚಾಲಕನು ಎದುರುನಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ ಗಾಯಗೊಳಿಸಿ ವಾಹನ ಸಮೇತ ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರುಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ವಿಕವಾಗಿ ಬೆಂಕಿ ತಗುಲಿ ಮಹಿಳೆ ಸಾವು :
ರಾಘವೇಂದ್ರ ನಗರ ಠಾಣೆ :
ವಡ್ಡರ ಗಲ್ಲಿ ಹತ್ತಿರ ಭಗತಸಿಂಗ್ ಚೌಕದಲ್ಲಿ ದಿನಾಂಕ 14-09-2011 ರಂದು ಮದ್ಯಾಹ್ನದ ಸಮಯದಲ್ಲಿ ಈರಮ್ಮ ಗಂಡ ಚಂದ್ರಶಾ ದಾಳಿಂಬ ವ|| 60, ಇವಳು
ಮನೆಯಲ್ಲಿ ಚಹಾ ಮಾಡಲು, ಸ್ಟೂವ್ ಹಚ್ಚುತ್ತಿದ್ದಾಗ ಅದರ ಬೆಂಕಿ ಪಕ್ಕದಲ್ಲಿದ್ದ ಹಾಸಿಗೆಗೆ ಹತ್ತಿ ಅದರಿಂದ ಅಕಸ್ಮಿಕವಾಗಿ ಆಕೆಯ ಮೈಗೆ ಬೆಂಕಿ ತಗುಲಿ ಮ್ರತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :

ವಿಶ್ವವಿದ್ಯಾಲಯ ಠಾಣೆ :ಶ್ರೀ ಸಂತೋಷಕುಮಾರ ತಂದೆ ರಾಮಣ್ಣ ಕಣ್ಣಿ ಸಾ|| ಕಾಳಗಿ ತಾ|| ಚಿತ್ತಾಪೂರ ರವರು ದಿನಾಂಕ 06-09-2011 ರಂದು ಸಾಯಂಕಾಲ ಕಾಳಗಿಯಿಂದ ಗುಲಬರ್ಗಾಕ್ಕೆ ಬಸ್ಸಿನಲ್ಲಿ ಹೋರಟಿದ್ದು ಗುಲಬರ್ಗಾದ ಬಸ್ಸಿನಲ್ಲಿ ನನ್ನ ಪರ್ಸ ಕಳವು ಆಗಿರುತ್ತದೆ. ನನ್ನ ಪರ್ಸ ಯಾರೋ ಕಳ್ಳರೂ ಬಸ್ಸಿನಲ್ಲಿ ಕಳವು ಮಾಡಿದ್ದು, ನನ್ನ ಪರ್ಸನಲ್ಲಿ ಎರಡು ಸಾವಿರ ರೂ, ಮತ್ತು ಎಸ್.ಬಿ.ಐ. ಬ್ಯಾಂಕಿನ ಎ.ಟಿ.ಎಮ್ ಕಾರ್ಡ ಹಾಗೂ ಗುಪ್ತ ಸಂಖ್ಯೆ ಇರುವ ಕವರ ಮತ್ತು ಕಾಲೇಜಿನ ದಾಖಲೆಗಳು ಇದ್ದವು, ಆದರೆ ನನ್ನ ಎಸ್,ಬಿ,ಐ ಖಾತೆ ನಂ- 30851252071 ನೇದ್ದರಲ್ಲಿ 25.000 ರೂ ಇರುತ್ತವೆ, ನನ್ನ ಪರ್ಸ ಕಳೆದುಕೊಂಡು ಮಾರನೇ ದಿನ 11-00 ಗಂಟೆಗೆ ನಾನು ಕಾಳಗಿ ಎಸ್,ಬಿ,ಐ ಬ್ಯಾಂಕಿಗೆ ಹೋಗಿ ನನ್ನ ಖಾತೆ ಬಗ್ಗೆ ವಿಚಾರಿಸಿದಾಗ ದಿನಾಂಕ 07-09-2011 ರಂದು ಬೆಳಿಗ್ಗೆ 10-58 ನಿಮಿಷಕ್ಕೆ 20.000 ರೂ ಹಾಗೂ 11-00 ಗಂಟೆಗೆ 4.900 ರೂ ಗಳು ಗುಲಬರ್ಗಾದ ಮಕ್ಕಾ ಕಾಲೋನಿಯಲ್ಲಿರುವ ಎಸ್,ಬಿ,ಎಚ್ ಶಾಖೆಯ ಬ್ಯಾಂಕಿನ ಎ,ಟಿ,ಎಮ್ ದಿಂದ ಒಟ್ಟು 24.900 ರೂ ಗಳು ಯಾರೋ ಕಳ್ಳರೂ ನನಗೆ ಗೋತ್ತಿಲ್ಲದವರು ಹಣ ಡ್ರಾ ಮಾಡಿಕೊಂಡಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 September 2011

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :
ದಿನಾಂಕ: 13-09-2011 ರಂದು ರಾತ್ರಿ ಶ್ರೀ ಅಬ್ದುಲ ಖಾದರ  ತಂದೆ ಗುಲಾಮ ಹುಸೇನ  ಸಾ:ಗಾಲೀಫ ಕಾಲೋನಿ
ಎಮ್.ಎಸ್.ಕೆ.ಮಿಲ್ ಗುಲಬರ್ಗಾ ರವರು ಎನ್.ಜಿ.ಓ.ಕಾಲೋನಿಯಿಂದ ತನ್ನ ಮನೆಗೆ ಲೋನಾ ಮೊ/ಸೈಕಲ್ ನಂ:ಎಮ್.ಈ.ಪಿ.
5443 ನೆದ್ದನ್ನು ಚಲಾಯಿಸಿಕೊಂಡು ಆರ್.ಪಿ.ಸರ್ಕಲ್ ದಿಂದ ರಾಮ ಮಂದೀರ ಮುಖ್ಯೆ ರಸ್ತೆಯ ಮೇಲೆ ಗೊದುತಾಯಿ ನಗರ ಬಸವ ಜ್ಯೋತಿ ಮನೆ ಎದುರುಗಡೆ ರೋಡಿನ ಮೇಲೆ ಬಂದಾಗ ಎದುರುನಿಂದ ಯಾವುದೋ ಒಂದು ಟಂಟಂ ವಾಹನದ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ವಾಹನಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಕ್ಷಣೆ ಕಿರುಕಳ ಪ್ರಕರಣ :
ಆಳಂದ ಠಾಣೆ :
ಶ್ರೀಮತಿ ಸುನೀತಾ ಗಂಡ ಸುಕೇಶ ಸಿಂಗೆ ಸಾ: ಕೊರಳ್ಳಿ ಇವರಿಗೆ 2002 ರಲ್ಲಿ ಸುಕೇಶನೊಂದಿಗೆ ಮದುವೆಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ಅರ್ದ ತೋಲೆ ಬಂಗಾರ ಮನೆ ಬಳಕೆಯ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದು 6 ತಿಂಗಳವರೆಗೆ ಅತ್ತೆ ಚತುರಬಾಯಿ ಮಾವ ಶಿವರಾಯ ಗಂಡ ಸುಕೇಶ ಭಾವ ಯಲ್ಲಪ್ಪ ಮೈದುನ ಸಂಜಯ ಅತ್ತೆಯ ತಂಗಿಯಾದ ಮುಕ್ತಾಬಾಯಿ ಇವರೆಲ್ಲರು ಚನ್ನಾಗಿ ನೋಡಿಕೊಂಡಿದ್ದು ನಂತರ ಕೆಲ ದಿನಗಳಲ್ಲಿ ತವರು ಮನೆಯಿಂದ 1,00,000/- ರೂ ವರದಕ್ಷಣೆ ರೂಪದಲ್ಲಿ ತವರು ಮನೆಯಿಂದ ತೆಗೆದುಕೊಂಡು ಬಾ ನಾವು ಜೀಪ ಖರಿದಿ ಮಾಡುತ್ತೆವೆ ಅಂತಾ ಗಂಡ ಅತ್ತೆ, ಮಾವ, ಭಾವ, ಮೈದುನ,ಇವರೆಲ್ಲರು ಪಿಡಿಸುತ್ತ ಹೊಡೆಬಡೆ ಮಾಡಿ ಧೈಹಿಕವಾಗಿ ಮಾನಸಿಕವಾಗಿ ಕಿರುಕಳ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಮಾರಣಾಂತಿಕ ಹಲ್ಲೆ ಪ್ರಕರಣ :
ರೋಜಾ ಠಾಣೆ :ದಿನಾಂಕ 13-09-2011 ರಂದು ರಾತ್ರಿ ಶ್ರೀ ಮಹಮ್ಮದ ಅಕ್ರಮ ತಂದೆ ಮಹಮ್ಮದ ಮಶ್ಯಾಕ ಸಾ:ಖಾಜಾ ಕಾಲೋನಿ ಮತ್ತು ಮಹ್ಮದ ಅಲ್ತಾಮಶ ಹಾಗೂ ಮಹ್ಮದ ರಪಿ ಕೂಡಿಕೊಂಡು ಕೆಬಿಎನ್ ದರ್ಗದಿಂದ ಮಹಿಬೂಬ ನಗರ ಕಾಲೋನಿಗೆ ಹೋಗುತ್ತಿದ್ದಾಗ ದಾರಿಯಲ್ಲಿ ಹುಸೇನಿ ಆಲಂ ಮಜೀದ ಮುಂದೆ ಅಬ್ದುಲ ಗಪಾರ ತಂದೆ ಅಬ್ದುಲ ಲತೀಪ ಅವರ ತಮ್ಮ ರಹೀಮಾನ ಮತ್ತು ಸದ್ದಾಮ 3 ಜನರು ಕೋಡಿಕೊಂಡು ತಡೆದು ನಿಲ್ಲಿಸಿ ಅವಾಚ್ಯಶಬ್ದಗಳಿಂದ ಬೈದು ನಮ್ಮ ಹೋಟಲ ಮುಂದಿನಿಂದ ಯಾಕೆ ಹೋಗುತ್ತಿರಿ ಅಂತಾ ಜಗಳ ತೆಗೆದು ಕೈಯಿಂದ ಮತ್ತು ಚಾಕುವಿನಿಂದ ಬೆನ್ನಿನಲ್ಲಿ ಜೋರಾಗಿ ಹೊಡೆದು ಭಾರಿ ರಕ್ತಗಾಯಪಡಿಸಿ ಕೋಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿರುಕಳ ಪ್ರಕರಣ :

ಮಹಿಳಾ ಠಾಣೆ :ಶ್ರೀಮತಿ ಶಕುಂತಲಾ ಗಂಡ ಕಾಡಪ್ಪಾ ಸಾ: ಗುಬ್ಬಿ ಕಾಲೂನಿ ಗುಲಬರ್ಗಾ ಇವರ ಗಂಡ ದಿನಾಂಕ 05-09-2011 ರಂದು ರಾತ್ರಿ ಕುಡಿದು ಬಂದು ನಿನಗೆ ಅಡುಗೆ ಮಾಡಲು ಬರುವುದಿಲ್ಲಾ ಊಟಕ್ಕೆ ಎನು ಮಾಡಿರುವುದಿಲ್ಲಾನಿನಗೆ ಬಹಳ ಸೂಕ್ಕು ಬಂದಿದೆ ಅಂತಾ ವಿ:ನಾಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ತಲವಾರದಿಂದ ಹೋಡೆದು ಭಾರಿ ರಕ್ತಗಾಯಪಡಿಸಿರುತ್ತಾನೆ ಮತ್ತು ಮಾನಸಿಕ ದೈಹಿಕ ಕಿರುಕಳ ನಿಡೀರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

13 September 2011

Gulbarga District Reported Crimes

ಕೊಲೆ ಪ್ರಕರಣ :

ರೇವೂರ ಠಾಣೆ :ಶ್ರೀಮತಿ ಅನ್ನಪೂರ್ಣ ಗಂಡ ದತ್ತು ಭಾವಿಮನಿ ಸಾ||ಕಾರಭೋಸಗಾ ಹಾ||ವಾಸ||ಆಹೇರಿ ತಾ||ಸಿಂದಗಿ ರವರು, ದಿನಾಂಕ 12-9-2011 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡ ದತ್ತು ಭಾವಿಮನಿ ಇಬ್ಬರು ಕೂಡಿಕೊಂಡು ನನ್ನ ಗಂಡನ ಯಮ ಕಂಪನಿ ಮೋಟರ ಸೈಕಲ ಮೇಲೆ ಅಂಕಲಗಾ ಗ್ರಾಮದ ಮದರಸಾಬ ದರ್ಗಾಕ್ಕೆ ಕಾಯಿ ಒಡೆದುಕೊಂಡು ಹೋಗಲು ಬಂದಿರುತ್ತೇವೆ. ಮೋಟರ ಸೈಕಲ ನಂ;ಕೆಎ.36 ಕೆ 5882 ಇರುತ್ತದೆ. ಮದ್ಯಾಹ್ನ 12-30 ಗಂಟೆ ಸುಮಾರಿಗೆ ಮದರಸಾಬ ದರ್ಗಾದಲ್ಲಿ ದರ್ಶನ ಮಾಡಿಕೊಂಡು ಕುಳಿತಿದ್ದೆವು. ಆಗ ನನ್ನ ಅಣ್ಣ ಸಂತೋಷ ಎಂಬಾತನು ಮೋಟರ ಸೈಕಲ ಮೇಲೆ ದರ್ಗಾದ ಹತ್ತಿರ ಬಂದವನೆ ನನ್ನ ಗಂಡನ ಮೋಟರ ಸೈಕಲಗೆ ಹಾಯಿಸಿ ಕೆಳಗೆ ಕೆಡವಿ ಕಣ್ಣಲ್ಲಿ ಖಾರದ ಪುಡಿ ಎಸೆದು ತನ್ನಲ್ಲಿದ್ದ ಮಚ್ಚು ತೆಗೆದುಕೊಂಡು ನನ್ನ ಗಂಡನ ಬಲಗಡೆ ಕಿವಿಯ ಮೇಲೆ ಹೊಡೆದನು. ಆಗ ನನ್ನ ಗಂಡ ನೆಲದ ಮೇಲೆ ಒದ್ದಾಡುತ್ತಿದ್ದಾಗ ನಾನು ಹೋಗಿ ಅವನ ಮೇಲೆ ಬಿದ್ದಾಗ ನನಗೆ ಜೋರಾಗಿ ಎಳೆದು ಒಗೆದನು. ಆಗ ನನಗು ಮಚ್ಚಿನ ಹೊಡೆದ ಬಲಗೈ ಬೆರಳಿಗೆ ಬಿದ್ದು ರಕ್ತಗಾಯವಾಯಿತು. ಆಗ ನನ್ನ ಗಂಡನಿಗೆ ಮನಸ್ಸಿಗೆ ಬಂದ ಹಾಗೆ ತಲೆಗೆ, ಎದೆಗೆ, ಹೊಟ್ಟೆಗೆ, ಹಾಗು ಶರೀರದ ಇನ್ನಿತರ ಭಾಗಗಳಿಗೆ ಹೊಡೆದು ಭಾರಿ ರಕ್ತಗಾಯಗಳು ಪಡಿಸಿ ತಾನು ತಂದಿರುವ ಮೋಟರ ಸೈಕಲ ಮೇಲೆ ಕುಳಿತು ತನ್ನ ಬೈಕ ಓಡಿಸಿಕೊಂಡು ಹೋಗಿರುತ್ತಾನೆ.ನನ್ನ ಗಂಡ ಭಾರಿ ಗಾಯಹೊಂದಿ ಮೃತಪಟ್ಟಿರುತ್ತಾನೆ ಈ ಕೊಲೆಗೆ ಕಾರಣ ನನಗೆ ಮದಲು ಮದುವೆಯಾಗಿದ್ದು ಗಂಡ ತೀರಿಕೊಂಡಿದ್ದು ಒಂದು ವರ್ಷದ ಹಿಂದೆ ದತ್ತು ಭಾವಿಮನಿ ಇವನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದು ಇದನ್ನೆ ನೆಪ ಒಡ್ಡಿ ನಮ್ಮ ಮನೆಯ ಮರ್ಯಾದೆ ಹಾಳು ಮಾಡಿದ್ದಿ ಅಂತಾ ದ್ವೇಷದಿಂದ ಕೊಲೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಫರಹತಾಬಾದ ಠಾಣೆ :ಶ್ರೀ   ಶಿವಯೋಗೇಪ್ಪಾ ತಂದೆ ನಿಂಗಪ್ಪಾ  ಪೂಜಾರಿ ಸಾ: ಕವಲಗಾ(ಬಿ) ತಾ:ಜಿ: ಗುಲಬರ್ಗಾ ರವರು, ನನ್ನ ತಮ್ಮನಾದ ಸಿದ್ದಣ್ಣಾ ತಂದೆ ನಿಂಗಪ್ಪಾ ಪೂಜಾರಿ ಈತನು ತನ್ನ ಮೊಟಾರ ಸೈಕಲ ಹೀರೋ ಹೋಂಡಾ ನಂ: ಕೆಎ-32 ಎಕ್ಸ್- 2052 ನೇದ್ದರ ಗುಲಬರ್ಗಾಕ್ಕೆ ಹೋಗುತ್ತಿದ್ದಾಗ ಪಾಣೆಗಾಂವ ಕ್ರಾಸ ಹತ್ತಿರ ಎದುರುಗಡೆಯಿಂದ ಒಬ್ಬ ಎಮ್.ಆರ್ ಬಸ್ ಚಾಲಕನು ತನ್ನ ವಾಹನವನ್ನು ಅತೀವೇಗ ನಡೆಯಿಸಿಕೊಂಡು ಬಂದು ನನ್ನ ತಮ್ಮನ ಮೊಟಾರ ಸೈಕಲಿಗೆ ಅಪಘಾತಪಡಿಸಿದರಿಂದ ನನ್ನ ತಮ್ಮನು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಅಲ್ಲದೆ ಮೊಟಾರ ಸೈಕಲ ಹಿಂದೆ ಕುಳಿತ್ತಿದ್ದ ನಿಂಗಣ್ಣಾ ತಂದೆ ಅಯ್ಯಪ್ಪಾ ಜಗತಿ ಈತನಿಗೆ ಬಲಗಾಲ ಮುರಿದು, ಭಾರಿ ರಕ್ತಗಾಯವಾಗಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಅಪಘಾತಪಡಿಸಿದ ಎಮ್.ಆರ್. ಬಸ್ ಕೆಎ-32 ಬಿ-74 ನಢದ್ದರ ಚಾಲಕ ಮದರ ಪಟೇಲ ತಂದೆ ಇಬ್ರಾಹಿಂ ಪಟೇಲ ತನ್ನ ಬಸ್ಸನ್ನು ಅಪಘಾತಪಡಿಸಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣಗಳು :
ವಿಶ್ವವಿದ್ಯಾಲಯ ಠಾಣೆ :
ಶ್ರೀ ಶೇಖ್ ಸಲೀಮ ತಂದೆ ಹುಸೇನಸಾಬ ಮೋಜನ್ ಗುಲಷನ್ ಅರಾಫತ್ ಕಾಲೋನಿ ಎಮ್ ಕೆ ಲೇ ಔಟ್ ಗುಲಬರ್ಗಾ ರವರ ಮಾವ ಚಂದನಕೇರಾ ದಲ್ಲಿ ಮೃತಪಟ್ಟ ಸುದ್ದಿ ತಿಳಿದು ತಾನು ಮತ್ತು ತನ್ನ ಹೆಂಡತಿ ಇಬ್ಬರೂ ನಿನ್ನೆ ಬೇಳಿಗ್ಗೆ 10 ಗಂಟೆ ಗೆ ತನ್ನ ಮನೆ ಕೀಲಿ ಹಾಕಿಕೊಂಡು ಚಂದನಕೇರಾಕ್ಕೆ ಹೋಗಿದ್ದು ದಿನಾಂಕ 12-09-2011 ರಂದು ಮದ್ಯಾಹ್ನ ಗುಲಬರ್ಗಾಕ್ಕೆ ತನ್ನ ಮನೆಗೆ ಬಂದು ನೋಡಲಾಗಿ ನಿನ್ನೆ ದಿನಾಂಕ 11-09-2011 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರೂ ತನ್ನ ಮನೆಯ ಬಾಗಿಲು ಕೀಲಿ ಮುರಿದು ಮನೆಯಲ್ಲಿಟ್ಟ 30 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು ನಗದು ಹಣ 75000/- ಹೀಗೆ ಒಟ್ಟು 1,45,000/- ರೂ ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಘವೇಂದ್ರ ನಗರ ಠಾಣೆ :ಎಕ್ಬಾಲ್ ಕಾಲೋನಿಯಲ್ಲಿರುವ ಶ್ರೀ ಮಹ್ಮದ ಫಜಲ್ ಅಹ್ಮದ ತಂದೆ ಮಹ್ಮದ ಅಬ್ದುಲ ಅಜೀಜ ಇವರ ಮನೆಯ ಮುಂದೆ ನಿಲ್ಲಿಸಿದ ಅಟೋ ರಿಕ್ಷಾ ಹಿಂದಿನ ಭಾಗದ ಒಂದು ಟೈಯರನ್ನು ದಿನಾಂಕ 12/13-09-2011 ರ ಮಧ್ಯರಾತ್ರಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.